ಅಮೆರಿಕಾದಲ್ಲಿ ನಡೆದ ಜಾರ್ಜ್ ಫ್ಲಾಯ್ಡ್ ಹತ್ಯೆ ಮತ್ತು ಬ್ಲಾಕ್ ಲೈವ್ಸ್ ಮ್ಯಾಟರ್ ಆಂದೋಲನವು ಪ್ರಪಂಚದಾದ್ಯಂತ ವರ್ಣಭೇದ, ಜನಾಂಗೀಯ ತಾರತಮ್ಯತೆಯ ಕುರಿತು ಚರ್ಚೆ ಹುಟ್ಟು ಹಾಕಿದೆ. ಖ್ಯಾತನಾಮರು, ನಟಿಮಣಿಯರು, ಬ್ರಾಂಡೆಡ್ ಕಂಪನಿಗಳು ಸಹ ನಾವು ವರ್ಣಭೇದ ನೀತಿಯನ್ನು ವಿರೋಧಿಸುತ್ತೇವೆ ಎಂದು ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ. ಆದರೆ ಅವರು ನಿಜವಾಗಿಯು ಅದನ್ನು ಪಾಲಿಸುತ್ತಿದ್ದಾರೆಯೇ? ಈ ಕುರಿತ ಒಂದು ವಿಮರ್ಶಕ ನೋಟ ಇಲ್ಲಿದೆ.
“18-19 ನೇ ಶತಮಾನದಲ್ಲಿ ಇಡೀ ಪ್ರಪಂಚವನ್ನು ಯೂರೋಪಿನ ಬದಲು ಆಫ್ರಿಕಾವೇನಾದರೂ ಆಳಿದ್ದಲ್ಲಿ ಕಪ್ಪು ಬಣ್ಣಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿತ್ತು” ಎಂದು ಹಿರಿಯರೊಬ್ಬರು ಹೇಳಿದ ಮಾತು ಎಷ್ಟು ಸತ್ಯ ಎಂದು ಪದೇ ಪದೇ ಅನಿಸುತ್ತದೆ. ಬಿಳಿ ಶ್ರೇಷ್ಠ, ಕಪ್ಪು ಕನಿಷ್ಠ ಎಂಬ ಮಾನಸಿಕ ಶ್ರೇಷ್ಠತೆಯ ವ್ಯಸನ ಇಂದು ಬಹುತೇಕರನ್ನು ಆವರಿಸಿದೆ. ಇದಕ್ಕೆ ಪ್ರತಿರೋಧವೂ ಸಹ ಜೊತೆಗೆ ಹುಟ್ಟಿಕೊಂಡಿದೆ. ಆದರೆ ಆಳುವವರು ಕಪ್ಪು ವರ್ಣಿಯರನ್ನು, ಮಹಿಳೆಯರುನ್ನು, ಭಾರತದಂತಹ ದೇಶದಲ್ಲಿ ತಳಸಮುದಾಯದವರನ್ನು ಸದಾ ಶೋಷಿತಿ, ದುಡಿಸಿಕೊಂಡು, ದೌರ್ಜನ್ಯ ನಡೆಸಲು ಇದನ್ನು ಅಸ್ತ್ರವನ್ನಾಗಿಸಿಕೊಂಡಿದ್ದಾರೆ.
ಈಗ ಸದ್ಯ ಪ್ರಪಂಚದಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿನ ಕೆಲ ದ್ವಂದ್ವ ಹಿಪಾಕ್ರಸಿಗಳನ್ನು ನೋಡೋಣ. ಡೋವ್, ನೊಕ್ಜೆಮಾ, ವಿಮ್, ಬೆನ್ ಮತ್ತು ಜೆರ್ರಿ ಮತ್ತು ಕ್ಯೂ-ಟಿಪ್ಸ್ ಸೇರಿದಂತೆ ಬ್ರಾಂಡ್ಗಳನ್ನು ಹೊಂದಿರುವ ಗ್ರಾಹಕ ಸರಕುಗಳ ಬಹುರಾಷ್ಟ್ರೀಯ ಕಂಪನಿ ಯೂನಿಲಿವರ್, ಜನಾಂಗೀಯ ನ್ಯಾಯ ಚಳುವಳಿಗಳಿಗೆ ಸಾರ್ವಜನಿಕ ಬೆಂಬಲ ನೀಡುವುದಾಗಿ ಘೋಷಿಸುತ್ತದೆ.
ಯೂನಿಲಿವರ್ನ ವೆಬ್ಸೈಟ್ನ ಪ್ರಕಾರ, ಮಾನವ ಹಕ್ಕುಗಳನ್ನು ಗೌರವಿಸುವುದು ಅವರ ವ್ಯವಹಾರ ಮಾದರಿಯ ಮುಖ್ಯಭಾಗವಾಗಿದೆ. ಆದರೆ ಅದೇ ಕಂಪನಿಯು ಚರ್ಮವನ್ನು ಬೆಳ್ಳಗಾಗಿಸುತ್ತೇವೆ ಎಂದು ಸುಳ್ಳು ಜಾಹೀರಾತು ನೀಡಿ ಭಾರತದಲ್ಲಿ ಫೇರ್ & ಲವ್ಲಿ ಕ್ರೀಮ್ ಅನ್ನು ಮಾರಾಟ ಮಾಡುತ್ತದೆ!
“ಈ ಉತ್ಪನ್ನವು ಆಂತರಿಕ ವರ್ಣಭೇದ ನೀತಿಯ ಮೇಲೆ ನಿರ್ಮಿತವಾಗಿದೆ ಮತ್ತು ಲಾಭ ಪಡೆದಿದೆ. ಅದರ ಎಲ್ಲ ಗ್ರಾಹಕರಲ್ಲಿ ಕಪ್ಪು-ವಿರೋಧಿ ಭಾವನೆಗಳನ್ನು ಉತ್ತೇಜಿಸುತ್ತದೆ” ಎಂದು ಚೇಂಜ್.ಆರ್ಗ್ ಅರ್ಜಿಯು ಈ ಉತ್ಪನ್ನದ ಮಾರಾಟವನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ.
ಫೇರ್ & ಲವ್ಲಿ ಫೌಂಡೇಶನ್ ತಾನು ಮಹಿಳೆಯರ ಶಿಕ್ಷಣಕ್ಕೆ ಇರುವ ಅಡೆತಡೆಗಳ ವಿರುದ್ಧ ಹೋರಾಡುತ್ತದೆ ಎಂದು ಬರೆದುಕೊಂಡಿದೆ. ತನ್ನ ಇತಿಹಾಸದುದ್ದಕ್ಕೂ, ಫೇರ್ & ಲವ್ಲಿ ಮಹಿಳೆಯರಿಗೆ ತಮ್ಮ ಕನಸುಗಳೊಂದಿಗೆ ಹೋಗಲು ಪ್ರೇರೇಪಿಸಿದೆ ಎಂದು ಫೌಂಡೇಶನ್ನ ವೆಬ್ಸೈಟ್ ಹೇಳುತ್ತದೆ.
ಆದರೆ ಅನೇಕ ವಿಮರ್ಶಕರು ಗಮನಿಸಿದಂತೆ, ಆ ಕೆಲಸವು ಚರ್ಮದ ಮಿಂಚಿನಿಂದ ಉಂಟಾಗುವ ಹಾನಿಯನ್ನು ಅಳಿಸುವುದಿಲ್ಲ. ಇದು ಅಪಾಯಕಾರಿ ರಾಸಾಯನಿಕಗಳ ಬಳಕೆಯ ಮೂಲಕ ಜನಾಂಗೀಯ ಸೌಂದರ್ಯದ ಮಾನದಂಡಗಳನ್ನು ಎತ್ತಿಹಿಡಿಯುವ ಉದ್ಯಮವಾಗಿದೆ ಎಂದು ಟೀಕಿಸಿದ್ದಾರೆ.
ಇದೇ ರೀತಿ ಹಲವಾರು ಬಾಲಿವುಡ್ ನಟಿಯರೂ ಸಹ ಜನಾಂಗೀಯ ತಾರತಮ್ಯದ ವಿಚಾರದಲ್ಲಿ ದ್ವಂದ್ವತೆ ಮೆರೆದಿದ್ದಾರೆ. ಪ್ರಿಯಾಂಕಾ ಚೋಪ್ರಾ ಜಾರ್ಜ್ ಫ್ಲಾಯ್ಡ್ ಅವರ ಸಾವನ್ನು ಉಲ್ಲೇಖಿಸಿ “ಈ ರೇಸ್ ಯುದ್ಧವನ್ನು ಕೊನೆಗೊಳಿಸಲು” ಕರೆ ನೀಡಿದರು. ನಾವೆಲ್ಲರೂ ವರ್ಣಭೇದ ನೀತಿಯ ಬಗ್ಗೆ ನಮಗೆ ಶಿಕ್ಷಣ ನೀಡಬೇಕಾದ ಜವಾಬ್ದಾರಿಯ ಬಗ್ಗೆ ಬರೆದಿದ್ದರು. ಆದರೆ ಅವರೇ ಗಾರ್ನಿಯರ್ ಕಂಪನಿಯ ಚರ್ಮವನ್ನು ಹಗುರಗೊಳಿಸುವ ಮಾಯಿಶ್ಚರೈಸರ್ ಅನ್ನು ಪ್ರಚಾರ ಮಾಡುವ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
Here's your rac*st Pri selling skin whitening creams in India pic.twitter.com/O5P7cwqIUt
— Ali Baloch ✌?✌?✌? (@maXes_MB) June 3, 2020
ಸೋನಮ್ ಕಪೂರ್ ಅಹುಜಾ, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಸೇರಿದಂತೆ ಹಲವು ನಟಿಯರು ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನದಲ್ಲಿ ಪಾಲ್ಗೊಂಡರು. ಆದರೆ ಅವರೆ ಹಲವಾರು ಬಣ್ಣವರ್ಧಿತ ಕ್ರಿಮ್ಗಳ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಟೀಕೆ ಕೇಳಿಬಂದಿದೆ.
“ಜನಾಂಗೀಯ ನ್ಯಾಯಕ್ಕಾಗಿ ಸಾರ್ವಜನಿಕ ಬೆಂಬಲವನ್ನು ತೋರಿಸುವ ಬ್ರ್ಯಾಂಡ್ಗಳು ಇನ್ನೂ ಚರ್ಮವನ್ನು ಬಿಳುಪುಗೊಳಿಸುವ ಉತ್ಪನ್ನಗಳನ್ನು ಮಾರಾಟ ಮಾಡುವುದು ಅತ್ಯಂತ ಕಪಟವಾಗಿದೆ. ಅವರಿಗೆ ನಿಜವಾಗಿಯೂ ಕಾಳಜಿಯಿದ್ದರೆ ಕಪ್ಪು ಚರ್ಮವನ್ನು ಬಿಳಿ ಮಾಡುವ ತಮ್ಮ ಉತ್ಪನ್ನಗಳನ್ನು ನಿಲ್ಲಿಸಲು ಅಥವಾ ನಿಷೇಧಿಸಲು ಇದು ಸಮಯ”
ಶೇ. 77 ರಷ್ಟು ನೈಜೀರಿಯಾದ ಮಹಿಳೆಯರು ನಿಯಮಿತವಾಗಿ ಚರ್ಮದ ಹೊಳಪು ನೀಡುವ ಉತ್ಪನ್ನಗಳನ್ನು ಬಳಸುತ್ತಾರೆ. ಭಾರತದಲ್ಲಿ ಇದು ಶೇಕಡಾ 61 ರಷ್ಟಿದ್ದರೆ, ಚೀನಾದಲ್ಲಿ 40 ರಷ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
2017ರಲ್ಲಿ, ಚರ್ಮದ ಹೊಳಪು ನೀಡುವ ಉದ್ಯಮವು ಜಾಗತಿಕವಾಗಿ ಸುಮಾರು 5.8 ಬಿಲಿಯನ್ ಡಾಲರ್ ಆಗಿತ್ತು ದಿ ಗಾರ್ಡಿಯನ್ ವರದಿ ಮಾಡಿದೆ. ಪೂರ್ವ ಏಷ್ಯಾದಲ್ಲಿ ಮಧ್ಯಮ ವರ್ಗದವರು ಈ ಕ್ರೀಮ್ಗಳನ್ನು ಹೆಚ್ಚಾಗಿ ಉತ್ತೇಜಿಸಿದ್ದಾರೆ ಎನ್ನಲಾಗಿದೆ.
ಚರ್ಮವನ್ನು ಬಿಳಿ ಮಾಡುವ ವರ್ಣಭೇದ ನೀತಿಯ ಇತಿಹಾಸ
ಬಳಿ ವರ್ಣದವರಿಗೆ ಹೋಲಿಸಿದರೆ ಕಪ್ಪು ಬಣ್ಣದ ಏಷ್ಯಾದ ಪುರುಷರಿಗೆ ಉದ್ಯೋಗ ಸಿಗುವ ಸಾಧ್ಯತೆ ಕಡಿಮೆಯಿದೆ. ಅದೇ ರೀತಿ ಕಪ್ಪು ಚರ್ಮದ ಕಪ್ಪು ಹುಡುಗಿಯರನ್ನು ತಿಳಿ ಚರ್ಮದ ಹುಡುಗಿಯರಿಗಿಂತ ಶಾಲೆಯಿಂದ ಅಮಾನತುಗೊಳಿಸುವ ಸಾಧ್ಯತೆ ಮೂರು ಪಟ್ಟು ಹೆಚ್ಚು ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ. ಈ ರೀತಿಯ ತಾರತಮ್ಯದ ಲೆಕ್ಕವಿಲ್ಲದಷ್ಟು ಉದಾಹರಣೆಗಳಿವೆ.
ಕೇವಲ ನೈತಿಕ ಕಾರಣಕ್ಕಾಗಿ ಮಾತ್ರವಲ್ಲದೇ ಈ ಬಣ್ಣದ ಕ್ರೀಮ್ಗಳು ಹಲವು ರಾಸಾಯನಿಕಗಳನ್ನು ಒಳಗೊಂಡಿರುವುದರಿಂದ ಚರ್ಮಕ್ಕೂ, ಆರೋಗ್ಯಕ್ಕೂ ಅಪಾಯಕಾರಿಯಾದ್ದರಿಂದ ಅವುಗಳ ಬಳಕೆಯನ್ನು ನಿಲ್ಲಿಸಬೇಕಿದೆ. ಯಾವ ಬಣ್ಣವೂ ಶ್ರೇಷ್ಠವಲ್ಲ, ಯಾವ ಬಣ್ಣವೂ ಕನಿಷ್ಠವಲ್ಲ. ಎಲ್ಲವೂ ನೈಸರ್ಗಿಕವಾಗಿದ್ದು ಎಲ್ಲಕ್ಕೂ ತನ್ನದೇಯಾದ ಮಹತ್ವವಿದೆ ಎಂಬುದನ್ನು ಎಲ್ಲರೂ ಅರಿತು ನಿಜವಾಗಿ ಪಾಲಿಸಬೇಕಿದೆ. ಅದರ ಜೊತೆಗೆ ಜಾತಿ, ಧರ್ಮ, ಲಿಂಗ, ಪ್ರದೇಶ, ದೈಹಿಕ ವಿಕಲಚೇತನತೆ ಆಧಾರದಲ್ಲಿ ಯಾರನ್ನು ಯಾರೂ ಅಣಕಿಸುವ ಹಕ್ಕು ಹೊಂದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ.
ಮೂಲ: ಹಫ್ಪೋಸ್ಟ್
ಇದನ್ನೂ ಓದಿ: ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?