ಚೀನಾ ಯಾವುದೇ ಭಾರತೀಯ ಭೂಪ್ರದೇಶವನ್ನು ವಶಪಡಿಸಿಕೊಂಡಿಲ್ಲ ಅಥವಾ ಗಡಿ ದಾಟಿಲ್ಲ ಎಂಬ ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಮೋದಿ ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಣಕ್ಕೆ ಒಪ್ಪಿಸಿದ್ದಾರೆ. ಭೂಮಿ ಚೀನಾದ್ದಾಗಿದ್ದರೆ ನಮ್ಮ ಯೋಧರನ್ನು ಏಕೆ ಕೊಲ್ಲಲಾಯಿತು, ಎಲ್ಲಿ ಕೊಲ್ಲಲಾಯಿತು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
PM has surrendered Indian territory to Chinese aggression.
If the land was Chinese:
1. Why were our soldiers killed?
2. Where were they killed? pic.twitter.com/vZFVqtu3fD— Rahul Gandhi (@RahulGandhi) June 20, 2020
ನಮ್ಮ ಗಡಿಯನ್ನು ಯಾರೂ ಪ್ರವೇಶಿಸದಿದ್ದರೆ ಮತ್ತು ನಮ್ಮ ಪ್ರದೇಶವನ್ನು ಯಾರೂ ಆಕ್ರಮಿಸದಿದ್ದರೆ ಈ ಘರ್ಷಣೆಯಾದರೂ ಏಕೆ? ನಮ್ಮ ಸೈನಿಕರ ಅಮೂಲ್ಯ ಜೀವಗಳು ಏಕೆ ಕಳೆದುಹೋದವು? ಗೊಂದಲ ಮತ್ತು ಕಾಳಜಿಯಿಂದ ಕೇಳುತ್ತಿದ್ದೇನೆ ದಯವಿಟ್ಟು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ರಾಜ್ಯಸಭಾ ಸದಸ್ಯ ವಿವೇಕ್ ಠಂಕ ಮನವಿ ಮಾಡಿದ್ದಾರೆ.
ಪ್ರಧಾನಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆಯೇ? ಹಾಗಿದ್ದರೆ, ಚೀನಾದೊಂದಿಗೆ ಮಾತುಕತೆ ನಡೆಸಲು ಕಾರಣವೇನು? ಮೇಜರ್ ಜನರಲ್ಗಳು ಏಕೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ಯಾವುದರ ಬಗ್ಗೆ ಎಂದು ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಟ್ವೀಟ್ ಮಾಡಿ ಪ್ರಧಾನಿಯವರು ಇಂದಿನ ಹೇಳಿಕೆಯು ದಾರಿತಪ್ಪಿಸುವ, ಆಥಾತಕಾರಿ ಮತ್ತು ವಿನಾಶಕಾರಿಯಾಗಿದೆ. ಇದು ಸಶಸ್ತ್ರ ಪಡೆಗಳನ್ನು ಮತ್ತು ಪ್ರತಿಯೊಬ್ಬ ಭಾರತೀಯರನ್ನು ಕೆರಳಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚೀನಾ ಯಾವುದೇ ಭಾರತೀಯ ಭೂಪ್ರದೇಶ ವಶಪಡಿಸಿಕೊಂಡಿಲ್ಲ, ಗಡಿಯೊಳಗೆ ಕಾಲಿಟ್ಟಿಲ್ಲ: ನರೇಂದ್ರ ಮೋದಿ