Homeಮುಖಪುಟ’ರತ್ನನ್ ಪ್ರಪಂಚ’ ಭಾವುಕತೆಯ ಬಂಡವಾಳವಷ್ಟೇ ಸಾಕೆ?

’ರತ್ನನ್ ಪ್ರಪಂಚ’ ಭಾವುಕತೆಯ ಬಂಡವಾಳವಷ್ಟೇ ಸಾಕೆ?

- Advertisement -
- Advertisement -

ಇತ್ತೀಚಿಗೆ ಒಟಿಟಿ ವೇದಿಕೆಯೊಂದರಲ್ಲಿ ಬಿಡುಗಡೆಯಾದ ’ರತ್ನನ್ ಪ್ರಪಂಚ’ ಕನ್ನಡ ಸಿನಿಮಾ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ವಿಮರ್ಶೆಗಳಿಗೆ ಸಾಕ್ಷಿಯಾಯಿತು. ಕನ್ನಡ ಸಿನಿಮಾಗಳಿಗೆ ವಿಮರ್ಶೆಯ ವಿಚಾರದಲ್ಲಿ ವಿನಾಯಿತಿ ನೀಡಬೇಕು ಎಂಬ ಒಂದು ವಲಯದ ಕೂಗು ಆಗಾಗ ಅನುರಣನಿಸುತ್ತಿರುತ್ತದೆ. ಆದರೆ ಅದಕ್ಕೆ ನೀಡುವ ಕಾರಣಗಳು ಮತ್ತು ಸಮರ್ಥನೆಗಳು ಕನ್ನಡ ಸಿನಿಮಾರಂಗದ ಗುಣಮಟ್ಟದ ಬಗೆಗನ ಕಾಳಜಿಗಿಂತ ನಿರ್ಮಾಪಕರ, ನಿರ್ದೇಶಕರ ಅಥವಾ ತಮ್ಮ ನೆಚ್ಚಿನ ನಟರ ಬಗೆಗಿನ ತೀವ್ರ ಅಭಿಮಾನ ಅಲ್ಲಿ ಕೆಲಸ ಮಾಡಿರುತ್ತದೆ. ಅಭಿಮಾನ ತನ್ನಷ್ಟಕ್ಕೇ ಸಮಸ್ಯಾತ್ಮಕವಲ್ಲವಾದರೂ, ಜಾಗತಿಕವಾಗಿ ಅತ್ಯುತ್ತಮವಾದ ಅಂದರೆ ಜನಸಾಮಾನ್ಯರ ನೋವು ನಲಿವುಗಳನ್ನು, ಸಮಸ್ಯೆಗಳನ್ನು, ಬವಣೆಗಳನ್ನು ಪರಿಣಾಮಕಾರಿಯಾಗಿ ದೃಶ್ಯರೂಪದಲ್ಲಿ ಮೂಡಿಸುತ್ತಿರುವ ಕಂಟೆಂಟ್ ಸುಲಭವಾಗಿ ಎಲ್ಲರಿಗೂ ಸಿಗುತ್ತಿರುವ ಇಂದಿನ ಸಂದರ್ಭದಲ್ಲಿ ಅಭಿಮಾನದ ಪ್ರತಿಷ್ಠೆಯಷ್ಟೇ ಕನ್ನಡ ಚಿತ್ರರಂಗಕ್ಕೆ ಸಾಲದಲ್ಲವೇ? ಕನ್ನಡನಾಡಿನ ಸಮುದಾಯಗಳ ಬದುಕು ಬವಣೆಗಳನ್ನು, ಕರ್ನಾಟಕದ ಜನರ ಕಥೆಗಳನ್ನು, ಸಾಮಾಜಿಕ ಪರಿಸದ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡುವತ್ತ ಸಿನಿಮಾರಂಗ ಬೆಳೆಯುವತ್ತ ಎಲ್ಲರೂ ಚಿಂತಿಸುವುದು ಒಳಿತಲ್ಲವೇ?

MAID

ಇತ್ತೀಚೆಗೆ ಒಟಿಟಿ ವೇದಿಕೆಯೊಂದರಲ್ಲಿ ’ಮೇಯ್ಡ್’ (MAID) ಎಂಬ ಒಂದು ಇಂಗ್ಲಿಷ್ ವೆಬ್ ಸೀರೀಸ್ ಜನಪ್ರಿಯವಾಗಿದೆ. ಅಲೆಕ್ಸ್ ಎಂಬಾಕೆ ತನ್ನ ಅಬ್ಯೂಸಿವ್ ಗಂಡನನ್ನು ತೊರೆದು ದೂರಬಂದು, ಅಸಮಾನತೆಯ ವ್ಯವಸ್ಥೆಯ ಸಮಾಜದಲ್ಲಿ ಮನೆಕೆಲಸದಾಕೆಯಾಗಿ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ, ತನ್ನ ತಾಯಿಯ, ತನ್ನ ತಂದೆಯ ಮತ್ತು ತನ್ನ ಪತಿಯ ಜೊತೆಗಿನ ಸಂಬಂಧಗಳನ್ನು ಶೋಧಿಸಿಕೊಳ್ಳುವ ಕಥಾಹಂದರ ಹೊಂದಿರುವ ಈ ಸೀರಿಸ್ ಪುರುಷಾಧಿಪತ್ಯದ ವಿರುದ್ಧ ಸೆಟೆದು ನಿಲ್ಲುತ್ತದೆ. ಈ ಪಯಣದಲ್ಲಿ ಅಲೆಕ್ಸ್ ಪಾತ್ರವನ್ನು ಅನನ್ಯವಾಗಿ ಕಟ್ಟಿಕೊಡಲಾಗಿದೆ. ಪುಟ್ಟ ಮಗಳನ್ನು ಎತ್ತುಕೊಂಡು ತನ್ನ ಗಂಡನಿಂದ ದೂರ ಬಂದು ಮನೆಗೆಲಸದಾಕೆಯ ಕೆಲಸ ಹುಡುಕಿಕೊಂಡಿರುವ ಅಲೆಕ್ಸ್‌ಗೆ ವಸತಿಯ ಸಮಸ್ಯೆ ಆಗಾಗ ಕಾಡುತ್ತದೆ. ತಾಯಿಗೆ ಕೂಡ ಸರಿಯಾದ ನೆಲೆ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ದೂರವಾಗಿದ್ದ ಅಪ್ಪನ ಬಳಿ ಸಣ್ಣ ಅವಧಿಗೆ ಆಶ್ರಯ ಪಡೆದಿರುತ್ತಾಳೆ. ಒಮ್ಮೆ ಮನೆಯೊಂದನ್ನು ಸ್ವಚ್ಛ ಮಾಡಲೆಂದು ಹೋಗಿರುವಾಗ ಅಟ್ಟದಂತಹ ಒಂದು ಗೂಡಿನ ಒಳಹೊಕ್ಕಾಗ, ಅದರ ಚಿಕ್ಕ ಬಾಗಿಲು ಆಕಸ್ಮಿಕವಾಗಿ ಮುಚ್ಚಿಕೊಂಡು ಕತ್ತಲಾಗುತ್ತದೆ. ಹೊರಗೆ ಬರಲಾರದೆ ಭಯಭೀತಿಯಿಂದ ಬೆವರುತ್ತಾಳೆ. ಹೇಗೋ ಹೊರಬಂದ ಮೇಲೆ, ಮರೆತಿದ್ದ ತನ್ನ ಬಾಲ್ಯದ ನೆನಪು ಮರುಕಳಿಸುತ್ತದೆ. ತನ್ನ ಬಾಲ್ಯದಲ್ಲಿ ತಂದೆ ತನ್ನ ತಾಯಿಯನ್ನು ಹೊಡೆಯುವ ಸಮಯದಲ್ಲಿ, ಅಲ್ಮೇರದಲ್ಲಿ ಹುದುಗಿ ಬಚ್ಚಿಟ್ಟುಕೊಳ್ಳುವ ಕರಾಳ ನೆನಪದು. ತಕ್ಷಣ ತನ್ನ ತಂದೆಯ ಮನೆಗೆ ತೆರಳಿ, ಮಗಳನ್ನು ಕರೆದುಕೊಂಡು ಆ ಮನೆಯನ್ನೂ ತೊರೆಯುತ್ತಾಳೆ. ಅಲೆಕ್ಸ್‌ಳ ಹೋರಾಟ ಮುಂದುವರೆಯುತ್ತದೆ..

’ರತ್ನನ್ ಪ್ರಪಂಚ’ ಚಿತ್ರದ ಚರ್ಚೆಯೊಂದಿಗೆ ಮೇಯ್ಡ್ ವೆಬ್ ಸೀರಿಸ್ ಎಳೆದುಕೊಂಡು ಬಂದದ್ದಕ್ಕೆ ಕಾರಣವಿದೆ. ಕಥೆಯ ತಿರುವುಗಳನ್ನು ನಿರೂಪಿಸುವಾಗ ಅದು ವೀಕ್ಷಕನನ್ನು ಚಿಂತನೆಗೆ ಹಚ್ಚುವಂತೆ ಮಾಡಿ, ಅವನನ್ನು ’ಇದು ಹೇಗೆ ಸಾಧ್ಯ’ ಎಂಬ ಸಂದೇಹಕ್ಕೆ ಒಳಪಡಿಸುವುದಕ್ಕಿಂತಲೂ, ಕಥೆಯ ಮುಂದುವರಿಕೆಯನ್ನು ಸಕಾರಣವಾಗಿ ಕನ್ವಿನ್ಸ್ ಮಾಡುವಂತಿರಬೇಕು. ’ಮೇಯ್ಡ್’ನಲ್ಲಿ ಅದು ಸಿದ್ಧಿಸಿರುವುದು ಸುಲಭವಾಗಿ ನಮಗೆ ಕಾಣಸಿಗುತ್ತದೆ. ಅದನ್ನು ಜಾಗತಿಕವಾಗಿ ಎಲ್ಲ ಒಳ್ಳೆಯ ಕಥೆಗಾರರೂ-ನಿರ್ದೇಶಕರೂ ಮಾಡಲು ಪ್ರಯತ್ನಿಸುತ್ತಾರೆ.

’ರತ್ನನ್ ಪ್ರಪಂಚ’ ಸಿನಿಮಾ ಕಟ್ಟುವಿಕೆಯಲ್ಲಿ ಪ್ರೇಕ್ಷಕನಿಗೆ ಆ ಕಟ್ಟುವಿಕೆ ಹೆಚ್ಚು ಕನ್ವಿನ್ಸ್ ಆಗುವುದಕ್ಕಿಂತಲೂ ಕಥೆಯಿಂದ ಕಳಿಚಿಕೊಂಡಂತಹ ಕೊಂಡಿಗಳೇ ಕೊನೆಯವರೆಗೂ ಕಾಡುತ್ತವೆ. ತನ್ನ ತಾಯಿ ಸರೋಜಾಳ (ಉಮಾಶ್ರೀ) ಜೊತೆಗೆ ಯಾವಾಗಲೂ ಕಚ್ಚಾಡುವ ಮಗ ರತ್ನಾಕರ (ಧನಂಜಯ್). ಇದು ಏಕೆ ಹೀಗೆ ಕಟ್ಟಲಾಗಿದೆ ಎಂಬುದು ಕೂಡ ಸರಿಯಾಗಿ ಮನವರಿಕೆಯಾಗುವುದೇ ಇಲ್ಲ! ಇನ್ನು ಆಕೆ ತನ್ನ ಹೆತ್ತ ತಾಯಿಯಲ್ಲ ಎಂದು ರತ್ನಾಕರ ತಿಳಿಯುವ ಸನ್ನಿವೇಶವನ್ನೇ ಗಮನಿಸಿ. ಕಳೆದುಹೋದ ನಾಯಿಯ ಬಗ್ಗೆ ಜಾಹೀರಾತು ನೀಡಲು ಹೋದ ಪತ್ರಿಕೆಯೊಂದರ ಕಚೇರಿಯಲ್ಲಿ, ಪರಿಚಯಳಾದ ಒಬ್ಬ ಪತ್ರಕರ್ತೆ, ತನ್ನ ಸಂಪಾದಕ ಹೇಳಿದ ಮಾತಿನ ಬೆನ್ನುಬಿದ್ದು ರತ್ನಾಕರನ ನಿಜ ತಾಯಿಯ ಬಗ್ಗೆ ಪತ್ತೆ ಹಚ್ಚಿ ಆತನಿಗೆ ಹೇಳುತ್ತಾಳೆ! ಸರಿ, ’ಅಪನಂಬಿಕೆಯನ್ನು ತೊಡೆದುಹಾಕುವ’ ದೃಶ್ಯಮಾಧ್ಯಮದ ಥಿಯರಿಯ ಪ್ರಕಾರವೇ ಮುಂದುವರೆದರೆ, ತನ್ನ ಹೆತ್ತತಾಯಿಯನ್ನು ಹುಡುಕುವ ಪ್ರಯತ್ನದಲ್ಲಿ ಪ್ರಯಾಣ ಬೆಳೆಸುವ ರತ್ನಾಕರನ ಮುಂದಿನ ಕಥೆ ಘನವಾದದ್ದೇನನ್ನಾದರೂ ಪ್ರೇಕ್ಷಕನಿಗೆ ದಾಟಿಸುತ್ತದೆಯೇ ಎಂದರೆ ಅಲ್ಲಿಯೂ ನಿರಾಸೆಯೇ ಕಟ್ಟಿಟ್ಟಬುತ್ತಿ. ಅತಿಭಾವುಕ ಸನ್ನಿವೇಶಗಳನ್ನು ಪ್ರೇಕ್ಷಕನ ಮೇಲೆ ಹೇರಿ ಭಾರವಾಗಿಸುವ ಹೆಚ್ಚುಗಾರಿಕೆಯಷ್ಟೇ ಸಿನಿಮಾದಲ್ಲಿ ಸಿದ್ಧಿಸಿರುವುದು. ಜೊತೆಗೆ ಕಥೆಗೆ ಪೂರಕವಲ್ಲದ ಸಂಭಾಷಣೆಗಳನ್ನು ಅಬ್ಬರದಲ್ಲಿ ತುಂಬಿರುವುದು..

ಚಿಕ್ಕಂದಿನಲ್ಲಿ ಬಡತನದ ಕಾರಣಕ್ಕಾಗಿ ತನ್ನ ಮೂರೂ ಮಕ್ಕಳನ್ನು ಮೂರು ವಿಭಿನ್ನ ಕುಟುಂಬಗಳಿಗೆ ದತ್ತುಕೊಟ್ಟಿರುವ ತಾಯಿ. ಇಲ್ಲೂ ಸಾಮಾಜಿಕ ಪರಿಸರವನ್ನು ಕಟ್ಟಿಕೊಡುವ ಅಗತ್ಯ ನಿರ್ದೇಶಕರಿಗೆ ಕಂಡುಬಂದಂತಿಲ್ಲ. ಬಡತನದ ಕಾರಣ ಹೇಳಿಬಿಟ್ಟರೆ ಸಾಕು! ಆಕೆ ಮೂರೂ ವಿಭಿನ್ನ ಸಮುದಾಯದವರಿಗೆ
ಮಕ್ಕಳನ್ನು ದತ್ತುಕೊಟ್ಟಿದ್ದಾಳೆ, ಹಾಗಾಗಿ ಸೋದರ-ಸೋದರಿಯರು ವಿಭಿನ್ನ ಧರ್ಮೀಯರಾಗಿ, ಸಮುದಾಯದವರಾಗಿ ತಮ್ಮ ಸಾಕಿದವರ ಬಳಿ, ತಾವು ಜೊತೆಯಾದವರ ಬಳಿ ಅಕ್ಕರೆಯಿಂದ ಇದ್ದಾರೆ ಎಂಬ ಉದಾತ್ತ ಆಶಯವನ್ನು ತ್ರಾಸದಾಯಕವಾಗಿ ನಿರೂಪಿಸಲು ನಿರ್ದೇಶಕ ಶ್ರಮಿಸಿದ್ದಾರೆ.

ಈ ನಿರೂಪಣೆಯಲ್ಲಿ ರತ್ನಾಕರನ ಪಾತ್ರವನ್ನು ಗಮನಿಸಿ. ತನ್ನ ನಿಜ ತಾಯಿಯ ಬಗ್ಗೆ ತಿಳಿಯುವ ಮೊದಲೇ, ಆತನ ಸಿಟ್ಟಿನ-ಹುಚ್ಚಾಟದ ವರ್ತನೆಗೆ ಗಟ್ಟಿ ಕಾರಣಗಳನ್ನು ನಿರ್ದೇಶಕ ಕಟ್ಟಿಕೊಡುವುದಿಲ್ಲ. ತನ್ನ ಹೆತ್ತ ತಾಯಿಯ ಶೋಧಕ್ಕೆ ಜತೆಯಾಗುವ ಪತ್ರಕರ್ತೆಯ ಜೊತೆಗೆ ವರ್ತಿಸುವಾಗ ವಿಜೃಂಭಿಸುವ ’ಮಿಸೋಜಿನಿ’ಗೆ ಸರಿಯಾದ ಪ್ರತಿರೋಧವನ್ನೇ ಸಿನಿಮಾದಲ್ಲಿ ಕಟ್ಟಿಕೊಡುವುದಿಲ್ಲ. ರತ್ನಾಕರನ ತಾಯಿಯ ಪಾತ್ರದ್ದೂ ಇಂತಹ ಮಿಸೋಜಿನಿಯ ಅತಿರೇಕದ ಸಂಭಾಷಣೆಯನ್ನು ಹೊತ್ತು ಮೆರೆದಿದೆ. ಮಗನಿಗೆ ಹೆಣ್ಣು ಹುಡುಕಲು ಹೋಗುವ ಸನ್ನಿವೇಶವನ್ನು ಕಟ್ಟಿಕೊಟ್ಟಿರುವ ರೀತಿ, ತನ್ನ ಸೊಸೆಯನ್ನು ಹಂಗಿಸುವ ರೀತಿ ಇವೆಲ್ಲಾ ಹಾಸ್ಯದ ಹೆಸರಿನಲ್ಲಿ ಅಭಿರುಚಿಹೀನತೆಯನ್ನು ಮೆರೆಸಿವೆ.

ಇನ್ನು ರತ್ನಾಕರ ತನ್ನ ಸಹೋದರಿಯನ್ನು ಹುಡುಕಿ ಜಮ್ಮುಕಾಶ್ಮೀರಕ್ಕೆ ತೆರಳುವುದು, ಅಲ್ಲಿ ಇನ್ನೊಬ್ಬ ಸಹೋದರನ ಬಗ್ಗೆ ತಿಳಿದು ಉತ್ತರ ಕರ್ನಾಟಕಕ್ಕೆ ತೆರಳುವುದು ಹೀಗೆ ಕಥೆಯ ಜಾಡು ಬೆಳೆಯುತ್ತದೆಯೇ ಹೊರತು ಎಲ್ಲೂ ಹೃದಯಕ್ಕೆ ಇಳಿಯುವುದಿಲ್ಲ. ರತ್ನಾಕರನ ಈ ವೈಯಕ್ತಿಕ ಬಿಕ್ಕಟ್ಟಿನಲ್ಲಿ ಸಮಾಜದ ಆಗುಹೋಗುಗಳು, ವ್ಯವಸ್ಥೆಯ ರೂಪಗಳು ಯಾವುವೂ ಪ್ರತಿಧ್ವನಿಸುವುದಿಲ್ಲ. ತನ್ನ ಹೆತ್ತ ತಾಯಿಗಿಂತ ಸಾಕಿ ಸಲಹಿದ ತಾಯಿ ಸರೋಜಾಳ ಮೇಲೆ ಪ್ರೀತಿ ಮುಖ್ಯ ಎಂದು ಬದಲಾಗುವ ರತ್ನಾಕರನ ಪಯಣದಲ್ಲಿ ಪ್ರೇಕ್ಷಕನನ್ನು ಸಹಪಯಣಿಗನನ್ನಾಗಿಸುವ ಶಕ್ತಿಯನ್ನು ಸಿನಿಮಾ ಹೊಂದಿದೆಯೇ ಎಂಬ ಪ್ರಶ್ನೆಗೆ ನಿರಾಸೆಯೇ ಉತ್ತರ! ಬಿಂಬಿಸಿರುವ ಅಬ್ಬರಕ್ಕೆ ಬದಲಾಗಿ, ಕಟ್ಟಿಕೊಡಬೇಕೆಂದುಕೊಂಡಿರುವ ಆಶಯಕ್ಕೆ ಬದಲಾಗಿ ಸಂಬಂಧಗಳ ಸೂಕ್ಷ್ಮಗಳನ್ನು ಅವಲೋಕಿಸಲು ಪ್ರಯತ್ನಿಸಿದ್ದರೆ ಸಿನಿಮಾ ತುಸುವಾದರೂ ಗಟ್ಟಿಯಾಗಿ ಮೂಡಿರುತ್ತಿತ್ತು.

ರತ್ನಾಕರನ ಪಯಣದಲ್ಲಿ ಜತೆಯಾಗುವ ಮಯೂರಿಯದ್ದೂ (ರೆಬಾ ಮೊನಿಕಾ ಜಾನ್) ಹೆಚ್ಚುಕಮ್ಮಿ ಇದೇ ರೀತಿಯ ಕಥೆ. ಬಾಲ್ಯದಲ್ಲಿಯೇ ತಂದೆತಾಯಿ ಆಕೆಯನ್ನು ತೊರೆದಿರುವುದರಿಂದ ಟ್ರಾನ್ಸ್‌ಜೆಂಡರ್ ಒಬ್ಬರು ಸಾಕಿ ಬೆಳೆಸಿದ್ದಾರೆ. ಈ ವಿಷಯ ಆಕೆಯನ್ನು ವರಿಸುವಬೇಕಾಗಿರುವವನಿಗೆ ಅಪಥ್ಯ. ಈ ಪಯಣದಲ್ಲಿ ತನ್ನ ಫಿಯಾನ್ಸಿಯನ್ನು ತೊರೆಯುವ ಧೈರ್ಯವನ್ನು ಮಯೂರಿ ಮಾಡುತ್ತಾಳೆ. ಇಲ್ಲೂ ಉದಾತ್ತವಾದ ಆಶಯಗಳನ್ನು ನಿರ್ದೇಶಕ ಇಟ್ಟುಕೊಂಡಿದ್ದರೂ, ಅದನ್ನು ಸಿನಿಮ್ಯಾಟಿಕ್ ರೂಪದಲ್ಲಿ ಕಟ್ಟಿಕೊಡಲು ಪ್ರಯತ್ನಿಸದೆ ಅದನ್ನು ತುರುಕಿದಂತೆ ಪ್ರೇಕ್ಷಕನಿಗೆ ಭಾಸವಾಗುತ್ತದೆ.

ಆದರೆ, ರತ್ನಾಕರನ ಸಹೋದರ ಉಡಾಳನ ಪಾತ್ರವನ್ನು ವಿಜೃಂಭಿಸುವಾಗ ನಿರ್ದೇಶಕ ಉದಾರವಾಗಿ ಅದಕ್ಕೆ ಸ್ಪೇಸ್ ಕೊಡುತ್ತಾರೆ. ಉಡಾಳ ಕುಡುಕನೊಬ್ಬನನ್ನು ಬೆದರಿಸುವ ಅತಿ ಕೆಟ್ಟ ರೀತಿಯ ಸಂಭಾಷಣೆಯಿಂದ ಹಿಡಿದು, ಅದರಿಂದ ಆ ಕುಡುಕ ಸರಿಹೋಗಿ ಧನ್ಯವಾದಗಳನ್ನು ಅರ್ಪಿಸುವವರೆಗೂ ಅದಕ್ಕೆ ವಿಪುಲ ಅವಕಾಶವಿದೆ. ಹೀಗೆ ಹೆಚ್ಚು ಪುರುಷಕೇಂದ್ರಿತ ಪಾತ್ರಗಳ ವಿಜೃಂಭಣೆಯ ಎಂದಿನ ಭಾರತೀಯ ಸಿನಿಮಾಗಳ ಸಾಮಾನ್ಯ ಧಾಟಿಯನ್ನು ಈ ಚಿತ್ರವೂ ಮುಂದುವರೆಸಿದೆ. ಹಾಗೆಯೇ ಮುಸ್ಲಿಂ ಪಾತ್ರಗಳು ಕನ್ನಡ ಮಾತನಾಡುವ ಬಗೆಗೆ ಕನ್ನಡ ಸಿನಿಮಾಗಳಲ್ಲಿ ಇರುವ ಪೂರ್ವಗ್ರಹವೂ ಇಲ್ಲಿ ಮುಂದುವರೆದಿದೆ.

ಯಾವುದೇ ಕಥೆಯನ್ನು ಹೇಳುವಾಗ ಸುತ್ತಲಿನ ಪರಿಸರ ಅದಕ್ಕೆ ಹೇಗೆ ಕಾರಣ ಮತ್ತು ವ್ಯವಸ್ಥೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಒಳಗೊಳ್ಳುವುದು ಸಶಕ್ತ ಕಥಾನಿರೂಪಣೆಯ ಬಗೆ. ತಂತ್ರಜ್ಞಾನ, ಸಿನಿಮಾ ಬಗೆಗಿನ ಚಿಂತನೆ ಹೆಚ್ಚೆಚ್ಚು ಬೆಳೆದಂತೆ ಇದನ್ನು ದೃಶ್ಯ ಮಾಧ್ಯಮದಲ್ಲಿಯೂ ಸುಲಭವಾಗಿ ಒಳಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಕಥೆಯನ್ನು ಕಟ್ಟಿಕೊಡುವಾಗ ಸೃಷ್ಟಿಸುವ ಪರಿಸರ, ಘರ್ಷಣೆಯನ್ನು ನಿರೂಪಿಸಲು ಬೇಕಾದ ಗಟ್ಟಿ ಕಾರಣಗಳು, ಅದನ್ನು ಬಗೆಹರಿಸಲು ಉಪಯೋಗಿಸುವ ತಂತ್ರ ಇವುಗಳ ಬಗ್ಗೆ ಕನ್ನಡದ ನಿರ್ದೇಶಕರು ಇನ್ನೂ ಗಂಭೀರವಾಗಿ ಚಿಂತಿಸುವುದು ಒಟ್ಟಾರೆ ಕನ್ನಡ ಸಿನಿಮಾರಂಗದ ದೃಷ್ಟಿಯಿಂದ ಒಳಿತು. ತಾಯಿ-ಮಕ್ಕಳ ಸಂಬಂಧದ ರಮಣೀಯ ಭಾವುಕತೆ ಎಂದೆಂದಿಗೂ ಸರಕಾಗುತ್ತದೆ ಎಂಬ ದೃಷ್ಟಿಕೋನದಿಂದ ಹೊರಬಂದು ಇನ್ನೂ ಆಳದ ಗ್ರಹಿಕೆಗೆ, ವಿಶಾಲವಾದ ಅವಲೋಕನಕ್ಕೆ ಮುಂದಾಗುವ ದಿನ ಕನ್ನಡ ಚಿತ್ರರಂಗಕ್ಕೆ ಶೀಘ್ರಬರಲಿ!


ಇದನ್ನೂ ಓದಿ: ಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ

ಇದನ್ನೂ ಒದಿ: ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವ: ಅತ್ಯುತ್ತಮ LGBTQI+ ಚಿತ್ರ ಪ್ರಶಸ್ತಿ ಪಡೆದ ಕನ್ನಡದ ‘ನಾನು ಲೇಡಿಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...