Homeಅಂಕಣಗಳುಓಡಿಒಪಿ: ಎಲ್ಲದರೊಳಗು ಸ್ವತಂತ್ರ ಬೇಕು ಅಂದ್ರ ಹೆಂಗ? 1947ರೊಳಗ ಸಿಕ್ಕದಲ್ಲಾ ಸಾಕು

ಓಡಿಒಪಿ: ಎಲ್ಲದರೊಳಗು ಸ್ವತಂತ್ರ ಬೇಕು ಅಂದ್ರ ಹೆಂಗ? 1947ರೊಳಗ ಸಿಕ್ಕದಲ್ಲಾ ಸಾಕು

ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ. ಪ್ರಧಾನಿಯವರ ಹೆಸರನ್ನೇ ಇಟ್ಟುಕೊಂಡ ಈ ಸಚಿವರು ಅವರ ಹಂಗೇನೇ ಒಂದು ಆನ್‌ಲೈನ್ ಭಾಷಣ ಮಾಡಿದರು. ಅದರೊಳಗ ನಾವು ಈಗ ಏನು ಮಾಡಲಿಕ್ಕ ಹೊಂಟೆವಿ ಅಂದ್ರ ಅದು ಬಹಳ ಮುಖ್ಯ ಅದ. ಅದು ರೈತರಿಗೆ ಒಳ್ಳೆಯದಾಗತದ. ಅದನ್ನು ಎಲ್ಲರೂ ಸ್ವಾಗತಿಸಬೇಕು, ಅಂತ ಅಂದ್ರು. ಅದು ಎನಪಾ ಅಂದ್ರ ಒನ್ ಡಿಸ್ಟ್ರಿಕ್ಟ್ ಒನ್ ಕ್ರಾಪ್ ಅರ್ಥಾತ್ ಒಂದು ಜಿಲ್ಲೆ ಒಂದು ಬೆಳೆ .

- Advertisement -
- Advertisement -

ಕೋವಿಡ್ ಅನ್ನೋದು ಜನರಿಗೆ ಭಾರಿ ಕಷ್ಟ ಕೊಡುವ ಭೂತ ಆಗಿದ್ದರೂ, ಸರ್ಕಾರಕ್ಕ ದೇವರು ಕೊಟ್ಟ ವರ ಆಗಿಬಿಟ್ಟದ.

ಮೊದಲಿಗೆಲ್ಲಾ ಏನಾದರೂ ಸರ್ಕಾರಿ ಯೋಜನೆ, ಕಾರ್ಯಕ್ರಮ ಮಾಡೋದಿದ್ದರ ಅದಕ್ಕೊಂದು ದೊಡ್ಡ ಪೆಂಡಾಲ ಹಾಕಿ, ಮೈಕು ಸೆಟ್ಟು ತಂದು, ಅದರಾಗ ಎಸ್.ಪಿ ಬಾಲಸುಬ್ರಮಣ್ಯಂ ಹಾಡು ಹಾಕಿಸಿ, ಮೈದಾನದಾಗ ಕುರ್ಚಿ ಹಾಕಿ, ಆ ಕುರ್ಚಿ ಮ್ಯಾಲೆ ಕೂಡಲಿಕ್ಕೆ ಸಾವಿರಾರು ಜನನ ಹಿಡಕೊಂಡು ಬಂದು ಕೂಡಿಸಿ, ಅವರಿಗೆ ಊಟದ ವ್ಯವಸ್ಥಾ ಮಾಡಿ, ಇಷ್ಟೆಲ್ಲಾ ಮಾಡಿದ ಮ್ಯಾಲೆ ಭಾಷಣ ಮಾಡೋರನ್ನ ಕರಕೊಂಡು ಬಂದು ಅವರಿಗೆ ಭಾಷಣ ಬರದುಕೊಟ್ಟು, ಅವರ ಕಡೆ ಮಾತು ಆಡಿಸಿ, ಸಾಲಿ ಹುಡುಗರ ಕಡೆ ಸ್ವಾಗತ ಗೀತೆ ಹೇಳಿಸಿ, ಉದ್ದನ ಜಡೆ ಹುಡುಗಿಯರ ಕಡೆ ಬಹುಮಾನದ ತಾಟು ಕೊಟ್ಟು, ಐದಾರು ಸರತೆ ಅಡ್ಡಾಡಿಸಿ, ಕಡಿಕೆ ಕನ್ನಡ ಸಾಲಿ ಮಾಸ್ಟರ್ ಕಡೆ ಅಭಿನಂದನಾ ಭಾಷಣ ಮಾಡಿಸಿ, ಅವರು ಎಲ್ಲಾರಿಗೆ ಧನ್ಯವಾದ ಹೇಳಿ ಜೈ ಹಿಂದ್ ಜೈ ಕರ್ನಾಟಕ ಹೇಳಿದ ಮ್ಯಾಲೆ ಕಾರ್ಯಕ್ರಮ ಮುಗುದ ಹೋಗತಿತ್ತು.

ಈಗ ಈ ಕೊರೊನಾ ರಾಕ್ಷಸನ ಸಲುವಾಗಿ ಎಲ್ಲಾ ಆಫ್‌ಲೈನ್ (ಅಂದ್ರ ಮೈದಾನದ ಒಳಗ ಎಲ್ಲಾರ ಮುಂದ ಖುಲ್ಲಮ ಖುಲ್ಲ ಕಾರ್ಯಕ್ರಮ) ಬಂದ್ ಆಗಿ ಬರೆ ಆನ್‌ಲೈನ್ (ಅಂದ್ರ ಬಾಗಿಲು ಮುಚ್ಚಿಕೊಂಡು ಕಂಪ್ಯೂಟರ್‌ದಾಗ ಮಾತಾಡೋದು) ಚಾಲೂ ಆಗಿಬಿಟ್ಟಾವು.

ಮೈದಾನದ ಕಾರ್ಯಕ್ರಮ ಆದರ ಪೇಪರ್, ಟಿವಿಯವರು ಬರತಿದ್ದರು, ಭಾಷಣ ಕೇಳತಿದ್ದರು, ಎನಾರ ಸುದ್ದಿ ಆಗತಿತ್ತು. ಈಗ ಮುಚ್ಚಿದ ಬಾಗಲ ಹಿಂದ ಏನು ನಡಿತದೋ ಏನೋ, ಗೊತ್ತಿಲ್ಲ. ಅವರು ಇದು ಸುದ್ದಿ ಅಂತ ಹೇಳಿದ್ದು, ಇದನ್ನ ಬರೀರಿ, ಇದನ್ನ ಬರಿಬೇಡ್ರಿ, ಅಂತ ಫರ್ಮಾನು ಹೊರಡಿಸಿಬಿಟ್ಟರ ಆತು. ಅದೇ ಸುದ್ದಿ. ಕಾರ್ಯಕ್ರಮ ಮುಗದು ಧನ್ಯವಾದ ಅಂತ ಹೇಳೋ ಮೊದಲೇ ಅದರ ಸುದ್ದಿ ನಮ್ಮ ಸಾಮಾಜಿಕ ಜಾಲತಾಣದಾಗ ಬಂದುಬಿಟ್ಟಿರತದ. ಅದಕ್ಕಿಂತ ಮೊದಲ ಅದರ ಪರ-ವಿರೋಧದ ಚರ್ಚೆ ಆರಂಭ ಆಗಿ ದೋಸ್ತರ ನಡುವೆ ಜಗಳ ಆಗಿಬಿಟ್ಟಿರತದ. ಇಂತಹುದೆ ಒಂದು ಆನ್‌ಲೈನ್ ಕಾರ್ಯಕ್ರಮ ದೆಹಲಿಯ ದಂತ ಗೋಪುರದ ಯಾವುದೋ ಒಂದು ಕೋಣೆಯ ಒಂದು ಮುಚ್ಚಿದ ಬಾಗಿಲ ಹಿಂದೆ ನಡೆಯಿತು. ಅದರ ಹೆಸರು ಓಡಿಒಪಿ. ಅದನ್ನ ಮಾಡಿ ಓಡಿಹೋದವರು ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ. ಪ್ರಧಾನಿಯವರ ಹೆಸರನ್ನೇ ಇಟ್ಟುಕೊಂಡ ಈ ಸಚಿವರು ಅವರ ಹಂಗೇನೇ ಒಂದು ಆನ್‌ಲೈನ್ ಭಾಷಣ ಮಾಡಿದರು.

ಅದರೊಳಗ ನಾವು ಈಗ ಏನು ಮಾಡಲಿಕ್ಕ ಹೊಂಟೆವಿ ಅಂದ್ರ ಅದು ಬಹಳ ಮುಖ್ಯ ಅದ. ಅದು ರೈತರಿಗೆ ಒಳ್ಳೆಯದಾಗತದ. ಅದನ್ನು ಎಲ್ಲರೂ ಸ್ವಾಗತಿಸಬೇಕು, ಅಂತ ಅಂದ್ರು. ಅದು ಎನಪಾ ಅಂದ್ರ ಒನ್ ಡಿಸ್ಟ್ರಿಕ್ಟ್ ಒನ್ ಕ್ರಾಪ್ ಅರ್ಥಾತ್ ಒಂದು ಜಿಲ್ಲೆ ಒಂದು ಬೆಳೆ.

ಅದೇ ಧಾಟಿಯೊಳಗ ನಮ್ಮ ತೆರೆಯ ಮೇಲಿನ ಕೌರವ ಹಾಗೂ ತೆರೆಯ ಹಿಂದಿನ ನಾಯಕನಾದ ಬಸನಗೌಡ ಚನ್ನ ಬಸನಗೌಡ ಪಾಟೀಲ್, ಕೃಷಿ ಮಂತ್ರಿಗಳು ಸಾಕಿನ ಹೀರೆಕೆರೂರು – ಬ್ಯಾಡಗಿಲ್ಲಿ ಒಂದು ಖತರನಾಕ ಡೈಲಾಗ್ ಹೊಡೆದರು. ರೈತರು ವೀಕ್ ಮೈಂಡ್ ಆಗಿ ಸೆಲ್ಫ್ ಸೂಯಿಸೈಡ್ ಮಾಡಿಕೊಳತಾರ ಅಂತ ಒಂದು ಬಿಟ್ಟು ಎರಡು ಸಾರಿ ಹೇಳಿದರು. ಅದಕ್ಕೆ ಸರ್ಕಾರದ ನೀತಿ ಕಾರಣ ಅಲ್ಲ ಅಂತನೂ ಹೇಳಿದರು.

PC : KNN India

ಇವೆಲ್ಲ ಬಿಡಿ. ಅವರು ಹೇಳಿದ ದೊಡ್ಡ ಮಾತು ಅಂದ್ರ ಓಡಿಒಪಿ ಅನ್ನುವುದು ರೈತರ ಕಲ್ಯಾಣಕ್ಕಾಗಿ ಆಕಾಶದಿಂದ ಇಳಿದುಬಂದ ಯೋಜನೆ ಅಂತ.

ಹಂಗಾರ ಈ ಯೋಜನೆ ಏನು? ಎಲ್ಲಿಂದ ಬಂತು? ಇದರಾಗ ಒಂದು ಮಾತು ಎನಪಾ ಅಂದ್ರ ಖಾಸಗಿ ಕಂಪನಿಯವರು ನಾವು ಈ ವರ್ಷ ಈ ಆಹಾರ ಖಾದ್ಯವನ್ನು ಪ್ಲಾಸ್ಟಿಕ್ ಚೀಲದೊಳಗ ಪ್ಯಾಕ್ ಮಾಡಿ ಮಾರಾಟ ಮಾಡಬೇಕು ಅಂತ ಮಾಡೇವಿ ಅಂತ ಸರ್ಕಾರಕ್ಕ ಹೇಳತಾರ. ಸರಕಾರ ಜಿ ಹಾಂ ಅಂತ ಹೇಳಿ ರೈತರಿಗೆ ಇದನ್ನ ಬೆಳೆಯಿರಿ ಅಂತ ಹೇಳತದ. ಸರಕಾರ ಹೇಳತದ ಅಂತ ನಮ್ಮವರು ಬೆಳಿತಾರ. ಅದನ್ನ ಆ ಕಂಪನಿಯವರು ಖರೀದಿ ಮಾಡಿ ಅದನ್ನ ಒಣಗಿಸಿ, ಉಪ್ಪು ಖಾರ ಹಾಕಿ ಮಾರಾಟ ಮಾಡತಾರ. ಇದರೊಳಗ ಪ್ಲಾಸ್ಟಿಕ್ ಚೀಲ ಮಾಡಿದವರು ಒಬ್ಬರು, ಆಹಾರ ಧಾನ್ಯ ಬೆಳೆದವರು ಇನ್ನೊಬ್ಬರು, ಉಪ್ಪು ಖಾರ ಹಾಕುವ ಜಾಬ್ ವರ್ಕ್ ಮಾಡಿವರು ಮತ್ತೊಬ್ಬರು. ಆದರ ಫಾಯದಾ ಮಾಡಿಕೊಂಡವರು ಮಾತ್ರ ಸರ್ಕಾರದ ಗೆಳೆಯರಾಗಿರುವ ಕಂಪನಿಯವರು.

ಆ ಕಂಪನಿಗಳಿಗೆ ಬಹಳ ಓಡಾಟ ಆಗಬಾರದು. ಅವರಿಗೆ ಬ್ಯಾರೆ ಬ್ಯಾರೆ ಊರಿನ ನೀರು ಕುಡಿದು ನೆಗಡಿ-ಕೆಮ್ಮ ಆಗಬಾರದು ಅಂತ ಸರ್ಕಾರದವರು ಒಂದು ಜಿಲ್ಲೆಗೆ ಒಂದು ಬೆಳೆ ಸಿಗೋ ಹಂಗ ಆಗಬೇಕು ಅಂತ ಹೇಳಿ ರೈತರಿಗೆ ಈ ಯೋಜನೆ ತೊಗೊಂಡು ಬಂದಾರ.

ರೈತರು ಎನಂದರೂ ಶ್ರಮ ಜೀವಿಗಳು, ಬಿಸಿಲು-ಮಳೆ-ಚಳಿ-ಗಾಳಿ ಒಳಗ ಕೆಲಸ ಮಾಡಿ ಅಭ್ಯಾಸ ಇದ್ದವರು. ಪಾಪ, ಕಂಪನಿ ಒಳಗ ಕೆಲಸ ಮಾಡೋ ಎಂಬಿಎಗಳಿಗೆ ಜಮೀನಿಗೆ ಹೋಗು ಅಂದ್ರ ಹೆಂಗ? ಕೆಲಸ ಮಾಡೋ ಮುಂದ ಅವರ ಸೂಟು-ಬೂಟು ಟೈ ತೆಗೆದು ಇಡಲಿಕ್ಕೆ ಜಮೀನು ಒಳಗ ಶುಭ್ರ ವಾದ ಸ್ವಚ್ಛ ಜಾಗ ಎಲ್ಲೆ ಸಿಗಬೇಕು?

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದ ಕೃಷಿ ಸಚಿವ ಬಿ.ಸಿ.ಪಾಟೀಲ್
ಬಿ.ಸಿ. ಪಾಟೀಲ್.

ಸರಕಾರ ಹೇಳಿದ ಹಂಗ ಕೇಳಿದರ ಸರಕಾರ ಎಲ್ಲಾ ರೀತಿಯ ತರಬೇತಿ-ಸಹಕಾರ ಕೊಡತದ. ಅಮೆರಿಕ-ಯೂರೋಪುನಲ್ಲಿ ಓದಿ ಓಡೋಡಿ ಬಂದ, ತಮ್ಮ ಜೀವನದಲ್ಲಿ ಕೇವಲ ಯೂಟ್ಯೂಬುಗಳಲ್ಲಿ ಮಾತ್ರ ಜಮೀನು ನೋಡಿ ಎಲ್ಲಾ ಕಲೆ ಕಲಿತುಕೊಂಡಿರುವ ಕೃಷಿ ಪಂಡಿತರು ತಲೆತಲಾಂತರದಿಂದ ಕೃಷಿ ಮಾಡುತ್ತಿರುವ ರೈತರಿಗೆ ತರಬೇತಿ ಕೊಡತಾರ. ಪೂರ್ತಿ ಇಂಗ್ಲಿಷಿನಲ್ಲಿ ಮಾತ ಆಡೋದಿಲ್ಲ. ನಡುನಡುವೆ ಕನ್ನಡ ಮಾತು ಅಡತಾರ. ‘ನಾ ಹೇಳ್ತಾ ಇರೋದು ತಿಳಿತಲ್ಲಾ, ಇಟ್ ಈಸ್ ವೆರೀ ಸಿಂಪಲ್’ ಅಂತ ಎಲ್ಲಾ ಕನ್ನಡ ಮಾತಾಡತಾರ.

ಕಂಪನಿಯವರು ಬೀಜ ಕೊಡತಾರ, ಗೊಬ್ಬರ ಕೊಡತಾರ, ಸಾಲ ಕೊಡತಾರ, ಡ್ರಿಪ್ ಇರಿಗೇಷನ್ ಕೊಡತಾರ, ಅವರ ಮಾತು ಕೇಳಿದರ ಇಸ್ರೇಲಿಗೆ ಕರಕೊಂಡು ಹೋಗತಾರ.

ಹಂಗ ಅಂತ ಯಾರಾದರೂ ರೈತರು ಅವರ ಮಾತು ಕೇಳಲೆ ಇಲ್ಲ ಅಂದ್ರ ಏನು ಮಾಡತಾರ? ಏನು ಮಾಡೋದಿಲ್ಲ. ಬಹಳ ಅಂದ್ರ ಸರಳ ಸಾಲ ಸಿಗಲಿಕ್ಕೆ ಇಲ್ಲ, ಬೀಜ ಗೊಬ್ಬರ ಕಷ್ಟ ಆಗಬಹುದು, ಬೆಳೆ ವಿಮೆ ಕಷ್ಟ ಆಗಬಹುದು, ಅಷ್ಟ. ಅಥವಾ ರೈತರಿಗೆ ತಮಗೆ ಬೇಕಾದ ಬೆಳೆ ಬೆಳಿಯಲಿಕ್ಕೆ ಆಗಲಿಕ್ಕಿಲ್ಲ. ಎಲ್ಲದರೊಳಗು ಸ್ವತಂತ್ರ ಬೇಕು ಅಂದ್ರ ಹೆಂಗ? 1947ರೊಳಗ ಸಿಕ್ಕದಲ್ಲಾ ಸಾಕು.

ರೊಕ್ಕ ಅನ್ನೋದು ಎಲ್ಲಕ್ಕಿಂತ ದೊಡ್ಡದು. ಸ್ವಾತಂತ್ರ ಯಾರಿಗೆ ಬೇಕು? ಅಷ್ಟೂ ಗೊತ್ತಿಲ್ಲ ಅಂದ್ರ ಹೆಂಗ?


ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿಗೆ ಪೊಲೀಸರ ಕೆಲವು ಷರತ್ತುಗಳು: ಒಪ್ಪದ ರೈತ ಸಂಘಟನೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...