ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸಿದ ಬಿಜೆಪಿಯ ಪ್ರಯತ್ನವನ್ನು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಇದು “ಸಂವಿಧಾನದ ಅತಿ ದೊಡ್ಡ ಉಲ್ಲಂಘನೆಯಾಗಿದೆ” ಎಂದು ಹೇಳಿದ್ದಾರೆ.
ಸದ್ಯ ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಾ ಜೈಲಿನಲ್ಲಿರುವ ಚಿದಂಬರಂರವರು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ರಾಷ್ಟ್ರಪತಿಗಳ ನಿಯಮವನ್ನು ರದ್ದುಪಡಿಸುವ ಆದೇಶಕ್ಕೆ ಸಹಿ ಹಾಕಲು ರಾಷ್ಟ್ರಪತಿಯ ಕಚೇರಿಯ ಮೇಲೆ ಹಲ್ಲೆ ನಡೆಸುವುದು ಏಕೆ? ಬೆಳಿಗ್ಗೆ 4.00 ಗಂಟೆಗೆ ಎಚ್ಚರಗೊಳ್ಳುವುದು ಏತಕ್ಕಾಗಿ? ಬೆಳಿಗ್ಗೆ 9.00 ರವರೆಗೆ ಅದು ಏಕೆ ಕಾಯುತ್ತಿರಲಿಲ್ಲ? ”ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಶಿವಸೇನೆ ನೇತೃತ್ವದ ಒಕ್ಕೂಟದಿಂದ ಈ ವಾರದಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗಿರುವ ಉದ್ಧವ್ ಠಾಕ್ರೆ ಅವರಿಗೆ ಅಭಿನಂದನೆ ಸಲ್ಲಿಸಿರುವ ಅವರು ಕೆಲ ಸಂದೇಶಗಳನ್ನು ನೀಡಿದ್ದಾರೆ.
“ದಯವಿಟ್ಟು ನಿಮ್ಮ ವೈಯಕ್ತಿಕ ಪಕ್ಷದ ಹಿತಾಸಕ್ತಿಗಳನ್ನು ಗೌಣಗೊಳಿಸಿ ಮತ್ತು ರೈತರ ಕಲ್ಯಾಣ, ಹೂಡಿಕೆ, ಉದ್ಯೋಗ, ಸಾಮಾಜಿಕ ನ್ಯಾಯ ಮತ್ತು ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಎಂಬ ಸಾಮಾನ್ಯ ಹಿತಾಸಕ್ತಿಗಳನ್ನು ಕಾರ್ಯಗತಗೊಳಿಸಲು ಮೂರು ಪಕ್ಷಗಳು ಒಟ್ಟಾಗಿ ಕೆಲಸ ಮಾಡಿ” ಸಲಹೆ ನೀಡಿದ್ದಾರೆ.
ಭಾರತದಲ್ಲಿ ಆಡಳಿತ ನಡೆಸಲು ಸಮ್ಮಿಶ್ರ ಸರ್ಕಾರ ಸಹ ಉತ್ತಮ ವಿಧಾನಗಳಲ್ಲಿ ಒಂದಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.
“ಸಂಕೀರ್ಣ, ವೈವಿಧ್ಯಮಯ, ಬಹುತ್ವದ ಸಮಾಜವನ್ನು ಸಮ್ಮಿಶ್ರ ಸರ್ಕಾರಗಳು ಉತ್ತಮವಾಗಿ ನಿಯಂತ್ರಿಸುತ್ತಾರೆ. ಮತ್ತು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ರಾಜಿ ಮಾಡಿಕೊಳ್ಳಲು ಮತ್ತು ಒಪ್ಪಿಕೊಳ್ಳಲು ಕಲಿಯುತ್ತಾರೆ” ಎಂದು ಸಂಸದೀಯ ಪ್ರಜಾಪ್ರಭುತ್ವದ ವಿಕಾಸವನ್ನು ಗಮನಿಸಿದ ಜನರು ಅರಿತಿದ್ದಾರೆ ಎಂದು ಚಿದಂಬರಂ ತಿಳಿಸಿದ್ದಾರೆ.