Homeಕರ್ನಾಟಕಭಾರತದಲ್ಲಿ ಗೋಹತ್ಯೆ ಏಕೆ? ಕಲ್ಲಡ್ಕ ಪ್ರಭಾಕರ್‌ ಭಟ್ಟರು ಕೇಳಿದ್ದು ಯಾರಿಗೆ?

ಭಾರತದಲ್ಲಿ ಗೋಹತ್ಯೆ ಏಕೆ? ಕಲ್ಲಡ್ಕ ಪ್ರಭಾಕರ್‌ ಭಟ್ಟರು ಕೇಳಿದ್ದು ಯಾರಿಗೆ?

2018-19ನೇ ಸಾಲಿನಲ್ಲಿ ಭಾರತ 19,00,000 ಮೆಟ್ರಿಕ್ ಟನ್ ದನದ ಮಾಂಸ ರಫ್ತು ಮಾಡಿ ವಿಶ್ವದ ಎರಡನೇ ಅತಿದೊಡ್ಡ ರಫ್ತುದಾರ ಎಂಬ ಹೆಗ್ಗಳಿಕೆ ಪಡೆದಿದೆ

- Advertisement -
- Advertisement -

ತುಮಕೂರಿಗೆ ಆಗಮಿಸಿದ್ದ ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್ಟರು ಪೌರತ್ವ ಕಾಯ್ದೆ ಪರ ಭೀಕರ ಭಾಷಣ ಮಾಡಿಹೋದರು. ಸಭೆಯಲ್ಲಿ ಥರಾವರಿ ಪ್ರಶ್ನೆಗಳು ಕೇಳಿದರು. ಅದು ಯಾರಿಗೆ ಕೇಳಿದರು ಎಂಬುದು ಅಲ್ಲಿದ್ದ ಜನರಿಗೆ ಸ್ವಲ್ಪ ಗಲಿಬಿಲಿಯೇ ಆಗಿರಬೇಕು. ಯಾಕೆಂದರೆ ಕೇಂದ್ರದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಅಂಥಾದ್ದರಲ್ಲಿ ಭಾರತದಲ್ಲಿ ಗೋಹತ್ಯೆ ಏಕೆ ಮಾಡುತ್ತಾರೆ ಎಂದು ಜನರನ್ನು ಪ್ರಶ್ನಿಸಬೇಕೇ? ಕೇಂದ್ರದಲ್ಲಿ ನಪುಂಸಕ ನಾಯಕತ್ವ ಇಲ್ಲ. ಈಗಿನದು ಬಲಿಷ್ಟವಾಗಿದೆ ಎಂದು ಬೀಗಿದರು, ಪ್ರಶ್ನೆ ಮಾತ್ರ ಜನರಿಗೆ ಕೇಳಿದರು.

ಆದರೆ ಕಳೆದ ಎಂಟು ವರ್ಷದಲ್ಲಿ ನಪುಂಸಕ ನಾಯಕತ್ವ ಇಲ್ಲದಿದ್ದರೂ (ಅವರೇ ಹೇಳಿಕೊಂಡಂತೆ) ಭಾರತದಿಂದ ದನದ ಮಾಂಸ ರಫ್ತಾಗುತ್ತಿದೆಯಲ್ಲವೇ? ಅದನ್ನು ಪೌರುಷವಂತರು ತಡೆಯಬೇಕಿತ್ತಲ್ಲವೇ? ಯಾಕೆ ತಡೆಯಲಿಲ್ಲ? ಗೋಹತ್ಯೆಯನ್ನೂ ಸಂಪೂರ್ಣ ನಿಯಂತ್ರಿಸಬೇಕಿತ್ತಲ್ಲವೇ? ಈ ಪ್ರಶ್ನೆಗಳಿಗೆ ಪ್ರಭಾಕರ ಭಟ್ಟರ ಬಳಿ ಉತ್ತರವಿದ್ದಂತೆ ಕಾಣುತ್ತಿಲ್ಲ. ಗೊತ್ತಿದ್ದರೂ ಭಟ್ಟರಲ್ಲವೇ ವಿಸ್ಮೃತಿ ಹೆಚ್ಚಿರಬೇಕು? ಹೌದು ಭಾರತದಲ್ಲಿ ಗೋಹತ್ಯೆ ಹೆಚ್ಚಾಗಲು ಕಾರಣವೇನು? ದನದ ಮಾಂಸ ರಫ್ತು ಮಾಡಲು ಯಾರು ಕಾರಣ? ಎಂಬುದನ್ನು ಪರಿಶೀಲಿಸಿದಾಗ ಕಂಡು ಬಂದ ಸತ್ಯಾಂಶಗಳು ಇವು.

ಕಳೆದ ಆರು ವರ್ಷಗಳಲ್ಲಿ ಅಂದರೆ ನರೇಂದ್ರ ಮೋದಿ ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ಭಾರತದಿಂದ ದನದ ಮಾಂಸ ರಫ್ತು ಹೆಚ್ಚಳವಾಗಿರುವುದನ್ನು ಕೇಂದ್ರ ಪಶುಸಂಗೋಪನಾ ಇಲಾಖೆ ಬಿಡುಗಡೆಗೊಳಿಸಿದ ಅಂಕಿಅಶಶಗಳು ದೃಢಪಡಿಸುತ್ತವೆ. 2014-15ನೇ ಸಾಲಿನಲ್ಲಿ ಮೋದಿ ಸರ್ಕಾರ 14,75,440 ಮೆಟ್ರಿಕ್ ಟನ್ ದನದ ಮಾಂಸ ರಫ್ತು ಮಾಡಿದೆ. ಇದು ಹತ್ತು ವರ್ಷಗಳಲ್ಲೇ ಅತಿಹೆಚ್ಚು ರಫ್ತು ಮಾಡಿದ ಹೆಗ್ಗಳಿಕೆ ಭಾರತದ್ದು. ಇದರಿಂದ ಭಾರತ ಸರ್ಕಾರ ಆ ಸಾಲಿನಲ್ಲಿ 29,282 ಕೋಟಿ ರೂಪಾಯಿ ಆದಾಯ ಗಳಿಸಿದೆ. 2015-16ನೇ ಸಾಲಿನಲ್ಲಿ 13,14,000 ಮೆಟ್ರಿಕ್ ಟನ್ ರಫ್ತು ಮಾಡಿದೆ. ಆದರೆ 2016-17ನೇ ಸಾಲಿನಲ್ಲಿ 13,30,013 ಮೆಟ್ರಿಕ್ ಟನ್ ರಫ್ತು ಮಾಡಿದ್ದು ಅದು ಕಳೆದ ವರ್ಷಕ್ಕಿಂತ ಶೇಕಡ 1.2ರಷ್ಟು ಹೆಚ್ಚಳವಾಗಿದೆ.

2017-18ರಲ್ಲಿ 13,48,225 ಮೆಟ್ರಿಕ್ ಟನ್ ರಫ್ತು ಮಾಡಿದ್ದು 25,988.41 ಕೋಟಿ ರೂಪಾಯಿ ಭಾರತಕ್ಕೆ ಆದಾಯ ಬಂದಿದೆ. ಇದು ಕಳೆದ ಸಾಲಿಗಿಂತ ಶೇಕಡ 1.3ರಷ್ಟು ಹೆಚ್ಚಳ ಕಂಡುಬಂದಿದೆ. 2018-19ನೇ ಸಾಲಿನಲ್ಲಿ ಭಾರತ 19,00,000 ಮೆಟ್ರಿಕ್ ಟನ್ ದನದ ಮಾಂಸ ರಫ್ತು ಮಾಡಿ ವಿಶ್ವದ ಎರಡನೇ ಅತಿದೊಡ್ಡ ರಫ್ತುದಾರ ಎಂಬ ಹೆಗ್ಗಳಿಕೆ ಪಡೆದಿದೆ. ಅಂದರೆ ಬ್ರೆಜಿಲ್ ಶೇಕಡ 19.33ರಷ್ಟು ಅಂದರೆ 20,25,000 ಮೆಟ್ರಿಕ್ ಟನ್ ದನದ ರಫ್ತು ಮಾಡಿ ಮೊದಲ ಸ್ಥಾನದಲ್ಲಿದ್ದರೆ, ಭಾರತ ಶೇಕಡ 18.14ರಷ್ಟು ದನದ ಮಾಂಸ ರಫ್ತು ಮಾಡಿ ಎರಡನೇ ಸ್ಥಾನದಲ್ಲಿದೆ. ಅಮೆರಿಕಾ ಶೇಕಡ 13.10ರಷ್ಟು ಅಂದರೆ 13,72,000 ಮೆಟ್ರಿಕ್ ಟನ್ ವಿದೇಶಗಳಿಗೆ ದನದ ಮಾಂಸ ಪೂರೈಕೆ ಮಾಡಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ದನದ ಮಾಂಸ ಅತಿಹೆಚ್ಚು ಸೇವನೆ ಮಾಡುವ ಪಾಕಿಸ್ತಾನ ರಫ್ತಿನಲ್ಲಿ 14ನೇ ಸ್ಥಾನದಲ್ಲಿದೆ.

ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ, ದಿ ಪ್ರಿಂಟ್ ಮೊದಲಾದ ವೆಬ್ ಸೈಟ್‌ಗಳಲ್ಲಿ ಉಲ್ಲೇಖಿಸಿರುವಂತೆ ಕಳೆದ ನಾಲ್ಕು ವರ್ಷಗಳಲ್ಲಿ ದನದ ಮಾಂಸ ರಫ್ತು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಈ ಅವಧಿಯಲ್ಲಿ 56 ಇಂಚಿನ ಪ್ರಧಾನಿಯೇ ಅಧಿಕಾರದಲ್ಲಿರುವುದು ಎಂಬುದು ಗಮನಾರ್ಹ ಸಂಗತಿ. ಅಪ್ಪಟ ದೇಶಭಕ್ತರು, ಗೋಮಾತೆಯ ಪೂಜಕರು, ಗೋವಿನಲ್ಲಿ 33 ಕೋಟಿ ದೇವರು ನೆಲೆಸಿವೆ ಎಂದು ಪ್ರತಿಪಾದಿಸುವ ಸಂಘ ಪರಿವಾರದ ಭಕ್ತರು ನರೇಂದ್ರ ಮೋದಿ ಅವರೇ ಪ್ರಧಾನಿ ಸ್ಥಾನದಲ್ಲಿದ್ದರೂ ದನದ ಮಾಂಸ ರಫ್ತು ಮಾಡುವುದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದರ ಬಗ್ಗೆ ಭಕ್ತಗಣ ಸುಳ್ಳು ಹೇಳುವುದನ್ನು ಬಿಟ್ಟು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಮೈಯೆಲ್ಲಾ ಸುಳ್ಳನ್ನೇ ಪೂಸಿಕೊಂಡಿರುವ ಕಲ್ಲಡ್ಕ ಪ್ರಭಾಕರ್ ಭಟ್ಟರಂಥವರು ತಮ್ಮ ಮಾತೃ ಸಂಸ್ಥೆಯ ಕೂಸುಗಳು ಅಧಿಕಾರದಲ್ಲಿದ್ದ ಕಾಲದಲ್ಲೇ ಅತ್ಯಧಿಕ ಗೋಮಾಂಸ ರಫ್ತಾಗುವುದನ್ನು ನಿಯಂತ್ರಿಸಲು ಏಕೆ ಸಾಧ್ಯವಾಗಲಿಲ್ಲ? ಸತ್ಯವನ್ನು ಎದೆಯಲ್ಲಿ ಬಚ್ಚಿಟ್ಟುಕೊಳ್ಳದೇ ಹೊರಹಾಕಬೇಕು.

ಅತಿಹೆಚ್ಚು ಗೋಮಾಂಸ ತಿನ್ನುವ ಮುಸ್ಲಿಂ ರಾಷ್ಟ್ರ ಪಾಕಿಸ್ತಾನ 14ನೇ ಸ್ಥಾನದಲ್ಲಿದೆ. ಅದು ಬಿಡಿ ಬಿಜೆಪಿಯ ಪರಮ ವೈರಿ ದೇಶ. ಭಾರತದಲ್ಲಿ ಗೋಮಾತೆಯ ಪೂಜಕರು ಇರುವ ದೇಶದಲ್ಲೇ ಅದೂ ತಮ್ಮ ಆಡಳಿತದ ಅವಧಿಯಲ್ಲಿ ದನದ ಮಾಂಸ ಅತ್ಯಧಿಕವಾಗಿ ರಫ್ತು ಮಾಡುತ್ತಿದ್ದರೂ ಮೌನವೇಕೆ ವಹಿಸಿದ್ದೀರಿ. ಪ್ರಧಾನಿಯನ್ನು ದಿಟ್ಟಿಸಿ ಕೇಳಬೇಕಲ್ಲವೇ? ಅದು ನಿಮ್ಮಿಂದ ಸಾಧ್ಯವಿಲ್ಲ, ಅಲ್ಲವೇ? ದನ ತಿನ್ನುವವರ ಬಗ್ಗೆ ತುಚ್ಛವಾಗಿ ಕಾಣುವ ಸಂಘಪರಿವಾರ ಗೋಮಾಂಸ ರಫ್ತು ಮಾಡುವ ತಮ್ಮದೇ ಸರ್ಕಾರದ ಬಗ್ಗೆ ಸುಮ್ಮನಿರುತ್ತೀರಿ. ಇದು ಇಬ್ಬಗೆ ನೀತಿಯಲ್ಲವೇ? ಸಂಸ್ಕೃತಿ ರಕ್ಷಕರು ಸುಳ್ಳುಗಳ ಪಾಠ ಹೇಳುವುದು ಬಿಟ್ಟು ವಾಸ್ತವತೆ ಅರ್ಥ ಮಾಡಿಕೊಂಡರೆ ಒಳ್ಳೆದು.

ಮೇಲಿನ ಅಂಕಿಅಂಶಗಳಿಂದ ತಿಳಿದುಬರುವುದೇನೆಂದರೆ ಕಾಂಗ್ರೆಸ್ ಆಡಳಿತ ಇದ್ದ ಸಂದರ್ಭಕ್ಕಿಂತಲೂ ಅತಿಹೆಚ್ಚು ಗೋಮಾಂಸ ರಫ್ತು ಮಾಡಿರುವುದು ಬಿಜೆಪಿ ಅವಧಿಯಲ್ಲೇ. ಅದು ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ವ್ಯಾಪಕವಾಗಿ ದನದ ಮಾಂಸ ರಫ್ತು ಮಾಡಿದ್ದು. ಆದರೆ ವೇದಿಕೆ ಸಿಕ್ಕಲ್ಲಿ ದ್ವೇಷವನ್ನೇ ಉಗುಳುವ ಕಲ್ಲಡ್ಕ ಪ್ರಭಾಕರ ಭಟ್ಟರಂಥ ಢೋಂಗಿಗಳು ಗೋಮಾತೆಯ ಭಜನೆ ಮಾಡುತ್ತಾರೆ. ಯುವಜನರ ಮನಸ್ಸಿನಲ್ಲಿ ವಿಷದ ಬೀಜವ ಬಿತ್ತಿ ಇಡೀ ಸಮಾಜವೇ ದ್ವೇಷದಿಂದ ಕುದಿಯುವಂತೆ ಮಾಡುವುದನ್ನು ಬಿಟ್ಟು ಈ ದೇಶದಲ್ಲಿ ಕ್ಯಾನ್ಸರ್ ನಂತೆ ಹರಡಿರುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ತಾರತಮ್ಯ ಭಾವನೆ, ನಿರುದ್ಯೋಗ ಮೊದಲಾದ ಸಮಸ್ಯೆಗಳ ನಿವಾರಣೆಗೆ ಮುಂದಾದರೆ ಎಲ್ಲರ ಬದುಕು ಹಸನಾದೀತು? ಅವರು ಈ ನಿಟ್ಟಿನಲ್ಲಿ ಯೋಚಿಸುವುದು ಒಳ್ಳೆಯದು.

(ವಿವಿಧ ಲೇಖಕರು ತಮ್ಮ ಲೇಖನಗಳಲ್ಲಿ ಬರೆಯುವ ಅಭಿಪ್ರಾಯಗಳು ನಾನುಗೌರಿ.ಕಾಂನ ಸಂಪಾದಕೀಯ ತಂಡದ ಅಭಿಪ್ರಾಯಗಳು ಆಗಿರಬೇಕೆಂದೇನಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...