Homeಕರ್ನಾಟಕರಾಯಚೂರು ಮುಖ್ಯ ನ್ಯಾಯಾಧೀಶರ ಛೇಂಬರ್‌ನಲ್ಲಿ ನಡೆದದ್ದೇನು? ಒಂದು ಪ್ರತ್ಯಕ್ಷದರ್ಶಿ ವರದಿ

ರಾಯಚೂರು ಮುಖ್ಯ ನ್ಯಾಯಾಧೀಶರ ಛೇಂಬರ್‌ನಲ್ಲಿ ನಡೆದದ್ದೇನು? ಒಂದು ಪ್ರತ್ಯಕ್ಷದರ್ಶಿ ವರದಿ

ರಾಯಚೂರಿನ ವಕೀಲರಾದ ತಾಯಪ್ಪ ಭಂಡಾರಿಯವರ ಪ್ರತ್ಯಕ್ಷದರ್ಶಿ ಹೇಳಿಕೆಯನ್ನು ಆಧರಿಸಿ ದೇಮರವರ ನಿರೂಪಣೆ.

- Advertisement -
- Advertisement -

ರಾಯಚೂರು ಮುಖ್ಯ ನ್ಯಾಯಾಧೀಶರ ಛೇಂಬರ್‌ನಲ್ಲಿ ನಡೆದದ್ದೇನು?
ಒಂದು ಪ್ರತ್ಯಕ್ಷದರ್ಶಿ ವರದಿ

ಬೆಳಿಗ್ಗೆ : 8:30
1) ಗಣರಾಜ್ಯೋತ್ಸವ ಆಚರಿಸಲು 2022 ಜನವರಿ 26ರಂದು ಕೋರ್ಟ್ ಬಿಲ್ಡಿಂಗ್‌ನಲ್ಲಿ ಎಸ್‌ಸಿ., ಎಸ್.ಟಿ., ಓ.ಬಿ.ಸಿ., ಪ್ರಗತಿಪರ ವಕೀಲರು ಗಾಂಧಿ ಜೊತೆ ಅಂಬೇಡ್ಕರ್ ಪೋಟೋ ಇಟ್ಟಿದ್ದರು.
2) ಸಿಬ್ಬಂದಿಯೊಬ್ಬರು ಅಂಬೇಡ್ಕರ್ ಫೋಟೋ ಇಟ್ಟಿರುವ ಬಗ್ಗೆ ಜಿಲ್ಲಾ ನ್ಯಾಯಾಧೀಶರಿಗೆ ಮಾಹಿತಿ ನೀಡುತ್ತಾರೆ.
3) ಜಿಲ್ಲಾ ನ್ಯಾಯಾಧೀಶರು, ಎಸ್‌ಸಿ., ಎಸ್.ಟಿ., ಓ.ಬಿ.ಸಿ., ಪ್ರಗತಿಪರ ವಕೀಲರನ್ನು ಛೇಂಬರ್‌ಗೆ ಕರೆಸುತ್ತಾರೆ. ಅಲ್ಲಿ ಇನ್ನಿತರ ನ್ಯಾಯಾಧೀಶರು ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಇದ್ದರು.

ಸಂಭಾಷಣೆ:
ಜಿಲ್ಲಾ ನ್ಯಾಯಾಧೀಶರು : ಯಾಕೆ ಅಂಬೇಡ್ಕರ್ ಫೋಟೋ ಇಟ್ಟಿರಿ. ಹೈಕೋರ್ಟ್‌ನಿಂದ ಇನ್ನೂ ಅನುಮತಿ ಸಿಕ್ಕಿಲ್ಲ.

ವಕೀಲರು : ಹಿಂದಿನ ವರ್ಷವೇ ಬೇರೆ ಜಿಲ್ಲಾ ನ್ಯಾಯಾಲಯದಲ್ಲಿ ಇಟ್ಟಿದ್ದಾರೆ, ನಾವು ಯಾಕೆ ಇಡಬಾರದು?

ಜಿಲ್ಲಾ ನ್ಯಾಯಾಧೀಶರು : ಇಲ್ಲ, ಇಡಕ್ಕೆ ಬರಲ್ಲ, ಹೈಕೋರ್ಟ್‌ನಿಂದ ನೋಟಿಫಿಕೇಷನ್ ಇಲ್ಲ.

ವಕೀಲರು : ಹಾಗಾದರೆ, ಕಳೆದ ವರ್ಷ ನಿಮ್ಮ ನೇತೃತ್ವದಲ್ಲೆ ದಸರಾ ಆಚರಿಸಿ, ಕೋರ್ಟ್ ಆವರಣದಲ್ಲಿ ಅಲಂಕರಿಸಿ ಗಣೇಶ, ಚಾಮುಂಡೇಶ್ವರಿ ಫೋಟೋ ಇಟ್ಟು ಪೂಜಾರಿ ಕರೆಸಿ ಪೂಜೆ ಮಾಡಿ ನೀವೇ ಪ್ರಸಾದ ಹಂಚಿದಿರಿ. ಇದಕ್ಕೆ ಹೈಕೋರ್ಟ್ ಅನುಮತಿ ನೀಡಿತ್ತೆ? ನಿರ್ದೇಶನ ಮಾಡಿತ್ತೆ?

ಜಿಲ್ಲಾ ನ್ಯಾಯಾಧೀಶರು : ಇಲ್ಲ.

ವಕೀಲರು : ಇದು ತಪ್ಪಲ್ಲವೆ?

ಜಿಲ್ಲಾ ನ್ಯಾಯಾಧೀಶರು : ಅದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ, ನಮ್ಮ ಸಂಸ್ಕೃತಿ.
ವಕೀಲರು : ನೀವು ತೀರ್ಪು ನೀಡುವುದು ಕಾನೂನು ಅಡಿಯಲ್ಲೊ ಅಥವಾ ಹಿಂದೂ ಸಂಸ್ಕೃತಿ, ಸಂಪ್ರದಾಯದ ಅಡಿಯಲ್ಲೊ?

ಜಿಲ್ಲಾ ನ್ಯಾಯಾಧೀಶರು : ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅಂಬೇಡ್ಕರ್ ಫೋಟೋ ಇಡಲು ಈಗ ಅನುಮತಿಸಿದರೂ, ಎರಡೂ ಫೋಟೋ ಇಟ್ಟು ಧ್ವಜ ಆರೋಹಣ ಮಾಡುತ್ತೇನೆ.
(ನ್ಯಾಯಾಧೀಶರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಫೋನ್ ಮಾಡಿಕೊಡುತ್ತಾರೆ. ಅವರೊಡನೆ ವಕೀಲರ ಮಾತುಕತೆ ನಡೆಯುತ್ತದೆ.)

ವಕೀಲರು : ಕಳೆದ ವರ್ಷವೇ ನಾವು ಅಂಬೇಡ್ಕರ್ ಫೋಟೋ ಇಡಲು ಅನುಮತಿಗೆ ಅರ್ಜಿ ಕೊಟ್ಟಿದ್ದೆವು. ತಮ್ಮಿಂದ ಇನ್ನೂ ನಿರ್ಧಾರ ಬಂದಿಲ್ಲ. ನಾವು ಈಗ ಗಣರಾಜ್ಯೋತ್ಸವದಲ್ಲಿ ಅಂಬೇಡ್ಕರ್ ಫೋಟೋ ಇಡಲು ಅನುಮತಿ ನೀಡಿ.

ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ : ನೋಟಿಫಿಕೇಷನ್ ಇಲ್ಲದೆ ಜಿಲ್ಲಾ ನ್ಯಾಯಾಧೀಶರು ಮಾಡಲು ಬರುವುದಿಲ್ಲ.

ವಕೀಲರು : ಕಳೆದ ನಮ್ಮ ಜಿಲ್ಲಾ ನ್ಯಾಯಾಧೀಶರು ಕೋರ್ಟ್ ಆವರಣವನ್ನು ಸಿಂಗರಿಸಿ ಗಣೇಶ, ಚಾಮುಂಡೇಶ್ವರಿ ಫೋಟೋ ಇಟ್ಟು ಪೂಜಾರಿ ಕರೆಸಿ ಪೂಜೆ ಮಾಡಿ ದಸರಾ ಹಬ್ಬ ಆಚರಿಸಿದರು. ಅವರೇ ಪ್ರಸಾದ ಹಂಚಿದರು. ಇದಕ್ಕೆ ನೀವೇನಾರು ಅನುಮತಿ ಕೊಟ್ಟಿದ್ದೀರಾ?

ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ : ಇಲ್ಲ.

ವಕೀಲರು : ಇದನ್ನು ನಮ್ಮ ರಾಯಚೂರು ಜಿಲ್ಲಾ ನ್ಯಾಯಾಧೀಶರು ಮಾಡಿದ್ದಕ್ಕೆ ಏನು Action ತೆಗೆದುಕೊಂಡಿರಿ?
(ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಿಂದ ಉತ್ತರ ಇಲ್ಲ. ಆಮೇಲೆ)

ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ : ಹೈಕೋರ್ಟ್‌ನ Full court ಮೀಟಿಂಗ್‌ನಲ್ಲಿ ಅಂಬೇಡ್ಕರ್ ಫೋಟೋ ಇಡುವ ಪ್ರಸ್ತಾಪವನ್ನು ಮುಂದಿಟ್ಟು ನಿರ್ಧರಿಸಬೇಕು. ಅದು ಪೆಂಡಿಂಗ್‌ನಲ್ಲಿದೆ.

ವಕೀಲರು : ನಾವು ಅರ್ಜಿಕೊಟ್ಟಾದ ಮೇಲೆ ಸುಮಾರು 20 ಫುಲ್‌ಕೋರ್ಟ್ ಮೀಟಿಂಗ್‌ಗಳು ನಡೆದಿವೆ. ನಮ್ಮ ಅಂಬೇಡ್ಕರ್ ಅರ್ಜಿಯನ್ನು ಫುಲ್‌ಕೋರ್ಟ್ ಮುಂದೆ ಇಡಬೇಕಾದವರು ನೀವು. ಸಂವಿಧಾನ ಶಿಲ್ಪಿಯ ಅರ್ಜಿಯನ್ನು ಯಾಕೆ ನೀವು ಇಷ್ಟು ದಿನಗಳಾದರೂ ಪರಿಗಣಿಸಿ ಫುಲ್‌ಕೋರ್ಟ್ ಮುಂದೆ ಇಡಲಿಲ್ಲ ಏಕೆ?

(ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಫೋನ್ ಕಟ್ ಮಾಡಿಬಿಟ್ಟರು. ಇದೆಲ್ಲಾ ಆಗುವವರೆಗೆ ಕಾಲ 9:30 ಆಗಿತ್ತು. 8:30ಕ್ಕೆನೇ ಧ್ವಜಾರೋಹಣ ಮಾಡಬೇಕಿತ್ತು. ಒಂದು ಗಂಟೆ ವಿಳಂಬವಾಗಿತ್ತು.)

ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರು : ‘ನಿಮ್ಮ ಕಾಲಿಗೆ ಮುಗಿತೀನಿ. ಅಂಬೇಡ್ಕರ್ ಫೋಟೋ ತೆಗೀರಿ’.

ಇದಾದ ಮೇಲೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು, ಛೇಂಬರ್‌ನಲ್ಲಿದ್ದ ಎಸ್‌ಸಿ., ಎಸ್.ಟಿ., ಓ.ಬಿ.ಸಿ., ಪ್ರಗತಿಪರ ವಕೀಲರಿಗೆ ‘ಜಿಲ್ಲಾ ಮುಖ್ಯ ನ್ಯಾಯಾಧೀಶರು ಇಷ್ಟೆಲ್ಲಾ ಹೀಗೆಲ್ಲಾ ಕೇಳಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ನೋಡಿಕೊಳ್ಳೋಣ. ಈಗ ಅಂಬೇಡ್ಕರ್ ಭಾವಚಿತ್ರ ತೆಗೆಯಲು ಸಮ್ಮತಿಸಿ’ ಎಂದು ವಿನಂತಿಸಿ ಸಮ್ಮತಿಸುವಂತೆ ಮಾಡುತ್ತಾರೆ. ಆಮೇಲೆ ಅಲ್ಲಿದ್ದ ವಕೀಲರೆಲ್ಲರೂ ಛೇಂಬರ್‌ನಿಂದ ಹೊರ ನಡೆಯುತ್ತಾರೆ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಪ್ರಾಂಗಣದಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಮೇಲೆ ಅಂಬೇಡ್ಕರ್ ಭಾವಚಿತ್ರವನ್ನು ಅಲ್ಲಿಂದ ತೆಗೆಯಲಾಗುತ್ತದೆ, ಆಕ್ರೋಶದ ನಡುವೆ. ಅಂಬೇಡ್ಕರ್ ಭಾವಚಿತ್ರ ತೆಗೆದ ನಂತರ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಛೇಂಬರ್‌ನಿಂದ ಹೊರಬಂದು ಧ್ವಜಾರೋಹಣ ಮಾಡುತ್ತಾರೆ! ಸ್ಥೂಲವಾಗಿ ಇದಿಷ್ಟು ನಡೆಯುತ್ತದೆ.

ನ್ಯಾಯವು ಕೇಳುತ್ತಿರುವುದೇನು?

(1) ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ತಕ್ಷಣವೇ ಗಣರಾಜ್ಯೋತ್ಸವ ದಿನದಂದು ಹಾಗೂ ನ್ಯಾಯಾಲಯಗಳ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಇಡುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತಾಗಲು – ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಫುಲ್‌ಕೋರ್ಟ್ ಮುಂದೆ ಪ್ರಸ್ತಾಪನೆ ಮಂಡಿಸುವಂತೆ ಆದೇಶಿಸಬೇಕು. (ಫೆಬ್ರವರಿ 04ರ ಸಂಜೆ ಹೈಕೋರ್ಟ್ ಈ ಕುರಿತು ಆದೇಶ ನೀಡಿದ್ದು, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಸಂವಿಧಾನ ದಿನ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳ ಅಧಿಕೃತ ಕಾರ್ಯಕ್ರಮಗಳನ್ನು ಅಂಬೇಡ್ಕರ್ ಫೋಟೊ ಇಡಬೇಕೆಂದು ನಿರ್ದೇಶನ ನೀಡಲಾಗಿದೆ)

(2) ಫುಲ್‌ಕೋರ್ಟ್ ಅಂಬೇಡ್ಕರ್ ಭಾವಚಿತ್ರ ಇಡಬೇಕೆಂದು ನಿರ್ಧರಿಸಿದರೆ ಮುಂದಾಗಬಹುದಾದ ವಿವಾದಗಳನ್ನು ತಪ್ಪಿಸಲೋಸುಗ – ಗಾಂಧೀ ಮತ್ತು ಅಂಬೇಡ್ಕರ್‌ರ ಭಾವಚಿತ್ರಗಳ ಅಳತೆಯನ್ನು ಸೂಚಿಸಬೇಕು.

(3) ಯಾವುದೇ ಧರ್ಮ, ಸಂಸ್ಕೃತಿ, ಆಚರಣೆ, ಪರಂಪರೆ, ರೂಢಿಗಳನ್ನು ಕೋರ್ಟ್ ಆವರಣದಲ್ಲಿ ಆಚರಿಸುವ ಬಗ್ಗೆ ಖಚಿತ ನಿಲುವನ್ನು ಫುಲ್‌ಕೋರ್ಟ್ ನಿರ್ದೇಶಿಸಬೇಕು. ನಿರ್ದೇಶನವನ್ನು ಉಲ್ಲಂಘಿಸಿದರೆ ತೆಗೆದುಕೊಳ್ಳುವ ಕ್ರಮವನ್ನೂ ಸ್ಪಷ್ಟಗೊಳಿಸಬೇಕು.

(4) ಕರ್ನಾಟಕ ರಾಜ್ಯದ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುವ ತೆರೆದ (Open) ಕೋರ್ಟ್ ಹಾಲ್‌ನಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಇಡುವುದರ ಬಗ್ಗೆ ಫುಲ್‌ಕೋರ್ಟ್ ನಿರ್ಧಾರ ತೆಗೆದುಕೊಳ್ಳಬೇಕು.

  • ಪ್ರತ್ಯಕ್ಷದರ್ಶಿ – ತಾಯಪ್ಪ ಭಂಡಾರಿ, ವಕೀಲರು, ರಾಯಚೂರು
  • ನಿರೂಪಣೆ – ದೇಮ

ಇದನ್ನೂ ಓದಿ: ನ್ಯಾಯಾಲಯಗಳ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್‌ ಚಿತ್ರ ಇರಿಸುವಂತೆ ಹೈಕೋರ್ಟ್‌ ಆದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....