Homeಕರ್ನಾಟಕಕನ್ನಡ ಹೋರಾಟಗಾರರ ಬಂಧನದ ಹಿಂದೆ ಅಮಿತ್ ಶಾ ಕುತಂತ್ರವಿದೆ: ಮಹೇಂದ್ರ ಕುಮಾರ್

ಕನ್ನಡ ಹೋರಾಟಗಾರರ ಬಂಧನದ ಹಿಂದೆ ಅಮಿತ್ ಶಾ ಕುತಂತ್ರವಿದೆ: ಮಹೇಂದ್ರ ಕುಮಾರ್

- Advertisement -
- Advertisement -

ಹಿಂದಿ ಬ್ಯಾನರ್ ಹರಿದ ನೆಪವೊಡ್ಡಿ ಕೇಸು ಹಾಕಲಾಗಿದೆ ಅಷ್ಟೇ. ಆದರೆ ಬಂಧನದ ಹಿಂದೆ ಇರುವುದು ಬ್ಯಾನರ್ ವಿಚಾರ ಅಲ್ಲ. ಬದಲಿಗೆ ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು ಎಂದು ನಡೆಸುತ್ತಿರುವ ದಿಟ್ಟ ಹೋರಾಟವೇ ಕಾರಣ. ಕನ್ನಡ ಹೋರಾಟಗಾರರ ಬಂಧನದ ಹಿಂದೆ ಗೃಹ ಸಚಿವ ಅಮಿತ್ ಶಾರವರ ಕುತಂತ್ರವಿದೆ ಎಂದು ನಮ್ಮ ಧ್ವನಿ ಬಳಗದ ಮಹೇಂದ್ರ ಕುಮಾರ್ ಆರೋಪಿಸಿದ್ದಾರೆ.

ಕನ್ನಡ ಹೋರಾಟಗಾರರ ಬಂಧನ ವಿರೋಧಿಸಿ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿ ಧರ್ಮದ ವಿಚಾರ ಮುನ್ನಲೆಗೆ ತರುವುದು ಸರಿಯಲ್ಲ. ಕರ್ನಾಟಕದಲ್ಲಿ ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಕರ್ನಾಟಕದಲ್ಲಿರುವವರು ಕನ್ನಡ ಕಲಿತು ವ್ಯವಹರಿಸಬೇಕು ಮತ್ತು ಕನ್ನಡಿಗರಿಗೆ ಸ್ಥಳೀಯ ಉದ್ಯೋಗ ಸಿಗಬೇಕು ಇವೇ ನಮ್ಮ ಪ್ರಮುಖ ಹಕ್ಕೊತ್ತಾಯಗಳಾಗಿವೆ ಎಂದರು.

ಕೇವಲ ಒಂದು ಬ್ಯಾನರ್ ಹರಿದ ವಿಚಾರವಾಗಿದ್ದರೆ ಬಿ.ಹರೀಶ್ ಕುಮಾರ್ ರವರ ಮನೆ ಮುಂದೆ 2 ಪೊಲೀಸ್ ಬಸ್ ಗಳನ್ನು ತಂದು ನಿಲ್ಲಿಸುವ ಅಗತ್ಯವಿರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ಅಮಿತ್ ಶಾರವರ ಆದೇಶದ ಮೇರೆಗೆ ಈ ಬಂಧನ ನಡೆಸಿರುವುದು ಅಕ್ಷಮ್ಯ ಎಂದು ತಿಳಿಸಿದರು.

ಕನ್ನಡ ಚಳವಳಿಯ ಅಧ್ಯಕ್ಷ ನಾಗೇಶ್ ಮಾತನಾಡಿ “ನಾವು ಜಾತಿ ಧರ್ಮದ ಭೇದ ಮಾಡುವುದಿಲ್ಲ. ನಮಗೆ ಕನ್ನಡವೇ ಜಾತಿ, ಕನ್ನಡವೇ ಧರ್ಮ. ಕನ್ನಡ ಉಳಿಸಿ ಬೆಳೆಸಲು ಕನ್ನಡ ಸಂಘಟನೆಗಳು ಮಾತ್ರವಲ್ಲದೇ ನಾಡಿನ ಎಲ್ಲಾ ಜನರು ಸ್ಪಂದಿಸುತ್ತಿರುವುದು ಸಂತೋಷಕರ ವಿಷಯವಾಗಿದೆ. ನಾವು ಜೈಲುಗಳಿಗೆ ಹೆದರುವ ಪ್ರಮೇಯವೇ ಇಲ್ಲ ಬದಲಿಗೆ ಕನ್ನಡ ಚಳವಳಿ ಇನ್ನೂ ಜೋರಾಗಲಿದೆ ಎಂದರು.

ಪತ್ರಕರ್ತ ಲಕ್ಷ್ಮಣ್ ಹೂಗಾರ್ ಮಾತನಾಡಿ ಕನ್ನಡಪರ ಸಂಘಟನೆಗಳು ತಮ್ಮ ಮನೆಗಳಿಗಾಗಿ ಹೋರಾಟ ಮಾಡಿದವರಲ್ಲ. ಅವರು ಕನ್ನಡಕ್ಕಾಗಿ ಹೋರಾಟ ನಡೆಸಿದವರು. ಅಂತಹವರನ್ನು ಜೈಲಿಗೆ ಹಾಕಿರುವುದು ದುರಂತ. ಪ್ರತಿಯೊಬ್ಬ ಕನ್ನಡಿಗನೂ ಇದನ್ನು ಖಂಡಿಸಬೇಕು ಎಂದರು.

ಕರ್ನಾಟಕದಲ್ಲಿ ಕನ್ನಡಿಗರು ಮಲತಾಯಿ ಮಕ್ಕಳಾಗುವ ಪರಿಸ್ಥಿತಿ ಉಂಟಾಗಿದೆ. ಕನ್ನಡಿಗರು ನಾವು ಭಾಷಾಂಧರಲ್ಲ. ನಾವು ಎಲ್ಲಾ ಜನರನ್ನು ಸಹೋದರರ ರೀತಿ ಪ್ರೀತಿಸುತ್ತಿದ್ದೇವೆ. ಆದರೆ ಅವರು ಇಲ್ಲಿಯ ನೆಲ, ಜಲ, ಸಂಪನ್ಮೂಲಗಳನ್ನು ಬಳಸಿದ ಮೇಲೆ ಹಲವು ವರ್ಷಗಳಲ್ಲಿ ಕನ್ನಡ ಕಲಿಯಿರಿ ಎಂದು ಹೇಳುವುದು ತಪ್ಪೇ? ನಿಮ್ಮ ಮನೆಯಲ್ಲಿ ಖಾಸಗಿಯಾಗಿ ಯಾವ ಭಾಷೆ ಬೇಕಾದರೂ ಮಾತಾಡಿ ಆದರೆ ಸಾರ್ವಜನಿಕ ಸ್ಥಳದಲ್ಲಿ ಕನ್ನಡ ಬಳಸಿ ಎಂಬುದಷ್ಟೇ ನಮ್ಮ ಹಕ್ಕೊತ್ತಾಯ ಎಂದರು.

ನಾವು ಯಾವುದೇ ಧರ್ಮದ ವಿರುದ್ಧ ಹೋರಾಡುವುದಿಲ್ಲ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ ಸಿಗಬೇಕು, ರೈತರಿಗೆ ಒಳ್ಳೆಯ ನೀರಾವರಿ ಯೋಜನೆ ಮತ್ತು ಬೆಲೆ ಸಿಗಬೇಕು ಎಂದು ಕೇಳುವುದು ತಪ್ಪೇ? ಇಲ್ಲ ನಾವು ಹೋರಾಟವನ್ನು ಮುಂದುವರೆಸೋಣ ಎಂದು ಒತ್ತಾಯಿಸಿದರು.

ಡಿ.ವೈ.ಎಫ್.ಐ ಮುಖಂಡ ಮುನೀರ್ ಕಾಟಿಪಳ್ಳ, ಬಸವರಾಜ್ ಪೂಜಾರ್, ಕರ್ನಾಟಕ ರಣಧೀರ ಪಡೆಯ ರಮಾನಂದ್ ಅಂಕೋಲಾ, ಸುವರ್ಣ ಕರ್ನಾಟಕ ಜನಪರ ವೇದಿಕೆಯ ರಮೇಶ್ ಗೌಡ, ಎಸ್.ಎಫ್.ಐ ನ ಗುರುರಾಜ ದೇಸಾಯಿ, ಕನ್ನಡ ಮನಸ್ಸುಗಳ ಪ್ರತಿಷ್ಥಾನ, ನಿಕೇತ್ ರಾಜ್ ಮೌರ್ಯ ಮುಂತಾದವರು ಭಾಗವಹಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...