ಸಶಸ್ತ್ರ ಪಡೆಗಳಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳವುದನ್ನು ನಿರಾಕರಿಸಿದ್ದ ಆಯೋಗದ ವಿರುದ್ಧ 2010 ರಲ್ಲಿ ಉನ್ನತ ನ್ಯಾಯಾಲಯದ ಮೆಟ್ಟಿಲೇರಿದ್ದ ಎಂಟು ಮಹಿಳಾ ಸೇನಾಧಿಕಾರಿಗಳಿಗೆ ಶಾಶ್ವತ ಆಯೋಗದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸೇನೆಗೆ ತಿಳಿಸಿದೆ. ಒಂಬತ್ತು ವರ್ಷಗಳ ನಂತರ ಸರ್ಕಾರವು ಅಂತಿಮವಾಗಿ ಶಾಶ್ವತ ಆಯೋಗವನ್ನು ರಚಿಸಲು ಒಪ್ಪಿಕೊಂಡಿತು ಆದರೆ ಈ ನಿರ್ಧಾರದ ವಿರುದ್ಧ ಮೊದಲು ನ್ಯಾಯಾಲಯದ ಮೆಟ್ಟಿಲೇರಿದ್ದ 8 ಮಹಿಳೆಯರನ್ನು ಅದರಿಂದ ಕೈಬಿಟ್ಟಿತ್ತು.
“ನಾವು ಆದೇಶವನ್ನು ನೀಡಬಹುದು ಆದರೆ ಅದರ ಕ್ರೆಡಿಟ್ ಪಡೆಯಲು ನಾವು ನಿಮಗೆ ಅವಕಾಶ ನೀಡುತ್ತಿದ್ದೇವೆ” ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಸೇನೆಗೆ ತಿಳಿಸಿತು. ಸಣ್ಣ ಸೇವಾ ಆಯೋಗ, ಅಥವಾ ಎಸ್ಎಸ್ಸಿಗಾಗಿ ಮಹಿಳೆಯರನ್ನು ಸೇರಿಸಿಕೊಳ್ಳುವ ಶಾಖೆಗಳಲ್ಲಿ ಸೇನೆಯ 10 ರಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಈ ಸೌಲಭ್ಯವು ಏಪ್ರಿಲ್ 2020 ರಿಂದ ಮಹಿಳಾ ಅಧಿಕಾರಿಗಳಿಗೆ ಪ್ರಾರಂಭವಾಗುತ್ತದೆ ಎಂದು ಸಹ ಸುಪ್ರೀಂ ಕೋರ್ಟ್ ತಿಳಿಸಿದೆ.
ಸೈನ್ಯಗಳಲ್ಲಿ ಶಾಶ್ವತ ಆಯೋಗವನ್ನು ರಚಿಸದೇ ಇರುವುದರ ಲಿಂಗ ಪಕ್ಷಪಾತದ ವಿರುದ್ಧ ಹೋರಾಡಿದ ಮಹಿಳೆಯರನ್ನು ಒಳಗೊಂಡಿಲ್ಲ ಮಹಿಳಾ ಅಧಿಕಾರಿಗಳ ಪರ ವಕೀಲ ಐಶ್ವರ್ಯ ಭಟ್ಟಿ ಅವರು ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು.
ಮುಂದಿನ ಗುರುವಾರ ವೇಳೆಗೆ ಸಕಾರಾತ್ಮಕ ಪ್ರತಿಕ್ರಿಯೆಯೊಂದಿಗೆ ಹಿಂತಿರುಗುವಂತೆ ನ್ಯಾಯಪೀಠ ಕೇಂದ್ರದ ಕಾನೂನು ಅಧಿಕಾರಿ ಸಂಜಯ್ ಜೈನ್ ಅವರಿಗೆ ತಿಳಿಸಿದೆ. ಈ ಪ್ರಕರಣವನ್ನು ಇತ್ತೀಚೆಗೆ ತೆಗೆದುಕೊಳ್ಳಲಾಗಿದೆ ಎಂಬ ಕಾರಣಕ್ಕೆ ಜೈನ್ ಈ ಹಿಂದೆ ಸಮಯ ಕೋರಿದ್ದರು.
ಹೊಸ ವ್ಯವಸ್ಥೆಯಡಿಯಲ್ಲಿ, ಎಸ್ಎಸ್ಸಿ ಮಹಿಳಾ ಅಧಿಕಾರಿಗಳು ನಾಲ್ಕು ವರ್ಷಗಳ ಸೇವೆಯೊಳಗೆ ಶಾಶ್ವತ ಆಯೋಗವನ್ನು ಬಯಸುತ್ತಾರೆಯೇ ಎಂದು ಸೂಚಿಸುವ ಅಗತ್ಯವಿದೆ.
ಭಾರತೀಯ ವಾಯುಪಡೆಯು ಈಗಾಗಲೇ ಮಹಿಳಾ ಅಧಿಕಾರಿಗಳಿಗಾಗಿ ಫೈಟರ್ ಪೈಲಟ್ಗಳು ಸೇರಿದಂತೆ ಎಲ್ಲಾ ಶಾಖೆಗಳನ್ನು ತೆರೆದಿದೆ. ನೌಕಾಪಡೆಯ, ಸಣ್ಣ ಸೇವಾ ಆಯೋಗದ ಮೂಲಕ ಮಹಿಳಾ ಅಧಿಕಾರಿಗಳನ್ನು ಸೇರಿಸಲು ಸಮುದ್ರೇತರ ಎಲ್ಲಾ ಶಾಖೆಗಳು ಮತ್ತು ವಿಶೇಷತೆಯನ್ನು ತೆರೆಯಲಾಗಿದೆ. ಮಹಿಳಾ ಎಸ್ಎಸ್ಸಿ ಅಧಿಕಾರಿಗಳನ್ನು ಪುರುಷ ಅಧಿಕಾರಿಗಳಿಗೆ ಸಮನಾಗಿ ನೌಕಾ ಶಸ್ತ್ರಾಸ್ತ್ರ ಶಾಖೆಯಲ್ಲಿ ಶಾಶ್ವತ ಆಯೋಗವನ್ನು ನೀಡಲು ಅರ್ಹರನ್ನಾಗಿ ಮಾಡಲಾಗಿದೆ.
ಮಾರ್ಚ್ 2010 ರಲ್ಲಿ ಎಸ್ಎಸ್ಸಿಯಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ನೀಡುವಂತೆ ದೆಹಲಿ ಹೈಕೋರ್ಟ್ ಸಶಸ್ತ್ರ ಪಡೆಗಳಿಗೆ ಆದೇಶಿಸಿತ್ತು. ಈ ತೀರ್ಪಿನ ವಿರುದ್ಧ ಮೂರು ಸೇವೆಗಳಲ್ಲಿ ಒಂದು ಸೈನ್ಯ ಮಾತ್ರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಹೈಕೋರ್ಟ್ ತೀರ್ಪಿನ ಮೊದಲು, ಮಹಿಳಾ ಅಧಿಕಾರಿಗಳು 14 ವರ್ಷಗಳ ನಂತರ ನಿವೃತ್ತರಾಗುತ್ತಿದ್ದರು. ಮತ್ತು ವಿಸ್ತರಣೆಯ ವ್ಯಾಪ್ತಿಯನ್ನು ಹೊಂದಿರಲಿಲ್ಲ. ಆದರೆ ಅವರ ಪುರುಷ ಸಹವರ್ತಿಗಳು ಮಾತ್ರ ಐದು ವರ್ಷಗಳ ವಿಸ್ತರಣೆಯನ್ನು ಸ್ವೀಕರಿಸಲು ಅರ್ಹರಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ಶಾಶ್ವತ ಆಯೋಗದ ಕಲ್ಪನೆಯನ್ನು ಬೆಂಬಲಿಸಿದ್ದರು ಮತ್ತು ಕಳೆದ ವರ್ಷ ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಅವರು ಮಾಡಿದ ಭಾಷಣದಲ್ಲಿ ಈ ಬದಲಾವಣೆಯನ್ನು ಘೋಷಿಸಿದ್ದರು.
ಮಹಿಳೆಯರಿಗೆ ಎಲ್ಲೆಡೆಯೂ ಸಮಾನತೆ ಸಿಗಬೇಕು.