Homeಮುಖಪುಟಎಂಎಸ್‌ಪಿ ಕುರಿತು ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ಎಐಕೆಎಂಎಸ್ ಆರೋಪ

ಎಂಎಸ್‌ಪಿ ಕುರಿತು ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ಎಐಕೆಎಂಎಸ್ ಆರೋಪ

ಭಾರತೀಯ ಸಂಪನ್ಮೂಲಗಳನ್ನು ವಿದೇಶಿ ಕಂಪನಿಗಳಿಗೆ ಹಸ್ತಾಂತರಿಸುವುದನ್ನು ಪ್ರಧಾನ ಮಂತ್ರಿ “ಆತ್ಮ್ ನಿರ್ಭರ್” ಎಂದು ಕರೆಯುತ್ತಾರೆ.

- Advertisement -
- Advertisement -

ಪ್ರಮುಖ ರೈತ ಸಂಘಟನೆಗಳಲ್ಲಿ ಒಂದಾದ ಆಲ್ ಇಂಡಿಯಾ ಕಿಸಾನ್ ಮಜ್ದೂರ್ ಸಭಾ, (ಎಐಕೆಎಂಎಸ್) ಪ್ರಧಾನ ಮಂತ್ರಿಯವರು ರೈತರ ಕುರಿತು ಸಂಸತ್ತಿನಲ್ಲಿ ಅಪಹಾಸ್ಯ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ತಮ್ಮದೇ ದೇಶದ ಹೆಣಗಾಡುತ್ತಿರುವ ರೈತರನ್ನು ‘ವಿದೇಶಿ ವಿನಾಶಕಾರಿ ಸಿದ್ಧಾಂತಕ್ಕೆ’ (FDI-Foreign Destructive Ideology) ತಲೆ ಒಡ್ಡಿದವರು ಮತ್ತು ರೈತರ ಹೋರಾಟದ ವಿಷಯಗಳ ಬಗ್ಗೆ ಅಜ್ಞಾನವನ್ನು ಹೊಂದಿದವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಪ್ರಧಾನಿ ಹೇಳಿಕೆಗೆ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಹಕ್ಕೊತ್ತಾಯಗಳನ್ನು ಮುಂದಿಡುತ್ತಿರುವ ರೈತರಿಗೆ ‘ಆಂದೋಲನ್ ಜೀವಿ’ ಎಂಬ ಹಣೆಪಟ್ಟೆ ಕಟ್ಟುವುದು ರೈತರಿಗೆ ಮಾಡಿದ ಅವಮಾನ ಮತ್ತು ಅವರ ಅಧಿಕಾರದ ದುರುಪಯೋಗವಾಗಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ. ಆಶಿಶ್ ಮಿತ್ತಲ್ ತಿಳಿಸಿದ್ದಾರೆ.

11 ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ರೈತರ ಹಕ್ಕುಗಳನ್ನು ಸ್ಪಷ್ಟವಾಗಿ ಹಾಳುಮಾಡುವ ವಿವಿಧ ಷರತ್ತುಗಳ ಕುರಿತು ರೈತ ಮುಖಂಡರು ಗಮನಸೆಳೆದಿದ್ದಾರೆ. ಇದೆಲ್ಲ ಪ್ರಧಾನ ಮಂತ್ರಿಗೆ ತಿಳಿದಿಲ್ಲ ಅನ್ನುವುದನ್ನು ಒಪ್ಪಲಾದೀತೆ? ಇದು ತಮಾಷೆಯಲ್ಲ, ಸತ್ಯವೆಂದರೆ ಪ್ರಧಾನಿ ಸಮಸ್ಯೆಯನ್ನು ಪರಿಹರಿಸಲು ಬಯಸುವುದಿಲ್ಲ ಮತ್ತು ಕಾರ್ಪೊರೇಟ್ ಲೂಟಿಯನ್ನು ಉತ್ತೇಜಿಸಲು ಮುಂದುವರಿಯಲು ಬಯಸುತ್ತಾರೆ ಎಂದು ಸಂಘಟನೆ ಆರೋಪಿಸಿದೆ.

ಮಂಡಿ ಬೈಪಾಸ್ ಕಾಯ್ದೆಯ ಸೆಕ್ಷನ್ 5 ಸ್ಪಷ್ಟವಾಗಿ ಹೇಳುವಂತೆ, ಖಾಸಗಿ ಮಂಡಿ ಮಾಲೀಕರು ಬೆಳೆ ದರವನ್ನು ಲೈನ್ (ರೂಟಿನ್) ವ್ಯಾಪಾರಕ್ಕೆ ಅನುಗುಣವಾಗಿ ನಿರ್ಧರಿಸುತ್ತಾರೆ, ಆದರೆ ಎಂಎಸ್ಪಿ ಪ್ರಕಾರವಲ್ಲ. ಇದರರ್ಥ ಖಾಸಗಿ ಮಂಡಿಗಳು ಪಂಜಾಬ್ ರೈತರಿಗೆ ಭತ್ತಕ್ಕಾಗಿ ಕ್ವಿಂಟಲ್‌ಗೆ 900 ರೂ. ದರವನ್ನು ನೀಡುತ್ತವೆ, ಆದರೆ 1886 ರೂ.ಗಳ ಎಂಎಸ್ಪಿ ನೀಡುವುದಿಲ್ಲ…..’ ಎಂದು ಎಐಕೆಎಂಎಸ್ ಆರೋಪಿಸಿದೆ.

ಸೆಕ್ಷನ್ 5 (2) ರ ಪ್ರಕಾರ ಖಾಸಗಿ ಕಂಪನಿಗಳು ತಮ್ಮದೇ ಆದ ವ್ಯಾಪಾರದ ನಿಯಮಗಳನ್ನು ನಿರ್ಧರಿಸುತ್ತವೆ ಮತ್ತು ಬೆಳೆ ವ್ಯಾಪಾರದ ಎಲ್ಲಾ ವಿವಾದ ಇತ್ಯರ್ಥಗಳು ಅವರ ನಿಯಮಗಳ ಪ್ರಕಾರವೇ ನಡೆಯುತ್ತವೆ, ಆದರೆ ಎಂಎಸ್ಪಿ ಪ್ರಜಾರ ಅಲ್ಲಿ ವಹಿವಾಟು ನಡೆಯುವುದೇ ಇಲ್ಲ’ ಎಂದು ಎಐಕೆಎಂಎಸ್ ವಿವರಣೆ ನೀಡಿದೆ.

‘ಗುತ್ತಿಗೆ ಕಾಯ್ದೆಯ ಸೆಕ್ಷನ್ 9, ರೈತರಿಗೆ ಸಾಲಕ್ಕಾಗಿ ಬ್ಯಾಂಕುಗಳೊಂದಿಗೆ ಭೂಮಿಯನ್ನು ಅಡಮಾನ ಇಡಲು ಆದೇಶಿಸುತ್ತದೆ. ಸೆಕ್ಷನ್ 14 (2 ಮತ್ತು 7) ರ ಪ್ರಕಾರ ಅವರು ಪ್ರಾಯೋಜಕ ಕಂಪನಿಯಿಂದ ಮುಂಗಡ ಪಡೆದರೆ, ವಸೂಲಿಗಳು ‘ಭೂ ಆದಾಯದ ಬಾಕಿ’ ಆಗಿರುತ್ತವೆ….’
‘ಈ ಕಾಯಿದೆಗಳು ಆಹಾರಧಾನ್ಯವನ್ನು ಅನಧಿಕೃತವಾಗಿ ಶೇಖರಿಸಲು, ಕಪ್ಪು ಮಾರುಕಟ್ಟೆ (ಬ್ಲಾಕ್ ಮಾರ್ಕೆಟ್) ಸೃಷ್ಟಿಸಲು, ಆಹಾರದ ಬೆಲೆಗಳನ್ನು ಹೆಚ್ಚಿಸಲು ಮತ್ತು ಸರ್ಕಾರಿ ಖರೀದಿ ಮತ್ತು ಪಿಡಿಎಸ್ ಅನ್ನು ರದ್ದುಗೊಳಿಸಲು ಪರವಾನಗಿ ನೀಡುತ್ತವೆ’ ಎಂದು ಎಐಕೆಎಂಎಸ್ ಆರೋಪಿಸಿದೆ.

‘ಈ ಕಾಯ್ದೆಗಳ ಯಾವುದೇ ವಿಳಂಬ ಅನುಷ್ಠಾನ / ಅಮಾನತು ಪ್ರಕ್ರಿಯೆಗಳನ್ನು ಸ್ವೀಕರಿಸಲು ರೈತರು ನಿರಾಕರಿಸುವುದು ಈ ಕಾಯಿದೆಗಳಲ್ಲಿನ ಅಂತಹ ನಿಬಂಧನೆಗಳು ಅವರ ವಿರುದ್ಧ ಇವೆ ಎಂಬ ಕಾರಣಕ್ಕೇ. ಈ ಕಾನೂನುಗಳನ್ನು ಖಾಸಗಿ ಬಂಡವಾಳಶಾಹಿಗಳ ಲಾಭಕ್ಕಷ್ಟೇ ಜಾರಿ ಮಾಡಲಾಗಿದೆ’ಎಂದು ಎಐಕೆಎಂಎಸ್ ಪ್ರಕಟನೆಯಲ್ಲಯ ತಿಳಿಸಿದೆ.

ಸಿಂಘು
ಟಿಕ್ರಿ ಗಡಿಯಲ್ಲಿ ರೈತರು ಪ್ರತಿಭಟಿಸುತ್ತಿರುವುದು

ಭಾರತೀಯ ಪಶುಸಂಗೋಪನೆ ಮತ್ತು ಹಸಿರು ಕ್ರಾಂತಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ಸತ್ಯವನ್ನು ತಪ್ಪಾಗಿ ನಿರೂಪಿಸಿದ್ದಾರೆ. ಹಾಲು ಉತ್ಪಾದನೆಯು ರೈತರಿಗೆ ಪ್ರಯೋಜನಕಾರಿಯಾಗಿದೆ, ಅಲ್ಲಿ ಸರ್ಕಾರ ಸಹಕಾರಿ ಹಾಲು ವಲಯವು ಲಾಭದಾಯಕ ದರವನ್ನು ನೀಡಿದರೆ, ಹಸಿರು ಕ್ರಾಂತಿಯು ಎಂಎಸ್ಪಿ ದರಗಳು ಮತ್ತು ಸರ್ಕಾರಿ ಸಂಗ್ರಹಣೆಯ ಮೇಲೆ ಮಾತ್ರ ಉಳಿದಿದೆ. ಈಗ ಈ ಕಾನೂನುಗಳ ಪ್ರಕಾರ ಸರ್ಕಾರಿ ಖರೀದಿ ಮತ್ತು ಸರ್ಕಾರಿ ಮಂಡಳಿಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ಈ ವರ್ಗದ ರೈತರು ಸಹ ತಮ್ಮ ಭೂಮಿ ಮತ್ತು ಜೀವನೋಪಾಯದಿಂದ ವಂಚಿತರಾಗುತ್ತಾರೆ.

ಸರ್ಕಾರವು ಕಿವುಡ ಕಿವಿ ಹೊಂದಿದ್ದು, ಕಾರಣಗಳನ್ನು ಸ್ಪಷ್ಟಪಡಿಸಲು ಶಕ್ತಿ ಇಲ್ಲದ ಕಾರಣಕ್ಕೆ ರೈತರನ್ನು ದೂಷಿಸುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಎಐಕೆಎಂಎಸ್ ಹೇಳಿದೆ.
ಒಬ್ಬ ಪ್ರಧಾನ ಮಂತ್ರಿಯು ತನ್ನ ಜನರನ್ನು ಮರುಳು ಮಾಡಲು ಇಂತಹ ಮಟ್ಟಕ್ಕೆ ಇಳಿಯಬಹುದು ಎಂಬುದು ವಿಚಿತ್ರವಾಗಿದೆ! ದೇಶದ ಸಂಸತ್ತು ಭಾರತೀಯ ಕಾರ್ಪೊರೇಟ್‌ನೊಂದಿಗೆ ಸಂಪರ್ಕ ಹೊಂದಿದ್ದು, ವಿದೇಶಿ ಶೋಷಕ ಕಾರ್ಪೊರೇಟ್ ಶಕ್ತಿಗಳ ಗುಲಾಮ ಆಗಿರುವುದನ್ನು ಇದು ಸೂಚಿಸುತ್ತದೆಯಲ್ಲವೆ? ಸಂಪೂರ್ಣ ಕೃಷಿ ಪ್ರಕ್ರಿಯೆಗಳು, ಕೃಷಿ ಭೂಮಿ, ನೈಸರ್ಗಿಕ ಸಂಪನ್ಮೂಲಗಳು, ಕೃಷಿ ಸಂಸ್ಕರಣೆ, ಸಂಗ್ರಹಣೆ ಮತ್ತು ಮಾರುಕಟ್ಟೆಗಳ ಮೇಲಿನ ನಿಯಂತ್ರಣವನ್ನು ಎಂಎನ್ಸಿ ಮತ್ತು ಭಾರತೀಯ ಕಾರ್ಪೊರೇಟ್ಗೆ ಹಸ್ತಾಂತರಿಸಲು ಕಾನೂನುಗಳು ಅವಕಾಶ ಮಾಡಿಕೊಡುತ್ತಿವೆ. ಇದು ಆರ್ಎಸ್ಎಸ್ ನಿಯಮ ಮತ್ತು ಅದರ ಮೋಸಗೊಳಿಸುವ ಸಿದ್ಧಾಂತದ ಲಕ್ಷಣವಾಗಿದೆ ಎಂದು ಎಐಕೆಎಂಎಸ್ ವಿವರಿಸಿದೆ. ಭಾರತೀಯ ಸಂಪನ್ಮೂಲಗಳನ್ನು ವಿದೇಶಿ ಕಂಪನಿಗಳಿಗೆ ಹಸ್ತಾಂತರಿಸುವುದನ್ನು ಪ್ರಧಾನ ಮಂತ್ರಿ “ಆತ್ಮ್ ನಿರ್ಭರ್” ಎಂದು ಕರೆಯುತ್ತಾರೆ. ವಿದೇಶಿ ಶೋಷಕರ ಸೇವೆ, ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಜನರಿಗೆ ದ್ರೋಹ ಬಗೆದ ಅವರ ಪಾತ್ರದ ಪುನರಾವರ್ತನೆಯಾಗಿದೆ ಎಂದು ಸಂಘಟನೆ ಹೇಳಿಕೆ ನೀಡಿದೆ.


ಇದನ್ನೂ ಓದಿ: ಆಂದೋಲನ್ ಜೀವಿಗಳಾಗಲು ಹೆಮ್ಮೆ ಪಡುತ್ತೇವೆ: ಮೋದಿಗೆ ತಿರುಗೇಟು ನೀಡಿದ ರೈತರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...