Homeಕರ್ನಾಟಕನಿಮ್ಮ ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ: ಟಿವಿ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ನಿಮ್ಮ ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ: ಟಿವಿ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ

- Advertisement -
- Advertisement -

ನಾನು ನಿರ್ಮಾಪಕನಾಗಿದ್ದೆ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ನಮ್ಮ ತಂದೆಯವರು ನನಗೆ ವಿರೋಧ ವ್ಯಕ್ತಪಡಿಸಿದ್ದರು. ಅವರು ರೇವಣ್ಣನವರಿಗೆ ಮಾತ್ರ ಆಶರ್ವಾದ ಮಾಡಿದ್ದರು. ನನಗೆ ರಾಜಕಾರಣ ಬೇಡವೆಂದಿದ್ದರು. ಆಗ ನಾನು ಅವರ ಮಾತು ಕೇಳಬೇಕಿತ್ತು, ಕೇಳಿಲ್ಲ. ಆಗ ದೇವೆಗೌಡರು ಮುಖ್ಯಮಂತ್ರಿ ಆಗಿದ್ದರು. ಕಾಂಗ್ರೆಸ್ ನ ಚಂದ್ರಶೇಖರ್ ವಿರುದ್ಧ ನಾನು ಚುನಾವಣೆಗೆ ನಿಂತಿದ್ದು.. ಅಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಸಬೇಕಿತ್ತು.. ಆಗ ರಾಜಕಾರಣ ಪ್ರವೇಶಿಸಿದೆ.

ಒಂದು ಕಡೆ ದೇವೇಗೌಡರು ಮತ್ತು ಇನ್ನೊಂದು ಕಡೆ ಶಾಸಕರ ವಿಶ್ವಾಸ ನನ್ನ ಜೊತೆಗಿತ್ತು. ಆದರೆ 1999ರಲ್ಲಿ ರೇವಣ್ಣನವರು, ದೇವೇಗೌಡರು, ನಾನು ಸೋತಿದ್ದೇವು. ಅವತ್ತೇ ರಾಜಕಾರಣಕ್ಕೆ ಎಳ್ಳುನೀರು ಬಿಡಬೇಕಿತ್ತು. ಆದರೆ ಜನ.. ನನ್ನನ್ನು ನೋಡಲು ಬಂದಿದ್ದರು..  ಅವರು ನಮ್ಮ ಕೈಬಿಡಬೇಡಿ ಅಂದರು. ಹಾಗಾಗಿ ಮುಂದುವರೆದೆ. ಹಾಗಾಗಿ ಜನಗಳ ಮಧ್ಯಕ್ಕೆ ಹೋದೆ. 2004ರಲ್ಲಿ ಗೆದ್ದ.. ಅವತ್ತಿನ ರಾಜಕಾರಣ ನಿಮಗೆಲ್ಲ ಗೊತ್ತೆ ಇದೆ.

ವಿರೋಧ ಪಕ್ಷದ ನಾಯಕರಿಗೆ ಹೇಳುತ್ತೇನೆ. ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ.. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಬರೆಯುತ್ತಿದ್ದಾರೆ. ದೇಶದ ಸಂಸ್ಕೃತಿ ನಾಶ ಮಾಡಲಿಕ್ಕೆ ಈ ಸೋಷಿಯಲ್ ಮೀಡಿಯಾ ಆರಂಭವಾಗಿದೆ..

ನಾನು ತಪ್ಪು ಮಾಡಿದ್ದೇನೆ. ತಪ್ಪು ತಿದ್ದಿಕೊಂಡಿದ್ದೇನೆ.. ನನ್ನ ಜೀವನದಲ್ಲಿ ಆ ಅವಕಾಶವಿದೆ. ಆದರೆ ಬಿಜೆಪಿಯವರು ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲೂ ಟ್ವಿಟ್ಟರ್ ನಲ್ಲಿ Session for Karnataka Trust Vote has begun But CM h.d kumaraswamy is resting at his Taj West end hotel His message is clear He will continue to loot & waste tax payers money to the very last second as CM ಅಂತ ಬರೆದಿದ್ದಾರೆ.

ನಾನು ತಾಜ್ ಹೋಟೆಲ್ ನಲ್ಲಿ ಭಾಷಣ ಪ್ರಿಪೇರ್ ಮಾಡ್ತಾ ಕೂತಿದ್ದೆ. ಹೌದು ಸ್ವಲ್ಪ ಪ್ರಯತ್ನ ಪಟ್ಟೆ.. ಏನಾದರೂ ಕೊನೆ ಹಂತದಲ್ಲಿ ವಿಶ್ವಾಸಮತ ಗೆಲ್ಲಲ್ಲಿಕ್ಕೆ, ಸದನ ಗೆಲ್ಲಿಸುತ್ತೆ ಅಂತ.. ಪ್ರಯತ್ನ ಮಾಡಿದೆ. ನಾನು ಕದ್ದು ಮುಚ್ಚಿ ಮಾತಾಡೋಲ್ಲ.. ಶಾಸಕರು ಕಣ್ಣೀರು ಹಾಕಿದ್ದಾರೆ.. ಅವರಿಗಾಗಿ ಅದಕ್ಕೋಸ್ಕರ ತಡವಾಯ್ತು.. ಈ ರಾಜ್ಯ ಲೂಟಿ ಮಾಡಲಿಕ್ಕಲ್ಲ..

ಆದರೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಬರೆಯುತ್ತೀರಿ. ನನ್ನ ಯೋಗ್ಯತೆಯ ಬಗ್ಗೆ ಮಾತಾಡುತ್ತೀರಿ. ಯೋಗ್ಯತೆಗೆ ತಕ್ಕ ಜವಾಬ್ದಾರಿ ನೀಡುತ್ತೇವೆ.. ಎಚ್ ವಿಶ್ವನಾಥ ರವರು ಸಾರ ಮಹೇಶ್ ಬಗ್ಗೆ ಬಳಸಿರುವ ಪದಬಳಕೆ.. ಬಹಳ ಕೆಟ್ಟ ರೀತಿಯ ಹೇಳಿಕೆ ಕೊಟ್ಟಿದ್ದಾರೆ..

ಇನ್ನು ವಾಟ್ಸಾಪ್ ನಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ. ಅದನ್ನು ನೋಡಿದರೆ ಬಗ್ಗೆ ವಾಂತಿ ಬರುತ್ತೆ.. ಥೂ..

ಇವತ್ತಿನ ಮಾಧ್ಯಮಗಳಿಗೆ ಮನುಷ್ಯತ್ವ, ಮಾನವೀಯತೆ ಇದೆಯೇ.? ಪ್ರಿಂಟ್ ಮಾಧ್ಯಮಗಳು ಇನ್ನು ನಂಬಿಕೆ ಉಳಿಸಿಕೊಂಡಿವೆ. ಆದರೆ ಎಲೆಕ್ಟ್ರಾನಿಕ್ ಮೀಡಿಯಾಗಳು ನಮ್ಮ ದೇಶ ಯಾಕೆ ಹಾಳು ಮಾಡುತ್ತಿದ್ದೀರಿ.. ನಿಮಗೆ ಬ್ಯುಸಿನೆಸ್ ಮಾಡಬೇಕಾರೆ ಬೇರೆ ಉದ್ಯಮ ಮಾಡಿಕೊಳ್ಳಿ. ಇಲ್ಲಿ ಬಂದು ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ. ನಾನು ಜೆ.ಪಿ ನಗರಕ್ಕೆ ಹೋಗುವಾಗ ಕ್ಯಾಮರ ಇಟ್ಟುಕೊಂಡು ಬಂದಿದ್ದರು.. ಪ್ರೈವಸಿ ಎಲ್ಲಿದೆ?

ನಾನು ನಾಡಿನ ಮುಖ್ಯಮಂತ್ರಿ ಯಾಗಿದ್ದಾಗ ಒಂದು ಮಾಧ್ಯಮದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದೇವೆ.. ಕತ್ತಲೆ ಲೋಕದ ಕುಮಾರ .. ಎಂದು ವರದಿ ಮಾಡಿದ್ದರು. ಸ್ವಚ್ಛ ಭಾವನಾತ್ಮಕ ಜೀವನ ನನ್ನದು.. ಅದನ್ನು ನೋಡಿದಾಗ ಇಂತಹ ಸರ್ಟಿಫಿಕೇಟ್ ತಗೊಂಡು ಮುಖ್ಯಮಂತ್ರಿ ಆಗಬೇಕ ಅನ್ನಿಸಿತು. ಅಂದು ರಾತ್ರಿಯೆಲ್ಲ ಮಲಗಿಲ್ಲ .. ಅವತ್ತು ಎಡಗಾಲು ಸ್ವಾಧೀನ ಕಳೆದುಕೊಂಡು ಒಂದೂವರೆ ಗಂಟೆ ನೊಂದಿದ್ದೇನೆ..

ಇಂದು ನಾನು ಅತ್ಯಂತ ಸಂತೋಷವಾಗಿ ಈ ಸ್ಥಾನ ತ್ಯಜಿಸುತ್ತಿದ್ದೇನೆ. ನನಗೆ ಯಾವ ನೋವು ಇಲ್ಲ.  ಮತ್ತೊಮ್ಮೆ ವಚನ ಭ್ರಷ್ಟ.. ಎನ್ನುವ ಮಾಧ್ಯಮಗಳು ಪ್ರಶ್ನೆ ಹಾಕಿಕೊಳ್ಳಿ.

ಬಿಜೆಪಿ ಜೊತೆ 20 ತಿಂಗಳು ಇದ್ದೆ. ಅಧಿಕಾರ ಹಸ್ತಾಂತರವನ್ನು ಮಾಡಬೇಕೆಂದಿದ್ದೆ. ಈಶ್ವರಪ್ಪ ಜಗದೀಶ್ ಶೆಟ್ಟರ್ ಯಡಿಯೂರಪ್ಪರವರ ಒಪ್ಪಂದ ಮಾಡಿಕೊಂಡಿದೆ. ಆಗ ನನ್ನ ಗೆಳೆಯರಾದ ಬಾಲಕೃಷ್ಣ, ಚಲುವರಾಯಸ್ವಾಮಿ ಜೊತೆಗಿದ್ದರು. ಅಗ್ರಿಮೆಂಟ್ ಮಾಡಿಕೊಂಡರು. ದೇವೆಗೌಡರು ಮತ್ತು ಬಿಜೆಪಿ ಹೈಕಮಾಂಡ್ ಗಮನಕ್ಕೆ ಬಂದಿತ್ತು. ಆದರೆ ಆಗಲಿಲ್ಲ ಅಷ್ಟೇ..

ನಾನು ತಾಜ್ ವೆಸ್ಟೆಂಡ್ ನಲ್ಲಿಯೇ ಇರುತ್ತೇನೆ ಅಂತ ಆರೋಪ ಮಾಡುತ್ತೀರಿ. 2018ರ ಚುನಾವಣೆಯ ಫಲಿತಾಂಶದ ದಿನ. ಅಂದು ಅದೇ ಹೋಟೆಲ್ ನಲ್ಲಿ ಕುಳಿತು ಟಿ.ವಿ ನೋಡುತ್ತಿದ್ದೆ. ಅಂದು ರಾಜಕೀಯ ಬಿಡಬೇಕಿತ್ತು.. ಆದರೆ ಆಗ ಗುಲಾಂ ನಬಿ ಆಜಾದ್ ರವರು ದೂರವಾಣಿ ಕರೆ ಮಾಡಿ.. ನಿಮಗೆ ಬೆಂಬಲ ನೀಡುತ್ತೇವೆ, ಸಮ್ಮಿಶ್ರ ಸರ್ಕಾರ ಮಾಡೋಣ ಅಂದರು. ಹಾಗಾಗಿ ಆ ರೂಂ ಬಗ್ಗೆ ಪ್ರೀತಿ ಅಷ್ಟೇ.

ನಾನು ವಚನ ಭ್ರಷ್ಟ ಅಲ್ಲ.. ಒಂಭತ್ತು ದಿನದ ಮುಖ್ಯಮಂತ್ರಿ ಯಡಿಯೂರಪ್ಪನವರು ಅರ್ಥಮಾಡಿಕೊಳ್ಳಬೇಕು. ಈ ನಾಡಿನ ಜನತೆಗೆ ತಿಳಿಸಬೇಕಿದೆ. ದೇವೇಗೌಡರು ಆತ್ಮಚರಿತ್ರೆ ಬರೆಯುತ್ತಿದ್ದಾರೆ. ಸ್ವಲ್ಪ ದಿನದಲ್ಲಿಯೇ ಹೊರಬರುತ್ತೆ. ನಾನು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ.. ಈ ಸರ್ಕಾರ ಇರುತ್ತೊ ಹೋಗುತ್ತೊ .. ಆದರೆ ನನ್ನ ಅಧಿಕಾರಿಗಳಿಗೆ ಹೃದಯತುಂಬಿದ ಧನ್ಯವಾದಗಳು

ಡೇ ಒಂದರಿಂದ ಮಾಧ್ಯಮಗಳು ತೊಂದರೆ ಕೊಟ್ಟಿವೆ. ಸುಭದ್ರ ಸರ್ಕಾರಗಲೇ ಕೆಲಸ ಮಾಡುವುದು ಕಷ್ಟ. ನಮ್ಮ ನಡವಳಿಕೆ ನೋಡಿ, ನಮ್ಮ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು. ಇದು ಕೇವಲ ನನ್ನ ಸಾಧನೆ ಅಲ್ಲ.. ಅವರೆಲ್ಲರ ಪಾಲಿದೆ.

ಸಾಲ ಮನ್ನಾ .. 25 ಸಾವಿರ ಕೋಟಿ ತೆಗೆದಿದ್ದೇವೆ.. ರೈತರಿಗೆ ಮೋಸ ಮಾಡಲಿಕ್ಕೆ ಹೋಗಿಲ್ಲ.. 2018ರಲ್ಲಿ ಸಿದ್ದರಾಮಯ್ಯ ನವರು ಫೇಬ್ರವರಿ ತಿಂಗಳ ಬಜೆಟ್ ಮಂಡನೆ ಮಾಡಿದ್ದರು. ನಂತರ ನಾನು ಅಧಿಕಾರಕ್ಕೆ ಬಂದರೂ ಅವರ ಯಾವುದೇ ಕಾರ್ಯಕ್ರಮ ಕಡಿತ ಮಾಡಿಲ್ಲ.. ಸಿದ್ದರಾಮಯ್ಯನವರು ಘೋಷಿಸಿದ್ದ ಸಾಲಮನ್ನಾದ 2700 ಕೋಟಿ ರೂ ನಾವು ತೀರಿಸಿದೆವು. ರೈತರಿಗೆ ನಮ್ಮಿಂದ ಮೋಸವಾಗಿಲ್ಲ.. ಟ್ರಾಕ್ಟರ್, ಮನೆ ಕಟ್ಟುವಾಗ ಸಾಲ ಮಾಡಿದರೆ ಅದಕ್ಕೂ ಕುಮಾರಸ್ವಾಮಿ ಕಾರಣ ಎಂದು ಈ ಮಾಧ್ಯಮಗಳು ಅರಚುತ್ತವೆ.

ಒಂದೇ ಒಂದು ಹಗರಣ ಇದ್ರೆ ನನ್ನ ಮುಂದೆ ತಂದುಕೊಡಿ. ಬರಿ ಚಪಲಕ್ಕೆ ಹೇಳಬೇಡಿ. ದಾಖಲೆಗಳ ಸಮೇತ ತಂದಿಡಿ. ನಾನು ಸರ್ಕಾರಿ ಕಾರು, ಬಂಗಲೆ, ಟಿ.ಎ ಡಿ.ಎ, ಪೆಟ್ರೋಲ್ ಖರ್ಚು ತಗೊಂಡಿಲ್ಲ.. ಜನರ ತೆರಿಗೆ ಹಣ ಖರ್ಚು ಮಾಡಬೇಕಾದರೆ ನನ್ನ ಆತ್ಮಕ್ಕೆ ಪ್ರಶ್ನೆ ಹಾಕಿಕೊಂಡು ಖರ್ಚು ಮಾಡುತ್ತೇನೆ.

ಪ್ರಧಾನ್ ಮಂತ್ರಿ ಸಮ್ಮಾನ್ ಯೋಜನೆಗೆ 35 ಲಕ್ಷ ರೈತರ ವಿವರಗಳನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದೇವೆ. ಆದರೆ ಹಣ 15 ಲಕ್ಷ ರೈತ ಕುಟುಂಬಗಳಿಗೆ ಮಾತ್ರ. 1500 ಕೋಟಿ ಮಾತ್ರ. ನಾನು ತಪ್ಪು ಮಾಡಿದ್ರೆ ಕಿವಿಹಿಂಡಿ ಬುದ್ದಿ ಹೇಳಿ. ಹಾಗೆಯೇ ಒಳ್ಳೇಯ ಕೆಲಸ ಮಾಡಿದರೆ ಮನಸ್ಸು ಬಿಚ್ಚು ಹೇಳಿ. ಬೋಪಯ್ಯ ಅಪ್ಪಚ್ಚು ರಂಜಾನ್ ಕೇಳಿ. ಕೊಡಗಿನಲ್ಲಿ ಪ್ರಕೃತಿ ವಿಕೋಪ ಬಂದಾಗ ಯಾವ ರೀತಿ ಕೆಲಸ ಮಾಡಿದ್ದೀವಿ ಅಂತ. ಯಾವ ರೀತಿ ಕೆಲಸ ಮಾಡಿದ್ದೀನಿ ..

ಬಸವರಾಜ ಬೊಮ್ಮಾಯಿ ಜ್ಯೋತಿಷಿ ಯಾವಾಗ ಆದ್ರಿ? ಫೆಬ್ರವರಿ ನಲ್ಲೇ ನುಡಿದಿದ್ದರು.. ಈ ಸರ್ಕಾರ ಬೀಳುತ್ತೆ ಅಂತ. ನಾನು ಜ್ಯೋತಿಷಿ ಕೇಳಲ್ಲ.. ನಂಬೋಲ್ಲ. ರೇವಣ್ಣನ ಬಗ್ಗೆ ಮಾತಾಡುತ್ತಾರೆ.  ದಿನಾ ಟಿವಿಯೊಳಗೆ ನಿಂಬೆ ಹಣ್ಣಿನ ಚರ್ಚೆ ಮಾಡುತ್ತಾರೆ. ಆತ ಅಮಾಯಕ. ನನ್ನ ಪ್ರಕಾರ ಮುಗ್ಧ.

ನಾನು ಓಡಿ ಹೋಗೋಲ್ಲ. ವಿಶ್ವಾಸಮತಕ್ಕೆ ಹಾಕುತ್ತೇನೆ. ಗೆಲುವು ಸೋಲು ಎರಡನ್ನು ಸಮಭಾವದಿಂದ ಸ್ವೀಕರಿಸುತ್ತೇನೆ…

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...