Homeಅಂತರಾಷ್ಟ್ರೀಯನಿರಾಶ್ರಿತರು ಮತ್ತು ಹೊಣೆಗಾರಿಕೆಗಳ ಹಸ್ತಾಂತರ; ರುವಾಂಡಾಗೆ ಗಡಿಪಾರು ಮಾಡುವ ಇಂಗ್ಲೆಂಡಿನ ಪ್ರಸ್ತಾವಿತ ನೀತಿ

ನಿರಾಶ್ರಿತರು ಮತ್ತು ಹೊಣೆಗಾರಿಕೆಗಳ ಹಸ್ತಾಂತರ; ರುವಾಂಡಾಗೆ ಗಡಿಪಾರು ಮಾಡುವ ಇಂಗ್ಲೆಂಡಿನ ಪ್ರಸ್ತಾವಿತ ನೀತಿ

- Advertisement -
- Advertisement -

2022ರ ಜೂನ್ ತಿಂಗಳಲ್ಲಿ ಇಂಗ್ಲೆಂಡಿನ ಸರಕಾರವು ತನ್ನ ನೆಲದಲ್ಲಿ ಆಶ್ರಯ ಕೋರಿದ್ದ ಅನೇಕ ನಿರಾಶ್ರಿತರನ್ನು ರುವಾಂಡಾಗೆ ಗಡಿಪಾರು ಮಾಡುವ ಮೊದಲ ಸರಣಿಯನ್ನು ಶುರುಮಾಡಲು ಪ್ರಯತ್ನಿಸಿತು. ಈ ನಿರಾಶ್ರಿತರು ವಿಶ್ವದ ಬೇರೆ ಬೇರೆ ಭಾಗಗಳಿಂದ ಬಂದಿರುವವರು ಆದರೆ ಯುಕೆಯು ರುವಾಂಡಾದ ಸರಕಾರದೊಂದಿಗೆ 150 ಮಿಲಿಯನ್ ಡಾಲರ್‌ಗಳ ಬದಲಿಗೆ ನಿರಾಶ್ರಿತರನ್ನು ತೆಗೆದುಕೊಳ್ಳಬೇಕು ಎಂಬ ಒಪ್ಪಂದ ಕುದುರಿಸಿದೆ. ಈ ಒಪ್ಪಂದವನ್ನು ಅತ್ಯಂತ ಕ್ರೂರ ಮತ್ತು ಯುಕೆಯಲ್ಲಿ ಆಶ್ರಯ ಪಡೆಯಲು ಬಯಸಿದ್ದವರಿಗೆ ಆಘಾತಕಾರಿಯಾಗಿದೆ ಎಂದು ಕರೆಯಲಾಗಿದೆ.

ಈ ಗಡಿಪಾರಿನ ಮೊದಲ ಸುತ್ತನ್ನು ಪ್ರಾರಂಭಿಸಿದಾಗ, ಈ ನಡೆ ತಮ್ಮ ಘನತೆಗೆ ಧಕ್ಕೆ ತರುತ್ತದೆಂದು ವಾದಿಸಿ ನಿರಾಶ್ರಿತರು ವೈಯಕ್ತಿಕ ನೆಲೆಯಲ್ಲಿ ಇದನ್ನು ಕಾನೂನಾತ್ಮಕವಾಗಿ ಪ್ರಶ್ನಿಸಿದರು. ಇಂಗ್ಲೆಂಡಿನ ಕೋರ್ಟ್ ಆಫ್ ಅಪೀಲ್ ಈ ಪ್ರಕರಣವನ್ನು ತಿರಸ್ಕರಿಸಿತು. 2022ರ ಜೂನ್ 14ರಂದು ಮೊದಲ ಗಡಿಪಾರು ಪ್ರಕ್ರಿಯೆ ನಡೆಯಬೇಕಿತ್ತು. ಆಗ ಮಾನವ ಹಕ್ಕುಗಳ ಯುರೋಪಿಯನ್ ನ್ಯಾಯಾಲಯವು ಒಂದು ತಡೆಯಾಜ್ಞೆ ನೀಡಿ, ನಿರಾಶ್ರಿತರನ್ನು ಕೊಂಡೊಯ್ಯಬೇಕಿದ್ದ ವಿಮಾನವು ಹೊರಡದಂತೆ ತಡೆಯಿತು. ಇದು ಕೊನೆಯ ಗಳಿಗೆಯಲ್ಲಿ ಆದ ಹಸ್ತಕ್ಷೇಪವಾಗಿತ್ತು, ಅದರಿಂದ ಯುಕೆಯಲ್ಲಿ ಆಶ್ರಯ ಬಯಸಿದ್ದ 7 ಜನರು ಅಲ್ಲಿಂದ ಹೊರಡದಂತೆ ತಡೆದಂತಾಯಿತು.

ನಿರಾಶ್ರಿತರನ್ನು ಸ್ಥಳಾಂತರಿಸುವುದು ಏಕೆ?

ಬೋರಿಸ್ ಜಾನ್ಸನ್‌ರ ಪ್ರಿಮಿಯರ್‌ಶಿಪ್ ವಿದೇಶಿಯರ ಭೀತಿಯ ಮೇಲೆಯೇ ಸವಾರಿ ನಡೆಸಿತ್ತು. 14ನೆಯ ಏಪ್ರಿಲ್ 2022ರಂದು ಬೋರಿಸ್ ಜಾನ್ಸನ್ ತಮ್ಮ ಒಂದು ಭಾಷಣದಲ್ಲಿ ’ಇಲ್ಲೀಗಲ್’ ವಲಸೆಯನ್ನು ನಿಲ್ಲಿಸುವುದಾಗಿ ಹೇಳಿದ್ದರು. ದೇಶದ ಕಲ್ಯಾಣ ಸೇವೆಗಳ ಮೇಲೆ ವಲಸೆಯು ಒತ್ತಡ ತರುತ್ತಿದೆ ಎಂದು ಪ್ರತಿಪಾದಿಸಿದರು. ಮಾನವ ಕಳ್ಳಸಾಗಾಣಿಕೆಯ ಪರಿಣಾಮವಾಗಿ ’ಅನಧಿಕೃತ’ ವಲಸೆ ನಡೆಯುತ್ತಿದೆ ಎಂದು ಪ್ರತಿಪಾದಿಸಿ, ಅದನ್ನು ನಿಲ್ಲಿಸಲು ಇರುವ ಒಂದೇ ಮಾರ್ಗೋಪಾಯ ಎಂದರೆ ಮಾನವ ಕಳ್ಳಸಾಗಾಣಿಕೆಯಾಗಿರುವವರಿಗೆ ಹೆಚ್ಚಿನ ಅವಧಿಯ ಶಿಕ್ಷೆಯನ್ನು ನೀಡುವುದು ಎಂದರು. ಹಾಗೂ ಸುಮಾರು 500 ಮಿಲಿಯನ್‌ನಷ್ಟು ಹಣವನ್ನು ಕಣ್ಗಾವಲು ತಂತ್ರಜ್ಞಾನ ಮತ್ತು ಮಿಲಿಟರಿ ಸಿಬ್ಬಂದಿಗಳ ಮೇಲೆ ತಮ್ಮ ಸರಕಾರ ವಿನಿಯೋಗ ಮಾಡುವುದೆಂದು, ಅದರಿಂದ ಸಮುದ್ರಮಾರ್ಗದಿಂದ ವಲಸಿಗರು ಬರುವುದನ್ನು ತಡೆಗಟ್ಟಬಹುದು ಹಾಗೂ ವಲಸಿಗರನ್ನು ತೆಗೆದುಕೊಳ್ಳುವಂತೆ ರುವಾಂಡಾ ದೇಶದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಘೋಷಿಸಿದರು. ಈ ಒಪ್ಪಂದದ ಪರಿಣಾಮವಾಗಿ ಭವಿಷ್ಯದಲ್ಲಿ ವಲಸಿಗರು ಇಂಗ್ಲಿಷ್ ಕಾಲುವೆಯನ್ನು ಬಳಸಿಕೊಂಡು ಯುಕೆಗೆ ಪ್ರವೇಶಿಸುವ ಅತ್ಯಂತ ಅಪಾಯಕಾರಿಯಾದ ವಲಸೆಯನ್ನು ತಡೆಯುತ್ತದೆ ಎಂದು ಹೇಳಿದರು.

ವಿಶ್ವಸಂಸ್ಥೆಯ ನಿರಾಶ್ರಿತರ ಎಜೆನ್ಸಿಯು ಈ ನಡೆಯನ್ನು ಟೀಕಿಸಿದೆ. ಇಂಗ್ಲೆಂಡ್ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಹಾಗೂ ರುವಾಂಡಾ ದೇಶವು ಮಾನವ ಹಕ್ಕುಗಳ ಬಗ್ಗೆ ಉತ್ತಮವಾದ ಇತಿಹಾಸವನ್ನು ಹೊಂದಿಲ್ಲ ಎಂದು ಅದು ಹೇಳಿದೆ. ಈ ಒಪ್ಪಂದವು ಶ್ರಿಮಂತ ದೇಶಗಳು ನಿರಾಶ್ರಿತರ ಬಗ್ಗೆ ತಮಗೆ ಇರುವ ಜವಾಬ್ದಾರಿಯನ್ನು ಬಡದೇಶಗಳಿಗೆ ಹಸ್ತಾಂತರಿಸುವ ಒಂದು ಕೆಟ್ಟ ರೂಢಿಯನ್ನು ಶುರುಮಾಡುತ್ತದೆ.

ರುವಾಂಡ ದೇಶವು, ಮಾನವ ಹಕ್ಕುಗಳ ಉಲ್ಲಂಘನೆಯ ಇತಿಹಾಸದ ಬಗ್ಗೆ ಮಾಡಲಾದ ಆರೋಪಗಳು ಆಧಾರರಹಿತವಾಗಿವೆ ಎಂದು ಈ ಒಪ್ಪಂದವನ್ನು ಸಮರ್ಥಿಸಿಕೊಂಡಿದೆ. ಈ ದೇಶವು ಆಶ್ರಯಬಯಸುವವರಿಗೆ 5 ವರ್ಷಗಳ ವಾಸ ಹಾಗೂ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ. 2014ರಲ್ಲಿ ರುವಾಂಡವು ಇಸ್ರೇಲ್ ದೇಶದೊಂದಿಗೆ ಇಂಥದ್ದೇ ಒಂದು ಒಪ್ಪಂದ ಮಾಡಲು ಪ್ರಯತ್ನಿಸಿತು, ಆಗ ಇಸ್ರೇಲ್ ಪ್ರತಿ ನಿರಾಶ್ರಿತರಿಗೆ 5,000 ಯುಎಸ್ ಡಾಲರ್‌ನಷ್ಟು ಹಣವನ್ನು ರುವಾಂಡ ಸರಕಾರಕ್ಕೆ ನೀಡಿತ್ತು. ಈ ನಿರಾಶ್ರಿತರು ಪ್ರಮುಖವಾಗಿ ಸುಡಾನ್ ಮತ್ತು ಎರಿಟ್ರಿಯಾ ದೇಶದಿಂದ ಬಂದಿದ್ದರು. ಇಸ್ರೇಲ್ ಸುಮಾರು 4,000 ನಿರಾಶ್ರಿತರನ್ನು ರುವಾಂಡಾಗೆ ಕಳುಹಿಸಿತ್ತು. ಈ ಯೋಜನೆ ಸಂಪೂರ್ಣವಾಗಿ ವಿಫಲವಾಯಿತು. ಇಸ್ರೇಲಿನಲ್ಲಿಯೇ ಉಳಿಯಲು ಪ್ರಯತ್ನಿಸಿದವರನ್ನು ಬಂಧನಕ್ಕೆ ಒಳಪಡಿಸಲಾಯಿತು. ರುವಾಂಡಾಗೆ ಹೋದ ನಿರಾಶ್ರಿತರಿಗೆ ಸೂಕ್ತ ದಾಖಲೆಗಳನ್ನು ನೀಡಲಿಲ್ಲ ಹಾಗೂ ಅವರು ಅಲ್ಲಿ ಉಳಿಯಲು ಆಗಲಿಲ್ಲ. ಅವರಲ್ಲಿ ಹೆಚ್ಚಿನವರು ದೇಶದಿಂದ ತಪ್ಪಿಸಿಕೊಂಡು ಹೋದರು ಹಾಗೂ ಅತ್ಯಂತ ಅಪಾಯಕಾರಿಯಾಗಿ ಹಲವಾರು ದೇಶಗಳ ಮೂಲಕ ಪ್ರಯಾಣ ಮಾಡಿದರು.

ರುವಾಂಡಾದಲ್ಲಿ ಈಗಾಗಲೇ ಆಫ್ರಿಕಾದ ನೆರೆಯ ರಾಷ್ಟ್ರಗಳಿಂದ ಬಂದ 1,30,000 ನಿರಾಶ್ರಿತರು ವಾಸಿಸುತ್ತಿದ್ದಾರೆ.

ಈ ನಿರಾಶ್ರಿತರು ಅಥವಾ ರೆಫ್ಯೂಜಿ ಎಂದರೇನು?

ಯುಎನ್‌ಎಚ್‌ಸಿಆರ್ ಪ್ರಕಾರ, ಜನಾಂಗ, ಧರ್ಮ, ಒಂದು ನಿರ್ದಿಷ್ಟ ಸಾಮಾಜಿಕ ಗುಂಪು ಅಥವಾ ರಾಜಕೀಯ ಅಭಿಪ್ರಾಯ ಅಥವಾ ರಾಷ್ಟ್ರೀಯತೆಯ ಕಾರಣದಿಂದ ಶಿಕ್ಷಿಸಲಾಗುವುದು ಎಂಬ ಆಧಾರಸಹಿತವಾದ ಆತಂಕದ ಕಾರಣದಿಂದ ತಮ್ಮ ರಾಷ್ಟ್ರೀಯತೆಯ ದೇಶದ ಹೊರಗಿರುವವರು, ಭಯದ ಕಾರಣದಿಂದ ತನ್ನ ದೇಶದೊಳಗೇ ರಕ್ಷಣೆಯನ್ನು ಪಡೆಯಲು ನಿರಾಕರಿಸುವ, ತಮ್ಮ ರಾಷ್ಟ್ರೀಯತೆಯನ್ನು ಕಳೆದುಕೊಂಡಿರುವ, ಅಥವಾ ಭಯದ ಕಾರಣದಿಂದ ತನ್ನ ರಾಷ್ಟ್ರೀಯತೆಯ ದೇಶಕ್ಕೆ ಹೋಗಲು ಸಾಧ್ಯವಾಗದೇ ಇರುವ ಅಥವಾ ನಿರಾಕರಿಸುವ ವ್ಯಕ್ತಿಗಳಿಗೆ ನಿರಾಶ್ರಿತರು ಎನ್ನಲಾಗಿದೆ. ಹಾಗೂ ಸಾರ್ವಜನಿಕ ಸುವ್ಯವಸ್ಥೆ ಭಂಗವಾಗುವುದರಿಂದ ಹಿಂಸೆ ಅನುಭವಿಸುವ ಅಥವಾ ಅದರ ಅಪಾಯದ ಆತಂಕ ಹೊಂದಿರುವ ಕಾರಣದಿಂದ ತಮ್ಮ ರಾಷ್ಟ್ರೀಯತೆಯ ದೇಶದ ಅಥವಾ ರೂಢಿಗತ ವಾಸಸ್ಥಳದಿಂದ ಹೊರಗೆ ಇರುವವರನ್ನೂ ನಿರಾಶ್ರಿತರು ಎಂದು ಕರೆಯಬಹುದಾಗಿದೆ.

ಯುನೈಟೆಡ್ ಕಿಂಗ್‌ಡಂ ಅಂದರೆ ಇಂಗ್ಲೆಂಡ್ ದೇಶವು 2021ರಲ್ಲಿ ಆಶ್ರಯ ಕೋರಿ 50,000 ಅರ್ಜಿಗಳನ್ನು ಸ್ವೀಕರಿಸಿದೆ. ಅದರಲ್ಲಿ ಇರಾನ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು 10,000 ಅರ್ಜಿಗಳು ಬಂದಿವೆ. ಎರಿಟ್ರೆಯಾ, ಅಲ್ಬೆನಿಯ, ಇರಾಕ್ ಹಾಗೂ ಸಿರಿಯಾ ಒಳಗೊಂಡು ಇನ್ನಿತರ ದೇಶಗಳಿಂದ ಅರ್ಜಿ ಬಂದಿವೆ. ಯುಕೆಯಲ್ಲಿ ಸದ್ಯಕ್ಕೆ 80,000 ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಇವೆ. ಯುಕೆಯಲ್ಲಿ 1,00,000ಕ್ಕೂ ಹೆಚ್ಚು ಆಶ್ರಯಕೋರುವ ಜನರು ವಾಸಿಸುತ್ತಿದ್ದಾರೆ.

ಹೆಚ್ಚಿನ ಸೂಕ್ತ ಮಾಹಿತಿ ಇಲ್ಲದೇ ಇರುವ ಕಾರಣಕ್ಕಾಗಿ, ಪ್ರತಿಕೂಲ ಸರಕಾರ ಹಾಗೂ ಸಂಕಷ್ಟದ ಪರಿಸ್ಥಿತಿಗಳ ಕಾರಣದಿಂದ ನಿರಾಶ್ರಿತರನ್ನು ಅನೌಪಚಾರಿಕ ವಲಯಗಳಿಗೆ ಬಲವಂತವಾಗಿ ದೂಡಲಾಗುತ್ತದೆ. ಅಲ್ಲಿ ಅವರು ಕಡಿಮೆ ಆದಾಯ ಪಡೆದು ದುಡಿಯುತ್ತಾರೆ ಹಾಗೂ ಅಲ್ಲಿ ಅವರಿಗೆ ಪ್ರತಿಕೂಲವಾಗಿರುವ ಸರಕಾರ ಮತ್ತು ಜನರಿಂದ ಭಯಭೀತಿಯ ಪರಿಸ್ಥಿತಿ ಒದಗುವ ಸಾಧ್ಯತೆಯಿದೆ. ವಿದ್ವಾಂಸರು ಗಮನಿಸಿದ್ದೇನೆಂದರೆ, ದಾಖಲೆಗಳನ್ನು ಹೊಂದಿರದ ಇಂತಹ ವಲಸಿಗರ ಕೆಲಸ ಮತ್ತು ಸೇವೆಯನ್ನು ಅಗ್ಗವಾಗಿಸಲು ಅಪರಾಧೀಕರಿಸಲಾಗುತ್ತದೆ, ಈ ವಿದ್ಯಮಾನವನ್ನು ಕ್ರಿಮಿಗೇಷನ್ ಎಂದು ಕರೆಯಲಾಗಿದೆ. ದಾಖಲೆರಹಿತ ವಲಸಿಗರ ಮೇಲೆ ಅತ್ಯಂತ ಕಠೋರ ದಂಡವನ್ನು ವಿಧಿಸುವುದರ ಮೂಲಕ, ಕೆಲಸಗಾರರಿಗೆ ಅತ್ಯಂತ ಕಡಿಮೆ ವೇತನವನ್ನು ನೀಡಲಾಗುತ್ತದೆ. ಇದರಿಂದ ದೊಡ್ಡದೊಡ್ಡ ವ್ಯಾಪಾರಗಳಿಗೆ ಅನುಕೂಲವಾಗುತ್ತದೆ ಹಾಗೂ ಸ್ಥಳೀಯ ಹೋರಾಟಗಳಿಂದ ಪಡೆದುಕೊಂಡ ಹಕ್ಕುಗಳನ್ನು ಬೈಪಾಸ್ ಮಾಡಲಾಗುತ್ತದೆ. ರಾಜಕಾರಣಿಗಳು ಕೂಡ ನಿರಾಶ್ರಿತರ ಭಯವನ್ನು ಬಳಸಿ, ಸ್ಥಳೀಯ ದುಡಿಯುವ ವರ್ಗದ ಜನರನ್ನು ನಿರಾಶ್ರಿತರ ವಿರುದ್ಧ ಎತ್ತಿಕಟ್ಟುತ್ತಾರೆ.

ವಿಶ್ವದಲ್ಲಿ ಈಗ ಸುಮಾರು ಎರಡೂವರೆ ಕೋಟಿ ನಿರಾಶ್ರಿತರಿದ್ದಾರೆ. ಅದರಲ್ಲಿ ಬಹುತೇಕರು ತಮ್ಮ ಮೂಲ ದೇಶದ ನೆರೆಹೊರೆಯ ರಾಷ್ಟ್ರಗಳಲ್ಲಿ ಆಶ್ರಯ ಕೋರುತ್ತಾರೆ. ಬಹುತೇಕ ನಿರಾಶ್ರಿತರು ಅವರಿಗೆ ಆಶ್ರಯ ಸಿಗುವ ತನಕ ಸತತವಾಗಿ ವಲಸೆ ಹೋಗುತ್ತಿರುತ್ತಾರೆ. ಅದರಲ್ಲಿ ಹೆಚ್ಚಿನವರಿಗೆ ಜೀವ ಬೆದರಿಕೆ ಇರುತ್ತದೆ ಹಾಗೂ ತಮ್ಮ ಸಮುದಾಯ ಹೆಚ್ಚಿರುವ ಕಡೆ ಅವರು ವಲಸೆ ಹೋಗುತ್ತಾರೆ. ಆಶ್ರಯ ಕೋರುವವರಿಗೆ ಸಾಮಾನ್ಯವಾಗಿ ವಲಸೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಅರಿವು ಇರುವುದಿಲ್ಲ ಹಾಗೂ ಅವರು ತಮಗೆ ಕೆಲಸ ಮಾಡುವ ಹಕ್ಕು ಇರದ ದೇಶಗಳಲ್ಲಿ ವಾಸಿಸುತ್ತಾರೆ ಹಾಗಾಗಿ ಅವರನ್ನು ಅನೌಪಚಾರಿಕ ಆರ್ಥಿಕತೆಯ ಭಾಗವಾಗುವಂತೆ ಮಾಡಲಾಗುತ್ತದೆ ಹಾಗೂ ಅಲ್ಲಿ ಅವರನ್ನು ಗುರಿ ಮಾಡಲಾಗುತ್ತದೆ.

ವಿಶ್ವಾದ್ಯಂತ ದೇಶಗಳು ನಿರಾಶ್ರಿತರ ಮೇಲೆ ಇಂತಹ ಕ್ರಮಗಳನ್ನು ಏಕೆ ಕೈಗೊಳ್ಳುತ್ತಿವೆ?

ಎರಡನೆಯ ವಿಶ್ವಯುದ್ಧದ ನಂತರ, ಜಗತ್ತಿನ ಹೆಚ್ಚಿನ ದೇಶಗಳು ವಲಸೆಗೆ ತಮ್ಮ ಬಾಗಿಲು ತೆರೆದಿಟ್ಟಿದ್ದವು. ಶೀತಲಸಮರದ ಸಮಯದಲ್ಲಿ ತಾವು ಎಷ್ಟು ವೈವಿಧ್ಯತೆಗೆ ತೆರೆದುಕೊಂಡಿದ್ದೇವೆ ಹಾಗೂ ಎಷ್ಟು ಮುಕ್ತವಾಗಿದ್ದೇವೆ ಎಂದು ತೋರಿಸಿ ತಮ್ಮ ಹೆಚ್ಚುಗಾರಿಕೆಯನ್ನು ಪ್ರದರ್ಶಿಸಲು ಪ್ರಯತ್ನಿಸಿದವು.

ಬೋರಿಸ್ ಜಾನ್ಸನ್

ತಾವು ಇಡೀ ವಿಶ್ವವನ್ನು ಪ್ರತಿನಿಧಿಸುತ್ತೇವೆ ಎಂದು ಬಿಂಬಿಸಿದವು. ಆದರೆ 1970ರ ನಂತರದಿಂದ, ಈ ನೀತಿಗಳನ್ನು ಹಿಂಪಡೆಯಲಾರಂಭಿಸಿದವು. 70ರ ದಶಕದಿಂದ ತಾವು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಪ್ರತಿಪಾದಿಸಿದವು. ರಾಜಕಾರಣಿಗಳು ಭಯವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲಾರಂಭಿಸಿದರು. ಅವರುಗಳು, ಭಯೋತ್ಪಾದನೆಗೆ, ಸಂಘಟಿತ ಅಪರಾಧಕ್ಕೆ ಮತ್ತು ಮಾದಕ ವಸ್ತುಗಳಿಗೆ ವಲಸೆ ಬಂದಿರುವ ಜನಸಮೂಹವನ್ನು ದೂರಲು ಶುರು ಮಾಡಿದರು. ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದ ದಾಖಲೆರಹಿತ ವಲಸಿಗರು ಸುಲಭವಾದ ಗುರಿಗಳಾದರು ಹಾಗೂ ಅವರಿಗೆ ಧ್ವನಿ ಎತ್ತಲು ಅವಕಾಶಗಳಿರಲಿಲ್ಲ. ಭಾರತದಲ್ಲೂ ಅದೇ ಪರಿಸ್ಥಿತಿ ಇದೆ. 80ರ ದಶಕದಿಂದ ವಲಸೆಯ ನೀತಿಗಳು ಮತ್ತು ಆತಂಕ ಹುಟ್ಟಿಸುವ ಅನೌಪಚಾರಿಕ ವಲಯದ ಪರಿಸ್ಥಿತಿಯಿಂದ ಅಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರನ್ನು ಅತ್ಯಂತ ಕಷ್ಟಕರ ಪರಿಸ್ಥಿತಿಗೆ ದೂಡಲಾಗಿದೆ.

ಬೋರಿಸ್ ಜಾನ್ಸನ್ ಎಷ್ಟೇ ಖಡಾಖಂಡಿತವಾಗಿ ಮಾತನಾಡಿದರೂ, ನಿರಾಶ್ರಿತರನ್ನು ಸ್ಥಳಾಂತರಿಸುವ
ಯೋಜನೆ ಎಷ್ಟು ಪರಿಣಾಮಕಾರಿಯಾಗಬಲ್ಲದು ಎಂಬುದರ ಬಗ್ಗೆ ತಜ್ಞರಿಗೆ ಖಾತ್ರಿ ಇಲ್ಲ. ನಿರಾಶ್ರಿತರಿಗೆ ದಾಖಲೆಗಳ ಸಮಸ್ಯೆ ಇದೆ. ನಿರಾಶ್ರಿತರನ್ನು ಹಿಡಿದು ಅವರನ್ನು ಅಜ್ಞಾತ ಭವಿಷ್ಯಕ್ಕೆ ದೂಡಲಾಗುತ್ತದೆ ಎಂಬ ಆತಂಕದ ವಾತಾವರಣವನ್ನು ಮಾತ್ರ ಈ ನೀತಿ ಸೃಷ್ಟಿಸಲಿದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ರುವಾಂಡ ರೀತಿಯ ನರಮೇಧ ಭಾರತದಲ್ಲೂ ನಡೆಯಲಿದೆಯೇ?; ತಜ್ಞರ ಎಚ್ಚರಿಕೆ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...