Homeಮುಖಪುಟಜಾತ್ಯತೀತ ಶಕ್ತಿಗಳ ಸಾಂಸ್ಕೃತಿಕ ವೈಫಲ್ಯವೇ ಇಂದಿನ ಸ್ಥಿತಿಗೆ ಕಾರಣ: ಯೋಗೇಂದ್ರ ಯಾದವ್‌ರ ನಿಷ್ಠುರ ಅಭಿಪ್ರಾಯ

ಜಾತ್ಯತೀತ ಶಕ್ತಿಗಳ ಸಾಂಸ್ಕೃತಿಕ ವೈಫಲ್ಯವೇ ಇಂದಿನ ಸ್ಥಿತಿಗೆ ಕಾರಣ: ಯೋಗೇಂದ್ರ ಯಾದವ್‌ರ ನಿಷ್ಠುರ ಅಭಿಪ್ರಾಯ

- Advertisement -
- Advertisement -

ಅಯೋಧ್ಯೆಯ ತೀರ್ಪಿನ ನಂತರ ಇಂದು ಕಂಡುಬಂದಷ್ಟು ದುರ್ಬಲವಾಗಿ, ನಿಕೃಷ್ಟವಾಗಿ, ಕ್ಷಮೆಯಾಚಿಸುವಂತೆ ಜಾತ್ಯತೀತತೆಯು ಹಿಂದೆಂದೂ ಕಾಣಿಸಿಕೊಂಡಿದ್ದಿಲ್ಲ. ಈ ಪರಿಸ್ಥಿತಿಗೆ ಯಾರನ್ನು ದೂರಬೇಕು? ಉತ್ತರ ಸ್ಪಷ್ಟವಾಗಿದೆ; ಜಾತ್ಯತೀತತೆಯ ರಕ್ಷಕಪಾಲಕರೇ ಇದಕ್ಕೆ ಹೊಣೆ ಹೊರಬೇಕಿದೆ. ಅವರ ಹಿಪಾಕ್ರಸಿಯ, ಬೂಟಾಟಿಕೆಯ ಕಾರಣದಿಂದಷ್ಟೇ ಅಲ್ಲ, ಅದರೊಂದಿಗೆ ಅವರ ಸೊಕ್ಕೂ ಇದಕ್ಕೆ ಕಾರಣವಾಗಿದೆ. ಜಾತ್ಯತೀತ ಬುದ್ಧಿಜೀವಿಗಳು ಮತ್ತು ರಾಜಕಾರಣಿಗಳು ಜಾತ್ಯತೀತತೆಯ ಈ ಸಾಂವಿಧಾನಿಕ ಆದರ್ಶವನ್ನು ಸಾಮಾನ್ಯ ಜನರಿಗೆ ಮುಟ್ಟಿಸುವಲ್ಲಿ ವಿಫಲರಾಗಿದ್ದಾರೆ ಹಾಗೂ ಹಾಗೆ ಮಾಡುವುದಕ್ಕೆ ನಿರಾಕರಿಸಿದ್ದಾರೆ.

ಇದು ಜಾತ್ಯತೀತತೆಯ ಪರಿಕಲ್ಪನೆಯ ನಿರಾಕರಣೆ ಅಲ್ಲ. ಇಂತಹ ಸಮಯದಲ್ಲಿ ಜಾತ್ಯತೀತತೆ ಎನ್ನುವುದು ಒಂದು ಪವಿತ್ರ ಸಿದ್ಧಾಂತ, ಭಾರತದ ಪರಿಕಲ್ಪನೆಗೆ ಅಂತರ್ಗತವಾದ ತತ್ವ ಎಂದು ಗಟ್ಟಿ ದನಿಯಲ್ಲಿ ಹೇಳಬೇಕಿದೆ. ಸಂಘಟಿತ ಧರ್ಮಗಳಿಂದ ‘ಸೈದ್ಧಾಂತಿಕ ಅಂತರ’ವನ್ನು ಕಾಯ್ದುಕೊಳ್ಳುವುದು ನಮ್ಮ ಸಂವಿಧಾನಕ್ಕೆ ಅತ್ಯವಶ್ಯಕ. ಇದು ಕೇವಲ ನೈತಿಕ ಆದರ್ಶವಲ್ಲ, ಅದು ರಾಜಕೀಯ ಅನಿವಾರ್ಯವೂ ಆಗಿದೆ. ದೀರ್ಘಾವಧಿಯಲ್ಲಿ ನಾವುಗಳು ಒಂದೋ ಜಾತ್ಯತೀತ ಭಾರತವನ್ನು ಹೊಂದಬಹುದು ಅಥವಾ ಭಾರತವನ್ನೇ ಕಳೆದುಕೊಳ್ಳಬೇಕಾಗಬಹುದು.

ಜಾತ್ಯತೀತತೆಯನ್ನು ಒಂದು ಪವಿತ್ರ ತತ್ವ ಎಂದಿಟ್ಟುಕೊಂಡಲ್ಲಿ, ಈ ಆದರ್ಶಕ್ಕನುಗುಣವಾಗಿ ನಮ್ಮ ‘ಜಾತ್ಯತೀತ ರಾಜಕೀಯ’ವು ಕಾರ್ಯನಿರ್ವಹಿಸಿಲ್ಲ. ಸ್ವಾತಂತ್ರ್ಯದ ಸಮಯದಿಂದ ಜಾತ್ಯತೀತ ರಾಜಕೀಯವು ಒಂದು ಜಾತ್ಯತೀತ ವಂಚನೆಯಾಗಿ ಮಾರ್ಪಾಡಾಗಿದೆ. ದೇಶ ವಿಭಜನೆಯ ನಂತರದಲ್ಲಿ ಜಾತ್ಯತೀತ ರಾಜಕೀಯವು ಒಂದು ರೀತಿಯ ಗಟ್ಟಿತನ, ನಂಬಿಕೆಯನ್ನು ಪ್ರದರ್ಶಿಸಿತ್ತು. ಆದರೆ ಕ್ರಮೇಣವಾಗಿ, ಇದು ರಾಜಕೀಯ ಅನುಕೂಲ ಮತ್ತು ವೋಟ್ ಬ್ಯಾಂಕ್ ಅನಿವಾರ್ಯತೆಯ ವಿಷಯವಾಯಿತು. ಅಲ್ಪಸಂಖ್ಯಾತ ಮತದಾರರನ್ನು ಒತ್ತೆಯಾಳಾಗಿ ಇಡುವ ಸಿನಿಕತೆಯ ರಾಜಕೀಯ ಹಾಗೂ ತಕ್ಷಣದ ಅಪ್ರಜ್ಞಾಪೂರ್ವಕ ಪ್ರತಿಕ್ರಿಯೆ ನೀಡುವಂತಹ (ನೀ ಜರ್ಕ್) ಅಲ್ಪಸಂಖ್ಯಾತವಾದವು ಜಾತ್ಯತೀತ ರಾಜಕೀಯದಾಟದ ಪ್ರಮುಖ ಅಂಶಗಳಾದವು.

ನಾವಿಂದು ಕಾಣುತ್ತಿರುವಂತೆ ಜಾತ್ಯತೀತತೆಯು ಶರಣಾಗತಿಯ ರಾಜಕೀಯಕ್ಕಿಳಿಯಲು ಮತ್ತು ಪ್ರತಿರೋಧವನ್ನು ಎದುರಿಸುವಂತಾಗಲು ಇದೇ ಕಾರಣವಾಗಿದೆ. ಜಾತ್ಯತೀತ ರಾಜಕೀಯದ ನಿಕೃಷ್ಟ ಶರಣಾಗತಿಯ ಪರಿಸ್ಥಿತಿಯನ್ನು ಅರಿಯಬೇಕಾದರೆ ಅಯೋಧ್ಯೆ ತೀರ್ಪಿನ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಮೂರು ಸಾಲಿನ ಹೇಳಿಕೆಯನ್ನು ಗಮನಿಸಿ. ಇತರ ಪ್ರಮುಖ ವಿರೋಧಪಕ್ಷಗಳ ಪ್ರತಿಕ್ರಿಯೆ ಮತ್ತು ಅವರ ಮೌನವೂ ಕಾಂಗ್ರೆಸ್‌ನ ಪ್ರತಿಕ್ರಿಯೆಗಿಂತ ಹೆಚ್ಚು ಭಿನ್ನವಾಗಿಲ್ಲ. ಈಗ ಬಂದಿರುವ ಅಯೋಧ್ಯೆ ತೀರ್ಪು ಜಾತ್ಯತೀತ ರಾಜಕೀಯವು ಎದುರಿಸುತ್ತಿರುವ ಸಂದಿಗ್ಧತೆಯ ಅಂತ್ಯವಲ್ಲ; ಇಂತಹ ಇನ್ನೂ ಅದೆಷ್ಟೋ ಕ್ಲಿಷ್ಟಕರ ಸಂಗತಿಗಳು ಪರಿಹಾರಕ್ಕಾಗಿ ಎದುರು ನೋಡುತ್ತಿವೆ.

ಸಾಂಸ್ಕೃತಿಕ ರಾಜಕೀಯದ ವಿಫಲತೆ

ಆದರೆ, ಆಷಾಢಭೂತಿತನನ, ಬೂಟಾಟಿಕೆ ಮತ್ತು ಸಿನಿಕತೆಗಳು ಮಾತ್ರ ಭಾರತದ ಜಾತ್ಯತೀತತೆಯ ನಿಜವಾದ ಸಮಸ್ಯೆಗಳಲ್ಲ. ತಮ್ಮನ್ನು ತಾವು ಜಾತ್ಯತೀತ ಎಂದು ಕರೆದುಕೊಳ್ಳುವ ಪಕ್ಷಗಳು ಮಾತ್ರವೇ ವಿಶ್ವಾಸಹೀನ ರಾಜಕಾರಣದ ಮೇಲೆ ಏಕಸ್ವಾಮ್ಯತೆಯನ್ನು ಹೊಂದಿಲ್ಲ. ಹಿಂದೂ, ಮುಸ್ಲಿಮ್ ಅಥವಾ ಸಿಖ್ ಕೋಮುವಾದದ ರಾಜಕೀಯವೂ ಇಂತಹ ಯು-ಟರ್ನ್ ಮತ್ತು ರಾಜಕೀಯ ಕುತಂತ್ರತೆಗಳಿಂದ ತುಂಬಿದೆ. ಇದಕ್ಕೆ ತದ್ವಿರುದ್ಧವಾಗಿ, ಧರ್ಮ, ನಂಬಿಕೆಯ ವಿಷಯಗಳನ್ನು ನ್ಯಾಯಾಲಯದಿಂದ ಬಗೆಹರಿಸಲು ಆಗುವುದಿಲ್ಲ ಎಂದು ಮುಂಚೆ ಬಿಜೆಪಿ ಪಟ್ಟು ಹಿಡಿದಿದ್ದನ್ನು ಹಾಗೂ ಈಗ ಇತ್ತೀಚಿಗೆ ಅದಕ್ಕೆ ನ್ಯಾಯಾಂಗದ ಬಗ್ಗೆ ಕಾಣಿಸಿಕೊಂಡ ಭಯಭಕ್ತಿಯನ್ನು ಗಮನಿಸಿ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ರಾಜಕೀಯವು ಎಷ್ಟು ವೋಟ್ ಬ್ಯಾಂಕ್ ರಾಜಕೀಯವಾಗಿದೆಯೋ, ಅಷ್ಟೇ ಬಿಜೆಪಿ ಮತ್ತು ಏಐಎಮ್‌ಐಎಮ್‌ಯ ರಾಜಕೀಯದ್ದೂ ಆಗಿದೆ.

ಭಾರತೀಯ ಜಾತ್ಯತೀತತೆಯ ವಿಫಲತೆಯು ಅದರ ಸಾಂಸ್ಕೃತಿಕ ರಾಜಕೀಯದ ವಿಫಲತೆಯಲ್ಲಿದೆ. ರಾಜಕೀಯವೆಂದರೆ ಕೇವಲ ಚುನಾವಣೆ ಗೆಲ್ಲುವುದು, ಸರಕಾರ ರಚಿಸುವುದು, ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದು ಇತ್ಯಾದಿ ಅಲ್ಲ. ಆಳವಾದ ರಾಜಕೀಯವೆಂದರೆ, ಪ್ರತಿಕೂಲ ಸಾರ್ವಜನಿಕ ಅಭಿಪ್ರಾಯದ ಸವಾಲನ್ನು ಎದುರಿಸುವುದೂ ಆಗಿದೆ ಮತ್ತು ಅದನ್ನು ಅಪೇಕ್ಷಿತ ದಿಕ್ಕಿನಲ್ಲಿ ಕೊಂಡೊಯ್ಯುವುದೂ ಆಗಿದೆ. ರಾಜಕೀಯವೆಂದರೆ, ಹೊಸ ಹೊಸ ಪದಗಳನ್ನು ಹುಟ್ಟುಹಾಕುವುದು, ಹಳೆಯ ಪದಗಳಲ್ಲಿ ಹೊಸ ಅರ್ಥಗಳನ್ನು ತುಂಬುವುದು ಹಾಗೂ ಈ ಹೊಸ ಪದಗಳನ್ನು ಮತ್ತು ಅರ್ಥಗಳನ್ನು ಜನರು ಒಪ್ಪಿಕೊಳ್ಳುವಂತೆ ಮನವರಿಕೆ ಮಾಡುವುದು. ಇದನ್ನು ಸಾಹಿತ್ಯ ಅಥವಾ ಸಿನೆಮಾ ಅಥವಾ ರಂಗಭೂಮಿಯಂತಹ ಸಾಂಸ್ಕೃತಿಕ ಕಲೆಯ ಮುಖಾಂತರ ಮಾಡಬಹುದಾಗಿದೆ. ಇದನ್ನು ರಾಜಕೀಯ ಭಾಷಣಗಳು, ಟಿವಿ ಚರ್ಚೆಗಳು ಅಥವಾ ಸರಳ ವದಂತಿಗಳ ಮುಖಾಂತರವೂ ಮಾಡಬಹುದಾಗಿದೆ.

ಇಲ್ಲಿಯೇ ಜಾತ್ಯತೀತತೆಯ ರಾಜಕೀಯವು ಸೋತಿದೆ ಹಾಗೂ ಹಿಂದುತ್ವದ ರಾಜಕೀಯ ಗೆಲುವು ಸಾಧಿಸಿದೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜಾತ್ಯತೀತತೆ ಎನ್ನುವುದು ಶ್ರದ್ಧೆಯ ವಿಷಯವಾಗಿತ್ತು. ಯಾವುದೇ ರೀತಿಯ ಕೋಮುವಾದವು ಅಸಹನೀಯವಾಗಿತ್ತು. ಇಂದು ಜಾತ್ಯತೀತತೆ ಎನ್ನುವುದು ತುಂಬಾ ದೂರದಲ್ಲಿರುವ ಹಾಗೂ ಬಿಟ್ಟುಕೊಡಬಹುದಾದ ಪರಿಕಲ್ಪನೆಯಾಗಿ ಕಂಡುಬರುತ್ತಿದೆ. ಸೆಕ್ಯೂಲರ್ (ಜಾತ್ಯತೀತ)ರನ್ನು ಸಿಕ್ಯೂಲರ್ (ರೋಗಗ್ರಸ್ತ) ಎಂದೂ, (ಲಿಬರಲ್) ಉದಾರವಾದಿಗಳನ್ನು ಲಿಬ್‌ಟಾರ್ಡ್ ಎಂದೂ ಕರೆಯುವ ಸಂದರ್ಭ ಏರ್ಪಟ್ಟಿದೆ. ಆದರೆ ಅದೇ ಸಮಯದಲ್ಲಿ ಹಿಂದುತ್ವ ಎನ್ನುವುದು ಇತಿಹಾಸದಲ್ಲಿ ಆದ ತಪ್ಪುಗಳನ್ನು (ಅನ್ಯಾಯಗಳನ್ನು) ಸರಿಪಡಿಸುವ, ಆತ್ಮಗೌರವದ ಚಳವಳಿಯಾಗಿ, ರಾಷ್ಟ್ರೀಯ ಪುನರುತ್ಥಾನದ ಘಳಿಗೆಯಾಗಿ ತನ್ನನ್ನು ತಾನು ಯಶಸ್ವಿಯಾಗಿ ಬಿಂಬಿಸಿಕೊಂಡಿದೆ.

ಜಾತ್ಯತೀತರು ತಪ್ಪಿದ್ದು ಎಲ್ಲಿ?

ಇಂತಹ ಬೃಹತ್ ಬದಲಾವಣೆ ಸಾಧ್ಯವಾಗಿದ್ದು ಹೇಗೆ? ಜಾತ್ಯತೀತತೆಯಂತಹ ಪರಿಕಲ್ಪನೆಗಳು ನಮ್ಮ ಸಂವಿಧಾನದಲ್ಲಿ ಬರೆಯಲಾಗಿದೆ ಎಂದ ಮಾತ್ರಕ್ಕೆ ಜೀವಂತವಾಗಿರಲು ಸಾಧ್ಯವಿಲ್ಲ. ಈ ಕಲ್ಪನೆಯನ್ನು ಜೀವಂತವಾಗಿಡಲು ಪ್ರತಿಯೊಂದು ತಲೆಮಾರಿಗೂ ಒಂದು ಹೊಸ ಭಾಷೆಯಲ್ಲಿ ಈ ಆದರ್ಶಗಳನ್ನು ಮರುಶೋಧನೆ ಮಾಡುತ್ತ ಸಾರ್ವಜನಿಕರೊಂದಿಗೆ ಸತತವಾದ ಮಾತುಕತೆ ಮಾಡಬೇಕಾಗುತ್ತದೆ. ನಮ್ಮ ಜಾತ್ಯತೀತ ಗಣ್ಯರು ಈ ಮಾತುಕತೆಯನ್ನು ಹಲವು ದಶಕಗಳ ಹಿಂದೆಯೇ ನಿಲ್ಲಿಸಿಬಿಟ್ಟಿದ್ದಾರೆ.

ಇದನ್ನೂ ಓದಿ: ದೀರ್ಘವಾದ ಸಮರಕ್ಕೆ ತಯಾರಿ ಮಾಡಿಕೊಳ್ಳಬೇಕೆಂಬ ಸೂಚನೆ ಇದು : ಯೋಗೇಂದ್ರ ಯಾದವ್

ಇದೇ ಸಮಯದಲ್ಲಿ ಸಂಘ ಪರಿವಾರವು ಇದನ್ನು ಮಾಡುತ್ತಲೇ ಬಂತು. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಸಂಘ ಪರಿವಾರವು ಕಳಂಕಿತಗೊಂಡು, ಅಂಚಿಗೆ ತಳ್ಳಲ್ಪಟ್ಟಿದ್ದರೂ ಈ ಕೆಲಸವನ್ನು ಮಾಡುವುದನ್ನು ನಿಲ್ಲಿಸಲಿಲ್ಲ. ಅದು ಸಾಮಾನ್ಯ ಜನರೊಂದಿಗೆ ಅವರದೇ ಭಾಷೆಯಲ್ಲಿ, ಅವರದೇ ನುಡಿಗಟ್ಟಿನಲ್ಲಿ ಮತ್ತು ಅವರ ಸಾಂಸ್ಕೃತಿಕ ಸಂವೇದನೆಗೆ ಅನುಗುಣವಾಗಿ ಸಂಭಾಷಣೆಯನ್ನು ಮುಂದುವರೆಸಿತು. ಆದರೆ ಜಾತ್ಯತೀತರು ಇವುಗಳಿಂದ ಕಳಚಿಕೊಂಡಿದ್ದರು. ಅದಕ್ಕಿಂತ ದುರದೃಷ್ಟಕರವಾಗಿ, ಜನಪ್ರಿಯ ಸಂಸ್ಕೃತಿಯೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನವನ್ನೂ ಮಾಡಲಿಲ್ಲ. ಜಾತ್ಯತೀತ ಎನ್ನುವುದು ಒಂದು ಗಣ್ಯರ ತತ್ವ ಸಿದ್ಧಾಂತ ಆಗುತ್ತಿದ್ದ ಸಂದರ್ಭದಲ್ಲಿ ಹಿಂದುತ್ವ (ಮತ್ತು ಅಲ್ಪಸಂಖ್ಯಾತರಲ್ಲಿ ಹಿಂದುತ್ವದ ಸಮನಾದದ್ದು) ಜನಪ್ರಿಯ ನಂಬಿಕೆಯಾಗಿ ಬೆಳೆಯಿತು. ಅಂತಿಮವಾಗಿ, ಜನಪ್ರಿಯ ನಂಬಿಕೆಗಳೇ ಗೆಲ್ಲುವುದನ್ನು ನಮ್ಮ ಪ್ರಜಾಪ್ರಭುತ್ವ ಖಚಿತಪಡಿಸಿಕೊಂಡಿತು.

ಧರ್ಮ ಮತ್ತು ಪರಂಪರೆಗಳ ಬಗ್ಗೆ ಇದ್ದ ಉದಾಸೀನತೆಯು ಜನಪ್ರಿಯ ನಂಬಿಕೆಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವುದನ್ನು ಖಚಿತಪಡಿಸಿಕೊಂಡಿತು ಹಾಗೂ ಪರಿಕಲ್ಪನೆಗಳ ಈ ಯುದ್ಧದಲ್ಲಿ ಸೋಲುವುದನ್ನು ನಿಶ್ಚಿತಗೊಳಿಸಿತು. ನಮ್ಮ ಸ್ವಾತಂತ್ರ ಸಂಗ್ರಾಮದ ಕಾಲದಲ್ಲಿ, ನಮ್ಮ ಬಹುತೇಕ ರಾಷ್ಟ್ರೀಯ ನಾಯಕರು ಆಳವಾಗಿ ಧಾರ್ಮಿಕ ವ್ಯಕ್ತಿಗಳಾಗಿದ್ದರೂ, ಅದೇ ಸಮಯದಲ್ಲಿ ರಾಜಿಯಾಗದ ಜಾತ್ಯತೀತರೂ ಆಗಿದ್ದರು. ಇದಕ್ಕೆ ಜವಾಹರಲಾಲ್ ನೆಹರು ಅವರು ಅಪವಾದ ಎಂತಲೇ ಹೇಳಬಹುದು. ಇತರ ನಾಯಕರು ಧರ್ಮದೊಂದಿಗೆ ಆಳವಾಗಿ ಬೆಸೆದುಕೊಂಡಿದ್ದರು, ಕೆಲವು ಬಾರಿ ಒಂದಕ್ಕಿಂತ ಹೆಚ್ಚು ಧರ್ಮಗಳೊಂದಿಗೆ ಬೆಸೆದುಕೊಂಡಿದ್ದರು. ನಮ್ಮ ಅನೇಕ ರಾಷ್ಟ್ರೀಯ ನಾಯಕರು ಭಗವದ್ಗೀತೆಯ ಮೇಲೆ ಟಿಪ್ಪಣಿಗಳನ್ನು ಬರೆದರು. ಮೌಲಾನಾ ಆಝಾದ್‌ರಂತಹ ನಾಯಕರನ್ನು ಇಸ್ಲಾಮ್‌ನ ವಿದ್ವಾಂಸ ಎಂದು ಗೌರವಿಸಲಾಗುತ್ತಿತ್ತು. ವಿನೋಬಾ ಭಾವೆ ಅವರು ಹಲವಾರು ಧರ್ಮಗಳ ಬಗ್ಗೆ ಆಳವಾದ ಅರಿವನ್ನು ಹೊಂದಿದವರಾಗಿದ್ದರು. ಆದರೂ ಒಂದು ಧರ್ಮ ಇನ್ನೊಂದು ಧರ್ಮದ ಮೇಲೆ ಪ್ರಾಬಲ್ಯ ಹೊಂದದ ಭಾರತದ ಪರಿಕಲ್ಪನೆಗೆ ಬೆಸೆದುಕೊಂಡವರಾಗಿದ್ದರು.

ಸಾಂಸ್ಕೃತಿಕ ನಿರ್ವಾತ, ರಾಜಕೀಯ ಶೋಷಣೆ

ಈ ಮೇಲೆ ಹೇಳಿದ್ದನ್ನು ಇಂದಿನ ಸಾರ್ವಜನಿಕ ಜೀವನಕ್ಕೆ ಹೋಲಿಸಿ ನೋಡಿ. ಆಳವಾಗಿ ಧಾರ್ಮಿಕವಾಗಿಯೂ ಕಟ್ಟಾ ಜಾತ್ಯತೀತರಾಗಿರುವ ಎಷ್ಟು ರಾಜಕಾರಣಿಗಳನ್ನು ನಾವಿಂದು ಗುರುತಿಸಬಹುದು? ರಾಜಕಾರಣಿಗಳನ್ನು ಬಿಟ್ಟುಬಿಡಿ, ಧಾರ್ಮಿಕ ಗ್ರಂಥಗಳೊಂದಿಗೆ ಮತ್ತು ಅದರ ಪರಂಪರೆಗಳೊಂದಿಗೆ ಬೆರಯಬಲ್ಲ, ಚರ್ಚಿಸಬಹುದಾದ ಎಷ್ಟು ಸುಶಿಕ್ಷಿತ ಭಾರತೀಯರನ್ನು ಗುರುತಿಸಬಲ್ಲೆವು? ಈ ಸಾಂಸ್ಕೃತಿಕ ನಿರ್ವಾತವು ಎಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತದೆ ಎಂದರೆ, ಅದರಲ್ಲಿ ಯಾರು ಬೇಕಾದರೂ ಧಾರ್ಮಿಕ ಪರಂಪರೆಯ ರಕ್ಷಕರೆಂದು ಘೋಷಿಸಿಕೊಳ್ಳಬಹದು. ಈ ಪರಿಸ್ಥಿತಿ ರಾಜಕೀಯ ಶೋಷಣೆಗೆ ಪಕ್ಷವಾಗಿರುವ ಸಮಯವಾಗುತ್ತದೆ.

ಇದನ್ನೂ ಓದಿ : ಅಯೋಧ್ಯೆ ಪ್ರಕರಣದ ತೀರ್ಪನ್ನು ಹೇಗೆ ಸ್ವೀಕರಿಸಬೇಕು: ಯೋಗೇಂದ್ರ ಯಾದವ್‌

ಇದು ಹಿಂದೂಯಿಸಂನ ವಿಚಾರದಲ್ಲಿ ಅತ್ಯಂತ ಹೆಚ್ಚು ವಾಸ್ತವವಾಗಿದೆ. ಜಾತ್ಯತೀತ ರಾಜಕೀಯವು ಸಾಮಾನ್ಯವಾಗಿ ಎಲ್ಲಾ ಧರ್ಮಗಳ ಕುರಿತೂ ಉದಾಸೀನ ಹೊಂದಿದೆ. ಆದರೆ ಹಿಂದೂ ಧರ್ಮವನ್ನು ವಿಶೇಷವಾಗಿ ತಳ್ಳಿ ಹಾಕುವಂತೆ ನಡೆದುಕೊಂಡಿದೆ. ಒಂದು ಕಡೆ ಆಧುನಿಕ ವಸಾಹತುಶಾಹಿಯಿಂದ ಪ್ರಭಾವಿತ ಮನಸ್ಸುಗಳು ಹಿಂದೂಯಿಸಂನಂತಹ ಅಬ್ರಾಹಾಮಿಕ್ ಅಲ್ಲದ ಧರ್ಮದೊಂದಿಗೆ ಆಳವಾದ ಇರಿಸುಮುರಿಸಿನ ಸಂಬಂಧವನ್ನು ಹೊಂದಿದ್ದಾರೆ.

ಇನ್ನೊಂದು ಕಡೆ ಜಾತಿಯಾಧಾರಿತ ಅನ್ಯಾಯವನ್ನು ವಿರೋಧಿಸುವ, ಆಧುನಿಕ ಸಮಾನತೆಯ ವಿಚಾರವನ್ನು ಹೊಂದಿರುವ ಒಂದು ಎಳೆಯು ಹಿಂದೂ ಸಾಮಾಜಿಕ ಶ್ರೇಣಿಯೊಂದಿಗೆ ವಿಶೇಷವಾದ ಸಿಟ್ಟನ್ನು ಹೊಂದಿದ್ದಾರೆ. ಇವೆರಡೂ ಸೇರಿ ಹಿಂದೂಯಿಸಂ ಎನ್ನುವುದು ಭೂಮಿಯ ಮೇಲಿರುವ ಅತ್ಯಂತ ಪ್ರತಿಗಾಮಿ, ತಿರೋಗಾಮಿ ಧರ್ಮ ಎನ್ನುವ ಭಾವನೆಯನ್ನು ಆಧುನಿಕ, ಜಾತ್ಯತೀತ ವಲಯದಲ್ಲಿ ಸೃಷ್ಟಿಸುತ್ತವೆ. ಹಿಂದೂ ಧರ್ಮದ ಮೇಲೆ ತಪ್ಪು ಮಾಹಿತಿಯ ಮತ್ತು ತೀವ್ರವಾದ ಮತ್ತು ಒರಟಾದ ದಾಳಿಯನ್ನು ನಡೆಸುವುದು ನಮ್ಮ ಚಿಂತನಾವಲಯದಲ್ಲಿ ಒಂದು ಮಾಡಲೇಬೇಕಾದ ಕಾರ್ಯವಾಗಿಬಿಟ್ಟಿತ್ತು. ಇದು ಒಂದು ರಾಜಕೀಯ ಬ್ಯಾಕ್‌ಲ್ಯಾಶ್‌ಅನ್ನು ಸೃಷ್ಟಿಸುವುದಕ್ಕೆ ಒಂದೊಳ್ಳೆ ಅವಕಾಶವನ್ನು ಮಾಡಿಕೊಟ್ಟಿತು.

ಇಷ್ಟೆಲ್ಲಾ ಸಾಕಾಗುತ್ತಿಲ್ಲ ಎಂಬಂತೆ ತಮ್ಮ ಬೇರುಗಳನ್ನು ಕಳಚಿಕೊಂಡ ಗಣ್ಯರು ಯಾವುದೇ ಭಾರತೀಯ ಭಾಷೆಯಲ್ಲಿ ಮಾತನಾಡುವಲ್ಲಿ ವಿಫಲವಾದರು. ಮೊದಲೇ ಜನರೊಂದಿಗೆ ಕಡಿತಗೊಂಡಿದ್ದ ಸಂಪರ್ಕ ಸಂಪೂರ್ಣವಾಗಿ ಬೇರ್ಪಡುವುಂತೆ ಮಾಡಿತು. ಇಲ್ಲಿಯೂ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಇರುವ ಹೋಲಿಕೆ, ವ್ಯತಿರಿಕ್ತತೆ ಅತ್ಯಂತ ಮುಖ್ಯವಾಗಿದೆ. ಆ ಸಮಯದ ನಮ್ಮ ಹೆಚ್ಚಿನ, ಬಹುತೇಕ ಎಲ್ಲ ಶ್ರೇಷ್ಠ ನಾಯಕರೂ ಇಂಗ್ಲಿಷ್ ಓದುತ್ತಿದ್ದರು. ಆದರೆ ಮಾತನಾಡುವುದು ಮತ್ತು ಬರೆಯುವುದನ್ನು ಪ್ರಮುಖವಾಗಿ ತಮ್ಮ ಭಾಷೆಗಳಲ್ಲೇ ಮಾಡಿದರು. ಸ್ವಾತಂತ್ರ್ಯೋತ್ತರದ ಜಾತ್ಯತೀತ ಗಣ್ಯರು ಏಕಭಾಷಿಕರಾಗಿ ಇಂಗ್ಲಿಷ್‌ಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದಾರೆ. ಆಳುವವರು ಮತ್ತು ಆಳಿಸಿಕೊಳ್ಳುವವರ ನಡುವೆ ಇರುವ ಈ ಸಾಂಸ್ಕೃತಿಕ ಕಂದರ ‘ಖಾನ್ ಮಾರ್ಕೆಟ್ ಗ್ಯಾಂಗ್’ ನಂತಹ ‘ವ್ಯಂಗ್ಯ’ಕ್ಕೆ ಅನುವು ಮಾಡಿಕೊಡುತ್ತದೆ.

ಇವುಗಳು ಅತ್ಯಂತ ಕಠೋರ ಮಾತುಗಳಾಗಿವೆ; ಬಹುಶಃ ಈ ಸಂಕಷ್ಟದ ಸಮಯದಲ್ಲಿ ಜಾತ್ಯತೀತ ಭಾರತದ ಪರಿಕಲ್ಪನೆಯನ್ನು ಉಳಿಸಲು ಹೆಣಗಾಡುತ್ತಿರುವ ಅನೇಕರಿಗೆ ಇದು ನೋವುಂಟು ಮಾಡಬಹುದು. ಆದರೆ ಇದು ಒಂದು ಸರಳ ಪಾಠವನ್ನು ಮುಟ್ಟಿಸುತ್ತದೆ ಎಂದು ನಾನು ಆಶಿಸುತ್ತೇನೆ; ತನ್ನ ಭಗ್ನಾವಶೇಷದಿಂದ ಜಾತ್ಯತೀತ ಭಾರತದ ಪರಿಕಲ್ಪನೆಯನ್ನು ಮರುಪಡೆಯುವುದೆನ್ನುವುದು, ಕೇವಲ ಹೇಗಾದರೂ ಮಾಡಿ ಬಿಜೆಪಿಯನ್ನು ಸೋಲಿಸುವುದಷ್ಟೇ ಅಲ್ಲ ಎಂದು ನಾವುಗಳು ಅರ್ಥ ಮಾಡಿಕೊಳ್ಳಬೇಕಿದೆ. ಇದಕ್ಕೆ ಒಂದು ರೀತಿಯ ಸಾಂಸ್ಕೃತಿಕ ರಾಜಕೀಯದ ಅವಶ್ಯಕತೆ ಇದೆ. ಈ ಹೊಸ ಸಾಂಸ್ಕೃತಿಕ ರಾಜಕೀಯವು ಸಾಮಾನ್ಯ ಜನರೊಂದಿಗೆ ಅವರದೇ ಆದ ಭಾಷೆಯಲ್ಲಿ, ನೈತಿಕ ನುಡಿಗಟ್ಟಿನಲ್ಲಿ, ಸಾಂಸ್ಕೃತಿಕ ಸಂವೇದನೆಯಲ್ಲಿ ಸತತವಾಗಿ ಮಾತುಕತೆ ನಡೆಸುವುದಕ್ಕೆ ಬದ್ಧವಾಗಿರಲು ಇಚ್ಛಿಸುವ ಒಂದು ಸಾಂಸ್ಕೃತಿಕ ರಾಜಕೀಯವಾಗಿರಬೇಕಿದೆ. ಇದಕ್ಕೆ ಯಾವುದೇ ಅಡ್ಡಹಾದಿ (ಶಾರ್ಟ್ ಕಟ್)ಗಳಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...