Homeಮುಖಪುಟನಿಮ್ಮ ಮನೆ 20 ವರ್ಷ ಹಳೆಯದೇ? ಹಾಗಾದರೆ ಕೂಡಲೇ ಕೆಡವಿ ಮತ್ತೆ ಕಟ್ಟಿಸಿ!

ನಿಮ್ಮ ಮನೆ 20 ವರ್ಷ ಹಳೆಯದೇ? ಹಾಗಾದರೆ ಕೂಡಲೇ ಕೆಡವಿ ಮತ್ತೆ ಕಟ್ಟಿಸಿ!

- Advertisement -
- Advertisement -

ನಿಮ್ಮ ಬಟ್ಟೆಗಳು ಒಂದು ವರ್ಷ ಹಳೆಯದೇ? ಹಾಗಿದ್ದಲ್ಲಿ ಅವನ್ನು ಕೂಡಲೇ ಹರಿದು ಹಾಕಿ ಹೊಸ ಬಟ್ಟೆ ಕೊಂಡುಕೊಳ್ಳಿರಿ. ಮೊಬೈಲ್ ಮೂರು ವರ್ಷ ಹಳೆಯದೇ, ಅದನ್ನು ಕೂಡಲೇ ಎಸೆದು ಹೊಸದೊಂದು ಕೊಳ್ಳಿರಿ.

ಲೇಖಕನಿಗೆ ತಲೆ ಕೆಟ್ಟಿದೆಯೇ ಎಂದು ಕೇಳಬೇಡಿ, ಬರುತ್ತೇನೆ ವಿಷಯಕ್ಕೆ.

ನಿಮ್ಮ ಕಾರು 20 ವರ್ಷ ಹಳೆಯದೇ? ಹಾಗಾದರೆ ಅದನ್ನು ಗುಜರಿಗೆ ಹಾಕಿ ಹೊಸ ಕಾರು ಖರೀದಿಸಿ ಎಂದು ಸರಕಾರ ಹೇಳಿದಾಗ ಯಾರನ್ನಾದರೂ ಪ್ರಶ್ನಿಸಿದಿರಾ, ಇಲ್ಲಾ ತಾನೆ? ಹಾಗಾದರೆ ನಾನು ಮೇಲೆ ಹೇಳಿದ ಮಾತುಗಳು ಶೀಘ್ರದಲ್ಲೇ ಸರಕಾರದ ಆದೇಶವಾಗಿ ಬರುವುದರಲ್ಲಿ ಸಂದೇಹವಿಲ್ಲ.

ಈ ಬಾರಿಯ ಬಜೆಟ್ ಮಂಡನೆಯಾದ ನಂತರ ಹಲವಾರು ಆರ್ಥಿಕ ತಜ್ಞರು ಮುಂಗಡಪತ್ರದಲ್ಲಿ ಕೇವಲ ಸಪ್ಪ್ಲೈ ಸೈಡನ್ನು ಗಮನಿಸಲಾಗಿದೆ, ಇದಕ್ಕೆ ಬೇಕಾದ ಡಿಮ್ಯಾಂಡ್ ಹೇಗೆ ಸರಕಾರ ಸೃಷ್ಟಿಸುತ್ತದೆ ಎನ್ನುವ ಬಗ್ಗೆ ವಿವರ ಇಲ್ಲ ಎಂದು ಗೊಣಗಿದ್ದರು. ಇದೋ ಇಲ್ಲಿದೆ ಡಿಮ್ಯಾಂಡ್ ಸೃಷ್ಟಿಯ ವಿವರ.

ಇದನ್ನೂ ಓದಿ: ಭಾರತದ ಪ್ರಗತಿಯನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವ ಕೃಷಿ ಕಾಯ್ದೆಗಳು

ಇತ್ತೀಚೆಗೆ ಬಂದ ಭಾರತ ಸರಕಾರದ “ಅದ್ವಿತೀಯ” ಮುಂಗಡಪತ್ರದಲ್ಲಿ ಹಳೆಯ ಕಾರಿನ ಪ್ರಸ್ತಾವನೆ ಇದೆ. ಕೇವಲ ಕಾರಿನ ಬಗ್ಗೆ ಮಾತನಾಡುವುದಾದರೆ ನನ್ನ ಕಾರು ನನ್ನ ವೈಯುಕ್ತಿಕ ವಿಚಾರ, ಇದರಲ್ಲಿ ಇನ್ನೊಬ್ಬರಿಗೆ ಮೂಗು ತೂರಿಸುವ ಅವಕಾಶವಿಲ್ಲ. ಭಾರತದಲ್ಲಿ ಹಿಂದಿನಿಂದಲೂ ಮಧ್ಯಮ ವರ್ಗದ ಜನರು ಜೀವನದಲ್ಲಿ ಒಂದೇ ಹೆಂಡತಿ, ಒಂದೇ ಮಗು, ಒಂದೇ ಮನೆ, ಒಂದೇ ಕಾರು ಎಂದು ಜೀವನ ಮಾಡಿದವರು. ಕಾರನ್ನು ಹೆಂಡತಿ ಅಥವಾ ಮಗುವಿನಷ್ಟೇ ಪ್ರೀತಿಯಿಂದ ಸಾಕಿದವರು. ಅದನ್ನು ಗುಜರಿಗೆ ಹಾಕುವುದು ಅವರಿಗೆ ಜೀರ್ಣವಾಗದ ಮಾತು. ವೈಯುಕ್ತಿಕ ವಿಚಾರಗಳು ಹಾಗಿರಲಿ.

PC: Google Sites

ನಮ್ಮ ಗ್ರಾಮೀಣ ಸಾರಿಗೆ ನಿಂತಿರುವುದೇ ಹಳೆಯ ವಾಹನಗಳ ಕೃಪೆಯಿಂದ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದೆ ಗ್ರಾಮೀಣ ಭಾಗದ ಜನರು ಹಳೆಯ ಮತ್ತು ಮಾರ್ಪಡಿಸಲ್ಪಟ್ಟ ವಾಹನಗಳನ್ನೇ ನಂಬಿಕೊಂಡು ಇದೇ ಗ್ರಾಮೀಣ ಸಾರಿಗೆ ಎಂದು ಜೀವನ ನಡೆಸುತ್ತಿದ್ದಾರೆ. ಹಾಗಾದರೆ ಅವರೆಲ್ಲಾ ಏನು ಮಾಡಬೇಕು. ಹಳೆಯ ವಾಹನಗಳ ರಿಪೇರಿ ಮಾಡಿ ಜೀವನ ನಡೆಸುತ್ತಿರುವ ಲಕ್ಷಾಂತರ ಮೆಕ್ಯಾನಿಕ್‌‌‌ಗಳು ಏನು ಮಾಡಬೇಕು.

ಇದನ್ನೂ ಓದಿ: ಓಡಿಒಪಿ: ಎಲ್ಲದರೊಳಗು ಸ್ವತಂತ್ರ ಬೇಕು ಅಂದ್ರ ಹೆಂಗ? 1947ರೊಳಗ ಸಿಕ್ಕದಲ್ಲಾ ಸಾಕು

ಒಂದು ಅಂದಾಜಿನ ಪ್ರಕಾರ 2000-2001 ರಲ್ಲಿ ದೇಶದಲ್ಲಿ ಸುಮಾರು ನಲವತ್ತು ಲಕ್ಷ ವಾಹನಗಳ ಉತ್ಪಾದನೆಯಾಗಿತ್ತು. ಅವೆಲ್ಲವೂ ಏಕಕಾಲಕ್ಕೆ ಗುಜರಿಗೆ ಹೋದರೆ ಅವನ್ನು ಕೊಂಡುಕೊಳ್ಳುವವರು ಯಾರು? ಬಹುಶ: ಮಹೀಂದ್ರ ಮತ್ತು ಟಾಟಾ ಈಗಾಗಲೇ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡಿರಬಹು (ಅದಾನಿ ಪಂಜಾಬಿನಲ್ಲಿ ಧಾನ್ಯಸಂಗ್ರಹಣೆ ಗೋಡೌನ್ ಕಟ್ಟಿಸಿದಂತೆ). ಆಟೋಮೊಬೀಲ್ ಲಾಬಿ ಸರಕಾರಕ್ಕೆ ಕಪ್ಪಕಾಣಿಕೆ ಸಲ್ಲಿಸಿರಬಹುದೇನೋ, ಅದಕ್ಕಾಗಿ ಈ ಆದೇಶ ಎಂದು ಸಂದೇಹ ಮೂಡುವುದು ಸ್ವಾಭಾವಿಕ.

ಹಾಗಾದರೆ ನಾಳೆ ರಿಯಲ್ ಎಸ್ಟೇಟ್ ಲಾಬಿ ಭೇಟಿಯಾದಲ್ಲಿ ಎಲ್ಲಾ 20 ವರ್ಷ ಹಳೆಯ ಮನೆ ಕೆಡವಿ ಹೊಸ ಮನೆ ಕಟ್ಟಬೇಕೆಂಬ ಕಾನೂನು ಬಂದರೆ ಅಥವಾ ಬಟ್ಟೆ ಲಾಬಿ ಒತ್ತಡದ ಮೇರೆಗೆ ಎಲ್ಲರೂ ಪ್ರತಿ ವರ್ಷ ಹೊಸ ಬಟ್ಟೆಯನ್ನೇ ಕೊಳ್ಳಬೇಕೆಂಬ ಕಾನೂನು ಜಾರಿಯಾದರೆ ಏನೂ ಆಶ್ಚರ್ಯವಿಲ್ಲ.

ಗೌರಿ ಲಂಕೇಶ್ ಇಂಗ್ಲಿಷ್‌ ಯುಟ್ಯೂಬ್ ಚಾನೆಲ್ Gauri Lankesh News Subscribe ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಇಷ್ಟೇ ಅಲ್ಲ, ಮನೆಯ ಪಾತ್ರೆ, ವಾಷಿಂಗ್ ಮಷಿನ್, ಮಿಕ್ಸರ್-ಗ್ರೈಂಡರ್, ಫ್ರಿಜ್, ಟಿವಿ, ಮೊಬೈಲ್, ಆಭರಣಗಳು, ಎಲ್ಲದಕ್ಕೂ ಎಕ್ಸ್ಪೈರಿ ಡೇಟ್ ಫಿಕ್ಸ್ ಆಗುತ್ತದೆ. ಇದೆಲ್ಲಾ ಕೊಂಡುಕೊಳ್ಳಲು ಹಣ ಎಲ್ಲಿಂದ ಬರುತ್ತದೆ ಎಂದು ನನ್ನನ್ನು ಕೇಳಬೇಡಿ, ವಿತ್ತಮಂತ್ರಿಗಳನ್ನು ಕೇಳಿ ನೋಡಿ. ಬಹುಶ: ಹೆಲಿಕಾಪ್ಟರ್ ಮನಿ. ಸರ್ಕಾರ ಗರಿಗರಿ ನೋಟು ಮುದ್ರಿಸಿ ಮೇಲಿನಿಂದ ಎಸೆಯಬಹುದು.

ಹೆಂಡತಿ/ಗಂಡ ಅದೇ ಇರಬೇಕೋ ಅಥವಾ ಅದೂ ಬದಲಾಯಿಸುತ್ತಿರಬೇಕೋ ಏನೋ ಗೊತ್ತಿಲ್ಲ. ವಿಚಾರಿಸಿ ನೋಡಿ.

 -ಜಿ.ಆರ್. ವಿದ್ಯಾರಣ್ಯ (ಅಭಿಪ್ರಾಯಗಳು ವೈಯಕ್ತಿಕವಾದವು)

ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. The Indian and state governments are implementing new new bills on public (scraping the old cars and two wheelers ) but it will be affecting only to the middle class families not to politicians nor rich families and it’s like a indirect death penalty to citizens of India.

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...