Homeಮುಖಪುಟಕೃತಕ ಬುದ್ಧಿಮತ್ತೆ (AI) ಎತ್ತ ಸಾಗುತ್ತಿದೆ?

ಕೃತಕ ಬುದ್ಧಿಮತ್ತೆ (AI) ಎತ್ತ ಸಾಗುತ್ತಿದೆ?

- Advertisement -
- Advertisement -

ಜನಪ್ರಿಯ ಸೈ-ಫೈ ಕಾದಂಬರಿಕಾರ ಆರ್ಥರ್ ಸಿ ಕ್ಲಾರ್ಕ್ ಪ್ರಕಾರ ಅತ್ಯಂತ ಮುಂದುವರಿದ ತಂತ್ರಜ್ಞಾನಕ್ಕೂ ಜಾದೂವಿಗೂ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಅವನೇ ಹೇಳಿದ ಪ್ರಕಾರ ನಮ್ಮ ಈಗಿನ ಪೀಳಿಗೆ ಹೊಸ ಆಧುನಿಕ ನಾಗರಿಕತೆಗೆ ಕೇವಲ ಸೇತುವೆಯಷ್ಟೇ. ಇಂದು ಕೃತಕ ಬುದ್ಧಿಮತ್ತೆ (AI – Artificial Intelligence) ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವುದನ್ನು ಗಮನಿಸಿದರೆ ಇದಾಗಲೇ ವಾಸ್ತವಕ್ಕೆ ಇಳಿದಿರುವ ವಿಷಯವೆಂದು ತಿಳಿದುಬರುತ್ತದೆ. ಸಿಯಾಟೆಲ್ ನಗರದಲ್ಲಿ ಇರುವ ಡೆಲ್ಫಿ ಕಂಪ್ಯೂಟರ್ ಜೊತೆ ಸಂವಾದ ಮಾಡಿದಾಗ ಸಾಮಾನ್ಯ ಮನಸ್ಸಿಗೆ ಹೊಳೆಯದೇ ಇರುವ ಭೂತ-ಭವಿಷ್ಯಗಳನ್ನು ಅದು ಉದ್ಘರಿಸುತ್ತದೆ. ಹಿಂದೆ ಗ್ರೀಕ್ ದೇಶದ ದೇವಾಲಯ ಡೆಲ್ಫಿಗೆ ಹೋಗಿ ಮುಂದೇನಾಗಬಹುದೆಂಬ ದೇವವಾಣಿಯನ್ನು ಆಲಿಸುವ ಸಂಪ್ರದಾಯವಿತ್ತು ಎನ್ನುತ್ತಾರೆ. ಅಂದು ಜಗತ್ತಿನಲ್ಲಿ ಅತ್ಯಂತ ಬುದ್ಧಿವಂತ, ಪ್ರಜ್ಞಾವಂತ ಯಾರೆಂದು ಕೇಳಿದಾಗ ಅದೇ ಡೆಲ್ಫಿಯ ದೇವವಾಣಿ ಸಾಕ್ರೆಟಿಸ್‌ನ ಹೆಸರನ್ನು ಹೇಳಿತ್ತು ಎನ್ನುವ ಕತೆಯುಂಟು. ಹಾಗೆಯೇ “ಸಾಕ್ರೆಟಿಸ್ ಬುದ್ಧಿವಂತನೇಕೆಂದರೆ ಅವನೊಬ್ಬನಿಗೆ ತನಗೇನು ಗೊತ್ತಿಲ್ಲವೆಂಬುದು ಗೊತ್ತು, ಆ
ಕಾರಣಕ್ಕಾಗಿ” ಎಂದು ವಿವರಿಸಿತ್ತಂತೆ.

ಇಂದು ಕೃತಕ ಬುದ್ಧಿಮತ್ತೆಯು ನಮಗೇನು ತಿಳಿದಿಲ್ಲವೆಂಬುವುದನ್ನೂ ತಿಳಿದು ನಮಗೆ ತಿಳಿಸುವಷ್ಟರ ಮಟ್ಟಿಗೆ ಬೆಳೆದುನಿಂತಿದೆ. ಇದಾಗಲೇ ಈ ತಂತ್ರಜ್ಞಾನದ ಯಂತ್ರ ಕತೆ, ಕಾದಂಬರಿ, ಕವಿತೆಗಳನ್ನು ಕೂಡಾ ಸೃಷ್ಟಿಮಾಡಿದೆ. ಅರ್ಥಹೀನ ಶಬ್ದಗಳನ್ನು (Gibberish) ಸ್ವಲ್ಪ ಅರ್ಥೈಸಲು ಕಷ್ಟವಾಗುತ್ತಿದೆಯಂತೆ ಅಷ್ಟೇ. ಛಂದಸ್ಸು, ಅಲಂಕಾರಶಾಸ್ತ್ರ, ವ್ಯಾಕರಣಶಾಸ್ತ್ರ ಎಲ್ಲವನ್ನೂ ಆಂತರ್ಯಗೊಳಿಸಿಕೊಂಡು ಶತಾವಧಾನವನ್ನೂ ಮಾಡಬಹುದೆನ್ನುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಗ್ಯಾರಿ ಕ್ಯಾಸ್ಪರೋವ್‌ನನ್ನು ಚೆಸ್ ಆಟದಲ್ಲಿ ಸೋಲಿಸಿದ ಐಬಿಎಂನ ’ಡೀಪ್ ಬ್ಲೂ’ ಚೆಸ್ ಆಟದಲ್ಲಿ ಅಚ್ಚರಿಯ ಹೆಜ್ಜೆಯನ್ನು ಇಟ್ಟಿತ್ತು. ಕ್ಯಾಸ್ಪರೋವ್ ಹೇಳುವ ಪ್ರಕಾರ ಚದುರಂಗದ ಶತಮಾನದ ಬೇರನ್ನೇ ಈ ಕೃತಕ ಬುದ್ಧಿಮತ್ತೆ ಅಲುಗಾಡಿಸಿದೆ. ಎಂಐಟಿ ವಿಶ್ವವಿದ್ಯಾಲಯದ ಯಂತ್ರವೊಂದು ಯಾವ ಆಂಟಿಬಯಾಟಿಕ್‌ಗಳಿಗೂ ಒಗ್ಗದ ಹೊಸ ಆಂಟಿಬಯಾಟಿಕ್ ಒಂದನ್ನು ತಾನೇ ಕಂಡುಹಿಡಿಯಿತು. ಸುಮಾರು ಅರವತ್ತೊಂದು ಸಾವಿರ ವಿವಿಧ ರಾಸಾಯನಿಕ ವಸ್ತುಗಳನ್ನು ಜಾಲಾಡಿ ಒಂದು ಮಾಲಿಕ್ಯೂಲ್‌ಅನ್ನು ಹೆಕ್ಕಿ ತೆಗೆದು ಸೃಷ್ಟಿಸಿದ ಹ್ಯಾಲಿಸಿನ್ ಆಂಟಿಬಯಾಟಿಕ್ ಹಲವು ಸೋಂಕುರೋಗಗಳಿಗೂ ದಿವ್ಯೌಷಧವಾಗಿತ್ತು. ಹೊಸದಾಗಿ ಆಂಟಿಬಯಾಟಿಕ್‌ಗಳ ಹುಟ್ಟೇ ಇಲ್ಲ ಎನ್ನುವ ಕಾಲದಲ್ಲಿ, ಮನುಷ್ಯನ ಕೈಯಲ್ಲಿ ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ಯಂತ್ರವೊಂದು ಆಂಟಿಬಯಾಟಿಕ್ ಹುಟ್ಟುಹಾಕಿದೆ. ಕೇವಲ ನಮ್ಮ ಉಸಿರಿನಲ್ಲಿರುವ ಸುಮಾರು ಎಂಟುನೂರು ರಾಸಾಯನಿಕಗಳನ್ನು ವಿಶ್ಲೇಷಿಸಿ, ಹಿಂದೆ ಬಂದಿರುವ ಮತ್ತು ಮುಂದೆ ಬರಲಿರುವ ಕಾಯಿಲೆಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ.

ಇಂದು ಮನುಷ್ಯ ಮಾಡುತ್ತಿರುವ ಶೇಕಡಾ ಅರವತ್ತರಷ್ಟು ಕೆಲಸಗಳನ್ನು ಕೃತಕ ಬುದ್ಧಿಮತ್ತೆಯುಳ್ಳ ತಂತ್ರಜ್ಞಾನದ ಸಲಕರಣಿಗಳು ಇದಾಗಲೇ ಸಂಪೂರ್ಣ ಮಾನವರಹಿತವಾಗಿ ಮಾಡಬಹುದು ಎನ್ನುತ್ತಾರೆ. ವಾಹನಗಳ ಚಾಲನೆಯಿಂದ ಹಿಡಿದು, ವಿಮಾನ ಚಾಲನೆ, ಆಸ್ಪತ್ರೆಗಳಲ್ಲಿ ಸರ್ಜರಿ, ಕಾಯಿಲೆಗಳನ್ನು ಕಂಡುಹಿಡಿಯುವುದು, ಹೊಸ ಔಷಧಿಗಳನ್ನು ಸೃಷ್ಟಿಸುವುದು, ಮನುಷ್ಯನ ಅಂಗಾಂಗಗಳನ್ನು ಪ್ರಿಂಟ್ ಮಾಡುವುದು ಹೀಗೆ ಎಲ್ಲ ಕ್ಷೇತ್ರಗಳಿಗೂ ಇದು ಲಗ್ಗೆ ಇಟ್ಟಿದೆ.

ಹಿಂದೆ ಯಂತ್ರವೆಂದರೆ ಮನುಷ್ಯ ತುಂಬಿದ ಅಥವಾ ಕಲಿಸಿಕೊಟ್ಟ ಮಾಹಿತಿಯ ಆಧಾರದ ಮೇಲೆ ಮಾತ್ರ ಕೆಲಸ ಮಾಡುವುದಾಗಿತ್ತು. ಆದರೆ ಇಂದಿನ ಎಐ ಯಂತ್ರಕ್ಕೆ ಫುಟ್ಬಾಲ್ ಆಟವನ್ನು ನೋಡಲು ಅವಕಾಶ ಕೊಟ್ಟರೆ ಅದು ಆಟವನ್ನು ಆಳವಾಗಿ ಗಮನಿಸಿ ಎಲ್ಲ ವಿಷಯಗಳನ್ನು ಆಂತರ್ಯಗೊಳಿಸಿಕೊಂಡು ತಾನೂ ಆಟಕ್ಕಿಳಿದು ಎಲ್ಲರನ್ನೂ ಸೋಲಿಸಬಲ್ಲುದು. ನಾವು ಸೌತ್ ಕೊರಿಯಾದ ಗೋ ಎಂಬ ಆಟದಲ್ಲಿ ಗೆಲುವು ಕಂಡದನ್ನು ಗಮನಿಸಿದ್ದೇವೆ. ಭಾರತೀಯ ತತ್ವಶಾಸ್ತ್ರದಲ್ಲಿ ಶ್ರವಣ ಮನನ ನಿಧಿದ್ಯಾಸನವೆಂಬ ಮೂರು ಹಂತಗಳನ್ನು ಗುರುತಿಸುತ್ತಾರೆ. ಇದು ಅದೇ ರೀತಿ ಮನುಷ್ಯನ ಇಂದ್ರಿಯಗಳಿಗೆ ಗೋಚರವಾದದ್ದನ್ನು ಗಮನಿಸಿ, ಒಂದು ಟ್ರಿಲಿಯನ್ ಪ್ಯಾರಾಮೀಟರ್ ಅಥವಾ ಆಯಾಮಗಳಿಂದ ವಸ್ತುಗಳನ್ನು ಗಮನಿಸಿ ನಮ್ಮ ದೋಷಗಳನ್ನು ಮೀರಿ ಕೆಲಸ ಮಾಡುವ ಸಾಮರ್ಥ್ಯವನ್ನು ಪಡೆದಿರುತ್ತದೆ. ಈ ರೀತಿಯ ತಂತ್ರಜ್ಞಾನದಿಂದ ತಯಾರಿಸಿರುವ ಯಂತ್ರಗಳು ಪ್ರಜ್ಞಾಪೂರ್ವಕವಾಗಿವೆಯೇ ಎಂಬ ಚರ್ಚೆಗೆ ಈ ಬೆಳವಣಿಗೆಗಳು ತೆರೆದುಕೊಳ್ಳುವಂತೆ ಮಾಡಿವೆ. ಮುಂದೆ ಅವು ತಮಗೆ ಬೇಕಾದುದನ್ನು ತಾವೇ ಆಲೋಚಿಸಿ ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತಕ್ಕೆ ಹೋಗಬಹುದು. ಅವುಗಳನ್ನು ಕಾನ್ಷಿಯಸ್ ಮಷೀನ್ ಎನ್ನಬಹುದೇ ಎನ್ನುವ ಚರ್ಚೆಗಳು ನಡೆಯುತ್ತಿವೆ. ಮನುಷ್ಯನಲ್ಲಿರುವ ಕೆಲವು ಪೂರ್ವಗ್ರಹಪೀಡಿತ ನಂಬಿಕೆಗಳು ಮತ್ತು ನಮ್ಮ ಏಕಾಗ್ರತೆಯಲ್ಲಿರುವ ಕೊರತೆಯನ್ನು ಮೀರಿ ಕೆಲಸ ಮಾಡಬಹುದಾಗಿದೆ. ಮುಂದೆ ಮನುಷ್ಯನನ್ನು ವಾಹನ ಚಾಲನೆಯಿಂದ ನಿಷಿದ್ಧಗೊಳಿಸಬಹುದು ಎನ್ನುತ್ತಾರೆ.

ಕಾರಣ ಅವನಿಗೆ ಒಂದೇ ವಿಷಯದ ಬಗ್ಗೆ ನಿರಂತರವಾಗಿ ದೃಷ್ಟಿ ಮತ್ತು ಏಕಾಗ್ರತೆಯನ್ನು ಕಾಪಾಡಿಕೊಳ್ಳುವುದು ಕಷ್ಟ ಎನ್ನುವ ಕಾರಣದಿಂದ. ಇದಾಗಲೇ ನಮ್ಮ ಮೊಬೈಲ್ ಫೋನ್, ಕಾರ್, ಮನೆಗಳಲ್ಲಿ ಬಳಸುವ ಫ್ರಿಜ್ಡ್, ವಾಷಿಂಗ್ ಮೆಷಿನ್, ಟಿವಿಗಳಲ್ಲೂ ಸಹ ಸಾಕಷ್ಟು ಈ ಎಐ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಚೈನಾದಲ್ಲಿ ಬಟ್ಟೆ ಹೊಲಿಯುವ ಎಐ ತಂತ್ರಜ್ಞಾನಾಧಾರಿತ ದೈತ್ಯ ಮಷೀನ್‌ಗಳು ಲಕ್ಷಾಂತರ ಜನರ ಕೆಲಸವನ್ನೇ ಕಿತ್ತುಕೊಳ್ಳುತ್ತಿವೆ. ಸಾಮಾನ್ಯವಾಗಿ ಅಡುಗೆ ಕೆಲಸ ಅತ್ಯಂತ ಕ್ಲಿಷ್ಟಕರ ಎನ್ನುವುದುಂಟು. ಇಂದು ಈ ಕ್ಷೇತ್ರಕ್ಕೂ ಲಗ್ಗೆ ಇಟ್ಟು ಇಡ್ಲಿ ದೋಸೆ ಮಾಡುವಷ್ಟರ ಮಟ್ಟಿಗೆ ಈ ತಂತ್ರಜ್ಞಾನ ಬೆಳೆದು ನಿಂತಿದೆ. ಇವತ್ತು ಒಂದು ಕಾರ್ ತಯಾರಿಸಲು ಅತ್ಯಂತ ಹೆಚ್ಚು ಖರ್ಚು ಬೀಳುವುದು ಅದಕ್ಕೆ ಬಳಸುವ ಮೋಟಾರ್ ಅಥವಾ ಸ್ಟೀಲ್ ವಸ್ತುಗಳಿಗಲ್ಲ, ಬದಲಿಗೆ ಅಲ್ಲಿ ಬಳಸುವ IOT – ಇಂಟರ್ನೆಟ್ ಆಫ್ ಥಿಂಗ್ಸ್‌ಗೆ ಆಗಿರುತ್ತದೆ. ಅಮೆರಿಕದ ಜನರಲ್ ಎಲೆಕ್ಟ್ರಿಕ್ ಫ್ಯಾಕ್ಟರಿಯೊಂದರಲ್ಲಿ ಯಂತ್ರ ಮಾನವರೇ ಕೆಲಸ ಮಾಡುವುದರಿಂದ ಅಲ್ಲಿ ಬೆಳಕಿನ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಅಮೆಜಾ಼ನ್ ಅನೇಕ ಗೋದಾಮುಗಳು ಕೂಡ ಈ ತಂತ್ರಜ್ಞಾನದ ಮೂಲಕವೇ ನಿರ್ವಹಿಸುತ್ತಿರುವುದಾಗಿದೆ. ಹೀಗೆ ನಮ್ಮ ಸುತ್ತಲೂ ಈ ತಂತ್ರಜ್ಞಾನ ಇದಾಗಲೇ ಆವರಿಸಿಕೊಂಡಿದ್ದರೂ ನಾವು ಇನ್ನೂ ಅದನ್ನು ಗಮನಿಸಿಲ್ಲ ಎನ್ನುತ್ತಾನೆ ಮೋ ಗಡಾಟ್, ತನ್ನ “ಸ್ಕೇರಿ ಸ್ಮಾರ್ಟ್” ಎನ್ನುವ ಪುಸ್ತಕದಲ್ಲಿ. ಈ ನಿಟ್ಟಿನಲ್ಲಿ ಇತ್ತೀಚೆಗೆ ಎರಿಕ್ ಸ್ಮಿತ್, ತೊಭತ್ತೆಂಟು ವರ್ಷದ ಹೆನ್ರಿ ಕಿಸಿಂಜೆರ್ ಮತ್ತು ಡ್ಯಾನಿಯಲ್ ಹಟನ್ಲಾಕರ್ ಬರೆದಿರುವ “ದ ಏಜ್ ಆಫ್ ಎಐ ಅಂಡ್ ಅವರ್ ಹ್ಯೂಮನ್ ಫ್ಯೂಚರ್” ಗಮನಿಸಬಹುದಾದ ಪ್ರಮುಖ ಪುಸ್ತಕವಾಗಿದೆ.

What is powerful for good can be potent for evil ಎನ್ನುವುದು ಸತ್ಯದ ಮಾತೇ ಆಗಿದೆ. ಇದೇ ತಂತ್ರಜ್ಞಾನವನ್ನು ಬಳಸಿ ಚುನಾವಣೆಯನ್ನು ಹೇಗೆ ಗೆಲ್ಲಬಹುದೆಂದು ನಿಕ್ ಚೀಸ್ಮನ್ ಮತ್ತು ಬ್ರಾಯೆನ್ ಕ್ಲಾಸ್ ತಮ್ಮ “ಹೌ ಟು ರಿಗ್ ಎನ್ ಎಲೆಕ್ಷನ್” ಎಂಬ ಪುಸ್ತಕದಲ್ಲಿ ವಿವರಿಸುತ್ತಾರೆ. ಮನುಷ್ಯರನ್ನು ಫೇಸ್‌ಬುಕ್‌ನಂತ ಕಂಪನಿಗಳು ತಮಗೆ ಬೇಕಾದ ವಿಷಯಗಳಿಗೆ ವ್ಯಸನಕ್ಕೊಳಪಡಿಸಿ ಗುಲಾಮರನ್ನಾಗಿಸುವ ಸಾಧ್ಯತೆಗಳೂ ಉಂಟು. ಇಂತಹ ಪ್ರಕ್ರಿಯೆಗಳನ್ನು ಇದಾಗಲೇ ಗಮನಿಸುತ್ತಿದ್ದೇವೆ. ಈ ಯಂತ್ರಗಳಿಗೆ ನಾವೇನು ವಿಷಯಗಳನ್ನು ಮತ್ತು ವಿವರಗಳನ್ನು ಹೇಳುತ್ತೇವೆಯೋ ಅಥವಾ ತೋರಿಸುತ್ತೇವೆಯೋ ಆ ಆಧಾರದ ಮೇಲೆ ಅವು ವಿಷಯಗಳನ್ನು ಆಂತರ್ಯಗೊಳಿಸಿಕೊಂಡು ಕಾರ್ಯಕ್ಕಿಳಿಯುತ್ತವೆ. ಇಂತಹ ಸಂದರ್ಭದಲ್ಲಿ ಅನೇಕ ತಂತ್ರಜ್ಞಾನಗಳಲ್ಲಿ, ಇದಾಗಲೇ ಕಂಡುಬಂದಿರುವಂತೆ ನಮ್ಮಲ್ಲಿರುವ ವರ್ಣಭೇದ ನೀತಿ, ಜಾತೀಯತೆ ಮತ್ತು ಲಿಂಗ ತಾರತಮ್ಯ ಅವುಗಳಲ್ಲಿಯೂ ಕಂಡುಬರುವುದು ಸಹಜವಾಗಿದೆ. ಕೋವಿಡ್ ಸಂದರ್ಭದಲ್ಲಿ ಆಕ್ಸಿಮೀಟರ್‌ಗಳು ಕಪ್ಪುವರ್ಣದ ಆಫ್ರಿಕನ್ ಸಮುದಾಯಕ್ಕೆ ಸರಿಯಾಗಿ ಕೆಲಸ ಮಾಡದೆ, ಆಕಾರಣವಾಗಿ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. ಹಿಟ್ಲರನ ಗ್ಯಾಸ್ ಛೇಂಬರ್ ಕಂಡ ಎಐ ಯಂತ್ರವೊಂದು ಇದೊಂದು ಆಟದ ಮೈದಾನ ಎಂದಿತ್ತಂತೆ. ಪ್ರೆಡ್‌ಪೋಲ್ ಕೃತಕ ಬುದ್ಧಿಮತ್ತೆಯನ್ನು ಅಮೆರಿಕದ ಪೊಲೀಸ್ ಇಲಾಖೆ ಬಳಸುತ್ತದೆ. ದಿನವೂ ಸಾಯಂಕಾಲ ರಾತ್ರಿ ಎಲ್ಲಿ ಗಸ್ತು ತಿರುಗಬೇಕು ಎನ್ನುವುದನ್ನು ಆ ಯಂತ್ರವೇ ಹೇಳಿಕೊಡುತ್ತದೆ. ಅದರ ಪ್ರಕಾರವೇ ಇಲಾಖೆ ಕೆಲಸ ಮಾಡುತ್ತದೆ. ಆದರೆ ವಿಪರ್ಯಾಸವೇನೆಂದರೆ ಆ ಯಂತ್ರ ಎಲ್ಲಿ ಆಫ್ರಿಕಾದ ಕಪ್ಪು ವರ್ಣೀಯರು ಮತ್ತು ಹಿಸ್ಪ್ಯಾನಿಕ್‌ಗಳು ವಾಸ ಮಾಡುತ್ತಾರೋ ಅಲ್ಲಿಯೇ ಗಸ್ತು ತಿರುಗುವಂತೆ ಹೇಳಿಕೊಡುತ್ತದೆ.

ದೃಷ್ಟಿಯಂತೆ ಸೃಷ್ಟಿ ಎನ್ನುವುದು ಪ್ರಚಲಿತ ಮಾತು. ಆದರೆ ಇಂದು ಸೃಷ್ಟಿಯಿದ್ದಂತೆ ದೃಷ್ಟಿಯೂ ಆಗಬಹುದು. ಇತ್ತೀಚೆಗೆ ಈ ತಂತ್ರಜ್ಞಾನವನ್ನು ಹೇಗೆ ಮನುಷ್ಯ ಬಳಸಿಕೊಳ್ಳಬೇಕು? ಇದರಲ್ಲಿರುವ ಸಾಧಕಬಾಧಕಗಳೇನು ಎನ್ನುವುದನ್ನು ಇಡೀ ಪ್ರಜ್ಞಾವಂತ ಸಮುದಾಯ ಚರ್ಚೆ ಮಾಡುತ್ತಿದೆ. ’ಎಥಿಕ್ಸ್ ಆಫ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್’ ಎನ್ನುವ ಹತ್ತಾರು ಪುಸ್ತಕಗಳು ಇದಾಗಲೇ ಬಂದಿವೆ.

ಇನ್ನೊಂದೆಡೆ ಮನುಕುಲದ ಒಂದು ದೊಡ್ಡ ಭಾಗ, ಎಲ್ಲಾ ಜ್ಞಾನ-ತಂತ್ರಜ್ಞಾನದ ವಿರುದ್ಧವೂ ಸೆಟೆದು ನಿಂತು ಲಸಿಕೆ ಹಾಕಿಸಿಕೊಳ್ಳುವುದಿಲ್ಲವೆಂದು, ಭೂಮಿ ಚಪ್ಪಟೆಯಾಗಿದೆಯೆಂದು, ಕುದುರೆ ಗಾಡಿಗಳನ್ನೇ ಬಳಸುತ್ತೇವೆಂದು, ಬೇಯಿಸದ ಹಸಿ ಆಹಾರವನ್ನೇ ಬಳಸುತ್ತೇವೆಂದು, ಯಾವ ಬದಲಾವಣೆಗೂ ತೆರೆದುಕೊಳ್ಳದೆ ಹಿನ್ನೋಟವೇ ಮುನ್ನೋಟ ಎಂದು ನಿಂತ ನೀರಾಗಿದೆ. ದೆಹಲಿಯಲ್ಲಿ ಸುಮಾರು ನೂರು ವರ್ಷಗಳ ಹಿಂದೆ ಮೊಟ್ಟಮೊದಲು ರಸ್ತೆಗೆ ಡಾಂಬರು ಹಾಕಿದಾಗ ಕುದುರೆಗಾಡಿಯವರು ಪ್ರತಿಭಟನೆ ಮಾಡಿದ್ದರು. ನಮ್ಮ ಕುದುರೆಯ ಲಾಳ ಡಾಂಬರಿನಲ್ಲಿ ಹೂತು ಓಡಲು ಸಾಧ್ಯವಾಗುವುದಿಲ್ಲ, ನಮಗೆ ಮಣ್ಣಿನ ರಸ್ತೆಗಳೆ ಬೇಕು ಎನ್ನುವುದು ಅವರ ಬೇಡಿಕೆಯಾಗಿತ್ತು. ಇದೇ ರೀತಿ ಹಿಂದೆ ಹೊಲಿಗೆ ಯಂತ್ರಗಳು ಬಂದಾಗ ಅವುಗಳನ್ನು ಕುಟ್ಟಿ ಪುಡಿಮಾಡುತ್ತಿದ್ದರು. ಅವರುಗಳನ್ನು ಲುಡೈಟ್ ಎಂದು ಕರೆಯಲಾಗುತ್ತಿತ್ತು. ಇಂದಿಗೂ ಸಹ ತಂತ್ರಜ್ಞಾನ ವಿರೋಧಿಗಳನ್ನು ಲುಡೈಟ್‌ಗಳು ಎಂದೇ ಪರಿಗಣಿಸಲಾಗುತ್ತದೆ. ಮನುಷ್ಯ ಯಂತ್ರಗಳಿಗೆ ಕಲಿಸಿ, ಯಂತ್ರಗಳಿಂದ ಮನುಷ್ಯ ಕಲಿತು, ಮಾನವ ಮತ್ತು ಯಂತ್ರಗಳು ಸಹಭಾಗಿತ್ವದಲ್ಲಿ ಮುನ್ನಡೆಯಬೇಕೇ? ಮನುಷ್ಯನಲ್ಲಿರುವ ದೋಷಗಳನ್ನು ಯಂತ್ರಗಳಿಂದ ನೀಗಿಸಿಕೊಂಡು ಯಂತ್ರಗಳಲ್ಲಿರುವ ದೋಷವನ್ನು ಮನುಷ್ಯ ನೀಗಿಸಿ ಪರಸ್ಪರ ಪೂರಕವಾಗಿ ನವನಾಗರಿಕತೆಯನ್ನು ಸೃಷ್ಟಿಮಾಡಬಹುದೇ? ಇಂತಹ ಪ್ರಶ್ನೆಗಳು ಇಂದು ಮನುಕುಲವನ್ನು ಬಾಧಿಸುತ್ತಿರುವುದಂತೂ ನಿಜ.

ಕೊನೆಗೊಂದು ನೀಲ್ಸ್ ಬೋರ್‌ನ ಮಾತು `Prediction is very difficult, especially if it is about the future’.


ಇದನ್ನೂ ಓದಿ: ಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?

ಇದನ್ನೂ ಓದಿ: ದಿಢೀರ್‌ ಪಠ್ಯ ಬದಲಾವಣೆ ಸುತ್ತೋಲೆ: ಎನ್‌ಇಪಿಯಿಂದ ವಿದ್ಯಾರ್ಥಿಗಳು ಹೈರಾಣು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...