Homeಅಂಕಣಗಳುಜೈ ಸಿದ್ದೇಶ್ವರ ಸ್ವಾಮಿ

ಜೈ ಸಿದ್ದೇಶ್ವರ ಸ್ವಾಮಿ

- Advertisement -
- Advertisement -

ನಮ್ಮ ಸಿದ್ದೇಶ್ವರ ಸ್ವಾಮೀಜಿಗಳು ಸ್ವಾಮಿಗಳ ಹಿಂಡಿನಲ್ಲೇ ಎದ್ದು ಕಾಣುವಂತವರು ಎಲ್ಲ ಸ್ವಾಮಿಗಳು ಕೆಂಪು ಉಡುಪುಗಳಲ್ಲಿ ಕಾಣಿಸಿಕೊಂಡರೆ ಅವರು ಬಿಳಿ ಧಿರಿಸಿನಲ್ಲಿ ಹಂಸದಂತೆ ಕಾಣುತ್ತಾರೆ. ಮಾತು ಕೂಡ ಅಷ್ಟೆ. ಹಂಸಕ್ಷೀರ ನ್ಯಾಯದಂತೆ. ಉತ್ತರ ಕರ್ನಾಟಕದಲ್ಲಿ ಏರ್ಪಡುವ ಅವರ ಉಪನ್ಯಾಸ ಕೇಳಲು ಸಾವಿರಾರು ಜನ ಸೇರುತ್ತಾರೆ. ಅಲ್ಲಿ ಸಿದ್ದೇಶ್ವರರು ಆಡುವ ಮಾತು ಕೇಳಿದರೆ ಬಸವ ಯುಗವೇ ತೆರೆದುಕೊಳ್ಳುತ್ತದೆ. ಅಮರ ಜ್ಯೋತಿಯಾದ ಬಸವೇಶ್ವರರ ವಾಣಿ ಕೇಳಿದಂತಾಗುತ್ತದೆ. ಇಂತಹ ಸುಯೋಗವೊಂದು ಸುತ್ತೂರು ಮಠದ ಸುತ್ತಲ ಭಕ್ತಾದಿಗಳಿಗೆ ಲಭ್ಯವಾಯ್ತಂತಲ್ಲಾ. ಕರ್ನಾಟಕಕ್ಕೆ ಯೋಗಾಭ್ಯಾಸ ಮಾಡಲು ಬಂದ ಪ್ರಧಾನ ಮಂತ್ರಿಯ ಪ್ರಧಾನ ಭೇಟಿಗಳಲ್ಲಿ ಸುತ್ತೂರು ಮಠವು ಒಂದಾಗಿತ್ತು. ಅಲ್ಲಿನ ಶ್ರೀಗಳು ತಲೆಯೋಡಿಸಿ ಮೋದಿಯನ್ನು ಮರಳು ಮಾಡುವ ಭಾಷಣ ಮಾಡುವ ಶಕ್ತಿ ತಮಗಿಲ್ಲವೆಂದು ಸಿದ್ದೇಶ್ವರ ಸ್ವಾಮಿಗಳನ್ನ ಕರೆಸಿದರು. ಶ್ರೀ ಸಿದ್ದೇಶ್ವರರು ಸುತ್ತೂರು ಅಲ್ಲದೆ ಮೋದಿಯವರೂ ತಲೆದೂಗುವಂತೆ ಮಾತನಾಡುವಾಗ ಅರ್ಥವಾಗದ ಮೋದಿ ಸುತ್ತೂರು ಕಡೆ ವಾಲಿ ಮಾತಿನ ಅರ್ಥವನ್ನ ತಿಳಿದುಕೊಂಡು ಕೈ ಮುಗಿಯುತ್ತಿದ್ದುದು ಮನಮೋಹಕವಾಗಿತ್ತಂತಲ್ಲಾ. ಮುಖ್ಯವಾಗಿ ಸಿದ್ದೇಶ್ವರರು ಮೋದಿಯನ್ನ ಕುರಿತು ನಮ್ಮ ಪ್ರಧಾನಿಯವರು ಲೋಕದ ಹಿತ ಬಯಸುವಂತಹ ಲೋಕ ಚಿಂತಕರು, ಆದರೂ ಆ ಮುಖದಲ್ಲಿ ಚಿಂತೆ ಕಾಣುವುದಿಲ್ಲ. ಬದಲಿಗೆ ಸದಾ ಪ್ರಸನ್ನತೆಯೇ ಕಾಣುತ್ತದೆ ಎಂದಾಗ ಇಡೀ ಸಭೆ ಬೆರಗಾಗಿ ಸಿದ್ದೇಶ್ವರ ಸ್ವಾಮಿ ಸುಳ್ಳಿಗೆ ಸುಸ್ತು ಹೊಡೆಯಲಿಲ್ಲವಂತಲ್ಲಾ. ಅಂತೂ ಭಾರತದಲ್ಲಿ ಆಳುವವರಿಗೊಂದು ನ್ಯಾಯ ಸಂಹಿತೆ ಸಾಮಾನ್ಯರಿಗೊಂದು ನ್ಯಾಯ ಸಂಹಿತೆ ರೂಪುಗೊಳ್ಳುತ್ತಿದೆಯಂತಲ್ಲಾ, ಥೂತ್ತೇರಿ.

*****

ಈ ಹಿಂದಿನ ಸಿದ್ದೇಶ್ವರ ಸ್ವಾಮಿಯವರ ಮಾತುಗಳನ್ನು ಗ್ರಹಿಸಿದ್ದಾದರೆ, ಅವು ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗಮೆಚ್ಚಿ ಅಹುದಹುದೆನ್ನಬೇಕು ಎನ್ನುವ ಬಸವಣ್ಣನವರ ಮಾನಿನಂತಿದ್ದುದ್ದರಿಂದ ಅವರೆದುರು ಕುಳಿತ ಸಾವಿರಾರು ಜನರು ಅಹುದಹುದೆನ್ನುತ್ತ ತಲೆ ಹಾಕುತ್ತಿದ್ದರು. ಆದರೆ ಸುತ್ತೂರಿನಲ್ಲಿ ಅಹುದಹುದೆನ್ನುವುದರ ಬದಲಿಗೆ ಮೋದಿಗೆ ಜೈಕಾರದಂತಹ ಗದ್ದಲ ಕೇಳಿಬಂತು. ದಶಕಗಳ ಕಾಲ ಮುತ್ತಿನಹಾರದಂತೆ ಮಾತಾನಾಡಿದ್ದ ಸಿದ್ದೇಶ್ವರರು ಮೋದಿ ಹೊಗಳಿಕೆಯ ಸುಳ್ಳು ಮಾತುಗಳಿಂದ ತಮ್ಮ ಖ್ಯಾತಿಗೇ ಕಳಂಕ ತಂದುಕೊಂಡರಂತಲ್ಲಾ. ಸಿದ್ದೇಶ್ವರರ ಸುಳ್ಳು ಬಿತ್ತರವಾಗುವಾಗ ಅಗ್ನಿಪಥ ಜಾರಿಯಿಂದ ಆಕ್ರೋಶಗೊಂಡ ಜನ ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಇನ್ನೂರು ಕೋಟಿ ರೂಪಾಯಿಗಳ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿದ್ದರು. ಇದು ಲೋಕಹಿತ ಬಯಸುವವರನ್ನ ಕಂಗಾಲು ಮಾಡಬೇಕಿತ್ತು. ಸಿದ್ದೇಶ್ವರರು ವಾರೊಪ್ಪತ್ತು ಮೌನವ್ರತ ಮಾಡಬೇಕಿತ್ತು. ಆದರೆ ದೇಶದ ಗಲಭೆಯ ಬಗ್ಗೆ ಕಿಂಚಿತ್ ಅರಿವಿಲ್ಲದಂತೆ ಒಬ್ಬರು ಹೊಗಳುತ್ತಾರೆ, ಕೇಳಿಸಿಕೊಂಡವರು ಕೈ ಮುಗಿಯುತ್ತಾರೆ. ಈ ಭಾಷಣಕ್ಕೆ ಕಳಶವಿಟ್ಟಂತೆ ಗುಜರಾತ್ ನರಮೇಧದ ವಿಷಯದಲ್ಲಿ ಮೋದಿಯವರಿಗೆ ಕ್ಲೀನ್‌ಚಿಟ್ ನೀಡಿದ ಕಾರಣ ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುವುದಾದರೆ ಸಿದ್ದೇಶ್ವರ ಸ್ವಾಮಿಗಳ ಮಾತುಗಳನ್ನು ಗೌರವಿಸಬೇಕಂತಲ್ಲಾ ಥೂತ್ತೇರಿ.

*****

ಮೋದಿಯವರು ಜಗದ್ಗುರುಗಳ ಸುಳ್ಳು ಆಶೀರ್ವಾದವನ್ನು ಹೊತ್ತು ದೆಹಲಿಯ ಕಡೆ ಹೊರಟನಂತರ ಇತ್ತ ಕರ್ನಾಟಕದ ಬಳ್ಳಾರಿಯ ಧೂಳಿನಿಂದ ಸುಂಟರಗಾಳಿಯೊಂದು ಎದ್ದಿದೆಯಲ್ಲಾ. ಎಡೂರಪ್ಪನ ಸರಕಾರ ಎದ್ದುನಿಲ್ಲಲು ಸಹಾಯ ಮಾಡಿದ ಬಳ್ಳಾರಿ ಗಣಿ’ಧಣಿ’ಗಳ ಪೈಕಿ ಪ್ರಧಾನ ವ್ಯಕ್ತಿಯಾದ ಗಾಲಿ ಜನಾರ್ದನ ರೆಡ್ಡಿ ಹಠಾತ್ತನೆ ನಾನು ಕರ್ನಾಟಕದ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೆದರಿಸಿದ್ದಾರಲ್ಲಾ. ರೆಡ್ಡಿ ಇಂತಹ ಮಾತುಗಳನ್ನಾಡಬೇಕಾದರೆ ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯ ಕತೆ ಏನಾಗಿರಬೇಕು ಎಂಬ ಯೋಚನೆ ರೆಡ್ಡಿ ಮಾತನ್ನು ಗ್ರಹಿಸಿದವರಿಗೆ ಅಮರಿಕೊಂಡಿದೆಯಲ್ಲಾ. ರೆಡ್ಡಿ ಸಾರ್ವಜನಿಕರ ಎದುರೇ ತನ್ನ ಮುಖ್ಯಮಂತ್ರಿ ಪದವಿ ಘೋಷಿಸಬೇಕಾದರೆ ಮೂರು ಘಟನೆಗಳು ಆತನಿಗೆ ಪ್ರೇರಣೆ ನೀಡಿರಬೇಕು. ಒಂದು ಜೆಡಿಎಸ್ ಶಾಸಕರನ್ನು ಜಮೀರ್ ಅಹಮದ್ ಬಸ್ಸಿನಲ್ಲಿ ರೆಸಾರ್ಟಿಗೆ ಕರೆದುಕೊಂಡು ಹೋಗಿ ಮತ್ತೆ ತಂದು ವಿಧಾನಸೌಧದ ಎದುರು ಸುರಿದು ಧರ್ಮಸಿಂಗ್ ಸರಕಾರ ಕೆಡವಿ ಕುಮಾರಣ್ಣ ಅನಾಯಾಸವಾಗಿ ಮುಖ್ಯಮಂತ್ರಿಯಾದದ್ದು. ಅದೇ ಕುಮಾರಣ್ಣನ ಕೃತ್ಯವನ್ನು ಅವರಿಗೇ ಹಿಂತಿರುಗಿಸಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನ ಅಪಹರಿಸಿ ಬಾಂಬೆ ಗ್ರಾಂಟ್‌ರೋಡಿನಲ್ಲಿ ಇರಿಸಿದ್ದು, ನಂತರ ತಂದು ಎಡೂರಪ್ಪ ಮುಖ್ಯಮಂತ್ರಿಯಾದದ್ದು. ಇದೀಗ ಛತ್ರಪತಿ ಶಿವಾಜಿ ಕೋಟೆಯಿಂದ ಶಿವಸೈನಿಕ ಶಾಸಕರನ್ನು ಅಪಹರಿಸಿ, ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಲು ತಯಾರಿ ನಡೆಸಿರುವುದು. ಈ ಎಲ್ಲಾ ಬೆಳವಣಿಗೆಯ ಹಿಂದೆ ಝಣಝಣ ಕಾಂಚಣದ ಸದ್ದು ಕೇಳಿತಾಗಿ ರೆಡ್ಡಿ ರೋಮಾಂಚನಗೊಂಡು ಮುಂದಿನ ಮುಖ್ಯಮಂತ್ರಿ ನಾನೇ ಎಂದುಬಿಟ್ಟಿದ್ದಾರಂತಲ್ಲಾ, ಥೂತ್ತೇರಿ.

*****

ಇತ್ತ ಕರ್ನಾಟಕದ ಶಿಕ್ಷಣ ಇಲಾಖೆಯ ಸುದ್ದಿ ಅಧ್ವಾನವೆದ್ದು ಚಡ್ಡಿಗಳು ಹಠಕ್ಕೆ ಬಿದ್ದಿವೆಯಂತಲ್ಲಾ. ಪಠ್ಯಪುಸ್ತಕ ತಿರುಚಿದ ಘಟನೆಯ ಪ್ರಯುಕ್ತ ಶಿಕ್ಷಣ ಪಡೆದ ನಾಡಿನ ಮನಸ್ಸುಗಳು ಫ್ರೀಡಂಪಾರ್ಕಿನಲ್ಲಿ ದೇವೇಗೌಡರ ನೇತೃತ್ವದಲ್ಲಿ ಸಭೆ ಸೇರಿ ಪಠ್ಯ ಸರಿ ಮಾಡಲು ಹತ್ತು ದಿನ ಗಡುವು ಕೊಟ್ಟಿದ್ದರೆ, ಈ ಹತ್ತು ದಿನದಲ್ಲಿ ಏನು ಉತ್ತರ ಕೊಡಬೇಕೆಂದು ಚಿಂತಿಸಿದ ಚೆಡ್ಡಿಗಳು, ದೇವೇಗೌಡರು ಗುಟುರು ಹಾಕಿರುವುದರಿಂದ ಅವರೆದುರು ಅಶೋಕನ್ನು ನಿಲ್ಲಿಸುವುದು ಸೂಕ್ತ ಎಂದು ತೀರ್ಮಾನಿಸಿ, ಕಡಲೆಕಾಯಿ ಹೊಲಕ್ಕೆ ಬೆದರುಗೊಂಬೆ ಮಾಡಿ ನಿಲ್ಲಿಸಿದಂತೆ ಪಠ್ಯಕ್ಕೆ ಕಾಯುತ್ತಿರುವ ಮಕ್ಕಳ ಎದುರು ನಿಲ್ಲಿಸಿವೆಯಲ್ಲಾ. ಈ ಅಶೋಕರಿಗಾಗಲಿ ಅವರ ಜೊತೆಯಲ್ಲಿ ನಿಂತ ಇನ್ನಿತರ ಮಂತ್ರಿವರ್ಯರಿಗಾಗಲಿ ಪಠ್ಯದ ನಿಜವಾದ ಅರ್ಥವೇ ಗೊತ್ತಿಲ್ಲ. ಸ್ವತಃ ನಾಗೇಶರಿಗೆ ಬಹಳದಿನ ಗೊತ್ತಿರಲಿಲ್ಲ. ಇಂತಿರುವಾಗ ಹಿಂದಿನ ಪಠ್ಯದಲ್ಲಿ ಕಮ್ಯುನಿಸಂ ಸಿದ್ಧಾಂತವಿತ್ತು ಎಂದುಬಿಟ್ಟಿದ್ದಾರಲ್ಲಾ. ಈ ಬಗ್ಗೆ ಅಶೋಕರನ್ನ ಹಿಡಿದುಕೊಂಡು ಕಮ್ಯುನಿಸ್ಟ್ ಸಿದ್ಧಾಂತ ಅಂದರೇನು, ಅದರ ಉದ್ದೇಶಗಳೇನು ಅದು ನಮ್ಮ ಸಂಸ್ಕೃತಿಯೊಳಕ್ಕೆ ನುಸುಳಿರುವ ಪರಿಯೇನು ವಿವರಿಸೆಂದು ಕೇಳಿದ್ದರೆ ಮತ್ತೆ ಹತ್ತು ದಿನದ ಗಡವು ಕೇಳುತ್ತಿದ್ದರಂತಲ್ಲಾ. ಅದೆಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಮಾಜಿ ಪ್ರಧಾನಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೂ ಕೇರ್ ಮಾಡದೆ ಸುಳ್ಳುಗಳನ್ನ ಹೊಡೆಯುತ್ತ ಕುಳಿತಿರುವ ಚೆಡ್ಡಿಗಳು ತಮ್ಮ ಸಂಚು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಭಾವಿಸುವ ಈ ಹೊತ್ತಿನಲ್ಲಿ ನಾಡನ್ನೇ ತುಂಬಿ ಮೆರೆದಂತಹ ಗೋಕಾಕ್ ಚಳವಳಿಯ ಅಗತ್ಯ ಅನಿವಾರ್ಯವಾಗಿದೆಯಂತಲ್ಲಾ, ಥೂತ್ತೇರಿ.

*****

ಕರ್ನಾಟಕದ ಇತರೆ ಸುದ್ದಿಗಳು ಶಾನೆ ತಮಾಷೆಯಿಂದಲೂ ಜೊತೆಗೆ ವಿಷಾದದಿಂದಲೂ ಕೂಡಿದೆಯಂತಲ್ಲಾ. ನಾಯಿ ಸಿನಿಮಾ ನೋಡಿದ ಮುಖ್ಯಮಂತ್ರಿ ಥಿಯೇಟರಿಂದ ಈಚೆ ಬಂದರೂ ಅಳು ನಿಲ್ಲಿಸದೆ ಬಿಕ್ಕಿಬಿಕ್ಕಿ ಅಳುತ್ತಿರುವ ದೃಶ್ಯ ಪ್ರಕಟವಾದ ಕೂಡಲೇ ನಾಡಿನ ನಾಯಿ ಮಾಲೀಕರು ತಮ್ಮತಮ್ಮ ನಾಯಿಗಳನ್ನ ಹಿಡಿದು ಶೃಂಗಾರ ಮಾಡಿ ಬತಡೇ ಮಾಡುವುದೇನು, ಹೆಣ್ಣು ನಾಯಿಗೆ ಕುಂಕುಮ ಹಚ್ಚಿ ಬಳೆ ತೊಡಿಸಿ ಸೀರೆ ಉಡಿಸಿ ಸೀಮಂತ ಮಾಡುವುದೇನು. ಈ ಕೃತ್ಯಗಳ ಬಗ್ಗೆ ತಿಳಿದ ಬೀದಿನಾಯಿಗಳು ಶಾನೆ ದುಗುಡದಿಂದ ಅವರು ಸಾಕಿದ ನಾಯಿಗಳಿಗೆ ಅವರು ಏನಾದರೂ ಮಾಡಿಕೊಳ್ಳಲಿ ನಮಗೇನು, ಆದರೆ ನಮಗೂ ಒಂದು ತುತ್ತು ಎಸೆಯಲು
ಇವರಿಗೇನು ಬಂದಿದೆ, ಸಾಕು ನಾಯಿ ಕಾರಣದಿಂದ ನಮ್ಮನ್ನ ತುಂಬ ತಿರಸ್ಕಾರದಿಂದ ಕಾಣುತ್ತಾರೆ, ಕಾಂಪೌಂಡ್ ಬಳಿಗೆ ಹೋದರೆ ಸಾಕು ಗದರುತ್ತಾರೆ, ಇವರ ಮಕ್ಕಳು ಕಲ್ಲು ತೆಗೆದುಕೊಂಡು ಬೀರುತ್ತವೆ, ಇತ್ತ ಮುನಿಸಿಪಾಲಿಟಿಯವರ ಕಾಟ ಬೇರೆ ಎಂದುಕೊಂಡವಂತಲ್ಲಾ. ಹಳ್ಳಿಯ ಕಡೆಗಳಲ್ಲಿ ಊಟ ಮಾಡುವಾಗ ನಮ್ಮವರ ಕಡೆ ಒಂದು ತುತ್ತು ಎಸೆಯುತ್ತಿದ್ದರು. ಈಗ ಆ ಸಂಸ್ಕೃತಿಯೂ ನಿಂತುಹೋಗಿ ನಮ್ಮವರೆಲ್ಲಾ ಊರು ಬಿಟ್ಟು ಗುಡ್ಡ ಗವಿ ಸೇರಿಕೊಂಡು ಆಡು ಕುರಿಗಳನ್ನು ಬೇಟೆಯಾಡುತ್ತಿದ್ದಾರಂತೆ. ಇದು ನಮ್ಮ ಕುಲಕ್ಕೆ ಬಂದ ಕಳಂಕ. ಇದಕ್ಕೆ ಕಾರಣ ಬದಲಾದ ನಾಯಿ ಮನುಷ್ಯನ ಸಂಬಂಧ. ಇಂಥ ಸನ್ನಿವೇಶದಲ್ಲಿ ನಾಯಿ ಸಿನಿಮಾ ನೋಡಿ ಅತ್ತಿರುವ ನಮ್ಮ ಮುಖ್ಯಮಂತ್ರಿಗಳ ಅಳುವಿಗೆ ಕಾರಣವೇನೆಂಬ ವಾಸನೆಯನ್ನ ನಾವೇ ಕಂಡುಹಿಡಿಯಬೇಕು, ಇಲ್ಲವಾದರೆ ಈ ತಲೆಕೆಟ್ಟ ಜನಗಳಿಂದ ನಾಯಿಗಳ ಹುಟ್ಟು ಹಬ್ಬ, ಮದುವೆ, ಸೀಮಂತ, ನಾಮಕರಣ ಇನ್ನು ಹೆಚ್ಚಾಗಿ ನಮ್ಮ ಬೀದಿ ಬದುಕು ಇನ್ನ ದಾರುಣವಾಗಲಿದೆ ಎಂದಿಲ್ಲವಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಗುರುಗಳ ಬಗ್ಗೆ ಮಾತಾಡೋ ಯೋಗ್ಯತೆ ನಿಮ್ಮಂತ ಹಂದಿಗಳಿಗಿಲ್ಲಾ ,ಗುರುಗಳ ಪಾದದ ಧೂಳಿಗೂ ಸಮ ಇಲ್ಲಾ ನಿಮ್ಮಗಳ ಪರಿವಾರ

  2. ದಯವಿಟ್ಟು 100ರಲ್ಲಿ 1ತಪ್ಪನ್ನು ತಿರುಚಿ, ಅವರ ಜೀವನದುದ್ದಕ್ಕೂ ಗಳಿಸಿದ ಹೆಸರಿಗೆ ಕಳಂಕ ತರಬೇಡಿ. ಇಲ್ಲೀವರೆಗೂ ಅವರ ಆದ್ಯಾತ್ಮಿಕ ಮಾತಿನ ಮೋಡಿಯಿಂದ ಸಾಕಷ್ಟುಉತ್ತರ ಕರ್ನಾಟಕದ ಜನ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಕಾಣಿಕೊಂಡ ಉತ್ತಮ ಜೀವನ ಮಾಡುತ್ತಿದ್ದಾರೆ.ಅವರು ತಿಳಿಯದೆ ಮಾತನಾಡಿರಬಹುದು 🙏🙏

  3. ಕಾಂಗ್ರಸ್ಸಿನ ಉಡಾಫೆ ಆಡಳಿತ,ಭ್ರಷ್ಟತೆ ಗಳಿಗೆ ಬೇಸರ ಪಟ್ಟು ಭಾರತದ ಜನ 2014 ರಲ್ಲಿ ಬಿಜೆಪಿ ಯ ಮಾತುಗಾರ ಮೋದಿಗೆಮತನೀಡಿದರು. ಆಗ ಜನ ಗುಜರಾತಿನ ಅಮಾನವೀಯಗೋಧ್ರಾ ದುರಂತ ಮರೆತಿದ್ದರು,ಮೋದಿ ಒಬ್ಬರೇ ಬರಲಿಲ್ಲ,ಜೊತೆಗೆ ಕಟುಗ ಮನಸ್ಸುಳ್ಳ ಅಮಿತ್ ಶಾ ಎಂಭವ್ಯಕ್ತಿಯನ್ನು ಜೋತೆಗೆ ತಂದು,ತಾವು ವಿಶ್ರಮಿತ ಸ್ಥಿತಿಯಲ್ಲಿ ಇರುವದಕ್ಕೆ ಪ್ರಾರಂಭಿಸಿದರು. ಆದರೆ ದುರಂತ ಆರ್ ಎಸ್ ಏಸ್ ಈ ಅವಕಾಶ ಬಳಸಿಕೊಂಡು ಜನರವಿರುದ್ಧ ಇಸ್ತುಕ್ರೂರವಾಗಬಾರದಿತ್ತು,ಎಂ7ಮಾಡುವದು, ಅದು ಅವರ ಮೂಲಗುಣ. ಈ ಕ್ರೌರ್ಯದವಿರುದ್ಧ ಜನ ಬೇಸತ್ತಿದ್ದಾರೆ ಆದರೆ ಅವರಿಗೆ ಪರ್ಯಾಯ ಇಲ್ಲ. ಇಂತಹ ಸ್ಥಿತಿಯಲ್ಲಿ ಈ ಮೋದಿಯನ್ನ ಒಬ್ಬಸ್ವಾಮಿಜಿ ಈ ರೀತಿ ಹೊಗಳಿದ್ದು,ಪ್ರಜ್ಞಾವಂತಿಕೆಯಿಂದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುವವರಿಗೆ, ಆ ಸ್ವಾಮಿಜಿಯವರ ಮನೋಸ್ಥಿತಿಯಬಗ್ಗೆ ಮರುಕ ಹುಟ್ಟಿಸುತ್ತದೆ,ಅವರು ಸತ್ಯದ ನಿಲುವನ್ನು ತಿಳಿಯದೆ ಆ ಒಲೈಕೆಯ ಮಾತುಆಡಿದ್ದು ಅವರಬಗ್ಗೆ ಇದ್ದ ಗೌರವ ಕಡಿಮೆಯಾಗುತ್ರದೆ ಎನ್ನವದು ಸತ್ಯ.

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...