Homeಕರ್ನಾಟಕಎಲೆಮರೆ-8 : ನಮ್ಮ ನಡುವಿನ ಮಂದಣ್ಣ - ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ

ಎಲೆಮರೆ-8 : ನಮ್ಮ ನಡುವಿನ ಮಂದಣ್ಣ – ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ

- Advertisement -
- Advertisement -

ಎಲೆಮರೆ-8

ಅರುಣ್‌ ಜೋಳದ ಕೂಡ್ಲಿಗಿ

ಕಳೆದ ಹದಿನಾಲ್ಕು ವರ್ಷದಿಂದ ಪಂಪಯ್ಯನ ಜತೆಗಿನ ಒಡನಾಟವನ್ನು `ಮಳೇಮಠದ ಪಂಪಯ್ಯನಿಂದಿಡಿದು ಪರಿಸರದ ಪಂಪಯ್ಯನವರೆಗೆ ಎನ್ನಬಹುದೇನೋ’. ಹೌದು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾನು ಎಂ.ಎ.ಪಿಹೆಚ್.ಡಿಗೆ 2002-03 ರ ಹೊತ್ತಿಗೆ ವಿದ್ಯಾರ್ಥಿಯಾಗಿ ಸೇರಿದ ಆಸುಪಾಸಿನಲ್ಲೆ ಮೆಕಾನಿಕಲ್ ಡಿಪ್ಲೊಮಾ ಓದಿದ್ದ ಪಂಪಯ್ಯ ಕನ್ನಡ ವಿವಿಯ ವಿದ್ಯಾರಣ್ಯದಲ್ಲಿ ಬುಕ್ ಅಂಡ್ ಜನರಲ್ ಸ್ಟೋರ್ ತೆರೆದು ವ್ಯಾಪಾರಿಯಾಗಿ ಕ್ಯಾಂಪಸ್ ಪ್ರವೇಶಿಸಿದರು. ನಾವು ಆತನ ಅಂಗಡಿಯ ನಿತ್ಯದ ಒಡನಾಡಿಗಳಾದೆವು. ಅವರ ಮಾತುಕತೆ ನಮ್ಮನ್ನು ಆಪ್ತರನ್ನಾಗಿಸಿತು. ಹಕ್ಕಿ, ಹಾವು, ಕ್ರಿಮಿ, ಕೀಟ, ಕರಡಿಗಳ ಬಗ್ಗೆ ನಮಗೆ ತಿಳಿಯದ ಸಂಗತಿಗಳನ್ನು ಅಚ್ಚರಿಪಡುವಂತೆ ಕಥನ ಮಾಡಿ ವಿವರಿಸುತ್ತಿದ್ದರು. ಕನ್ನಡ ಸಾಹಿತ್ಯ ಜಾನಪದ ಅಂತೆಲ್ಲಾ ಪಾಠ ಮಾಡುವ ಅಧ್ಯಾಪಕರ ಜತೆ ಪಂಪಯ್ಯನೂ ಆಗ ಪರಿಸರದ ಅಧ್ಯಾಪಕನಂತೆ ಕಂಡದ್ದು ವಿಶೇಷವೇನಲ್ಲ. ಹಾಗಾಗಿಯೇ ಪ್ರೊ.ರಹಮತ್ ತರೀಕೆರೆ ಅವರು ಪಂಪಯ್ಯನನ್ನು ತೇಜಸ್ವಿ ಜೊತೆಗಿನ ಮಂದಣ್ಣನಿದ್ದಂತೆ ಎನ್ನುತ್ತಾರೆ.

ವಿದ್ಯಾರಣ್ಯ ಕ್ಯಾಂಪಸ್ಸಿನ ಮತ್ತು ಕಮಲಾಪುರದ ಅವರ ಜನರಲ್ ಸ್ಟೋರುಗಳಿಗೆ ಗುಡ್‍ಬೈ ಹೇಳಿದ ನಂತರ ವ್ಯಾಪಾರಿ ಪಂಪಯ್ಯನು ಪೂರ್ಣಪ್ರಮಾಣದಲ್ಲಿ `ಪರಿಸರದ ಪಂಪಯ್ಯ’ನಾಗಿ ಬದಲಾದರು. ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾದ ಇವರು ಹಂಪಿ ಪರಿಸರದ ಪಕ್ಷಿಪ್ರಾಣಿಗಳನ್ನು ಒಳಗೊಂಡ ವನ್ಯಜೀವಿಗಳನ್ನು ಸೆರೆಹಿಡಿದು ಈ ಭಾಗದ ಜೀವವೈವಿಧ್ಯಗಳನ್ನು ಲೋಕದೆದುರು ತೆರೆದಿಟ್ಟರು.

ಈತನಕ ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಅಂತೆಯೇ ಹಾವುಗಳ ಬಗೆಗೆ ಜನರಿಗೆ ತಿಳಿವನ್ನೂ ಮೂಡಿಸಿದ್ದಾರೆ. ಇದರ ಪರಿಣಾಮವಾಗಿ, ಹಾವುಕಂಡರೆ ಹೊಡೆಯಲು ಕೋಲು ಹುಡುಕುತ್ತಿದ್ದವರು ಈಗ ಪಂಪಯ್ಯನ ನಂಬರಿಗೆ ಕಾಲ್ ಮಾಡಿ ಹಾವು ಹಿಡಿಯಲು ಕರೆಯುತ್ತಾರೆ.

ಹಂಪಿಗೆ ಬರುವ ವನ್ಯಜೀವಿ ಪ್ರೇಮಿಗಳಿಗೆ, ಫೋಟೋಗ್ರಾಫರ್‍ಗಳಿಗೆ ಈ ಭಾಗದಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆಯಿತ್ತು. ಕಾರಣ ಹಂಪಿಯ ಗೈಡ್‍ಗಳೆಲ್ಲಾ ಸ್ಮಾರಕಗಳಿಗೆ ಸೀಮಿತರಾದವರು. ಅಂತಹ ಕೊರತೆಯನ್ನು ಪಂಪಯ್ಯ ತುಂಬಿದರು. ಮೂರ್ನಾಲ್ಕು ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಪಂಪಯ್ಯ ಇದೀಗ ಯಾರೇ ವನ್ಯಜೀವಿ ಫೋಟೋಗ್ರಾಫರ್ಸ್ ಬಂದರೆ ಆತನೆ ಮಾರ್ಗದರ್ಶಿ. ಸ್ವತಃ ಪಂಪಯ್ಯ ಅತ್ಯುತ್ತಮ ವನ್ಯಜೀವಿ ಫೋಟೋಗ್ರಾಫರ್. ಹಾರ್ನ್‍ಬಿಲ್‍ನಂತಹ ಅಂತಾರಾಷ್ಟ್ರೀಯ ವನ್ಯಜೀವಿ ಪತ್ರಿಕೆ ಮುಖಪುಟದಲ್ಲಿ ಪಂಪಯ್ಯ ಕ್ಲಿಕ್ಕಿಸಿದ ಬೆನ್ನ ಮೇಲೆ ಮರಿಗಳ ಹೊತ್ತ ಕರಡಿಯ ಫೋಟೋ ಪ್ರಕಟವಾಗಿತ್ತು. ದರೋಜಿಯ ಕರಡಿಧಾಮವನ್ನು ಒಳಗೊಂಡ ಅರಣ್ಯ ಇಲಾಖೆಯ ವರದಿ ಇತ್ಯಾದಿಗಳ ಸರಕಾರಿ ದಾಖಲೆಗಳ ಮುಖಪುಟವನ್ನೂ, ಕನ್ನಡ ವಿಶ್ವವಿದ್ಯಾಲಯದ ವಾರ್ಷಿಕ ಕ್ಯಾಲೆಂಡರುಗಳನ್ನೂ ಪಂಪಯ್ಯನ ಫೋಟೋಗಳು ಆವರಿಸಿವೆ. ಹಂಪಿ ಉತ್ಸವಗಳಲ್ಲಿ ಫೋಟೋಪ್ರದರ್ಶನ ಮಾಡಿ ಜನಸಾಮಾನ್ಯರ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಹೀಗೆ ವನ್ಯಜೀವಿ ಫೋಟೋಗ್ರಫಿಗೆ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ. ವನ್ಯಜೀವಿ ಫೋಟೋಗ್ರಫಿಯಲ್ಲಿ ಪಂಪಯ್ಯ ತನ್ನದೇ ಆದ ಗುರುತನ್ನು ಕಾಯ್ದುಕೊಂಡಿದ್ದಾರೆ.

ವ್ಯಕ್ತಿಯಾಗಿ ಪಂಪಯ್ಯ ವನ್ಯಜೀವಿ ಪರಿಸರ ಅಂತೆಲ್ಲಾ ಹತ್ತಾರು ಸೂಕ್ಷ್ಮಗಳನ್ನು ಅರಿತಿರುವ ಇವರು ಶಾಲಾ ಮಕ್ಕಳಿಗೂ, ಹಲವು ಬಗೆಯ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರಿಗೂ ಭಾಷಣ, ಸಂವಾದ, ಚರ್ಚೆಗಳ ಮೂಲಕ ಈ ಅರಿವನ್ನು ಸಮುದಾಯಕ್ಕೆ ವಿಸ್ತರಿಸುತ್ತಿದ್ದಾರೆ. ಈ ಕಾರಣಕ್ಕೆ ಪಂಪಯ್ಯ ಸಮುದಾಯದ ಪರಿಸರ ಪ್ರಜ್ಞೆಯನ್ನು ಸೂಕ್ಷ್ಮಗೊಳಿಸುತ್ತಿದ್ದಾರೆ. ಇವರು ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿದ್ದಾಗಲೂ, ಕಮಲಾಪುರ ಪಟ್ಟಣ ಪಂಚಾಯ್ತಿಯ ಸದಸ್ಯ ಮತ್ತು ಅಧ್ಯಕ್ಷರಾಗಿದ್ದಾಗಲೂ ಈ ಸರಕಾರಿ ಸಂಸ್ಥೆಗಳನ್ನು ಪರಿಸರ ಪ್ರಜ್ಞೆಯನ್ನು ರೂಪಿಸುವುದಕ್ಕೆ ಬಳಸಿಕೊಂಡದ್ದು ವಿಶೇಷ.

ಇದೀಗ ತನ್ನ ಪರಿಸರದ ಅರಿವು ಮತ್ತು ಕಾಳಜಿಯನ್ನು ವಿಸ್ತರಿಸುವ ಪ್ರಾಯೋಗಿಕ ಹಂತಕ್ಕೆ ಪಂಪಯ್ಯ ಬಂದಿದ್ದಾರೆ. ಐದು ವರ್ಷದ ಹಿಂದೆ ಬರಡಾಗಿದ್ದ ನೆಲವೊಂದನ್ನು ಹಸಿರಾಗಿಸಿ ಗಮನ ಸೆಳೆದಿದ್ದಾರೆ. ಹೊಸಪೇಟೆ ತಾಲೂಕಿನ ಕಮಲಾಪುರದಿಂದ ನಾಲ್ಕು ಕಿಲೋಮೀಟರ್ ಅಂತರದ ತುಂಗಭದ್ರಾ ಜಲಾಶಯದ (ಎಚ್.ಎಲ್.ಸಿ) ಮೇಲ್ಮಟ್ಟದ ಕಾಲುವೆಯ ಬಳಿ ತುಂಗಭದ್ರ ಮಂಡಳಿಗೆ ಸೇರಿದ ಮೂರುವರೆ ಎಕರೆ ಪ್ರದೇಶದಲ್ಲಿ 60 ಬಗೆಯ 800ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದದ್ದು ಬಿಟ್ಟರೆ, ನೀರು ಗೊಬ್ಬರ ಪಾಲನೆಯನ್ನು ಪಂಪಯ್ಯನೇ ಸ್ವಂತ ಖರ್ಚಿನಲ್ಲಿ ನಿರ್ವಹಿಸಿದ್ದಾರೆ.

ಇದಕ್ಕೆ ಹೊಂದಿಕೊಂಡಂತೆ ಪಂಪಯ್ಯನ ಸ್ವಂತದ ಒಂದೆಕರೆ ಹೊಲವೂ ಕಾಡಿನಂತಿದೆ. ಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳ ನೀರಿನ ದಾಹ ತಣಿಸಲು ಕೃಷಿಹೊಂಡ ಹಾಕಿಸಿದ್ದಾರೆ. ಫೋಟೋಗ್ರಫಿಗಾಗಿ ಬಂಕರ್ ನಿರ್ಮಿಸಿದ್ದಾರೆ. ಇದೀಗ ಹತ್ತಾರು ವಿಧದ ಪಕ್ಷಿ ಪ್ರಾಣಿ ವನ್ಯಜೀವಿಗಳು ಈ ಪುಟ್ಟ ಅರಣ್ಯದ ಸಂಗಾತಿಗಳಾಗಿವೆ. ಹೀಗೆ ಕಮಲಾಪುರದ ಮಳೇಮಠದ ಪಂಪಯ್ಯ ನಿಧಾನಕ್ಕೆ `ಪರಿಸರದ ಪಂಪಯ್ಯ’ನಾಗಿ ರೂಪಾಂತರಗೊಂಡ ಪಯಣವೇ ಕುತೂಹಲಕಾರಿಯಾಗಿದೆ.

`1994 ರಲ್ಲಿ ದರೋಜಿ ಕರಡಿಧಾಮ ಆದಾಗ ಅದರ ಓಡಾಟದಲ್ಲಿ ಸಿಕ್ಕ ಫೋಟೋಗ್ರಾಫರ್ಸ್, ವನ್ಯಜೀವಿ ತಜ್ಞರುಗಳ ಜತೆಗಿನ ಒಡನಾಟವೇ ನನ್ನನ್ನು ಪರಿಸರಕ್ಕೆ ಹತ್ತಿರ ತಂದಿತು. ಅಲ್ಲಿಂದ ನನ್ನ ಆಸಕ್ತಿ ವನ್ಯಜೀವಿ ಪರಿಸರ ಫೋಟೋಗ್ರಫಿ ಅಂತೆಲ್ಲಾ ಹೆಚ್ಚಾಯಿತು, ಇದೀಗ ಪುಟ್ಟ ಕಾಡು ಬೆಳೆಸುವ ಮಟ್ಟಕ್ಕೆ ಬಂದಿದೆ. ಪರಿಸರದ ಬಗೆಗೆ ಸಮುದಾಯಗಳಿಗೆ, ಈಗ ಬೆಳೆಯುವ ಮಕ್ಕಳಿಗೆ ಹೆಚ್ಚಿನ ತಿಳವಳಿಕೆ ಕೊಡಬೇಕು ಎನ್ನುವುದು ನನ್ನ ಕನಸು’ ಎಂದು ಪಂಪಯ್ಯ ಹೇಳುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...