Homeಕರ್ನಾಟಕಎಸ್‍ಬಿಎಂ ಮತ್ತು ಎಟಿಎಂಗಳು, ಗಣಿಧೂಳು ಕಾಣದಂತೆ ಪೌಡರ್ ಮೆತ್ತಿರುವ ಆನಂದ್‍ಸಿಂಗ್‍ಗಳೂ….

ಎಸ್‍ಬಿಎಂ ಮತ್ತು ಎಟಿಎಂಗಳು, ಗಣಿಧೂಳು ಕಾಣದಂತೆ ಪೌಡರ್ ಮೆತ್ತಿರುವ ಆನಂದ್‍ಸಿಂಗ್‍ಗಳೂ….

‘ಮೊಟ್ಟೆ ಮೊದಲೋ, ಕೋಳಿ ಮೊದಲೋ ಅನ್ನೋ ಥರ ಆಗಿದೆ. ರಾಜೀನಾಮೆ ಮೊದಲೋ, ಅನರ್ಹತೆ ಮೊದಲೋ ಅನ್ನಂಗಿಲ್ಲ.. ಎರಡೂ ಒಟ್ಟಿಗೆ ಸಂಬಂಧ ಹೊಂದಿವೆ...’

- Advertisement -
- Advertisement -

‘ಶಾಸಕರು (ಮುಂಬೈನಲ್ಲಿರುವವರು) ರಾಜೀನಾಮೆ ನೀಡುವುದನ್ನು ಅಂಗೀಕರಿಸದಿರುವುದು ಅವರ ಬದುಕುವ ಹಕ್ಕನ್ನು ಕಿತ್ತುಕೊಂಡಂತೆ. ಅವರು ರಾಜೀನಾಮೆ ನೀಡಿ ಬೇರೆ ವೃತ್ತಿಗೆ ಹೋಗಬಹುದು….’

ಅರೆ ಇವ್ನಾ, ಅಂದರೆ ಈಗ ರಿಯಲ್ (ಎ)ಸ್ಟೇಟ್‍ಗಾಗಿ ಫೈಟ್ ಮಾಡ್ತಿರೋ ಎಸ್‍ಬಿಎಂ (ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ), ಎಂಟಿಬಿ ನಾಗರಾಜ್, ವರ್ಷದಿಂದ ಕುಮಟಳ್ಳಿ ಎಳಕೊಂಡು ಜಾರುತ್ತಲೇ ಇದ್ದರೂ ಡೆಸ್ಟಿನೇಷನ್ ತಲುಪಲು ತಿಣುಕಾಡ್ತಿರೋ ಜಾರಕಿಹೊಳಿ, ಗಣಿಧೂಳು ಕಾಣದಂತೆ ಪೌಡರ್ ಮೆತ್ತಿಕೊಂಡಿರೋ ಆನಂದಸಿಂಗ್, ಫೇಸ್‍ಬುಕ್‍ನಲ್ಲೇ ಕ್ಷೇತ್ರದ ಜನರ ಸೇವೆ ಮಾಡ್ತೀರೋ ಶಿವರಾಮ್ ಹೆಬ್ಬಾರ್, ಮುಂಬೈ ದಂಧೆ ಮೂಲಕವೇ ಇಲ್ಲಿ ಶಾಸಕರಾಗಿ ಮತ್ತೆ ಮುಂಬೈ ತಲುಪಿರೋ ನಾರಾಯಣಗೌಡ, ನಾಯಕರಿಗೆ ‘ಸಕಲ’ ವ್ಯವಸ್ಥೆ ಮಾಡಬಲ್ಲ ಚತುರ ಸುಧಾಕರ್, ಸಚಿವಗಿರಿ ಸಿಕ್ಕರೂ ಓಡಿ ಹೋಗಿರುವ ಶಂಕರ್, ನಾಗೇಶ್…….ಅಬ್ಬಬ್ಬಾ, ರಾಜೀನಾಮೆ ಸ್ವೀಕರಿಸದೇ ಇದ್ದರೆ ಇವರ ಬದುಕುವ ಹಕ್ಕಿನ ಉಲ್ಲಂಘನೆ ಆಗುತ್ತಾ?

ಅಯ್ಯೋ ಶಿವನೇ, ಇವರೆಲ್ಲ ರಾಜೀನಾಮೆ ನೀಡಿ ಬೇರೆ ವೃತ್ತಿಗೆ ಹೋಗಬಹುದಂತೆ! ‘ಬೇರೆ’ ಅಂದರೆ ಏನರ್ಥ? ಈಗಿರುವ ಶಾಸಕ ‘ವೃತ್ತಿ’ಯಿಂದ ಇನ್ನೊಂದು ದಂಧೆಗೆ ಅಲ್ಲವೇ? ಹಂಗಂದ್ರ, ಶಾಸಕನಾಗಿರುವುದೂ ಒಂದು ವೃತ್ತಿ ಅಂತೀರಾ ರೋಹ್ಟಗಿ ಸಾಹೇಬರೇ? ಇವರ್ಯಾರು ಈಗ ಬೇರೆ ವ್ಯವಹಾರವನ್ನೇ ಮಾಡ್ತಿಲ್ಲವೇ? ಈ ಪುಣ್ಯಾತ್ಮರು ಕ್ಷೇತ್ರವನ್ನೇ ಮರೆತು ಎಲ್ಲೋ ಓಡಿ ಹೋಗಿದ್ದಾರಲ್ಲ, ಅದು ನಮ್ಮ ಅಂದರೆ ಮತದಾರರ ಹಕ್ಕಿನ ಉಲ್ಲಂಘನೆ ಅಲ್ಲವೇ? ನಮಗಂತೂ ಗೊತ್ತಾಗ್ತಿಲ್ಲ. ಬಿಡ್ರಿ, ಅಲ್ಲಿ ಕುಳಿತ ಮೂರ್ಮಂದಿನೇ ತಲೆ ಕೆರೆದುಕೊಂಡು ನಾಳೆವರೆಗೆ ಏನ್ ಹೇಳಕ್ಕಾಗಲ್ಲ ಅಂದವ್ರೆ, ನಮ್ಮಂಥವರಿಗೇನು ಗೊತ್ತಾಗುತ್ತೆ…..

‘ಮೊಟ್ಟೆ ಮೊದಲೋ, ಕೋಳಿ ಮೊದಲೋ ಅನ್ನೋ ಥರ ಆಗಿದೆ. ರಾಜೀನಾಮೆ ಮೊದಲೋ, ಅನರ್ಹತೆ ಮೊದಲೋ ಅನ್ನಂಗಿಲ್ಲ.. ಎರಡೂ ಒಟ್ಟಿಗೆ ಸಂಬಂಧ ಹೊಂದಿವೆ…’

ಕರೆಕ್ಟು ವಕೀಲರೇ, ಫೆಬ್ರುವರಿ 11ಕ್ಕೆ ಮೊಟ್ಟೆಯೇ (ಜಾರಕಿ, ಕುಮಟಳ್ಳಿ ಅನರ್ಹತೆ) ಕೈಗೇ ಸಿಕ್ಕಿತ್ತಲ್ಲ್ಲ? ಇಲ್ಲಿವರೆಗೆ ಅದನ್ನ ಕೋಳಿ ಮಾಡೋಕೆ ಹೊರಟಿದ್ದರಾ? ಹುಂಜಗಳ ಸಹವಾಸದಲ್ಲಿ ಮೈಮರೆತು ಬಿಟ್ಟರಾ ನಿಮ್ಮ ಸಾಹೇಬರು…?

‘ಜುಲೈ 5ರಿಂದ 11ರವರೆಗೆ ಸ್ಪೀಕರ್ ಏನ್ ಮಾಡ್ತಿದ್ದರು?  ರಾಜೀನಾಮೆ ಅಂಗೀಕಾರ ಮಾಡೋಕೆ ಅಷಟೊಂದು ಟೈಮ್ ಬೇಕಿತ್ತಾ?’

ಪಟ್ಟಂತ ಡಿಸೈಡ್ ಮಾಡಬಹುದಿತ್ತು. ಆದರೆ ಸ್ಟಡಿ ಮಾಡಬೇಕು, ವಿಚಾರಣೆ ಮಾಡಬೇಕು ಅಲ್ಲವಾ? ಹಂಗೆಲ್ಲ ಏಕಾಏಕಿ ನಿರ್ಧಾರ ತಗೊಳ್ಳಕ್ಕೆ ಸಾಧ್ಯವಾ? ಈಗ ನೋಡಿ ಮುಂಬೈವಾಲಾಗಳು ದೆಹಲಿಗೆ ಅರ್ಜಿ ಸಲ್ಲಿಸಿ ಎಷ್ಟು ದಿನಾ ಆಯ್ತು? ನಿರ್ಧಾರ ತಗೊಳ್ಳಕ್ಕೆ ಆಯ್ತಾ? ತಲೆಕೆಟ್ಟು ಕೆರ ಹಿಡಿದು, ನೀವೇ ಒಂದ್ ಸಲ ಮುಂದಕ್ಕೆ ಹಾಕಿದ್ರಿ. ಇವತ್ ನೋಡಿದ್ರೆ 4 ತಾಸು ವಿಚಾರಣೆ ನಡೆಸಿದರೂ ಮೂರ್ಮಂದಿಗೆ ನಿರ್ಣಯ ತಗಳಕ್ಕೆ ಆಗ್ಲಿಲ್ಲ. ಅಂಥದ್ದರಲ್ಲಿ ಒಬ್ಬರೇ ಸ್ಪೀಕರ್ ಪಟ್ಟಂತ ನಿರ್ಣಯ ಕೈಗೊಳಬೇಕಿತ್ತು ಅನ್ನಾದು ನ್ಯಾಯವೇ ಸ್ವಾಮಿ?

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...