Homeಮುಖಪುಟದೇಶಪ್ರೇಮದ ಆಯಾಮಗಳನ್ನರಸುತ್ತ ಈ ಬಾರಿಯ ನಾವು-ನಮ್ಮಲ್ಲಿ ಗಂಗಾವತಿಯಲ್ಲಿ...

ದೇಶಪ್ರೇಮದ ಆಯಾಮಗಳನ್ನರಸುತ್ತ ಈ ಬಾರಿಯ ನಾವು-ನಮ್ಮಲ್ಲಿ ಗಂಗಾವತಿಯಲ್ಲಿ…

’ವರ್ತಮಾನ ಕರ್ನಾಟಕ’ಕ್ಕೆ ಸ್ಪಂದಿಸಬೇಕೆನ್ನುವ ತುಡಿತದಿಂದ 2010ರಿಂದ ಆರಂಭಗೊಂಡ ವಿಸ್ತಾರತೆ ಈ ಬಾರಿಯ ಗಂಗಾವತಿ ಕಾರ್ಯಕ್ರಮದ ಪರಿಕಲ್ಪನೆಯಾದ "ದೇಶಪ್ರೇಮದ ಆಯಾಮಗಳು"ಎಂಬುವಲ್ಲಿಗೆ ಬಂದು ನಿಂತಿದೆ.

- Advertisement -
- Advertisement -

ಯುವ ಬರಹಗಾರರು, ಸಾಹಿತಿಗಳು, ಚಿಂತಕರು ಒಂದೆಡೆ ಸೇರಿ ಸಮಕಾಲೀನ ಸಮಾಜಕ್ಕೆ ಮುಖಾಮುಖಿಯಾಗುತ್ತ ತಮ್ಮ ಓದು-ಬರಹವನ್ನು ತಾವೇ ಓರೆಗೆ ಹಚ್ಚುವ ವಿಭಿನ್ನ ಕಾರ್ಯಕ್ರಮ-ಕಮ್ಮಟವೇ ನಾವು-ನಮ್ಮಲ್ಲಿ. 2002ರಿಂದ ಆರಂಭವಾಗಿ ಹಲವು ಪುಟ್ಟ ಹೆಜ್ಜೆಗಳ ದಿಟ್ಟ ಪಯಣ ನಡೆಸುತ್ತಿರುವ ನಾವು-ನಮ್ಮಲ್ಲಿ ಕಮ್ಮಟವು ಈ ಬಾರಿ ಗಂಗಾವತಿಯಲ್ಲಿ ಜರುಗಲಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಜರುಗುವ ನಾವು ನಮ್ಮಲ್ಲಿ ಬಳಗ ಪ್ರತಿವರ್ಷವೂ ಹಿಗ್ಗುತ್ತಲೇ ಇದೆ.  ಸಾಹಿತಿ-ಬರಹಗಾರರಿಗೆ ಮಾತ್ರ ಸೀಮಿತವಾಗದಿರುವುದು, ಸಮಕಾಲೀನತೆಗೆ ತೆರೆದುಕೊಂಡಿರುವುದು ಮತ್ತು ಎಲ್ಲಾ ಜೀವಪರರನ್ನು ಮುಕ್ತವಾಗಿ ಅಪ್ಪಿಕೊಳ್ಳುವುದು ಇದಕ್ಕೆ ಬಹುಮುಖ್ಯ ಕಾರಣವಾಗಿದೆ.

ನಾವು ನಮ್ಮ ಬರಹಗಳ ಆಚೆಗೂ ’ವರ್ತಮಾನ ಕರ್ನಾಟಕ’ಕ್ಕೆ ಸ್ಪಂದಿಸಬೇಕೆನ್ನುವ ತುಡಿತದಿಂದ 2010ರಿಂದ ಆರಂಭಗೊಂಡ ವಿಸ್ತಾರತೆ ಈ ಬಾರಿಯ ಗಂಗಾವತಿ ಕಾರ್ಯಕ್ರಮದ ಪರಿಕಲ್ಪನೆಯಾದ “ದೇಶಪ್ರೇಮದ ಆಯಾಮಗಳು”ಎಂಬುವಲ್ಲಿಗೆ ಬಂದು ನಿಂತಿದೆ.

ದೇವನೂರು ಮಹಾದೇವ, ಭಾನುಮುಷ್ತಾಕ್, ಯು.ಆರ್.ಅನಂತಮೂರ್ತಿ, ಜಿ.ರಾಜಶೇಖರ್, ಫಣಿರಾಜ್, ಕೆ.ಟಿ.ಶಿವಪ್ರಸಾದ್‌, ಎಚ್‌.ನಾಗವೇಣಿ, ಹೆಚ್.ಎಸ್.ರಾಘವೇಂದ್ರರಾವ್, ಆಶಾದೇವಿ, ಓ.ಎಲ್.ನಾಗಭೂಷಣಸ್ವಾಮಿ, ವಿನಯಾ, ರಹಮತ್ ತರೀಕೆರೆ, ದಿನೇಶ್ ಅಮಿನ್ ಮಟ್ಟು, ಸುಗತ ಶ್ರೀನಿವಾಸರಾಜು, ಜಿ.ಎನ್.ದೇವಿ, ಅಜಿತ್ ಪಿಳ್ಳೆ, ಜಿ.ರಾಜಶೇಖರ್, ಫಣಿರಾಜು, ಕೆ.ನೀಲಾ, ಕೆ.ರಾಮಯ್ಯ, ರಾಜೇಂದ್ರ ಚೆನ್ನಿ ಒಳಗೊಂಡಂತೆ ಕರ್ನಾಟಕದ ಬಹುಪಾಲು ಹಿರಿ ಕಿರಿ ಬರಹಗಾರ್ತಿ ಬರಹಗಾರರು ನಾವುನಮ್ಮಲ್ಲಿ ಬಳಗದ ಬೆನ್ನಿಗಿರುವುದು ಕಾಲದ ಎಚ್ಚರವನ್ನು ಕಾಯ್ದುಕೊಳ್ಳಲು ನೆರವಾಗಿದೆ.

ಸ್ವಾತಂತ್ರ್ಯ ಚಳವಳಿಯ ಕಾಲ ಮತ್ತು ನಂತರದಲ್ಲಿ ಭಾರತೀಯರೆಲ್ಲರೂ ಒಂದು ಎಂಬ ಬೆಸುಗೆಗೆ ಕೆಲಸ ಮಾಡಿದ ದೇಶಪ್ರೇಮ ಎಂಬ ಪದವೀಗ ಜಾತಿ, ಧರ್ಮ, ಬಣ್ಣ, ಪ್ರದೇಶ, ಲಿಂಗದ ಆಧಾರದಲ್ಲಿ ಜನರನ್ನು ವಿಭಜಿಸಲು ಬಳಕೆಯಾಗುತ್ತಿರುವುದು ದುರಂತದ ಸಂಗತಿ. ಹಾಗಾಗಿ ನಿಜವಾದ ದೇಶಪ್ರೇಮವೆಂದರೇನು, ಅದರ ವಿವಿಧ ಆಯಾಮಗಳೇನು, ದೇಶಪ್ರೇಮದ ಅಪವ್ಯಾಖ್ಯಾನವನ್ನು ತಡೆಯಲು ನಾವು ಮಾಡಬೇಕಾದುದ್ದೇನು ಎಂಬುದರ ಮುಕ್ತ ಆರೋಗ್ಯಕರ ಚರ್ಚೆಗೆ ಈ ಬಾರಿಯ ನಾವು ನಮ್ಮಲ್ಲಿ ವೇದಿಕೆ ಸಿದ್ದಗೊಂಡಿದೆ.

ಆಗಸ್ಟ್‌ ಆರಂಭದಲ್ಲಿ ನಡೆಯಬೇಕಿದ್ದ ಈ ಬಾರಿಯ ನಾವು ನಮ್ಮಲ್ಲಿ ಕಾರ್ಯಕ್ರಮ ಕರ್ನಾಟಕಕ್ಕೆ ಅಪ್ಪಳಿಸಿದ ಪ್ರವಾಹ ಕಾರಣಕ್ಕೆ ಮೂಂದೂಡಿ ಈಗ ನವೆಂಬರ್‌ 16-17ರ ಶನಿವಾರ-ಭಾನುವಾರಕ್ಕೆ ನಿಗಧಿಯಾಗಿದೆ. ಗಂಗಾವತಿಯ ಐಎಂಎ ಸಭಾಂಗಣದಲ್ಲಿ ನಡೆಯುವ ನಾವು-ನಮ್ಮಲ್ಲಿ ಕಮ್ಮಟವನ್ನು ನವೆಂಬರ್‌ 16ರ ಶನಿವಾರ ಬೆಳಿಗ್ಗೆ 10:30ಕ್ಕೆ ಹಿರಿಯ ಚಿಂತಕರು ಮತ್ತು ಹೋರಾಟಗಾರರಾದ ಜಿ.ರಾಮಕೃಷ್ಣರವರು ಉದ್ಘಾಟಿಸಲಿದ್ದಾರೆ. ಹೋರಾಟಗಾರ್ತಿ, ಚಿಂತಕಿ ಕೆ.ನೀಲಾರವರು ಉದ್ಘಾಟನಾ ಗೋಷ್ಟಿಯ ಅಧ್ಯಕ್ಷತೆ ವಹಿಸಲಿದ್ದು, ಶೈಲಜಾ ಹಿರೇಮಠ, ಜೆ.ಭಾರದ್ವಾಜ್‌, ಸಿ.ಎಚ್‌ ನಾರಿನಾಳ್‌ ಉಪಸ್ಥಿತರಿರುತ್ತಾರೆ.

ಮಧ್ಯಾಹ್ನ 2 ಗಂಟೆಗೆ “ಭಾರತೀಯತೆಯ ವ್ಯಾಖ್ಯಾನಗಳು” ಗೋಷ್ಠಿ ಜರುಗಲಿದ್ದು ಚಿಂತಕರಾದ ಶಿವಸುಂದರ್‌ ಮತ್ತು ಅಂಕಣಕಾರರಾದ ಎ.ನಾರಾಯಣರವರು ಮಾತನಾಡಲಿದ್ದಾರೆ. ಡಾ.ಪ್ರಕಾಶ್‌ ಬಡವನಹಳ್ಳಿ ಮತ್ತು ಡಾ.ನರಸಿಂಹಮೂರ್ತಿ ಹಳೇಹಟ್ಟಿಯವರು ಪ್ರತಿಕ್ರಿಯೆ ನೀಡಲಿದ್ದಾರೆ. ಸಂಜೆ 4ಗಂಟೆಗೆ ಅರ್ಹನಿಶಿ ಪ್ರಕಾಶನ ಹೊರತಂದಿರುವ ನಾಗರಾಜ ಕೋರಿಯವರ “ತನುಬಿಂದಿಗೆ” ಕಥಾಸಂಕಲನ ಬಿಡುಗಡೆಯಾಗಲಿದೆ. ಯುವ ಲೇಖಕರಾದ ಚಿದಾನಂದಸಾಲಿ ಪುಸ್ತಕ ಬಿಡುಗಡೆ ಮಾಡಲಿದ್ದು ಅಮರೇಶ ನುಗಡೋಣಿಯವರು ಅಧ್ಯಕ್ಷೀಯ ನುಡಿಗಳನ್ನಾಡಲಿದ್ದಾರೆ.

ಸಂಜೆ 5:30ಕ್ಕೆ ಎಲ್ಲರ ಮೆಚ್ಚಿನ ಕವಿಗೋಷ್ಠಿ ನಡೆಯಲಿದ್ದು ಗಜಲ್‌ ಕವಿ ಆರಿಫ್‌ ರಾಜಾ ಆಶಯ ಮಾತುಗಳನ್ನಾಡಿದರೆ, ಹಿರಿಯ ಸಾಹಿತಿಗಳಾದ ಮಾಲತಿ ಪಟ್ಟಣಶೆಟ್ಟಿಯವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಮತ್ತು ಮುಖ್ಯವಾಗಿ ಹೈದರಾಬಾದ್‌ ಕರ್ನಾಟಕದ ಯುವಕವಿಗಳು ಕವನ ವಾಚಿಸಲು ಸಿದ್ದರಿದ್ದಾರೆ. ಅಲ್ಲಿಗೆ ಮೊದಲ ದಿನ ಕಮ್ಮಟ ಕೊನೆಗೊಳ್ಳಲಿದೆ.

ನವೆಂಬರ್‌ 17ರ ಭಾನುವಾರ ಬೆಳಿಗ್ಗೆ 9:30ಕ್ಕೆ ಎರಡನೇ ದಿನ ಕಮ್ಮಟ ಆರಂಭವಾಗಲಿದ್ದು ಮೊದಲ ಗೋಷ್ಠಿ “ಈ ಹೊತ್ತಿನ ಚುನಾವಣಾ ಬಿಕ್ಕಟ್ಟುಗಳು” ಕುರಿತು ನಡೆಯಲಿದೆ. ಬಸವತತ್ವದ ಶಾಸಕ ಎಂದೇ ಖ್ಯಾತರಾದ ಬಸವಕಲ್ಯಾಣದ ಶಾಸಕರಾದ ಬಿ.ನಾರಾಯಣ್‌ರಾವ್‌ ಮತ್ತು ಹೋರಾಟಗಾರರಾದ ಸಿದ್ದನಗೌಡ ಪಾಟೀಲ್‌ರವರು ಮಾತನಾಡಲಿದ್ದು, ನಯನಾ ಮೋಟಮ್ಮ ಮತ್ತು ಲಿಂಗರಾಜ ಹಟ್ಟಿಯವರು ಪ್ರತಿಕ್ರಿಯೆ ನೀಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಪ್ರಜಾಪ್ರಭುತ್ವ: ಆಶಯ ಮತ್ತು ಕನಸು ಗೋಷ್ಟಿ ನಡೆಯಲಿದ್ದು ಆರ್‌.ಪ್ರತಿಭಾ, ಅಶ್ವಿನಿ ಮದನಕರ, ಕೊಟ್ರಪ್ಪ ಹಿರೇಮಾಗಡಿಯವರು ಮಾತನಾಡಲಿದ್ದಾರೆ. ಹೈದರಾಬಾದ್‌ ಕರ್ನಾಟಕ ಹೋರಾಟಗಾರ ರಝಾಕ್‌ ಉಸ್ತಾದ್‌ರವರು ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೊನೆಯದಾಗಿ ಮಧ್ಯಾಹ್ನ 3;30ಕ್ಕೆ ಸಮಾರೋಪ ಗೋಷ್ಠಿ ಜರುಗಲಿದ್ದು ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು ಸಮಾರೋಪ ಮಾತುಗಳನ್ನಾಡಲಿದ್ದು, ವಿಜಯಪುರ ಅಕ್ಕಮಹಾದೇವಿ ವಿ.ವಿಯ ಉಪಕುಲಪತಿಗಳಾದ ಡಾ.ಸಬೀಹಾರವರು ಗೋಷ್ಠಿಯ ಅಧ್ಯಕ್ಷೀಯ ಮಾತಗಳನ್ನಾಡಲಿದ್ದಾರೆ. ಡಾ.ಶಿವಕುಮಾರ ಮಾಲಿಪಾಟೀಲ್‌, ಸಂಗಮೇಶ ಸುಗ್ರೀವ ಮತ್ತು ಮಹಾಲಕ್ಷ್ಮಿ ಕೇಸರಹಟ್ಟಿಯವರು ಉಪಸ್ಥಿತರಿರುತ್ತಾರೆ.

ಒಟ್ಟಿನಲ್ಲಿ ಎರಡು ದಿನಗಳ ಕಾಲ ಸಮಾನ ಆಶಯದ ಮನಸ್ಸುಗಳು ಸಮಾಜದ ಕರೆಗೆ ಕಿವಿಯಾಗುವ, ದನಿಯಾಗುವ ಮಹತ್ವಪೂರ್ಣ ಕಾರ್ಯಕ್ರಮ ಇದಾಗಲಿದ್ದು ಭಾಗವಹಿಸಲು ಆಸಕ್ತಿಯುಳ್ಳವರು ನಾವು ನಮ್ಮಲ್ಲಿ ಬಳಗದ ಜಾಜಿ ದೇವೆಂದ್ರಪ್ಪ 9481662735 ಮತ್ತು ಟಿ.ಎಂ ಉಷಾರಾಣಿ: 9036550365 ಇವರನ್ನು ಸಂಪರ್ಕಿಸಬಹುದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...