Homeಕರ್ನಾಟಕರೈತ ಚಲನೆಗೆ ಸ್ಪಂದಿಸದ ವಿದ್ಯಾರ್ಥಿ ಸಮೂಹ - ಡಾ.ಜಿ.ವಿ.ಆನಂದಮೂರ್ತಿ ಆತಂಕ

ರೈತ ಚಲನೆಗೆ ಸ್ಪಂದಿಸದ ವಿದ್ಯಾರ್ಥಿ ಸಮೂಹ – ಡಾ.ಜಿ.ವಿ.ಆನಂದಮೂರ್ತಿ ಆತಂಕ

’ಕುವೆಂಪು ವಿಚಾರ ವೇದಿಕೆ’ ವತಿಯಿಂದ ಹಮ್ಮಿಕೊಂಡಿದ್ದ ಕುವೆಂಪು ವಿಚಾರಗಳ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು

- Advertisement -
- Advertisement -

ದೆಹಲಿಯಲ್ಲಿ ರೈತರ ಚಲನೆ ಆರಂಭವಾಗಿದ್ದರೂ ಇದಕ್ಕೆ ಪ್ರತಿಕ್ರಿಯಿಸಬೇಕಾಗಿದ್ದ ವಿದ್ಯಾರ್ಥಿ-ಯುವಜನ ಸಮೂಹ ಮೌನಕ್ಕೆ ಜಾರಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹಿವಿಯ ಕವಿ, ವಿಮರ್ಶಕ ಡಾ.ಜಿ.ವಿ.ಆನಂದಮೂರ್ತಿ ಕಳವಳ ವ್ಯಕ್ತಪಡಿಸಿದರು.

ತುಮಕೂರು ನಗರದ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಡಾ.ಎಚ್.ಎಂ.ಗಂಗಾಧರಯ್ಯ ಸಭಾಂಗಣದಲ್ಲಿ ಮಂಗಳವಾರ ’ಕುವೆಂಪು ವಿಚಾರ ವೇದಿಕೆ’ ವತಿಯಿಂದ ಹಮ್ಮಿಕೊಂಡಿದ್ದ ಕುವೆಂಪು ವಿಚಾರಗಳ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

ಕುವೆಂಪು ವಿದ್ಯಾರ್ಥಿ ಸಮೂಹವನ್ನು ಗೌರವಾನ್ವಿತ ತಪಸ್ವಿಗಳೆಂದು ಕರೆದರು. ಅಧ್ಯಯನಶೀಲತೆ, ಏಕಾಗ್ರತೆ, ಆತ್ಮಾನುಸಂಧಾನ, ಪರೀಕ್ಷೆ ಮತ್ತು ವಿಮರ್ಶೆ ಮಾಡಬೇಕು. ಪ್ರಶ್ನಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಕುವೆಂಪು ಹೇಳಿದರು. ಆದರೆ ಪ್ರಸಕ್ತ ದೇಶದ ವಿದ್ಯಮಾನ ಪ್ರಶ್ನಿಸುವ ಮನೋಭಾವವನ್ನೇ ಕೊಂದುಹಾಕಿದೆ. ಜಡವಾಗುವಂತೆ ಮಾಡಿದೆ.. ಎಂದು ಹೇಳಿದರು.

ಇದನ್ನೂ ಓದಿ: ಹಳತು-ವಿವೇಕ: ಸಮಕಾಲೀನತೆಯಲ್ಲಿ ಕುವೆಂಪು-ಕ್ರಿಯೆ, ಪ್ರತಿಕ್ರಿಯೆ – ದಿ. ಎಂ. ಡಿ. ನಂಜುಂಡಸ್ವಾಮಿ

ಕುವೆಂಪು ಅವರ ಸಮಗ್ರ ಸಾಹಿತ್ಯ ಶಾಸ್ತ್ರ-ಪುರಾಣ ಭಂಜಕವಾದುದು. ನಾಕಟ ಸಾಹಿತ್ಯ ಅಂದರೆ ಬೆರಳಿಗೆ ಕೊರಳ್, ಜಲಗಾರ ನಾಟಕಗಳಲ್ಲಿ ಕುವೆಂಪು ಅವರ ಭಂಜಕತೆ ವ್ಯಕ್ತವಾಗಿದೆ. ಧನ್ವಂತರಿ ಚಿಕಿತ್ಸೆಯಲ್ಲಿ ರೈತರ ಪರಿಸ್ಥಿತಿಯನ್ನು ಹೇಳುತ್ತಾರೆ ಕುವೆಂಪು. 80 ವರ್ಷಗಳ ಹಿಂದೆ ಬರೆದ ಸಣ್ಣಕಥೆ ಇಂದಿಗೂ ಪ್ರಸ್ತುತವಾಗಿದೆ. ರೈತನ ಎದೆಯ ಮೇಲೆ ಬೃಹತ್ ಬಂಡೆಯ ಭಾರ ಹೇರಲಾಗಿದೆ. ಹೀಗಾಗಿ ರೈತ ನರಳಾಡುವಂತೆ ಮಾಡಿದೆ. ಇಂತಹ ಹೊತ್ತಿನಲ್ಲಿ ರಾಜಕಾರಣಿಗಳು ಧಾರ್ಮಿಕ ಮುಖಂಡರು ಸೇರಿದಂತೆ ಎಲ್ಲರೂ ಧನ್ವಂತರಿ ಚಿಕಿತ್ಸೆ ಕಥೆಯನ್ನು ಓದಿದರೆ ಅವರ ಕಲ್ಲುಮನಸ್ಸು ಕರಗಬಹುದು ಎಂದು ಮಾರ್ಮಿಕವಾಗಿ ಹೇಳಿದರು.

ಇಂದು ಸಮಾಜದಲ್ಲಿ ಮಾನಸಿಕ ಕ್ಷೋಭೆ ಉಂಟಾಗಿದೆ. ಸ್ವಾರ್ಥ ಚಿಂತನೆ ಹೆಚ್ಚಾಗಿದೆ. ವ್ಯಕ್ತಿಯ ವೈಭವೀಕರಣ ಮಾಡುತ್ತಿದ್ದು ಮಾನಸಿಕ ವ್ಯಸನದಿಂದ ಸಮಾಜ ನರಳುತ್ತಿದೆ. ಇದರಿಂದ ಹೊರ ಬರಲು ಕುವೆಂಪು, ಬುದ್ದನ ವಿಚಾರಗಳ ಸಹಕಾರಿಯಾಗಿವೆ ಎಂದು ತಿಳಿಸಿದರು.

ಇದನ್ನೂ ಓದಿ: ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ

ಕುವೆಂಪು ವೇದಿಕೆ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಿಂದ ಹೆಚ್ಚಿನ ಶಿಕ್ಷಣ ಪಡೆಯಬೇಕು. ಬದುಕು ದೊಡ್ಡಗ್ರಂಥ. ಬುದ್ದ, ಬಸವ, ಗಾಂಧಿ ಅಂಬೇಡ್ಕರ್ ಬೆಳಕಿನ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದರು. ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಅಭಿಪ್ರಾಯ ಭೇದವಿತ್ತೇ ಹೊರತು ವೈಯಕ್ತಿಕ ದ್ವೇಷ ಇರಲಲ್ಲ. ಇಂದು ಇವರಿಬ್ಬರ ವಿಚಾರಗಳು ಹೆಚ್ಚು ಪ್ರಸ್ತುತವಾಗಿವೆ. ವಿದ್ಯಾರ್ಥಿಗಳು ಬುದ್ದನ ವೈಚಾರಿಕತೆ, ವೈಜ್ಞಾನಿಕ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್ ಪ್ರಾಸ್ತಾವಿಕ ಮಾತನಾಡಿ ವ್ಯವಸ್ಥೆ ಕೊಳೆಯುತ್ತಿದೆ. ಇಂತಹ ಕೊಳೆಯನ್ನು ತೊಳೆಯಲು ಕುವೆಂಪು ವಿಚಾರಗಳಿಂದ ಸಾಧ್ಯ. ಅರಿವು ಹೆಚ್ಚಿಸಿಕೊಂಡು ನಂಬಿಕೆ, ಆಚಾರಗಳ ಕುರಿತು ಮರುವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವೈ.ಎಂ.ರೆಡ್ಡಿ, ಪ್ರಾಂಶುಪಾಲ ಡಾ.ಕೆ.ಎಸ್.ಕುಮಾರ್ ಮಾತನಾಡಿದರು. ಡಾ. ಹೇಮಲತಾ ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ರಮೇಶ್ ಮಣ್ಣೆ ಸ್ವಾಗತಿಸಿದರು. ಡಾ.ರಂಗಸ್ವಾಮಿ ನಿರೂಪಿಸಿದರು. ಅಧ್ಯಾಪಕಿ ಆಶಾ ವಂದಿಸಿದರು. ಪ್ರೊ.ರಾಮಲಿಂಗು, ಅಧ್ಯಾಪಕಿ ವೀಣಾ, ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...