Homeಅಂತರಾಷ್ಟ್ರೀಯಇರಾನ್ ಮೇಲೆ ಅಮೆರಿಕದ ಹದ್ದಿನ ಕಣ್ಣು

ಇರಾನ್ ಮೇಲೆ ಅಮೆರಿಕದ ಹದ್ದಿನ ಕಣ್ಣು

- Advertisement -
- Advertisement -

| ಭರತ್ ಹೆಬ್ಬಾಳ |

ದಶಕಗಳಿಂದ ಮಧ್ಯಪ್ರಾಚ್ಯ ಏಶಿಯಾವನ್ನು ಯುದ್ದ ನಕ್ಷೆಯಂತೆ ಉಪಯೋಗಿಸುತ್ತಿರುವ ಪಾಶ್ಚಾತ್ಯ ಶಕ್ತಿಗಳು ಈಗ ಇರಾನ್ ಮೇಲೆ ಕಣ್ಣಿಟ್ಟಿದೆ. ಪುರಾತನ ಕಾಲದಿಂದಲೂ ದೀರ್ಘ ಮತ್ತು ಮಹತ್ತರ ಇತಿಹಾಸ ಹೊಂದಿರುವ ಇರಾನ್, ಪ್ರಪಂಚದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ನಿಕ್ಷೇಪಗಳು ಮತ್ತು ಪ್ರಪಂಚದ ಎರಡನೇ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರ.

ಅಮೆರಿಕದ ಕಾರ್ಯದರ್ಶಿ ಕೋಲಿನ್ ಪೊವೆಲ್ 2003, ಫೆಬ್ರುವರೀ 5ನೇ ತಾರೀಕು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎದುರು ಒಂದು ವರದಿಯನ್ನು ನೀಡಿ ಮಾಡಿದ ಭಾಷಣ ಇರಾಕ್ ವಿರುದ್ದದ ಯುದ್ದಕ್ಕೆ ದಾರಿಮಾಡಿಕೊಟ್ಟಿತ್ತು. ಈ ಭಾಷಣದಲ್ಲಿ ಪೊವೆಲ್ ಅವರು ಸದ್ದಾಂ ಹುಸೇನ್ ಮತ್ತವರ ಆಡಳಿತವು ಉಗ್ರವಾದ ಪ್ರತಿಪಾದಿಸುವ ಅಲ್‍ಖೈದಾ ಅಂಗ ಸಂಘಟನೆಯ ಸಹಯೋಗದೊಂದಿಗೆ ರಾಸಾಯನಿಕ ಆಯುಧಗಳು ಮತ್ತು ಇನ್ನಷ್ಟು ವಿಧ್ವಂಸಕಾರಿ ಆಯುಧಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಮತ್ತದರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಪ್ರತಿಪಾದಿಸಿದ್ದರು. ತಾವು ಮಂಡಿಸಿದ ವರದಿಯಲ್ಲಿ ಬ್ರಿಟನ್ ಗೂಢಾಚಾರಿ ಸಂಸ್ಥೆ, ಉಪಗ್ರಹ ಚಿತ್ರಗಳು, ಆಡಿಯೋ ರೆಕಾರ್ಡಿಂಗ್ಸ್ ಮತ್ತು ಇನ್ನೂ ಇತರೆ ನಿರಾಕರಿಸಲಾಗದಂಥ ಪುರಾವೆಗಳೊಂದಿಗೆ ಇದೆ ಎಂದು ಒತ್ತು ಮಾಡಿ ಹೇಳಿದ್ದರು. ಈ ಘಟನೆಯ ಒಂದು ತಿಂಗಳ ನಂತರ ಅಮೆರಿಕ ಮತ್ತು ಹಿಂಬಾಲಕ ಪಡೆಗಳು ಇರಾಕ್ ಅನ್ನು ಬಾಂಬ್ಗಳ ಸುರಿಮಳೆಗೈದು ಧ್ವಂಸಗೊಳಿಸಿ ಇಲ್ಲಿಯವರೆಗೂ ಹತ್ತು ಲಕ್ಷಕ್ಕೂ ಮೇಲ್ಪಟ್ಟ ಜನ ಪ್ರಾಣ ಕಳೆದುಕೊಂಡಿದ್ದಾರೆ, ಅಷ್ಟೇ ಮಂದಿ ಆಂತರಿಕ ಹಾಗೂ ಅಂತರ್ರಾಷ್ಟ್ರೀಯ ನಿರಾಶ್ರಿತರಾಗಿದ್ದಾರೆ ಮತ್ತು ಇದಕ್ಕಾಗಿ ಅಮೆರಿಕ 1.06 ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ. ಇರಾಕಿನಲ್ಲಿ ತಾನು ಹುಟ್ಟು ಹಾಕಿದ್ದ ಕ್ರೌರ್ಯದಿಂದ ಐಸಿಸ್ ಹುಟ್ಟಲು ಕಾರಣವಾಯಿತು.

ಆದರೆ ಬಹುತೇಕ ಮಾಧ್ಯಮಗಳು ಮರೆಮಾಚಿದ ಸಂಗತಿಯೆಂದರೆ ಕೋಲಿನ್ ಪೊವೆಲ್ ಮಂಡಿಸಿದ ಇರಾಕ್ ವಿರುದ್ದದ ವರದಿ ಒಂದು ಕೃತಿಚೌರ್ಯ ವರದಿಯಾಗಿದ್ದು ಅದನ್ನು ಕೇಂಬ್ರಿಡ್ಜ್ ಪ್ರೋಫೆಸರ್ ಗ್ಲೆನ್ ರಾಂಗ್ವಾಲ ಹೊರತಂದ ವಾಸ್ತವವನ್ನು ಕೆಲವೇ ಕೆಲವು ಮಾಧ್ಯಮಗಳು ಪ್ರಕಟಿಸಿದ್ದವು. ಆ ಹತ್ತೊಂಬತ್ತು ಪುಟಗಳ ವರದಿಯಲ್ಲಿ 6ರಿಂದ 16ರ ಪುಟಗಳು ಆಕ್ಸ್‍ಫರ್ಡ್ ಯೂನಿವರ್ಸಿಟಿ ವಿದ್ಯಾರ್ಥಿಯ ಥೀಸಿಸ್ ಇಂದ ನೇರ ಕಾಪೀ ಪೇಸ್ಟ್ ಮಾಡಿದ ವರದಿ. ಆಗಿನ ಬ್ರಿಟಿಷ್ ಅಧ್ಯಕ್ಷ ಟೋನೀ ಬ್ಲೇರ್ ಆಫೀಸಿನಿಂದ ಬಂದದ್ದು ಎಂದು ಹೇಳಲಾಗುತ್ತಿದ್ದ ವರದಿ ಒಂದು ದೊಡ್ಡ ಕೃತಿಚೌರ್ಯ ದಾಖಲೆ. ಈ ಸುಳ್ಳು ದಾಖಲೆಯಿಂದ ತಮ್ಮೆಲ್ಲವನ್ನು ಕಳೆದುಕೊಂಡ ಇರಾಕ್ ಜನತೆ ಅತಿ ಕೆಟ್ಟ ಪರಿಣಾಮವನ್ನು ಎದುರಿಸುತ್ತಿದೆ. ಅಮೆರಿಕ ಮತ್ತದರ ಮಿತ್ರಪಡೆಗಳು ಉಪಯೋಗಿಸಿದ ಡೆಪ್ಲೀಟೆಡ್ ಯುರೇನೀಯಮ್ ಬಾಂಬ್ನಿಂದಾಗಿ ಆ ಪ್ರದೇಶಗಳಲ್ಲಿ ಹುಟ್ಟುವ ಅರ್ಧದಷ್ಟು ಮಕ್ಕಳು ಬರ್ತ್ ಡೆಫೆಕ್ಟ್ಸ್‍ಗಳಿಂದ ಹುಟ್ಟುತ್ತಿವೆ. 45% ಮಕ್ಕಳು ಹುಟ್ಟುವ ಮುಂಚಿತವಾಗಿ ಗರ್ಭದಲ್ಲೇ ಅಸುನೀಗುತ್ತವೆ. ಈ ಸಂಖ್ಯೆ ಯುದ್ದಕ್ಕೂ ಮುಂಚೆ 10%ಗಿಂತಲೂ ಕಡಿಮೆ ಇತ್ತು. ಇರಾಕ್‍ನಲ್ಲಿರುವ ಕಚ್ಚಾ ತೈಲವನ್ನು ಲಪಟಾಯಿಸಲು ಅಮೆರಿಕ ಕೊಟ್ಟ ಸಬೂಬು “ಸದ್ದಾಂ ತೊಲಗಿಸಿ ಪ್ರಜಾತಂತ್ರ (“ವಾಸ್ತವವಾಗಿ ಪಾಶ್ಚಾತ್ಯ ಬಂಡವಾಳಶಾಹಿ ಪ್ರಜಾತಂತ್ರ”) ತೆರುತ್ತೇವೆ” ಎಂದು.

ಮಧ್ಯಪ್ರಾಚ್ಯ ಕಚ್ಚಾ ತೈಲದ ನಿಯಂತ್ರಣವನ್ನು ತಮ್ಮ ತಮ್ಮ ಬಹುರಾಷ್ಟ್ರೀಯ ಕಂಪನಿಗಳ ಒಡೆತನದಲ್ಲಿಯೇ ಇಟ್ಟುಕೊಳ್ಳಲು ಈಗ ಮತ್ತೆ ಅದೇ ಯುದ್ದ ರಾಗವನ್ನು ಇರಾನ್ ವಿರುದ್ಧ ಉಪಯೋಗಿಸುತ್ತಿದ್ದಾರೆ. ದಶಕಗಳಿಂದ ಮಧ್ಯಪ್ರಾಚ್ಯ ಏಶಿಯಾವನ್ನು ಯುದ್ದ ನಕ್ಷೆಯಂತೆ ಉಪಯೋಗಿಸುತ್ತಿರುವ ಪಾಶ್ಚಾತ್ಯ ಶಕ್ತಿಗಳು ಈಗ ಇರಾನ್ ಮೇಲೆ ಕಣ್ಣಿಟ್ಟಿದೆ. ಪುರಾತನ ಕಾಲದಿಂದಲೂ ದೀರ್ಘ ಮತ್ತು ಮಹತ್ತರ ಇತಿಹಾಸ ಹೊಂದಿರುವ ಇರಾನ್, ಪ್ರಪಂಚದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ನಿಕ್ಷೇಪಗಳು ಮತ್ತು ಪ್ರಪಂಚದ ಎರಡನೇ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರ. 1953ರಲ್ಲಿ ಅಮೆರಿಕ ಮತ್ತು ಬ್ರಿಟಿಷ್ ನಡೆಸಿದ ಕ್ಷಿಪ್ರಕ್ರಾಂತಿಯಲ್ಲಿ ಇರಾನ್ ದೇಶದ ಕಚ್ಚಾ ತೈಲ ನಿಕ್ಷೇಪಗಳ ರಾಷ್ಟ್ರೀಕರಣ ಮಾಡಲೆತ್ನಿಸಿದ ಮೊಹಮ್ಮೆದ್ ಮೊಸ್ಸಾದೇಘ್ನನ್ನು ಕಿತ್ತೊಗೆದು ತನ್ನ ಕೈಗೊಂಬೆ ಶಾಹ್ ರೆಜû ಪಲ್ಹಾವಿ ಯನ್ನು ಕೂರಿಸಿತು. ಶಾಹ್ ಆಡಳಿತ ಇರಾನಿನ ಜನರ ಮೇಲೆ ಅತ್ಯಂತ ಕ್ರೂರವಾಗಿತ್ತು. 1979 ಇಸ್ಲಾಮಿಕ್ ಕ್ರಾಂತಿಯ ಮೂಲಕ ಇರಾನಿನ ಜನತೆ ಶಾಹ್ ಮತ್ತು ತಮ್ಮ ದೇಶದಲ್ಲಿನ ಪಾಶ್ಚಾತ್ಯ ಹಸ್ತಕ್ಷೇಪವನ್ನು ತೊಲಗಿಸಿತು ಮತ್ತು ತನ್ನ ತೈಲ ಬಾವಿಗಳನ್ನು ಹಿಂಪಡೆಯಿತು. ಆಗಿನಿಂದಲೂ 40 ವರ್ಷಗಳ ಕಾಲ ಸರಕುಗಳು, ಔಷಧಿಗಳು, ಆರ್ಥಿಕ, ವೈಜ್ಞಾನಿಕ ನಿರ್ಬಂಧಗಳನ್ನು ಎದುರಿಸುತ್ತಾ ಬಂದಿದೆ.

ನಲವತ್ತು ವರುಷಗಳಿಂದ ಈ ನಿರ್ಬಂಧಗಳ ನಡುವೆಯೂ ಇರಾನ್ ಸಾಕಷ್ಟು ಸಾಧಿಸಿದೆ. ಪ್ರತಿರೋಧದ ಹೆಸರಿನಲ್ಲಿ ಇಸ್ಲಾಮಿಕ್ ಕ್ರಾಂತಿಯ ಆಶಯಗಳಿಗೆ ನಿಷ್ಠೆಯಿಂದ ದುಡಿಯುವ ಇರಾನಿಯನ್ ರೆವೊಲ್ಯೂಶನರೀ ಗಾರ್ಡ್ಸ್ ಸೇನೆ. ಕ್ಯೂಬ ನಂತರ ನಿರ್ಬಂಧಗಳ ಹೊರತಾಗಿಯೂ ಪ್ರಗತಿ ಸಾಧಿಸಿರುವುದೇ ಇರಾನಿನ ಬಹುದೊಡ್ಡ ಸಾಧನೆ. ಇರಾಕಿನ ದ್ವಂಸದ ನಂತರ ಅಲ್ಲಿನ ಸ್ಥಳೀಯ ನಾಯಕತ್ವವನ್ನು ಇರಾನ್ ಬೆಳೆಸಿದೆ. ಇಸ್ರೇಲ್ಗೆ ಸವಾಲೊಡ್ಡುವ ಲೆಬೆನನ್ ಹೆಜ್ ಬೊಲ್ಲ ಬೆಳೆಸಿದೆ, ಸೌದಿಗೆ ಸವಾಲೊಡ್ಡುವ ಹೌತಿ ಪ್ರತಿರೋಧವನ್ನು ಹುಟ್ಟು ಹಾಕಿದೆ ಇರಾನ್. ತನ್ನದೇ ಕ್ಷಿಪಣಿಗಳನ್ನು ತಯಾರಿಸುವುದೇ ಅಲ್ಲದೆ ಹೊರದೇಶಗಳ ವೈಜ್ಞಾನಿಕ ಸಹಾಯವಿಲ್ಲದೆ ಅಣು ವಿಜ್ಞಾನದಲ್ಲೂ ಬಹಳಷ್ಟು ಸಾಧಿಸಿದೆ. ಮುಖ್ಯವಾಗಿ ಇರಾನ್ ಏಳಿಗೆಯನ್ನು ಸಹಿಸಲಾಗದ ಸೌದಿ ಮತ್ತು ಇಸ್ರೇಲ್ ಅಮೆರಿಕದ ಯುದ್ದಕೋರ ಬಣವನ್ನು ಯುದ್ದಕ್ಕಾಗಿ ಪ್ರೇರೇಪಿಸುತ್ತಿದ್ದಾರೆ. ಇದರ ಸಲುವಾಗಿಯೇ ಒಬಾಮಾ ಆಡಳಿತ ಚೀನಾ, ರಶಿಯ, ಜರ್ಮನೀ, ಫ್ರಾನ್ಸ್, ಇರಾನ್ ಜೊತೆ ಮಾತುಕತೆ ನಡೆಸಿ Joint Comprehensive Plan of Action (JCPOA) ಒಪ್ಪಂದವನ್ನು 2015 ಜುಲೈ ತಿಂಗಳಲ್ಲಿ ಮಾಡಿಕೊಂಡಿತ್ತು. ಅದನ್ನು ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಏಕಪಕ್ಷೀಯವಾಗಿ ಮುರಿದು ಮತ್ತೆ ಯುದ್ದದ ಮಾತುಗಳನ್ನು ಆಡುತ್ತಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಣ ಈ ಬಿಕ್ಕಟ್ಟು 1979ರ ಬಿಕ್ಕಟ್ಟನ್ನು ನೆನಪಿಸುತ್ತಿದೆ.

ಹದಿನಾರು ವರ್ಷದ ಹಿಂದೆ ಕೋಲಿನ್ ಪೊವೆಲ್ ಹೇಗೆ ಸುಳ್ಳು ಹೇಳಿ ಇರಾಕ್ ವಿರುದ್ದದ ಯುದ್ದ ಶುರು ಮಾಡಿದ್ದಾರೋ ಹಾಗೆ ಇಸ್ರೇಲ್ನ ಬೆಂಜಮಿನ್ ನೆತನ್ಯಾಹು ಇರಾನ್ ಅಣು ಬಾಂಬ್‍ಗಳನ್ನು ತಯಾರಿಸುತ್ತಿದೆ ಎಂದು ವಿಶ್ವ ಸಂಸ್ಥೆಗೆ ಸುಳ್ಳು ಹೇಳಿ ಯುದ್ದಕ್ಕೆ ಸಜ್ಜಾಗುತ್ತಿದ್ದಾರೆ. ಜಾರ್ಜ್ ಬುಷ್ ಹೇಗೆ ಇರಾಕ್ ಅನ್ನು ಬೆದರಿಸಿ ದಾಳಿ ನೆಡೆಸಿದನೋ ಅದೇ ರೀತಿ ಟ್ರಂಪ್ ಇರಾನ್ ವಿರುದ್ದ ಬೆದರಿಕೆಗಳನ್ನು ಒಡ್ಡುತ್ತಿದ್ದಾನೆ. ಅಮೆರಿಕದ ಮಾಧ್ಯಮಗಳು ಕೂಡ (ಲಿಬರಲ್ ಪತ್ರಿಕೆಗಳು ಸೇರಿದಂತೆ) ಯುದ್ದವನ್ನು ಉತ್ತೇಜಿಸುವ ಪ್ರಚಾರವನ್ನೇ ಪತ್ರಿಕೋದ್ಯಮವನ್ನಾಗಿ ಮಾಡಿಕೊಂಡಿದೆ. ಈಗ ಅದು ಇರಾನಿನ ಮೇಲೆ ಕಡಿಮೆ ಇಳುವರಿ ಇರುವ ನಿರ್ದಿಷ್ಟ ಅಣು ಬಾಂಬ್ಗಳನ್ನು ಹಾಕಬೇಕು ಎಂಬ ಸಲಹೆಯನ್ನು ಟ್ರಂಪ್ ಆಡಳಿತಕ್ಕೆ ನೀಡುತ್ತಿದೆ. ಸೌದಿ, ಇಸ್ರೇಲ್, ಅಮೆರಿಕ ಒಂದು ಕಡೆಯಾದರೆ ಇರಾನ್, ರಶಿಯ, ಚೀನಾ, ಸಿರಿಯ, ಹಿeóïಬೊಲ್ಲ ಇನ್ನೊಂದು ಕಡೆ.

ಆದರೆ ಇರಾನ್ ಇವೆಲ್ಲದಕ್ಕೂ ಸಜ್ಜಾಗಿದೆ ಎಂದು ಸ್ಪಷ್ಟ ಸಂದೇಶ ಅಮೆರಿಕಗೆ ರವಾನಿಸಿದೆ. ತನ್ನ ಮೇಲೆ ದಾಳಿ ಆದಲ್ಲಿ ಅಮೆರಿಕ ಮಿಲಿಟರೀ ಬೇಸ್ ಇರುವ ತನ್ನ ಸುತ್ತಮುತ್ತಲಿನ ರಾಷ್ಟ್ರಗಳೆಲ್ಲವನ್ನು ಶತ್ರು ರಾಷ್ಟ್ರಗಳು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿಕೆ ಕೊಟ್ಟಿದೆ. ಕಾನೂನುಬಾಹಿರ ನಿರ್ಬಂಧಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಇರಾನ್ ಹೇಗೆ ಪುಟಿದೇಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಚೀನಾ ಮತ್ತು ರಶಿಯ ಕೂಡ ಬಲವಾಗಿ ಇರಾನ್ ಜೊತೆಗೆ ನಿಂತರೆ ಭಾರತ ಅಮೆರಿಕ ಮಾತುಗಳನ್ನು ಕೇಳಿ ಮೇ ತಿಂಗಳಿನಿಂದ ಇರಾನ್‍ನಿಂದ ತೈಲ ಆಮದು ನಿಲ್ಲಿಸಿದೆ. ಇರಾನ್ ವಿರುದ್ದ ಅಮೆರಿಕ ದಾಳಿ ಮಾಡಿದ್ದೆ ಆದಲ್ಲಿ ಅದರ ಪರಿಣಾಮ ಪ್ರಪಂಚದ ಎಲ್ಲ ದೇಶಗಳನ್ನು ತೀವ್ರ ಬಿಕ್ಕಟ್ಟಿಗೆ ತಳ್ಳುತ್ತದೆ. ತೈಲ ಬೆಲೆ ಗಗನಕ್ಕೇರುತ್ತವೆ. 1928 ರಲ್ಲಿ ಕಾಣಿಸಿಕೊಂಡಿದ್ದ ಆರ್ಥಿಕ ಕುಸಿತಕ್ಕಿಂತ ತೀವ್ರವಾಗಿರುತ್ತದೆ ಎಂದು ಆರ್ಥಿಕ ವಿಶ್ಲೇಷಕರು ಊಹಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...