ದೇಶದ ಪ್ರಮುಖ ಆರ್ಟಿಐ ಕಾರ್ಯಕರ್ತ, ಹೋರಾಟಗಾರ ಸಾಕೇತ್ ಗೋಖಲೆ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಗುರುವಾರದಂದು ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಬರೆದಿರುವ ಅವರು, ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಗೌರವಕ್ಕೆ ಪಾತ್ರನಾದೆ ಎಂದು ಹೇಳಿದ್ದಾರೆ.
ರೈತ ಹೋರಾಟದ ಬಗ್ಗೆ ಸುಳ್ಳು ಪ್ರಚಾರ, ಪ್ರಯೋಗಗಳನ್ನು ಪೂರೈಸದ ಕೊರೊನಾ ಲಸಿಕೆಗೆಗೆ ಅನುಮತಿ ಹೀಗೆ ಒಕ್ಕೂಟ ಸರ್ಕಾರದ ಹಲವಾರು ಕೃತ್ಯಗಳನ್ನು ಸಾಕೇತ್ ಗೋಖಲೆ ಬಹಿರಂಗ ಪಡಿಸಿದ್ದರು. ಅವರು ತೃಣಮೂಲ ಪಕ್ಷದ ನಾಯಕರಾದ ಸುಗತ ರಾಯ್, ಯಶವಂತ ಸಿನ್ಹಾ ಮತ್ತು ಡೆರೆಕ್ ಒಬ್ರಿಯಾನ್ ಸಮ್ಮುಖದಲ್ಲಿ ಪಕ್ಷವನ್ನು ಸೇರಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗ: BJP ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯನನ್ನು ಬಂಧಿಸಲು ಸಾಕೇತ್ ಗೋಖಲೆ ಆಗ್ರಹ!
ಈ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ ಸಾಕೇತ್ ಗೋಖಲೆ, “ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಗೌರವಕ್ಕೆ ಪಾತ್ರನಾದೆ. ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟದಲ್ಲಿ, ಎಲ್ಲಾ ಕೈಗಳ ಅಗತ್ಯವಿದೆ. ಇದಕ್ಕಾಗಿ ನಾನು ನನ್ನ ಕೈಲಾದ ಕೊಡುಗೆಯನ್ನು ನೀಡುತ್ತೇನೆ ಎಂದು ಆಶಿಸುತ್ತೇನೆ. ನಗುಮುಖದೊಂದಿಗೆ ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.
Honored to join @AITCofficial under the leadership of the ever fearless @MamataOfficial & @abhishekaitc.
The fight to safeguard our democracy & its institutions needs all hands on deck. I hope to contribute in the best way I can.
Thanks for the warm welcome ?#KhelaHobe https://t.co/M05bVeSipE
— Saket Gokhale (@SaketGokhale) August 12, 2021
“ನನ್ನ ಯುದ್ದವು ಎಂದಿನಂತೆ ಮುಂದುವರೆದಿದೆ. ನಾನು ಮಾಡುವ ಕೆಲಸವನ್ನು ಇನ್ನೂ ಹೆಚ್ಚಿನ ಶಕ್ತಿಯಿಂದ ಮುಂದುವರಿಸುತ್ತೇನೆ. ಪ್ರತಿಪಕ್ಷಗಳ ಒಗ್ಗಟ್ಟಿನ ಅಗತ್ಯವು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಬಿಜೆಪಿಯ ಫ್ಯಾಸಿಸಂ ಎಂಬ ರಾಕ್ಷಸರ ವಿರುದ್ಧ ಹೋರಾಡುತ್ತಿರುವ ಎಲ್ಲರೂ ನನ್ನ ಸ್ನೇಹಿತರು ಮತ್ತು ಮಿತ್ರರಾಗಿದ್ದಾರೆ” ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.
ಇದನ್ನೂ ಓದಿ: ರಂಜನ್ ಗೊಗೊಯ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ: ಸಾಕೇತ್ ಗೋಖಲೆ ಆಗ್ರಹ