Homeಮುಖಪುಟದೇಶಪ್ರೇಮದ ಆಯಾಮಗಳನ್ನರಸುತ್ತ ಈ ಬಾರಿಯ ನಾವು-ನಮ್ಮಲ್ಲಿ ಗಂಗಾವತಿಯಲ್ಲಿ...

ದೇಶಪ್ರೇಮದ ಆಯಾಮಗಳನ್ನರಸುತ್ತ ಈ ಬಾರಿಯ ನಾವು-ನಮ್ಮಲ್ಲಿ ಗಂಗಾವತಿಯಲ್ಲಿ…

’ವರ್ತಮಾನ ಕರ್ನಾಟಕ’ಕ್ಕೆ ಸ್ಪಂದಿಸಬೇಕೆನ್ನುವ ತುಡಿತದಿಂದ 2010ರಿಂದ ಆರಂಭಗೊಂಡ ವಿಸ್ತಾರತೆ ಈ ಬಾರಿಯ ಗಂಗಾವತಿ ಕಾರ್ಯಕ್ರಮದ ಪರಿಕಲ್ಪನೆಯಾದ "ದೇಶಪ್ರೇಮದ ಆಯಾಮಗಳು"ಎಂಬುವಲ್ಲಿಗೆ ಬಂದು ನಿಂತಿದೆ.

- Advertisement -
- Advertisement -

ಯುವ ಬರಹಗಾರರು, ಸಾಹಿತಿಗಳು, ಚಿಂತಕರು ಒಂದೆಡೆ ಸೇರಿ ಸಮಕಾಲೀನ ಸಮಾಜಕ್ಕೆ ಮುಖಾಮುಖಿಯಾಗುತ್ತ ತಮ್ಮ ಓದು-ಬರಹವನ್ನು ತಾವೇ ಓರೆಗೆ ಹಚ್ಚುವ ವಿಭಿನ್ನ ಕಾರ್ಯಕ್ರಮ-ಕಮ್ಮಟವೇ ನಾವು-ನಮ್ಮಲ್ಲಿ. 2002ರಿಂದ ಆರಂಭವಾಗಿ ಹಲವು ಪುಟ್ಟ ಹೆಜ್ಜೆಗಳ ದಿಟ್ಟ ಪಯಣ ನಡೆಸುತ್ತಿರುವ ನಾವು-ನಮ್ಮಲ್ಲಿ ಕಮ್ಮಟವು ಈ ಬಾರಿ ಗಂಗಾವತಿಯಲ್ಲಿ ಜರುಗಲಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಜರುಗುವ ನಾವು ನಮ್ಮಲ್ಲಿ ಬಳಗ ಪ್ರತಿವರ್ಷವೂ ಹಿಗ್ಗುತ್ತಲೇ ಇದೆ.  ಸಾಹಿತಿ-ಬರಹಗಾರರಿಗೆ ಮಾತ್ರ ಸೀಮಿತವಾಗದಿರುವುದು, ಸಮಕಾಲೀನತೆಗೆ ತೆರೆದುಕೊಂಡಿರುವುದು ಮತ್ತು ಎಲ್ಲಾ ಜೀವಪರರನ್ನು ಮುಕ್ತವಾಗಿ ಅಪ್ಪಿಕೊಳ್ಳುವುದು ಇದಕ್ಕೆ ಬಹುಮುಖ್ಯ ಕಾರಣವಾಗಿದೆ.

ನಾವು ನಮ್ಮ ಬರಹಗಳ ಆಚೆಗೂ ’ವರ್ತಮಾನ ಕರ್ನಾಟಕ’ಕ್ಕೆ ಸ್ಪಂದಿಸಬೇಕೆನ್ನುವ ತುಡಿತದಿಂದ 2010ರಿಂದ ಆರಂಭಗೊಂಡ ವಿಸ್ತಾರತೆ ಈ ಬಾರಿಯ ಗಂಗಾವತಿ ಕಾರ್ಯಕ್ರಮದ ಪರಿಕಲ್ಪನೆಯಾದ “ದೇಶಪ್ರೇಮದ ಆಯಾಮಗಳು”ಎಂಬುವಲ್ಲಿಗೆ ಬಂದು ನಿಂತಿದೆ.

ದೇವನೂರು ಮಹಾದೇವ, ಭಾನುಮುಷ್ತಾಕ್, ಯು.ಆರ್.ಅನಂತಮೂರ್ತಿ, ಜಿ.ರಾಜಶೇಖರ್, ಫಣಿರಾಜ್, ಕೆ.ಟಿ.ಶಿವಪ್ರಸಾದ್‌, ಎಚ್‌.ನಾಗವೇಣಿ, ಹೆಚ್.ಎಸ್.ರಾಘವೇಂದ್ರರಾವ್, ಆಶಾದೇವಿ, ಓ.ಎಲ್.ನಾಗಭೂಷಣಸ್ವಾಮಿ, ವಿನಯಾ, ರಹಮತ್ ತರೀಕೆರೆ, ದಿನೇಶ್ ಅಮಿನ್ ಮಟ್ಟು, ಸುಗತ ಶ್ರೀನಿವಾಸರಾಜು, ಜಿ.ಎನ್.ದೇವಿ, ಅಜಿತ್ ಪಿಳ್ಳೆ, ಜಿ.ರಾಜಶೇಖರ್, ಫಣಿರಾಜು, ಕೆ.ನೀಲಾ, ಕೆ.ರಾಮಯ್ಯ, ರಾಜೇಂದ್ರ ಚೆನ್ನಿ ಒಳಗೊಂಡಂತೆ ಕರ್ನಾಟಕದ ಬಹುಪಾಲು ಹಿರಿ ಕಿರಿ ಬರಹಗಾರ್ತಿ ಬರಹಗಾರರು ನಾವುನಮ್ಮಲ್ಲಿ ಬಳಗದ ಬೆನ್ನಿಗಿರುವುದು ಕಾಲದ ಎಚ್ಚರವನ್ನು ಕಾಯ್ದುಕೊಳ್ಳಲು ನೆರವಾಗಿದೆ.

ಸ್ವಾತಂತ್ರ್ಯ ಚಳವಳಿಯ ಕಾಲ ಮತ್ತು ನಂತರದಲ್ಲಿ ಭಾರತೀಯರೆಲ್ಲರೂ ಒಂದು ಎಂಬ ಬೆಸುಗೆಗೆ ಕೆಲಸ ಮಾಡಿದ ದೇಶಪ್ರೇಮ ಎಂಬ ಪದವೀಗ ಜಾತಿ, ಧರ್ಮ, ಬಣ್ಣ, ಪ್ರದೇಶ, ಲಿಂಗದ ಆಧಾರದಲ್ಲಿ ಜನರನ್ನು ವಿಭಜಿಸಲು ಬಳಕೆಯಾಗುತ್ತಿರುವುದು ದುರಂತದ ಸಂಗತಿ. ಹಾಗಾಗಿ ನಿಜವಾದ ದೇಶಪ್ರೇಮವೆಂದರೇನು, ಅದರ ವಿವಿಧ ಆಯಾಮಗಳೇನು, ದೇಶಪ್ರೇಮದ ಅಪವ್ಯಾಖ್ಯಾನವನ್ನು ತಡೆಯಲು ನಾವು ಮಾಡಬೇಕಾದುದ್ದೇನು ಎಂಬುದರ ಮುಕ್ತ ಆರೋಗ್ಯಕರ ಚರ್ಚೆಗೆ ಈ ಬಾರಿಯ ನಾವು ನಮ್ಮಲ್ಲಿ ವೇದಿಕೆ ಸಿದ್ದಗೊಂಡಿದೆ.

ಆಗಸ್ಟ್‌ ಆರಂಭದಲ್ಲಿ ನಡೆಯಬೇಕಿದ್ದ ಈ ಬಾರಿಯ ನಾವು ನಮ್ಮಲ್ಲಿ ಕಾರ್ಯಕ್ರಮ ಕರ್ನಾಟಕಕ್ಕೆ ಅಪ್ಪಳಿಸಿದ ಪ್ರವಾಹ ಕಾರಣಕ್ಕೆ ಮೂಂದೂಡಿ ಈಗ ನವೆಂಬರ್‌ 16-17ರ ಶನಿವಾರ-ಭಾನುವಾರಕ್ಕೆ ನಿಗಧಿಯಾಗಿದೆ. ಗಂಗಾವತಿಯ ಐಎಂಎ ಸಭಾಂಗಣದಲ್ಲಿ ನಡೆಯುವ ನಾವು-ನಮ್ಮಲ್ಲಿ ಕಮ್ಮಟವನ್ನು ನವೆಂಬರ್‌ 16ರ ಶನಿವಾರ ಬೆಳಿಗ್ಗೆ 10:30ಕ್ಕೆ ಹಿರಿಯ ಚಿಂತಕರು ಮತ್ತು ಹೋರಾಟಗಾರರಾದ ಜಿ.ರಾಮಕೃಷ್ಣರವರು ಉದ್ಘಾಟಿಸಲಿದ್ದಾರೆ. ಹೋರಾಟಗಾರ್ತಿ, ಚಿಂತಕಿ ಕೆ.ನೀಲಾರವರು ಉದ್ಘಾಟನಾ ಗೋಷ್ಟಿಯ ಅಧ್ಯಕ್ಷತೆ ವಹಿಸಲಿದ್ದು, ಶೈಲಜಾ ಹಿರೇಮಠ, ಜೆ.ಭಾರದ್ವಾಜ್‌, ಸಿ.ಎಚ್‌ ನಾರಿನಾಳ್‌ ಉಪಸ್ಥಿತರಿರುತ್ತಾರೆ.

ಮಧ್ಯಾಹ್ನ 2 ಗಂಟೆಗೆ “ಭಾರತೀಯತೆಯ ವ್ಯಾಖ್ಯಾನಗಳು” ಗೋಷ್ಠಿ ಜರುಗಲಿದ್ದು ಚಿಂತಕರಾದ ಶಿವಸುಂದರ್‌ ಮತ್ತು ಅಂಕಣಕಾರರಾದ ಎ.ನಾರಾಯಣರವರು ಮಾತನಾಡಲಿದ್ದಾರೆ. ಡಾ.ಪ್ರಕಾಶ್‌ ಬಡವನಹಳ್ಳಿ ಮತ್ತು ಡಾ.ನರಸಿಂಹಮೂರ್ತಿ ಹಳೇಹಟ್ಟಿಯವರು ಪ್ರತಿಕ್ರಿಯೆ ನೀಡಲಿದ್ದಾರೆ. ಸಂಜೆ 4ಗಂಟೆಗೆ ಅರ್ಹನಿಶಿ ಪ್ರಕಾಶನ ಹೊರತಂದಿರುವ ನಾಗರಾಜ ಕೋರಿಯವರ “ತನುಬಿಂದಿಗೆ” ಕಥಾಸಂಕಲನ ಬಿಡುಗಡೆಯಾಗಲಿದೆ. ಯುವ ಲೇಖಕರಾದ ಚಿದಾನಂದಸಾಲಿ ಪುಸ್ತಕ ಬಿಡುಗಡೆ ಮಾಡಲಿದ್ದು ಅಮರೇಶ ನುಗಡೋಣಿಯವರು ಅಧ್ಯಕ್ಷೀಯ ನುಡಿಗಳನ್ನಾಡಲಿದ್ದಾರೆ.

ಸಂಜೆ 5:30ಕ್ಕೆ ಎಲ್ಲರ ಮೆಚ್ಚಿನ ಕವಿಗೋಷ್ಠಿ ನಡೆಯಲಿದ್ದು ಗಜಲ್‌ ಕವಿ ಆರಿಫ್‌ ರಾಜಾ ಆಶಯ ಮಾತುಗಳನ್ನಾಡಿದರೆ, ಹಿರಿಯ ಸಾಹಿತಿಗಳಾದ ಮಾಲತಿ ಪಟ್ಟಣಶೆಟ್ಟಿಯವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಮತ್ತು ಮುಖ್ಯವಾಗಿ ಹೈದರಾಬಾದ್‌ ಕರ್ನಾಟಕದ ಯುವಕವಿಗಳು ಕವನ ವಾಚಿಸಲು ಸಿದ್ದರಿದ್ದಾರೆ. ಅಲ್ಲಿಗೆ ಮೊದಲ ದಿನ ಕಮ್ಮಟ ಕೊನೆಗೊಳ್ಳಲಿದೆ.

ನವೆಂಬರ್‌ 17ರ ಭಾನುವಾರ ಬೆಳಿಗ್ಗೆ 9:30ಕ್ಕೆ ಎರಡನೇ ದಿನ ಕಮ್ಮಟ ಆರಂಭವಾಗಲಿದ್ದು ಮೊದಲ ಗೋಷ್ಠಿ “ಈ ಹೊತ್ತಿನ ಚುನಾವಣಾ ಬಿಕ್ಕಟ್ಟುಗಳು” ಕುರಿತು ನಡೆಯಲಿದೆ. ಬಸವತತ್ವದ ಶಾಸಕ ಎಂದೇ ಖ್ಯಾತರಾದ ಬಸವಕಲ್ಯಾಣದ ಶಾಸಕರಾದ ಬಿ.ನಾರಾಯಣ್‌ರಾವ್‌ ಮತ್ತು ಹೋರಾಟಗಾರರಾದ ಸಿದ್ದನಗೌಡ ಪಾಟೀಲ್‌ರವರು ಮಾತನಾಡಲಿದ್ದು, ನಯನಾ ಮೋಟಮ್ಮ ಮತ್ತು ಲಿಂಗರಾಜ ಹಟ್ಟಿಯವರು ಪ್ರತಿಕ್ರಿಯೆ ನೀಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಪ್ರಜಾಪ್ರಭುತ್ವ: ಆಶಯ ಮತ್ತು ಕನಸು ಗೋಷ್ಟಿ ನಡೆಯಲಿದ್ದು ಆರ್‌.ಪ್ರತಿಭಾ, ಅಶ್ವಿನಿ ಮದನಕರ, ಕೊಟ್ರಪ್ಪ ಹಿರೇಮಾಗಡಿಯವರು ಮಾತನಾಡಲಿದ್ದಾರೆ. ಹೈದರಾಬಾದ್‌ ಕರ್ನಾಟಕ ಹೋರಾಟಗಾರ ರಝಾಕ್‌ ಉಸ್ತಾದ್‌ರವರು ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೊನೆಯದಾಗಿ ಮಧ್ಯಾಹ್ನ 3;30ಕ್ಕೆ ಸಮಾರೋಪ ಗೋಷ್ಠಿ ಜರುಗಲಿದ್ದು ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು ಸಮಾರೋಪ ಮಾತುಗಳನ್ನಾಡಲಿದ್ದು, ವಿಜಯಪುರ ಅಕ್ಕಮಹಾದೇವಿ ವಿ.ವಿಯ ಉಪಕುಲಪತಿಗಳಾದ ಡಾ.ಸಬೀಹಾರವರು ಗೋಷ್ಠಿಯ ಅಧ್ಯಕ್ಷೀಯ ಮಾತಗಳನ್ನಾಡಲಿದ್ದಾರೆ. ಡಾ.ಶಿವಕುಮಾರ ಮಾಲಿಪಾಟೀಲ್‌, ಸಂಗಮೇಶ ಸುಗ್ರೀವ ಮತ್ತು ಮಹಾಲಕ್ಷ್ಮಿ ಕೇಸರಹಟ್ಟಿಯವರು ಉಪಸ್ಥಿತರಿರುತ್ತಾರೆ.

ಒಟ್ಟಿನಲ್ಲಿ ಎರಡು ದಿನಗಳ ಕಾಲ ಸಮಾನ ಆಶಯದ ಮನಸ್ಸುಗಳು ಸಮಾಜದ ಕರೆಗೆ ಕಿವಿಯಾಗುವ, ದನಿಯಾಗುವ ಮಹತ್ವಪೂರ್ಣ ಕಾರ್ಯಕ್ರಮ ಇದಾಗಲಿದ್ದು ಭಾಗವಹಿಸಲು ಆಸಕ್ತಿಯುಳ್ಳವರು ನಾವು ನಮ್ಮಲ್ಲಿ ಬಳಗದ ಜಾಜಿ ದೇವೆಂದ್ರಪ್ಪ 9481662735 ಮತ್ತು ಟಿ.ಎಂ ಉಷಾರಾಣಿ: 9036550365 ಇವರನ್ನು ಸಂಪರ್ಕಿಸಬಹುದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...