Homeಕರ್ನಾಟಕಮೇ ಸಾಹಿತ್ಯ ಮೇಳದಲ್ಲಿ ಬೆಜವಾಡ ವಿಲ್ಸನ್, ದಿನೇಶ್ ಅಮೀನ್ ಮಟ್ಟು ಮತ್ತು ರಾವ್ ಸಾಹೇಬ್ ಕಸಬೆಯವರ...

ಮೇ ಸಾಹಿತ್ಯ ಮೇಳದಲ್ಲಿ ಬೆಜವಾಡ ವಿಲ್ಸನ್, ದಿನೇಶ್ ಅಮೀನ್ ಮಟ್ಟು ಮತ್ತು ರಾವ್ ಸಾಹೇಬ್ ಕಸಬೆಯವರ ಭಾಷಣಗಳು

- Advertisement -
ಪ್ರಗತಿಪರ ಚಿಂತಕರು ಹಾಗೂ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರಾದ  ವಿಲ್ಸನ್ ಬೆಜವಾಡರವರ ಮಾತುಗಳು.
ನಾನು ಮೂಲತಃ ಕನ್ನಡದವನು. ನಮ್ಮ ರಾಜ್ಯದಲ್ಲಿ ರಾಜಕೀಯ ಏನು ನಡಿತೀದೆ, ಹೇಗೆ ನಡಿತಿದೆ ಅನ್ನೋದು ಸಹಜವಾಗಿ ನನಗೂ ಕುತೂಹಲವಿರುತ್ತೆ. ನಾವು ಮಾತಾಡಬೇಕಾದಾಗ ಯಾವುದೇ ಪಕ್ಷಕ್ಕೆ ಸೀಮಿತವಾಗಿ ಅಥವಾ ವಿಚಾರಧಾರೆಗೆ ಸೀಮಿತವಾಗಿ ಮಾತಾಡಬಾರದು. ನಾವು ಮಾತಾಡಬೇಕಾದರೆ ತುಂಬಾ ಯೋಚನೆ ಮಾಡಿ ಮಾತಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಲಾಗುತ್ತಿದೆ. ಭಯದ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತಿದೆ. ದೇಶಪ್ರೇಮದ ಸರ್ಟಿಫಿಕೇಟ್ ಗಳನ್ನು ಕೊಡಲಾಗುತ್ತದೆ. ನ್ಯಾಯಮೂರ್ತಿಯೊಬ್ಬರು ಮಹಿಳೆಯರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಡಿ ಎಂದು ಹೇಳುತ್ತಿದ್ದಾರೆ. ನೇಮಕವಾದಲ್ಲಿ ಇವರು ನಮ್ಮ ಮೇಲೆಯೇ ಮಹಿಳಾ ಪರ ಆರೋಪಗಳನ್ನು ಮಾಡುತ್ತಾರೆ ಎಂಬ ಕಾರಣ ಕೊಡಲಾಗುತ್ತಿದೆ. ದೇಶದ ನ್ಯಾಯಾಧಾನ ವ್ಯವಸ್ಥೆಯಲ್ಲಿ  ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ. ಬಡವರಿಗೆ ದೀನ ದಲಿತರಿಗೆ  ಹಿಂದುಳಿದವರಿಗೆ ನ್ಯಾಯ ಮರಿಚಿಕೆಯಾಗಿದೆ.
ರೈತರನ್ನು ನೀವು ಇಂದೇ ಪ್ರಶ್ನೆ ಮಾಡಿ, ಐದು ವರ್ಷಗಳಲ್ಲಿ ನಿಮಗೇನಾದರೂ ಕೆಲಸಗಳಾಗಿವೆಯೇ ಎಂದು. ಇಲ್ಲ ಎಂಬ ಉತ್ತರ ದೊರೆಯುತ್ತದೆ. ಬೇರೆ ಬೇರೆ ವೃತ್ತಿಯವರನ್ನು  ಕೇಳಿ ಇಲ್ಲವೆನ್ನುತ್ತಾರೆ. ಆದರೆ ಇದೇ ಪ್ರಶ್ನೆಗೆ ಉತ್ತರವನ್ನು ರಾಜಕಾರಣಿಗಳಿಂದ ಪಡೆದಾಗ ದೇಶಕ್ಕಾಗಿ ಏನಾದರೂ ಮಾಡೋಣ. ದೇಶದ ಹಿತಕ್ಕಾಗಿ ಓಟು ಮಾಡಬೇಕು ಅಂತ ಹೇಳ್ತಾರೆ. ಈ ರೀತಿ ಮನಸ್ಥಿತಿಗಳನ್ನು ಸೃಷ್ಟಿ ಮಾಡಲಾಗಿದೆ. ಅವರು ಅಂದುಕೊಂಡ ದೇಶಕ್ಕಾಗಿ ಓಟು ಕೇಳುತ್ತಿದ್ದಾರೆಯೇ ಹೊರತು ಭಾರತದ ಜನಕ್ಕಾಗಲ್ಲ. ಪ್ರತಿ ವರ್ಷ 2000 ರೈತರು ರೈತಾಪಿ ಜೀವನ ಬಿಟ್ಟು ಕಾರ್ಮಿಕರಾಗುತ್ತಿದ್ದಾರೆ. ಮಲ ಹೊರುವ ಪದ್ದತಿಯಲ್ಲಿ ಆಧ್ಯಾತ್ಮಿಕ ಸಂತೃಪ್ತಿ ಇದೆ ಅಂತ ಆಗಿನ ಗುಜರಾತ್ ಮುಖ್ಯಮಂತ್ರಿಗಳು ಹೇಳುತ್ತಾರೆ. ಆಗ ನಾನು ಹೇಳಿದ್ದೆ ಹಾಗಾದರೆ ನೀವು‌ ಮಲ ಹೊತ್ತು ಸಂತೃಪ್ತಿ ಪಡೆಯಿರಿ ಎಂದು. ಸಫಾಯಿ ಕರ್ಮಚಾರಿ ಆಂದೋಲನ್ ನಾವು ಪ್ರಾರಂಭ ಮಾಡಿದ್ದು ಈ ಸಮಸ್ಯಗಳಿಂದ ಹೊರಬರಲು. ನೀವು ಬಡವರಾಗಿ ಹುಟ್ಟಿದ್ದು ಯಾಕೆ ಎಂದು ಕೇಳಿದಾಗ ಬಾಬಾ ಉತ್ತರ ಹೀಗಿರುತ್ತದೆ, ನೀನು ಹುಟ್ಟಿದ ಜಾತಿ ಎಂದು. ಏನಾದರೂ ಪ್ರಶ್ನೆ ಮಾಡಿದಾರೆ ನಿಮ್ಮ ಹಣೆಬರಹವೆಂಬ ಹಣೆಪಟ್ಟಿ ಕಟ್ಟುತ್ತಾರೆ. ಅಂಧಶ್ರದ್ಧೆಗಳನ್ನು  ನಮ್ಮ ಮೆದುಳಿನಲ್ಲಿ ತುರುಕುತ್ತಾರೆ. ನಿರಂತರ ಹೋರಾಟಗಳ ನಂತರ ಮ್ಯಾನ್ ಹೋಲ್ ಕ್ಲೀನ್ ಮಾಡಲು ಸೇಪ್ಟಿಕ್ ಟ್ಯಾಂಕ್ ಗಳನ್ನು ಸರಕಾರಗಳು ಜಾರಿ ಮಾಡಿವೆ, ಹಾಗೂ ಖಾಸಗಿಯಲ್ಲೂ ಅದು ನಡಿತಿವೆ. ಕೊನೆಯಲ್ಲಿ ನನ್ನದೊಂದು ಪ್ರಶ್ನೆ ಇಲ್ಲಿ ಯಾರಾದರೂ ಸತ್ತರೆ ದೇಶವೆಲ್ಲಾ ತುಂಬಾ ಭಾವುಕವಾಗುತ್ತೆ. ದಿನೆ ದಿನೇ ಸಫಾಯಿ ಕರ್ಮಚಾರಿಗಳು ಗಟಾರದಲ್ಲಿಳಿದು ಸ್ವಚ್ಛಗೊಳಿಸುತ್ತಾ ಸಾಯುತ್ತಿದ್ದಾರೆ ದೇಶದ ಜನಕ್ಕೆ ಆಕ್ರೋಶ ಬರುತ್ತಿಲ್ಲ ಯಾಕೆ?
ಒಬ್ಬ ನಿರೋದ್ಯೋಗಿ ಉದ್ಯೋಗದ ಬಗ್ಗೆ ಮಾತಾನಾಡುವುದು ಬಿಟ್ಟು ಹಿಂದುತ್ವದ ಬಗ್ಗೆ ಮಾತನಾಡುತ್ತಾನೆ
– ದಿನೇಶ್ ಅಮೀನ್ ಮಟ್ಟು
ಈ ಮೇ‌ ಸಾಹಿತ್ಯ  ಕಾರ್ಯಕ್ರಮದಲ್ಲಿ ತಿಳಿದುಕೊಂಡದ್ದನ್ನು ನಿಮ್ಮೂರುಗಳಲ್ಲಿ ನಡೆಸುವ ಹಾಗೆ ಆಗಬೇಕು. ಚುನಾವಣೆಗೆ ಮಾತ್ರ ನಮ್ಮ ಕೆಲಸಗಳು ಸೀಮಿತವಾಗಬಾರದು, ಬೆಂಗಳೂರಿನಲ್ಲಿ ಕಾಣುವ ಭಾರತ ಬೇರೆ, ಗದಗದಲ್ಲಿ ಕಾಣುವ ಭಾರತ ಬೇರೆ.  ವೈದ್ಯರಿಲ್ಲದ ,ನೀರು ಬಾರದ ಭಾರತ ಗದಗಿನಲ್ಲಿ ಕಂಡರೆ ಬೆಂಗಳೂರಿನಲ್ಲಿ ವಿಶ್ವಭಾರತ ಮಾಡುವವರನ್ನು ನಾವು ಕಾಣಬಹುದು. ಅಂಕಿ ಅಂಶಗಳನ್ನು ನೋಡಿಯೇ ಯಾವುದೇ ತೀರ್ಮಾನಗಳನ್ನು ಮಾಡಬೇಕು, ಸಮಿಕ್ಷೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ರೈತರ ಸಂಖ್ಯೆ ಏಳೂ ವರ್ಷಗಳಲ್ಲಿ ಶೇ7% ಕಡಿಮೆಯಾಗಿದೆ. ಕೆಲ ಮುಕ್ಕಾಲು ರೈತರು ರೈತನಾಗಲು ಬಯಸುವುದಿಲ್ಲ.
ಒಬ್ಬ ನಿರೋದ್ಯೋಗಿ ಉದ್ಯೋಗದ ಬಗ್ಗೆ ಮಾತಾನಾಡುವುದಿಲ್ಲ ಹಿಂದುತ್ವದ ಬಗ್ಗೆ ಮಾತನಾಡುತ್ತಾನೆ. ಅಷ್ಟರ ಮಟ್ಟಿಗೆ ಧರ್ಮವನ್ನು ತಲೆ ಹೊಕ್ಕಿಸಲಾಗುತ್ತಿದೆ. ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ನಾವು ಅರ್ಥ ಮಾಡಿಕೊಂಡ ಸಂವಿಧಾನವೇನೆಂಬುದು ನಮಗೆ ಗೊತ್ತಿರಬೇಕು, ಇವತ್ತಿನ ಚುನಾವಣೆ ವ್ಯವಸ್ಥೇಯಲ್ಲೂ ಪ್ರಾಮಾಣಿಕವಾಗಿ ಏನಾದರೂ ಕೆಲಸ ಮಾಡಬೇಕೆಂದರೂ ಕೂಡ ಮಾಡಲಾರದ ವ್ಯವಸ್ಥ ಇದೆ. ಅಂಬೇಡ್ಕರ್ ಬಯಸಿದ ಸಂವಿಧಾನವನ್ನು ಚಿಂತನೆಗಳನ್ನು ಸೇರಿಸಿದರೆ ಅಭಿವೃದ್ಧಿ ಭಾರತ ಮಾಡಲು ಸಾಧ್ಯ. ಮೇ ಸಾಹಿತ್ಯ ಮೇಳದಂತಹ ಕಾರ್ಯಕ್ರಮಗಳು  ಚುನಾವಣೆಗಿಂತ ಮುಂಚೆ ನಡೆಯಬೇಕಿತ್ತು, ಇಲ್ಲಿ ಸೇರಿದ ಯುವಜನರು ಇಲ್ಲಿನ ಮಾತುಗಳು ಕೇಳಿ ವೈಚಾರಿಕ ತಿಳುವಳಿಕೆ ಪಡೆಯಬೇಕು
ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಂಬೆಯ ಪ್ರಗತಿಪರ ಚಿಂತಕರಾದ ರಾವ್ ಸಾಹೇಬ್ ಕಸಬೆಯವರ ಮಾತುಗಳು 
ಕನ್ನಡ ಭಾಷೆ ನನಗೆ ಬರುವುದಿಲ್ಲ. ಇದು ಒಂದು ರಿದಮ್ ಇರೋ ಭಾಷೆ. ನಾನು ಮೊದಲ ಸಲ ಕರ್ನಾಟಕಕ್ಕೆ ಬಂದಾಗ ಬಹಳ ಖುಷಿಯಾಗಿತ್ತು. ಯಾಕೆಂದರೆ ನಾನು ಬಸವಣ್ಣನ ನೆಲಕ್ಕೆ ಬಂದಿದ್ದೆ. ಇಲ್ಲಿ ಬಂದ ನಾವೆಲ್ಲಾ ಹೊಸ ಭಾರತ ಕಟ್ಟುವ ಕನಸು ಕಾಣುತ್ತಿದ್ದೇವೆ , ಕನಸಾದ್ರೂ ಕಾಣುತ್ತಿದ್ದೇವಲ್ಲಾ ಎಂಬುದು ಖುಷಿಯ  ವಿಚಾರ. ಇಲ್ಲಿ ಬೇರೆ ಬೇರೆ ಜನಾಂಗಗಳಿವೆ, ಧರ್ಮಗಳಿವೆ, ವರ್ಣಗಳಿವೆ, ಭಾಷೆಗಳಿವೆ ಇದೆಯಲ್ಲವೇ ಭಾರತದೇಶದ ಸೌಂದರ್ಯ?. ಈಗೀಗ ಭಾರತದಲ್ಲಿ ಭಾರತ ಮಾತಾ ಕಿ ಜೈ ಅನ್ನುವ ಸದ್ದು ಕೇಳಿ ಬರುತ್ತಿದೆ, ಇಲ್ಲದ ರಾಷ್ಟ್ರವನ್ನು ಜೈಕಾರ ಹಾಕುವುದೇನು ? ಮೊದಲ ರಾಷ್ಟ್ರ ನಿರ್ಮಿಸೋಣ, ಯಾರ್ಯಾರೋ ರಾಜರುಗಳು, ಮೊಗಲರು, ಸುಲ್ತಾನರು ರಾಜರು ಬಂದರೂ ರಾಷ್ಟ್ರವನ್ನು ಮಾಡಲಾಗಲಿಲ್ಲ. ಸಮಾಜವಾದ, ಸಮಾನತೆ, ನಾಡು ಕಟ್ಟುವ ಕನಸು ನನಸಾಗಿದ್ದೆ ಬಾಬಾಸಾಹೇಬರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಭಾರತ ನನ್ನ ದೇಶವೆಂದು ಹೇಳುವಂತೆ ಮಾಡಿದರು.
ಸ್ವಾತಂತ್ರ್ಯ ಬಂದ ಮೇಲೆ ಗಾಂಧೀಜಿಯೂ ಚರಕ ಬಳಸುತ್ತಿದ್ದರು. ಮೋದಿಯೂ ಬಳಸುತ್ತಿದ್ದಾರೆ ಪ್ರಚಾರಕ್ಕಾಗಿ. ಆದರೆ ಗಾಂಧೀಜಿಯ ಪಕ್ಕಕ್ಕೆ ಕಸ್ತೂರಬಾ ಇದ್ದರು ಆದರೆ ಇವರು ಒಬ್ಬರೇ ಇದ್ದದ್ದು ಇದನ್ನು ನಾವು ಗಮನಿಸಬೇಕು. ನಾವು ಏಕೆ ಬದುಕುತ್ತಿದ್ದೇವೆ ಎಂದು ನನ್ನನ್ನೂ ಪ್ರಶ್ನೆ ಕಾಡುತ್ತಿತ್ತು ಅದಕ್ಕೆ ಬಾಲಕನೊಬ್ಬ ಉತ್ತರಿಸಿದ್ದ ನಮಗೆ ಸಾಯಲು ಆಗುವುದಿಲ್ಲ ಹಾಗಾಗಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದ್ದ. ಮನುಷ್ಯ ಮತ್ತು ಪ್ರಾಣಿಗಳ ಜೀವನಕ್ಕೆ ವ್ಯತ್ಯಾಸವನ್ನು ತಿಳಿದವನ ಮಾತುಗಳಾಗಿದ್ದವು. ನಮ್ಮ ಜೀವನಕ್ಕ ಅರ್ಥ ಕೊಡಲು ನಾವು ಬದುಕಬೇಕಿದೆ ನಮ್ಮ ಜೀವನವನ್ನು ತುಂಬಾ ಅದ್ಭುತವಾಗಿ ಜೀವಿಸಿ ಮುಂದಿನ ಭವಿಷ್ಯವನ್ನು ಸುಂದರಗೊಳಿಸುವುದಾಗಿರಬೇಕು. ಎಂತಹ ದುರಂತವೆಂದರೆ ಭಾರತದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗುತ್ತದೆ. ಮನಸ್ಸಿನಿಂದ ಯಾವುದೇ ಹುಡುಗಿಗೆ ನೀವು ಪ್ರೀತಿಸಿದ್ದರೆ ನೀವು ಹೆಣ್ಣನ್ನು ಗೌರವಿಸುತ್ತಿದ್ದಿರಿ. ಅರ್ಥಿಕ ಮತ್ತು ಸಾಮಾಜಿಕ ನ್ಯಾಯ ಸಿಗದಿದ್ದರೆ ಮುಂದೆ ದೊಡ್ಡ ಆಘಾತ ಕಾದಿದೆ ಹಾಗಾಗಿ ಸಂವಿಧಾನವನ್ನು ಉಳಿಸುವ ಅಗತ್ಯವಿದೆ. ಇದರಲ್ಲಿ ನಾವು ಎಡವಿದರೆ ಪ್ರಜಾಪ್ರಭುತ್ವಕ್ಕೆ ಕುತ್ತು ಬರಲಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ, ಸೃಷ್ಟಿಯಾದರೆ ಮಹಿಳೆಯರ ಮೇಲೆ ಅದು ಕೆಟ್ಟ ಪರಿಣಾಮ ಬೀರಲಿದೆ, ದೇಶ ಫ್ಯಾಸಿಸಂ ಕಡೆ ವಾಲುವುದು ಕಟ್ಟಿಟ್ಟ ಬುತ್ತಿ. ಮುಂದೆ ಯೋಚಿಸಿ ಹೆಜ್ಜೆಗಳನ್ನಿಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...