ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿರುವ ದಿನವೇ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ದೆಹಲಿ ‘ಇಸ್ಲಾಮಿಕ್’ ರಾಜ್ಯವಾಗದಂತೆ ತಡೆಯಲು ಬಿಜೆಪಿಗೆ ಮತ ನೀಡಿ ಎಂದು ಒತ್ತಾಯಿಸಿದ್ದಾರೆ.
ಶಾಹೀನ್ ಬಾಗ್ ಬೆಂಬಲಿಗರು ಕೇಜ್ರಿವಾಲ್ ಪರ ಮತ ಚಲಾಯಿಸಲು ಮುಂದಾಗಿದ್ದಾರೆ. ದೆಹಲಿಯ ಜನರಿಗೆ ನನ್ನ ಮನವಿ ಏನೆಂದರೆ, ಶಹೀನ್ ಬಾಗ್ ಅನ್ನು ನಿಲ್ಲಿಸಬೇಕಾದರೆ, ದೆಹಲಿಯನ್ನು ಇಸ್ಲಾಮಿಕ್ ರಾಷ್ಟ್ರವಾಗದಂತೆ ಉಳಿಸಲು, ನೀವೆಲ್ಲರೂ ಮನೆಯಿಂದ ಹೊರಗೆ ಬಂದು ಬಿಜೆಪಿಗೆ ಮತ ನೀಡಿ ಎಂದು ಟ್ವೀಟ್ ಮಾಡಿದ್ದಾರೆ.
शाहीन बाग समर्थक केजरीवाल को वोट करने निकले हैं ।
मेरी दिल्ली वालों से अपील है कि अगर शाहीन बाग को रोकना है ..दिल्ली को इस्लामिक स्टेट बनने से बचाना है तो बाहर निकल कर भाजपा को वोट करें। pic.twitter.com/lg1ZQxJNIm— Shandilya Giriraj Singh (@girirajsinghbjp) February 8, 2020
ಇದು ಸ್ಪಷ್ಟವಾಗಿ ಧಾರ್ಮಿಕ ಅವಹೇಳನ ಮತ್ತು ಮಾದರಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಚುನಾವಣಾ ಆಯೋಗ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ.
ಕಳೆದ ಬಾರಿ ಶೇ.67% ರಷ್ಟು ಮತದಾನ ದಾಖಲಾಗಿತ್ತು. ಆದರೆ ಈ ಬಾರಿ ಇನ್ನು ಕೇವಲ 30% ಸಹ ದಾಟಿಲ್ಲ. ಹಾಗಾಗಿ ಹತಾಶೆಗೊಳಗಾಗಿರುವ ಕೇಂದ್ರ ಸಚಿವ ಗಿರಿರಾಜ್ಸಿಂಗ್ ಈ ರೀತಿಯ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
In other words “As per his comments, if the people want to be Educationally forward, Health Sector in good condition, Good transport, No Communal polarisation, they should vote other than BJP”.