Homeಅಂಕಣಗಳುಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

- Advertisement -
- Advertisement -

ಕೊರೊನಾ ವೈರಾಣು ವಿರುದ್ಧದ ಸಮರದಲ್ಲಿ ಆಮ್ಲಜನಕವೆಂಬ ಪ್ರಾಣವಾಯು ಬೆಲೆಕಟ್ಟಲಾಗದ ಹತಾರುಗಳಲ್ಲಿ ಒಂದು. ಈ ಅಂಶ ವರ್ಷದ ಹಿಂದೆ ಎರಗಿದ ಮೊದಲ ಕೋವಿಡ್ ದಾಳಿಯಲ್ಲಿ ಬೆಳಕಿನಷ್ಟೇ ನಿಚ್ಚಳವಾಗಿ ಗೊತ್ತಾಗಿತ್ತು. ಕೋವಿಡ್ ಮಹಾಸಾಂಕ್ರಾಮಿಕವನ್ನು ವಿನಾಶಕಾರಿ ವಿಪತ್ತು ಎಂದು ಭಾರತ ಸರ್ಕಾರ 2020ರ ಮಾರ್ಚ್ 14ರಂದೇ ಘೋಷಿಸಿತ್ತು. ಆನಂತರ ಘೋಷಿಸಲಾದ ಲಾಕ್‌ಡೌನ್ ಜಗತ್ತಿನ ಅತಿಕ್ರೂರ ಲಾಕ್‌ಡೌನ್ ಎಂದು ಇತಿಹಾಸಕ್ಕೆ ಸಂದು ಹೋಗಿದೆ.

ಆನಂತರ ನಿದ್ದೆಗೆ ಜಾರುವ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವುದು ಏಳು ತಿಂಗಳ ನಂತರ. ದೇಶದ 150 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನೆ ಘಟಕಗಳ ಸ್ಥಾಪನೆಯ ಟೆಂಡರ್ ಹೊರಟದ್ದು 2020ರ ಅಕ್ಟೋಬರ್ ತಿಂಗಳಿನಲ್ಲಿ. ಈ ಸಂಖ್ಯೆಗೆ ಇನ್ನೂ ಹನ್ನೆರಡು ಘಟಕಗಳನ್ನು ಸೇರಿಸಲಾಗಿತ್ತು. ಏಳು ತಿಂಗಳ ಮಹಾವಿಳಂಬದ ಹಿಂದಿನ ಕಾರಣ ಏನಿದ್ದೀತು ಊಹಿಸಬಲ್ಲಿರಾ? ಅದು ಹಣಕಾಸಿನ ಕೊರತೆಯಂತೆ!

150 ಉತ್ಪಾದನಾ ಘಟಕಗಳ ಸ್ಥಾಪನೆಗೆ ಬೇಕಿದ್ದ ಹಣವಾದರೂ ಎಷ್ಟು? ಕೇವಲ 201.58 ಕೋಟಿ ರುಪಾಯಿಗಳು. ಕಡೆಗೂ ಈ ಹಣವನ್ನು ಹಂಚಿಕೆ ಮಾಡಿದ್ದು PM- CARES ನಿಧಿಯಿಂದ. ಭಾರತ ಸರ್ಕಾರದ ಬೊಕ್ಕಸ ಅದೆಷ್ಟು ಬಡವಾಗಿತ್ತು!

ಟೆಂಡರ್ ಕರೆದು ಒಂದು ವರ್ಷವೇ ಉರುಳಿದೆ. 162ರಲ್ಲಿ ಸ್ಥಾಪಿಸಲಾಗಿರುವ ಘಟಕಗಳು ಕೇವಲ 33. ಇದೇ ಏಪ್ರಿಲ್ ಕಡೆಯ ವೇಳೆಗೆ ಇನ್ನೂ 59ನ್ನು ಸ್ಥಾಪಿಸಲಾಗುವುದಂತೆ. ಮೇ ಅಂತ್ಯದ ವೇಳೆಗೆ ಒಟ್ಟು 80 ಘಟಕಗಳು ಆಮ್ಲಜನಕವನ್ನು ಉತ್ಪಾದಿಸಲಿವೆಯಂತೆ. ಅರ್ಥಾತ್ ವರ್ಷದ ಹಿಂದೆ ಟೆಂಡರ್ ಕರೆಯಲಾಗಿದ್ದ ಕೇವಲ ಅರ್ಧದಷ್ಟು ಘಟಕಗಳು! ಜಿಲ್ಲಾ ಆಸ್ಪತ್ರೆಗಳದ್ದೇ ಈ ಕತೆಯಾದರೆ ತಾಲ್ಲೂಕುಗಳು, ಸಣ್ಣಪುಟ್ಟ ಊರು ಕೇರಿಗಳ ಜನರ ಪಾಡೇನು?

ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಗಳ ಹೊರಗಷ್ಟೇ ಅಲ್ಲ, ಒಳಗೂ ರೋಗಿಗಳು ಸಾಯುತ್ತಿರುವುದು ಹೃದಯವಿದ್ರಾವಕ. ಈ ಸಾವುಗಳು ಅಪ್ಪಟ ಮಾನವನಿರ್ಮಿತ. ಆಳುವವರ ಅದಕ್ಷತೆ, ಬೇಜವಾಬ್ದಾರಿ, ನಿರ್ಲಕ್ಷ್ಯವೇ ಈ ಮರಣಗಳ ಹಿಂದಿನ ಕಾರಣ.

ಕೋವಿಡ್ ಮಹಾಸಾಂಕ್ರಾಮಿಕ ಇಲ್ಲದೆ ಹೋಗಿದ್ದರೂ ಜಿಲ್ಲಾ ಆಸ್ಪತ್ರೆಗಳು ತಮ್ಮವೇ ಆದ ಆಮ್ಲಜನಕ ಘಟಕಗಳನ್ನು ಹೊಂದಿರುವುದು ಅತ್ಯಗತ್ಯ. ಹಾವು ಕಡಿತ, ಮೆದುಳುಜ್ವರ, ರಸ್ತೆ ಅಪಘಾತ ಮುಂತಾದ ಕಾರಣಗಳಿಂದಾಗಿ ಆಸ್ಪತ್ರೆ ಸೇರುವ ಸಾವಿರಾರು ರೋಗಿಗಳ ಪ್ರಾಣ ಉಳಿಸಲು ಆಮ್ಲಜನಕ ಬೇಕೇ ಬೇಕು. ಮಹಾಸಾಂಕ್ರಾಮಿಕದ ನೆಪದಲ್ಲಿ ನಮ್ಮ ಆರೋಗ್ಯವ್ಯವಸ್ಥೆಯಲ್ಲಿ ಉಳಿದುಹೋಗಿರುವ ಭಾರೀ ಕಂದಕಗಳನ್ನು ಮುಚ್ಚಬೇಕಿದೆ. ಅವುಗಳಲ್ಲಿ ಆಮ್ಲಜನಕ ಘಟಕಗಳ ಸ್ಥಾಪನೆಯೂ ಸೇರಿದೆ ಎನ್ನುತ್ತಾರೆ ಆರೋಗ್ಯ ವ್ಯವಸ್ಥೆಗಳ ತಜ್ಞ ಟಿ.ಸುಂದರರಾಮನ್.

ಜಾಗಟೆ, ತಟ್ಟೆ ಬಾರಿಸಿ ಮೇಣದಬತ್ತಿಗಳನ್ನು ಹೊತ್ತಿಸುವ, ಶಂಖ ಊದಿಸುವ ನಾಟಕಗಳನ್ನು ಮಾಡಿಸದೆ ದೇಶದ ಸಾಂಕ್ರಾಮಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅವರ ಸಲಹೆಗಳ ಪ್ರಕಾರ ನಡೆದುಕೊಂಡಿದ್ದರೆ ಇಂದಿನ ವಿಪತ್ತನ್ನು ಸಮರ್ಥವಾಗಿ ಎದುರಿಸಬಹುದಿತ್ತು.

ಮಹಾಸಾಂಕ್ರಾಮಿಕದ ನಟ್ಟ ನಡುವೆಯೂ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಕಾರ್ಯ ಬಿಡುವಿಲ್ಲದೆ ನಡೆಯಿತು. ರಾಜಸ್ತಾನವೂ ಈ ಮಾತಿಗೆ ಹೊರತಾಗಲಿಲ್ಲ. ಮಹಾರಾಷ್ಟ್ರದಲ್ಲಿ ಈ ಪ್ರಯತ್ನ ನಿಲ್ಲದೆ ನಡೆದಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಮಿನಲ್ಲಿ ಅಧಿಕಾರ ಹಿಡಿಯುವುದೇ ಪರಮಗುರಿ. ಹರಿದ್ವಾರದ ಕುಂಭಮೇಳದಲ್ಲಿ ಯಾವುದೇ ಕೋವಿಡ್ ನಿಯಮ ಪಾಲಿಸದೆ ಮೂವತ್ತು ಲಕ್ಷಕ್ಕೂ ಹೆಚ್ಚು ಮಂದಿ ದಿನಗಟ್ಟಲೆ ನೆರೆದು ಭಾಗವಹಿಸಲು ಅವಕಾಶ ಮಾಡಿಕೊಡಲಾಯಿತು. ಇವರು ದೇಶದ ನಾನಾ ಭಾಗಗಳಿಂದ ಬಂದವರು. ಹಿಂತಿರುಗುವಾಗ ಬಹುತೇಕರು ಕೋವಿಡ್ ಪ್ರಸಾದ ಹೊತ್ತು ತೆರಳುವವರೇ. ಕಳೆದ ವರ್ಷ ಹಠಾತ್ತನೆ ಹೇರಿದ ಅಮಾನುಷ ಲಾಕ್‌ಡೌನ್ ಮಾನವ ಇತಿಹಾಸದ ಮಹಾವಲಸೆಯ ದುರಂತವನ್ನು ಸೃಷ್ಟಿಸಿತ್ತು. ಲಕ್ಷಾಂತರ ಶ್ರಮಜೀವಿಗಳು ನೂರಾರು ಕಿ.ಮೀ. ದೂರವನ್ನು ಬಿರುಬಿಸಿಲಿನ ದಳ್ಳುರಿಯಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಯಿತು. ಎಷ್ಟೋ ಮಂದಿ ರಸ್ತೆಯಲ್ಲೇ ಪ್ರಾಣಬಿಟ್ಟ ದುರಂತಗಳು ಜರುಗಿದವು. ಅಂತಹ ಜನರ ಮೇಲೆ ಸರ್ಕಾರಗಳು-ಪೊಲೀಸರು ಅಮಾನುಷವಾಗಿ ನಡೆದುಕೊಂಡರು. ಲವಲೇಶ ಕರುಣೆಯೂ ಅಲ್ಲಿ ಕಾಣದೆಹೋಯಿತು. ಕಾರ್ಮಿಕ ವಲಸೆಗಾರರು ತಮ್ಮ ಗೂಡು ಸೇರಿಕೊಳ್ಳಲು ರೈಲುಗಾಡಿಗಳನ್ನು ಓಡಿಸದ ಕೇಂದ್ರ ಸರ್ಕಾರ, ಮೊನ್ನೆ ಸಾಂಕ್ರಾಮಿಕದ ನಟ್ಟನಡುವೆಯೂ ಕುಂಭಮೇಳಕ್ಕೆ ವಿಶೇಷ ರೈಲುಗಾಡಿಗಳನ್ನು ಏರ್ಪಾಡು ಮಾಡಿ ಧನ್ಯವಾಯಿತು. ಖುದ್ದು ಪ್ರಧಾನಮಂತ್ರಿಯವರೇ ಮುಂದಾಗಿ ಕುಂಭಮೇಳಕ್ಕೆ ಬರುವಂತೆ ಜನರನ್ನು ಆಹ್ವಾನಿಸಿದರು. ಪತ್ರಿಕೆಗಳಲ್ಲಿ ಅಚ್ಚಾದ ಪುಟಗಟ್ಟಲೆ ಜಾಹೀರಾತುಗಳೇ ಈ ಮಾತಿಗೆ ಪುರಾವೆ. ದೇಶವನ್ನು ಕೋವಿಡ್ ವಿಪತ್ತಿನಿಂದ ಪಾರು ಮಾಡುವುದು ನಿನ್ನೆ ಮೊನ್ನೆ ಕೂಡ ಸರ್ಕಾರದ ಆದ್ಯತೆ ಆಗಿರಲಿಲ್ಲ.

ವಲಸಿಗ

ಆಸ್ಪತ್ರೆಗಳ ಹಾಸಿಗೆಗಳನ್ನು ಹಂಗಾಮಿಯಾಗಿ ಹೆಚ್ಚಿಸಲು ಬಂದೀತು. ಆದರೆ ವೈದ್ಯರು-ಶುಶ್ರೂಷಕರು ಮುಂತಾದ ಆರೋಗ್ಯ ಸಿಬ್ಬಂದಿಯನ್ನು ದಿನ ಬೆಳಗಾಗುವುದರಲ್ಲಿ ಸೃಷ್ಟಿಸಲು ಆದೀತೇ? ಈ ಸಿಬ್ಬಂದಿ ಈಗಾಗಲೆ ತನ್ನ ಸಾಮರ್ಥ್ಯ ಮೀರಿ ಶ್ರಮಿಸತೊಡಗಿದೆ. ಒಂದು ಮಿತಿಯ ಆಚೆಗೆ ತಳ್ಳಿದರೆ ಅದು ಕೂಡ ಕುಸಿದುಹೋದೀತು.

ದೇಶದ ಆರೋಗ್ಯವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ಬಂಡವಾಳಿಗರ ಕೈಗಿಟ್ಟರೆ ಎದುರಿಸಬೇಕಿರುವ ಅಪಾಯಗಳ ಮಾದರಿಯೊಂದು ನಮ್ಮ ಕಣ್ಣಮುಂದೆ ಅನಾವರಣಗೊಳ್ಳುತ್ತಿದೆ. ಖಾಸಗೀಕರಣದ ಮಹಾಪೂಜಾರಿಗಳು ಈ ಸುನಾಮಿ ಸಾಂಕ್ರಾಮಿಕದಿಂದ ಪಾಠ ಕಲಿಯಬೇಕಿದೆ.

ಬಹುತ್ವದ ಭಿನ್ನಮತದ ಸಹನೆ ಸಹಬಾಳುವೆಯ ಆಮ್ಲಜನಕ ಕೂಡ ಭಾರತ ದೇಶದಲ್ಲಿ ಭಾರೀ ವೇಗದಲ್ಲಿ ಬರಿದಾಗುತ್ತಿದೆ. ದೇಶ ಉಸಿರುಗಟ್ಟುವ ಈ ಅಪಾಯವನ್ನೂ ಮುಂದಾಗಿಯೇ ಮನಗಾಣುವುದು ಒಳಿತು.

ಇತಿಹಾಸ ಕಂಡಿರುವ ಮಹಾನ್ ಆತ್ಮಪ್ರಶಂಸಕರ ಸಾಲಿಗೆ ಈಗಾಗಲೆ ಸೇರಿಹೋಗಿದ್ದಾರೆ ನಮ್ಮ ದೇಶದ ಹಾಲಿ ಪ್ರಚಂಡ ನಾಯಕಮಣಿ. ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ ಪಿಟೀಲು ಬಾರಿಸುತ್ತಿದ್ದ ನೀರೋ ಕಾಲಕಾಲಕ್ಕೆ ಇತಿಹಾಸದ ಪುಟಗಳಿಂದ ಎದ್ದು ಬರುತ್ತಲೇ ಇರುತ್ತಾನೆ. ಇದೀಗ ಭಾರತದಲ್ಲಿ ಕಾಣತೊಡಗಿದ್ದಾನೆ.


ಇದನ್ನೂ ಓದಿ: ಬಹುಜನ ಭಾರತ: ಕಲ್ಲನಾಗರಕೆ ಹಾಲೆರೆವವರ ಡಾಂಭಿಕತನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...