HomeಮುಖಪುಟCAA ವಿರುದ್ಧ ಮಹಿಳೆಯರ ಪ್ರತಿಭಟನೆ ತಡೆಯಲು ಊಟ ಮತ್ತು ಹೊದಿಕೆಗಳನ್ನು ಹೊತ್ತೊಯ್ದ ಯುಪಿ ಪೊಲೀಸರು..! ವಿಡಿಯೋ...

CAA ವಿರುದ್ಧ ಮಹಿಳೆಯರ ಪ್ರತಿಭಟನೆ ತಡೆಯಲು ಊಟ ಮತ್ತು ಹೊದಿಕೆಗಳನ್ನು ಹೊತ್ತೊಯ್ದ ಯುಪಿ ಪೊಲೀಸರು..! ವಿಡಿಯೋ ನೋಡಿ

- Advertisement -
- Advertisement -

ಲಕ್ನೋದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾಕಾರರ ಕಂಬಳಿ ಮತ್ತು ಆಹಾರವನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಆರೋಪಗಳನ್ನು ತಳ್ಳಿಹಾಕಿದ ಲಕ್ನೋ ಪೊಲೀಸರು ವದಂತಿಗಳನ್ನು ಹರಡಬೇಡಿ, ಕಾನೂನು ಪ್ರಕಾರವೇ ಕಂಬಳಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿಯಲಾದ ದೃಶ್ಯಗಳಲ್ಲಿ, ಪೊಲೀಸರು ಶನಿವಾರ ಸಂಜೆ ಪ್ರತಿಭಟನೆಯ ಸ್ಥಳದಲ್ಲಿ ಗೊಂದಲ ಎಬ್ಬಿಸಿ ಪ್ರತಿಭಟನಾ ಸ್ಥಳದಿಂದ ಆಹಾರ ಪ್ಯಾಕೆಟ್‌ಗಳನ್ನು ಮತ್ತು ಕಂಬಳಿಗಳನ್ನು ತೆಗೆದುಕೊಂಡು ಹೋಗುವುದನ್ನು ಕಾಣಬಹುದು. ಆಶ್ಚರ್‍ಯವೆಂದರೆ ಕೆಲ ಪೊಲೀಸರು ತಮ್ಮ ಗುರುತು ಸಿಗದಂತೆ ಹೆಲ್ಮೆಟ್ ಧರಿಸಿದ್ದು, ರಾತ್ರಿ ಉಳಿಯಲು ತಂದಿದ್ದ ಚಾಪೆ, ಹೊದಿಗೆ, ಬಟ್ಟೆಯ ಪೆಟ್ಟಿಗೆ, ಊಟ ಎಲ್ಲವನ್ನು ಹೊತ್ತೊಯ್ದಿದ್ದಾರೆ.

ಸುಮಾರು 50 ಮಹಿಳೆಯರು ಶುಕ್ರವಾರ ಧರಣಿ ಪ್ರದರ್ಶನವನ್ನು ಪ್ರಾರಂಭಿಸಿದರು. ಲಕ್ನೋದ ಪ್ರಸಿದ್ದ ಗಡಿಯಾರ ಗೋಪುರದ ಮೆಟ್ಟಿಲುಗಳ ಮೇಲೆ ಕುಳಿತು ಅವರು ತಮ್ಮ ಪ್ರತಿಭಟನೆ ಅನಿರ್ದಿಷ್ಟ ಮತ್ತು ಕಾನೂನು ರದ್ದುಗೊಳ್ಳುವವರೆಗೂ ಮುಂದುವರಿಯುತ್ತದೆ ಎಂದು ಘೋಷಿಸಿದ್ದರು. ತದನಂತರ ಶನಿವಾರ ಪ್ರತಿಭಟನೆಗೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಶನಿವಾರ ರಾತ್ರಿ ಜನಸಂದಣಿ ಹೆಚ್ಚಾಯಿತು. ಆಗ ಪ್ರತಿಭಟನೆಯನ್ನು ನಿಲ್ಲಿಸಲು ಪೊಲೀಸರು ಈ ರೀತಿ ನಡೆದುಕೊಂಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಮಹಿಳಾ ಪ್ರತಿಭಟನಾಕಾರರು ಕೆಲವು ಪೊಲೀಸರ ಹಿಂದೆ ಓಡುತ್ತಾ, “ನೀವು ಕಂಬಳಿಗಳನ್ನು ಏಕೆ ತೆಗೆದುಕೊಳ್ಳುತ್ತಿದ್ದೀರಿ? ಎಂದು ಕೂಗಿದ್ದಾರೆ. ಆದರೆ ಪೊಲೀಸರು ಯಾವುದೇ ಉತ್ತರ ನೀಡಿಲ್ಲ.

ಮಹಿಳೆಯರು ಮತ್ತು ಮಕ್ಕಳಿಗೆ ಆಹಾರ ಕೊಡಲು ನಾನು ಅಲ್ಲಿಗೆ ಹೋದಾಗ ಕೆಲವು ಪೊಲೀಸರು ನಮ್ಮನ್ನು ತಡೆಯಲು ಪ್ರಯತ್ನಿಸಿದರು. ಆದರೆ ಒಂದಿಬ್ಬರು ನನ್ನನ್ನು ಒಳಗೆ ಬಿಟ್ಟರು. ಹೋರಾಟನಿರತ ಜನರಿಗೆ ಸಹಾಯ ಮಾಡುವುದು ಮೂಲ ಮಾನವೀಯತೆ. ಆದ್ದರಿಂದ ನಾವು ಇಲ್ಲಿದ್ದೇವೆ ಎಂದು ಸಿಖ್ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

“ಲಖನೌದಲ್ಲಿನ ಗಡಿಯಾರ ಗೋಪುರದಲ್ಲಿ ಅಕ್ರಮ ಪ್ರತಿಭಟನೆಯ ಸಮಯದಲ್ಲಿ ಕೆಲವರು ಟೆಂಟ್ ಹಾಕಲು ಪ್ರಯತ್ನಿಸಿದರು ಮತ್ತು ಅವರಿಗೆ ಅನುಮತಿ ನಿರಾಕರಿಸಲಾಯಿತು. ಕೆಲವು ಗುಂಪುಗಳು ಉದ್ಯಾನದಲ್ಲಿ ಕಂಬಳಿ ವಿತರಿಸುತ್ತಿದ್ದವು ಆದರೆ ಪ್ರತಿಭಟನೆಯ ಭಾಗವಲ್ಲದ ಅನೇಕ ಜನರು ಜನರು ಸಹ ಕಂಬಳಿಗಳನ್ನು ತೆಗೆದುಕೊಳ್ಳುತ್ತಿದ್ದರು. ಹಾಗಾಗಿ ನಾವು ಅಲ್ಲಿನ ಜನಸಮೂಹವನ್ನು ಚದುರಿಸಬೇಕಾಗಿತ್ತು. ಸರಿಯಾದ ಪ್ರಕ್ರಿಯೆಯ ನಂತರ ಕಂಬಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ದಯವಿಟ್ಟು ವದಂತಿಗಳನ್ನು ಹರಡಬೇಡಿ” ಎಂದು ಲಕ್ನೋ ಪೊಲೀಸರು ಇಂದು ಹೇಳಿಕೆ ನೀಡಿದ್ದಾರೆ.

ಲಕ್ನೋ ಪೊಲೀಸರ ತೊಂದರೆಯ,  ನಂತರವೂ ಗಡಿಯಾರ ಗೋಪುರದಲ್ಲಿ ಶನಿವಾರ ರಾತ್ರಿ ಅವ್ಯವಸ್ಥೆಯ ಹೊರತಾಗಿಯೂ ಧರಣಿ ಇಂದು ಬೆಳಿಗ್ಗೆ ಮುಂದುವರೆಯಿತು ಮತ್ತು ಹೆಚ್ಚಿನ ಮಹಿಳೆಯರು ಬೆಳಿಗ್ಗೆ 4 ಗಂಟೆಗೆ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ. ಇಂದು ಕೂಡ ಹೋರಾಟ ಮುಂದುವರೆಯುತ್ತಿದೆ.

ರಾಜ್ಯ ರಾಜಧಾನಿಯಲ್ಲಿ ಪೌರತ್ವ ಕಾನೂನಿನ ಬಗ್ಗೆ ಘರ್ಷಣೆಗಳು ಸಂಭವಿಸಿ ಹಲವರು ಸಾವನ್ನಪ್ಪಿದ ನಂತರವೂ ಹೊಸ ಪ್ರತಿಭಟನೆಯ ಅಲೆಗಳು ಏಳುತ್ತಿವೆ. ಕಳೆದ ಒಂದು ತಿಂಗಳಲ್ಲಿ ಪೌರತ್ವ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಇಪ್ಪತ್ತೊಂದು ಜನರು ಸಾವನ್ನಪ್ಪಿದ್ದು ಇದು ದೇಶದಲ್ಲಿಯೇ ಅತಿ ಹೆಚ್ಚಾಗಿದೆ.

ಈ ನಡುವೆ ಗಣರಾಜ್ಯೋತ್ಸವಕ್ಕೂ ಮುನ್ನ ಲಕ್ನೋದಲ್ಲಿ ದೊಡ್ಡ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸರು ಶನಿವಾರ ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...