Homeಎಕಾನಮಿಒಕ್ಕೂಟ ಬಜೆಟ್ 2023-24: ‘ಕಡಿತ-ಬಡಿತ’ಗಳ ಬಜೆಟ್ - ಟಿ. ಆರ್. ಚಂದ್ರಶೇಖರ

ಒಕ್ಕೂಟ ಬಜೆಟ್ 2023-24: ‘ಕಡಿತ-ಬಡಿತ’ಗಳ ಬಜೆಟ್ – ಟಿ. ಆರ್. ಚಂದ್ರಶೇಖರ

ಗ್ರಾಮೀಣ ಬಡವರ ಪಾಲಿನ ಅಮೃತವಾಗಿರುವ ಮನ್‌ರೇಗಾಕ್ಕೆ 2021-22ರಲ್ಲಿ ಇದ್ದ ಅನುದಾನ ರೂ.98,467 ಕೋಟಿ ಈಗ 2023-24ರಲ್ಲಿ ರೂ. 60,000 ಕೋಟಿಗೆ ತಗ್ಗಿಸಲಾಗಿದೆ.

- Advertisement -
- Advertisement -

ನಮ್ಮ ವಿತ್ತ ಮಂತ್ರಿ ರೂ.45.03 ಲಕ್ಷ ಕೋಟಿಯ 2023-24ನೆಯ ಸಾಲಿನ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ವೆಚ್ಚಗಳನ್ನು ಕಡಿತ ಮಾಡಲಾಗಿದೆ. ಕಾರ್ಪೋರೇಟ್ ತೆರಿಗೆ ಭಾರ ಕಡಿಮೆಯಾಗುತ್ತಿರುವುದರಿಂದ ಉಳ್ಳವರ ಹಿತಾಸಕ್ತಿಯ ರಕ್ಷಣೆಯಾಗಿದೆ. ಅಪ್ರತ್ಯಕ್ಷ ತೆರಿಗೆ ಜಿಎಸ್‌ಟಿ ಭಾರ ಅಧಿಕವಾಗುತ್ತಿರುವುರಿಂದ ಉಳಿದವರ ಬಾಳು ಗೋಳಾಗುತ್ತಿದೆ.

ರಸಗೊಬ್ಬರ ಮತ್ತು ಆಹಾರ ಸಬ್ಸಿಡಿಯು 2022-23ನೆಯ ಸಾಲಿನಲ್ಲಿ ರೂ.5.12 ಲಕ್ಷ ಕೋಟಿಯಿತ್ತು. ಇದನ್ನು 2023-24ನೆಯ ಸಾಲಿನಲ್ಲಿ ರೂ.3.72 ಲಕ್ಷ ಕೋಟಿಗಿಳಿಸಲಾಗಿದೆ (- ಶೇ.27.34). ಭಾರತೀಯ ಆಹಾರ ಕಾರ್ಪೋರೇಶನ್ನಿಗೆ ನೀಡುತ್ತಿದ್ದ ಸಬ್ಸಿಡಿಯನ್ನು 2022-23ನೆಯ ಸಾಲಿನ ರೂ.2.86 ಲಕ್ಷ ಕೋಟಿಯಿಂದ 23-24ನೆಯ ಸಾಲಿನಲ್ಲಿ ರೂ.1.96 ಲಕ್ಷ ಕೋಟಿಗಿಳಿಸಲಾಗಿದೆ (- ಶೇ.31.47) ಪ್ರಧಾನಮಂತ್ರಿ ಕಿಸಾನ್ ಸಿಂಚನ ನಿಧಿಗೆ 2021-22ರಲ್ಲಿ ರೂ. 66825 ಕೋಟಿ ಅನುದಾನವಿತ್ತು. ಈ ವರ್ಷ ಇದನ್ನು ರೂ.60000 ಕೋಟಿಗೆ ಇಳಿಸಲಾಗಿದೆ.

ತೆರಿಗೆ ಬಾರ ಉಳ್ಳವರಿಗೆ ಕಡಿಮೆಯಾಗುತ್ತಿದ್ದರೆ ಉಳಿದವರಿಗೆ ಅಧಿಕವಾಗುತ್ತಿದೆ

ಕಾರ್ಪೋರೇಟ್ ತೆರಿಗೆಯು 2021-22 ಮತ್ತು 2022-23ರ ನಡುವೆ ಜಿಡಿಪಿಯ ಶೇ. 3.06 ರಷ್ಟಿದ್ದುದು 2023-24ರಲ್ಲಿಯೂ ಸ್ಥಿರವಾಗಿದೆ. ಆದರೆ ಜಿಎಸ್‌ಟಿಯು 2021-22ರಲ್ಲಿ ಜಿಡಿಪಿಯ ಶೇ. 3.00ರಷ್ಟಿದ್ದುದು 2022-23ರಲ್ಲಿ ಜಿಡಿಪಿಯ ಶೇ. 3.12 ರಷ್ಟಾಗಿತ್ತು. ಮತ್ತೆ 2023-24ರಲ್ಲಿ ಇದು ಜಿಡಿಪಿಯ ಶೇ. 3.16ರಷ್ಟಾಗಿದೆ. ಕಾರ್ಪೋರೇಟ್ ತೆರಿಗೆ ರಾಶಿಯ ಬೆಳವಣಿಗೆ 2021-24ರ ನಡುವೆ ಶೇ.29.49 ರಷ್ಟಿದ್ದರೆ ಜಿಎಸ್‌ಟಿಯ ಬೆಳವಣಿಗೆಯು ಇದೇ ಅವಧಿಯಲ್ಲಿ ಶೇ.36.96 ರಷ್ಟಾಗಿದೆ.

ನರೇಗಾಕ್ಕೆ ಅನುದಾನ ಕಡಿತ

ಗ್ರಾಮೀಣ ಬಡವರ ಪಾಲಿನ ಅಮೃತವಾಗಿರುವ ಮನ್‌ರೇಗಾಕ್ಕೆ 2021-22ರಲ್ಲಿ ಅನುದಾನ ರೂ.98467 ಕೋಟಿಯಿದ್ದುದನ್ನು 2022-23ರಲ್ಲಿ ರೂ. 89400 ಕೋಟಿಗೆ ಮತ್ತು 2023-24ರಲ್ಲಿ ರೂ. 60000 ಕೋಟಿಗೆ ತಗ್ಗಿಸಲಾಗಿದೆ.

ಬಜೆಟ್ ಗಾತ್ರ

ಬಜೆಟ್ಟಿನ ಒಟ್ಟು ಗಾತ್ರವು 2021-22ರಲ್ಲಿ ಜಿಡಿಪಿಯ (ರೂ.232.14 ಲಕ್ಷ ಕೋಟಿ) ಶೇ.16.33 ರಷ್ಟಿತ್ತು. ಇದು 2022-23ರಲ್ಲಿ ಜಿಡಿಪಿಯ(ರೂ.273.07 ಲಕ್ಷ ಕೋಟಿ) ಶೇ.15.33 ಕ್ಕಿಳಿದು ಮತ್ತು 2023-24ರಲ್ಲಿ ಜಿಡಿಪಿಯ(ರೂ.301.75 ಲಕ್ಷ ಕೋಟಿ) ಶೇ.14.18ಕ್ಕಿಳಿದಿದೆ.

ಸಾಲದ ಮೇಲಿನ ಬಡ್ಡಿಯಲ್ಲಿ ಹೆಚ್ಚಳ

ಆರ್ಥಿಕತೆಯ ಸಾಲದ ಮೇಲಿನ ವಾರ್ಷಿಕ ಬಡ್ಡಿ ಪಾವತಿಯು ಒಕ್ಕೂಟದ 2021-22ನೆಯ ಸಾಲಿನ ಒಟ್ಟು ತೆರಿಗೆ ರಾಶಿಯಲ್ಲಿ(ರೂ. 21.69 ಲಕ್ಷ ಕೋಟಿ) ಶೇ.37.11 ರಷ್ಟಿದ್ದುದು 2023-24 ರಲ್ಲಿ ತೆರಿಗೆ ರಾಶಿಯ(ರೂ.26.32 ಲಕ್ಷ ಕೋಟಿ)ಯ ಶೇ.40.99ರಷ್ಟಾಗಿದೆ. ಆದ್ದರಿಂದ 2023-24ರ ಬಜೆಟ್ಟು ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳೆಯರ ಪಾಲಿಗೆ ‘ಕಡಿತ-ಬಡಿತ’ಗಳ ಬಜೆಟ್ಟಾಗಿದೆ.

  • ಟಿ. ಆರ್. ಚಂದ್ರಶೇಖರ

(ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ – ಸಂಸ್ಕೃತಿಗಳ ಬಗ್ಗೆಯೂ ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸುವ ಪ್ರೊ. ಟಿ.ಆರ್.ಸಿ ಅವರು ಇತ್ತೀಚೆಗೆ ‘ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ – ಒಂದು ಅಧ್ಯಯನ’ ಎಂಬ ಪುಸ್ತಕವನ್ನು ರಚಿಸಿದ್ದಾರೆ.)

ಇದನ್ನೂ ಓದಿ: ಇದೊಂದು ಕಾರ್ಪೊರೇಟ್‌ ಪರ ಬಜೆಟ್‌: ಆರ್ಥಿಕ ವಿಶ್ಲೇಷಕರು ಹೇಳುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...

EFLU ವಿದ್ಯಾರ್ಥಿ ಸಂಘದ ಮುಖಂಡರು, NSUI ಸದಸ್ಯರ ಮೇಲೆ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ; ABVP ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ನ ಪ್ರತಿಷ್ಠಿತ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ (ಇಎಫ್‌ಎಲ್‌ಯು - EFLU) ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಸದಸ್ಯರ ಮೇಲೆ...

NALSAR ವಿವಾದ : ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ

ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್...

ವಿಮಲ್ ‘ಏಲೈಚಿ’ ಜಾಹೀರಾತು ವಿವಾದ: ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಶೋಕಾಸ್ ನೋಟಿಸ್

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರುಗಳು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ವಿಮಲ್ ಏಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಹನೂರು ಶೂಟೌಟ್ ಪ್ರಕರಣ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್​​​​ಐಆರ್ ದಾಖಲಾಗಿದೆ. ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಹನೂರು...