Homeಚಳವಳಿಸ್ವಾಮಿ ನಾರಾಯಣ ಗುರುಗಳು ಮತ್ತು ಮುಸ್ಲಿಮರು.. - ಇಸ್ಮತ್ ಪಜೀರ್

ಸ್ವಾಮಿ ನಾರಾಯಣ ಗುರುಗಳು ಮತ್ತು ಮುಸ್ಲಿಮರು.. – ಇಸ್ಮತ್ ಪಜೀರ್

- Advertisement -
- Advertisement -

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಳೆದೆರಡು ದಶಕಗಳ ಕೋಮು ಸಂಘರ್ಷದ ಇತಿಹಾಸ ತೆಗೆದು ನೋಡಿದರೆ‌ ಇಲ್ಲಿ ಕೋಮು ಬೆಂಕಿಗೆ ಅತೀ ಹೆಚ್ಚು ಉರುವಲಾಗಿ ಬಳಕೆಯಾದವರು ಬಿಲ್ಲವರು ಎಂಬ ಸತ್ಯ ನಮಗೆ ಮನವರಿಕೆಯಾಗುತ್ತದೆ.‌ ಅದಾಗ್ಯೂ ಆ ಸಮುದಾಯಕ್ಕೆ ವಸ್ತುಸ್ಥಿತಿ ಯಾಕೆ ಅರ್ಥವಾಗುತ್ತಿಲ್ಲ ಎನ್ನುವುದೇ ನಮ್ಮ ಮುಂದಿರುವ ಉತ್ತರವಿಲ್ಲದ ಪ್ರಶ್ನೆ.

ಹಾಗೆ ನೋಡ ಹೋದರೆ ಬಿಲ್ಲವರು ಮತ್ತು ಮುಸ್ಲಿಮರೇನೂ ಆ ಜನ್ಮ ವೈರಿಗಳಲ್ಲ. ಇಲ್ಲಿನ ಮುಸ್ಲಿಮರಲ್ಲಿ ದೊಡ್ಡ ಸಂಖ್ಯೆಯವರು ಒಂದು ಕಾಲದ ಬಿಲ್ಲವರೋ, ದಲಿತರೋ ಆಗಿದ್ದವರು. ಸ್ವಯಂ ಘೋಷಿತ ಉಚ್ಚ ಕುಲದವರ ಶೋಷಣೆ, ದೌರ್ಜನ್ಯ ತಾಳಲಾರದೇ ಇಸ್ಲಾಂ ಧರ್ಮ ಸ್ವೀಕರಿಸಿದವರು.

ಇದನ್ನೇ ಮಲಯಾಳಂ ಮಹಾಕವಿ ಕುಮಾರನಾಶಾನ್ ತನ್ನ ಕವಿತೆಯಲ್ಲಿ ಹೀಗೆ ಬರೆದಿದ್ದಾರೆ.
“ಆಟ್ಟುಂ ವಿಲಕ್ಕುಂ ವಯಿಯಾಟ್ಟುಂ
ಮಟ್ಟುಮೀ ಕೂಟರ್ ಸಹಿಚ್ಚು
ಪೊರುದಿಮುಟ್ಟಿ ವಿಟ್ಟದಾಂ ಹಿಂದು ಮದಂ
ಜಾದಿಯಿಲ್ ತಾನ್ನ, ಕೆಟ್ಟು ಕಯಿಂಞ ನಂಬೂದಿರಿ ಮದಂ…

ಕೇರಳತ್ತಿಂಗಳ್ ಮುಸಲ್ಮಾನ್‌ಮಾರ್
ಪಶ್ಚಿಮ ಪಾರಂಙಳಿಲ್ ನಿನ್ನೋ..
ವನ್‌ಕಡಲ್ ಚೀರುಂ ತಿರಗಳ್ ಕಡನ್ನೋ…
ಹಿಮಾಲಯಮೇರಿ ವನ್ನವರೇರೆಯಿಲ್ಲ…
ರೇರೆಚ್ಚೆರುಮನ್ ಪೋಯಿ ತೊಪ್ಪಿಯಿಟ್ಟಾಲ್ ಚಿತ್ರಯವನೆತ್ತಿ ಚಾರುತ್ತರುತ್ತಿಡಾಂ..
ಚೆಟ್ಟುಂ  ತಂಬುರಾರೇ…..”

ಸಾರಾಂಶ : ಅಟಕಾಯಿಸುವುದನ್ನು, ಹೊಡೆಯುವುದನ್ನು, ದಾರಿಯಲ್ಲಿ ಕಂಡರೆ ಬಡಿಯುವುದನ್ನು… ಸಹಿಸಿ ತಾಳ್ಮೆ ಕಳಕೊಂಡ ಆ ಜನರು ಜಾತಿ ಪದ್ಧತಿಯಲ್ಲಿ ಕೆಟ್ಟು ಕೆರ ಹಿಡಿದು ಹೋದ ನಂಬೂದಿರಿಗಳ ಅಧಿಪತ್ಯದ (ಬ್ರಾಹ್ಮಣ) ಮತವನ್ನು ತ್ಯಜಿಸಿದರು.
ಕೇರಳದ ಮುಸ್ಲಿಮರಲ್ಲಿ ಪಶ್ಚಿಮ ಘಟ್ಟಗಳ ದಾಟಿಯೋ, ಕಡಲ ತೆರೆಗಳ ದಾಟಿಯೋ, ಹಿಮಾಲಯವೇರಿ ಬಂದವರು ಹೆಚ್ಚಿಲ್ಲ. ಅವರು ಹೋಗಿ ಟೊಪ್ಪಿಯಿಟ್ಟಾಗ (ಇಸ್ಲಾಂ ಸ್ವೀಕರಿಸಿದಾಗ) ಅವರ ಮೇಲಿನ ಶೋಷಣೆ ಕೊನೆಗೊಂಡಿತು.
ಈ ಕವಿತೆ ಬರೆದ ಕುಮಾರನಾಶಾನ್ ಬೇರೆ ಯಾರೂ ಅಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳ ಖಾಸಾ ಶಿಷ್ಯ ಮತ್ತು ಸಂಗಡಿಗ.

ಕೇರಳದಲ್ಲಿ ಈಳವ (ಬಿಲ್ಲವ) ಸಮುದಾಯ ಮತ್ತಿತರ ಕೆಳವರ್ಗದ ಮೇಲೆ ತಿರುವಾಂಕೂರು ಅರಸರು ಮೇಲ್ವರ್ಗದವರ ಚಿತಾವಣೆಯ ಮೇರೆಗೆ ಹೇರಿದ್ದ ದುಷ್ಟ ಮತ್ತು ಅಮಾನವೀಯ ತೆರಿಗೆಯೊಂದಿತ್ತು. ಅದೇ ಮುಲಕ್ಕರ ಅರ್ಥಾತ್ ಸ್ತನ ತೆರಿಗೆ. ಕೆಳವರ್ಗದ ಮಹಿಳೆಯರು ತಮ್ಮ ಸ್ತನಗಳನ್ನು ಮುಚ್ಚುವಂತಿರಲಿಲ್ಲ. ಒಂದು ವೇಳೆ ಮುಚ್ಚಿದರೆ ಅದಕ್ಕೆ ಬಾರೀ ತೆರಿಗೆ ಕಟ್ಟಬೇಕಿತ್ತು. ಮಲಬಾರ್ ಪ್ರದೇಶವು‌ ಟಿಪ್ಪು ಸುಲ್ತಾನರ ಅಧೀನಕ್ಕೆ ಬಂದಾಗ ಟಿಪ್ಪು ಅಂತಹ ಅಮಾನವೀಯ ತೆರಿಗೆಯನ್ನು ತೆಗೆದು ಹಾಕಿದರು ಮಾತ್ರವಲ್ಲದೇ ಅಂತಹ ನೀಚ ಪದ್ಧತಿಯನ್ನು ಹೇರುವವರಿಗೆ ಖಡಕ್ ಎಚ್ಚರಿಕೆ ಕೊಟ್ಟು ಅದನ್ನು ಕೊನೆಗೊಳಿಸಿದರು. ಟಿಪ್ಪು ಸುಲ್ತಾನರ ಮರಣಾನಂತರ ಮತ್ತೆ ಅದೇ ಅಮಾನವೀಯ ಪದ್ಧತಿ ಜಾರಿಗೆ ಬಂತು.‌ ಆ ಬಳಿಕ ಅದರ ವಿರುದ್ಧ ಹೋರಾಟ ಮಾಡಿ ಅದಕ್ಕೆ ಕೊನೆ ಹಾಡಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು.

ಇಂದು ಅದೇ ಟಿಪ್ಪುವಿನ ಸಮುದಾಯವಾದ ಮುಸ್ಲಿಮರ ವಿರುದ್ಧ ಅದೇ ಬ್ರಾಹ್ಮಣಶಾಹಿ ಶಕ್ತಿಗಳು ಬಿಲ್ಲವರನ್ನು ಎತ್ತಿ ಕಟ್ಟಿ ತಮಾಷೆ ನೋಡುತ್ತಿದೆ. ಈ ವಾಸ್ತವ ಎಲ್ಲಿಯವರೆಗೆ ಬಿಲ್ಲವರಿಗೆ ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೆ ಅವರು ಬಲಿಪಶುವಾಗುವುದನ್ನು ತಡೆಯಲು ಯಾರಿಂದಲೂ‌ ಸಾಧ್ಯವಿಲ್ಲ.

ಸ್ವಾಮಿ ನಾರಾಯಣ ಗುರುಗಳು ಪ್ರವಾದಿ (ಸ) ಮತ್ತು ಇಸ್ಲಾಂ ಧರ್ಮದ ಬಗ್ಗೆ ಅತೀವ ಗೌರವವನ್ನೂ ಹೊಂದಿದ್ದರು.
ಅದಕ್ಕೆ ಅವರ ಒಂದು ಕವನವೇ ಸಾಕ್ಷಿ‌ಯೊದಗಿಸುತ್ತದೆ.

“ಪುರುಷಾಕೃತಿ ಪೂಂಡ ದೈವಮೋ…
ನರವಿಭ್ಯಾಕೃತಿ ಪೂಂಡ ಧರ್ಮಮೋ…
ಪರಮೇಶ ಪವಿತ್ರ ಪುತ್ರನೋ…
ಕರುಣಾಮಾನ್ ನೆಬಿ ಮುತ್ತು ರತ್ನಮೋ…..”
ಸಾರಾಂಶ : ಪುರುಷ ರೂಪ ತಾಳಿ ಬಂದ ದೇವನೋ…
ಮನುಷ್ಯ ರೂಪದಲ್ಲವತರಿಸಿದ ಧರ್ಮವೋ…
ಪರಮೇಶ್ವರ‌ನ ಪವಿತ್ರ ಪುತ್ರನೋ…
ಕರುಣಾಳು ಪ್ರವಾದಿ ಮುತ್ತು ರತ್ನವೋ…..

ಇಂದು ಅದೇ ಗುರುಗಳ ಹೆಸರಲ್ಲಿ ಹುಟ್ಟು ಹಾಕಲಾದ SNDP ಸ್ವಾಮಿ ನಾರಾಯಣಗುರು ಧರ್ಮ ಪರಿಪಾಲನಾ ಸಂಸ್ಥೆಯು ಇತಿಹಾಸವನ್ನು ಮರೆತು ಮತ್ತೆ ಅದೇ ಮನುವಾದಿಗಳ ತೆಕ್ಕೆಗೆ ಸರಿಯುತ್ತಿರುವುದನ್ನು ವರ್ತಮಾನದ ಕ್ರೂರ ವ್ಯಂಗ್ಯವೆನ್ನದೇ ವಿಧಿಯಿಲ್ಲ.

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ಇದನ್ನೂ ಓದಿ: ಒಂದು ಜಾತಿ, ಒಂದು ಮತ, ಒಂದೇ ದೇವರು ಎಂಬ ಸಂದೇಶ ಸಾರಿದ ಸಂತ ನಾರಾಯಣ ಗುರುಗಳು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...