Homeಚಳವಳಿಕಿಸಾನ್ ಸತ್ಯಾಗ್ರಹ; ದೆಹಲಿಯ ರೈತ ಹೋರಾಟದ ಡಾಕ್ಯುಮೆಂಟರಿ

ಕಿಸಾನ್ ಸತ್ಯಾಗ್ರಹ; ದೆಹಲಿಯ ರೈತ ಹೋರಾಟದ ಡಾಕ್ಯುಮೆಂಟರಿ

- Advertisement -
- Advertisement -

ಗೆಳೆಯರಾದ ಕೇಸರಿ ಹರವೂ ಅವರು ದೆಹಲಿಯ ಚಾರಿತ್ರಿಕ ಮಹತ್ವದ ರೈತಹೋರಾಟದ ಬಗ್ಗೆ ಮಾಡಿರುವ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರವನ್ನು ಕುರಿತ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕಾಗಿ ಈ ಟಿಪ್ಪಣಿ.

ಈ ಚಿತ್ರವನ್ನು ಒಂದು ಪದ್ಯ ಓದುವ ತನ್ಮಯತೆಯಲ್ಲಿ ನೋಡಿದೆ. ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ರೂಪಕವನ್ನು ಕನ್ನಡ ದಲಿತ ಕಾವ್ಯ ಸೃಷ್ಟಿಸಿದೆಯಷ್ಟೆ. ಭಾರತದ ಬೇರೆಬೇರೆ ಹೋರಾಟದ ಧಾರೆಗಳು ಸೇರಿ ರೂಪುಗೊಂಡ ದೆಹಲಿ ರೈತ ಹೋರಾಟವು, ಈ ರೂಪಕದ ಆನ್ವಯಿಕತೆ ಅನಿಸಿತು. ಈ ಹೋರಾಟದಲ್ಲಿ ಭಾರತದ ಸಿಖ್ಖರ ಧಾರೆಯೇ ಪ್ರಧಾನವಾದುದು. ಚಿತ್ರದಲ್ಲಿ ಸಿಖ್ಖರ ಪೇಟಗಳ ಮತ್ತು ಬೇರೆಬೇರೆ ಸಂಘಟನೆಗಳ ಬಳಕೆಯಾದ ಬಾವುಟಗಳ ವರ್ಣವೈವಿಧ್ಯವು ಎದ್ದು ತೋರುತ್ತದೆ. ಈ ಹಲವು ಬಣ್ಣಗಳಿಗೆ ತಕ್ಕಂತೆ ಹೋರಾಟದಲ್ಲಿ ಹಲವು ಧರ್ಮದ ಜನರು ಇರುವುದನ್ನು ಚಿತ್ರ ಕಾಣಿಸುತ್ತದೆ. ಇದು ಭಾರತದ ಭಾಷಿಕ ಸಾಂಸ್ಕೃತಿಕ ಧಾರ್ಮಿಕ ಬಹುತ್ವವನ್ನು ಮಾತ್ರವಲ್ಲದೆ, ನಾಡಿನ ಹೋರಾಟಗಳಲ್ಲಿ ಇರಬೇಕಾದ ಪಾಲುದಾರಿಕೆಯ ಬಹುತ್ವವನ್ನೂ ಧ್ವನಿಸುತ್ತದೆ.

ಚಿತ್ರದಲ್ಲಿ ಒಂದೆಡೆ ಪ್ರಭುತ್ವದ ಪರವಾಗಿರುವ ಮಂತ್ರಿಗಳು ರೈತಕಾಯಿದೆ ಎಷ್ಟು ಉಪಯುಕ್ತವಾಗಿದೆ ಎಂದು ವಾದಿಸುವ ಹೇಳಿಕೆಗಳನ್ನು; ಮತ್ತೊಂದೆಡೆ ಈ ಕಾಯಿದೆಗಳು ಎಷ್ಟು ರೈತವಿರೋಧಿಯೂ ಕಾರ್ಪೊರೇಟ್ ಹಿತಾಸಕ್ತಿಯೂ ಆಗಿವೆಂಬ ರೈತರ ಮತ್ತು ಚಿಂತಕರ ಅಭಿಪ್ರಾಯಗಳನ್ನು (ಕೆಲವು ಸಂದರ್ಶನಗಳು ದೀರ್ಘವಾಗಿವೆ), ಉದ್ದಕ್ಕೂ ಮುಖಾಮುಖಿಯಾಗಿ ಮಂಡಿಸುವ ವಿನ್ಯಾಸವಿದೆ. ಆರೋಪ-ಪ್ರತ್ಯಾರೋಪದ ವಿನ್ಯಾಸದಲ್ಲಿರುವ ಈ ಪಕ್ಷ-ಪ್ರತಿಪಕ್ಷ ಮಂಡನೆಗಳ ನಡುವೆ ಚಿತ್ರ ನಿರ್ಲಿಪ್ತವಾಗಿ ನಿಂತಿದೆ ಅನಿಸುತ್ತದೆ. ಆದರೆ ಅದು ಸುಳ್ಳು ಮತ್ತು ಸತ್ಯಗಳನ್ನು ಮುಖಾಮುಖಿ ಮಾಡಿಸುತ್ತಿರುವುದು ಪ್ರೇಕ್ಷಕರಿಗೆ ಮನವರಿಕೆ ಆಗುತ್ತದೆ. ಪ್ರಭುತ್ವವು ತನ್ನ ಕ್ರೌರ್ಯ ಮತ್ತು ಸಂಚುಗಾರಿಕೆ ಅಡಗಿಸಲು ಎಂತಹ ಸೌಮ್ಯದ ಸ್ನೇಹದ ಸುರಕ್ಷೆಯ ಭಾಷೆಯನ್ನು ಬಳಸುತ್ತದೆ ಎಂಬ ಸಂಗತಿಯಂತೂ ಭಾಷೆಯ ರಾಜಕಾರಣಕ್ಕೆ ಒಳ್ಳೆಯ ನಿದರ್ಶನವಾಗಿದೆ. ಈ ಕಾರಣಕ್ಕೆ ಇದೊಂದು ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಸಾಕ್ಷ್ಯಚಿತ್ರ.

ಚಿತ್ರವು ದುಡಿವ ವರ್ಗದ ರಾಜಕೀಯ ಪ್ರಜ್ಞೆ ಮತ್ತು ಬುದ್ಧಿಜೀವಿಗಳ ಚಾರಿತ್ರಿಕ ಹೊಣೆಗಾರಿಕೆ
ಕುರಿತು ಹೊಸ ವ್ಯಾಖ್ಯಾನ ಮಂಡಿಸುವ ಕ್ರಮದಲ್ಲೂ ವಿಶೇಷತೆಯಿದೆ. ಇಲ್ಲಿ ರೈತರು, ತಮ್ಮ ವಾಸ್ತವಿಕ ಅನುಭವದ ನೆಲೆಯಿಂದ ಕೃಷಿಕಾಯಿದೆಗಳ ಬಗ್ಗೆ ಸರಳವಾಗಿ ಸಹಜವಾಗಿ ಆಡುವ ಮಾತುಗಳು, ಅವರ ಆಳವಾದ ರಾಜಕೀಯ ತಿಳಿವಳಿಕೆಯನ್ನು ಸೂಚಿಸುತ್ತವೆ; ಅದೇ ಕಾಲಕ್ಕೆ ರೈತರ ಪರವಾಗಿ ಕೆಲಸ ಮಾಡುವ ವಿಶ್ವವಿದ್ಯಾಲಯಗಳ ಚಿಂತಕರು, ತಮ್ಮ ಅಕೆಡೆಮಿಕ್ ತಿಳಿವಳಿಕೆಯನ್ನು ಬೀದಿ ಆಂದೋಲನಗಳಿಗೆ ಹಾಯಿಸುವುದು, ಬುದ್ಧಿಜೀವಿಗಳ ಚಟುವಟಿಕೆಯ ಮರುಹುಟ್ಟನ್ನು ಸೂಚಿಸುತ್ತವೆ. ಈ ಅರ್ಥದಲ್ಲಿ ಎರಡೂ ವರ್ಗಗಳ ಅರ್ಥಪೂರ್ಣ ರೂಪಾಂತರದ ಸಾಕ್ಷ್ಯವಾಗಿದೆ.

ಚಿತ್ರದಲ್ಲಿ ಒಂದೆಡೆ ಕೃಷಿಕಾಯಿದೆಗಳ ಬಗ್ಗೆ, ಸರ್ಕಾರದ ನೀತಿಗಳ ಬಗ್ಗೆ, ಸೈದ್ಧಾಂತಿಕವಾದ ಗಂಭೀರವಾದ ಟಿಪ್ಪಣಿಗಳನ್ನು ಮಾಡುವ ರೈತರ, ಚಿಂತಕರು, ಹೋರಾಟಗಾರರ ಮಾತುಕತೆ ಬರುತ್ತದೆ. ಇದಾದಕೂಡಲೇ ಹೋರಾಟದ ಕಣದಲ್ಲಿ ರಸ್ತೆಯ ಮೇಲೆ, ರೈತರು ರೊಟ್ಟಿಬೇಯಿಸುವ, ತರಕಾರಿ ಬಿಡಿಸುವ, ಜಳಕಮಾಡುವ, ಚಿತ್ರಗಳು ಬರುತ್ತವೆ. ಇವುಗಳನ್ನು ಚಿತ್ರವು ಒಂದರ ಬಳಿಕ ಮತ್ತೊಂದನ್ನು ಜೋಡಿಸುತ್ತ ಹೋಗುತ್ತದೆ. ಈ ಮೂಲಕ, ಚಳವಳಿಯು ದೈನಿಕ ಚಟುವಟಿಕೆಯಾಗುವ, ಜನರ ದೈನಿಕಗಳು ಹೋರಾಟದ ಭಾಗವಾಗುವ ಪ್ರಕ್ರಿಯೆಯನ್ನು ಹಿಡಿದಿಡುತ್ತದೆ. ಇದು ದೈನಿಕವನ್ನು ಘನತೀಕರಿಸುವ ವಿಧಾನವಾಗಿದೆ.

ಭಾರತದಲ್ಲಿ ಸಿಖ್ಖರ ಬಗ್ಗೆ ಅವರು ದಡ್ಡರು, ಖಾಲಿಸ್ತಾನವಾದಿಗಳು, ಅತಿಧಾರ್ಮಿಕರು ಎಂದೆಲ್ಲ ಗ್ರಹಿಕೆಗಳಿವೆ. ಆದರೆ ಈ ಚಿತ್ರ ಅವರ ಬಗೆಗಿನ ಪರಿಕಲ್ಪನೆಯನ್ನೇ ಬದಲಿಸಿಬಿಡುತ್ತದೆ. ಅವರ ಶ್ರಮಜೀವಿ ವ್ಯಕ್ತಿತ್ವ, ದೇಶಪ್ರೇಮ, ಹೋರಾಟದ ಕೆಚ್ಚು, ಸರಳತೆ, ಅನ್ಯಾಯಕ್ಕೆ ಒಳಗಾದ ಸಂಕಟಗಳನ್ನು ಚಿತ್ರವು ಕಾಣಿಸುತ್ತದೆ. ಇಲ್ಲಿರುವ ಸಾಂಘಿಕ ಹೋರಾಟದ ಹಿಂದೆ, ಇಡೀ ಸಿಖ್ ಧರ್ಮದ ಕೂಡುದುಡಿಮೆ, ಕೂಡುಭೋಜನ, ಲಂಗರ್ ಸಂಸ್ಕೃತಿ, ಜಾತ್ಯತೀತತೆಗಳು ಕಾಣುಟ್ಟವೆ. ದೆಹಲಿಯ ಸುಲ್ತಾನರ ವಿರುದ್ಧ ಸೆಣಸಾಡುತ್ತಲೇ ರೂಪುಗೊಂಡ ಧರ್ಮವಿದು. ಈ ಅರ್ಥದಲ್ಲಿ ಚಿತ್ರವು ಸಿಖ್ ಧರ್ಮದ ಒಳಗೇ ಇರುವ ಹೋರಾಟದ ಪರಂಪರೆಯನ್ನು ಭಿತ್ತಿಯನ್ನಾಗಿ ತಂದುಕೊಂಡಿದೆ.

ಈ ಚಿತ್ರದಲ್ಲಿ ಎರಡು ಕೊರತೆಗಳು ಕಂಡವು. 1. ನಾವು ಇಲ್ಲಿ ಚಳವಳಿಯಲ್ಲಿದ್ದೇವೆ. ನಮ್ಮ ಹೊಲಮನೆಯ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ ಎಂದು ಅನೇಕ ರೈತರು ಹೇಳುತ್ತಾರೆ. ಆ ಮಹಿಳೆಯರು ತಮ್ಮ ಊರುಗಳಲ್ಲಿ ತೊಡಗಿರುವ ಕಾಯಕದ ಚಿತ್ರಗಳು ಇಲ್ಲದಿರುವುದು. ಹೋರಾಟಗಳಲ್ಲಿ ತೆರೆಮರೆಯಲ್ಲಿ ಉಳಿದುಬಿಡುವ ಈ ಅದೃಶ್ಯ ಸೈನಿಕರನ್ನು ಚರಿತ್ರೆಯು ಸಾಮಾನ್ಯವಾಗಿ ಗಮನಿಸದೆ ಹೋಗುವುದರಿಂದ, ಹೋರಾಟಗಳು ಗಂಡುಪ್ರಧಾನ ಕ್ರಿಯೆಗಳಾಗಿ ದಾಖಲಾಗಿಬಿಡುವ ಅಪಾಯವಿದೆ. 2. ಹೋರಾಟದಲ್ಲಿ ಭಾಷಣ ಚರ್ಚೆ ಘೋಷಣೆಗಳಷ್ಟೇ ಪ್ರಧಾನವಾದವು ಹಾಡುಗಳು. ಅದರಲ್ಲೂ ಸಿಖ್ಖರದು ಗುರುಬಾಣಿಗಳನ್ನು ಹಾಡುವ ಧರ್ಮ. ಪಂಜಾಬಿ ಹಾಡುಗಾರರು ಈ ಹೋರಾಟದಲ್ಲಿ ಭಾಗವಹಿಸಿರುವರು. ಅಂತಹ ಹಾಡುಗಳನ್ನು ಚಿತ್ರವು ಅಳವಡಿಸಿಕೊಂಡಿಲ್ಲದಿರುವುದು.

ಚಳುವಳಿ ಮುಗಿದಿಲ್ಲ, ಇನ್ನೂ ತೀವ್ರಗೊಳ್ಳುತ್ತದೆ - ರೈತ ಮುಖಂಡರುಈ ಚಿತ್ರವು ದೃಶ್ಯ ಮತ್ತು ಮಾತು ಪ್ರಧಾನವಾಗಿದೆ. ಇವುಗಳ ಸಂದಣಿಯ ಚಿತ್ರದಲ್ಲಿ, ಮಾತಿಲ್ಲದ, ಹಿನ್ನೆಲೆ ಸಂಗೀತವಿಲ್ಲದ ಗಾಢ ಮೌನ ಆವರಿಸಿಕೊಳ್ಳುವ, ಕೇವಲ ರೈತರ ಮುಖಗಳನ್ನೇ ಕಾಣಿಸುವ ಎರಡು ಸನ್ನಿವೇಶಗಳಿವೆ. ಮೊದಲನೆಯದು-ಗಣರಾಜ್ಯದಂದು ಟ್ರ್ಯಾಕ್ಟರ್ ಪೆರೇಡ್ ಮಾಡುವ ಕಾರ್ಯಕ್ರಮವು, ಪ್ರಭುತ್ವದ ಫಿತೂರಿಯಿಂದ ಗೊಂದಲದಲ್ಲಿ ಮುಗಿದುಹೋದ ಬಳಿಕ, ಚಿಂತೆಯಲ್ಲಿ ಮುಳುಗಿದ ರೈತರನ್ನು ಕಾಣಿಸುವ ಸನ್ನಿವೇಶ. ಎರಡನೆಯದು- ಚಿತ್ರದ ಕೊನೆಯಲ್ಲಿ ಸರ್ಕಾರವು ಚಳವಳಿಯನ್ನು ಮುರಿಯಲು ತಾತ್ಕಾಲಿಕವಾಗಿ ಕಾನೂನನ್ನು ಹಿಂತೆಗೆದುಕೊಳ್ಳುವ ಹುನ್ನಾರ ಮಾಡಿದಾಗ ರೈತರು ಚಿಂತನೆಯಲ್ಲಿ ಮುಳುಗಿದ ಸನ್ನಿವೇಶ. ಈ ಎರಡೂ ಸನ್ನಿವೇಶಗಳು ಮಾತಿನಲ್ಲಿ ಹೇಳಲಾಗದ ದಿಟಗಳನ್ನು ಮೌನದ ಮೂಲಕ ಹೇಳಿಸುತ್ತ ಬಹಳ ಪರಿಣಾಮಕಾರಿಯಾಗಿವೆ.

ಚಿತ್ರದ ಕೊನೆ ಸಾಂಕೇತಿಕವಾಗಿದೆ. ಅದು ರೈತಾಪಿ ಧ್ವಜವನ್ನು ಹಿಡಿದು ಮಗುವೊಂದು ಆಡುವುದು. ಇದು ಹೋರಾಟದ ರಿಲೇಕೋಲನನ್ನು ಹೊಸತಲೆಮಾರಿಗೆ ಹಾಯುತ್ತಿರುವ ಈ ರೂಪಕವು ವಾಚ್ಯವಾಗಿದೆ ಮತ್ತು ಅರ್ಥಪೂರ್ಣವಾಗಿದೆ. ಬಿಳಿಯ ಗಡ್ಡಮೀಸೆಯ ರೈತರೇ ತುಂಬಿರುವ ಚಿತ್ರದಲ್ಲಿ, ಈ ಹೊಸತಲೆಮಾರಿನ ಮಗುವಿನ ಚಿತ್ರವು, ದೊಡ್ಡಮರದ ಬುಡದಲ್ಲಿ ಒಡಮೂಡಿದ ಚಿಗುರಿನ ಕುಡಿಯಂತಿದೆ.

ನಾನು ಕೇಸರಿಯವರು ಮಾಡಿರುವ ಅಘನಾಶಿನಿ ಕುರಿತ ಚಿತ್ರವನ್ನು ನೋಡಿರುವೆ. ಅದೊಂದು ಎಚ್ಚರಿಕೆಯಿಂದ ಕಟ್ಟಿದ ಕಾವ್ಯ. ಅದಕ್ಕೆ ಹೋಲಿಸಿದರೆ ರಣರಂಗದಲ್ಲಿ ನಿಂತು ಮಾಡಿದ ಈ ಚಿತ್ರವು ಕೊಂಚ ಚದುರಿಕೊಂಡಿದೆ. ಇಂತಹ ಚಿತ್ರಗಳು ನಮ್ಮ ಕಾಲದಲ್ಲಿ ಹುಟ್ಟಿಸಬಹುದಾದ ರಾಜಕೀಯ ಪ್ರತಿಸ್ಪಂದನೆಯ ದೃಷ್ಟಿಯಿಂದ ಮುಖ್ಯವಾದವು. ಮಾತ್ರವಲ್ಲ, ಮುಂದಿನ ತಲೆಮಾರಿಗೆ ಚರಿತ್ರೆಯಲ್ಲಿ ಇಂತಹದೊಂದು ಚಳುವಳಿ ನಡೆದಿತ್ತು ಎಂದು ಒದಗುವ ಆಕರವಾಗುವುದು. ಕನ್ನಡದ ಒಳ್ಳೆಯ ಮನಸ್ಸೊಂದು ಈ ಚಿತ್ರ ಮಾಡಿದೆಯೆಂಬುದು ಅಭಿಮಾನ ಹುಟ್ಟಿಸುತ್ತದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ದಿಟ್ಟ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈಗ ಆನ್‌ಲೈನ್‌ನಲ್ಲಿ ಲಭ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....