Homeಅಂಕಣಗಳುಟ್ರಂಪ್ ಇರಾನ್ ಮೇಲೆ ಬಿದ್ರೆ, ಮೋದಿ ನಮ್ಮ ಮೇಲೆ ಬಿದ್ದವುನೆ

ಟ್ರಂಪ್ ಇರಾನ್ ಮೇಲೆ ಬಿದ್ರೆ, ಮೋದಿ ನಮ್ಮ ಮೇಲೆ ಬಿದ್ದವುನೆ

- Advertisement -
- Advertisement -

ಈ ಶತಮಾನದ ರಾಜಕೀಯ ದ್ರೋಹ ಯಾವುದೆಂದರೆ ಸಭ್ಯ ರಾಜಕಾರಣಿಗಳು ಕೊಡುವ ಉತ್ತರ ಎಸ್ಸೆಂ ಕೃಷ್ಣರ ಪಕ್ಷಾಂತರವಂತಲ್ಲಾ. ಹಾಗಾದರೆ ಕೃಷ್ಣ ಅಂತಹ ದ್ರೋಹ ಮಾಡಿದ್ದಾರೆ ಎಂದರೆ ಅನಿವಾರ್ಯವಾಗಿ ಹೌದು ಎನ್ನಬೇಕಾಗುತ್ತದೆ. ಏಕೆಂದರೆ ಅವರ ರಾಜಕೀಯ ಜೀವನದ ಆರು ದಶಕದಲ್ಲಿ ಪ್ರಧಾನಿ ಸ್ಥಾನ ಬಿಟ್ಟು ಇನ್ನೆಲ್ಲವನ್ನು ಅನುಭವಿಸಿದ್ದು ಕಾಂಗ್ರೆಸ್ಸಿನಲ್ಲಿ. ಆದರೆ ಆ ಪಾರ್ಟಿಯ ಕಷ್ಟಕಾಲದಲ್ಲಿ ತಮ್ಮ ಕಡೆಗಾಲದಲ್ಲಿ, ಭಾರತದ ಸರ್ವನಾಶಕ್ಕೆ ಪಣತೊಟ್ಟಂತಿರುವ ಬಿಜೆಪಿಗೆ ಹೋಗಿ ಕುಳಿತು ಕಾಲ ಹಾಕುತ್ತಿರುವುದು ಅಕ್ಷಮ್ಯ ಅಪರಾಧ. ಅಷ್ಟಕ್ಕೂ ಬಿಜೆಪಿಗೆ ಹೋಗಿ ಕಾಲಹಾಕುವಂತಹ ಕೇಡುಗಾಲ ಕೃಷ್ಣರಿಗೇಕೆ ಬಂತು ಎಂಬುದು ನಿಗೂಢವಾಗುಳಿದಿದೆ. ಮಂಡ್ಯ ಹೈದರ ಪ್ರಕಾರ ಗಳಿಸಿದ್ದನ್ನು ದಕ್ಕಿಸಿಕೊಂಡು ಅಳಿಯನನ್ನು ಉಳಿಸಿಕೊಳ್ಳಲು ಬಿಜೆಪಿಗೆ ಹೋದರಂತೆ. ಆ ಬಿಜೆಪಿಯವರೊ ವೃದ್ಧರಿಗೆ ಗೌರವ ಕೊಡುವುದಿಲ್ಲವಂತೆ. ಆದರೂ ಕೃಷ್ಣ ಆಗಾಗ್ಗೆ ಸದ್ದು ಮಾಡುತ್ತ ಏನೇನೂ ಹೇಳುತ್ತ ಕಡೆಗೆ ತಾನೇನು ಮಹಾ ಪಕ್ಷಾಂತರ ಮಾಡಿಲ್ಲ, ಅಂತಹ ದೇವೇಗೌಡರೇ 80ರ ದಶಕದಲ್ಲಿ ಜನತಾದಳ ತೊರೆದು ಕಾಂಗ್ರೆಸ್ ಸೇರಲು ಬಂದಿದ್ದರು ಎಂದು ದಾಖಲಿಸಿದ್ದಾರಲ್ಲಾ ಥೂತ್ತೇರಿ.

ಹಲವು ಸಂಪುಟಗಳಲ್ಲಿ ತಮ್ಮ ರಾಜಕೀಯ ಜೀವನವನ್ನು ದಾಖಲಿಸಿರುವ ಕೃಷ್ಣ ಯಾರ ಮನಸ್ಸನ್ನು ನೋಯಿಸದ ವ್ಯಕ್ತಿಯಂತಲ್ಲಾ. ಆದ್ದರಿಂದ ರಾಜಕಾರಣದಲ್ಲಿನ ಕೆಲ ಗುಟ್ಟುಗಳನ್ನು ದಾಖಲಿಸುವುದರಲ್ಲಿ ಪ್ರಾಮಾಣಿಕತೆ ಕೊರತೆಯಿದೆ ಎಂಬುದು ದೇವೇಗೌಡರ ವಿಷಯದಲ್ಲಿ ಸಾಬೀತಾಗಿದೆ. ಮಾನ್ಯ ದೇವೇಗೌಡರು ಜನತಾದಳ ಬಿಟ್ಟು ಕಾಂಗ್ರೆಸ್ ಸೇರಲು ಬಂದಿದ್ದು ಎಂಬತ್ತರಲ್ಲಲ್ಲ. 1977ರಂದು ದೇಶದ ಮೇಲೆ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದಾಗ ಯಾಕೋ ಜನತಾ ಪಕ್ಷ ನಿರ್ನಾಮವಾಗುತ್ತದೆಂದು ಭಾವಿಸಿ ಕಾಂಗ್ರೆಸ್ ಸೇರಿಬಿಡಲು ತೀರ್ಮಾನಿಸಿದ್ದರು. ವಿರೋಧ ಪಕ್ಷದ ತಮ್ಮ ಸ್ಥಾನವನ್ನು ಹೆಚ್.ಟಿ.ಕೃಷ್ಣಪ್ಪನವರಿಗೆ ವಹಿಸಿ ಜೈಲಿಂದ ಬಂದಕೂಡಲೇ ಕಾಂಗ್ರೆಸ್ ಸೇರೋಣ ಎಂದು ಇಬ್ರಾಹಿಂ ಸಮ್ಮುಖದಲ್ಲಿ ಹೇಳಿದ್ದವರು. ಜೈಲಿನಿಂದ ಬಂದನಂತರ ಮನಸ್ಸು ಬದಲಿಸಿದ್ದರು. ಆಗ ಪ್ರಾಮಾಣಿಕ ರಾಜಕಾರಣದ ದೆಸೆಯಿಂದ ಕಷ್ಟದಲ್ಲಿದ್ದ ಗೌಡರು ಗುಂಡೂರಾಯನ ಓಲೈಕೆಯಿಂದ ಚೇತರಿಸಿಕೊಂಡಿದ್ದರು. ಕಾಂಗೈ ಸೇರಲು ಹಾತೊರೆದ ಗೌಡರನ್ನ ಕಾಂಗ್ರೆಸ್ಸೇ ಪ್ರಧಾನಿ ಮಾಡಿತ್ತು. ಈಚೆಗೆ ಅವರ ಮಗನನ್ನ ಮುಖ್ಯಮಂತ್ರಿ ಮಾಡಿತ್ತಲ್ಲಾ ಥೂತ್ತೇರಿ.

ಕಾಂಗೈ ಸಪೋರ್ಟ್‍ನಿಂದ ಮಗ ಮುಖ್ಯಮಂತ್ರಿಯಾದ ಸಂದರ್ಭ ನೋಡಬೇಕಿತ್ತು. ಮಂಡ್ಯದ ಗೌಡರು ಸಾಲಸೂಲ ಮಾಡಿ ಮಗನ ಮದುವೆ ಮಾಡಿದಂತಿತ್ತು. ಅವರಿವರ ಸಹಾಯದಲ್ಲಿ ನಡೆಯುವ ಗೌಡರು, ಆ ದಿನ ಯಾರ ಸಹಾಯವೂ ಇಲ್ಲದೆ ಮದುವೆ ಮಂಟಪದಲ್ಲಿ ತುಟಿಬಿರಿದು ಅಡ್ಡಾಡುತ್ತಿದ್ದರು. ಅವರ ಮಗನ ಜೊತೆ ಹಸೆ ಏರಲು ಬಂದ ಕಾಂಗೈ ಹೆಣ್ಣು ಬಲಾಢ್ಯಳಾಗಿದ್ದಳು. ಸಾಕಷ್ಟು ಶ್ರೀಮಂತಿಕೆಯಿಂದಿದ್ದ ಆಕೆ ಕುಮಾರಣ್ಣನೊಡನೆ ದಾಂಪತ್ಯದಲ್ಲಿ ಇನ್ನಷ್ಟು ಬಲಾಢ್ಯಳಾಗುವ ಹವಣಿಕೆಯಲ್ಲಿದ್ದಳು. ಅವಳಪ್ಪ ಯಾಕೋ ಡಲ್ಲಾಗಿ ಎಲ್ಲೂ ಕಾಣಿಸಿಕೊಳ್ಳದೆ ಮೂಲೆಯಲ್ಲಿದ್ದ ಇತ್ತ ಭಾರತ ಕಂಡ ಅಪರೂಪದ ಈ ಮದುವೆಗೆ ಸೋನಿಯಾ, ರಾಹುಲ್, ಮಾಯಾವತಿ, ಮಮತಾ ಬ್ಯಾನರ್ಜಿ…., ಯಾದವ ಕುಲತಿಲಕರೆಲ್ಲಾ ನೆರೆದಿದ್ದರು. ಅದ್ದೂರಿ ಮದುವೆ ಜರುಗಿಹೋಯ್ತು. ಆದರೇನು ಕಾಂಗೈ ಕನ್ಯೆಯನ್ನ ನಿಭಾಯಿಸುವ ಶಕ್ತಿ ಗೌಡರ ಮಗನಿಗಿರಲಿಲ್ಲ. ಹಾಗೆ ನೋಡಿದರೆ ಅದು ಸರಿಯಾದ ಜೋಡಿಯಲ್ಲವೆಂದು ಜನರೇ ಹೇಳುತ್ತಿದ್ದರು. ನಿರೀಕ್ಷೆಯಂತೆ ಹದಿನಾಲ್ಕು ತಿಂಗಳಲ್ಲೇ ಡೈವೋರ್ಸು ನಡೆದುಹೋಯ್ತು. ಇದಕ್ಕೆ ಕಾರಣ ಮೋದಿ ಶಾ ಎಂಬ ಮನೆ ಮುರುಕರು. ಕಾಂಗೈ ಕನ್ಯೆಗೆ ಹೇಳಿದ್ದ ಚಾಡಿ ಮಾತುಗಳು ತಾವೇ ಮೇಲೆ ಬಿದ್ದು ಬಂದು ತಾವೇ ಡೈವೋರ್ಸ್ ಕೊಟ್ಟ ಕಾಂಗೈಯನ್ನ ಅಪ್ಪಮಕ್ಕಳು ಆಜನ್ಮವೈರಿಯಾಗಿ ಪರಿಗಣಿಸಿದ್ದಾರಂತಲ್ಲಾ ಥೂತ್ತೇರಿ.

ಬೆಂಗಳೂರಲ್ಲೊಂದು ಚಿತ್ರಕಲಾ ಸಂತೆ ಮೂಲೆಮೂಲೆಯಲ್ಲಿದ್ದ ಕುಂಚದ ಕಲಾವಿದರು. ತಾವು ರಚಿಸಿತಂದ ಕಲಾಕೃತಿಗಳನ್ನು ಗಾಂಧಿಭವನದ ಪಕ್ಕ ಹರಡಿಕೊಂಡು ನಿಂತಿದ್ದರು. ಸುಮಾರು ನಾಲ್ಕು ಲಕ್ಷ ಜನರು ವೀಕ್ಷಿಸಿದರು. ಈ ಚಿತ್ರಕಲಾ ಸಂತೆಯನ್ನು ಎಡೂರಪ್ಪ ರೈತರಿಗೆ ಅರ್ಪಿಸಿದರು. ಅಸಂಬದ್ಧ ಮತ್ತು ಅಧಿವೇಶನ ತೀರ್ಮಾನವೆಂದರೆ ಇದೆ. ಹಾಗೆ ನೋಡಿದರೆ ಬಿಜೆಪಿಗಳೇ ಅಸಂಬದ್ಧ ಚಿತ್ರಕಲೆಗೂ ರೈತರ ಬವಣೆಗೂ ಏನು ಸಂಬಂಧ ಕಳೆದ ಸರಕಾರ ರೈತರಿಗೆ ಕೊರೆಸಿಕೊಟ್ಟ ಬೋರ್‍ವೆಲ್‍ಗಳಿಗೆ ಪೈಪ್ ಕೊಡಲು ದುಡ್ಡಿಲ್ಲ ಎನ್ನುವ ಎಡೂರಪ್ಪ ಚಿತ್ರಕಲಾ ಸಂತೆಯನ್ನ ರೈತರಿಗೆ ಅರ್ಪಿಸಿದ್ದಾರೆ. ಈ ಅರ್ಪಣೆಯ ಹಿಂದೆ ಯಾವ ಘನ ಉದ್ದೇಶವೂ ಇಲ್ಲ. ರೈತರ ಕಣ್ಣಿಗೆ ಮಣ್ಣೆರಚಿ ಮುಂದೆ ಹೋಗುವುದಷ್ಟೇ ಕೆಲಸ. ಈ ಚಿತ್ರ ಸಂತೆಯಲ್ಲಿ ಯಾವನೋ ಚೆಡ್ಡಿಯೂ ಕಲಾವಿದನಾಗಿ ಮೋದಿ, ನಿರ್ಮಲಾ ಸೀತಾರಾಂ ಮತ್ತು ತೇಜಸ್ವಿ ಸೂರ್ಯನ ಚಿತ್ರಗಳನ್ನ ತಂದು ಮಡಗಿತ್ತು. ಚಿತ್ರಕಲೆಗೂ ಚೆಡ್ಡಿಗಳು ನುಗ್ಗಿದರೆ ಮುಂದೇನಾಗಬಹುದು ಎಂಬುದರ ಸೂಚನೆಯಿದು. ಜನ ಮಾತ್ರ ಚಿತ್ರಗಳ ತಂಟೆಗೆ ಹೋಗದೆ ಆಲೂಗಡ್ಡೆ ಚಿಪ್ಸು, ಪಾನಿ ಪೂರಿ, ಗೋಬಿ ಮಂಚೂರಿ, ಚುರುಮುರಿ ಕೊಂಡು ಹೇಗೆ ತಿನ್ನುತ್ತಿದ್ದರೆಂದರೆ ಅವನ್ನ ಕಂಡೇ ಇಲ್ಲವೇನೊ ಎನ್ನುವಂತೆ ಮುಕ್ಕುತ್ತಿದ್ದರಲ್ಲಾ ಥೂತ್ತೇರಿ.

ಜಗತ್ತಿನ ಸಮಸ್ಯೆಯಂತೆ ಒಡಮೂಡಿರುವ ಟ್ರಂಪ್ ಎಂಬ ಅಮೆರಿಕದ ಅಧ್ಯಕ್ಷ ಕಡೆಗೂ ಒಂದು ಅನಾಹುತವನ್ನು ಮಾಡೇಬಿಟ್ಟನಲ್ಲಾ. ಆತನೇನೂ ಇರಾನ್ ಸಾಬರ ಮೇಲೆ ಬಿದ್ದಿದ್ದಾನೆ. ಆದರೆ ಭಾರತದ ಟ್ರಂಪು ಭಾರತೀಯರ ಮೇಲೆ ಬಿದ್ದುಬಿಟ್ಟಿದ್ದಾನಲ್ಲಾ ಇದಕ್ಕೇನು ಹೇಳುವುದು. ಹಾಗೆ ನೋಡಿದರೆ ಬುದ್ಧಿಮಾಂದ್ಯ ಮೂರ್ಖರು ಏನಾದರೂ ಅನಾಹುತ ಮಾಡಿಯೇ ಮಾಡುತ್ತಾರೆ. ಎಂಬುದಕ್ಕೆ ಈ ಟ್ರಂಪ್‍ದ್ವಯರು ಭಯಂಕರ ಉದಾಹರಣೆ ಇರಾನ್‍ನ ಖಾಸಿಂ ಸುಲೇಮಾನ್ ಮೇಲೆ ದಾಳಿಮಾಡಿ ಸಾಯಿಸಿದ ಟ್ರಂಪ್ ಈ ಕೃತ್ಯಕ್ಕೆ ಭಾರತವನ್ನ ಎಳೆಯಲು ಆತ ಡೆಲ್ಲಿ ಉಡಾಯಿಸಲು ಸ್ಕೆಚ್ ಹಾಕಿದ್ದ. ಬ್ಲೂ ಪ್ರಿಂಟ್ ನನ್ನ ಬಳಿ ಇದೆ ಎಂದಿದ್ದಾನೆ. ಇತ್ತ ಅಧಿಕಾರಕ್ಕೆ ಬಂದಾಗಿನಿಂದಲೂ ಮೋದಿ ಮಾಡುತ್ತಿರುವುದು ಇಂತ ಅನಾಹುತಗಳನ್ನೆ. ಗುಜರಾತ್ ಚುನಾವಣೆಯಲ್ಲಿ ನಮ್ಮನ್ನ ಸೋಲಿಸಲು ಪಾಕಿಸ್ತಾನದಲ್ಲಿ ಸಂಚು ನಡೆದಿದೆ ಎನ್ನುತ್ತಾನೆ. ಅದಷ್ಟೇ ಅಲ್ಲ, ಸಂಸತ್ತಿನಲ್ಲಾಡುವ ಮಾತನ್ನ ಬೀದಿಯಲ್ಲಾಡುತ್ತಾನೆ. ಬೀದಿ ಮಾತನ್ನ ಸಂಸತ್ತಿನಲ್ಲಾಡುತ್ತಾನೆ. ಕರ್ನಾಟಕದಲ್ಲಾಡುವ ಮಾತನ್ನ ಜಾರ್ಖಂಡ್‍ನಲ್ಲಿ, ಡೆಲ್ಲಿಯಲ್ಲಾಡುವ ಮಾತನ್ನ ನ್ಯೂಯಾರ್ಕಿನಲ್ಲಿ ಹೀಗೆ ಎಲ್ಲೆಂದರಲ್ಲಿ ಬಾಯಿಗೆ ಬಂದದ್ದು ವದರುವ ಮೋದಿ, ಸಿದ್ದಗಂಗೆಯ ಎಳೆ ಮಕ್ಕಳ ಎದುರು ಪಾಕಿಸ್ತಾನದ ವಿಷಯ ಹೇಳಿ ಮುಗ್ಧ ಮಕ್ಕಳೇ ದಂಗಾಗುವಂತೆ ಮಾಡಿದ್ದಾನಲ್ಲಾ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...