Homeಅಂಕಣಗಳುಓಡಿಒಪಿ: ಎಲ್ಲದರೊಳಗು ಸ್ವತಂತ್ರ ಬೇಕು ಅಂದ್ರ ಹೆಂಗ? 1947ರೊಳಗ ಸಿಕ್ಕದಲ್ಲಾ ಸಾಕು

ಓಡಿಒಪಿ: ಎಲ್ಲದರೊಳಗು ಸ್ವತಂತ್ರ ಬೇಕು ಅಂದ್ರ ಹೆಂಗ? 1947ರೊಳಗ ಸಿಕ್ಕದಲ್ಲಾ ಸಾಕು

ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ. ಪ್ರಧಾನಿಯವರ ಹೆಸರನ್ನೇ ಇಟ್ಟುಕೊಂಡ ಈ ಸಚಿವರು ಅವರ ಹಂಗೇನೇ ಒಂದು ಆನ್‌ಲೈನ್ ಭಾಷಣ ಮಾಡಿದರು. ಅದರೊಳಗ ನಾವು ಈಗ ಏನು ಮಾಡಲಿಕ್ಕ ಹೊಂಟೆವಿ ಅಂದ್ರ ಅದು ಬಹಳ ಮುಖ್ಯ ಅದ. ಅದು ರೈತರಿಗೆ ಒಳ್ಳೆಯದಾಗತದ. ಅದನ್ನು ಎಲ್ಲರೂ ಸ್ವಾಗತಿಸಬೇಕು, ಅಂತ ಅಂದ್ರು. ಅದು ಎನಪಾ ಅಂದ್ರ ಒನ್ ಡಿಸ್ಟ್ರಿಕ್ಟ್ ಒನ್ ಕ್ರಾಪ್ ಅರ್ಥಾತ್ ಒಂದು ಜಿಲ್ಲೆ ಒಂದು ಬೆಳೆ .

- Advertisement -
- Advertisement -

ಕೋವಿಡ್ ಅನ್ನೋದು ಜನರಿಗೆ ಭಾರಿ ಕಷ್ಟ ಕೊಡುವ ಭೂತ ಆಗಿದ್ದರೂ, ಸರ್ಕಾರಕ್ಕ ದೇವರು ಕೊಟ್ಟ ವರ ಆಗಿಬಿಟ್ಟದ.

ಮೊದಲಿಗೆಲ್ಲಾ ಏನಾದರೂ ಸರ್ಕಾರಿ ಯೋಜನೆ, ಕಾರ್ಯಕ್ರಮ ಮಾಡೋದಿದ್ದರ ಅದಕ್ಕೊಂದು ದೊಡ್ಡ ಪೆಂಡಾಲ ಹಾಕಿ, ಮೈಕು ಸೆಟ್ಟು ತಂದು, ಅದರಾಗ ಎಸ್.ಪಿ ಬಾಲಸುಬ್ರಮಣ್ಯಂ ಹಾಡು ಹಾಕಿಸಿ, ಮೈದಾನದಾಗ ಕುರ್ಚಿ ಹಾಕಿ, ಆ ಕುರ್ಚಿ ಮ್ಯಾಲೆ ಕೂಡಲಿಕ್ಕೆ ಸಾವಿರಾರು ಜನನ ಹಿಡಕೊಂಡು ಬಂದು ಕೂಡಿಸಿ, ಅವರಿಗೆ ಊಟದ ವ್ಯವಸ್ಥಾ ಮಾಡಿ, ಇಷ್ಟೆಲ್ಲಾ ಮಾಡಿದ ಮ್ಯಾಲೆ ಭಾಷಣ ಮಾಡೋರನ್ನ ಕರಕೊಂಡು ಬಂದು ಅವರಿಗೆ ಭಾಷಣ ಬರದುಕೊಟ್ಟು, ಅವರ ಕಡೆ ಮಾತು ಆಡಿಸಿ, ಸಾಲಿ ಹುಡುಗರ ಕಡೆ ಸ್ವಾಗತ ಗೀತೆ ಹೇಳಿಸಿ, ಉದ್ದನ ಜಡೆ ಹುಡುಗಿಯರ ಕಡೆ ಬಹುಮಾನದ ತಾಟು ಕೊಟ್ಟು, ಐದಾರು ಸರತೆ ಅಡ್ಡಾಡಿಸಿ, ಕಡಿಕೆ ಕನ್ನಡ ಸಾಲಿ ಮಾಸ್ಟರ್ ಕಡೆ ಅಭಿನಂದನಾ ಭಾಷಣ ಮಾಡಿಸಿ, ಅವರು ಎಲ್ಲಾರಿಗೆ ಧನ್ಯವಾದ ಹೇಳಿ ಜೈ ಹಿಂದ್ ಜೈ ಕರ್ನಾಟಕ ಹೇಳಿದ ಮ್ಯಾಲೆ ಕಾರ್ಯಕ್ರಮ ಮುಗುದ ಹೋಗತಿತ್ತು.

ಈಗ ಈ ಕೊರೊನಾ ರಾಕ್ಷಸನ ಸಲುವಾಗಿ ಎಲ್ಲಾ ಆಫ್‌ಲೈನ್ (ಅಂದ್ರ ಮೈದಾನದ ಒಳಗ ಎಲ್ಲಾರ ಮುಂದ ಖುಲ್ಲಮ ಖುಲ್ಲ ಕಾರ್ಯಕ್ರಮ) ಬಂದ್ ಆಗಿ ಬರೆ ಆನ್‌ಲೈನ್ (ಅಂದ್ರ ಬಾಗಿಲು ಮುಚ್ಚಿಕೊಂಡು ಕಂಪ್ಯೂಟರ್‌ದಾಗ ಮಾತಾಡೋದು) ಚಾಲೂ ಆಗಿಬಿಟ್ಟಾವು.

ಮೈದಾನದ ಕಾರ್ಯಕ್ರಮ ಆದರ ಪೇಪರ್, ಟಿವಿಯವರು ಬರತಿದ್ದರು, ಭಾಷಣ ಕೇಳತಿದ್ದರು, ಎನಾರ ಸುದ್ದಿ ಆಗತಿತ್ತು. ಈಗ ಮುಚ್ಚಿದ ಬಾಗಲ ಹಿಂದ ಏನು ನಡಿತದೋ ಏನೋ, ಗೊತ್ತಿಲ್ಲ. ಅವರು ಇದು ಸುದ್ದಿ ಅಂತ ಹೇಳಿದ್ದು, ಇದನ್ನ ಬರೀರಿ, ಇದನ್ನ ಬರಿಬೇಡ್ರಿ, ಅಂತ ಫರ್ಮಾನು ಹೊರಡಿಸಿಬಿಟ್ಟರ ಆತು. ಅದೇ ಸುದ್ದಿ. ಕಾರ್ಯಕ್ರಮ ಮುಗದು ಧನ್ಯವಾದ ಅಂತ ಹೇಳೋ ಮೊದಲೇ ಅದರ ಸುದ್ದಿ ನಮ್ಮ ಸಾಮಾಜಿಕ ಜಾಲತಾಣದಾಗ ಬಂದುಬಿಟ್ಟಿರತದ. ಅದಕ್ಕಿಂತ ಮೊದಲ ಅದರ ಪರ-ವಿರೋಧದ ಚರ್ಚೆ ಆರಂಭ ಆಗಿ ದೋಸ್ತರ ನಡುವೆ ಜಗಳ ಆಗಿಬಿಟ್ಟಿರತದ. ಇಂತಹುದೆ ಒಂದು ಆನ್‌ಲೈನ್ ಕಾರ್ಯಕ್ರಮ ದೆಹಲಿಯ ದಂತ ಗೋಪುರದ ಯಾವುದೋ ಒಂದು ಕೋಣೆಯ ಒಂದು ಮುಚ್ಚಿದ ಬಾಗಿಲ ಹಿಂದೆ ನಡೆಯಿತು. ಅದರ ಹೆಸರು ಓಡಿಒಪಿ. ಅದನ್ನ ಮಾಡಿ ಓಡಿಹೋದವರು ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ. ಪ್ರಧಾನಿಯವರ ಹೆಸರನ್ನೇ ಇಟ್ಟುಕೊಂಡ ಈ ಸಚಿವರು ಅವರ ಹಂಗೇನೇ ಒಂದು ಆನ್‌ಲೈನ್ ಭಾಷಣ ಮಾಡಿದರು.

ಅದರೊಳಗ ನಾವು ಈಗ ಏನು ಮಾಡಲಿಕ್ಕ ಹೊಂಟೆವಿ ಅಂದ್ರ ಅದು ಬಹಳ ಮುಖ್ಯ ಅದ. ಅದು ರೈತರಿಗೆ ಒಳ್ಳೆಯದಾಗತದ. ಅದನ್ನು ಎಲ್ಲರೂ ಸ್ವಾಗತಿಸಬೇಕು, ಅಂತ ಅಂದ್ರು. ಅದು ಎನಪಾ ಅಂದ್ರ ಒನ್ ಡಿಸ್ಟ್ರಿಕ್ಟ್ ಒನ್ ಕ್ರಾಪ್ ಅರ್ಥಾತ್ ಒಂದು ಜಿಲ್ಲೆ ಒಂದು ಬೆಳೆ.

ಅದೇ ಧಾಟಿಯೊಳಗ ನಮ್ಮ ತೆರೆಯ ಮೇಲಿನ ಕೌರವ ಹಾಗೂ ತೆರೆಯ ಹಿಂದಿನ ನಾಯಕನಾದ ಬಸನಗೌಡ ಚನ್ನ ಬಸನಗೌಡ ಪಾಟೀಲ್, ಕೃಷಿ ಮಂತ್ರಿಗಳು ಸಾಕಿನ ಹೀರೆಕೆರೂರು – ಬ್ಯಾಡಗಿಲ್ಲಿ ಒಂದು ಖತರನಾಕ ಡೈಲಾಗ್ ಹೊಡೆದರು. ರೈತರು ವೀಕ್ ಮೈಂಡ್ ಆಗಿ ಸೆಲ್ಫ್ ಸೂಯಿಸೈಡ್ ಮಾಡಿಕೊಳತಾರ ಅಂತ ಒಂದು ಬಿಟ್ಟು ಎರಡು ಸಾರಿ ಹೇಳಿದರು. ಅದಕ್ಕೆ ಸರ್ಕಾರದ ನೀತಿ ಕಾರಣ ಅಲ್ಲ ಅಂತನೂ ಹೇಳಿದರು.

PC : KNN India

ಇವೆಲ್ಲ ಬಿಡಿ. ಅವರು ಹೇಳಿದ ದೊಡ್ಡ ಮಾತು ಅಂದ್ರ ಓಡಿಒಪಿ ಅನ್ನುವುದು ರೈತರ ಕಲ್ಯಾಣಕ್ಕಾಗಿ ಆಕಾಶದಿಂದ ಇಳಿದುಬಂದ ಯೋಜನೆ ಅಂತ.

ಹಂಗಾರ ಈ ಯೋಜನೆ ಏನು? ಎಲ್ಲಿಂದ ಬಂತು? ಇದರಾಗ ಒಂದು ಮಾತು ಎನಪಾ ಅಂದ್ರ ಖಾಸಗಿ ಕಂಪನಿಯವರು ನಾವು ಈ ವರ್ಷ ಈ ಆಹಾರ ಖಾದ್ಯವನ್ನು ಪ್ಲಾಸ್ಟಿಕ್ ಚೀಲದೊಳಗ ಪ್ಯಾಕ್ ಮಾಡಿ ಮಾರಾಟ ಮಾಡಬೇಕು ಅಂತ ಮಾಡೇವಿ ಅಂತ ಸರ್ಕಾರಕ್ಕ ಹೇಳತಾರ. ಸರಕಾರ ಜಿ ಹಾಂ ಅಂತ ಹೇಳಿ ರೈತರಿಗೆ ಇದನ್ನ ಬೆಳೆಯಿರಿ ಅಂತ ಹೇಳತದ. ಸರಕಾರ ಹೇಳತದ ಅಂತ ನಮ್ಮವರು ಬೆಳಿತಾರ. ಅದನ್ನ ಆ ಕಂಪನಿಯವರು ಖರೀದಿ ಮಾಡಿ ಅದನ್ನ ಒಣಗಿಸಿ, ಉಪ್ಪು ಖಾರ ಹಾಕಿ ಮಾರಾಟ ಮಾಡತಾರ. ಇದರೊಳಗ ಪ್ಲಾಸ್ಟಿಕ್ ಚೀಲ ಮಾಡಿದವರು ಒಬ್ಬರು, ಆಹಾರ ಧಾನ್ಯ ಬೆಳೆದವರು ಇನ್ನೊಬ್ಬರು, ಉಪ್ಪು ಖಾರ ಹಾಕುವ ಜಾಬ್ ವರ್ಕ್ ಮಾಡಿವರು ಮತ್ತೊಬ್ಬರು. ಆದರ ಫಾಯದಾ ಮಾಡಿಕೊಂಡವರು ಮಾತ್ರ ಸರ್ಕಾರದ ಗೆಳೆಯರಾಗಿರುವ ಕಂಪನಿಯವರು.

ಆ ಕಂಪನಿಗಳಿಗೆ ಬಹಳ ಓಡಾಟ ಆಗಬಾರದು. ಅವರಿಗೆ ಬ್ಯಾರೆ ಬ್ಯಾರೆ ಊರಿನ ನೀರು ಕುಡಿದು ನೆಗಡಿ-ಕೆಮ್ಮ ಆಗಬಾರದು ಅಂತ ಸರ್ಕಾರದವರು ಒಂದು ಜಿಲ್ಲೆಗೆ ಒಂದು ಬೆಳೆ ಸಿಗೋ ಹಂಗ ಆಗಬೇಕು ಅಂತ ಹೇಳಿ ರೈತರಿಗೆ ಈ ಯೋಜನೆ ತೊಗೊಂಡು ಬಂದಾರ.

ರೈತರು ಎನಂದರೂ ಶ್ರಮ ಜೀವಿಗಳು, ಬಿಸಿಲು-ಮಳೆ-ಚಳಿ-ಗಾಳಿ ಒಳಗ ಕೆಲಸ ಮಾಡಿ ಅಭ್ಯಾಸ ಇದ್ದವರು. ಪಾಪ, ಕಂಪನಿ ಒಳಗ ಕೆಲಸ ಮಾಡೋ ಎಂಬಿಎಗಳಿಗೆ ಜಮೀನಿಗೆ ಹೋಗು ಅಂದ್ರ ಹೆಂಗ? ಕೆಲಸ ಮಾಡೋ ಮುಂದ ಅವರ ಸೂಟು-ಬೂಟು ಟೈ ತೆಗೆದು ಇಡಲಿಕ್ಕೆ ಜಮೀನು ಒಳಗ ಶುಭ್ರ ವಾದ ಸ್ವಚ್ಛ ಜಾಗ ಎಲ್ಲೆ ಸಿಗಬೇಕು?

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದ ಕೃಷಿ ಸಚಿವ ಬಿ.ಸಿ.ಪಾಟೀಲ್
ಬಿ.ಸಿ. ಪಾಟೀಲ್.

ಸರಕಾರ ಹೇಳಿದ ಹಂಗ ಕೇಳಿದರ ಸರಕಾರ ಎಲ್ಲಾ ರೀತಿಯ ತರಬೇತಿ-ಸಹಕಾರ ಕೊಡತದ. ಅಮೆರಿಕ-ಯೂರೋಪುನಲ್ಲಿ ಓದಿ ಓಡೋಡಿ ಬಂದ, ತಮ್ಮ ಜೀವನದಲ್ಲಿ ಕೇವಲ ಯೂಟ್ಯೂಬುಗಳಲ್ಲಿ ಮಾತ್ರ ಜಮೀನು ನೋಡಿ ಎಲ್ಲಾ ಕಲೆ ಕಲಿತುಕೊಂಡಿರುವ ಕೃಷಿ ಪಂಡಿತರು ತಲೆತಲಾಂತರದಿಂದ ಕೃಷಿ ಮಾಡುತ್ತಿರುವ ರೈತರಿಗೆ ತರಬೇತಿ ಕೊಡತಾರ. ಪೂರ್ತಿ ಇಂಗ್ಲಿಷಿನಲ್ಲಿ ಮಾತ ಆಡೋದಿಲ್ಲ. ನಡುನಡುವೆ ಕನ್ನಡ ಮಾತು ಅಡತಾರ. ‘ನಾ ಹೇಳ್ತಾ ಇರೋದು ತಿಳಿತಲ್ಲಾ, ಇಟ್ ಈಸ್ ವೆರೀ ಸಿಂಪಲ್’ ಅಂತ ಎಲ್ಲಾ ಕನ್ನಡ ಮಾತಾಡತಾರ.

ಕಂಪನಿಯವರು ಬೀಜ ಕೊಡತಾರ, ಗೊಬ್ಬರ ಕೊಡತಾರ, ಸಾಲ ಕೊಡತಾರ, ಡ್ರಿಪ್ ಇರಿಗೇಷನ್ ಕೊಡತಾರ, ಅವರ ಮಾತು ಕೇಳಿದರ ಇಸ್ರೇಲಿಗೆ ಕರಕೊಂಡು ಹೋಗತಾರ.

ಹಂಗ ಅಂತ ಯಾರಾದರೂ ರೈತರು ಅವರ ಮಾತು ಕೇಳಲೆ ಇಲ್ಲ ಅಂದ್ರ ಏನು ಮಾಡತಾರ? ಏನು ಮಾಡೋದಿಲ್ಲ. ಬಹಳ ಅಂದ್ರ ಸರಳ ಸಾಲ ಸಿಗಲಿಕ್ಕೆ ಇಲ್ಲ, ಬೀಜ ಗೊಬ್ಬರ ಕಷ್ಟ ಆಗಬಹುದು, ಬೆಳೆ ವಿಮೆ ಕಷ್ಟ ಆಗಬಹುದು, ಅಷ್ಟ. ಅಥವಾ ರೈತರಿಗೆ ತಮಗೆ ಬೇಕಾದ ಬೆಳೆ ಬೆಳಿಯಲಿಕ್ಕೆ ಆಗಲಿಕ್ಕಿಲ್ಲ. ಎಲ್ಲದರೊಳಗು ಸ್ವತಂತ್ರ ಬೇಕು ಅಂದ್ರ ಹೆಂಗ? 1947ರೊಳಗ ಸಿಕ್ಕದಲ್ಲಾ ಸಾಕು.

ರೊಕ್ಕ ಅನ್ನೋದು ಎಲ್ಲಕ್ಕಿಂತ ದೊಡ್ಡದು. ಸ್ವಾತಂತ್ರ ಯಾರಿಗೆ ಬೇಕು? ಅಷ್ಟೂ ಗೊತ್ತಿಲ್ಲ ಅಂದ್ರ ಹೆಂಗ?


ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿಗೆ ಪೊಲೀಸರ ಕೆಲವು ಷರತ್ತುಗಳು: ಒಪ್ಪದ ರೈತ ಸಂಘಟನೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಧ್ಯಪ್ರದೇಶ: ಬುಡಕಟ್ಟು ವಿಶ್ವವಿದ್ಯಾಲಯ ಹಾಸ್ಟೆಲ್ ಒಳಗೆ ಅಸ್ಸಾಮಿ ವಿದ್ಯಾರ್ಥಿ ಮೇಲೆ ಗುಂಪು ಹಲ್ಲೆ

ಮಧ್ಯಪ್ರದೇಶದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯೊಳಗೆ ಐದು ಜನ ವಿದ್ಯಾರ್ಥಿಗಳ ತಂಡವು ಅಸ್ಸಾಮಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗುಂಪು ಆತನಿಗೆ ಇಲ್ಲಿಯೇ ಸಾಯಬೇಕು ಎಂದು...

ಮಹಿಳೆಯರ ಜೊತೆ ಪುರುಷರಿಗೂ ಉಚಿತ ಬಸ್‌ ಪ್ರಯಾಣ, ಗ್ರಾಮೀಣರಿಗೆ 150 ಕೂಲಿ ದಿನ : ಮೊದಲ ಹಂತದ ಪ್ರಣಾಳಿಕೆ ಬಿಡುಗಡೆ ಮಾಡಿದ ಎಐಎಡಿಎಂಕೆ

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಶನಿವಾರ (ಜ.17) ಪಕ್ಷದ ಮೊದಲ ಹಂತದ ಪ್ರಣಾಳಿಕೆ (ಚುನಾವಣಾ ಭರವಸೆ) ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ ಎಲ್ಲಾ ಪಡಿತರ...

ಛತ್ತೀಸ್‌ಗಢ| ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಸಾವು

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಕನಿಷ್ಠ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ವಾಯುವ್ಯ ಪ್ರದೇಶದ ಅರಣ್ಯ ಬೆಟ್ಟಗಳಲ್ಲಿ ಶನಿವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆಯಿತು. ಹಿರಿಯ...

ಮಮತಾ ಬ್ಯಾನರ್ಜಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶುಕ್ರವಾರ (ಜ.16) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಮತಾ...

ಕೋಮುವಾದ ಕಾರಣಕ್ಕೆ ಬಾಲಿವುಡ್‌ನಲ್ಲಿ ಅವಕಾಶ ಕಡಿಮೆ; ರೆಹಮಾನ್ ಹೇಳಿಕೆ ತಳ್ಳಿಹಾಕಿದ ಜಾವೇದ್ ಅಖ್ತರ್

ಯಶಸ್ವೀ ಸಂಗೀತಗಾರನಾಗಿ ಹಲವು ಕೊಡುಗೆ ನೀಡಿದ್ದರೂ ಕೆಲವರಿಗೆ ಹೊರಗಿನವನು ಎಂಬ ಭಾವನೆ ಹೋಗಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಬಾಲಿವುಡ್‌ನ ಕದ ಮುಚ್ಚಿದೆ ಎಂಬ ಬಗ್ಗೆ ಎ.ಆರ್. ರೆಹಮಾನ್ ಹೇಳಿಕೆಯನ್ನು ಹಿರಿಯ ಗೀತೆ ರಚನೆಕಾರ...

14 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ : 16 ವರ್ಷದ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯ ಭೀಕರ ಅತ್ಯಾಚಾರ, ಕೊಲೆ ನಡೆದಿದ್ದು, ಈ ಸಂಬಂಧ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ (ಜ.15) ಬೆಳಿಗ್ಗೆ ಶಾಲೆಗೆ ಹೋದ...

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತದೆ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಹೊಸ ವಕ್ಫ್ ಕಾಯ್ದೆಯಂತಹ ಅದರ ವಿವಿಧ ಕಾನೂನುಗಳು ಮತ್ತು ನೀತಿಗಳು...

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: 114 ಸ್ಥಾನಗಳೊಂದಿಗೆ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ ಎಐಎಂಐಎಂ

ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷವು (ಎಐಎಂಐಎಂ) 114 ಸ್ಥಾನಗಳನ್ನು ಗೆದ್ದು, 2017 ರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಿಂತ ತನ್ನ ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿಕೊಂಡಿದೆ....

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅನೈತಿಕ ಪೊಲೀಸ್‌ಗಿರಿ : ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಬಂಧನ

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅವರ ಗೌಪ್ಯ ದಾಖಲೆಗಳನ್ನು ಪಡೆದು ಪೌರತ್ವ ಪರಿಶೀಲಿಸುವ ಮೂಲಕ ಅನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಶುಕ್ರವಾರ (ಜ.16) ತಡರಾತ್ರಿ ಬಂಧಿಸಿದ್ದಾರೆ...

ಬಳ್ಳಾರಿ| ಬಂಡಿಹಟ್ಟಿ-ದಾನಪ್ಪ ಬೀದಿ ಬಡರೈತರ ಮೇಲೆ ದೌರ್ಜನ್ಯ; ಪ್ರತಾಪರೆಡ್ಡಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬಳ್ಳಾರಿ ಜಿಲ್ಲೆಯ ಬಂಡಿಹಟ್ಟಿ-ದಾನಪ್ಪ ಬೀದಿಯ ಬಡರೈತರ ಮೇಲೆ ದೌರ್ಜನ್ಯ ಎಸಗುತ್ತಿರುವ ಎನ್‌.ಪ್ರತಾಪ ರೆಡ್ಡಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು 'ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ' ಮುಖಂಡರು ಆಗ್ರಹಿಸಿದರು....