Homeಕರ್ನಾಟಕಕಿರಿಯ ಕಲಾವಿದನಿಗೆ ರಂಗಾಯಣ ನಿರ್ದೇಶಕ ಕಾರ್ಯಪ್ಪ ನಿಂದನೆ; ಆಡಿಯೊ ವೈರಲ್‌

ಕಿರಿಯ ಕಲಾವಿದನಿಗೆ ರಂಗಾಯಣ ನಿರ್ದೇಶಕ ಕಾರ್ಯಪ್ಪ ನಿಂದನೆ; ಆಡಿಯೊ ವೈರಲ್‌

ಸಂದರ್ಶನಕ್ಕೆ ಹಾಜರಾಗಿದ್ದ ಕಲಾವಿದನನ್ನು ಹೀಯಾಳಿಸಿ ಹೊರಗೆ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ.

- Advertisement -
- Advertisement -

ಕಿರಿಯ ಕಲಾವಿದರೊಬ್ಬರಿಗೆ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ನಿಂದಿಸಿರುವ ಆಡಿಯೊ ವೈರಲ್‌ ಆಗಿದೆ. ಆಕ್ಷೇಪಾರ್ಹ ಪದಗಳನ್ನು ಕಿರಿಯ ರಂಗಕರ್ಮಿಗೆ ನಿರ್ದೇಶಕರು ಬಳಸಿರುವುದು ಆಡಿಯೊದಲ್ಲಿ ದಾಖಲಾಗಿದೆ.

ರಂಗಾಯಣದ ರೆಪರ್ಟರಿ ಕಲಾವಿದರ ಆಯ್ಕೆ ಪ್ರಕ್ರಿಯೆ ಮೊನ್ನೆಯಷ್ಟೇ ಮೈಸೂರು ರಂಗಾಯಣದಲ್ಲಿ ನಡೆದಿತ್ತು. ರಂಗಾಯಣದಲ್ಲಿ ತರಬೇತಿ ಪಡೆದಿರುವ ಅನುರಾಗ್ ಶರ್ಮ ಎನ್ನುವ ಕಿರಿಯ ಕಲಾವಿದ ಅರ್ಜಿ ಹಾಕಿದ್ದರು. ಆದರೆ ಈ ಹಿಂದೆ ಕಾರ್ಯಪ್ಪ ಅವರ ವಿರುದ್ಧ ಅನುರಾಗ್‌ ಮಾತನಾಡಿದ್ದರು ಎಂಬ ಕಾರಣಕ್ಕೆ ಸಂದರ್ಶನ ನಡೆಸದೆ ವಾಪಸ್‌ ಕಳಿಸಲಾಗಿದೆ ಹಾಗೂ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದರೂ ಎಂದು ಆರೋಪಿಸಲಾಗಿದೆ. ನಂತರ ಅನುರಾಗ್ ಅವರು ರಂಗಾಯಣ ನಿರ್ದೇಶಕರಿಗೆ ಕರೆ ಮಾಡಿ, “ಏಕೆ ನನ್ನ ಸಂದರ್ಶನ ಮಾಡಲಿಲ್ಲ” ಎಂದು ಕೇಳಿದಾಗ ಆಕ್ಷೇಪಾರ್ಹ ಪದಗಳನ್ನು ಕಾರ್ಯಪ್ಪ ಅವರು ಬಳಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವೈರಲ್‌ ಆಡಿಯೊದಲ್ಲಿ ಏನಿದೆ? 

ಅನುರಾಗ್‌: ನನ್ನನ್ನು ಸಂದರ್ಶನ ಮಾಡದೆ ನಿನ್ನೆ ಹೊರಗೆ ಕಳಿಸಿದ್ದು ಏಕೆ?

ಅಡ್ಡಂಡ ಕಾರ್ಯಪ್ಪ: ನೀನು ಯಾರೋ ಮಾರಾಯ ಫೋನ್‌ ಮಾಡೋದಕ್ಕೆ? ನೀ ಯಾರು ನನ್ನ ಕೇಳೋದಕ್ಕೆ… ಲೋ……. ಇಡೋ ಮಾರಾಯ ಫೋನು.

ಅನುರಾಗ್: ನಾನು ಏಕೆ ಫೋನ್ ಮಾಡಬಾರದು.

ಕಾರ್ಯಪ್ಪ: ನೀನ್ ಯಾರೋ ಫೋನ್ ಮಾಡೋಕೆ? ರಂಗಾಯಣಕ್ಕೆ ಕೆಟ್ಟ ಹೆಸರು ತರೋದಕ್ಕೆ… 

ಅನುರಾಗ್: ನಾನು ಯಾವಾಗ ಕೆಟ್ಟ ಹೆಸರು ತಂದಿದ್ದೀನಿ. ಇರೋ ವಿಷಯ ಹೇಳಿದ್ದೇನಲ್ಲವಾ? 

ಕಾರ್ಯಪ್ಪ: ಇಡೋ ಮಾರಾಯ ಫೋನು. ನೀನೊಬ್ಬ ಲೋ….  ಇದ್ದೀಯ. ಇಡೋ ಫೋನು.

ಅನುರಾಗ್: ರಂಗಾಯಣ ನಿರ್ದೇಶಕರಾಗಿ ನೀವು ಈ ರೀತಿ ಮಾತನಾಡುವುದು ಸರಿಯೇ? 

ಕಾರ್ಯಪ್ಪ: ನೀನೊಬ್ಬ ಕಡಚಾ ಫೇಲೋ. ನೀನೊಬ್ಬ ಆರ್ಟಿಸ್ಟಾ?

ಅನುರಾಗ್‌: ನಿಮ್ಮ ಕುರ್ಚಿಗಾದರೂ ಮರ್ಯಾದೆ ಕೊಡೋದು ಬೇಡವಾ?

ಕಾರ್ಯಪ್ಪ: ರಂಗಾಯಣದ ಋಣಪಾತಕ ನೀನು. ಫೋನ್ ಮಾಡಲಿಕ್ಕೆ ನಿನಗೆಷ್ಟು ಸೊಕ್ಕು ಇದೆ. 

ಅನುರಾಗ್‌: ಇದಕ್ಕೆ ಉತ್ತರ ಕೊಡಿ ಸಾಕು, ಇಂಟರ್‌ವ್ಯೂಗೆ ಬಂದ ಕಲಾವಿದನನ್ನು….

ಕಾರ್ಯಪ್ಪ: ನೀನ್ಯಾವನೋ ಕೇಳೋಕೆ. ಸರಿಯಾಗಿ ಅಪ್ಲಿಕೇಷನ್‌ ಕೂಡ ಹಾಕದೆ, ಚೇಷ್ಟೇಗಾಗಿ ಬೇಕಂತಲೇ ಅಪ್ಲಿಕೇಷನ್ ಹಾಕಿದವನು ನೀನು. 

ಅನುರಾಗ್‌: ಎಷ್ಟೋ ಜನ ಡಿಪ್ಲೊಮಾ ಕೂಡ ಮಾಡದವರು ರಂಗಾಯಣಕ್ಕೆ ಅರ್ಜಿ ಹಾಕಿದ್ದಾರೆ. 

ಕಾರ್ಯಪ್ಪ: ನೀನು ಡಿಪ್ಲೊಮಾ ಮಾಡಿದವನು. ನಿನ್ನನ್ನು ತೆಗೆದುಕೊಳ್ಳುವುದಿಲ್ಲ ಎಂದು ಚೆನ್ನಾಗಿ ಗೊತ್ತಿತ್ತು. ಆದರೆ ನೀನು ಹಾಕಿದ ಉದ್ದೇಶವೇ… (ಮಾತು ಅಸ್ಪಷ್ಟವಾಗಿದೆ).

ಅನುರಾಗ್: ಸುಮ್ಮನೇ ಕೂಗಾಡಬೇಡಿ ಸರ್‌. ಬೇರೆಯವರ ಮಾತನ್ನೂ ಕೇಳಿಸಿಕೊಳ್ಳಿ.

ಕಾರ್ಯಪ್ಪ: ನಾಯಿಗಳ ಜೊತೆ ನಾನು ಮಾತನಾಡುವುದಿಲ್ಲ.

– ಹೀಗೆ ಸಂಭಾಷಣೆ ಇರುವ ಆಡಿಯೊ ವಾಟ್ಸ್‌ಅಪ್‌ ಗ್ರೂಪ್‌ಗಳಲ್ಲಿ ಹರಿದಾಡಿದೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕಿರಿಯ ಕಲಾವಿದ ಅನುರಾಗ್‌ ಶರ್ಮಾ ಅವರು, “ನಾನೊಬ್ಬ ಕಲಾವಿದನಾಗಿ ರಂಗಾಯಣ ಕೆಲವು ನಾಟಕಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಹೊಸ ಕಲಾವಿದ ಅಲ್ಲ. ‘ಶ್ರೀ ರಾಮಾಯಣ ದರ್ಶನಂ’ ನಾಟಕದಲ್ಲಿ ರಾವಣನ ಪಾತ್ರ ಮಾಡಿದ್ದೆ. ‘ಪರ್ವ’ದಲ್ಲಿ ಕರ್ಣನ ಪಾತ್ರ ಮಾಡಿದ್ದೆ. ಆದರೆ ಕೆಲವು ದಿನಗಳಿಂದ ರಂಗಾಯಣ ನಿರ್ದೇಶಕರು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಿದ್ಧಾಂತನ್ನು ಎಲ್ಲ ಕಡೆ ತುರುಕುತ್ತಾ ಹೋಗಿದ್ದರಿಂದ ಇರುಸುಮುರುಸಾಗಿ ಕೆಲವು ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡಿದ್ದೆ. ಈ ವೈಯಕ್ತಿಕ ವೈಷಮ್ಯ ಇಟ್ಟುಕೊಂಡು ಹೀಗೆ ವರ್ತಿಸಿದ್ದಾರೆ” ಎಂದು ದೂರಿದರು.

ಇದನ್ನೂ ಓದಿರಿ: ಕರಾವಳಿ ಕರ್ನಾಟಕದ ರಕ್ತಸಿಕ್ತ ಚರಿತ್ರೆಯ ನಿಜ ಕಥನ ‘ನೇತ್ರಾವತಿಯಲ್ಲಿ ನೆತ್ತರು’

“ಸಂದರ್ಶನದ ವೇಳೆ- ನೀನು ಕರ್ಣನ ಪಾತ್ರ ಮಾಡಿದವನು. ಆದರೆ ನೀನು ಶಕುನಿ. ನಿನಗೆ ರಂಗಾಯಣಕ್ಕೆ ಅರ್ಜಿ ಹಾಕುವ ಯೋಗ್ಯತೆ ಇಲ್ಲ. ನಿನ್ನ ಸಂದರ್ಶನ ಮಾಡುವುದಿಲ್ಲ. ಹೊರಗೆ ಹೋಗು- ಎಂದು ಬಲವಂತವಾಗಿ ಹೊರದಬ್ಬಿದರು. ಆ ನಂತರದಲ್ಲಿ ಅವರಿಗೆ ಕರೆ ಮಾಡಿದ್ದೆ. ‘ಹೀಗ್ಯಾಕೆ ಮಾಡಿದಿರಿ, ಕನಿಷ್ಟಪಕ್ಷ ಸಂದರ್ಶನವಾದರೂ ಮಾಡಬಹುದಿತ್ತಲ್ಲ’ ಎಂದು ಕೇಳಿದಾಗ ಹೀಗೆ ನಿಂದಿಸಿದ್ದಾರೆ” ಎಂದು ಆರೋಪಿಸಿದರು.

ಪೊಲೀಸರಿಗೆ ದೂರು ನೀಡಿದ್ದೇನೆ: ಅಡ್ಡಂಡ ಕಾರ್ಯಪ್ಪ

ವೈರಲ್ ಆಡಿಯೊಕ್ಕೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ರಂಗಾಯಣ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಅವರು, “ಸಂದರ್ಶನ ಮುಗಿದ ಮೇಲೆ ಸುಮಾರು ಐವತ್ತು ಭಾರಿ ಕರೆ ಮಾಡಿ ನನಗೆ ಅನುರಾಗ್ ತೊಂದರೆ ಕೊಟ್ಟಿದ್ದಾನೆ. ಆನಂತರದಲ್ಲಿ ನಾನು ಆತನೊಂದಿಗೆ ಮಾತನಾಡಿದ್ದೇನೆ. ಪೊಲೀಸರಿಗೆ ದೂರು ಕೂಡ ನೀಡಿದ್ದೇನೆ” ಎಂದರು.

ಸಂದರ್ಶನ ಮಾಡದೆ ಕಳುಹಿಸಿದರು ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಕಳೆದ ಒಂದು ವರ್ಷದಿಂದ ರಂಗಾಯಣದ ವಿರುದ್ಧ, ನಿರ್ದೇಶಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ರಂಗಾಯಣದ ಚರಿಷ್ಮಾವನ್ನು ಹಾಳು ಮಾಡುತ್ತಾ ಬಂದಿದ್ದಾನೆ. ರಂಗಾಯಣದ ಇಬ್ಬರು ಹಿರಿಯ ಕಲಾವಿದರು, ರಂಗ ಸಮಾಜದ ಇಬ್ಬರು ಸದಸ್ಯರು ಒಳಗೊಂಡು ಸಂದರ್ಶನ ಸಮಿತಿ ಮಾಡಿದ ತೀರ್ಮಾನವಿದು” ಎಂದು ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...