Homeಮುಖಪುಟವಿಚಾರ ಕ್ರಾಂತಿಗೆ ಆಹ್ವಾನ ಮತ್ತು ಹೊಸ ಬೆಳಕು

ವಿಚಾರ ಕ್ರಾಂತಿಗೆ ಆಹ್ವಾನ ಮತ್ತು ಹೊಸ ಬೆಳಕು

’ನಾನಿಂದು ನಿಮ್ಮ ಹೆಗಲಿನ ಹೊರೆಯನ್ನು ಇಳಿಸಲು ಬಂದಿಲ್ಲ; ಇನ್ನಷ್ಟು ಹೊರೆಗಳನ್ನು ಹೊರಿಸಲು ಬಂದಿದ್ದೇನೆ..’. ಆದರೆ, ನಾಡಿನ ಯುವಜನತೆ ಆ ಹೊರೆಯನ್ನು ಹೊತ್ತುಕೊಂಡಂತೆ ತೋರುತ್ತಿಲ್ಲ. ಕುವೆಂಪು ಅವರು ದೇಶದ ಬಗೆಗೆ ಅವತ್ತು ಆಲೋಚಿಸಿದ್ದು ಮತ್ತು ಬದಲಾವಣೆ ಬಯಸಿದ್ದು ಆಗುಗೊಂಡಿದೆಯೇ ಎಂದು ಕೇಳಿಕೊಂಡರೆ ನಿರಾಶೆಯ ಕಾರ್ಮೋಡ ಕವಿಯುತ್ತದೆ. ಅವತ್ತಿನ ಆತಂಕಗಳೆಲ್ಲ ಮತ್ತಷ್ಟು ಮೈಕೈ ತುಂಬಿಕೊಂಡು ಹುಯಿಲಿಡುತ್ತಿವೆ. ಅವರು ಬಯಸಿದಂತೆ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಇವುಗಳೆಲ್ಲ ಮಂತ್ರಗಳಾಗಿದ್ದರೆ ಭಾರತವೆಂಬ ’ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನೆಮ್ಮದಿಯ ಹೂ ಅರಳಿ ಘಮಾಡಿಸುತ್ತಿದ್ದವು.

- Advertisement -
- Advertisement -

ಕುವೆಂಪು ಅವರು 8-12-1974ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿ ಯುವಜನರನ್ನು ಉದ್ದೇಶಿಸಿ ಮಾತನಾಡಿ ’ವಿಚಾರ ಕ್ರಾಂತಿಗೆ ಆಹ್ವಾನ’ ಕೊಟ್ಟಿದ್ದರು. ಈ ಭಾಷಣದಲ್ಲಿ ಕುವೆಂಪು ಅವರು ವ್ಯಕ್ತಪಡಿಸಿದ ಕಾಳಜಿಗಳು, ಆತಂಕಗಳು ಮತ್ತು ಯುವಜನತೆ ಪಯಣಿಸಬೇಕಾದ ಹಾದಿಯಲಿ ಹಚ್ಚಿಟ್ಟ ಹಣತೆಯಂಥ ಮಾತುಗಳು ವರ್ತಮಾನದ ಹೊಸಿಲಿನಲ್ಲಿ ನಿಂತು ಹೇಳಿದಂತಿದೆ. ಈ ಭಾಷಣ ಐದು ದಶಕ ಪೂರೈಸಿದೆ. ಆ ಹೊತ್ತು ಭಾರತ ಎದುರಿಸುತ್ತಿದ್ದ ಜ್ವಲಂತ ಸಮಸ್ಯೆಗಳು ಭಿನ್ನ ರೂಪ ತಾಳಿ ಈ ಹೊತ್ತಿನವರೆಗೂ ಚಾಚಿಕೊಂಡಿವೆ.

ಕುವೆಂಪು ಹೇಳಿದ್ದರು

’ನಾನಿಂದು ನಿಮ್ಮ ಹೆಗಲಿನ ಹೊರೆಯನ್ನು ಇಳಿಸಲು ಬಂದಿಲ್ಲ; ಇನ್ನಷ್ಟು ಹೊರೆಗಳನ್ನು ಹೊರಿಸಲು ಬಂದಿದ್ದೇನೆ..’. ಆದರೆ, ನಾಡಿನ ಯುವಜನತೆ ಆ ಹೊರೆಯನ್ನು ಹೊತ್ತುಕೊಂಡಂತೆ ತೋರುತ್ತಿಲ್ಲ. ಕುವೆಂಪು ಅವರು ದೇಶದ ಬಗೆಗೆ ಅವತ್ತು ಆಲೋಚಿಸಿದ್ದು ಮತ್ತು ಬದಲಾವಣೆ ಬಯಸಿದ್ದು ಆಗುಗೊಂಡಿದೆಯೇ ಎಂದು ಕೇಳಿಕೊಂಡರೆ ನಿರಾಶೆಯ ಕಾರ್ಮೋಡ ಕವಿಯುತ್ತದೆ. ಅವತ್ತಿನ ಆತಂಕಗಳೆಲ್ಲ ಮತ್ತಷ್ಟು ಮೈಕೈ ತುಂಬಿಕೊಂಡು ಹುಯಿಲಿಡುತ್ತಿವೆ. ಅವರು ಬಯಸಿದಂತೆ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಇವುಗಳೆಲ್ಲ ಮಂತ್ರಗಳಾಗಿದ್ದರೆ ಭಾರತವೆಂಬ ’ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನೆಮ್ಮದಿಯ ಹೂ ಅರಳಿ ಘಮಾಡಿಸುತ್ತಿದ್ದವು. ಆದರೆ, ವಾಸ್ತವ ವ್ಯತಿರಿಕ್ತವಾಗಿದ್ದು, ಬಹಳಷ್ಟು ಕರಾಳವಾಗಿ ಹರಡಿಕೊಂಡಿದೆ.

ಇದನ್ನೂ ಓದಿ:ಪೌರೋಹಿತ್ಯ ಧಿಕ್ಕರಿಸಿದ ವಿವಾಹದ ಪರಿಕಲ್ಪನೆ ’ಮಂತ್ರ ಮಾಂಗಲ್ಯ’

ರೈತರ ಕುರಿತಾಗಿರುವ ಪ್ರಭುತ್ವದ ನಡೆಯನ್ನು ವಿರೋಧಿಸುತ್ತ ಯುವಜನತೆಯ ಕಣ್ಣು ತೆರೆಸುವ ಮಾತಾಡಿದ್ದರು. ’ಹಳ್ಳಿಗಳನ್ನೂ ರೈತವರ್ಗವನ್ನೂ ಮರೆತುಬಿಟ್ಟೆವು. ಅಥವಾ ಮರತೇಬಿಟ್ಟೆವು ಎಂಬ ದೂರಿನಿಂದ ಪಾರಾಗುವುದಕ್ಕಾಗಿಯೂ ಮತ್ತು ಅವರು ಸಂಪೂರ್ಣವಾಗಿ ನಿರ್ಜೀವವಾದರೆ ನಮಗಾಗಿ ದುಡಿಯುವವರು ಯಾರೂ ಇಲ್ಲದಂತೆ ಆಗಬಾರದು ಎಂಬುದಕ್ಕಾಗಿಯೂ ಜೀವವಾಡುವಷ್ಟರಮಟ್ಟಿಗೆ ಅವರ ಭಿಕ್ಷಾಪಾತ್ರೆಗೂ ಕಾಸು ಎಸೆದದ್ದುಂಟು..’. ಕೃಷಿ ಮಸೂದೆ ವಿರೋಧಿಸಿ ಈಗ ರೈತರು ನಡೆಸುತ್ತಿರುವ ಹೋರಾಟ ಮತ್ತು ರೈತರೊಂದಿಗೆ ಸರಕಾರಗಳು ವರ್ತಿಸುತ್ತಿರುವ ಅಮಾನವೀಯ ರೀತಿ ನಮ್ಮೆದುರಿಗಿದೆ. ಅವರ ಪ್ರತಿಭಟನೆಯನ್ನು ತಡೆಯಲು ಹೂಡುತ್ತಿರುವ ತಂತ್ರಗಳಂತೂ ತಲೆತಗ್ಗಿಸುವಂತಿವೆ.

ನೂರ್‌ ಶ್ರೀಧರ್‌

ಒಂದು ದಿನವೂ ಹೊಲದೊಳಗಿನ ಬಿಸಿಲಿಗೆ ಮೈಯೊಡ್ಡದ, ಬೆವರು ಎಂದರೇನೆಂದು ತಿಳಿಯದ ಜನ ರೈತರಿಗೆ ಅನುಕೂಲ ಕಲ್ಪಿಸುತ್ತೇವೆಂದು ಹೇಳುತ್ತಿರುವುದು ಹೂಡಿದ ನಾಟಕವಲ್ಲದೆ ಮತ್ತೇನೂ ಅಲ್ಲ. ಈಗ ತರಲು ಹೊರಟಿರುವ ಕೃಷಿ ಮಸೂದೆಗಳ ಅಪಾಯ ರೈತರಿಗೆ ಸರಿಯಾಗಿ ತಿಳಿದಿದೆ. ರೈತರ ಹಿತವೇ ಸರಕಾರದ್ದಾಗಿದ್ದರೆ ಅವರ ಬೇಡಿಕೆ ಈಡೇರಿಸಲು ಮುಂದಾಗುವುದನ್ನು ಬಿಟ್ಟು ಹೀಗೆ ಹಠ ತೊಟ್ಟು ರೈತರಿಗೆ ತೊಂದರೆ ಕೊಡುವ ಪ್ರಮೇಯವೇ ಬರುತ್ತಿರಲಿಲ್ಲ. ಸರಕಾರ ರೈತರ ವಿರೋಧವನ್ನೂ ಲೆಕ್ಕಿಸದೆ ಕೃಷಿ ಮಾರುಕಟ್ಟೆ ಕಾಯ್ದೆಗಳಿಂದ ರೈತರಿಗಾಗುವ ಲಾಭಗಳನ್ನು ಮನದಟ್ಟು ಮಾಡಲು ಅಮಿತ ಉತ್ಸಾಹ ತೋರುತ್ತಿದೆ. ಉತ್ತರ ಪ್ರದೇಶದ 2,500 ಸ್ಥಳಗಳಲ್ಲಿ ಕಿಸಾನ್ ಸಂವಾದ ಆಯೋಜಿಸಲು ಸಿದ್ಧತೆ ನಡೆಸಿದೆ. ರೈತರ ಪ್ರತಿಭಟನೆಯ ಬಗ್ಗೆ ಯಾವುದೇ ಚರ್ಚೆ ನಡೆಯದಂತೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಪಡಿಸಲಾಗಿದೆ. ಒಳ್ಳೆಯ ಉದ್ದೇಶದ ಹಿಂದೆ ಇಷ್ಟೆಲ್ಲ ಕಸರತ್ತು ಮಾಡುವ ಅಗತ್ಯವಿರುವುದಿಲ್ಲ.

ಹಾಗೆ ನೋಡಿದರೆ ರೈತರಿಗೆ ನಿಗದಿತ ಆದಾಯವೇ ಇಲ್ಲ. ಒಕ್ಕಲುತನ ರೈತರಲ್ಲಿ ಈಗ ಯಾವ ಭರವಸೆಗಳನ್ನೂ ಉಳಿಸಿಲ್ಲ. ನಾಳೆಯ ಕನಸುಗಳು ಕಣ್ಣೆದುರೆ ಒಂದೊಂದಾಗಿ ಕರಗಿ ಹೋಗುತ್ತಿರುವಾಗ ತಮ್ಮ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ ಉಮೇದಂತೂ ಅವರೊಳಗೆ ಕಿಂಚಿತ್ತೂ ಉಳಿದಿಲ್ಲ. ಇದುವರೆಗೂ ಅಧಿಕಾರದ ಚುಕ್ಕಾಣಿ ಹಿಡಿದ ಮತ್ತು ಈಗ ಆಡಳಿತ ನಡೆಸುತ್ತಿರುವ ಯಾವ ಸರಕಾರವೂ ಕೃಷಿ ಬಿಕ್ಕಟ್ಟುಗಳನ್ನು ಶಾಶ್ವತವಾಗಿ ಬಗೆಹರಿಸಲು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಸರಕಾರದ ಇಬ್ಬಂದಿತನದ ನೀತಿಗಳು ಯಾವತ್ತೂ ರೈತರ ಪರವಾಗಿಲ್ಲ. ಗೊಬ್ಬರ ತಯಾರಿಕೆಗೆಂದು ಸರಕಾರ ಸಬ್ಸಿಡಿ ಕೊಡುತ್ತದೆ. ಇದರಿಂದ ಗೊಬ್ಬರ ತಯಾರಿಸುವ ಕಂಪನಿಗಳ ಮಾಲೀಕರ ಜೇಬು ಭರ್ತಿಯಾಗುತ್ತದೆ ವಿನಃ ರೈತರಿಗೆ ಫಾಯಿದೆ ಇಲ್ಲ.

ರೈತಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ, ಕೀಟನಾಶಕ, ಕೃಷಿ ಸಲಕರಣೆಗಳು ಸಬ್ಸಿಡಿಯಲ್ಲಿ ಸಿಗುತ್ತವೆಯಾದರೂ ಅದು ತೋರಿಕೆಗೆಂಬಂತೆ ಕಡಿಮೆ ಪ್ರಮಾಣದಲ್ಲಿರುತ್ತದೆ. ಆದರೆ, ಆಯಾ ಉತ್ಪನ್ನ ತಯಾರಿಸುವ ಕಂಪನಿಗಳಿಗೆ ತೋರುವ ಉದಾರತೆಯನ್ನು ರೈತರಿಗೆ ತೋರಿಲ್ಲ. ಈವರೆಗೂ ಸಮರ್ಪಕ ಕೃಷಿ ನೀತಿ ಜಾರಿ ಮಾಡಲು ಆಗಿಲ್ಲ. ಪ್ರಕೃತಿ ವಿಕೋಪ, ನೆರೆ ಹಾವಳಿಯ ಜೂಜಾಟದ ನಡುವೆಯೂ ಯಾವುದಕ್ಕೂ ಬಗ್ಗದೆ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಸೌಜನ್ಯ ತೋರುತ್ತಿಲ್ಲ. ಇದಾವುದೂ ಅಧಿಕಾರಶಾಹಿಯ ಕುರುಡು ಕಣ್ಣಿಗೆ ಗೋಚರಿಸುತ್ತಿಲ್ಲ. ರೈತರ ಬಗೆಗಿನ ಅವಜ್ಞೆಯ ಕುರಿತು ಕುವೆಂಪು ಅವಾಗಲೇ ಎಚ್ಚರಿಸಿದ್ದರು. ಆದರೆ, ರೈತರು ಅವತ್ತಿಗೂ ಇವತ್ತಿಗೂ ಹರಕೆಯ ಕುರಿಯಾಗುತ್ತಿರುವುದು ದುರಂತ ಸತ್ಯ.

ಇದನ್ನೂ ಓದಿ:ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ

ಮುಂದುವರೆದು ಕುವೆಂಪು ಹೇಳುತ್ತಾರೆ

’ನಮ್ಮ ದೇಶ, ಯಾವತ್ತೂ ಪ್ರಜಾಸತ್ತೆಯ ಗಾಳಿಯನ್ನೂ ಮೂಸಿ ನೋಡದಿದ್ದ ದೇಶ. ರಾಜರನ್ನು ಪ್ರತ್ಯಕ್ಷ ದೇವರೆಂದು ಪೂಜಿಸಿದ ದೇಶ; ಪುರೋಹಿತರನ್ನು ಭೂಸುರರೆಂದು ಆರಾಧಿಸಿದ ದೇಶ! ಮತಮೌಢ್ಯ ಎಂಬ ನಿತ್ಯ ರೋಗವು ಅದರ ನಾಡಿನಾಡಿಗಳಲ್ಲಿ ಮಾತ್ರವಲ್ಲದೆ ಎಲುಬಿನಲ್ಲಿಯೂ ಐದು ಸಾವಿರ ವರ್ಷಗಳಿಂದ ಸರ್ವವ್ಯಾಪಿಯಾಗಿದ್ದು ವರ್ಗವರ್ಣ ಮತ ಜಾತಿ ಪಂಥ ಪಂಗಡ ಎಂಬ ನೂರಾರು ಭೇದಗಳಿಂದ ನರಳುತ್ತಿರುವ ದೇಶ!..’ ಈ ಎಲ್ಲ ಸಂಗತಿಗಳು ಎಂದಿಗಿಂತ ಈಗ ವಿಷಮವಾಗಿ ಹರಡಿ ನಂಜನ್ನು ಕಾರುತ್ತಲಿವೆ. ಈಗ ರಾಜರುಗಳ ಸ್ಥಾನದಲ್ಲಿ ರಾಜಕಾರಣಿಗಳು ಇದ್ದಾರೆ. ಪ್ರಜೆಗಳು ಎಂದಿನಂತೆ ಕುರುಡರಾಗಿ ಅವರ ಆರಾಧನೆಯಲ್ಲಿ ತೊಡಗಿದ್ದಾರೆ. ಅವರೋ ಜನರ ಸುಖಾಗಮನದ ಹೆಸರಿನಲ್ಲಿ ಒಂದು ಜಾತಿಯ ಜನರನ್ನು ಮತ್ತೊಂದು ಜಾತಿಗೆ ಎತ್ತಿಕಟ್ಟುತ್ತಲೇ ದ್ವೇಷದ ಕಿಡಿಯನ್ನು ಎಂದಿಗೂ ಆರದಂತೆ ಕಾಪಿಡುತ್ತಿದ್ದಾರೆ. ಜನರೊಳಗೆ ವಿವೇಚನೆಯ ಪ್ರಜ್ಞೆ, ಅರಿವಿನ ಗಾಳಿ ಬೀಸದಂತೆ ನೋಡಿಕೊಳ್ಳಲಾಗುತ್ತಿದೆ. ಜಾತಿಪದ್ಧತಿಯ ಸಂಪೂರ್ಣ ವಿನಾಶ ಕನಸಿನ ಮಾತಾಗಿಯೇ ಉಳಿದಿದೆ.

ಗುಡಿ ಚರ್ಚು ಮಸಿಜೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟಿ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ,
ಓ, ಬನ್ನಿ, ಸೋದರರೆ, ಬೇಗ ಬನ್ನಿ !

ಕುವೆಂಪು ಅವರು ಕನಸಿದಂತೆ ಈ ಕವಿತೆಯನ್ನು ಯುವಜನತೆ ಮುಂದಣ ಮಾರ್ಗದರ್ಶಕ ಮಂತ್ರದೀಪವಾಗಿಸಿಕೊಳ್ಳಲೇ ಇಲ್ಲ. ಆಳುವವರ ದಾಳವಾಗಿ, ಅವರು ಬೀಸಿದ ಕಡೆ ಬೀಳುವ ಕಲ್ಲಾಗಿ ಸ್ವಂತಿಕೆಯನ್ನೇ ಕಳೆದುಕೊಂಡ ವಿಚಿತ್ರ ಬದುಕನ್ನು ಜೀವಿಸುತ್ತಿದೆ.

ಕುವೆಂಪು ಅವರ ’ವಿಚಾರ ಕ್ರಾಂತಿಗೆ ಆಹ್ವಾನ’ದ ಆಲೋಚನೆಗಳು ಈ ಕಾಲದ ಬಿಕ್ಕಟ್ಟು, ಗಾಯಗಳನ್ನು ಶಮನಗೊಳಿಸುವ ಪರಿಹಾರೋಪಾಯಗಳಂತಿವೆ. ಯುವಸಮೂಹದ ಎದೆಯಲಿ ಕುವೆಂಪು ಅವರ ಈ ವಿಚಾರಗಳು ಬೀಜದಂತೆ ಬೀಳಲಿ. ಆ ಬೀಜ ಮೊಳೆತು ಹೊಸ ಬೆಳಕು ಕಾಣುವಂತಾಗಲಿ.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಟಿ.ಎಸ್.ಗೊರವರ

ಗದಗ ಜಿಲ್ಲೆಯವರಾದ ಟಿ.ಎಸ್. ಗೊರವರ, ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಹೊರತಂದಿದ್ದಾರೆ. ಸದ್ಯ ’ಸಂಗಾತ’ ತೈಮಾಸಿಕ ಸಾಹಿತ್ಯ ಪತ್ರಿಕೆ ಸಂಪಾದಕ.


ಇದನ್ನೂ ಓದಿ: ಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನದ ಮರು ಓದು – ಧನಂಜಯ್ ಎನ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...