HomeUncategorizedನೆಲ-ಮುಗಿಲು  ಒಂದಾದ ಸಂಕಟ

ನೆಲ-ಮುಗಿಲು  ಒಂದಾದ ಸಂಕಟ

- Advertisement -
ಇಡೀ ಮಾನವತೆಯು ಅಷ್ಟೇಕೆ ಸಕಲ ಜೀವರಾಶಿಯೂ ಈ ನೆಲವನ್ನೇ ನಂಬಿಕೊಂಡಿದೆ. ನಮಗಂತೂ ನಿಂತ ನೆಲ ಕಾಲ ಕೆಳಗಿದೆ, ಮುಗಿಲು ಹೊದಿಕೆಯಾಗಿದೆ. ಎರಡೂ ಮುನಿಸಿಕೊಂಡ ಸಂಕಟ ರಾಜ್ಯದ ಕೊಡಗನ್ನು ಕಾಡಿದೆ. ಕೆಲ ಹೊತ್ತು ನಮ್ಮೆಲ್ಲಾ ಆಸೆ, ಅಧಿಕಾರ ಪರ ಆಲೋಚನೆಗಳನ್ನು ಬದಿಗಿಟ್ಟು ಕೇವಲ ಜೀವಿಪರ ಹಿತದ ಆಶಯವನ್ನು ಮುಂದಿಟ್ಟುಕೊಂಡು ನೋಡೋಣ. ಮುಗಿಲು ಮುನಿಸಿಕೊಂಡು ಧಾರಾಕಾರ ಮಳೆ ಉಣಿಸುವುದು ಕೊಡಗಿಗೇನೂ ಹೊಸತಲ್ಲ. ನೆಲ ಮುನಿಸಿದ್ದು ಖಂಡಿತಾ ಹೊಸತು. ಮಾತ್ರವಲ್ಲ, ತಡೆದುಕೊಳ್ಳಲು ಆಗದ ವಿಕೋಪ ಭೂಮಿಯದು. ಇದರಲ್ಲಿ ಬರೀ ನಿಸರ್ಗದ ಪಾತ್ರವೆಷ್ಟು, ನಿಸರ್ಗದಲ್ಲದ್ದೆಷ್ಟು? ಸುಮ್ಮನೆ ಆವೇಶಭರಿತ ಮಾತಿಗೆ ಉತ್ತರಿಸಲು ಆಗದ್ದು. ಭಾವಪರವಶರಾಗಿ ಮಾತಾಡುವ, ಚರ್ಚೆಗಳನ್ನು ಎಬ್ಬಿಸುವ ಮನುಕುಲಕ್ಕೆ ಎಲುಬಿಲ್ಲದ ನಾಲಿಗೆಯು ಸದಾ ಅಣಿಯಾಗಿರುತ್ತದೆ. ಆದಕ್ಕೆ ಆಲೋಚನೆ, ಅಧ್ಯಯನ, ಓದು, ಶೋಧನೆ, ಬೆರಗಿನ ಒಳನೋಟ ಎಲ್ಲವನ್ನೂ ಸ್ವಲ್ಪವಾದರೂ ದಕ್ಕಿಸಿಕೊಂಡು ನೋಡುವಲ್ಲಿ ಮನುಕುಲವು ಸದಾ ಜಾತಿ, ರಾಜಕೀಯ, ಮಾರುಕಟ್ಟೆ ಆಧಾರಿತ ಮುನ್ನೋಟ ಮುಂತಾದವುಗಳಿಂದ ಸೋತಿದೆ. ಇದು ಕೇವಲ ಕರ್ನಾಟಕ-ಕೊಡಗಿನ ಸಂಗತಿಯಲ್ಲ. ಜಗತ್ತು ಇಂದು ಪರಿಸರ ಮತ್ತು ಅಭಿವೃದ್ಧಿಯನ್ನು ಸಮೀಕರಿಸುವಲ್ಲಿ ನಡೆದುಕೊಳ್ಳುತ್ತಿರುವ ಪರಿಸ್ಥಿತಿ. ಜೀವಿಪರ ಆಲೋಚನೆಗಳಿಗೆ ಜಾಗತಿಕ ಚರ್ಚೆಗಳು ಆರಂಭವಾಗಿ 46 ವರ್ಷಗಳು ಸಂದಿವೆ. ಅದಕ್ಕೆ ಹಿಂದಿನ ಹತ್ತಾರು ವರ್ಷಗಳ ಶ್ರಮವನ್ನೂ ಸೇರಿಸಿದರೆ ಹೆಚ್ಚೂ ಕಡಿಮೆ 60 ವರ್ಷಗಳಾಗುತ್ತವೆ. ನಮ್ಮ ದೇಸಿ ಚಿಂತನೆಯಲ್ಲಿ ಓರ್ವ ಮನುಷ್ಯನ ಸಾಮಾನ್ಯ ಆಯಸ್ಸುನಷ್ಟು ಕಾಲ ಶ್ರಮ ಪಟ್ಟಿದ್ದೇವೆ. 60 ತುಂಬಿದ್ದಕ್ಕೆ ಷಷ್ಠ್ಯಾಬ್ದಿ  ಮಾಡಿಕೊಳ್ಳುತ್ತೇವಲ್ಲ, ಅಷ್ಟು ಕಾಲ ಜೀವಿಪರ ಆಲೋಚನೆಗಳ ಮಾಡುತ್ತಾ ಒಮ್ಮತದ ತೀರ್ಮಾನಕ್ಕೆ ಬಾರದೆ ಸೋತಿದ್ದೇವೆ.
ಈ ಹಿಂದೆಯೇ ಹೇಳಿದೆ ಇದು ಕೇವಲ ಭಾರತದ-ಕರ್ನಾಟಕದ-ಕೊಡಗಿನ ಮಾತಷ್ಟೇ ಅಲ್ಲ ಇಡೀ ಭೂಮಿಗೆ ಸೇರಿದ ಆತಂಕ. ನೆಲ ನಮ್ಮ ಕಾಲ ಕೆಳಗಿದೆ. ಅಷ್ಟರ ಮಟ್ಟಿಗೆ ನಾವದನ್ನು ಪೋಷಿಸಿದ್ದೇವೆ. ನೆಲದ ಮೇಲಿನ ಒಂದು ಮಿಲಿಮೀಟರ್ ಮಣ್ಣು ಉತ್ಪಾದನೆಯಾಗಲು ಸಹಸ್ರಾರು ವರ್ಷಗಳು ಬೇಕು. ಒಂದೇ ಒಂದು ಮಳೆಗಾಲ ಎಲ್ಲವನ್ನೂ ಕೊಚ್ಚಿ ಹೋಗಬಲ್ಲದು. ಮಾನವನ ಒಡನಾಟಕ್ಕೆ ಬಾರದ ಯಾವುದೇ ನೆಲವನ್ನು ಗಮನಿಸಿದ್ದೀರಾ?  ನೆಲಕ್ಕೆ ಒಂದು ಬಹು ದೊಡ್ಡ ಗುಣವಿದೆ. ಸುಮ್ಮನೆ ತನ್ನನ್ನು ತಾನು ಏನಾದರೂ ಬೆಳೆಸಿಕೊಂಡು ಹಸಿರಾಗಿಸಿ ಮುಚ್ಚಿಕೊಂಡಿರುತ್ತದೆ. ದೊಡ್ಡ ಬಯಲಿನ ಅಂತಹ ಸ್ಥಳಗಳಲ್ಲಿ ಕಾಲು ದಾರಿಯನ್ನು ಗಮನಿಸಿರುತ್ತೀರಿ! ಮನುಷ್ಯ ಓಡಾಡಿದ ಜಾಗ ಮಾತ್ರ ಹಸಿರಿನಿಂದ ವಂಚಿತವಾಗಿರುತ್ತದೆ. ಸುತ್ತಲೂ ಗಿಡ-ಗೆಂಟೆಗಳಲ್ಲಿ ಯಾವುದಾದರೂ ಸರಿಯೇ…. ಅಲ್ಲಿ ಬೆಳೆಸಿಕೊಂಡಿರುತ್ತದೆ. ಎಲ್ಲಾ ಅಭಿವೃದ್ಧಿಗಳೂ ನೆಲವನ್ನು ಮಾತ್ರವೇ ನಂಬಿರುವುದರಿಂದ ಒಂದಷ್ಟು ಜಾಗರೂಕ ಬೆಳವಣಿಗೆಯನ್ನು ಮನುಕುಲವು ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ಪ್ರಕೃತಿಯು ತಡೆದುಕೊಳ್ಳದೆ ಮುನಿಸು ತೋರಿಸುವುದು ಸಹಜ. ಬರವನ್ನೂ ಸಹಾ ಪ್ರಕೃತಿಯ ಬಿಡುವು ಎಂದೇ ವಿಶ್ಲೇಷಿಸುವ ಅಧ್ಯಯನಗಳು ಸಿಗುತ್ತವೆ.
ಈ ಬಾರಿ ಮಳೆಯ ಮುನಿಸು ಮಲೆನಾಡಿಗೆ ಮಾತ್ರವಲ್ಲ. ಕೆಲ ವರ್ಷಗಳ ಹಿಂದೆ ಸುಮಾರು 2011ರಲ್ಲಿ ರಾಯಚೂರು-ಬಳ್ಳಾರಿ-ಯಾದಗಿರಿ ಜಿಲ್ಲೆಗಳಂತಹ ಬರದ ನಾಡಿನಲ್ಲೂ ತನ್ನ ಚಮತ್ಕಾರವನ್ನು ತೋರಿತ್ತು. ಲಕ್ಷಾಂತರ ಟನ್ನುಗಟ್ಟಲೇ ಫಲವತ್ತಾದ ಮಣ್ಣು ಕೊಚ್ಚಿಹೋಯಿತು. ಸುರಪುರದಲ್ಲಿ ವರ್ಷಕ್ಕೆ ಬೀಳುವ ಮಳೆಯಷ್ಟು ಎರಡೇ ದಿನದಲ್ಲಿ ಬಿದ್ದಿತ್ತು. ಈ ಹವಾಮಾನ ಬದಲಾವಣೆಯು ಎಲ್ಲಾದರೂ ಯಾವಾಗಲಾದರೂ ಆಗಬಹುದು. ಅದಕ್ಕಾಗಿ ಎಲ್ಲಾ ಅಭಿವೃದ್ಧಿ ಪರ ಆಲೋಚನಾಕಾರರೂ ಅದಕ್ಕೆಲ್ಲಾ “ಹವಾಮಾನ ಬದಲಾವಣೆ” ಎಂಬ ಹೆಸರನ್ನು ಕೊಟ್ಟು ಕೈತೊಳೆದುಕೊಂಡಿದ್ದಾರೆ. ನಮ್ಮದೇನೂ ಕೈವಾಡವಿಲ್ಲ. ನಿಸರ್ಗದ್ದೇ ಎನ್ನುತ್ತಾ ತಮ್ಮ ಲಾಭವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾ ಮುಂದೆ ನಡೆಯುತ್ತಾರೆ. ನಿಸರ್ಗದ ಬದಲಾವಣೆಗಳಿಗೆ ಅದರೊಳಗಿನ ಅನೈಸರ್ಗಿಕ ಕಾರಭಾರವೇನು? ಎಂಬುದನ್ನು ಭಾವಪರವಶರಾಗಿ ಮಾತಾಡುವ ಯಾರೂ ಚರ್ಚಿಸುವುದಿಲ್ಲ. ಅದಕ್ಕಾಗಿ ಜಾಗತಿಕವಾಗಿ ಈ ನೆಲದ ರಕ್ಷಣೆಗೆ ಅಂತಾರಾಷ್ಟ್ರೀಯ ಒತ್ತಾಯಗಳು ಕಡ್ಡಾಯವಾಗುತ್ತಿವೆ. ಇನ್ನು ಮುಂದೆ ಇವು ಅಂತರರಾಜ್ಯ, ಅಂತರಜಿಲ್ಲೆಯ ಅಷ್ಟೇಕೆ ಅಂತರತಾಲ್ಲೂಕುಗಳ ಒತ್ತಾಯ ಬೇಕಾದೀತು. ದೊಡ್ಡ-ದೊಡ್ಡ ನಗರಗಳು ಕೊಳೆಗೇರಿಗಳಾಗಿರುವುದು ನಮ್ಮ ನೆಲದ ಪ್ರೀತಿಯನ್ನು ಕಳೆದುಕೊಂಡಿರುವುದರಿಂದ ಎಂಬದನ್ನು ಹೇಗೇ ಹೇಳುವುದು?
ದಕ್ಷಿಣ ಭಾರತದ ನೆಲ, ಪ್ರಸ್ಥಭೂಮಿ- ಗಟ್ಟಿಯಾಗಿದ್ದು ಭೂಕಂಪನಗಳಿಂದ ಮುಕ್ತವಾದದ್ದು ಎಂಬುದನ್ನು ಅರಿತಿದ್ದೇವೆ. ಅಂದರೆ ಭೂಮಿಯ ಒಳಗಣ ಕಂಪನವು ಮೇಲ್ಮೈ ತಲುಪಲು ಆಗುದಂತೆ ಗಟ್ಟಿಯಾದ ಪದರವನ್ನು ಹೊಂದಿದೆ ಎಂದು ಅರ್ಥ. ನಾವು ಮೂರ್ಖರಾಗಿ ಮೇಲ್ಮೈಯನ್ನೇ ಅಲುಗಾಡಿಸಲು ಆರಂಭಿಸಿದರೆ ಏನಾದೀತು ಎಂದಾದರೂ ಆಲೋಚಿಸಿದ್ದೇವೆಯೇ? ಸಣ್ಣ ಸಲಿಕೆ – ಪಿಕಾಸಿಗಳಿಂದ ನೆಲ ಅಗೆಯುತ್ತಿದ್ದ ಕಾಲ ಹೋಗಿ ದಶಕಗಳಾದವು. ಈಗ “ಅರ್ಥ್ ಮೂವರ್ಸ್” ಜೆಸಿಬಿ ಯಂತ್ರಗಳು ಬಂದಿವೆ. ಕ್ಷಣಮಾತ್ರದಲ್ಲಿ ನೆಲ ಅಗೆದು ಗುಡ್ಡಗಳ ಕಡಿದು, ರಸ್ತೆ, ಜಮೀನು, ನಿಮಗೇನು ಬೇಕೋ ಅದನ್ನು ಮಾಡಲು ನೆರವಾಗುತ್ತವೆ. ನಮಗೆ ಎಂದೂ ಹೊಳೆಯದ ಮತ್ತೊಂದು ಕಾನೂನು ನಮ್ಮ ಈ ನಾಚಿಗೆಗೆಟ್ಟ ಆಸೆಯ ಜೊತೆಗೇ ಇದೆ. ಈ ನೆಲ ಎಂದೂ ನಮ್ಮದಲ್ಲ. ಅದಕ್ಕಾಗಿಯೇ ನಾವದಕ್ಕೆ ಬಾಡಿಗೆ ರೂಪದಲ್ಲಿ ಕಂದಾಯ ಕಟ್ಟುತ್ತೇವೆ. ಸರ್ಕಾರ ಬಹುದೊಡ್ಡ ಜಮೀನ್ದಾರ. ಅಂದ ಮೇಲೇ ಮುಗಿದೇ ಹೋಯಿತಲ್ಲ. ಎಲ್ಲಾ ರಾಜಕೀಯ ಮುಖಂಡರೇ ನಿಜವಾದ ಧಣಿಗಳು. ಅವರಿಚ್ಛೆಯೇ ಬಲು ದೊಡ್ಡ ನಿರ್ವಾಹಕ. ನಮ್ಮ ದೇಶದಲ್ಲಿ ಯಾವ ನೆಲವನ್ನು ಯಾವುದಕ್ಕೆ ಬಳಸಬೇಕು ಎನ್ನುವ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯಿದೆ. ಅದರ ವರ್ಗೀಕರಣದಂತೆ ಯಾವ ನೆಲವನ್ನು ಬಳಸಲಾಗುತ್ತಿದೆ ಎಂಬುದನ್ನು ಸರ್ಕಾರವೇ ಹೇಳಬೇಕು. ಸಾವಿರಾರು ಜನರನ್ನು ಒಳಗೊಂಡ ಭೂಬಳಕೆ ಮತ್ತು ಭೂಸರ್ವೇಕ್ಷಣಾ ಬ್ಯೂರೋ ದೇಶಾದ್ಯಂತ ನಾಲ್ಕಾರು ದೊಡ್ಡ-ದೊಡ್ಡ ಕಛೇರಿಗಳನ್ನು ಹೊಂದಿದೆ. ದಕ್ಷಿಣ ಭಾರತದ ಪ್ರಾಂತೀಯ ಕಛೇರಿಯು ಬೆಂಗಳೂರಿನಲ್ಲೇ ಇದೆ. ಸಂಸತ್ತು ಅದಕ್ಕೆ ಕೊಟ್ಟ ಅಧಿಕಾರ ಎಷ್ಟು. ಅದರ ತಿಳಿವಳಿಕೆಯನ್ನು ಬಳಸುವ ವಿಧಾನಗಳೆಷ್ಟು? ಯಾವುದಕ್ಕೂ ಉತ್ತರಗಳು ಸುಲಭವಾಗಿ ದೊರಕಲಾರವು.
ಕಾಲ ಕೆಳಗಿರುವ ನೆಲ ಅಂದು ಗುರುತ್ತಿಸುತ್ತೇವಲ್ಲ, ಅದಕ್ಕೆ ಸದಾ ಹಚ್ಚಡ ಇರಬೇಕಾದ್ದು ನ್ಯಾಯ ಎಂದು ಹೇಳಲು ಖಂಡಿತಾ ಮಾಧವ ಗಾಡ್ಗೀಳ್‍ರಂತಹ ಮೇಧಾವಿ ವಿಜ್ಞಾನಿಗಳ ವರದಿ ಬೇಕಿಲ್ಲ. ಸಾಮಾನ್ಯ ಜ್ಞಾನ ಅದು. ಅದರಲ್ಲೂ ಸೂಕ್ಷ್ಮಪ್ರದೇಶಗಳಲ್ಲಂತೂ ನೆಲಕ್ಕೆ ಹಸಿರು ಹೊದಿಕೆ ಅನಿವಾರ್ಯ. ನಮ್ಮದೇ ಹೊಲಗದ್ದೆಗಳಲ್ಲಿ ನೆರಳಿಗೆಂದು ಬೆಳೆಸಿಕೊಂಡ ಮರವನ್ನು ಕಡಿಯುತ್ತೇವೆಯೇ? ಅದಕ್ಕೆ ಪೂಜೆ ಮಾಡುತ್ತಾ ಕಾಪಾಡಿಕೊಳ್ಳಲು ನಮ್ಮದೇ ನ್ಯಾಯ ಕಟ್ಟಿಕೊಂಡಿಲ್ಲವಾ? ಹಾಗೆಯೇ ಕೊಡಗಿನ ನೆಲವೂ ಕೂಡ ನಮ್ಮ ಎಲ್ಲಾ ಆಸೆಯನ್ನೂ ಮೀರಿ ಸದಾ ಹಸಿರಾಗಿರಬೇಕಾದ ಅನಿವಾರ್ಯವನ್ನು ಹೊಂದಿದೆ. ನಮ್ಮ-ನಿಮ್ಮೆಲ್ಲರ ವಾರಾಂತ್ಯದ ಮೋಜಿಗೆ ಅದನ್ನು ಬಳಸುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಅನಿವಾರ್ಯವನ್ನು ಮುರಿಯುತ್ತಿದ್ದೇವೆ. ಹೇಗೂ ಈ ನೆಲ ನಮ್ಮದಲ್ಲವಲ್ಲ. ಅದಕ್ಕೇ ಮೋಜನ್ನು ಬೇರೊಬ್ಬರ ನೆಲದಲ್ಲಿ ಸುಲಭವಾಗಿ ಮಾಡಿ ಬರುತ್ತೇವೆ. ಪಕ್ಕದ ಕೇರಳವೂ ಸಹಾ ಈ ಬಗೆಯ ಸಾಂಸ್ಕøತಿಕ ಹೊಡೆತಗಳನ್ನು ನಿರಂತರವಾಗಿ 17ನೆಯ ಶತಮಾನದಿಂದಲೂ ಅನುಭವಿಸುತ್ತಾ ಬಂದಿದೆ. ಪೋರ್ಚುಗೀಸರು. ಅರಬ್ಬರು, ಇತರೇ ಅನ್ಯರು ತಮ್ಮದಲ್ಲದ ನೆಲದಲ್ಲಿ ಮೋಜು ಮಾಡಿ ಅಲ್ಲಿನ ನೆಲವನ್ನು ದಣಿಸಿದ್ದಲ್ಲದೇ ಅದನ್ನೇ ಗಳಿಕೆಯ ಹಾದಿಯಾಗಿ ಕಲಿಸಿ ಜನಕ್ಕೆ ಹುಚ್ಚು ಹಿಡಿಸಿದ್ದಾರೆ. “ದೇವರ ನೆಲ” ಬಯಲಾಗಿ “ದಣಿವಾರದ ನೆಲ”ವಾಗಿ ಪರಿವರ್ತಿತವಾಗಿದೆ.
ಈಗಲೂ ಕೇವಲ ಕೊಡಗರು ಮಾತ್ರವೇ ಅನುಭವಿಸುವಂತಹ ಕಟ್ಟಳೆಗಳು ಕೊಡಗಿನ ನೆ¯ಕ್ಕೆ ಇವೆ. ಅದನ್ನು ಬಾಡಿಗೆ ಕೊಡುವ ಮೂಲಕ ಅನ್ಯರನ್ನು ಆಕರ್ಷಿಸಿ ಸಾಂಸ್ಕøತಿಕ ಹಿಂಸೆಯನ್ನು ನೆಲದ ಮೇಲೆ ಹೇರಲಾಗಿದೆ. ಇದು ಸೂಕ್ಷ್ಮವಾಗಿ ಕಾಣುವವರಿಗೆ ತಿಳಿಯದ ಸಂಗತಿಯಲ್ಲ. ಜಗತ್ತಿನ ಅನೇಕ ನೆಲಗಳು ಈ ಬಗೆಯ ಸಾಂಸ್ಕøತಿಕ ವಿಧ್ವಂಸಕತೆಯನ್ನು ಅನುಭವಿರುವುದನ್ನು ಅನೇಕ ಅಧ್ಯಯನಗಳು ದಾಖಲು ಮಾಡಿವೆ. ಒಂದು ಪುಟ್ಟ ಎಚ್ಚರವಾಗಿ ಮಾಧವ ಗಾಡ್ಗೀಳ್ ಅಪ್ಪಟ ಸ್ವಾನುಭವದಿಂದ ಕಂಡದನ್ನು ವರಿದಿಯಾಗಿಸಿದ್ದರು. ಅದನ್ನು ತಮ್ಮ ಅನುಕೂಲಕ್ಕಾಗಿಯೇ ಕಸ್ತೂರಿರಂಗನ್ ವರಿದಿಯಾಗಿಸಿತ್ತು. ಆಗಲೂ ಗಾಡ್ಗೀಳ್ ಅವರು ತಮ್ಮ ಆಕ್ಷೇಪಣಾ ಪ್ರತಿಕ್ರಿಯೆಯನ್ನು ನೇರವಾಗಿ ಕಸ್ತೂರಿರಂಗನ್ ಅವರಿಗೆ ಬರೆದ ಪತ್ರವೂ ಸಾರ್ವಜನಿಕವಾಗಿ ಸಂವಹನಗೊಂಡಿತ್ತು. ಇದು ಪ್ರಕಟವಾಗಿಯೇ 5 ವರ್ಷಗಳಾಗಿವೆ. ಗಾಡ್ಗೀಳ್ ಅವರು ಆ ಆಕ್ಷೇಪಣಾ ಪತ್ರದಲ್ಲಿ ಸೂಕ್ಷ್ಮ ಪರಿಸರವೊಂದನ್ನು ನೋಡಬೇಕಾದಾಗ ವಹಿಸಬೇಕಾದ “ಪರ”ವನ್ನು ಐರೋಪ್ಯ ಹಿತದಲ್ಲಿದ್ದ ಮನಸ್ಸನ್ನು ಭಾರತೀಯವಾಗಿಸಬೇಕಾದ ಸಂದರ್ಭದಿಂದಲೇ ಆರಂಭಿಸಿದ್ದಾರೆ.
ಇಷ್ಟೆಲ್ಲಾ ಹಿನ್ನೆಲೆಯಲ್ಲಿ ಕೊಡಗನ್ನು ಕಾಪಾಡಬೇಕಾದ ಪಾರಂಪರಿಕ ಹಿತವನ್ನು ನಮ್ಮ ತಿಳಿವಳಿಕೆಯಾಗಿಸಿಕೊಂಡು, ಪ್ರಸ್ತುತ ಅಧ್ಯಯನ, ಅನುಭವ, ಸಂಶೋಧನೆಗಳು, ಜಾಗತಿಕ ನಿಲುವುಗಳು, ಸ್ಥಳಿಯ ಪ್ರಸ್ತುತತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ನಮ್ಮ ಮನೆಯು ಸ್ವಚ್ಛವಾಗಿರಲು ಪಕ್ಕದ ಮನೆಯವರ ಸಹಕಾರಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು, ನೆಲವನ್ನು ಸಡಿಲಿಸುವಾಗ ಆಲೋಚಿಸಬೇಕಿದೆ. ಅದಕ್ಕಾಗಿ ನಿಮ್ಮದೇ ನಿವೇಶನದಲ್ಲೂ ಮನೆಯ ನಿರ್ಮಿತಿಯಲ್ಲಿ ಅಕ್ಕ-ಪಕ್ಕದವರ ಅನುಮತಿ ಬೇಕು ಎಂದು ಕಾನೂನು ಹೇಳುತ್ತದೆ. ಅದು ಒಂದು ಬಗೆಯ ಜಾಗರೂಕತೆಯ ಅನಿವಾರ್ಯತೆಯನ್ನು ಒಪ್ಪಿಸಿಕೊಳ್ಳುವ ತಯಾರಿ. ಹಾಗಾಗಿ ನಮ್ಮೊಳಗೆ ಉದ್ಭವಿಸುವ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರಗಳಿಗೆ ಬೇಕಾದ ಅಧ್ಯಯನವನ್ನು, ತಯಾರಿಯನ್ನು ಮಾಡಿಕೊಂಡು ಮುನ್ನೋಡುವ ಹೊಣೆ ನಮ್ಮದಾಗಿದೆ.
1. ಕೊಡಗು ಮತ್ತು ಕೇರಳದಲ್ಲಿ ಆದ ಅತಿವೃಷ್ಟಿ ಮತ್ತು ಆನಂತರದ ದುರಂತದ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಇಲ್ಲಿ ನಡೆದ ದುರಂತವು ಸ್ಥಳೀಯ ಜನ ಅಲ್ಲಿನ ವಾತಾವರಣವನ್ನು ಬೇಕಾಬಿಟ್ಟಿಯಾಗಿ ಬಳಸಿದ ಕಾರಣಕ್ಕಾಗಿ ಅಲ್ಲಿನ ನೆಲ ಶಕ್ತಿಹೀನವಾಗಿ ಕೊಚ್ಚಿಹೋಗಿ ಅನಾಹುತ ಸಂಭವಿಸಿದೆ ಎಂಬುದು ಮೊದಲ ವಾದ. ಓ ವಾದದ ಕುರಿತು ನಿಮ್ಮ ನಿಲುವೇನು?
2. ಕೊಡಗು ಮತ್ತು ಕೇರಳಗಳಲ್ಲಿ ಆದ ಅನಾಹುತಗಳಿಗೆ ಕಾರಣ ಪ್ರಕೃತಿ. ಅತಿಯಾದ ಮಳೆಯೇ ಅಲ್ಲಿನ ಭೂಕುಸಿತ ಮತ್ತು ಮಣ್ಣಿನ ಸವಕಳಿಗೆ ಕಾರಣ ಎಂಬ ಇನ್ನೊಂದು ವಾದವಿದೆ. ಇದನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?
3. ನೆಲದ ಮೇಲ್ಮೈಯನ್ನು ಅಸಹಜವಾಗಿ ನಿರ್ವಹಿಸುತ್ತಿರುವ ಬಗ್ಗೆ ನಿಲುವುಗಳೇನು?
4. ಮೇಲ್ಮಣ್ಣು ಸಡಿಲಗೊಂಡದ್ದೂ ಅಲ್ಲದೇ ಹರಿವ ನೀರನ್ನು ಅದರ ಪಾಡಿಗೆ ಹರಿಯಗೊಡದೆ, ಹರಿವ ಪಾತ್ರದಲ್ಲಿ ನಾವು ಹಾಳುಗೆಡಹಿದ ಮಾನವನ ಒತ್ತುವರಿಗಳ ಬಗ್ಗೆ ಏನು ಹೇಳುತ್ತೀರಿ?
5. ಅತೀವೃಷ್ಠಿ – ಅನಾವೃಷ್ಠಿ ಮಳೆ ಎರಡರಲ್ಲೂ ಮಾನವನ ಕೊಡುಗೆ ಇದೆ ಎಂಬ ತಿಳಿವಳಿಕೆಯನ್ನು ಹೇಗೆ ಸಾಧ್ಯಮಾಡುವುದು? ಅಥವಾ ಅದರ ನಿರಾಕರಣೆಯ ಆಸೆಯ ಬೆಂಬಲಕ್ಕೆ ಏನು ಹೇಳುತ್ತೀರಿ?
6. ಕೇವಲ ಪ್ರವಾಸೋದ್ಯಮದ ಹಿತಕ್ಕಾಗಿ ಬಲಿಯಾದ ಸ್ಥಳಿಯತೆಯ ಕುರಿತ ನಮ್ಮ ತಿಳಿವಳಿಕೆ ಇದೆಯೇ?
7. ಈ ಬಗೆಯ ಅನಾಹುತಗಳನ್ನು ತಡೆಗಟ್ಟಬಹುದಾದ ಕ್ರಮಗಳೇನು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...