Homeಮುಖಪುಟನಾವು ನಂಬಿಬಿಡುವ ಈ ವಾರದ ಪ್ರಮುಖ ಐದು ಸುಳ್ಳು ಸುದ್ದಿಗಳು ಮತ್ತು ವಾಸ್ತವಾಂಶಗಳು

ನಾವು ನಂಬಿಬಿಡುವ ಈ ವಾರದ ಪ್ರಮುಖ ಐದು ಸುಳ್ಳು ಸುದ್ದಿಗಳು ಮತ್ತು ವಾಸ್ತವಾಂಶಗಳು

- Advertisement -
- Advertisement -

ಸುಳ್ಳು 1: ಶಾಹೀನ್ ಬಾಗ್ ಪ್ರತಿಭಟನಾಕಾರರಲ್ಲೊಬ್ಬರಿಗೆ ಕೊರೊನಾ ಸೋಂಕು ಹರಡಿದೆ

ಇದೀಗ ಬಂದ ಸುದ್ದಿ, ಶಾಹೀನ್ ಬಾಗ್ ಪ್ರತಿಭಟನೆಯಲ್ಲಿದ್ದ 43 ವರ್ಷದ ನಜ್ಮಾ ಬೇಗಂ ಎಂಬ ಮಹಿಳೆಗೆ ಕೊರೊನಾ ವೈರಸ್ ಹರಡಿದೆ. ಆದರೆ ಆಕೆ ಚಿಕಿತ್ಸೆಗೆ ನಿರಾಕರಿಸಿದ್ದಾಳೆ ಎಂಬ ಸುದ್ದಿಯನ್ನು ಟ್ವಿಟ್ಟರ್ ಮತ್ತು ವಾಟ್ಸಾಪ್‍ನಲ್ಲಿ ಹರಡಲಾಗಿದೆ.

ವಿಭೋರ್ ಆನಂದ್ ಎಂಬುವವರು ಈ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. 1600 ಜನ ಲೈಕ್ ಮಾಡಿದರೆ 750 ಜನ ಷೇರ್ ಮಾಡಿದ್ದಾರೆ.

ಸತ್ಯ: ಈ ಕುರಿತು ಫ್ಯಾಕ್ಟ್ ಚೆಕ್ ಮಾಡಿದಾಗ ಮೊದಲನೆಯದಾಗಿ ಶಾಹೀನ್ ಬಾಗ್ ಸಂಘಟಕರು ಇದು ಸುಳ್ಳು ಸುದ್ದಿ ಎಂಬುದನ್ನು ಖಚಿತಪಡಿಸಿದ್ದಾರೆ. ಎರಡನೆಯದಾಗಿ ಈ ಕುರಿತು ಯಾವುದೇ ಪತ್ರಿಕೆಯಲ್ಲಿ ವರದಿಯಾಗಿಲ್ಲ. ಮೂರನೆಯದಾಗಿ ಅಲ್ಲಿನ ಸಫ್ದರ್‍ಜಂಗ್ ಮತ್ತು ಡಾ.ರಾಮ್ ಮನೋಹರ್ ಲೋಹಿಯ ಆಸ್ಪತ್ರೆಯ ವೈದ್ಯರು ಇಲ್ಲಿ ಯಾವುದೇ ಕೊರೊನಾ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುಳ್ಳು 2: ಅಲ್‍ಜಜೀರಾ ವರದಿಗಾರ ಹಿಂದೂಗಳನ್ನು ಕೊಚ್ಚಿಹಾಕಬೇಕು ಎಂದು ಹೇಳಿದ್ದಾನೆ.

ದಿಲ್ವಾರ್ ಶೇಖ್ ಎನ್ನುವ ವ್ಯಕ್ತಿಯ ಟ್ವಿಟ್ಟರ್ ಖಾತೆಯಿಂದ ಹಿಂದೂಗಳನ್ನು ಕೊಚ್ಚಿಹಾಕುವ ಕೆಲಸ ನಡೆಯುತ್ತಿದೆ. ಆಗ ಮಾತ್ರ ಅವರು ಬುದ್ಧಿ ಕಲಿಯುತ್ತಾರೆ ಎಂದು ಸರಣಿ ಟ್ವೀಟ್‍ಗಳನ್ನು ಮಾಡಲಾಗಿದೆ. ಅಲ್ಲದೇ ಹಿಂದೂ ಧರ್ಮದ ವಿರುದ್ಧ ಪ್ರಚೋದನಾಕಾರಿಯಾಗಿ ಹಲವು ಟ್ವೀಟ್‍ಗಳನ್ನು ಮಾಡಲಾಗಿದೆ.

ಆ ಖಾತೆಯ ಬಯೋನಲ್ಲಿ ಅಲ್‍ಜಜೀರಾ ಮತ್ತು ದಿ ವೈರ್ ವರದಿಗಾರ ಎಂದು ಬರೆಯಲಾಗಿದೆ. ಹಾಗಾಗಿ ಬಲಪಂಥೀಯ ಸಂಘಟನೆಗಳು ಮತ್ತು ವ್ಯಕ್ತಿಗಳು ಟ್ವಿಟ್ಟರ್‍ನಲ್ಲಿ ಅಲ್‍ಜಜೀರಾ ಮತ್ತು ದಿ ವೈರ್ ಮಾಧ್ಯಮಗಳ ಮೇಲೆ ಮುಗಿಬೀಳಲಾಗಿದೆ.

ಸತ್ಯ: ಆದರೆ ದಿಲ್ವಾರ್ ಶೇಖ್ ಎನ್ನುವ ಖಾತೆಯೇ ನಕಲಿ ಖಾತೆಯಾಗಿದೆ. ಅಲ್ಲದೇ ಅಲ್‍ಜಜೀರಾ ಮತ್ತು ದಿ ವೈರ್ ಮಾಧ್ಯಮಗಳಲ್ಲಿ ಅಂತಹ ಯಾವುದೇ ವ್ಯಕ್ತಿ ನಮ್ಮಲ್ಲಿ ಕೆಲಸದಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸುಳ್ಳು 3: ಪ್ರಿಯಾಂಕ ಗಾಂಧಿಗೆ ಯೆಸ್ ಬ್ಯಾಂಕ್‍ನ ರಾಣಾ ಕಪೂರ್ ಎರಡು ಕೋಟಿ ಕೊಟ್ಟು ಪಡೆದಿದ್ದು ಕತ್ತೆ ಫೋಟೊ ಇರುವ ಪೇಂಟಿಂಗ್..

ದಿವಾಳಿಯಾಗಿರುವ ಯೆಸ್ ಬ್ಯಾಂಕ್ ಸುತ್ತಾ ನೂರಾರು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿ ಪ್ರಿಯಾಂಕ ಗಾಂಧಿಗೆ ಯೆಸ್ ಬ್ಯಾಂಕ್‍ನ ರಾಣಾ ಕಪೂರ್ ಎರಡು ಕೋಟಿ ಕೊಟ್ಟು ಪಡೆದಿದ್ದು ಕತ್ತೆ ಫೋಟೊ ಇರುವ ಪೇಂಟಿಂಗ್ ಎಂದು ಸುದ್ದಿ ಹಬ್ಬಿಸಲಾಗಿದೆ. ಆದರೆ ಇದು ಅಪ್ಪಟ ಸುಳ್ಳು ಸುದ್ದಿಯಾಗಿದೆ.

ಸತ್ಯ: ರಾಜೀವ್ ಗಾಂಧಿಯವರ ಚಿತ್ರವಿರುವ ಪೇಂಟಿಂಗ್ ಅನ್ನು ಪ್ರಿಯಾಂಕ ಗಾಂಧಿ ರಾಣಾ ಕಪೂರ್‌ಗೆ ಮಾರಾಟ ಮಾಡಿದ್ದರು. ಕಿಡಿಗೇಡಿಗಳು ಕತ್ತೆ ಫೋಟೊ ಇರುವ ಪೇಂಟಿಂಗ್ ಎಂದು ಸುಳ್ಳು ಹಬ್ಬಿಸಿದ್ದಾರೆ.

ನಿಜವಾದ ಫೋಟೊ ಇಲ್ಲಿದೆ ನೋಡಿ

ಸುಳ್ಳು 4: ಯೆಸ್ ಬ್ಯಾಂಕ್ ಮುಳುಗಲು ಮನಮೋಹನ್ ಸಿಂಗ್, ಚಿದಂಬರಂ ಕಾರಣ..

ಯೆಸ್ ಬ್ಯಾಂಕ್ 2004ರಲ್ಲಿ ಸ್ಥಾಪನೆಯಾಯಿತು. ಆಗ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಯುಪಿಎ ಎರಡನೇ ಅವಧಿಗೆ ಪಿ ಚಿದಂಬರಂ ಹಣಕಾಸು ಸಚಿವರಾಗಿದ್ದರು. ಪಿ ಚಿದಂಬರಂ ಯೆಸ್ ಬ್ಯಾಂಕ್‍ನ ಸ್ಥಾಪಕ ರಾಣಾ ಕಪೂರ್ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಹಾಗಾಗಿ ಇಂದು ಯೆಸ್ ಬ್ಯಾಂಕ್ ಮುಳುಗಿಹೋಗಲು ಇವರಿಬ್ಬರೂ ಕಾರಣ ಎಂದು ಫೇಕ್ ಸುದ್ದಿ ಹರಡುವ ಪೋಸ್ಟ್‍ಕಾರ್ಡ್ ಕನ್ನಡ ಹೇಳಿದೆ.

ಸತ್ಯ: ಮೋದಿ ಅಧಿಕಾರಕ್ಕೆ ಬರುವವರೆಗೂ ಅಂದರೆ 2014ರವರೆಗೆ ಯೆಸ್ ಬ್ಯಾಂಕ್ ಸುಸ್ಥಿತಿಯಲ್ಲಿತ್ತು. ಆದರೆ ಮೋದಿ ಬಂದನಂತರ ಅವರ ಸ್ನೇಹಿತರಾದ ಮುಖೇಶ್ ಅಂಬಾನಿ, ಅದಾನಿ ಮತ್ತು ವೇದಾಂತ ಕಂಪನಿಗೆ ಇದೇ ಯೆಸ್ ಬ್ಯಾಂಕ್ ಸಾವಿರಾರು ಕೋಟಿ ರೂಗಳನ್ನು ಸಾಲ ನೀಡಿದೆ. 2014: 55,000 ಕೋಟಿ ಸಾಲ ನೀಡಿದ್ದ ಬ್ಯಾಂಕ್ 2019ರಷ್ಟರಲ್ಲಿ 2,41,000 ಕೋಟಿಗೆ ತಲುಪಿದೆ. ಆ ರೀತಿ ಸಾಲ ಪಡೆದವರೆಲ್ಲಾ ಬೇಕಂತಲೇ ಸಾಲವನ್ನು ವಾಪಸ್ ಮಾಡಿಲ್ಲ. ಸಾಲ ಕಟ್ಟದವರು ಮೋದಿಯ ಪರಮಾಪ್ತರು ಎಂಬುದನ್ನು ಮರೆಯಬಾರದು. ಹಾಗಾಗಿ ಯೆಸ್ ಬ್ಯಾಂಕ್ ದಿವಾಳಿಯಾಗಿದೆ.

ಸುಳ್ಳು 5: ಉತ್ತರ ಪ್ರದೇಶದ ಸಾಮಾಜಿಕ ಕಾರ್ಯಕರ್ತೆ ಸದಾಫ್ ಜಫರ್ ಮನೆ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ.

ಪೋಸ್ಟ್ ಕಾರ್ಡ್ ಕನ್ನಡ ಈ ರೀತಿಯ ಸುಳ್ಳನ್ನು ಹರಡಿದೆ. ಯೋಗಿ ಸರ್ಕಾರ ಸಿಎಎ ವಿರುದ್ಧದ ರ್ಯಾಲಿಯಲ್ಲಿ ಗಲಭೆಯೆಬ್ಬಿಸಿದವರು ಎಂದು ಕೆಲವರನ್ನು ಟಾರ್ಗೆಟ್ ಮಾಡಿ ಬಹಿರಂಗ ಸ್ಥಳಗಳಲ್ಲಿ ಅವರ ಫೋಟೊ ಮತ್ತು ವಿಳಾಸವಿರುವ ಹೋರ್ಡಿಂಗ್‍ಗಳನ್ನು ಹಾಕಿತ್ತು.

ಸತ್ಯ: ಇದನ್ನು ಗಮನಿಸಿದ ಅಲಹಾಬಾದ್ ಹೈಕೋರ್ಟ್ ಭಾನುವಾರವೇ ವಿಶೇಷ ವಿಚಾರಣೆ ನಡೆಸಿ ಯೋಗಿ ಸರ್ಕಾರಕ್ಕೆ ತಪರಾಕಿ ಹಾಕಿದೆ. ಕೂಡಲೇ ಹೋರ್ಡಿಂಗ್‍ಗಳನ್ನು ತೆಗೆದುಹಾಕುವಂತೆ ತಾಕೀತು ಮಾಡಿದೆ. ಯೋಗಿ ಸರ್ಕಾರ ಹೋರ್ಡಿಂಗ್‍ಗಳನ್ನು ತೆಗೆದುಹಾಕಿ ಮುಖಭಂಗ ಅನುಭವಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...