Homeಅಂಕಣಗಳುಲಾಕ್‌ಡೌನ್‌ನಲ್ಲಿ ವಲಸೆ ಕಾರ್ಮಿಕರಿಗೆ ಎರಡು ತಿಂಗಳು ಊಟ ನೀಡಿದ ಗ್ರಾ.ಪಂ: ಪಿಡಿಓ ರಾಜೇಶ್ ಸಾಧನೆ

ಲಾಕ್‌ಡೌನ್‌ನಲ್ಲಿ ವಲಸೆ ಕಾರ್ಮಿಕರಿಗೆ ಎರಡು ತಿಂಗಳು ಊಟ ನೀಡಿದ ಗ್ರಾ.ಪಂ: ಪಿಡಿಓ ರಾಜೇಶ್ ಸಾಧನೆ

- Advertisement -
- Advertisement -

ನೀವು ಫೇಸ್‍ಬುಕ್ ಬಳಕೆದಾರರಾಗಿದ್ದರೆ ರಾಜಾನುಕುಂಟೆ ಗ್ರಾಮ ಪಂಚಾಯ್ತಿ ಎನ್ನುವ ಅಕೌಂಟ್ ಇದೆ. ಈ ಗ್ರಾಮ ಪಂಚಾಯ್ತಿಯಾಗಿ ಕೊರೊನಾ ಸಂದರ್ಭವನ್ನು ನಿಭಾಯಿಸಿದ್ದಂತೂ ಉಳಿದ ಗ್ರಾಮ ಪಂಚಾಯ್ತಿಗಳಿಗೆ ಅತ್ಯುತ್ತಮ ಮಾದರಿ. ಹಾಗಾದರೆ ಇದರ ಹಿಂದಿರುವ ಶಕ್ತಿ ಯಾರೆಂದು ನಿಮಗೆ ಆಸಕ್ತಿ ಕೆರಳಿರಬಹುದು. ಯಲಹಂಕ ತಾಲೂಕಿನ, ಹೆಸರಘಟ್ಟ ಹೋಬಳಿಯ ರಾಜಾನುಕುಂಟೆ ಗ್ರಾಮ ಪಂಚಾಯ್ತಿಯ ಈ ಎಲೆಮರೆಯ ಅಭಿವೃದ್ಧಿ ಅಧಿಕಾರಿ ಹೆಚ್.ಆರ್. ರಾಜೇಶ್ ಅವರೇ ಆ ವ್ಯಕ್ತಿ.

‘ನಾನು ನಿಮ್ಮ ಬಗ್ಗೆ ಬರೆಯಬೇಕು, ಹಾಗಾಗಿ ನಿಮ್ಮ ಬಳಿ ಮಾತನಾಡಬೇಕು ಸಮಯವಿದೆಯೇ’ ಎಂದು ರಾಜೇಶ್ ಅವರನ್ನು ಕೇಳಿದೆ. ಅವರು ‘ನಾವು ಪ್ರಚಾರ ಬಯಸಲ್ಲ ಸರ್, ನಿಮಗೆ ಜಾಹೀರಾತೇನಾದ್ರೂ ಬೇಕಾ? ಅದಕ್ಕೋಸ್ಕರ ನಮ್ಮ ಬಗ್ಗೆ ಬರೀತಿನಿ ಅಂತಿದಿರೇನೋ’ ಎಂದು ಖಾರವಾಗಿಯೇ ನುಡಿದರು. ನಾನು ಸಾವರಿಸಿಕೊಂಡು ನನ್ನ ಮತ್ತು ಗೌರಿಲಂಕೇಶ್ ಹೆಸರಲ್ಲಿ ತರುತ್ತಿರುವ ನ್ಯಾಯಪಥ
ಪತ್ರಿಕೆಯ ಪರಿಚಯಿಸಿ, ಯಾವ ಫಲಾಪೇಕ್ಷೆ ಇಲ್ಲದೆ ದುಡಿಯುವವರನ್ನೂ, ಪ್ರಚಾರವಿಲ್ಲದೆ ತಣ್ಣಗೆ ಸಾಧನೆ ಮಾಡಿದವರನ್ನೂ ಹುಡುಕಿ ಬರೆಯುವುದಾಗಿಯೂ, ಎರಡು ವರ್ಷದಿಂದ ನಿಮ್ಮ ಕೆಲಸಗಳನ್ನು ಗಮನಿಸುತ್ತಿರುವ ಕಾರಣ ನಿಮ್ಮ ಬಗ್ಗೆ ಬರೆಯಬೇಕೆಂದು ಮಾತನಾಡಿಸಿದೆ’ ಎಂದು ತಿಳಿಸಿದೆ. ಆಗ ರಾಜೇಶ್ ಜೊತೆಗೆ ಆಪ್ತವಾಗಿ ಒಂದಷ್ಟು ಮಾತುಕತೆ ನಡೆಯಿತು. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಹೇಮಾಪುರದ ರಾಜೇಶ್ ಪದವೀಧರರಾಗಿದ್ದು, 2010 ರಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದರು. ಕೆಲಸ ಮಾಡಿದಲ್ಲೆಲ್ಲಾ ಅತ್ಯುತ್ತಮ ಹೆಸರು ಸಂಪಾದಿಸಿದ್ದಾರೆ.

‘ಕೊರೊನಾ ಲಾಕ್‍ಡೌನ್ ಕಾರಣಕ್ಕೆ ಗುಜರಾತ್, ಬಿಹಾರ, ಉತ್ತರ ಕರ್ನಾಟಕ ಭಾಗದಿಂದ ವಲಸೆ ಬಂದ ಪಂಚಾಯ್ತಿ ವ್ಯಾಪ್ತಿಯ ಕಟ್ಟಡ ಕಾರ್ಮಿಕರು ಕೆಲಸವೂ ಇಲ್ಲದೆ, ಊಟಕ್ಕೂ ತೊಂದರೆಯಾಗಿ ಕಷ್ಟಪಡುತ್ತಿದ್ದರು. ಇಂತವರಿಗಾಗಿ ಎರಡು ತಿಂಗಳು ನಮ್ಮ ಗ್ರಾಮಪಂಚಾಯ್ತಿ ಸತತವಾಗಿ ಊಟ ತಿಂಡಿ ನೀಡಿತು. ಈತನಕ ಇದಕ್ಕೆ ಕನಿಷ್ಠ 50 ಲಕ್ಷ ಖರ್ಚಾಗಿರಬಹುದು. ಆದರೆ ಪಂಚಾಯ್ತಿಯ ಒಂದು ಪೈಸೆಯೂ ಖರ್ಚಾಗಿಲ್ಲ. ನಮ್ಮ ಕೆಲಸದ ಬದ್ಧತೆ ಮತ್ತು ಪ್ರಾಮಾಣಿಕತೆ ನೋಡಿ, ನಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ದಾನಿಗಳು ಸಂಘಸಂಸ್ಥೆಗಳು, ವೈಯಕ್ತಿಕವಾಗಿ ಒಬ್ಬೊಬ್ಬರು ಒಂದೊಂದಕ್ಕೆ ದಿನಂಪ್ರತಿ ಸಹಾಯ ಮಾಡಿದ್ದಾರೆ. ಒಂದು ದಿನದ ಖರ್ಚನ್ನು ಭರಿಸಿ ಕೆಲವರು ಹುಟ್ಟಿದ ಹಬ್ಬ ಆಚರಿಸಿಕೊಂಡಿದ್ದಾರೆ. ಇದೀಗ ನಮ್ಮ ಪಂಚಾಯ್ತಿಯ ಸದಸ್ಯರೊಬ್ಬರು ನಿರ್ಗತಿಕರಿಗೆ ಊಟ ತಿಂಡಿ ನಿರಂತರವಾಗಿರಲಿ ಎಂದು ಗ್ರಾಮಪಂಚಾಯ್ತಿ ಕ್ಯಾಂಟೀನ್ ತೆರೆಯುವ ಯೋಚನೆ ಮಾಡಿದ್ದಾರೆ. ಸದ್ಯಕ್ಕೆ ಸಣ್ಣದಾಗಿ ನಡೆಯುತ್ತಿದೆ’ ಎನ್ನುತ್ತಾರೆ ರಾಜೇಶ್.

ಕೊರೊನಾ ನಿಂತ್ರಣಕ್ಕೆಂದು ಗ್ರಾಮ ಪಂಚಾಯ್ತಿಗಳಿಗೆ ಸರಕಾರ ಪ್ರತ್ಯೇಕ ಹಣ ನೀಡಿಲ್ಲ. ಆದರೆ ಗ್ರಾಮಪಂಚಾಯ್ತಿಯ ಸದಸ್ಯರು, ಅಧ್ಯಕ್ಷರು, ಪಿಡಿಓಗಳು ಆಸಕ್ತರಾಗಿದ್ದರೆ, ಪಂಚಾಯ್ತಿಯ ಆದಾಯದ ಒಂದಷ್ಟು ಮೊತ್ತವನ್ನು ಬಳಸುತ್ತಲೇ ಸಮುದಾಯದ ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕಾಗುತ್ತದೆ. ರಾಜೇಶ್ ಅವರು ಇದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ‘ಸೋಂಕು ಹರಡದಂತೆ ಔಷಧಿ ಸಿಂಪಡನೆ, ಮಾಸ್ಕ್ ವಿತರಣೆ, ವಯಕ್ತಿಕ ಅಂತರದ ಬಗೆಗೆ ಜನರಿಗೆ ತಿಳಿಸುವುದು, ಕೊರೊನಾ ಜಾಗೃತಿಯ ಬಗ್ಗೆ ವ್ಯಾಪಕ ಪ್ರಚಾರ ಮಾಡುವುದು ಈ ಎಲ್ಲವನ್ನೂ, ನಮ್ಮ ಗ್ರಾಮ ಪಂಚಾಯ್ತಿ ಗರಿಷ್ಠ ಮಟ್ಟದಲ್ಲಿ ಮಾಡಿದೆ. ನಮ್ಮ ಜೊತೆ ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಗಲು ರಾತ್ರಿ ದುಡಿದಿದ್ದಾರೆ. ನಮ್ಮ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತರಿಗೆ ನಾನು ಎಷ್ಟು ಸಲಾಮ್ ಹೊಡೆದ್ರೂ ಕಡಿಮೆಯೇ’ ಎನ್ನುತ್ತಾರೆ ರಾಜೇಶ್.

ಹೊರರಾಜ್ಯದ ತಮ್ಮ ಊರುಗಳಿಗೆ ಹೋಗುವ ವಲಸೆ ಕಾರ್ಮಿಕರ ವಿವರಗಳನ್ನು ಸೇವಾ ಸಿಂಧು ತಂತ್ರಾಂಶದಲ್ಲಿ ನಮೂದಿಸಿ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿ, ಅವರವರ ಊರುಗಳಿಗೆ ತೆರಳಲು ಯಾವುದೇ ತೊಡಕಾಗದಂತೆ ಗ್ರಾಮ ಪಂಚಾಯ್ತಿ ನಿಭಾಯಿಸಿ. ಪ್ರತಿ ಊರುಗಳಿಗೂ ಗ್ರಾಮಕಾರ್ಯ ಪಡೆಗಳನ್ನು ರಚಿಸಿ, ಪಂಚಾಯ್ತಿ ಕೋವಿಡ್ 19 ಕಾರ್ಯ ಪಡೆಯನ್ನು ರಚನೆ ಮಾಡಿ ಕಾಲಕಾಲಕ್ಕೆ ತರಬೇತಿ ನೀಡಿ, ಸುರಕ್ಷತೆಯ ಬಗ್ಗೆ ನಿರಂತರವಾಗಿ ಸಭೆಗಳನ್ನು ಮಾಡಿ ತಿಳಿವಳಿಕೆ ಮತ್ತು ಜವಾಬ್ದಾರಿಗಳನ್ನು ಪರಸ್ಪರ ಹಂಚಿಕೊಳ್ಳಲಾಗುತ್ತಿತ್ತು. ಡಿ.ವೈ.ಎಸ್.ಪಿ, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಸ್ವಯಂಸೇವಾಸಂಸ್ಥೆಗಳ ಜೊತೆಗೆ ನಿರಂತರ ಸಭೆಗಳನ್ನು ಏರ್ಪಡಿಸಲಾಯಿತು. ಇದೇ ಸಂದರ್ಭಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ, ವೈಯಕ್ತಿಕ ತಮ್ಮ ಆಸ್ತಿ/ಜಮೀನಿನಲ್ಲಿ ಕೆಲಸ ನಿರ್ವಹಿಸಿ ತಮ್ಮ ಖಾತೆಗೆ ನೇರವಾಗಿ ಹಣ ಪಡೆಯುವಂತೆಯೂ, ಸಮುದಾಯ ನೆಲೆಯ ಕೆಲಸ ಮಾಡಿ ಆಸ್ತಿ ಸೃಜನೆ ಮಾಡಿಕೊಳ್ಳುವಂತೆಯೂ ಜಾಗೃತಿ ಮೂಡಿಸಿ ಯಶಸ್ವಿಯಾಗಿ ಖಾತ್ರಿ ಕೆಲಸವನ್ನು ಹಂಚಲಾಯಿತು. ಹೀಗೆ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳಬಹುದಾದ 96 ಕೆಲಸಗಳ ಪಟ್ಟಿಯನ್ನು ಪಂಚಾಯ್ತಿಯು ಸಾರ್ವಜನಿಕರಿಗೆ ತಿಳಿಯಪಡಿಸಿತು.

ಪಂಚಾಯ್ತಿಯ ವಾರ್ಷಿಕ ಆದಾಯ ಸರಿಸುಮಾರು ಎರಡೂವರೆ ಕೋಟಿಯಷ್ಟಿದೆ. ಪಂಚಾಯ್ತಿಯಲ್ಲಿ 38 ಜನ ಸ್ಟಾಫ್ ಇದ್ದು, ಇವರಿಗೆ ವಾರ್ಷಿಕ ತಿಂಗಳ ಸಂಬಳವೇ 55 ಲಕ್ಷದಷ್ಟಾಗುತ್ತದೆ. ಪಂಚಾಯ್ತಿಯ ಆದಾಯ ಹೆಚ್ಚಿದ್ದರೂ, ಈ ಪ್ರದೇಶ ನಗರೀಕರಣವಾದಂತೆ ಗರಿಷ್ಠಮಟ್ಟದ ಸೌಲಭ್ಯಗಳನ್ನು ಉತ್ತಮ ಗುಣಮಟ್ಟದಲ್ಲಿ ಕೊಡಬೇಕಾಗುತ್ತದೆ. ಹಾಗಾಗಿ ಆದಾಯದಂತೆ ಪಂಚಾಯ್ತಿಯ ಖರ್ಚನ್ನೂ ಯೋಜನಾಬದ್ಧವಾಗಿ ನಿರ್ವಹಿಸಲಾಗಿದೆ.

‘ನಾನು ರಾಜಾನುಕುಂಟೆ ಪಂಚಾಯ್ತಿಗೆ ಉಡುಪಿಯಿಂದ ವರ್ಗವಾಗಿ ಬಂದಾಗ ಈ ಭಾಗದ ಜನರಿಗೆ ಗ್ರಾಮ ಪಂಚಾಯ್ತಿ ಅಂದ್ರೆ ಅದು ಕೇವಲ ರಸ್ತೆ, ನೀರು, ಬೀದಿ ದೀಪಕ್ಕೆ ಸೀಮಿತ ಎಂದಷ್ಟೆ ತಿಳಿದಿದ್ದರು. ಒಂದು ಸರಕಾರ ಎಲ್ಲಾ ಇಲಾಖೆಯ ಕೆಲಸಗಳನ್ನು ಹೇಗೆ ಮಾಡುತ್ತೋ, ಹಾಗೆ ಎಲ್ಲಾ ಇಲಾಖೆಗಳ ಕೆಲಸಗಳನ್ನೂ ಗ್ರಾಮ ಪಂಚಾಯ್ತಿ ಮಾಡುತ್ತದೆ. ಆರೋಗ್ಯಕ್ಕೆ ಬೇಕಾದ ಸ್ವಚ್ಛ ವಾತಾವರಣ, ಉತ್ತಮ ಹವಾಮಾನಕ್ಕೆ ಬೇಕಾಗುವ ಅರಣ್ಯೀಕರಣ, ಆರ್ಥಿಕವಾಗಿ ಹಿಂದುಳಿದವರ, ಪರಿಶಿಷ್ಟ ಜಾತಿ ಮತ್ತು ವರ್ಗಗಳ, ಅಂಗವಿಕಲರ, ಬಡತನದಲ್ಲಿರುವ ಗರ್ಭಿಣಿ, ಬಾಣಂತಿ, ಚಿಕ್ಕ ಮಕ್ಕಳಿಗೂ ಗ್ರಾಮ ಪಂಚಾಯ್ತಿ ನೆರವಾಗಲು ಸಾಧ್ಯವಿದೆ ಎಂದು ನಾವು ತೋರಿಸಿಕೊಟ್ಟೆವು’ ಎಂದು ರಾಜೇಶ್ ತಮ್ಮ ಕೆಲಸದ ವೈಖರಿಯನ್ನು ಯಾವುದೇ ಹೆಗ್ಗಳಿಕೆ ಇಲ್ಲದೆ ಹೇಳುತ್ತಾರೆ.

ಗ್ರಾಮ ಪಂಚಾಯ್ತಿಯದೇ ನರ್ಸರಿ ಇದೆ. ಈ ನರ್ಸರಿಯಲ್ಲಿ ಬೆಳೆಸಿದ ಗಿಡಗಳನ್ನು ಅರಣ್ಯೀಕರಣಕ್ಕೆ ಬಳಸಲಾಗುತ್ತದೆ. 2017-18 ನೇ ಸಾಲಿನಲ್ಲಿ 15 ಸಾವಿರ ಗಿಡಗಳನ್ನು ಬೆಳೆಸಲಾಗಿತ್ತು. ಗ್ರಾಮ ಪಂಚಾಯ್ತಿಯ ಅಂಗನವಾಡಿಗಳ ಮೇಲೆ ಸೋಲಾರ್ ಅಳವಡಿಸಿ, ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಪ್ರಯೋಗ ಮಾಡಿದೆ. 2017-18 ರಲ್ಲಿ `ನಮ್ಮ ಗ್ರಾಮ ನಮ್ಮ ಯೋಜನೆ’ ಪ್ರಶಸ್ತಿ ಈ ಪಂಚಾಯ್ತಿಗೆ ಲಭಿಸಿದೆ. 2018-19 ನೇ ಸಾಲಿನ ಗಾಂಧಿಗ್ರಾಮ ಪ್ರಶಸ್ತಿಯನ್ನು ಈ ಪಂಚಾಯ್ತಿ ಪಡೆದಿದೆ. 2019 ರ ಮಕ್ಕಳ ಸ್ನೇಹಿ ಗ್ರಾಮ ಪಂಚಾಯ್ತಿಯೆಂದೂ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯ್ತಿ ಎಂದೂ ಹೆಗ್ಗಳಿಕೆಗೆ ಈ ಪಂಚಾಯ್ತಿ ಪಾತ್ರವಾಗಿದೆ. 2019 ರ ದೀನ್ ದಯಾಳ್ ಉಪಧ್ಯಾಯ್ ಪಂಚಾಯ್ತಿ ಸಶಕ್ತೀಕರಣ ಪುರಸ್ಕಾರವೂ ಸಿಕ್ಕಿದೆ. ಹೀಗಾಗಿಯೇ ಬೇರೆ ಬೇರೆ ಭಾಗದ ಶಾಸಕರು, ಗ್ರಾಮಪಂಚಾಯ್ತಿ ಅಧಿಕಾರಿಗಳು ಈ ಗ್ರಾಮ ಪಂಚಾಯ್ತಿಯ ಮಾದರಿಗಳನ್ನು ನೋಡಲೆಂದೇ ಬರುತ್ತಾರೆ.

`ನಮ್ಮ ಗ್ರಾಮ ಪಂಚಾಯ್ತಿಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗ, ಪಂಚಾಯ್ತಿಯ ನಾಗರಿಕರು ಹೀಗೆ ಎಲ್ಲರ ಸಹಕಾರದಿಂದ ಇಷ್ಟೆಲ್ಲಾ ಸಾಧ್ಯವಾಗಿದೆ’ ಎಂದು ವಿನಯದಿಂದಲೇ ಮಾತನಾಡುವ ರಾಜೇಶ್ ಅವರಂಥ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಎಲ್ಲಾ ಕಡೆಗೂ ಅಗತ್ಯವಿದೆ


ಇದನ್ನು ಓದಿ: ಜಗಳೂರೆಂಬ ಬರಡು ನೆಲದ ಭಗೀರಥ ಪ್ರತಿಭೆ: ಪ್ರವೀಣ್ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...