Homeಮುಖಪುಟಅನಿಕೇತನದ ಕಿಡಿ ಬಿತ್ತಿದ ವಿಶ್ವಮಾನವ ಸಂದೇಶ

ಅನಿಕೇತನದ ಕಿಡಿ ಬಿತ್ತಿದ ವಿಶ್ವಮಾನವ ಸಂದೇಶ

- Advertisement -
- Advertisement -

ಕುವೆಂಪು ಅವರ ಜನ್ಮದಿನ ಹತ್ತಿರ ಬರುತ್ತಿದೆ. ಕರ್ನಾಟಕ ಸರ್ಕಾರವು 2005ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್ 29ಅನ್ನು ’ವಿಶ್ವ ಮಾನವ’ ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಕುವೆಂಪು ಅವರು ತಮ್ಮ ಬರವಣಿಗೆ ಮತ್ತು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ, ತಾವು ದರ್ಶನ ಪಡೆದ ಹಲವು ತತ್ವಗಳು ವಿಶ್ವಮಾನವ ಸಂದೇಶದ ಮೂಲಕ ಸಾರಿದ್ದರು. ಈ ಸಂದೇಶಗಳು ವರ್ಷಕ್ಕೊಮ್ಮೆ ನೆನಪಿಸಿಕೊಳ್ಳುವ, ವೈದಿಕರ ಮಂತ್ರಗಳಂತೆ ಪಠಿಸಬೇಕಾದವುಗಳಲ್ಲ, ಹೃದಯದಿಂದ ಕೇಳಿಸಿಕೊಳ್ಳಬೇಕಾದ ಮತ್ತು ನಮಗೆ ನಾವೇ ಕನ್ನಡಿ ಹಿಡಿದುಕೊಳ್ಳುವಂತೆ ಮಾಡುವ ದರ್ಶನಗಳು.

ಕುವೆಂಪು ಅವರು ಬರೆದಿರುವ ಎರಡು ಮಹಾಕಾವ್ಯದಂತಹ ಕಾದಂಬರಿಗಳು ಮತ್ತು ವಿಶ್ವಮಾನವ ಸಂದೇಶ ಎರಡನ್ನೂ ಒಟ್ಟಿಗೆ ನೋಡಿದಾಗ, ಅವರು ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಮುನ್ನುಡಿ ರೂಪದಲ್ಲಿ ಬರೆದಿರುವ ಅತ್ಯಂತ ಜನಪ್ರಿಯವಾದ

“ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ”

ಎಂಬ ಸಾಲುಗಳು ಕೇವಲ ತಮ್ಮ ಕಾದಂಬರಿಯ ಕುರಿತು ಹೇಳಿದಲ್ಲ. ಇಡೀ ಸಮಾಜದ ರಚನೆ ಕುರಿತು ಸಹ ಆ ಸಾಲುಗಳು ಆಗಿರಬಹುದು. ಕುವೆಂಪು ಅವರು ತಮ್ಮ ಕಾದಂಬರಿಗಳಲ್ಲಿ, ತಾವು ಪ್ರತಿನಿಧಿಸುವ ಸಮುದಾಯದ ಕುರಿತು ಸಹ ಎಲ್ಲಿಯೂ ಹಿಂಜರಿಕೆ ಇಲ್ಲದೆ ಮಾತನಾಡುವ ಧೈರ್ಯ ತೋರಿಸಿದ್ದಾರೆ. ಒಬ್ಬ ಲೇಖಕನಿಗೆ ಇರಬೇಕಾದ ಮುಖ್ಯ ಗುಣ ಅದು ಎಂಬುದು ನನ್ನ ನಂಬಿಕೆ. ಕುವೆಂಪು ಅವರು ತಮ್ಮ ’ಮಲೆನಾಡಿನ ಚಿತ್ರಗಳು’ ಪುಸ್ತಕದಲ್ಲಿ ಹೇಳಿಕೊಂಡಿರುವ ಲಘು ಹಾಸ್ಯದ ಬೆರೆತ ಹಲವು ಅನುಭವಗಳಲ್ಲಿ, ತಾವು ಬಾಲಕರಾಗಿದ್ದಾಗಲೇ ಶಿಕ್ಷಣದ ಪದ್ಧತಿಗಳು, ತಮ್ಮ ಸುತ್ತಲಿನ ದಿನ ನಿತ್ಯದ ಚಟುವಟಿಕೆಗಳ ಅಸಮಾನತೆಯ ಗೆರೆ ಗುರುತಿಸುವ ಸೂಕ್ಷ್ಮವಾದ ಪ್ರವೃತ್ತಿ ಬೆಳೆಸಿಕೊಂಡಿದ್ದು ತಿಳಿಯುತ್ತದೆ. ಅವರು ಮುಂದೆ ವಿಶ್ವಮಾನವ ಸಂದೇಶದ ಮೂಲಕ ಹೇಳಲು ಹೊರಟಿರುವುದು ಸಹ ಅದೇ ಆಗಿದೆ.

“ಯಾವ ಒಂದು ಗ್ರಂಥವೂ ’ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ’ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು” ಎಂಬ ಕುವೆಂಪು ಅವರ ಈ ಸಂದೇಶವನ್ನು ನವಯುವಕರ ಕಿವಿಗೆ ಎಲ್ಲಾ ಕಾಲಕ್ಕಿಂತಲೂ ಹೆಚ್ಚಾಗಿ ಈ ದಿನದಲ್ಲಿ ಮುಟ್ಟಿಸಬೇಕಾದ ಜರೂರತ್ತು ಇದೆ. ಮನುಷ್ಯನ ಮೂಲಭೂತ ಅವಶ್ಯಕತೆಗಳು ಈಡೇರಿಕೆಗೆ ಕಾಯಕ ಮುಖ್ಯವೇ ಹೊರತು, ಹೊಟ್ಟೆ ತುಂಬಿದವರು ಹೇಳುವ ಪ್ರವಚನಗಳಲ್ಲ ಎಂಬ ವಾಸ್ತವವನ್ನು ಜಾತಿಗಳ ಅಮಲು ತಲೆಗೇರಿಸಿಕೊಂಡವರಿಗೆ ತೋರಿಸಬೇಕಿದೆ.

ಇದನ್ನೂ ಓದಿ:ಪೌರೋಹಿತ್ಯ ಧಿಕ್ಕರಿಸಿದ ವಿವಾಹದ ಪರಿಕಲ್ಪನೆ ’ಮಂತ್ರ ಮಾಂಗಲ್ಯ’

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕುವೆಂಪು ಅವರು ಪ್ರಕೃತಿಯ ಬಗ್ಗೆ ಎಷ್ಟು ವರ್ಣಿಸಿದ್ದಾರೊ ಇನ್ನೂ ಹೆಚ್ಚು ಜೀವಂತವಾಗಿ ನಾಯಿಗುತ್ತಿಯನ್ನು ಪರಿಚಯಿಸುತ್ತಾರೆ. ಕಗ್ಗತ್ತಲಿನ ಕಾಡುಗಳ ರಾತ್ರಿಯ ಎದೆಯಲ್ಲಿ ನಡುಗದೆ, ಪ್ರೀತಿಯ ಬೀಜಗಳನ್ನು ಎದೆಯೊಳಗಿಟ್ಟುಕೊಂಡ ಗುತ್ತಿಯ ಬಿಗಿ ಉಸಿರಿನಲ್ಲಿ ಸಹ ಕುವೆಂಪು ಅವರ ವಿಶ್ವಮಾನವ ಸಂದೇಶ ಇದೆ.

ಕಾನೂರು ಹೆಗ್ಗಡತಿಯ ಹೂವಯ್ಯನ ಹೊಸ ವಿಚಾರಗಳಲ್ಲಿನ ಕ್ರಾಂತಿಯ ಕಿಡಿಯೊಳಗೆ ಬುದ್ಧನ ಶಾಂತಸಾಗರದ ನಗು ಮತ್ತು ಕುವೆಂಪು ಅವರು ಹೇಳುವ “ಪ್ರತಿಯೊಂದು ಮಗುವೂ ಹುಟ್ಟುತ್ತಲೆ – ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ’ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ’ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು” ಎನ್ನುವ ಮಾತು ಅಡಗಿದೆ. ಹೂವಯ್ಯನ ಮೂಲಕ ಕಟ್ಟಿಕೊಟ್ಟ ದರ್ಶನ ನನಗೆ ಹೆಚ್ಚು ಆಪ್ತವಾಗುತ್ತದೆ.

ಕುವೆಂಪು ಅವರ ನಾಟಕ, ಕಥೆ, ಕಾದಂಬರಿ ಮತ್ತು ಅವರ ಒಟ್ಟು ಬರವಣಿಗೆಯ ಪಯಣವೇ ವಿಶ್ವಮಾನವದೆಡೆಗಿನ ಪ್ರಯಾಣವಾಗಿತ್ತು. ಅವರು ಬರೆದಿರುವ ಬರಹಗಳಲ್ಲಿ ಒಂದು ರೀತಿಯ ಪ್ರಕೃತಿಯ ದಿವ್ಯಸ್ಪರ್ಶ ಇದೆ, ಮೂಢನಂಬಿಕೆಗಳು ಮತ್ತು ವೈದಿಕರ ಕೆಡುಕಿನ ಜಾಣತನದ ವಿರುದ್ಧ ಗಟ್ಟಿಯಾದ ಸಿಟ್ಟಿದ್ದು ಅದರ ಬಿಸಿ ತಾಗುತ್ತದೆ.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಅವರ ಆತ್ಮಕಥೆ ’ನೆನಪಿನ ದೋಣಿಯಲ್ಲಿ ನಿವೇದಿಸಿಕೊಂಡಿರುವಂತೆ, ಯುವಕರಾಗಿದ್ದಾಗ ಕುವೆಂಪು ಅವರು ಒಂದು ಸಲ “ಲೈಬ್ರರಿಯಲ್ಲಿ ಸಾಲಾಗಿ ಜೋಡಿಸಿಟ್ಟ ಪುಸ್ತಕಗಳ ಹೆಸರು ನೋಡಿ”, ಓದುತ್ತಾ ಬೆರಗಾಗಿ ನಿಲ್ಲುತ್ತಾರೆ. ಅವರಿಗೆ ಇದ್ದ ಜ್ಞಾನದಾಹ ಇದರಿಂದ ತಿಳಿಯುತ್ತದೆ. ನಮ್ಮನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಶೋಷಿಸುವ ಹಲವು ಸಂಗತಿಗಳಿಗೆ ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಶಕ್ತಿ ಓದಿನಿಂದ ಮಾತ್ರ ಬರುವಂತಹುದು.

’ವಿಚಾರ ಕ್ರಾಂತಿಗೆ ಆಹ್ವಾನ’ ಪುಸ್ತಕದಲ್ಲಿ ಕುವೆಂಪು ಅವರು ತಮ್ಮ ಬದುಕಿನ ವಿಚಾರಗಳಲ್ಲಿದ್ದ ’ಎಷ್ಟೊಂದು ಮಡಿವಂತಿಕೆಗಳಿಗೆ ಛಿದ್ರ ಮಾಡಿದ್ದಾರೆ’ ಎಂಬುದು ತಿಳಿಯುತ್ತದೆ. ಬರವಣಿಗೆಯಂತೆ ಬದುಕಿದ ಕುವೆಂಪು ಅವರು ವಿಶ್ವಮಾನವರಾಗಿದ್ದು ಹೀಗೆ.

“ಜಾತಿ-ಮತ ಇವೆಲ್ಲಾ ಇರಬೇಕು ಅನ್ನುವವರು, ಅವನು ಎಂಥಾ ಸಾಹಿತಿಯೇ ಆಗಿರಲಿ ಅವನಿಗೆ ಧಿಕ್ಕಾರ”- ಕುವೆಂಪು.

ಈ ಮೇಲಿನ ಮಾತುಗಳನ್ನು ಗಮನಿಸಿದಾಗ, ನಿರಂತರವಾಗಿ ಯಾವುದೋ ಒಂದು ಧರ್ಮ ಶ್ರೇಷ್ಠವೆಂದು ಸಾರುವ ಲೇಖಕರ ಹಿಂದೆ ಯುವಪಡೆ ಓಡುತ್ತಿರುವ ಸನ್ನಿವೇಶದಲ್ಲಿ, ಪ್ರಶ್ನಿಸುವ ಮನಸ್ಸು ಕಳೆದುಕೊಂಡಿರುವ ವಿದ್ಯಾವಂತರ ಕುರಿತು, ಭವಿಷ್ಯದ ನಮ್ಮ ನಾಡಿನ ಬಗ್ಗೆ ಆತಂಕ ಹುಟ್ಟುತ್ತದೆ. ಕುವೆಂಪು ಅವರ ಜನ್ಮದಿನದ ಹೊತ್ತಿನಲ್ಲಿ ಆದರೂ ನಾವೆಲ್ಲ ಗಟ್ಟಿಯಾಗಿ ನಿಂತು ’ಜೀವಪರ’ ವಿಚಾರಗಳನ್ನು ಬೆಂಬಲಿಸುತ್ತ, ಇನ್ನೊಬ್ಬರ ತಲೆಯಲ್ಲಿ ಸೆಗಣಿ ತುಂಬಲು ಪ್ರಯತ್ನಿಸುತ್ತಿರುವವರ ಕೈಕೆಳಗಿನಿಂದ ಪಾರಾಗಿ ಹೊರಬರುವ ಪ್ರತಿಜ್ಞೆ ಮಾಡಿ ಅದನ್ನು ಆಚರಿಸಬೇಕಿದೆ.

ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಕುವೆಂಪು ಅವರ ವಿಶ್ವಮಾನವ ಗೀತೆಯಂತೆ ನಾವೆಲ್ಲ ನಮ್ಮ ನಮ್ಮ ಮತಗಳ ಹೊಟ್ಟ ತೂರಿ, ನಿಜವಾದ ಬೇರು ಬಿಟ್ಟು ಚಿಗುರೊಡೆಯಬಲ್ಲ ಕಾಳುಗಳನ್ನು ಹುಡುಕಬೇಕಿದೆ.

ಕಪಿಲ ಪಿ ಹುಮನಾಬಾದೆ

ಯುವ ಬರಹಗಾರ ಕಪಿಲ ಪಿ ಹುಮನಾಬಾದೆ ಅವರು ಮೂಲತಃ ಬೀದರ್‌ನವರು. ಸದ್ಯ ಕಾವ್ಯಮನೆ ಪ್ರಕಾಶನ ಬಳ್ಳಾರಿ, ಮುಖ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಾದಂಬರಿ ಹಾಣಾದಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಈಗ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿ.


ಇದನ್ನೂ ಓದಿ: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ‘ಬಹುಭಾಷೆಗಳಲ್ಲಿ ದ್ವಿಭಾಷೆ’: ಕುವೆಂಪು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...