Homeಮುಖಪುಟವಿಚಾರ ಕ್ರಾಂತಿಗೆ ಆಹ್ವಾನ ಮತ್ತು ಹೊಸ ಬೆಳಕು

ವಿಚಾರ ಕ್ರಾಂತಿಗೆ ಆಹ್ವಾನ ಮತ್ತು ಹೊಸ ಬೆಳಕು

’ನಾನಿಂದು ನಿಮ್ಮ ಹೆಗಲಿನ ಹೊರೆಯನ್ನು ಇಳಿಸಲು ಬಂದಿಲ್ಲ; ಇನ್ನಷ್ಟು ಹೊರೆಗಳನ್ನು ಹೊರಿಸಲು ಬಂದಿದ್ದೇನೆ..’. ಆದರೆ, ನಾಡಿನ ಯುವಜನತೆ ಆ ಹೊರೆಯನ್ನು ಹೊತ್ತುಕೊಂಡಂತೆ ತೋರುತ್ತಿಲ್ಲ. ಕುವೆಂಪು ಅವರು ದೇಶದ ಬಗೆಗೆ ಅವತ್ತು ಆಲೋಚಿಸಿದ್ದು ಮತ್ತು ಬದಲಾವಣೆ ಬಯಸಿದ್ದು ಆಗುಗೊಂಡಿದೆಯೇ ಎಂದು ಕೇಳಿಕೊಂಡರೆ ನಿರಾಶೆಯ ಕಾರ್ಮೋಡ ಕವಿಯುತ್ತದೆ. ಅವತ್ತಿನ ಆತಂಕಗಳೆಲ್ಲ ಮತ್ತಷ್ಟು ಮೈಕೈ ತುಂಬಿಕೊಂಡು ಹುಯಿಲಿಡುತ್ತಿವೆ. ಅವರು ಬಯಸಿದಂತೆ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಇವುಗಳೆಲ್ಲ ಮಂತ್ರಗಳಾಗಿದ್ದರೆ ಭಾರತವೆಂಬ ’ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನೆಮ್ಮದಿಯ ಹೂ ಅರಳಿ ಘಮಾಡಿಸುತ್ತಿದ್ದವು.

- Advertisement -
- Advertisement -

ಕುವೆಂಪು ಅವರು 8-12-1974ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿ ಯುವಜನರನ್ನು ಉದ್ದೇಶಿಸಿ ಮಾತನಾಡಿ ’ವಿಚಾರ ಕ್ರಾಂತಿಗೆ ಆಹ್ವಾನ’ ಕೊಟ್ಟಿದ್ದರು. ಈ ಭಾಷಣದಲ್ಲಿ ಕುವೆಂಪು ಅವರು ವ್ಯಕ್ತಪಡಿಸಿದ ಕಾಳಜಿಗಳು, ಆತಂಕಗಳು ಮತ್ತು ಯುವಜನತೆ ಪಯಣಿಸಬೇಕಾದ ಹಾದಿಯಲಿ ಹಚ್ಚಿಟ್ಟ ಹಣತೆಯಂಥ ಮಾತುಗಳು ವರ್ತಮಾನದ ಹೊಸಿಲಿನಲ್ಲಿ ನಿಂತು ಹೇಳಿದಂತಿದೆ. ಈ ಭಾಷಣ ಐದು ದಶಕ ಪೂರೈಸಿದೆ. ಆ ಹೊತ್ತು ಭಾರತ ಎದುರಿಸುತ್ತಿದ್ದ ಜ್ವಲಂತ ಸಮಸ್ಯೆಗಳು ಭಿನ್ನ ರೂಪ ತಾಳಿ ಈ ಹೊತ್ತಿನವರೆಗೂ ಚಾಚಿಕೊಂಡಿವೆ.

ಕುವೆಂಪು ಹೇಳಿದ್ದರು

’ನಾನಿಂದು ನಿಮ್ಮ ಹೆಗಲಿನ ಹೊರೆಯನ್ನು ಇಳಿಸಲು ಬಂದಿಲ್ಲ; ಇನ್ನಷ್ಟು ಹೊರೆಗಳನ್ನು ಹೊರಿಸಲು ಬಂದಿದ್ದೇನೆ..’. ಆದರೆ, ನಾಡಿನ ಯುವಜನತೆ ಆ ಹೊರೆಯನ್ನು ಹೊತ್ತುಕೊಂಡಂತೆ ತೋರುತ್ತಿಲ್ಲ. ಕುವೆಂಪು ಅವರು ದೇಶದ ಬಗೆಗೆ ಅವತ್ತು ಆಲೋಚಿಸಿದ್ದು ಮತ್ತು ಬದಲಾವಣೆ ಬಯಸಿದ್ದು ಆಗುಗೊಂಡಿದೆಯೇ ಎಂದು ಕೇಳಿಕೊಂಡರೆ ನಿರಾಶೆಯ ಕಾರ್ಮೋಡ ಕವಿಯುತ್ತದೆ. ಅವತ್ತಿನ ಆತಂಕಗಳೆಲ್ಲ ಮತ್ತಷ್ಟು ಮೈಕೈ ತುಂಬಿಕೊಂಡು ಹುಯಿಲಿಡುತ್ತಿವೆ. ಅವರು ಬಯಸಿದಂತೆ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಇವುಗಳೆಲ್ಲ ಮಂತ್ರಗಳಾಗಿದ್ದರೆ ಭಾರತವೆಂಬ ’ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನೆಮ್ಮದಿಯ ಹೂ ಅರಳಿ ಘಮಾಡಿಸುತ್ತಿದ್ದವು. ಆದರೆ, ವಾಸ್ತವ ವ್ಯತಿರಿಕ್ತವಾಗಿದ್ದು, ಬಹಳಷ್ಟು ಕರಾಳವಾಗಿ ಹರಡಿಕೊಂಡಿದೆ.

ಇದನ್ನೂ ಓದಿ:ಪೌರೋಹಿತ್ಯ ಧಿಕ್ಕರಿಸಿದ ವಿವಾಹದ ಪರಿಕಲ್ಪನೆ ’ಮಂತ್ರ ಮಾಂಗಲ್ಯ’

ರೈತರ ಕುರಿತಾಗಿರುವ ಪ್ರಭುತ್ವದ ನಡೆಯನ್ನು ವಿರೋಧಿಸುತ್ತ ಯುವಜನತೆಯ ಕಣ್ಣು ತೆರೆಸುವ ಮಾತಾಡಿದ್ದರು. ’ಹಳ್ಳಿಗಳನ್ನೂ ರೈತವರ್ಗವನ್ನೂ ಮರೆತುಬಿಟ್ಟೆವು. ಅಥವಾ ಮರತೇಬಿಟ್ಟೆವು ಎಂಬ ದೂರಿನಿಂದ ಪಾರಾಗುವುದಕ್ಕಾಗಿಯೂ ಮತ್ತು ಅವರು ಸಂಪೂರ್ಣವಾಗಿ ನಿರ್ಜೀವವಾದರೆ ನಮಗಾಗಿ ದುಡಿಯುವವರು ಯಾರೂ ಇಲ್ಲದಂತೆ ಆಗಬಾರದು ಎಂಬುದಕ್ಕಾಗಿಯೂ ಜೀವವಾಡುವಷ್ಟರಮಟ್ಟಿಗೆ ಅವರ ಭಿಕ್ಷಾಪಾತ್ರೆಗೂ ಕಾಸು ಎಸೆದದ್ದುಂಟು..’. ಕೃಷಿ ಮಸೂದೆ ವಿರೋಧಿಸಿ ಈಗ ರೈತರು ನಡೆಸುತ್ತಿರುವ ಹೋರಾಟ ಮತ್ತು ರೈತರೊಂದಿಗೆ ಸರಕಾರಗಳು ವರ್ತಿಸುತ್ತಿರುವ ಅಮಾನವೀಯ ರೀತಿ ನಮ್ಮೆದುರಿಗಿದೆ. ಅವರ ಪ್ರತಿಭಟನೆಯನ್ನು ತಡೆಯಲು ಹೂಡುತ್ತಿರುವ ತಂತ್ರಗಳಂತೂ ತಲೆತಗ್ಗಿಸುವಂತಿವೆ.

ನೂರ್‌ ಶ್ರೀಧರ್‌

ಒಂದು ದಿನವೂ ಹೊಲದೊಳಗಿನ ಬಿಸಿಲಿಗೆ ಮೈಯೊಡ್ಡದ, ಬೆವರು ಎಂದರೇನೆಂದು ತಿಳಿಯದ ಜನ ರೈತರಿಗೆ ಅನುಕೂಲ ಕಲ್ಪಿಸುತ್ತೇವೆಂದು ಹೇಳುತ್ತಿರುವುದು ಹೂಡಿದ ನಾಟಕವಲ್ಲದೆ ಮತ್ತೇನೂ ಅಲ್ಲ. ಈಗ ತರಲು ಹೊರಟಿರುವ ಕೃಷಿ ಮಸೂದೆಗಳ ಅಪಾಯ ರೈತರಿಗೆ ಸರಿಯಾಗಿ ತಿಳಿದಿದೆ. ರೈತರ ಹಿತವೇ ಸರಕಾರದ್ದಾಗಿದ್ದರೆ ಅವರ ಬೇಡಿಕೆ ಈಡೇರಿಸಲು ಮುಂದಾಗುವುದನ್ನು ಬಿಟ್ಟು ಹೀಗೆ ಹಠ ತೊಟ್ಟು ರೈತರಿಗೆ ತೊಂದರೆ ಕೊಡುವ ಪ್ರಮೇಯವೇ ಬರುತ್ತಿರಲಿಲ್ಲ. ಸರಕಾರ ರೈತರ ವಿರೋಧವನ್ನೂ ಲೆಕ್ಕಿಸದೆ ಕೃಷಿ ಮಾರುಕಟ್ಟೆ ಕಾಯ್ದೆಗಳಿಂದ ರೈತರಿಗಾಗುವ ಲಾಭಗಳನ್ನು ಮನದಟ್ಟು ಮಾಡಲು ಅಮಿತ ಉತ್ಸಾಹ ತೋರುತ್ತಿದೆ. ಉತ್ತರ ಪ್ರದೇಶದ 2,500 ಸ್ಥಳಗಳಲ್ಲಿ ಕಿಸಾನ್ ಸಂವಾದ ಆಯೋಜಿಸಲು ಸಿದ್ಧತೆ ನಡೆಸಿದೆ. ರೈತರ ಪ್ರತಿಭಟನೆಯ ಬಗ್ಗೆ ಯಾವುದೇ ಚರ್ಚೆ ನಡೆಯದಂತೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಪಡಿಸಲಾಗಿದೆ. ಒಳ್ಳೆಯ ಉದ್ದೇಶದ ಹಿಂದೆ ಇಷ್ಟೆಲ್ಲ ಕಸರತ್ತು ಮಾಡುವ ಅಗತ್ಯವಿರುವುದಿಲ್ಲ.

ಹಾಗೆ ನೋಡಿದರೆ ರೈತರಿಗೆ ನಿಗದಿತ ಆದಾಯವೇ ಇಲ್ಲ. ಒಕ್ಕಲುತನ ರೈತರಲ್ಲಿ ಈಗ ಯಾವ ಭರವಸೆಗಳನ್ನೂ ಉಳಿಸಿಲ್ಲ. ನಾಳೆಯ ಕನಸುಗಳು ಕಣ್ಣೆದುರೆ ಒಂದೊಂದಾಗಿ ಕರಗಿ ಹೋಗುತ್ತಿರುವಾಗ ತಮ್ಮ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ ಉಮೇದಂತೂ ಅವರೊಳಗೆ ಕಿಂಚಿತ್ತೂ ಉಳಿದಿಲ್ಲ. ಇದುವರೆಗೂ ಅಧಿಕಾರದ ಚುಕ್ಕಾಣಿ ಹಿಡಿದ ಮತ್ತು ಈಗ ಆಡಳಿತ ನಡೆಸುತ್ತಿರುವ ಯಾವ ಸರಕಾರವೂ ಕೃಷಿ ಬಿಕ್ಕಟ್ಟುಗಳನ್ನು ಶಾಶ್ವತವಾಗಿ ಬಗೆಹರಿಸಲು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಸರಕಾರದ ಇಬ್ಬಂದಿತನದ ನೀತಿಗಳು ಯಾವತ್ತೂ ರೈತರ ಪರವಾಗಿಲ್ಲ. ಗೊಬ್ಬರ ತಯಾರಿಕೆಗೆಂದು ಸರಕಾರ ಸಬ್ಸಿಡಿ ಕೊಡುತ್ತದೆ. ಇದರಿಂದ ಗೊಬ್ಬರ ತಯಾರಿಸುವ ಕಂಪನಿಗಳ ಮಾಲೀಕರ ಜೇಬು ಭರ್ತಿಯಾಗುತ್ತದೆ ವಿನಃ ರೈತರಿಗೆ ಫಾಯಿದೆ ಇಲ್ಲ.

ರೈತಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ, ಕೀಟನಾಶಕ, ಕೃಷಿ ಸಲಕರಣೆಗಳು ಸಬ್ಸಿಡಿಯಲ್ಲಿ ಸಿಗುತ್ತವೆಯಾದರೂ ಅದು ತೋರಿಕೆಗೆಂಬಂತೆ ಕಡಿಮೆ ಪ್ರಮಾಣದಲ್ಲಿರುತ್ತದೆ. ಆದರೆ, ಆಯಾ ಉತ್ಪನ್ನ ತಯಾರಿಸುವ ಕಂಪನಿಗಳಿಗೆ ತೋರುವ ಉದಾರತೆಯನ್ನು ರೈತರಿಗೆ ತೋರಿಲ್ಲ. ಈವರೆಗೂ ಸಮರ್ಪಕ ಕೃಷಿ ನೀತಿ ಜಾರಿ ಮಾಡಲು ಆಗಿಲ್ಲ. ಪ್ರಕೃತಿ ವಿಕೋಪ, ನೆರೆ ಹಾವಳಿಯ ಜೂಜಾಟದ ನಡುವೆಯೂ ಯಾವುದಕ್ಕೂ ಬಗ್ಗದೆ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಸೌಜನ್ಯ ತೋರುತ್ತಿಲ್ಲ. ಇದಾವುದೂ ಅಧಿಕಾರಶಾಹಿಯ ಕುರುಡು ಕಣ್ಣಿಗೆ ಗೋಚರಿಸುತ್ತಿಲ್ಲ. ರೈತರ ಬಗೆಗಿನ ಅವಜ್ಞೆಯ ಕುರಿತು ಕುವೆಂಪು ಅವಾಗಲೇ ಎಚ್ಚರಿಸಿದ್ದರು. ಆದರೆ, ರೈತರು ಅವತ್ತಿಗೂ ಇವತ್ತಿಗೂ ಹರಕೆಯ ಕುರಿಯಾಗುತ್ತಿರುವುದು ದುರಂತ ಸತ್ಯ.

ಇದನ್ನೂ ಓದಿ:ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ

ಮುಂದುವರೆದು ಕುವೆಂಪು ಹೇಳುತ್ತಾರೆ

’ನಮ್ಮ ದೇಶ, ಯಾವತ್ತೂ ಪ್ರಜಾಸತ್ತೆಯ ಗಾಳಿಯನ್ನೂ ಮೂಸಿ ನೋಡದಿದ್ದ ದೇಶ. ರಾಜರನ್ನು ಪ್ರತ್ಯಕ್ಷ ದೇವರೆಂದು ಪೂಜಿಸಿದ ದೇಶ; ಪುರೋಹಿತರನ್ನು ಭೂಸುರರೆಂದು ಆರಾಧಿಸಿದ ದೇಶ! ಮತಮೌಢ್ಯ ಎಂಬ ನಿತ್ಯ ರೋಗವು ಅದರ ನಾಡಿನಾಡಿಗಳಲ್ಲಿ ಮಾತ್ರವಲ್ಲದೆ ಎಲುಬಿನಲ್ಲಿಯೂ ಐದು ಸಾವಿರ ವರ್ಷಗಳಿಂದ ಸರ್ವವ್ಯಾಪಿಯಾಗಿದ್ದು ವರ್ಗವರ್ಣ ಮತ ಜಾತಿ ಪಂಥ ಪಂಗಡ ಎಂಬ ನೂರಾರು ಭೇದಗಳಿಂದ ನರಳುತ್ತಿರುವ ದೇಶ!..’ ಈ ಎಲ್ಲ ಸಂಗತಿಗಳು ಎಂದಿಗಿಂತ ಈಗ ವಿಷಮವಾಗಿ ಹರಡಿ ನಂಜನ್ನು ಕಾರುತ್ತಲಿವೆ. ಈಗ ರಾಜರುಗಳ ಸ್ಥಾನದಲ್ಲಿ ರಾಜಕಾರಣಿಗಳು ಇದ್ದಾರೆ. ಪ್ರಜೆಗಳು ಎಂದಿನಂತೆ ಕುರುಡರಾಗಿ ಅವರ ಆರಾಧನೆಯಲ್ಲಿ ತೊಡಗಿದ್ದಾರೆ. ಅವರೋ ಜನರ ಸುಖಾಗಮನದ ಹೆಸರಿನಲ್ಲಿ ಒಂದು ಜಾತಿಯ ಜನರನ್ನು ಮತ್ತೊಂದು ಜಾತಿಗೆ ಎತ್ತಿಕಟ್ಟುತ್ತಲೇ ದ್ವೇಷದ ಕಿಡಿಯನ್ನು ಎಂದಿಗೂ ಆರದಂತೆ ಕಾಪಿಡುತ್ತಿದ್ದಾರೆ. ಜನರೊಳಗೆ ವಿವೇಚನೆಯ ಪ್ರಜ್ಞೆ, ಅರಿವಿನ ಗಾಳಿ ಬೀಸದಂತೆ ನೋಡಿಕೊಳ್ಳಲಾಗುತ್ತಿದೆ. ಜಾತಿಪದ್ಧತಿಯ ಸಂಪೂರ್ಣ ವಿನಾಶ ಕನಸಿನ ಮಾತಾಗಿಯೇ ಉಳಿದಿದೆ.

ಗುಡಿ ಚರ್ಚು ಮಸಿಜೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟಿ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ,
ಓ, ಬನ್ನಿ, ಸೋದರರೆ, ಬೇಗ ಬನ್ನಿ !

ಕುವೆಂಪು ಅವರು ಕನಸಿದಂತೆ ಈ ಕವಿತೆಯನ್ನು ಯುವಜನತೆ ಮುಂದಣ ಮಾರ್ಗದರ್ಶಕ ಮಂತ್ರದೀಪವಾಗಿಸಿಕೊಳ್ಳಲೇ ಇಲ್ಲ. ಆಳುವವರ ದಾಳವಾಗಿ, ಅವರು ಬೀಸಿದ ಕಡೆ ಬೀಳುವ ಕಲ್ಲಾಗಿ ಸ್ವಂತಿಕೆಯನ್ನೇ ಕಳೆದುಕೊಂಡ ವಿಚಿತ್ರ ಬದುಕನ್ನು ಜೀವಿಸುತ್ತಿದೆ.

ಕುವೆಂಪು ಅವರ ’ವಿಚಾರ ಕ್ರಾಂತಿಗೆ ಆಹ್ವಾನ’ದ ಆಲೋಚನೆಗಳು ಈ ಕಾಲದ ಬಿಕ್ಕಟ್ಟು, ಗಾಯಗಳನ್ನು ಶಮನಗೊಳಿಸುವ ಪರಿಹಾರೋಪಾಯಗಳಂತಿವೆ. ಯುವಸಮೂಹದ ಎದೆಯಲಿ ಕುವೆಂಪು ಅವರ ಈ ವಿಚಾರಗಳು ಬೀಜದಂತೆ ಬೀಳಲಿ. ಆ ಬೀಜ ಮೊಳೆತು ಹೊಸ ಬೆಳಕು ಕಾಣುವಂತಾಗಲಿ.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಟಿ.ಎಸ್.ಗೊರವರ

ಗದಗ ಜಿಲ್ಲೆಯವರಾದ ಟಿ.ಎಸ್. ಗೊರವರ, ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಹೊರತಂದಿದ್ದಾರೆ. ಸದ್ಯ ’ಸಂಗಾತ’ ತೈಮಾಸಿಕ ಸಾಹಿತ್ಯ ಪತ್ರಿಕೆ ಸಂಪಾದಕ.


ಇದನ್ನೂ ಓದಿ: ಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನದ ಮರು ಓದು – ಧನಂಜಯ್ ಎನ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...