HomeUncategorizedಸರೋವರ್ ಬೆಂಕೀಕೆರೆಯವರ ಸಣ್ಣ ಕಥೆ - “ಜೈ ಶ್ರೀರಾಮ್”

ಸರೋವರ್ ಬೆಂಕೀಕೆರೆಯವರ ಸಣ್ಣ ಕಥೆ – “ಜೈ ಶ್ರೀರಾಮ್”

- Advertisement -
- Advertisement -

“ಇಂಥ ಪರೀಕ್ಷೆ ಮಾಡ್ಲೇಬೇಕಿತ್ತಾ? ಬೆಂಕಿ ಸುಡದೇ ಇರಲು ಸಾಧ್ಯವಾ?” ಕೋಪ ಮತ್ತು ಬೇಸರದಿಂದ ಅಭಿಲಾಷ ಶೃತಿಯನ್ನು ಕೇಳಿದಳು. “ಏನ್ ಮಾಡೋಕೆ ಆಗುತ್ತೆ ನೀನೇ ಹೇಳು ಎಲ್ಲಾ ಆ ಅಗಸನಿಂದ ಆಗಿದ್ದು. ಅವನಿಗೆ ಇರುವಂತೆ ಬೇರೆಯವರಿಗೂ ಅನುಮಾನ ಇರುತ್ತೆ ಅಲ್ವ? ಹಾಗಾಗಿ ಈ ಅಗ್ನಿ ಪರೀಕ್ಷೆಯಂತೆ” ಉತ್ತರಿಸಿದಳು ಶೃತಿ.

ಸೀತೆಯ ಪಾವಿತ್ರತೆಯನ್ನು ಪರೀಕ್ಷೆ ಮಾಡಲು ಅಗ್ನಿಪರೀಕ್ಷೆಗೆ ಸಿದ್ಧತೆಗಳು ನಡೆದಿತ್ತು. ಊರಿನ ಜನರೆಲ್ಲಾ ಅಗ್ನಿ ಪರೀಕ್ಷೆ ನೋಡಲು ಸೇರಿದ್ದರು. ಅಭಿಲಾಷಳಿಗೆ ಕೋಪದಲ್ಲಿಯೇ ವಿಚಾರವೊಂದು ಹೊಳೆದಿತ್ತು, ಜನಜಾತ್ರೆಯ ಮಧ್ಯದಲ್ಲಿಯೇ ಕೂಗಿ ಹೇಳಿದಳು “ನಾನೇನು ಸೀತೆ ಅಲ್ಲ, ಎಲ್ಲಾನೂ ಒಪ್ಕಂಡು ಸುಮ್ನಿರೋಕೆ. ನನಗೂ ನನ್ನ ಗಂಡನ ಮೇಲೆ ಅನುಮಾನವಿದೆ. ಇದೇ ಅಗ್ನಿಯಲ್ಲಿ ನನ್ನ ಗಂಡನ ಪರೀಕ್ಷೆಯೂ ಆಗಲಿ” ಎಂದು ಕೂಗಿದಳು. ಸುತ್ತ ನಿಂತಿದ್ದ ಮಹಿಳೆಯರ ಮುಖ ನೋಡುತ್ತಾ ನಿಮ್ಮಲ್ಲಿ ಯಾರಿಗೂ ನಿಮ್ಮ ಗಂಡನ ಮೇಲೆ ಅನುಮಾನವಿಲ್ಲವೇ? ಎಂದು ಪ್ರಶ್ನೆ ಎಸೆದಳು. ಹಲವರು ಗಾಬರಿಯಲ್ಲಿ ಅಭಿಲಾಷಳ ಮುಖ ನೋಡುತ್ತಾ ಮೌನವಾಗಿ ನಿಂತುಬಿಟ್ಟರು, ಇನ್ನು ಕೆಲವರು ಯೋಚಿಸುತ್ತಾ ಗೊಂದಲದಲ್ಲಿದ್ದರು. ಸ್ವಲ್ಪ ದೂರದಲ್ಲೇ ನಿಂತಿದ್ದ ಅಭಿಲಾಷಳ ಗಂಡ ಮತ್ತು ಇತರ ಗಂಡಸರ ಗುಂಪು ಭಯಭೀತರಾಗಿದ್ದರು. ಅಭಿಲಾಷಳ ಸುತ್ತ ನಿಂತವರಲ್ಲಿ ಕೆಲವರು ಅವಳ ಪ್ರಶ್ನೆಗೆ “ಹೌದು ನಮಗೂ ಅನುಮಾನವಿದೆ” ಎಂದು ಹೇಳುತ್ತಿದ್ದಂತೆಯೇ ಗಂಡಸರ ಗುಂಪು ಇವರ ದನಿ ಕೇಳಿಸದ ರೀತಿಯಲ್ಲಿ ಜೋರಾಗಿ “ಜೈ ಶ್ರೀರಾಮ್” ಎಂದು ಘೋಷಣೆ ಹಾಕಲು ಶುರು ಮಾಡಿತು. ಜೈ ಶ್ರೀರಾಮ್ ಘೋಷಣೆಗೆ ದನಿಗೂಡಿಸುವ ಗಂಡಸರ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಘೋಷಣೆ ಕೂಗಲು ಶುರು ಮಾಡಿ ಬರೀ ಎರಡು ನಿಮಿಷ ಮಾತ್ರವಾಗಿತ್ತು. ಒಂದು ಗುಂಪಿನಿಂದ ಶುರುವಾಗಿದ್ದು ಇದೀಗ ಸುಮಾರು 15 ಬೇರೆ ಬೇರೆ ಗುಂಪುಗಳಾಗಿದೆ. ಹೋಟೆಲ್, ಅಂಗಡಿ, ಮನೆಗಳಿಗೆ ನುಗ್ಗಿ ಜೈ ಶ್ರೀರಾಮ್ ಎಂದು ಕೂಗಲು ಒತ್ತಾಯಿಸುತ್ತಿದ್ದಾರೆ. ನೋಡನೋಡುತ್ತಿದ್ದಂತೆಯೇ ಘೋಷಣೆ ಕೂಗುತ್ತಿದ್ದವರ ಕೈಗಳಲ್ಲಿ ದೊಣ್ಣೆ, ಕಲ್ಲುಗಳು ಬಂದುಬಿಟ್ಟಿವೆ. ಜೈ ಶ್ರೀರಾಮ್ ಎಂದು ಕೂಗಲು ನಿರಾಕರಿಸುವವರಿಗೆ ‘ಧರ್ಮ’ದೇಟು ಹಾಕುತ್ತಿದ್ದಾರೆ. ಕ್ಷಣಮಾತ್ರದಲ್ಲಿ ಶುರುವಾಗಿದ್ದ ಈ ಗಲಭೆಯನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬ ಇದೇನಾಯಿತು ಎಂಬ ಅರಿವಿಲ್ಲದೆ ಆಘಾತಕ್ಕೊಳಗಾಗಿ ಏನು ಮಾಡುವುದೆಂದು ತಿಳಿಯದೆ ಎಲ್ಲವನ್ನೂ ನೋಡುತ್ತ ನಿಂತಿದ್ದ. ಈ ವ್ಯಕ್ತಿಯನ್ನು ಗಮನಿಸಿದ ಗುಂಪು ಈತನೆಡೆಗೆ ಓಡಿಬಂತು. “ಹೇಯ್ ಜೈ ಶ್ರೀರಾಮ್ ಹೇಳೋ” ಎಂದು ಗುಂಪಿನಿಂದ ಒಬ್ಬ ಗದರಿದ ಗೊಂದಲಕ್ಕೊಳಗಾದ ಆ ವ್ಯಕ್ತಿ ಗುಂಪಿನಲ್ಲಿ ಒಬ್ಬಾತ ಹಿಡಿದಿದ್ದ ದೊಣ್ಣೆಯನ್ನೇ ನೋಡುತ್ತಾ ನಿಂತ. ಗುಂಪಿನಿಂದ ಮತ್ತೊಬ್ಬ ಏನೋ ಸುಮ್ನೆ ನಿಂತಿದ್ದೀಯಾ, ಎಷ್ಟೋ ಧೈರ್ಯ ನಿನಗೆ, ಜೈ ಶ್ರೀರಾಮ್ ಹೇಳು ಎಂದು ಮುಂದಕ್ಕೆ ಬಂದ. ವ್ಯಕ್ತಿ ಇನ್ನೂ ಸುಮ್ಮನೇ ನಿಂತಿದ್ದ. ಇವನ್ಯಾರೋ ಸಾಬನೇ ಇರಬೇಕು ಕಣ್ರೋ ಅದಕ್ಕೆ ಬಾಯಿ ಬಿಡ್ತಿಲ್ಲ ಎಂದ ಇನ್ನೊಬ್ಬ “ಇಲ್ಲ, ಟೋಪಿ ಇಲ್ಲ ಗಡ್ಡ ಇಲ್ಲ, ಬಹುಶಃ ಬುದ್ಧಿಜೀವಿಯೋ, ವಿಚಾರವಾದಿಯೋ ಇರಬೇಕು ಬಿಲ್ಲು ಬಾಣ ಬೇರೆ ಇಟ್ಕೊಂಡ್ ಬಂದಿದ್ದಾನೆ, ಇಲ್ಲಿ ನಡಿಯೋ ಪವಿತ್ರವಾದ ಅಗ್ನಿಪರೀಕ್ಷೆಯನ್ನ ಕೆಡಿಸೋಕೆ ಬಂದಿರಬೇಕು. ಬಡಿರೋ ಇವ್ನಿಗೆ” ಎಂದು ಮಗದೊಬ್ಬ ಹೇಳುತ್ತಿದ್ದಂತೆಯೇ ಇಡೀ ಗುಂಪು ಥಳಿಸಲು ಶುರು ಮಾಡಿದರು. ಕಲ್ಲುದೊಣ್ಣೆಗಳಿಂದ ದಾಳಿ ಶುರುವಾಯಿತು. ದೊಡ್ಡ ಕಲ್ಲೊಂದು ಕಾಲಿನ ಮೇಲೆ ಎತ್ತಿ ಹಾಕಿದರು ಆ ವ್ಯಕ್ತಿಯ ಪಾದ ಜಜ್ಜಿಹೋಗಿತ್ತು.

ದೂರದಿಂದ ಇದನ್ನು ಗಮನಿಸಿದ ಮಹಿಳೆಯೊಬ್ಬಳು ಗಲಾಟೆ ನಡೆಯುತ್ತಿದ್ದ ಗುಂಪಿನತ್ತ ಓಡಿಬಂದಳು. ಅಯ್ಯೋ ಇವರು ನನ್ನ ಗಂಡ ಬಿಟ್ಟುಬಿಡಿ ಎಂದು ಗೋಳಾಡಿದಳು. ಗುಂಪು ಮಾತ್ರ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಲೇ ಥಳಿಸುತ್ತಿದ್ದರು. ಆಗ ಆ ಮಹಿಳೆ “ಅಯ್ಯೋ ಇವರೇ ಶ್ರೀರಾಮ ನನ್ನ ಗಂಡ, ನಾನು ಸೀತೆ. ನಿಮ್ಮ ಕಾಲಿಗೆ ಬೀಳ್ತೀನಿ ನನ್ನ ಗಂಡ ರಾಮನನ್ನು ಬಿಟ್ಟುಬಿಡಿ” ಎಂದು ಕೂಗಿದಳು. ಹೌದು ಅವರು ರಾಮನನ್ನೇ ಬಡಿಯುತ್ತಿದ್ದರು! ಎಲ್ಲರೂ ಗಾಬರಿಯಾಗಿ ನಿಂತುಬಿಟ್ಟರು. ಒಬ್ಬ ಮಾತ್ರ ಮೈಮೇಲೆ ದೇವರು ಬಂದವರಂತೆ ಜೈ ಶ್ರೀರಾಮ ಎಂದು ಅರಚಿಕೊಳ್ಳುತ್ತಾ ದೊಣ್ಣೆಯಿಂದ ರಾಮನಿಗೆ ಹೊಡೆಯುತ್ತಲೇ ಇದ್ದ. ಗುಂಪಿನವರು ಅವನನ್ನು ಎಳೆದು ಇವರೇ ಶ್ರೀರಾಮ ಬಿಡು ಎಂದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಅವನನ್ನ ಎಲ್ಲರೂ ಸೇರಿ ಎತ್ತಿಕೊಂಡು ನಡೆದರು. ಅವನು ಹುಚ್ಚು ಹಿಡಿದವನಂತೆ ಜೈ ಶ್ರೀರಾಮ್ ಎಂದು ಅರಚಿಕೊಳ್ಳುತ್ತಲೇಯಿದ್ದ. ತನ್ನ ಗುಂಪಿನ ಸದಸ್ಯರ ಬಟ್ಟೆಗಳನ್ನೆಲ್ಲಾ ಹರಿದುಹಾಕುತ್ತಿದ್ದ.

ದಾರಿಹೋಕರ ಸಹಾಯದಿಂದ ಸೀತೆ ರಾಮನನ್ನು ಆಸ್ಪತ್ರೆಗೆ ಸೇರಿಸಿದಳು ಇಲ್ಲಿ (ಭೂಲೋಕದಲ್ಲಿ) ಬದುಕುವುದು ಕಷ್ಟ, ಬೇರೆ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ವೈದ್ಯರು ಸಲಹೆ ನೀಡಿದರು. ಸೀತೆ ರಾಮನನ್ನು ಕೈಲಾಸಕ್ಕೆ ಕರೆದುಕೊಂಡುಹೋದಳು. ಇಂದಿಗೂ ಗುಂಪುಗಳು ಜೈ ಶ್ರೀರಾಮ್ ಎಂದು ರಾಮನ ಹೆಸರಲ್ಲಿ ನರಮಾನವರ ಮೇಲೆ ಹೊಡೆಯುವ ಒಂದೊಂದು ಏಟುಗಳು ಕೈಲಾಸದ ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಮನ ಮೈ ಮೇಲೆ ಪವಾಡದ ರೀತಿಯಲ್ಲಿ ಬೀಳುತ್ತಿದೆ. ಹಾಗಾಗಿ ರಾಮ ಗುಣಮುಖವಾಗದೆ ಆಸ್ಪತ್ರೆಯಲ್ಲಿಯೇ ನರಳುತ್ತಿದ್ದಾನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...