Homeಮುಖಪುಟನಗುವನ್ನು ಕಠೋರ ಜಗತ್ತಿನ ಎದುರು ಗುರಾಣಿಯಾಗಿ, ಕಾವ್ಯವನ್ನು ಪ್ರತಿಭಟನೆಯ ಅಸ್ತ್ರವಾಗಿ ಬಳಸಿದ ಸಿದ್ಧಲಿಂಗಯ್ಯನವರು

ನಗುವನ್ನು ಕಠೋರ ಜಗತ್ತಿನ ಎದುರು ಗುರಾಣಿಯಾಗಿ, ಕಾವ್ಯವನ್ನು ಪ್ರತಿಭಟನೆಯ ಅಸ್ತ್ರವಾಗಿ ಬಳಸಿದ ಸಿದ್ಧಲಿಂಗಯ್ಯನವರು

- Advertisement -
- Advertisement -

ಕನ್ನಡದಲ್ಲಿ ಹಾಸ್ಯ ಬರವಣಿಗೆಯ ಒಂದು ಸಂಪ್ರದಾಯವಿದೆ. ಇದು ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇಂದಿಗೂ ಜನಪ್ರಿಯವಾಗಿದೆ. ತಮಾಷೆಗೆ ಒಳಗಾಗುವವರು ದಡ್ಡ, ಪೆದ್ದ ಅಥವಾ ಸಮಾಜದ ಕೆಳವರ್ಗದವರೇ ಆಗಿರುತ್ತಾರೆ. ಸಿದ್ಧಲಿಂಗಯ್ಯ ಅವರ ಸಾಹಿತ್ಯಕ್ಕೆ ಬಂದರೆ, ಬಡವರ ಮೇಲೆ ಪ್ರಯೋಗ ಮಾಡುವ ಕ್ರೂರ ಹಾಸ್ಯ ಎಲ್ಲೂ ಕಾಣುವುದಿಲ್ಲ. ಎಷ್ಟೋ ಕಡೆ ಅದು ಉಳ್ಳವರನ್ನು ಎಚ್ಚರಿಸುವ ಹಾಸ್ಯವಾಗಿರುತ್ತದೆ. ಅದರಲ್ಲಿ ಚಾಪ್ಲಿನ್ ಮಾಡುವಂತಹ ಹಾಸ್ಯ ಸಿನಿಮಾದ ಒಂದು ಗುಣವಿದೆ. ಅನ್ಯಾಯವನ್ನು ಎತ್ತಿತೋರಿಸಲು ನಗುವನ್ನೇ ಅಸ್ತ್ರವಾಗಿಸಿಕೊಳ್ಳುವುದು ಅವರ ವಿಧಾನ ಎಂದು ತೋರುತ್ತದೆ.

ಅವರ ಬಾಲ್ಯದ ಘಟನೆ ಒಂದು ಹೇಳುತ್ತಾರೆ. ಒಂದು ದಿನ ಅವರು ಶಾಲೆಗೆ ಹೊರಡುವಾಗ ತಡವಾಯಿತು ಎಂದು ಅವರ ಅಕ್ಕ ನಡುದಾರಿಯಲ್ಲಿ ಬಂದು ಮುದ್ದೆಯನ್ನು ಕೊಡುತ್ತಾರೆ. ಅದನ್ನು ತಮ್ಮ ಚೀಲದಲ್ಲಿ ಹಾಕಿಕೊಂಡು ಶಾಲೆಗೆ ಹೋಗುತ್ತಾರೆ. ಆದರೆ ಶಾಲೆಯಲ್ಲಿ ಯಾರೋ ಹುಡುಗ ತನ್ನ ಪೆನ್ಸಿಲ್ ಕಳೆದುಹೋಯಿತು ಎಂದು ಶಿಕ್ಷಕರಿಗೆ ದೂರು ಕೊಟ್ಟಿರುತ್ತಾನೆ. ಆಗ ಟೀಚರ್ ಎಲ್ಲ ಮಕ್ಕಳ ಶಾಲಾಚೀಲಗಳನ್ನು ಹುಡುಕಲು ಶುರು ಮಾಡುತ್ತಾರೆ. ಸಿದ್ಧಲಿಂಗಯ್ಯ ಅವರು ಮಾತ್ರ ತನ್ನ ಚೀಲವನ್ನು ಪರಿಶೀಲಿಸಲು ಬಿಡುವುದಿಲ್ಲ. ಕೊನೆಗೆ ಶಿಕ್ಷಕರು ಬಲವಂತವಾಗಿ ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ ಪೆನ್ಸಿಲ್ ಸಿಗದೆ ಮುದ್ದೆ ಸಿಗುತ್ತದೆ. ಅದನ್ನು ನೋಡಿ ಮಕ್ಕಳು ’ಮುದ್ದೆ, ಮುದ್ದೆ’ ಎಂದು ಅವರನ್ನು ಅಣಕಿಸಲು ಪ್ರಾರಂಭಿಸುತ್ತಾರೆ. ಹೀಗೆ ಮಕ್ಕಳಿಂದ ಹಿಡಿದು ಇಡೀ ಸಮುದಾಯದಲ್ಲಿ ಯಾವ ರೀತಿಯಲ್ಲಿ ಅಸೂಕ್ಷ್ಮತೆ ಇರುತ್ತದೆ ಎಂಬುದನ್ನು ಅವರು ತೋರುತ್ತಾ ಹೋಗುತ್ತಾರೆ.

ಚಾರ್ಲಿ ಚಾಪ್ಲಿನ್ ತನ್ನ ಆತ್ಮ ಚರಿತ್ರೆಯಲ್ಲಿ ಹೇಳುತ್ತಾನೆ : “ಬಾಲ್ಕನಿಯಿಂದ ಬಿದ್ದ ವಸ್ತುವೊಂದು ಬಡವನ ತಲೆ ಮೇಲೆ ಬಿದ್ದರೆ ಅದು ಹಾಸ್ಯವಲ್ಲ, ಯಾರೂ ನಗುವುದಿಲ್ಲ. ಆದರೆ ದರ್ಪದಿಂದ ಮೆರೆಯುವ ಸಾಹುಕಾರನ ತಲೆ ಮೇಲೆ ಬಿದ್ದರೆ ಅದು ತುಂಬಾ ತಮಾಷೆಯಾಗಿ ಕಾಣುತ್ತದೇ” ಎಂದು. ಸಿದ್ಧಲಿಂಗಯ್ಯ ಅವರು ಹಾಸ್ಯ ಸಾಹಿತ್ಯವನ್ನು ಇದೇ ರೀತಿ ಮರುವ್ಯಾಖ್ಯಾನಿಸುತ್ತಾರೆ. ಏನೂ ತಿಳಿಯದವರನ್ನು, ಏನೂ ಇಲ್ಲದವರನ್ನು ಆಡಿಕೊಳ್ಳುವುದು ಏಕೆ ತಪ್ಪು ಎಂದು ಸಿದ್ಧಲಿಂಗಯ್ಯ ಅವರು ತಮ್ಮ ಬರಹಗಳ ಮೂಲಕ ತೋರಿಸಿಕೊಡುತ್ತಾರೆ.

’ಇಕ್ರಲಾ, ವದೀರ್‍ಲಾ’ ತುಂಬಾ ಹೆಸರು ಮಾಡಿದ ಪದ್ಯ. ಅದನ್ನು ಹೇಗೆ ಬರೆದಿದ್ದು ಎಂದು ಅವರು ಒಮ್ಮೆ ಹೇಳಿದ್ದರು. ಐಎಎಂನ ಕೆಲವರು, ದಲಿತರು ಹೇಗೆ ಬದುಕುತ್ತಾರೆ ಎಂದು ತಿಳಿಯಲು ತಮಿಳುನಾಡಿನ ದಲಿತರ ಕೇರಿಯಲ್ಲಿ 15 ದಿನಗಳು ಉಳಿದ ಪ್ರಸಂಗ ನಡೆಯಿತಂತೆ. ಅದಾದ ನಂತರ ಅಲ್ಲಿನ ಜನರು ತುಂಬಾ ನೋವಿನಿಂದ ಸಿದ್ಧಲಿಂಗಯ್ಯ ಅವರೊಂದಿಗೆ ಅದರ ಬಗ್ಗೆ ಹೇಳಿಕೊಳ್ಳುತ್ತಾರೆ. ಆಗ ಆ ಪದ್ಯ ಬರೆದಿದ್ದು ಎಂದು ಅವರು ಹೇಳಿಕೊಂಡಿದ್ದಾರೆ. ಜನರ ಅಸೂಕ್ಷ್ಮತೆ ಹೇಗಿರುತ್ತದೆ ಎಂಬುದನ್ನು ನೋಡಿ ರೊಚ್ಚಿನಿಂದ ಅವರು ಬರೆದ ಪದ್ಯ ಅದು. ಮೊದಲೆಲ್ಲಾ ರೋಷದಲ್ಲಿ ಬರೆಯುತ್ತಿದ್ದ ಅವರ ವರಸೆ ಬರಬರುತ್ತ ಸೌಮ್ಯವಾಗಿ ಬದಲಾಯಿತು. ಅವರ ಆತ್ಮಕಥನದಲ್ಲಿ ಸಮಾನತೆಯ ಬಗೆಗಿನ ಚಿಂತನೆ, ಮೂಢನಂಬಿಕೆ ವಿರುದ್ಧದ ಚಿಂತನೆಯನ್ನು ನಾವು ಕಾಣಬಹುದು, ಆದರೆ ಮೊದಲಿನ ಆಕ್ರೋಶ ಅಲ್ಲಿಲ್ಲ.

ಒಬ್ಬ ಸ್ವಾಮೀಜಿ ಪತ್ರಿಕೆಯಲ್ಲಿ ’ನಾನು ದೇವರನ್ನು ತೋರಿಸುತ್ತೇನೆ’ ಎಂದು ಜಾಹಿರಾತು ನೀಡುತ್ತಾನೆ. ಸಿದ್ಧಲಿಂಗಯ್ಯ ಮೂರ್ನಾಲ್ಕು ಸ್ನೇಹಿತ ಜೊತೆಗೂಡಿ ಅಲ್ಲಿಗೆ ತೆರಳುತ್ತಾರೆ. ದೇವರನ್ನು ತೋರಿಸಿ ಎಂದು ಹೇಳುತ್ತಾರೆ. ಆಗ ಸ್ವಾಮೀಜಿ ’ನಾನೇ ದೇವರು’ ಎಂದು ಹೇಳುತ್ತಾನೆ. ’ಯಾವ ದೇವರು?’ ಎಂದು ಕೇಳಿದಾಗ ’ಶಿವ’ ಎಂದು ಹೇಳುತ್ತಾನೆ. ಆಗ ಸಿದ್ದಲಿಂಗಯ್ಯ ಅವರು, ’ನೀವೊಂದು ಕೊಲೆ ಮಾಡಿದ್ದೀರಿ’ ಎನ್ನುತ್ತಾರೆ. ಸ್ವಾಮೀಜಿ ತಬ್ಬಿಬ್ಬಾದಾಗ, ’ನೀವು ದೊಡ್ಡದಾಗಿ ಕಣ್ಣು ಬಿಟ್ಟು ಆ ಮನ್ಮಥನನ್ನ ಕೊಲೆ ಮಾಡಿದ್ದೀರಾ,’ ಎಂದು ಹೇಳುತ್ತಾರೆ. ಆಗ ಸ್ವಾಮೀಜಿ ಹೇಳೋದು: ’ಹೋ ಹೌದು ಅವನು ತುಂಬಾ ತಲೆಹರಟೆ ಮಾಡುತ್ತಿದ್ದ. ಅದಕ್ಕೆ ಹಾಗೆ ಮಾಡಿದೆ.’ ’ತಮ್ಮ ವಾಸ ಎಲ್ಲಿ ಅಂದರೆ ಕೈಲಾಸ ಪರ್ವತ ಎಂದು ಹೇಳುತ್ತಾನೆ. ಅದಕ್ಕೆ ಸಿದ್ಧಲಿಂಗಯ್ಯ ಅವರು, ’ಚೀನಾದವರು ದಾಳಿ ಮಾಡಿದರಲ್ಲ ನೀವ್ಯಾಕೆ ತಡೆಯಲಿಲ್ಲ?’ ಎಂದು ಕೇಳುತ್ತಾರೆ.
’ಇಂಡಿಯಾದವರಿಗೆ ನನ್ನ ಮೇಲೆ ಭಕ್ತಿ ಕಡಿಮೆಯಾಗಿತ್ತು, ಅವರಿಗೆ ಸ್ವಲ್ಪ ಬುದ್ಧಿ ಕಲಿಸೋಣ ಎಂದು ನಾನೇ ಅವರನ್ನು ಛೂ ಬಿಟ್ಟೆ,’ ಎಂದು ಸ್ವಾಮೀಜಿ ಹೇಳುತ್ತಾರೆ.

ಹೀಗೆ ಸಿದ್ಧಲಿಂಗಯ್ಯ ಅವರ ಜೀವನದುದ್ದಕ್ಕೂ ತುಂಟತನದಿಂದ ಸತ್ಯವನ್ನು ಬಯಲು ಮಾಡುವಂತಹ ಸುಮಾರು ಘಟನೆ ನಡೆದಿದೆ. ಅವರು ದೇವರನ್ನು ನಂಬಲ್ಲ ಎಂದು ಕೊನೆಯವರೆಗೂ ಹೇಳುತ್ತಿದ್ದರು. ಮೂಢನಂಬಿಕೆಗಳ ವಿರುದ್ಧ ಇದ್ದರು. ಪ್ರತಿನಿತ್ಯ ನಡೆಯುವ ಘಟನೆಯನ್ನು ತುಂಟತನದಿಂದಲೆ ನೋಡುತ್ತಿದ್ದರು. ಅವರ ಸುತ್ತಮುತ್ತಲು ಇರುವವರನ್ನು ಯಾವ ರೀತಿಯಲ್ಲಿ ನಗಿಸುತ್ತಿದ್ದರೆಂದರೆ ಗಂಭೀರ ಮುಖ ಹಾಕಿಕೊಂಡು ಕೂರುವುದು ಕಷ್ಟವಾಗಿರುತ್ತಿತ್ತು. ಒಮ್ಮೆ ಜೋಗ ಜಲಪಾತ ನೋಡಿ ಮೂರು ನಾಲ್ಕು ಜನ ಹೆಗ್ಗೋಡಿಗೆ ಹಿಂತಿರುಗಿದ್ದೆವು. ತಕ್ಷಣ ಒಳಗಡೆ ಹೋಗಿ ಮುಸುಕು ಹಾಕಿ ಮಲಗಿಬಿಟ್ಟರು. ’ನಾವಿನ್ನೂ ಒಳಗಡೆ ಕಾಲಿಟ್ಟಿದ್ದಷ್ಟೇ, ಅಷ್ಟರೊಳಗೆ ಮಲಗಿಬಿಟ್ಟಿದ್ದೀರಲ್ಲ?’ ಎಂದು ಅಚ್ಚರಿಯಿಂದ ಕೇಳಿದೆ. ಅದಕ್ಕೆ ಅವರು, ’ನೋಡಿ ನಾನು ಹೇಗೆಂದರೆ, ಸಮಯ ವೇಸ್ಟ್ ಮಾಡುವುದಿಲ್ಲ. ಐದು ನಿಮಿಷ ಸಿಕ್ಕರೂ ಮಲಗಿ ನಿದ್ದೆಮಾಡಿಬಿಡುತ್ತೇನೆ,’ ಎಂದು ಹೇಳಿದ್ದರು.

ದಲಿತ ಸಂಘರ್ಷ ಸಮಿತಿ ಹೇಗೆ ಕಟ್ಟಿದ್ದು ಎಂದು ಕೂಡ ಅವರು ಬರೆದುಕೊಂಡಿದ್ದಾರೆ. ಕೊನೆಗೆ ಅವರು ಬಿಜೆಪಿ ಜೊತೆಗಿನ ಸಂಪರ್ಕ ಮತ್ತು ಅಮಿತ್ ಷಾ ಅವರನ್ನು ಭೇಟಿಯಾಗಿದ್ದರ ಬಗ್ಗೆ ತುಂಬಾ ಟೀಕೆಗಳು ಬಂದವು. ಆದರೆ ತಮ್ಮ ರಾಜಕೀಯ ನಿಲುವನ್ನು ಬದಲಾಯಿಸಿಲ್ಲ ಎಂದೇ ಹೇಳುತ್ತಿದ್ದರು. ’ನಾನಿನ್ನೂ ನಾಸ್ತಿಕನಾಗಿಯೆ ಇದ್ದೇನೆ. ದಲಿತರ ಪರವಾಗಿ, ಕನ್ನಡದ ಪರವಾಗಿ, ಇರುವ ಬೇಡಿಕೆಯನ್ನು ಇಟ್ಟು ಒತ್ತಾಯ ಮಾಡಿದೆ,’ ಎಂದು ಹೇಳುತ್ತಿದ್ದರು. ಈ ನಿಲುವನ್ನು ಅನುಮಾನದಿಂದಲೇ ಅವರ ಹೋರಾಟದ ಜೊತೆಗಾರರು ಕಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಅವರಿಗೆ ಎಲ್ಲೆಡೆ ಸ್ನೇಹಿತರಿದ್ದರು ಎನ್ನುವುದಂತೂ ನಿಜ. ಯಡಿಯೂರಪ್ಪ ಅವರನ್ನು ಕೊಂಡಾಡಿ ಬಸವಣ್ಣ ಎಂದು ಪರಾಕು ಹಾಕಿದರು ಎಂಬ ಆಪಾದನೆ ಅವರ ಮೇಲೆ ಇತ್ತು. ಅದು ತಪ್ಪಾಗಿ ವರದಿಯಾಗಿದೆ ಎಂದು ಅವರು ಹೇಳಿದ ಒಂದು ವಿಡಿಯೋ ಇಂಟರ್ನೆಟ್‌ನಲ್ಲಿ ಕಾಣಬಹುದು.

ಆತ್ಮಚರಿತ್ರೆ ಸಾಮಾನ್ಯವಾಗಿ ಇಂತಹ ಜಾಗದಲ್ಲಿ ಹುಟ್ಟಿದೆ, ಇಲ್ಲಿ ಬೆಳೆದೆ ಎಂಬ ರೀತಿ ಬರೆಯುತ್ತಾರೆ. ಆದರೆ ಸಿದ್ಧಲಿಂಗಯ್ಯನವರು ಅದಕ್ಕೆ ಬದಲಾಗಿ ಪ್ರಸಂಗಗಳ ಮೂಲಕ ತಮ್ಮ ಜೀವನದ ಕತೆಯನ್ನು ಹೇಳುತ್ತಾರೆ. ಅವರ ಆತ್ಮಚರಿತ್ರೆಯನ್ನು ಓದಿದಾಗ ಅವರು ತಮ್ಮ ಬಗ್ಗೆ ಬರೆಯುವುದಕ್ಕಿಂತ, ತಮ್ಮ ಸುತ್ತಮುತ್ತಲಿನ ಜನರ ಬಣ್ಣ ಬಣ್ಣದ ಬದುಕನ್ನು ಚಿತ್ರಿಸುವುದೇ ಹೆಚ್ಚಾಗಿದೆ. ಹಾಗಾಗಿ ಆತ್ಮ ಚರಿತ್ರೆ ಅನ್ನುವುದನ್ನೂ ಅವರು ಕನ್ನಡ ಸಂದಂರ್ಭದಲ್ಲಿ ಮರುವ್ಯಾಖ್ಯಾನಿಸಿದರು. ಆ ಪ್ರಕಾರವನ್ನು ಹೀಗೂ ಬರೆಯಬಹುದು ಎಂದು ತೋರಿಸಿಕೊಟ್ಟವರು ಅವರೇ ಆಗಿದ್ದಾರೆ. ನನಗೆ ಗೊತ್ತಿದ್ದ ಮಟ್ಟಿಗೆ ಆ ರೀತಿಯಾದ ಆತ್ಮ ಚರಿತ್ರೆಗಳು ಯಾವುದೂ ಇಲ್ಲ.

ಅವರ ಕಾವ್ಯದ ಎರಡು ಮಗ್ಗುಲನ್ನು ಎಲ್ಲರೂ ಗುರುತಿಸುತ್ತಾರೆ. ಮೊದಲಿನದು ರೊಚ್ಚಿನ, ಆಕ್ರೋಶದ ಕಾವ್ಯ, ಮತ್ತು ಎರಡನೆಯದ್ದು ನವಿರು ಪ್ರೇಮ ಕಾವ್ಯ. ’ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಥರದ ಹಾಡುಗಳು ಸಮುದಾಯ ಗೀತೆಗಳೂ, ಹೋರಾಟ ಗೀತೆಗಳೂ, ಸೊಗಸೆನಿಸುವ ಕಾವ್ಯವೂ ಒಟ್ಟೊಟ್ಟಿಗೆ ಆಗಿವೆ. ಅವರು ಎರಡನೆ ಹಂತದಲ್ಲಿ ಬರೆದಂತಹ ಪ್ರೇಮ ಗೀತೆಗಳ ಬಗ್ಗೆ ಬಂದ ಟೀಕೆಯ ಬಗ್ಗೆಯೂ ತಮಾಷೆಯಾಗೇ ಮಾತಾಡುತ್ತಿದ್ದರು. ಮದರಾಸಿಗೆ ಹೋಗಿ ಸಿನಿಮಾ ಹಾಡು ಬರೆದು ಬಂದ ಅನುಭವವನ್ನೂ ಕೀಟಲೆ ಮಾಡಿಕೊಂಡು ಹೇಳಿಕೊಳ್ಳುತ್ತಿದ್ದರು.

ಕನ್ನಡ ಕಾವ್ಯದಲ್ಲಿ ಪ್ರತಿಭಟನೆಯ ಅಂಶ ಮೊದಲಿನಿಂದಲೂ ಇದ್ದರೂ, ಸಿದ್ಧಲಿಂಗಯ್ಯ ಅವರ ಬರಹದ ಭಾಷೆ ಹೊಸದಾಗಿದೆ. ಈ ಹಿಂದೆ ಶಿಷ್ಟ ಭಾಷೆ ಎಂದು ಯಾವುದು ಅನ್ನಿಸಿಕೊಂಡಿತ್ತೋ ಅದಕ್ಕೆ ಎದುರಾಗುವಂತಹ ಹಾಗೂ ಅದನ್ನು ಮೀರಿದ ತೀವ್ರತೆ ತೋರಿಸುವ ಭಾಷೆಯನ್ನು ಅವರು ಬಳಸಿದರು. ಬಹಳ ಜನ ಸ್ನೇಹಿತರ ಜೊತೆಗೂಡಿ ಚಳುವಳಿಗಳನ್ನು ಹುಟ್ಟುಹಾಕುವುದರಲ್ಲಿ, ಅದಕ್ಕೊಂದು ಸೈದ್ಧಾಂತಿಕ ದಿಕ್ಕು ತೋರುವ ನಿಟ್ಟಿನಲ್ಲಿ ಮಾಡಿದ ಕೆಲಸವನ್ನು ಸ್ವಲ್ಪ ಕಡಿಮೆಯೇ ಬರೆದುಕೊಂಡಿದ್ದಾರೆ. ಡಿ.ಆರ್. ನಾಗರಾಜ್ ಮತ್ತು ಅವರ ಸಂಬಂಧ ಬಹಳ ಸ್ನೇಹದ ಮತ್ತು ತುಂಟತನದ ಸಂಬಂಧವಾಗಿತ್ತು. ಅವರು ಒಬ್ಬರನ್ನೊಬ್ಬರು ತಮಾಷೆ ಮಾಡಿಕೊಂಡೇ ಇರುತ್ತಿದ್ದರು.

ನಗುವನ್ನು ಕಠೋರ ಜಗತ್ತಿನ ಎದುರು ಹೇಗೆ ಗುರಾಣಿಯಾಗಿ ಬಳಸಬಹುದು ಎನ್ನುವುದನ್ನು ತೋರಿಸಿಕೊಟ್ಟಂತೆಯೇ, ಪ್ರತಿಭಟನೆಯ ಹೊಸ ದನಿಯೊಂದನ್ನು ಅವರು ಕನ್ನಡ ಸಾರಸ್ವತ ಲೋಕಕ್ಕೆ ತೋರಿಸಿಕೊಟ್ಟಿದ್ದಾರೆ.

(ಬರಹ ರೂಪಕ್ಕೆ): ಬಾಪು ಅಮ್ಮೆಂಬಳ

ಎಸ್ ಆರ್ ರಾಮಕೃಷ್ಣ

ಎಸ್ ಆರ್ ರಾಮಕೃಷ್ಣ
ಹಿರಿಯ ಪತ್ರಕರ್ತ ಮತ್ತು ಸಂಗೀತ ನಿರ್ದೇಶಕ. ಸಿದ್ಧಲಿಂಗಯ್ಯವನವರ ಆತ್ಮಕತೆ ’ಊರುಕೇರಿ’, ಅನಂತಮೂರ್ತಿಯವರ ಆತ್ಮಕತೆ ’ಸುರಗಿ’ಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಗಿರೀಶ್ ಕಾಸರವಳ್ಳಿಯವರ ’ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ‘ಜೈಲನ್ನು ತೋರಿಸಿ ನಮ್ಮನ್ನು ಬೆದರಿಸಲಾಗದು’ – ಬಿಡುಗಡೆಗೊಂಡ ವಿದ್ಯಾರ್ಥಿ ಹೋರಾಟಗಾರರ ಘೋಷಣೆಗಳಿವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...