Homeಕರ್ನಾಟಕರಂಗೀಲಾ ರಾಘುಸ್ವಾಮಿ ಚೇಲಾಗಳ ಕಿತಾಪತಿ, ಗಿರಿನಗರ ಪೊಲೀಸರ ಹುಚ್ಚಾಟದಿಂದ ಸತ್ತವರ ಮೇಲೆ ದಾಖಲಾಯ್ತು ಎಫ್‌ಐಆರ್‌

ರಂಗೀಲಾ ರಾಘುಸ್ವಾಮಿ ಚೇಲಾಗಳ ಕಿತಾಪತಿ, ಗಿರಿನಗರ ಪೊಲೀಸರ ಹುಚ್ಚಾಟದಿಂದ ಸತ್ತವರ ಮೇಲೆ ದಾಖಲಾಯ್ತು ಎಫ್‌ಐಆರ್‌

- Advertisement -
- Advertisement -

“ಅತ್ಯಾಚಾರ ಆರೋಪದ ವಿಷಯಕ್ಕೆ ಲೋಕಪ್ರಸಿದ್ಧನಾಗಿರುವ ರಾಮಚಂದ್ರಪುರ ಮಠದ ಸ್ವಾಮಿ ರಾಘು ಯಾನೆ ರಾಘವೇಶ್ವರ ಭಾರತಿ ಬುರ್ನಾಸ್ ಭಾನ್ಗಡಿಗಳಿಂದು ಸುದ್ದಿಯಾಗುತ್ತಲೇ ಇದ್ದಾನೆ. ಅದೆಂದೋ ಜೈಲುಪಾಲಾಗಬೇಕಿದ್ದ ಈ ಧರ್ಮಭ್ರಷ್ಟ ನ್ಯಾಯ ಆಡಳಿತ ವ್ಯವಸ್ಥೆಗಳನ್ನೇ ದಿಕ್ಕುತಪ್ಪಿಸಿ ತಿಂದುಂಡು ಬೋಗಸ್ ಪ್ರವಚನ ಬಿಗಿಯುತ್ತ ಲೌಕಿಕಾನಂದ ಅನುಭವಿಸುತ್ತಿದ್ದಾನೆ ಎಂಬ ಆರೋಪಗಳಿವೆ. ಕನ್ಯಾದೀಕ್ಷೆ, ಏಕಾಂತ ಸಂದರ್ಶನ, ಹೆಂಗಸರ ಹಣೆಗೆ ಕುಂಕುಮವಿಟ್ಟು ಮೈಸವರಿ ಆಶೀರ್ವಾದ ಮಾಡುವುದೇ ಮುಂತಾದ ಲೈಂಗಿಕ ಕುಚೇಷ್ಟೆಗಳಿಂದ ಹವ್ಯಕರ ಮಠವನ್ನು ತನ್ನ ಕಾಮಕಾಂಡದ ಅಡ್ಡೆ ಮಾಡಿಕೊಂಡಿದ್ದಾನೆ” ಎಂದು ಮೊಟ್ಟಮೊದಲು ಆರೋಪ ಮಾಡಿದ್ದು ಕುಮಟಾದ ಪ್ರಸಿದ್ಧ ವೈದ್ಯರೂ, ಸಾಮಾಜಿಕ ಮುಖಂಡರೂ ಹವ್ಯಕ ಹೀರೇಮಾಣಿಗಳೂ ಆಗಿದ್ದ ಡಾ.ಟಿ.ಟಿ.ಹೆಗಡೆ!

ಡಾ.ಹೆಗಡೆಯನ್ನು ರಾಘವ ಮಠ ಮಾಫಿಯಾ ಒಂದೆರಡು ರೀತಿಯಲ್ಲಿ ಕಾಡಲಿಲ್ಲ. ಹಲವು ಬಾರಿ ಅವರ ಮೇಲೆ ಭೀಭತ್ಸ ಹಲ್ಲೆಯಾಗಿತ್ತು. ಪೊಲೀಸರನ್ನು ಛೂ ಬಿಟ್ಟು ಕಾಡಿದ್ದರು. ಕೇಸುಗಳನ್ನು ಹಾಕಿಸಿದ್ದರು. ರಾಘುನ ಪೂರ್ವಾಶ್ರಮದ ಸಹೋದರಿ ಗ್ಯಾಂಗು ಕಟ್ಟಿಕೊಂಡು ಪೊರಕೆಯಿಂದ ಹೊಡೆಯಲು ಹೋಗಿ ತಮ್ಮನ ಕಲ್ಯಾಣ ಗುಣಗಳ ಅನಾವರಣವೂ ಮಾಡಿದ್ದಳು. ಎಂಬತ್ತರ ಗಡಿದಾಟಿದ್ದ ಡಾ.ಹೆಗಡೆ ಹಲ್ಲೆಯಿಂದ ಆಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಇಷ್ಟಾದರೂ ಹೆಗಡೆ ಹೆದರಲಿಲ್ಲ. ತ್ರಿಕಾಲ ಪೂಜೆ ಮಾಡದೆ ಹಣ-ಹೆಣ್ಣಿನ ವಾಸನೆಗೆ ಬಿದ್ದಿರುವ ರಾಘು ಗುರು ಪೀಠದಲ್ಲಿರಲು ಅನರ್ಹನೆಂದು ತನ್ನ ಕೊನೆಗಾಲದತನಕ ಹೇಳುತ್ತಲೇ ಇದ್ದರು. ರಾಘುನ ಪೀಠೋಚ್ಛಾಟನೆ ಮಾಡಲು ನ್ಯಾಯಾಲಯಕ್ಕೂ ಹೋಗಿದ್ದರು.

ಡಾ.ಹೆಗಡೆಯವರು ಸಾಮಾಜಿಕ ಕಳಕಳಿ, ಧಾರ್ಮಿಕ ಪಾಂಡಿತ್ಯ, ನೈತಿಕ ನಡವಳಿಕೆಯಿಂದ ಹವ್ಯಕ ಸಮುದಾಯದಲ್ಲಿ ಪ್ರೀತಿ-ಗೌರವ ಸಂಪಾದಿಸಿದ್ದರು. ಸ್ತ್ರೀ ಸಖ್ಯಾ ಸುಖ ಸಂತೃಪ್ತ “ಸನ್ಯಾಸಿ” ರಾಘುನ ಕಂಡರೆ ಹವ್ಯಕರು ಮೂಗು ಮುರಿಯುತ್ತಿದ್ದರೆ ಟಿ.ಟಿ.ಹೆಗಡೆಯನ್ನು ನೋಡಿದಾಕ್ಷಣ ತಲೆಬಾಗಿ ನಮಿಸುತ್ತಿದ್ದರು. ಆದರೆ ಹವ್ಯಕರು ರಾಘು ಗ್ಯಾಂಗಿನ ಬಹಿಷ್ಕಾರ, ಹಲ್ಲೆ, ಜೀವನೋಪಾಯ ವ್ಯವಹಾರಕ್ಕೆ ಕಲ್ಲುಹಾಕುವ ಕ್ರೌರ್ಯಕ್ಕೆ ಹೆದರಿ ಟಿ.ಟಿ.ಹೆಗಡೆಯ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಇದಕ್ಕೆಲ್ಲಾ ಬೇಸರಿಸದೆ ಟಿ.ಟಿ.ಹೆಗಡೆ “ಜಾಣ” ಹವ್ಯಕರ ಕಣ್ಣಿನ ಪೊರೆ ತೆರೆಯಲು ಪ್ರಯತ್ನ ಮಾಡುತ್ತಲೇ ಇದ್ದರು ಎಂಬುದು‌ ಅವರನ್ನು ಬಲ್ಲವರೆಲ್ಲರೂ ಹೇಳುವ ಮಾತು.

ಮಠಬಾನಿಗಳನ್ನು ಎದುರುಹಾಕಿಕೊಂಡಿದ್ದ ಟಿ.ಟಿ.ಹೆಗಡೆಯವರು ಸುಮಾರು ಎರಡು ತಿಂಗಳ ಹಿಂದೆ ವಯೋಸಹಜ ಸಾವು ಕಂಡಿದ್ದಾರೆ. ಲಗಾಯ್ತಿನಿಂದಲೂ ಅನಾಚಾರಿ ರಾಘುನ ಚೇಲಾಗಿರಿ ಮಾಡುತ್ತಲೇ ಬಂದಿರುವ ಬೆಂಗಳೂರಿನ ಗಿರಿನಗರ ಪೊಲೀಸ್‌ ಅಧಿಕಾರಿಗಳು ದಿವಂಗತ ಟಿ.ಟಿ.ಹೆಗಡೆ ಮೇಲೆ ಕೇಸು ಜಡಿದಿದ್ದಾರೆ. ರಾಘುನ ವಿರುದ್ಧ ಅವಹೇಳನಕಾರಿ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚುರಪಡಿಸುತ್ತಿದ್ದಾರೆಂಬ ಆರೋಪ ಹೊರಿಸಿದ್ದಾರೆ. ಪಾಪಾ ಟಿ.ಟಿ ಹೆಗಡೆಯವರು ಮರಣಹೊಂದಿ ಎರಡು ತಿಂಗಳಾದರೂ ಸಹ ಅವರನ್ನು ಬಿಡುತ್ತಿಲ್ಲ ಮಠಬಾನಿಗಳು. ಮಠದ ಸಿಇಓ ಕೆ.ಜಿ.ಭಟ್ಟ ಕೊಟ್ಟ ಕಂಪ್ಲೇಂಟಿನ ಮೇಲೆ ಎಫ್‌ಐಆರ್‌ ಕೂಡ ಹಾಕಿರುವ ಪೆದ್ದು ಪೊಲೀಸರು ಅದನ್ನು ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ. ಎನ್‌ಸಿಆರ್‌ 207/19 ನಂಬರಿನ ಎಫ್‌ಐಆರ್ ಅನ್ನು 25-09-2019 ರಂದು ಕೋರ್ಟಿಗೆ ಸಲ್ಲಿಸಿರುವ ಪೊಲೀಸ್ ಅಧಿಕಾರಿಗಳು ಮತ್ತು ಮಠಬಾನಿಗಳ ಹುಚ್ಚಾಟಕ್ಕೆ ಜನ ಬಿದ್ದು ಬಿದ್ದು ನಗುತ್ತಿದ್ದಾರೆ!!

ಈ ಗಿರಿನಗರ ಪೊಲೀಸರು ಹಿಂದೆ ರಾಘುನ ವಿರುದ್ಧ ಅತ್ಯಾಚಾರ ಸಂತ್ರಸ್ತೆಯು ದೂರು ಕೊಡಲು ಹೋದಾಗಲೂ ಸತಾಯಿಸಿದ್ದರು. ರಾಘುನ ರಗಳೆ-ರಾದ್ಧಾಂತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಿದ್ದವರಿಗೆ, ಅಲ್ಲಲ್ಲಿ ಮಾತಾಡಿದವರಿಗೆಲ್ಲಾ ಈ ಗಿರಿನಗರ ಪೊಲೀಸರು ಹಿಂಸೆ ನೀಡಿದ್ದ ದೊಡ್ಡ ಪಟ್ಟಿಯೇ ಇದೆ. ಸತ್ತವರನ್ನು ಬಿಡದೇ ಕಾಡಿ ತೆವಲು ತೀರಿಸಿಕೊಳ್ಳುವ ಸ್ಯಾಡಿಸ್ಟ್ ರಾಘುನ ಪೀಠಕ್ಕೆ ಬಲಿಯಾದ ಪುತ್ತೂರಿನ ಶ್ಯಾಮಶಾಸ್ತ್ರಿಯ ಕುಟುಂಬ ಪಟ್ಟ ಕಷ್ಟ ಹೇಳತೀರದು. ಈಗ ದಿವಂಗತ ಟಿ.ಟಿ.ಹೆಗಡೆ ಮೇಲೆ ಮಸಲತ್ತಿನ ಎಫ್‌ಐಆರ್‌ ಆಗಿದೆ. ಹವ್ಯಕರಿಗೇಕೆ ನೈತಿಕ ಸಾತ್ವಿಕ ಸಿಟ್ಟು ಬರುತ್ತಿಲ್ಲ? ಹವ್ಯಕ ಕುಲಘಾತುಕ ರಾಘುನನ್ನ ಆ ಸಮುದಾಯ ಇನ್ನೆಷ್ಟು ದಿನ ಸಹಿಸಿಕೊಳ್ಳುತ್ತದೋ ಎಂಬ ಪ್ರಶ್ನೆ ಅವರನ್ನು ವಿರೋಧಿಸುತ್ತಿರುವ ಹವ್ಯಕರದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...