ತಾನು ದಾಖಲಿಸಿದ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ ಪೊಲೀಸರ ನಡೆಗೆ ಅಸಮಾಧಾನಗೊಂಡ ದಲಿತ ಸಮುದಾಯದ ಯುವಕನೊಬ್ಬ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಹೊರಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಉನ್ನಾವೊದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಚಂದ್ರ ಪಾಸಿ ಎಂಬ 28 ವರ್ಷದ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ. ಜಿಲ್ಲಾ ಆಸ್ಪತ್ರೆಯ ಗಂಭೀರ ಸುಟ್ಟಗಾಯಗಳ ವಿಭಾಗದಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
‘ಪೊಲೀಸರು ಆಸ್ಪತ್ರೆಯಲ್ಲಿರುವ ಆತನ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದ್ದು, ಚಂದ್ರ ಅವರಿಗೆ ಉತ್ತಮ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ’ ಎಂದು ಉನ್ನಾವೊ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ ಸಿಂಗ್ ಹೇಳಿದ್ದಾರೆ.
ಚಂದ್ರ ಪಾಸಿ ಅವರು ತಮ್ಮ ನೆರೆಹೊರೆಯವರ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಹಿಂಸಾಚಾರ, ದಾಳಿಗಳು, ಜಾತಿ ನಿಂದನೆಗಳ ಬಳಕೆಗೆ ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ಅಕ್ಟೋಬರ್ 18 ರಂದು ದೂರು ದಾಖಲಿಸಿದ್ದರು. ಅವರು ದೂರಿನಲ್ಲಿ ಮುನೀರ್, ಸಬೀರ್, ಅನೀಸ್, ಮುಮ್ತಾಜ್ ಮತ್ತು ಸಬಿಹಾ ಎಂಬುವವರ ಮೇಲೆ ದೂರು ನೀಡಿದ್ದರು ಎನ್ನಲಾಗಿದೆ.
UP के #उन्नाव में एक व्यक्ति ने SP ऑफिस के बाहर खुद को आग लगा ली
आरोप है कि पिछले दिनों जमीनी विवाद में उसके साथ मारपीट हुई, इसमें मुकदमा लिखा गया, फिर पुलिस ने कुछ लोगों के नाम मुकदमे से निकाल दिए
वो आरोपियों की गिरफ्तारी को लेकर यहां वहां भटकता रहा!आखिर में तंग आकर ये कदम उठाया pic.twitter.com/cARUc7klMb— भारत की बात (@bharatkeebat) December 27, 2023
‘ತನಿಖೆ ನಡೆಸಿದ ಸಂದರ್ಭದಲ್ಲಿ, ಎಫ್ಐಆರ್ನಲ್ಲಿ ಸೇರಿಸುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಬೆಂಬಲಿಸದ ಕಾರಣ ಇಬ್ಬರು ವ್ಯಕ್ತಿಗಳನ್ನು ಪ್ರಕರಣದಿಂದ ಕೈಬಿಡಲಾಗಿದೆ’ ಎಂದು ಪೊಲೀಸ್ ಅಧಿಕಾರಿ ದೀಪಕ್ ಸಿಂಗ್ ಹೇಳಿದ್ದಾರೆ.
ಪೊಲೀಸರ ಈ ನಿರ್ಧಾರವು ದೂರುದಾರ ಚಂದ್ರನನ್ನು ಕೆರಳಿಸಿತ್ತು. ನಂತರ, ಆತ ಕಂಬಳಿ ಸುತ್ತಿಕೊಂಡು ಎಸ್ಪಿ ಕಚೇರಿಗೆ ಬಂದಿದ್ದು, ಆತ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು, ಪೊಲೀಸರು ಸಾಕ್ಷ್ಯವನ್ನು ತಿರುಚುತ್ತಿದ್ದಾರೆ ಎಂದು ಕಿರುಚಿಕೊಂಡಿದ್ದಾನೆ.
ಘಟನೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಪೂರ್ವ ದುಬೆ ಮತ್ತು ಇತರ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ದೂರುದಾರರನ್ನು ಭೇಟಿ ಮಾಡಿದರು.
ಚಂದ್ರ ಬೆಂಕಿ ಹಚ್ಚಿಕೊಂಡ ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ರಕ್ಷಿಸಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಯುವಕನ ಸ್ಥಿತಿ ಚಿಂತಾಜನಕವಾಗಿರುವುದರಿಂದ ಉತ್ತಮ ಚಿಕಿತ್ಸೆಗಾಗಿ ಲಕ್ನೋದ ಕೆಜಿಎಂಸಿಗೆ ಕಳುಹಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನ ಕುಟುಂಬಸ್ಥರು ಉನ್ನಾವೋ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
जमीनी विवाद में न्याय न मिलने से आहत युवक ने एसपी ऑफिस में खुद को आग लगा ली,पुलिस ने आनन फानन में युवक को बचाया, जमीनी विवाद में अधिकारियों की उदासीनता आधे विवादों की जड़ है।समय से निस्तारण कर बड़े विवादों को रोका जा सकता है लेकिन …#Unnao pic.twitter.com/oz0UbpNsmu
— Sumit Yadav | सुमित यादव 🇮🇳 (@sumitlive) December 27, 2023
ಭುಲೆ ಮಾವು ಗ್ರಾಮದ ನಿವಾಸಿ ಚಂದ್ರ ಪಾಸಿ ಅದೇ ಗ್ರಾಮದ ಕೆಲವರೊಂದಿಗೆ ಜಗಳವಾಡಿದ್ದನು. ಈ ಗಲಾಟೆಯನ್ನು ಮಾರಾಮಾರಿ ನಡೆದಿದ್ದು, ಪ್ರಕರಣ ಕೂಡ ದಾಖಲಾಗಿದೆ. ಘಟನೆ ಸಂಬಂಧ ಪೊಲೀಸರು ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತನ ಸಹೋದರ ಆರೋಪಿಸಿದ್ದು, ಪೊಲೀಸ್ ಅಧಿಕಾರಿ ಪೂರ್ವಾ ಅವರು ಬರೆದಿರುವ ಪ್ರಕರಣದಲ್ಲಿ ಮೂವರ ಹೆಸರನ್ನು ತೆಗೆದುಹಾಕಿದ್ದಾರೆ. ಅಧಿಕಾರಿಗಳು ಆರೋಪಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಬದಲಾಗಿ ನಮ್ಮ ಕುಟುಂಬದ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿ ಅವರನ್ನು ಬಂಧಿಸುತ್ತಿಲ್ಲ. ಹಲ್ಲೆ ಪ್ರಕರಣದಲ್ಲಿ ಪೊಲೀಸರು ಏಕಪಕ್ಷೀಯ ಕ್ರಮ ಕೈಗೊಂಡಿದ್ದಾರೆ. ಹಲವು ಬಾರಿ ಅರ್ಜಿ ಸಲ್ಲಿಸಿದರೂ ನ್ಯಾಯ ಸಿಗದಿದ್ದಾಗ ಬೇಸರಗೊಂಡ ಸಹೋದರ ಎಸ್ಪಿ ಕಚೇರಿಗೆ ಆಗಮಿಸಿ ಬೆಂಕಿ ಹಚ್ಚಿಕೊಂಡು ಬೆಂಕಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಂತ್ರಸ್ತನ ಕುಟುಂಬದವರು ಆರೋಪಿಸಿದ್ದಾರೆ.
ಇದನ್ನೂ ಓದಿ; ‘ರಾಜಕೀಯ ಪ್ರವೇಶಕ್ಕಾಗಿ ಕುಸ್ತಿ ತೊರೆದಿದ್ದಾರೆ’; ಅಥ್ಲೀಟ್ಗಳ ವಿರುದ್ಧ ಸಂಜಯ್ ಸಿಂಗ್ ಆರೋಪ