Homeಮುಖಪುಟಫೇಸ್‍ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ನಿವೃತ್ತ ಐಎಎಸ್ ಅಧಿಕಾರಿಗಳ ಬಹಿರಂಗ ಪತ್ರ

ಫೇಸ್‍ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ನಿವೃತ್ತ ಐಎಎಸ್ ಅಧಿಕಾರಿಗಳ ಬಹಿರಂಗ ಪತ್ರ

ದ್ವೇಷ ಭಾಷೆಯನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದ ನೀತಿಯನ್ನು ಭಾರತದಲ್ಲಿ ಫೇಸ್‍ಬುಕ್ ಜಾರಿಗೊಳಿಸುತ್ತಿರುವ ಕ್ರಮಗಳ ಬಗ್ಗೆ ತನಿಖೆ ನಡೆಸಲು ನಿಜವಾದ ಪ್ರಯತ್ನ ಮಾಡುತ್ತೀರೆಂಬ ಭರವಸೆಯಿಂದ ನಿಮಗೆ ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ.

- Advertisement -
- Advertisement -

ಪ್ರಿಯ ಜುಕರ್‌ಬರ್ಗ್,

ನಾವು (ಕಾನಿಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್, ಭಾರತ ದೇಶದ ಮಾಜಿ ಸರ್ಕಾರಿ ಉದ್ಯೋಗಿಗಳು – ನಾಗರಿಕ ಸೇವೆ). ಅಖಿಲ ಭಾರತ ಕೇಂದ್ರ ಸೇವೆಗಳಿಗೆ ಸೇರಿದವರು ನಮ್ಮ ವೃತ್ತಿ ಜೀವನದುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸರ್ಕಾರಿ ವ್ಯವಸ್ಥೆಗಳಲ್ಲಿ ಕೆಲಸ ಮಾಡಿದ್ದೇವೆ. ಒಂದು ಗುಂಪಾಗಿ ನಮಗೆ ಯಾವ ರಾಜಕೀಯ ಪಕ್ಷದ ಜೊತೆಗೂ ಸಂಬಂಧವಿಲ್ಲ. ತಟಸ್ಥ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ವ್ಯವಹರಿಸುತ್ತಾ ಭಾರತ ಸಂವಿಧಾನಕ್ಕೆ ಬದ್ದರಾಗಿರುವುದು ನಮ್ಮ ಮುಖ್ಯ ಸ್ವಭಾವ ಮತ್ತು ಲಕ್ಷಣವಾಗಿದೆ. ನಾವು ಈ ಹಿಂದೆ, ಭಾರತೀಯ ನಾಗರಿಕರ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಎನಿಸಿದಾಗಲೆಲ್ಲ ಸರ್ಕಾರಕ್ಕೆ, ಸರ್ಕಾರಿ ಸಂಸ್ಥೆಗಳಿಗೆ ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ಬಹಿರಂಗ ಪತ್ರಗಳನ್ನು ಬರೆದಿದ್ದೇವೆ. ಇಲ್ಲಿಯವರೆಗೂ ಯಾವುದೇ ಭಾರತೀಯೇತರ ಸಂಸ್ಥೆ ಅಥವಾ ವ್ಯಕ್ತಿಗೆ ನಾವು ಈ ರೀತಿ ಬಹಿರಂಗ ಪತ್ರ ಬರೆದಿಲ್ಲ. ಈಗ ನಾವು ನಮ್ಮ ಎಂದಿನ ರೂಢಿಯನ್ನು ಬಿಟ್ಟು ನಿಮಗೆ ಈ ಬಹಿರಂಗ ಪತ್ರವನ್ನು ಬರೆಯತ್ತಿದ್ದೇವೆ. ಏಕೆಂದರೆ ಭಾರತ ದೇಶದಲ್ಲಿ ಫೇಸ್‍ಬುಕ್ ತನ್ನ ವ್ಯಾಪಾರ ವ್ಯವಹಾರಗಳಲ್ಲಿ ತೆಗೆದುಕೊಂಡ (ಅಥವಾ ತೆಗೆದುಕೊಳ್ಳದ) ನಿರ್ಣಾಯಕ ಕ್ರಮಗಳಿಂದ ಭಾರತದ ಜನಸಾಮಾನ್ಯರ ಮೂಲಭೂತ ಹಕ್ಕುಗಳನ್ನು ಅಪಾಯಕ್ಕೆ ತಳ್ಳಲ್ಪಟ್ಟವು.

2020ರ ಆಗಸ್ಟ್ 14ರಂದು ‘ವಾಲ್‍ಸ್ಟ್ರೀಟ್ ಜರ್ನಲ್’ನಲ್ಲಿ ಪ್ರಕಟವಾದ ಒಂದು ಲೇಖನ ನಮ್ಮನ್ನು ಆತಂಕಕ್ಕೀಡು ಮಾಡಿ ಹಕ್ಕುಗಳಿಗೆ ಎದುರಾಗುತ್ತಿರುವ ಅಪಾಯವನ್ನು ನಮ್ಮ ಗಮನಕ್ಕೆ ತಂದಿತು. ನೀವು ಒಬ್ಬ ನಾಗರಿಕನಾಗಿರುವ ಅಮೆರಿಕಾ ಮತ್ತು ನಮ್ಮ ಭಾರತದೇಶ ಎರಡು ಸಹ ತಮ್ಮ ತಮ್ಮ ನಾಗರಿಕರಿಗೆ ಅನೇಕ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಖಾತ್ರಿಪಡಿಸಿವೆ. ದ್ವೇಷ ಭಾಷಣಗಳು ಪ್ರಜಾಪ್ರಭುತ್ವ ನೀಡಿದ ಹಕ್ಕುಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ಹಾಗಾಗಿಯೇ ದ್ವೇಷ ಭಾಷಣಗಳನ್ನು ಅಥವಾ ದ್ವೇಷಪೂರಿತ ಮಾತುಗಳನ್ನು ಅನುಮತಿಸಬಾರದೆಂಬ ನಿಯಮವನ್ನು ಫೇಸ್‍ಬುಕ್ ತನ್ನ ನೀತಿಯ ಭಾಗವಾಗಿ ಮಾಡಿಕೊಂಡಿದೆ. ‘ಜಾತಿ, ಬುಡಕಟ್ಟು, ರಾಷ್ಟ್ರೀಯ ಮೂಲಗಳು, ಧಾರ್ಮಿಕ ಸಂಬಂಧಗಳು, ಲೈಂಗಿಕ ದೃಷ್ಟಿ, ಸ್ತ್ರೀ ಪುರುಷ ಬೇಧಭಾವ, ಲಿಂಗ ಅಥವಾ ಲಿಂಗ ಅಸ್ತಿತ್ವ, ತೀವ್ರ ಅಂಗವೈಕಲ್ಯಗಳು ಅಥವಾ ಅನಾರೋಗ್ಯ ಮುಂತಾದವುಗಳ ಆಧಾರದಲ್ಲಿ ಜನರ ಮೇಲೆ ಪ್ರತ್ಯಕ್ಷ ದಾಳಿ’ಯನ್ನು ದ್ವೇಷ ಭಾಷಣವೆಂದು ಫೇಸ್‍ಬುಕ್ ವ್ಯಾಖ್ಯಾನಿಸಿದೆ. ನಿಮ್ಮ ಸ್ವಂತ ನೀತಿಯಲ್ಲಿ ಈ ಸ್ಪಷ್ಟವಾದ, ಸೂಕ್ತವಲ್ಲದ ವ್ಯಾಖ್ಯಾನವನ್ನು ಗಮನದಲ್ಲಿಟ್ಟುಕೊಂಡು ಭಾರತ ದೇಶದಲ್ಲಿ ಅಂತಹ ಅಪರಾಧಗಳಲ್ಲಿ ಪದೇ ಪದೇ ಭಾಗಿಯಾಗುತ್ತಿರುವ ಕೆಲವರ – ತೆಲಂಗಾಣ ರಾಜ್ಯದ ಶಾಸಕ ಟಿ.ರಾಜಸಿಂಗ್ ಮತ್ತೂ ಕೆಲವು ಜನರ ಮೇಲೆ – ಫೇಸ್‍ಬುಕ್ ಕ್ರಮ ತೆಗೆದುಕೊಳ್ಳದೇ ಹೋಗದಿರುವುದು ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಸದರಿ ವ್ಯಕ್ತಿಗಳು ಒಂದು ಭಿನ್ನವಾದ ಧರ್ಮಕ್ಕೆ ಸೇರಿದವರ ಮೇಲೆ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಕೋವಿಡ್ 19 ಮಹಾಮಾರಿಯನ್ನು ಹರಡುತ್ತಿದ್ದಾರೆಂದು, ‘ಲವ್ ಜಿಹಾದ್’, ಮುಂತಾದ ತಪ್ಪುಗಳಿಗೆ ಭಾಗಿಯಗುತ್ತಿದ್ದಾರೆಂದು ಮುಸ್ಲಿಮರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಕಟು ಪದಗಳಲ್ಲಿ ದೂಷಿಸುತ್ತಿದ್ದಾರೆ.

ಆದರೂ ಫೇಸ್‍ಬುಕ್ ಅಂತಹ ವ್ಯಕ್ತಿಗಳ ಬಗ್ಗೆ, ಅವರೆಲ್ಲರೂ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಸದಸ್ಯರಾದ್ದರಿಂದ ಕಠಿಣವಾಗಿ ವ್ಯವಹರಿಸದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆ ವ್ಯಕ್ತಿಗಳು ಪೋಸ್ಟ್ ಮಾಡಿದ ಹೇಳಿಕೆಗಳು, ಭಾಷಣಗಳು ಕಾನೂನು ಬಾಹಿರವಾಗಿವೆ ಎಂದು ಫೇಸ್‍ಬುಕ್ ಪರಿಗಣಿಸಿದೆ ಎಂಬ ವಿಷಯ, ಆಗಸ್ಟ್ 17ರಂದು ಅವುಗಳನ್ನು ತೆಗೆದು ಹಾಕಿದ್ದನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಫೇಸ್‍ಬುಕ್ ಇಂಡಿಯಾದ ನಾಗರಿಕ/ಸಾರ್ವಜನಿಕ ನೀತಿ (ಪಬ್ಲಿಕ್ ಪಾಲಿಸಿ) ಮುಖ್ಯಸ್ಥರು ಪ್ರಜ್ಞಾಪೂರ್ವಕವಾಗಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸದಸ್ಯರ ವಿಷಯದಲ್ಲಿ ತಮ್ಮ ಸಂಸ್ಥೆ ನಿಗಧಿಪಡಿಸಿದ ದ್ವೇಷ ಭಾಷಣಗಳ ವಿರುದ್ಧದ ನಿಯಮಗಳನ್ನು ಜಾರಿಗೊಳಿಸಲು ಅಂಗೀಕರಿಸಿಲ್ಲವೆಂಬ ವಾಸ್ತವವನ್ನು ವಾಲ್‍ಸ್ಟ್ರೀಟ್ ಜನರಲ್‍ನ ಲೇಖನದಿಂದ ತಿಳಿದುಕೊಂಡ ನಾವು ತುಂಬಾ ಅಘಾತಕ್ಕೊಳಗಾಗಿದ್ದೆವು. ಬಿಜೆಪಿ ಶ್ರೇಣಿಗಳಿಗೆ ಆ ನಿಯಮಗಳನ್ನು ಜಾರಿಗೊಳಿಸುವುದರಿಂದ ಭಾರತದಲ್ಲಿನ ತಮ್ಮ ಕಂಪನಿಯ ವ್ಯಾವಹಾರಿಕ ಹಿತಾಸಕ್ತಿಗಳಿಗೆ ಹಾನಿ ಆಗುತ್ತದೆ ಎಂಬ ಭಾವನೆಯಿಂದ ಹಾಗೆ ವ್ಯವಹರಿಸಿದ್ದಾರೆಂದು ನಮಗೆ ತಿಳಿದು ಬಂದಿದೆ.

ಜುಕರ್‍ಬರ್ಗ್‍ನವರೇ, ಭಾರತದಲ್ಲಿ ಧಾರ್ಮಿಕವಾದ ಅಶಾಂತಿ ಒಂದು ತೀವ್ರವಾದ ಸಮಸ್ಯೆಯಾಗಿ ಪರಿಣಮಿಸಿದೆ ಎಂಬ ವಿಷಯ ನಿಮಗೆ ಖಚಿತವಾಗಿ ತಿಳಿದ ವಿಷಯವಾಗಿದೆ. ಭಾರತದ ಸಂಸತ್ತು ಇತ್ತೀಚಿಗೆ ಅನುಮೋದಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ಜೊತೆಯಾಗಿ ರಾಷ್ಟ್ರೀಯ ನಾಗರಿಕ ಕಾಯ್ದೆ (ಎನ್‍ಆರ್‍ಸಿ) ಲಕ್ಷಾಂತರ ಮುಸ್ಲಿಂರು, ಇತರೆ ಅಲ್ಪಸಂಖ್ಯಾತರ ಪೌರತ್ವಕ್ಕೆ ಮುಪ್ಪಾಗಿ ಪರಿಣಮಿಸಿತು. ಭಾರತೀಯ ಸಮಾಜದ ಮುಖ್ಯವಾಹಿನಿಯಿಂದ ಅವರನ್ನು ದೂರ ಮಾಡಿ ಬಂಧನ ಕೇಂದ್ರಗಳಲ್ಲಿ ಅವರನ್ನು ಇರಿಸಲು ಅವು ಆಧಾರವಾಗಲಿವೆ. 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಧಾರ್ಮಿಕ ಗಲಬೆಗಳ ವಿಷಯ ನಿಮಗೆ ತಿಳಿಯದೇ ಇರುವುದೇನಲ್ಲ. ಆ ಗಲಭೆಗಳಲ್ಲಿ 53 ಮಂದಿ ಸತ್ತುಹೋದರು. ಅಲ್ಲಿ ಸತ್ತವರಲ್ಲಿ ಮೂರನೇ ಎರಡು ಭಾಗದಷ್ಟು ಮಂದಿ ಮುಸ್ಲಿಂರು. ನ್ಯಾಯಾಲಯಗಳ ಪ್ರಮೇಯವಿಲ್ಲದ ಕಾನೂನು ಬಾಹಿರವಾದ ಪಂಚಾಯಿತಿಗಳಿಂದ ಹಲವರನ್ನು ಮುಖ್ಯವಾಗಿ ಮುಸ್ಲಿಂ ಮತ್ತು ದಲಿತರನ್ನು ಚಿತ್ರವಧೆಗೆ ಗುರಿ ಮಾಡಿ ಕೊಲ್ಲುತ್ತಿರುವ ಘಟನೆಗಳು ಇತ್ತೀಚಿಗೆ ಭಾರತದಲ್ಲಿ ಅತಿ ಹೆಚ್ಚಾಗಿವೆ. ಈ ಅಪರಾಧಗಳಲ್ಲಿ ಅತಿ ಹೆಚ್ಚು ಭಾಗ ಫೇಸ್‍ಬುಕ್, ವಾಟ್ಸಪ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಿಸುತ್ತಿರುವ ದ್ವೇಷ ಭಾಷಣಗಳ ಪರಿಣಾಮವಾಗಿ ನಡೆದಂತಹವುಗಳೇ ಎಂಬುದು ಗಮನಾರ್ಹ. ಈ ವಿಷಯ ತಿಳಿದು ಸಹ ದ್ವೇಷ ಭಾಷಣಗಳನ್ನು ನಿಯಂತ್ರಿಸುವಲ್ಲಿ ಫೇಸ್‍ಬುಕ್ ತನ್ನ ತನ್ನದೇ ಆದ ನೀತಿಯನ್ನು ಭಾರತದಲ್ಲಿ ಜಾರಿಗೊಳಿಸುವುದರಲ್ಲಿ ವಿಫಲವಾಗಿದೆ. ಒಂದು ಅಸ್ಪಷ್ಟವಾದ ಪಕ್ಷಪಾತ ರೀತಿಯನ್ನು ಜಾರಿಗೊಳಿಸಿದೆ. ಫೇಸ್‍ಬುಕ್ ವ್ಯಾಪಾರ ಪ್ರಯೋಜನಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೀಗೆ ಮಾಡುತ್ತಿದೆ ಎನ್ನುವುದು ಖಚಿತವಾಗಿ ಟೀಕೆಗೆ ಅರ್ಹವಾದುದಾಗಿದೆ.

ಫೇಸ್‍ಬುಕ್ ಹಾಗೆ ತನ್ನದೇ ನೀತಿಯ ವಿರುದ್ಧವಾಗಿ ವರ್ತಿಸಿರುವುದು ಬೇರೆ ದೇಶಗಳಲ್ಲಿಯೂ ಸಹ ಚರ್ಚೆಯ ವಿಷಯವಾಗಿರುವುದು ನಾವು ಗಮನಿಸಿದ್ದೇವೆ. ಮಾನವ ಜೀವನ ಮತ್ತು ಮಾನವೀಯ ಮೌಲ್ಯಗಳಿಗೆ ಆಗುವ ಹಾನಿಯನ್ನು ನಿರ್ಲಕ್ಷಿಸಿ ವ್ಯಾಪಾರದ ಲಾಭಗಳನ್ನು ಸಾಧಿಸಬಹುದೇ? ಪರಮ ಮೂರ್ಖತನದಿಂದ ಕೂಡಿದ ಅಂತಹ ಅಲೋಚನೆಗಳಿಂದ ಫೇಸ್‍ಬುಕ್ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುವುದರಿಂದಲೇ ಇಂದು ಜಗತ್ತಿನ ಹಲವು ದೇಶಗಳಲ್ಲಿ ದ್ವೇಷ ಒಂದು ವೈರಸ್ ರೀತಿಯಲ್ಲಿ ವಿಜೃಂಭಿಸಿ, ವ್ಯಾಪಿಸುತ್ತಿರುವುದು ಆಶ್ಚರ್ಯವೇನಲ್ಲ.

ದ್ವೇಷ ಭಾಷೆಯನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದ ನೀತಿಯನ್ನು ಭಾರತದಲ್ಲಿ ಫೇಸ್‍ಬುಕ್ ಜಾರಿಗೊಳಿಸುತ್ತಿರುವ ಕ್ರಮಗಳ ಬಗ್ಗೆ ತನಿಖೆ ನಡೆಸಲು ನಿಜವಾದ ಪ್ರಯತ್ನ ಮಾಡುತ್ತೀರೆಂಬ ಭರವಸೆಯಿಂದ ನಿಮಗೆ ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ. ಈ ತನಿಖೆಯ ಸಂದರ್ಭದಲ್ಲಿ ಫೇಸ್‍ಬುಕ್ ಇಂಡಿಯಾದ ಸಾರ್ವಜನಿಕ ನೀತಿಯ ಪ್ರಸ್ತುತ ಪ್ರಮುಖ ಮುಖ್ಯಸ್ಥ ಆ ತನಿಖೆಗಳನ್ನು ಪ್ರಭಾವಿಸುವ ಜವಾಬ್ದಾರಿಗಳಲ್ಲಿ ಇರದಂತೆ ಮಾಡುತ್ತೀರೆಂದು ಆಶಿಸುತ್ತೇವೆ. ದ್ವೇಷದಿಂದ ಕೂಡಿದ ಅಪರಾಧಗಳಿಗೆ ಕಾರಣವಾಗಿರುವ ದ್ವೇಷಪೂರಿತ ಸಂಭಾಷಣೆಗಳನ್ನು, ಪೋಸ್ಟ್‍ಗಳಿಗೆ ವಿರುದ್ಧವಾಗಿ ನಿಮ್ಮದೇ ಆದ ನೀತಿಯೊಂದನ್ನು ಜಾರಿಗೊಳಿಸುವಲ್ಲಿ ನಿಮ್ಮ ಕಂಪನಿಯ ವ್ಯವಹಾರಿಕ ಹಿತಾಸಕ್ತಿಗಳು ಅಡ್ಡಬರದಂತೆ ಎಚ್ಚರ ವಹಿಸುತ್ತಿರೆಂದು ಸಹ ನಾವು ಮನಃಪೂರ್ವಕವಾಗಿ ಆಶಿಸುತ್ತೇವೆ. ದ್ವೇಷಪೂರಿತ ಮಾತುಗಳನ್ನು ನಿಯಂತ್ರಿಸದೇ ಇರುವುದು ಭಾರತ ಸಂವಿಧಾನದ ಪ್ರಜಾಸತ್ತಾತ್ಮಕ ಜಾತ್ಯಾತೀತೆಯ ಅಂಶಗಳನ್ನು ಬಲಹೀನಗೊಳಿಸುತ್ತದೆ.

– ಕಾನಿಸ್ಟಿಟ್ಯೂಷನಲ್ ಕಾಂಡಕ್ಟ್ ಗ್ರೂಪ್

(ಈ ಬಹಿರಂಗ ಪತ್ರದಲ್ಲಿ ವಪ್ಪಾಲ ಬಾಲಚಂದ್ರನ್ – ಐಎಎಸ್, ಗೋಪಾಲನ್ ಬಾಲಕೃಷ್ಣನ್ –ಐಎಎಸ್, ಸುಂದರ್ ಬುರ್ರಾ- ಐಎಎಸ್, ನಿತಿನ್ ದೇಸಾಯಿ– ಐಎಎಸ್, ಸುಶೀಲ್ ದುಬೆ– ಐಎಎಸ್, ಕೆ.ಪಿ.ಫೇಬಿಯಸ್–ಐಎಎಸ್, ಹೆಚೆಸ್ ಗುಜ್ರಾಲ್– ಐಎಎಸ್, ಹರ್ಷಮಂದರ್– ಐಎಎಸ್, ಸತ್ವಂತ್ ರೆಡ್ಡಿ– ಐಎಎಸ್, ಸಲಾಹುದ್ದೀಸ್ ಅಲಂ- ಐಎಎಸ್, ಷಫಿ ಅಲಮ್ –ಐಎಎಸ್, ವಿಜಯಲತಾ ರೆಡ್ಡಿ– ಐಎಎಸ್, ಜೂಲಿಯಾ ರೆಬೋರೋ– ಐಎಎಸ್, ನರೆಂದ್ರ ಸಿಸೋಡಿಯಾ –ಐಎಎಸ್ ರವರನ್ನು ಒಳಗೊಂಡಂತೆ 54 ಜನ ನಿವೃತ್ತ ಸರ್ಕಾರಿ ಹಿರಿಯ ಅಧಿಕಾರಿಗಳು ಸಹಿ ಮಾಡಿದ್ದಾರೆ)

ಅನುವಾದ: ಅನಿಲ್ ಕುಮಾರ್ ಚಿಕ್ಕದಾಳವಟ್ಟ


ಇದನ್ನು ಓದಿ: ಮಂಗಳೂರು: ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...