HomeUncategorizedಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

ಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

- Advertisement -
- Advertisement -

ಜನರಿಂದ ಆರಿಸಿ ಹೋಗಿ ಜನವಿರೋಧಿ ಕೆಲಸವನ್ನು ಕಾಯಿದೇ ಶೀರ ಮಾಡುವವರಿಗೆ ನಮ್ಮ ದೇಶದೊಳಗ ಜನಪ್ರತಿನಿಧಿ ಅಂತ ಹೆಸರು.

ಅಂಥವರು ಒಲ್ಲೆ ಒಲ್ಲೆ ಅನಕೋತ ಮಾಡಿದ ಅನೇಕ ಕಾನೂನುಗಳಲ್ಲಿ ಒಂದು ಅಂದರ ಚುನಾವಣೆ ಆಯೋಗದ ಮಾದರಿ ನೀತಿಸಂಹಿತೆ (ಮಾನಿಸಂ). ಖರೇ ಹೇಳಬೇಕಂದರ ಅದು ಸಂಸತ್ತು ಮಾಡಿದಲ್ಲ. ಆಯೋಗ ಮಾಡಿದ್ದು ಅಧೀನ ಶಾಸಕಾಂಗದ ಅಧಿಕಾರದೊಳಗ.

ಕೇಂದ್ರ ಚುನಾವಣಾ ಆಯೋಗ ಮಾದರಿ ನೀತಿಸಂಹಿತೆಯನ್ನ ಪ್ರತಿ ಚುನಾವಣೆಗೆ ಮುಂಚೆ ಬದಲಿಸಿಗೋತ, ಗಟ್ಟಿ ಮಾಡಿಕೋತ, ತಪ್ಪುಗಳನ್ನು ತಿದ್ದಿಕೋತ, ಹಿಂದಿನ ಚುನಾವಣೆ ಪಾಠಗಳನ್ನು ಕಲಕೋತ ಖರೇ ಅರ್ಥದೊಳಗ ಅದನ್ನ ಮಾದರಿ ಮಾಡಬೇಕು ಅನ್ನೊ ಕೆಲಸ ಮಾಡಿಕೋತ ಬಂದದ.

ಅದರ ಕೆಲವು ಅಂಶಗಳನ್ನು ನೋಡೋಣ.
 ಹೊಸ ಯೋಜನೆ ಘೋಷಿಸಬಾರದು, ಹೊಸ ಕಾರ್ಯಕ್ರಮ ಶುರುಮಾಡಬಾರದು
 ಸರಕಾರಿ ವಸತಿಗೃಹ, ಕಚೇರಿಗಳನ್ನ ರಾಜಕೀಯ ಕಾರಣಗಳಿಗೆ ಬಳಸಬಾರದು, ಮೀಟಿಂಗು ಮಾಡಬಾರದು
 ಸರಕಾರಿ ಸ್ಥಳಗಳನ್ನ ಅಂದಗೆಡಿಸಬಾರದು.
 ವಿರೋಧಿಗಳ ಮನೀ ಮುಂದ, ಅವರಿಗೆ ಕಿರಿಕಿರಿ ಆಗೋ ಹಂಗ ಪ್ರಭಾತಫೇರಿ ತೆಗೀಬಾರದು, ಹೊಯ್ಕೋ- ಬಡಕೋ ಮಾಡಬಾರದು
 ಸರಕಾರಿ ಮಾಧ್ಯಮದೊಳಗ ಎಲ್ಲಾ ಪಕ್ಷಗಳಿಗೂ ಸಮಾನ ಅವಕಾಶ ಸಿಗಬೇಕು
 ಮೈಕಾಸುರನನ್ನ ರಾತ್ರಿ ಒದರಸಬಾರದು.
 ಆಡಳಿತ ಪಕ್ಷ ತನ್ನ ಶಕ್ತಿಯ ದುರುಪಯೋಗ ಮಾಡಬಾರದು
 ಮಂತ್ರಿಗಳು ಗಾಡಿ, ಘೋಡಾ, ಪೀಏ, ಪೀಪಿ, ಗನ್ ಮ್ಯಾನು, ಉಪಯೋಗಿಸಬಾರದು.
 ಮತದಾನದ ದಿವಸ ಮತದಾರ ಮಹಾಪ್ರಭುಗಳನ್ನ ಹುದ್ದರಿಗಳು ತಮ್ಮ ಗಾಡಿಯೊಳಗ ಕರಕೊಂಡು ಹೋಗಬಾರದು.
 (ಅಧಿಕಾರಿಗಳಿಗೆ ಗೊತ್ತಾಗೋ ಹಂಗ) ಹಣ- ಹೆಂಡ ಹಂಚಬಾರದು, ಇತ್ಯಾದಿ, ಇತ್ಯಾದಿ.

ಒಟ್ಟಿನೊಳಗ, ನಾಯಕರು ಜನಪ್ರೀತಿಯಿಂದ ಚುನಾವಣೆ ಗೆಲ್ಲಬೇಕೇ ಹೊರತು ಜನರನ್ನು ಪ್ರಲೋಭಿಸಿ ಅಥವಾ ಹೆದರಿಸಿ ಗೆಲ್ಲಬಾರದು ಅನ್ನೋದು ಮಾನೀಸಂ ಉದ್ದೇಶ.

ಇದು ಚುನಾವಣೆ ಘೋಷಣೆ ಆದತಕ್ಷಣ ಜಾರಿಗೆ ಬರತದ. ಚುನಾವಣೆ ಪ್ರಕ್ರಿಯೆ ಮುಗಿಯೋ ತನಕಾ ಇರತದ.

ಬಹುಮಟ್ಟಿಗೆ ಯಾವುದಾದರೂ ಕ್ಷೇತ್ರದೊಳಗ ಚುನಾವಣೆ ಬಂದರ ಆ ಇಡೀ ರಾಜ್ಯ ಅಥವಾ ಜಿಲ್ಲೆಗೆ ಇದು ಲಾಗೂ ಆಗತದ.

ಇದನ್ನು ಉಲ್ಲಂಘಿಸಿದರ ಜೈಲಿಗೆ ಹಾಕೋದರಿಂದ ಹಿಡದು ಮುಂದಿನ ಚುನಾವಣೆಗೆ ಅಯೋಗ್ಯರನ್ನಾಗಿ ಮಾಡೋ ತನಕಾ ಆಯೋಗಕ್ಕ ಅಧಿಕಾರ ಐತಿ.

ಹಿಂದೆಲ್ಲಾ ಚುನಾವಣೆ ಅಧಿಕಾರಿಗಳಿಗೆ ಹೆಚ್ಚಿನ ಡ್ಯೂಟಿ ಹಾಕಿ ಮಾನೀಸಂ ಮೇಲುಸ್ತುವಾರಿ ಕೊಡತಿದ್ದರು. ಈಗ ಮಾನೀಸಂ ಜಾರಿಗೆ ಅಂತನೇ ಬ್ಯಾರೆ ಅಧಿಕಾರಿ ಇರತಾರ.
ಆದರೂ ಚುನಾವಣೆಗೆ ಬಡಿದ ಮುಸುಕು ಸರದಿಲ್ಲ. ಅವು ಪಾರದರ್ಶಕ ಆಗಿಲ್ಲ ಅನ್ನೋ ಮಾತು ಕಡಿಮಿ ಆಗಿಲ್ಲ.

ಇವೆಲ್ಲವನ್ನೂ ನಾವು ಸರಿಯಾಗಿ ಪಾಲಿಸಲಿಕ್ಕೆ ಹತ್ತೇವೇನು? ಇದಕ್ಕ `ಇಲ್ಲ’ ಅನ್ನೋ ಯಾಷಿ ಮಾತಿನಗಿಂತಾ `ಕಮ್ಮಿ ಖರೇ’ ಅನ್ನೋ ಸಿಹಿಮಾತಿನ ಉತ್ತರನ ಸರಿ ಆದೀತು.
ಈ ಹಿನ್ನೆಲೆಯೊಳಗ ಒಂದು ವಿಷಯ ನೆನಪು ಆಗತದ.

`ಅವರು ಭಾಳ ಪ್ರತಿಭಾವಂತರು, ಒಳ್ಳೆಯವರು, ಇತರರಿಗೆ ಮಾದರಿಯಾಗಬಲ್ಲವರು ಆದರೆ ಅವರಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ” ಅನ್ನೋದು ಏನದಲಾ, ಅದು ನಂ ಹಿಂದೂಸ್ತಾನದಾಗ ಕೇಳಿ ಬರಕೋತನ ಇರೋ ಸಿಕ್ಕಾಪಟ್ಟೆ ಕೂಗುಗಳೊಳಗ ಒಂದು. ಈ ಮಾತಿಗೆ ತಕ್ಕಂತೆ ಇದ್ದ ಒಬ್ಬ ದೊಡ್ಡ ಮನಿಷ ಅಂದರ ಮಾಜಿ ಉಪಪ್ರಧಾನಿ, ಪ್ರಕಾಂಡಪಂಡಿತ ಬಾಬು ಜಗಜೀವನರಾಂ. ಅವರ ಧರ್ಮಪತ್ನಿ ಇಂದ್ರಾಣಿ ದೇವಿ. ಕಾನಪುರದ ಸಾಮಾಜಿಕ ಕಾರ್ಯಕರ್ತರ ಮಗಳಾದ ಇಂದ್ರಾಣಿ ದೇವಿ ಅವರು ಒಂದು ಪುಸ್ತಕ ಬರೆದರು ಅದರ ಹೆಸರು `ದೇಖಿ, ಸುನಿ, ಬೀತಿ ಬಾತೆಂ’ (ನೋಡಿದ, ಕೇಳಿದ, ಆಗಿ ಹೋದ ಮಾತುಗಳು).

ಅದರೊಳಗ ಒಂದು ಭಾರಿ ಮಜಾ ವಿಷಯ ಐತಿ. “ಅಮೆರಿಕಯಲ್ಲಿ ಬಿಳಿಯರು ಕರಿಯರಿಗೆ ಹಿಂಸೆ ಕೊಡಬಾರದು ಅಂತ ಅಬ್ರಹಾಂ ಲಿಂಕನ್ ಹಾಗೂ ಇತರ ನಾಯಕರು ಪ್ರಯತ್ನಿಸಿದಾಗ ಅಲ್ಲಿ ಭಯಂಕರ ಪ್ರತಿರೋಧ ಬಂತು. ಆದರೆ ಭಾರತದಲ್ಲಿ ಗುಲಾಮಗಿರಿ ಹಾಗೂ ಅಸ್ಪೃಶ್ಯತೆ ಯನ್ನು ಪ್ರತಿಬಂಧಿಸಿದಾಗ ಹಾಗಾಗಲಿಲ್ಲ” ಅನ್ನೋದು.

ಅದಕ್ಕೆ ಇಂದ್ರಾಣಿ ಅವರು ಕೊಡುವ ಕಾರಣ ಇನ್ನೂ ಮಜಾ. “ಯಾಕೆ ಗೊತ್ತೇ? ಈ ಕಾನೂನುಗಳನ್ನು ಈ ದೇಶದಲ್ಲಿ ಯಾರೂ ಸರಿಯಾಗಿ ಜಾರಿ ಮಾಡೋದಿಲ್ಲ. ಇಂತಹ ಎಷ್ಟು ಕಾನೂನು ಬಂದರೂ ಇಲ್ಲಿ ನಿಮ್ನ ವರ್ಗದ ಜನರ ಬದುಕು ಬದಲಾಗೋದಿಲ್ಲ” ಅಂತ ಅವರು ಷರಾ ಎಳೀತಾರ. ಆ ಪುಸ್ತಕ ಓದಿ ಕೆಳಗ ಇಡಬೇಕಾದರ ‘ಐವತ್ತು ವರ್ಷದ ಹಿಂದೆ ಹೇಳಿದ ಈ ಮಾತುಗಳು ಎಷ್ಟು ಪ್ರಸ್ತುತ’ ಅಂತ ಮತ್ತ ಕ್ಲೀಷೆಯೊಳಗ ಮಾತಾಡಬೇಕಾಗತದ.

ಹೆಚ್ಚಿನ ಮಾಹಿತಿಗೆ – ಇಲ್ಲಿ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...