ಬಲಪಂಥೀಯ ಟ್ರೋಲರ್ ರೋಹಿತ್ ಚಕ್ರತೀರ್ಥ ಅವರ ಮುಖಾಂತರ ಶಾಲಾ ಪಠ್ಯ ಪುಸ್ತಕವನ್ನು ಪರಿಷ್ಕರಿಸಿರುವ ಸರ್ಕಾರ ನಿರ್ಧಾರದ ವಿರುದ್ಧದ ಪ್ರತಿಭಟನೆ ಇನ್ನಷ್ಟು ಭುಗಿಲೆದ್ದಿದೆ. ಈ ಬಗ್ಗೆ ಬುಧವಾರ ಆಕ್ರೊಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿಗೆ ಮಕ್ಕಳು ಶಿಕ್ಷಿತರಾಗುವುದಕ್ಕಿಂತ, ಮನುಸ್ಮೃತಿಯ ರೋಬೊಟ್ಗಳಾಗಬೇಕಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ರಾಜ್ಯ ಬಿಜೆಪಿ ಸರ್ಕಾರವು ಶಾಲೆಗಳನ್ನು ಮತ್ತು ಮಕ್ಕಳ ಮನಸನ್ನು ರಾಜಕೀಯ ಪ್ರಯೋಗ ಶಾಲೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಮೂಲಭೂತವಾಗಿ ಬೇಕಾಗಿರುವ ವಿಷಯಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಸೂಚಿಸಿರುವ ಅವರು, ಹಲವು ವಿಷಯಗಳನ್ನು ಪಟ್ಟಿಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಶಾಲೆ ಶುರುವಾದರೂ ಮಕ್ಕಳಿಗೆ ಸಮವಸ್ತ್ರವಿಲ್ಲ. ಸೈಕಲ್ ವಿತರಣೆ ಇಲ್ಲ. ಬಿಸಿಯೂಟ ಯೋಜನೆ ಹಳ್ಳ ಹಿಡಿದಿದೆ. ಪಠ್ಯಪುಸ್ತಕ ಸಂಪೂರ್ಣ ವಿತರಣೆ ಇಲ್ಲ. ಶಾಲೆಗಳಿಗೆ ಮೂಲಸೌಕರ್ಯವಿಲ್ಲ. ಶಿಕ್ಷಕರ ಕೊರತೆ ನೀಗಿಸಲಿಲ್ಲ. ಕಲಿಕಾ ಸಾಮಗ್ರಿಗಳಿಲ್ಲ” ಎಂಬ ಅಂಶಗಳನ್ನು ತಿಳಿಸಿದ್ದಾರೆ.
ಶಾಲೆಗಳನ್ನು, ಮಕ್ಕಳ ಮನಸನ್ನು ರಾಜಕೀಯ ಪ್ರಯೋಗ ಶಾಲೆ ಮಾಡಿಕೊಳ್ಳುತ್ತಿದೆ ಸರ್ಕಾರ.
ಆದರೆ,
◆ಶಾಲೆ ಶುರುವಾದರೂ ಮಕ್ಕಳಿಗೆ ಸಮವಸ್ತ್ರವಿಲ್ಲ
◆ಸೈಕಲ್ ವಿತರಣೆ ಇಲ್ಲ
◆ಬಿಸಿಯೂಟ ಯೋಜನೆ ಹಳ್ಳ ಹಿಡಿದಿದೆ
◆ಪಠ್ಯಪುಸ್ತಕ ಸಂಪೂರ್ಣ ವಿತರಣೆ ಇಲ್ಲ
◆ಶಾಲೆಗಳಿಗೆ ಮೂಲಸೌಕರ್ಯವಿಲ್ಲ
◆ಶಿಕ್ಷಕರ ಕೊರತೆ ನೀಗಿಸಲಿಲ್ಲ
◆ಕಲಿಕಾ ಸಾಮಗ್ರಿಗಳಿಲ್ಲ1/2
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 25, 2022
ಇದನ್ನೂ ಓದಿ: ಮಕ್ಕಳಿಗೆ ವಿಷ ಉಣಿಸಲಾಗುತ್ತಿದೆ: ಇಂತಹ ಪಠ್ಯದಲ್ಲಿ ನನ್ನ ಪಾಠ ಸೇರಿಸಬೇಡಿ- ಜಿ. ರಾಮಕೃಷ್ಣ
“ಗ್ರಾಮಗಳು ಶಿಕ್ಷಿತವಾದರೆ ರಾಜ್ಯ ಶಿಕ್ಷಿತವಾಗುತ್ತದೆ, ರಾಜ್ಯ ಶಿಕ್ಷಿತವಾದರೆ ದೇಶ ಸುಶಿಕ್ಷಿತವಾಗುತ್ತದೆ. ಆದರೆ ಶೈಕ್ಷಣಿಕ ಸೌಕರ್ಯ ಒದಗಿಸುವ ಬದಲು ಸಂಘದ ಸೂಚನೆಯಂತೆ ರಾಜಕೀಯ ಸಿದ್ದಾಂತ ತುಂಬಿಸಲು ಸರ್ಕಾರ ಹವಣಿಸುತ್ತಿದೆ. ಬಿಜೆಪಿಗೆ ಮಕ್ಕಳು ಶಿಕ್ಷಿತರಾಗುವುದಕ್ಕಿಂತ, ಮನುಸ್ಮೃತಿಯ ರೋಬೊಟ್ಗಳಾಗಬೇಕಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.