Homeಕರ್ನಾಟಕಕಿರಿಯ ಕಲಾವಿದನಿಗೆ ರಂಗಾಯಣ ನಿರ್ದೇಶಕ ಕಾರ್ಯಪ್ಪ ನಿಂದನೆ; ಆಡಿಯೊ ವೈರಲ್‌

ಕಿರಿಯ ಕಲಾವಿದನಿಗೆ ರಂಗಾಯಣ ನಿರ್ದೇಶಕ ಕಾರ್ಯಪ್ಪ ನಿಂದನೆ; ಆಡಿಯೊ ವೈರಲ್‌

ಸಂದರ್ಶನಕ್ಕೆ ಹಾಜರಾಗಿದ್ದ ಕಲಾವಿದನನ್ನು ಹೀಯಾಳಿಸಿ ಹೊರಗೆ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ.

- Advertisement -
- Advertisement -

ಕಿರಿಯ ಕಲಾವಿದರೊಬ್ಬರಿಗೆ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ನಿಂದಿಸಿರುವ ಆಡಿಯೊ ವೈರಲ್‌ ಆಗಿದೆ. ಆಕ್ಷೇಪಾರ್ಹ ಪದಗಳನ್ನು ಕಿರಿಯ ರಂಗಕರ್ಮಿಗೆ ನಿರ್ದೇಶಕರು ಬಳಸಿರುವುದು ಆಡಿಯೊದಲ್ಲಿ ದಾಖಲಾಗಿದೆ.

ರಂಗಾಯಣದ ರೆಪರ್ಟರಿ ಕಲಾವಿದರ ಆಯ್ಕೆ ಪ್ರಕ್ರಿಯೆ ಮೊನ್ನೆಯಷ್ಟೇ ಮೈಸೂರು ರಂಗಾಯಣದಲ್ಲಿ ನಡೆದಿತ್ತು. ರಂಗಾಯಣದಲ್ಲಿ ತರಬೇತಿ ಪಡೆದಿರುವ ಅನುರಾಗ್ ಶರ್ಮ ಎನ್ನುವ ಕಿರಿಯ ಕಲಾವಿದ ಅರ್ಜಿ ಹಾಕಿದ್ದರು. ಆದರೆ ಈ ಹಿಂದೆ ಕಾರ್ಯಪ್ಪ ಅವರ ವಿರುದ್ಧ ಅನುರಾಗ್‌ ಮಾತನಾಡಿದ್ದರು ಎಂಬ ಕಾರಣಕ್ಕೆ ಸಂದರ್ಶನ ನಡೆಸದೆ ವಾಪಸ್‌ ಕಳಿಸಲಾಗಿದೆ ಹಾಗೂ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದರೂ ಎಂದು ಆರೋಪಿಸಲಾಗಿದೆ. ನಂತರ ಅನುರಾಗ್ ಅವರು ರಂಗಾಯಣ ನಿರ್ದೇಶಕರಿಗೆ ಕರೆ ಮಾಡಿ, “ಏಕೆ ನನ್ನ ಸಂದರ್ಶನ ಮಾಡಲಿಲ್ಲ” ಎಂದು ಕೇಳಿದಾಗ ಆಕ್ಷೇಪಾರ್ಹ ಪದಗಳನ್ನು ಕಾರ್ಯಪ್ಪ ಅವರು ಬಳಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವೈರಲ್‌ ಆಡಿಯೊದಲ್ಲಿ ಏನಿದೆ? 

ಅನುರಾಗ್‌: ನನ್ನನ್ನು ಸಂದರ್ಶನ ಮಾಡದೆ ನಿನ್ನೆ ಹೊರಗೆ ಕಳಿಸಿದ್ದು ಏಕೆ?

ಅಡ್ಡಂಡ ಕಾರ್ಯಪ್ಪ: ನೀನು ಯಾರೋ ಮಾರಾಯ ಫೋನ್‌ ಮಾಡೋದಕ್ಕೆ? ನೀ ಯಾರು ನನ್ನ ಕೇಳೋದಕ್ಕೆ… ಲೋ……. ಇಡೋ ಮಾರಾಯ ಫೋನು.

ಅನುರಾಗ್: ನಾನು ಏಕೆ ಫೋನ್ ಮಾಡಬಾರದು.

ಕಾರ್ಯಪ್ಪ: ನೀನ್ ಯಾರೋ ಫೋನ್ ಮಾಡೋಕೆ? ರಂಗಾಯಣಕ್ಕೆ ಕೆಟ್ಟ ಹೆಸರು ತರೋದಕ್ಕೆ… 

ಅನುರಾಗ್: ನಾನು ಯಾವಾಗ ಕೆಟ್ಟ ಹೆಸರು ತಂದಿದ್ದೀನಿ. ಇರೋ ವಿಷಯ ಹೇಳಿದ್ದೇನಲ್ಲವಾ? 

ಕಾರ್ಯಪ್ಪ: ಇಡೋ ಮಾರಾಯ ಫೋನು. ನೀನೊಬ್ಬ ಲೋ….  ಇದ್ದೀಯ. ಇಡೋ ಫೋನು.

ಅನುರಾಗ್: ರಂಗಾಯಣ ನಿರ್ದೇಶಕರಾಗಿ ನೀವು ಈ ರೀತಿ ಮಾತನಾಡುವುದು ಸರಿಯೇ? 

ಕಾರ್ಯಪ್ಪ: ನೀನೊಬ್ಬ ಕಡಚಾ ಫೇಲೋ. ನೀನೊಬ್ಬ ಆರ್ಟಿಸ್ಟಾ?

ಅನುರಾಗ್‌: ನಿಮ್ಮ ಕುರ್ಚಿಗಾದರೂ ಮರ್ಯಾದೆ ಕೊಡೋದು ಬೇಡವಾ?

ಕಾರ್ಯಪ್ಪ: ರಂಗಾಯಣದ ಋಣಪಾತಕ ನೀನು. ಫೋನ್ ಮಾಡಲಿಕ್ಕೆ ನಿನಗೆಷ್ಟು ಸೊಕ್ಕು ಇದೆ. 

ಅನುರಾಗ್‌: ಇದಕ್ಕೆ ಉತ್ತರ ಕೊಡಿ ಸಾಕು, ಇಂಟರ್‌ವ್ಯೂಗೆ ಬಂದ ಕಲಾವಿದನನ್ನು….

ಕಾರ್ಯಪ್ಪ: ನೀನ್ಯಾವನೋ ಕೇಳೋಕೆ. ಸರಿಯಾಗಿ ಅಪ್ಲಿಕೇಷನ್‌ ಕೂಡ ಹಾಕದೆ, ಚೇಷ್ಟೇಗಾಗಿ ಬೇಕಂತಲೇ ಅಪ್ಲಿಕೇಷನ್ ಹಾಕಿದವನು ನೀನು. 

ಅನುರಾಗ್‌: ಎಷ್ಟೋ ಜನ ಡಿಪ್ಲೊಮಾ ಕೂಡ ಮಾಡದವರು ರಂಗಾಯಣಕ್ಕೆ ಅರ್ಜಿ ಹಾಕಿದ್ದಾರೆ. 

ಕಾರ್ಯಪ್ಪ: ನೀನು ಡಿಪ್ಲೊಮಾ ಮಾಡಿದವನು. ನಿನ್ನನ್ನು ತೆಗೆದುಕೊಳ್ಳುವುದಿಲ್ಲ ಎಂದು ಚೆನ್ನಾಗಿ ಗೊತ್ತಿತ್ತು. ಆದರೆ ನೀನು ಹಾಕಿದ ಉದ್ದೇಶವೇ… (ಮಾತು ಅಸ್ಪಷ್ಟವಾಗಿದೆ).

ಅನುರಾಗ್: ಸುಮ್ಮನೇ ಕೂಗಾಡಬೇಡಿ ಸರ್‌. ಬೇರೆಯವರ ಮಾತನ್ನೂ ಕೇಳಿಸಿಕೊಳ್ಳಿ.

ಕಾರ್ಯಪ್ಪ: ನಾಯಿಗಳ ಜೊತೆ ನಾನು ಮಾತನಾಡುವುದಿಲ್ಲ.

– ಹೀಗೆ ಸಂಭಾಷಣೆ ಇರುವ ಆಡಿಯೊ ವಾಟ್ಸ್‌ಅಪ್‌ ಗ್ರೂಪ್‌ಗಳಲ್ಲಿ ಹರಿದಾಡಿದೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕಿರಿಯ ಕಲಾವಿದ ಅನುರಾಗ್‌ ಶರ್ಮಾ ಅವರು, “ನಾನೊಬ್ಬ ಕಲಾವಿದನಾಗಿ ರಂಗಾಯಣ ಕೆಲವು ನಾಟಕಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಹೊಸ ಕಲಾವಿದ ಅಲ್ಲ. ‘ಶ್ರೀ ರಾಮಾಯಣ ದರ್ಶನಂ’ ನಾಟಕದಲ್ಲಿ ರಾವಣನ ಪಾತ್ರ ಮಾಡಿದ್ದೆ. ‘ಪರ್ವ’ದಲ್ಲಿ ಕರ್ಣನ ಪಾತ್ರ ಮಾಡಿದ್ದೆ. ಆದರೆ ಕೆಲವು ದಿನಗಳಿಂದ ರಂಗಾಯಣ ನಿರ್ದೇಶಕರು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಿದ್ಧಾಂತನ್ನು ಎಲ್ಲ ಕಡೆ ತುರುಕುತ್ತಾ ಹೋಗಿದ್ದರಿಂದ ಇರುಸುಮುರುಸಾಗಿ ಕೆಲವು ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡಿದ್ದೆ. ಈ ವೈಯಕ್ತಿಕ ವೈಷಮ್ಯ ಇಟ್ಟುಕೊಂಡು ಹೀಗೆ ವರ್ತಿಸಿದ್ದಾರೆ” ಎಂದು ದೂರಿದರು.

ಇದನ್ನೂ ಓದಿರಿ: ಕರಾವಳಿ ಕರ್ನಾಟಕದ ರಕ್ತಸಿಕ್ತ ಚರಿತ್ರೆಯ ನಿಜ ಕಥನ ‘ನೇತ್ರಾವತಿಯಲ್ಲಿ ನೆತ್ತರು’

“ಸಂದರ್ಶನದ ವೇಳೆ- ನೀನು ಕರ್ಣನ ಪಾತ್ರ ಮಾಡಿದವನು. ಆದರೆ ನೀನು ಶಕುನಿ. ನಿನಗೆ ರಂಗಾಯಣಕ್ಕೆ ಅರ್ಜಿ ಹಾಕುವ ಯೋಗ್ಯತೆ ಇಲ್ಲ. ನಿನ್ನ ಸಂದರ್ಶನ ಮಾಡುವುದಿಲ್ಲ. ಹೊರಗೆ ಹೋಗು- ಎಂದು ಬಲವಂತವಾಗಿ ಹೊರದಬ್ಬಿದರು. ಆ ನಂತರದಲ್ಲಿ ಅವರಿಗೆ ಕರೆ ಮಾಡಿದ್ದೆ. ‘ಹೀಗ್ಯಾಕೆ ಮಾಡಿದಿರಿ, ಕನಿಷ್ಟಪಕ್ಷ ಸಂದರ್ಶನವಾದರೂ ಮಾಡಬಹುದಿತ್ತಲ್ಲ’ ಎಂದು ಕೇಳಿದಾಗ ಹೀಗೆ ನಿಂದಿಸಿದ್ದಾರೆ” ಎಂದು ಆರೋಪಿಸಿದರು.

ಪೊಲೀಸರಿಗೆ ದೂರು ನೀಡಿದ್ದೇನೆ: ಅಡ್ಡಂಡ ಕಾರ್ಯಪ್ಪ

ವೈರಲ್ ಆಡಿಯೊಕ್ಕೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ರಂಗಾಯಣ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಅವರು, “ಸಂದರ್ಶನ ಮುಗಿದ ಮೇಲೆ ಸುಮಾರು ಐವತ್ತು ಭಾರಿ ಕರೆ ಮಾಡಿ ನನಗೆ ಅನುರಾಗ್ ತೊಂದರೆ ಕೊಟ್ಟಿದ್ದಾನೆ. ಆನಂತರದಲ್ಲಿ ನಾನು ಆತನೊಂದಿಗೆ ಮಾತನಾಡಿದ್ದೇನೆ. ಪೊಲೀಸರಿಗೆ ದೂರು ಕೂಡ ನೀಡಿದ್ದೇನೆ” ಎಂದರು.

ಸಂದರ್ಶನ ಮಾಡದೆ ಕಳುಹಿಸಿದರು ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಕಳೆದ ಒಂದು ವರ್ಷದಿಂದ ರಂಗಾಯಣದ ವಿರುದ್ಧ, ನಿರ್ದೇಶಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ರಂಗಾಯಣದ ಚರಿಷ್ಮಾವನ್ನು ಹಾಳು ಮಾಡುತ್ತಾ ಬಂದಿದ್ದಾನೆ. ರಂಗಾಯಣದ ಇಬ್ಬರು ಹಿರಿಯ ಕಲಾವಿದರು, ರಂಗ ಸಮಾಜದ ಇಬ್ಬರು ಸದಸ್ಯರು ಒಳಗೊಂಡು ಸಂದರ್ಶನ ಸಮಿತಿ ಮಾಡಿದ ತೀರ್ಮಾನವಿದು” ಎಂದು ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...