HomeUncategorizedಅಣುವೆಂಬ ಅಣು

ಅಣುವೆಂಬ ಅಣು

- Advertisement -
- Advertisement -

ಬೆರಳುಗಳು ಹಾಗೆ ಕೆಳಗೆ ಬೀಳುತ್ತಲಿದ್ದವು. ತೋಡುವವನಿಗೆ ಅರಿವೆ ಇರಲಿಲ್ಲ. ರಕ್ತ ಮಣ್ಣಿನಲ್ಲಿ ಮಣ್ಣಾಗಿ ಹೋಗಹತ್ತಿತ್ತು. ಮಣ್ಣಿನ ಬಣ್ಣದಿಂದಲೋ, ರಕ್ತದ ಬಣ್ಣದಿಂದಲೋ ಎರಡು ಒಂದೇ ಆಗಿದ್ದವು.
ಕೆಳಗೆ ಬಿದ್ದ ಆಕೃತಿ ಉದ್ದನೆಯ ಡೊಣ್ಣೆ ಹುಳುವೋ ಎಂದು ತೆಗೆÉದುಕೊಳ್ಳಲು ಹೋz.À ತನಗೆ ಬೆರಳೆ ಇರಲಿಲ್ಲ. ಒಂದು ಕತ್ತಿ ಇಲ್ಲ, ಮೊನಚಾದ ಯಾವ ಆಕೃತಿ ಇಲ್ಲ. ತನ್ನ ಬೆರಳು ಕೆಳಗೆ ಬಿದ್ದಿದೆ. ಅದೆ, ಅದು ಕೆಳಗೆ ಬಿದ್ದಾಗಲೂ ಗೊತ್ತಾಗಲಿಲ್ಲ.
ಅವನಿಗೆ ಭಯವಾಯಿತು, ಆತ ಕೇಳಿದ್ದ, ಇಲ್ಲಿ ಅಗಿಯಲು ಹೋದರೆ ಬೆರಳುಗಳು ತಿಳಿಯದ ಹಾಗೆ ಕೆಳಗೆ ಬೀಳುತ್ತವೆ ಎಂದು, ಇದು ನಿಜವಾಗಿದೆ. ನೋವಿಲ್ಲದೆ ಅದು ಭಾವವಿಲ್ಲದೆ, ಸ್ಪರ್ಶವಿಲ್ಲದೆ ಬೆರಳುಗಳು ಕೆಳಗೆ ಬಿದ್ದಿದ್ದವು. ಚಾಕು ಚೂರಿ ರಿಕಾಪುಗಳು ಹಾಗೆ ಶೂನ್ಯದಲ್ಲಿ ಪಳಪಳ ಹೊಳೆದಂತಾಯಿತು.
ಆ ಗವಿ ಗಂವೆನ್ನುತ್ತಿತ್ತು, ಬಾವಲಿಗಳು ತಲೆಕೆಳಗಾಗಿ ಜೋತು ಬಿದ್ದು ಮಲಗಿದ್ದವು, ಅಗಿಯುವಿಕೆ ನಿಲ್ಲಿಸಲೋ ಅಥವಾ ಏನು ಮಾಡುವುದು? ಬೆರಳು ಕಳೆದುಕೊಂಡ ಮೇಲೆ ಅಗೆಯುವುದೇತಕ್ಕೆ? ಇನ್ನೂ ಸ್ವಲ್ಪವಿದ್ದರೆ ಅಂಗೈ, ಕೈ, ತಲೆ, ಕಾಲು ಕಾಲ್ಬೆರಳು ಇಡೀ ಸಮಸ್ತ ದೇಹವೇ ಇಲ್ಲವಾಗಬಹುದೇನೋ ಹಾಗೆಯೇ ಆ ಗವಿಯಿಂದ ಹೊರಬಂದ.
ಕಣ್ಣಿಗೆ ಕಾಣದ ಆ ಅಮೂರ್ತ ಯಾವುದು?
ಬಯಲು ಬಾಗಿಲೊಳಗೆ ನಿಂತ ಯಾವದೋ ರಾಕ್ಷಸವೋ, ದೆವ್ವವೋ, ಭೂತವೋ ಕರಾಳು ರಾತ್ರಿಯೇ ಮೂರ್ತತೆ ಹೊಂದಿ ತÀನ್ನ ಬೆರಳು ನುಂಗಿತೋ. ಇದು ಏನು? ಯಾವ ಮಾಯೆ, ಯಾವ ಪವಾಡ, ಯಾವ ಕಾಲನ ಕಾರ್ಕೂಟ ದರ್ಶನ.
ತನ್ನ ಲುಂಗಿಯ ಚುಂಗನ್ನು ಕೈಗೆ ಕಟ್ಟಿದ. ಹೊರಬಂದು ಬಯಲೊಳಗೆ ನಿಂತುಕೊಂಡ.
ಅದಮ್ಯ ಬಯಲು, ಘನದ್ರವ ಅನಿಲಗಳ ಆಳದಲ್ಲಿ ಇನ್ನೂ ಏನೋ ಇದೇ ಅನ್ನಿಸಿತು. ಬೆಟ್ಟಗಳು ದೊಡ್ಡವೋ, ಚಿಕ್ಕವೋ ಬೃಹದಾಕಾರವಾಗಿ ಸಾಲುಸಾಲಾಗಿ ಮಲಗಿಕೊಂಡಿದ್ದವು. ಅವನ್ನು ವ್ಯಾಖ್ಯಾನಿಸಲು ಅವನಲ್ಲಿ ಏನು ಮಾಪನಗಳಿರಲಿಲ್ಲ. ದೊಡ್ಡವು ಎಂದರೆ ಹೇಗೆ ದೊಡ್ಡವು, ಆಕಾರದಲ್ಲೋ? ಕೃತಿಯಲ್ಲೋ? ಪರಿಣಾಮ ಸೃವಿಸುವ ರೀತಿಯಲ್ಲೋ ಎಲ್ಲವನ್ನು ಬೆರಳುಗಳ ಕಳೆದುಕೊಂಡ ಕ್ರಮದಿಂದಲೇ ನೋಡಹತ್ತಿದ. ಈ ಬೆಟ್ಟಗಳು ದಟ್ಟ ಗಾಳಿ ಕಣ್ಣಿಗೆ ಕಾಣುವ ಅನಿಲಗಳಿಂದ ಹಾಗೆ ಕಾಣುತ್ತಿದ್ದವು.
ಮನೆಗೆ ಬಂದ, ಅವನ ಬೆರಳಿಲ್ಲದ ಕೈಗಳ ನೋಡಿ ಹೆಂಡತಿ ಎದೆ ಒಡೆದುಕೊಂಡಳು. ಅಲ್ಲಿಯೇ ಇರುವ ವೈದ್ಯರಲ್ಲಿ ಕರೆದುಕೊಂಡು ಹೋದಳು. ವೈದ್ಯರು ಹೇಳಿದರು, ಇದು ಚಿಗುರಲಾರದ್ದು. ಆಕೆ ಕೇಳಿದಳು ಎರಡು ಬೆರಳುಗಳು ಇಲ್ಲದೆ ಇರಬಹುದೇ?
ಅದು ನಿನ್ನ ಕರ್ಮ, ಇಲ್ಲಿ ಆ ತೋಡುವ ಗಣಿ ಬಂದ ಮೇಲೆ ಈ ಮಣ್ಣಿನಲ್ಲಿ ರೆಸಿಡೂಯಲ್ ಸೇರಿಕೊಂಡಿದೆ. ಅದು ಗೊತ್ತಾಗದ ಹಾಗೆ, ಈ ಊರಲ್ಲಿ ತೋಡುವದೇ ಅಪಾಯ. ಇನ್ನು ಸ್ವಲ್ಪ ದಿನ? ಇಲ್ಲಿಯ ಧೂಳಿನ ಕಣವೇ ಮನುಷ್ಯನನ್ನು ಕತ್ತು ಹಿಸುಕಿ ಕೊಲ್ಲುತ್ತದೆ.
ಹಾಗಾದರೆ ನಾನು ದಿನನಿತ್ಯ ಮಾಡುವ ವ್ಯವಸಾಯ?
ಅದು ಬಿಡಬೇಕಾಗಿ ಬರಬಹುದು
ಈ ಪ್ರಶ್ನೆ ನನ್ನ ಡಾಕ್ಟರ್ ಪ್ರೊಫೇಶನ್‍ಗೆ ಸಂಬಂಧಿಸಿದ್ದು ಅಲ್ಲ, ಇನ್ನೂ ಸ್ವಲ್ಪ ದಿನ, ಈ ಊರಲ್ಲಿ ನನ್ನಂಥವರು ಇರಲಿಕ್ಕೆ ಇಲ್ಲ. ಯಾಕೆಂದರೆ ನಮಗೆ ಆರಾಮವಾಗಿ ಸಾಯಲಿಕ್ಕೆ ಅನೇಕ ಸ್ಥಳಗಳಿವೆ, ಈ ಊರೇ ಬೇಕಾಗಿಲ್ಲ. ಇದನ್ನು ಕಂಡು ಹಿಡಿದವರೇ ಇದರಿಂದಲೇ ಸತ್ತು ಹೋಗಿದ್ದಾರೆ. ನಿಮ್ಮಂಥವರ ಪಾಡೇನು? ಇನ್ನೂ ಸ್ವಲ್ಪ ದಿನ ಊರಲ್ಲಿರುವ ನೀರು, ಗಾಳಿ ಎಲ್ಲವೂ ನಿಮ್ಮನ್ನು ಕೊಲ್ಲುವ ಶೂಲಗಳಾಗುತ್ತವೆ.
ತೋಡದೆ ಊಳದೆ ಉತ್ತದೆ ಬಿತ್ತದೆ ಬದುಕಲು ಸಾಧ್ಯವಿರಲಿಲ್ಲ. ತೋಡಿದರೆ ಸಾವು ಎಂಬುದು ಮತ್ತೆ ಮಾರ್ಧನಿಸುತ್ತದೆ. ಕೈಬೆರಳು ಕಳೆದುಕೊಂಡ ಸ್ಥಿತಿ ನೋಡಿ ಹೆಂಡತಿ ರೊಯ್ಯನೆ ಆಳಹತ್ತಿದಳು. ಮೇಳೆ ಹಿಡಿಯುವುದು ಹೇಗೆ? ಬಿತ್ತುವುದು ಹೇಗೆ? ಬೆಳೆ ಬೆಳೆಯುವುದು ಹೇಗೆ? ಇದು ಒಂದು ಪ್ರಶ್ನೆ.
ಅಲ್ಲಿ ತೋಡಲು ನಿನಗೇನು ಅ,,,,,,,,.ಸಿತ್ತು. ನೀನು ಎರಡು ದಿನದಿಂದ ಗುದ್ದಲಿ, ಸಲಿಕೆ ಹಿಡಿದುಕೊಂಡು ಗವಿಯಲ್ಲಿ ಅಗಿಯಲು ಹೋದಾಗಲೆ ಅನ್ನುಕೊಂಡೆ ಈಗ ಅನುಭವಿಸು ಎಂದು ಬಿಕ್ಕಿಬಿಕ್ಕಿ ಅಳಹತ್ತಿದಳು.
ಅದರ ಮಣ್ಣು ಮಾರಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ನಾನು ಹಾಗೆ ತೋಡಿ ದುಡ್ಡು ಮಾಡಿಕೊಳ್ಳಲು ಹೋಗಿ ಬೆರಳುಗಳ ಕಳೆದುಕೊಂಡೆ. ಬಯ್ಯಬೇಡ, ಬಯ್ಯಲು ಇದು ಸಮಯವಲ್ಲ. ನನ್ನ ಅಂಗವೈಕಲ್ಯದ ನೋವು ನನ್ನನ್ನು ಬಿಡಬೇಕಲ್ಲ. ಗಾಢವಾಗಿ ಕಾಡುತ್ತದೆ. ಅದರಲ್ಲಿ ನಿನ್ನ ಇರಿತ.
ಈ ಊರು ಮನುಷ್ಯರು ವಾಸಿಸಲಿಕ್ಕೆ ಅಲ್ಲ ಕ್ರಿಮಿಕೀಟ, ಪಕ್ಷಿ, ಸರೀಸೃಪಗಳು ವಾಸಿಸಲಿಕ್ಕೂ ಅಯೋಗ್ಯವಾಗಿರುವಂತಹುದು. ಈಗಾಗಲೇ ಈ ಊರಲ್ಲಿ ಅಂತರ್ಗಾಮಿಯಾಗಿ ವಿಷದ ಹೊನಲು ಹರಿಯುತ್ತಿದೆ. ಇನ್ನು ಸ್ವಲ್ಪ ದಿನ, ಅನೇಕರು ಉಸಿರಾಡುವ ಪುಪ್ಪಸ ಕಳೆದುಕೊಂಡಿದ್ದಾರೆ. ಅವರಿಗೆ ರೋಗ ತಗುಲಿಸಿಕೊಂಡಿದ್ದಾರೆ. ಕುಂಡೆಗೆ ಕ್ಯಾನ್ಸರ್ ಹಚ್ಚಿಕೊಂಡಿದ್ದಾರೆ. ಈಗ ನಿನ್ನ ಎರಡು ಬೆರಳುಗಳು ಉದರಿ ಬಿದ್ದುದು ಆಶ್ಚರ್ಯವಿಲ್ಲ. ಇನ್ನೂ ಸ್ವಲ್ಪ ದಿನವಾದರೆ ರುಂಡಮುಂಡಗಳು ಉದುರಿ ಬೀಳಬಹುದು
2
ಬೆರಳುಗಳ ಗಾಯದ ಜಾಗಕ್ಕೆ ಬ್ಯಾಕ್ಟೀರಿಯಗಳೂ ಬಂದಿದ್ದವು. ಸಮೃದ್ಧ ಭೂಮಿಯ ತಿನ್ನಲು.
ಇಂದು ನೋವು ಕೊಂಚ ಹೆಚ್ಚಾಯಿತೋ ಏನೋ? ಚೀರಹತ್ತಿದ. ಹೆಂಡತಿ ನಿನ್ನೆ ಡಾಕ್ಟರ್ ಕೊಟ್ಟ ನೋವು ನಿವಾರಕವನ್ನು ನುಂಗಿಸಿದಳು, ಹಾಗೆ ಮಲಗಿಕೊಂಡ.
ಪರಿಸರ ಹೋರಾಟಗಾರರಾದ ಮಾನಯ್ಯ ಬಂದಿದ್ದಾರೆ. ಯುರೋನಿಯಂ ಅಣು ಯೋಜನೆಗೆ ಧಿಕ್ಕಾರ ಎಂದು ಕೂಗುತ್ತಿದ್ದಾರೆ. ಅವನಿಗೆ ಹಿಂಸೆಯಾಗುತ್ತಿದೆ. ಇಪ್ಪತ್ತು ವರ್ಷದಿಂದ ಅವರು ಕೂಗಿದ ಕೂಗಿನ ಸ್ವರ ಸ್ವಲ್ಪವೂ ಬದಲಾಗಿಲ್ಲ.
ಸ್ವರ ತಾಳ ಲಯ ಎಲ್ಲವೂ ಹಾಗೆಯೇ ಇದೆ. ಅವರ ಜೊತೆÀ ಹತ್ತು ಜನರೂ ಬಂದಿದ್ದಾರೆ. ಇಪ್ಪತ್ತು ವರ್ಷದಿಂದ ಇದ್ದ ಬಡಕಲು ದೇಹ ಕೋಲು ಮುಖದ ಮಾನಯ್ಯನ ಮುಖ ದೇಹ ಈಗ ಬದಲಾಗಿದೆ. ಮುಖದ ಮೇಲ್ಪದರು ಎಣ್ಣೆ ತುಂಬಿಕೊಂಡಿದೆ
ಬಡಕಲು ದೇಹವಿದ್ದದ್ದು ಮೈ ಕೊಬ್ಬಿನಿಂದ ಆವೃತವಾಗಿದೆÉ. ಧ್ವನಿಯಲ್ಲಿ ಆತ್ಮಸ್ಥೈರ್ಯ ಇದೆ. ನಾವು ಈ ಯೋಜನೆ ಊರಿಗೆ ಬಂದಾಗಲೇ ಪ್ರತಿಭಟಿಸಿದೆವು. ಅದನ್ನು ಮೀರಿ ಸರ್ಕಾರ ಈ ಕಸಾಯಿಖಾನೆಯನ್ನು ಇಲ್ಲಿ ಸ್ಥಾಪಿಸಿತು ಎಂದರು ಮಾನಯ್ಯ. ಕಸಾಯಿ ಖಾನೆಯ ಫಲಾನುಭವಿಗಳಲ್ಲಿ ಇವರು ಒಬ್ಬರು ಎಂದು ಅವನಿಗೂ ತಿಳಿದಿತ್ತು. ಅವನಿಗೇಕೆ, ಜಗತ್ತಿಗೂ ತಿಳಿದಿತ್ತು.
ಮಾನಯ್ಯನ ಗುಡಿಸಲು ಮನೆ ಇಂದು ಮೂರು ಅಂತಸ್ತಿನ ಕಟ್ಟಡವಾಗಿದ್ದು ಹಾಗೆಯೇ ಅಲ್ಲವೇ?
ನಿಮಗೆ ಪರಿಹಾರ ಕೊಡಿಸುತ್ತೇವೆ ಎಂದರು ಮಾನಯ್ಯ.
ಯಪ್ಪಾ ಈವತ್ತೋ ಈ ಗತಿ ಇದೆ, ನಾಳೆ ನಾವು ಹೆಂಗ್ ತಿನ್ನಾನು? ಹೆಂಗ್ ಊಳಾನು? ಹೆಂಗಾ…….? ಅಂದಳು ಬೆರಳು ಕಳೆದುಕೊಂಡವನ ಹೆಂಡತಿ. ಈ ಬೆವರ್ಸಿ ಸೂ ಮಗನಿಗೆ ಹೇಳಿದೆ. ಇದ್ದುದರಲ್ಲಿ ತಿನ್ನೋನಾ ಉಣ್ಣೋನ ಬದುಕೋಣ ಇಲ್ಲಾದ ಉಸಾಬರಿ ನಮಗ್ಯಾಕೆ ಎಂದು ಹೇಳಿದರೂ ಕೇಳಬೇಕಲ್ಲ?
ಮಾನಯ್ಯನ ಮುಖದಲ್ಲಿ ಮಿಂಚೊಂದು ಹೊಳೆಯಿತು. ಅವನಿಗೆ ಇದು ವ್ಯಾಪಾರ ಮಾತ್ರ, ಹೋರಾಟ ದಲ್ಲಾಳಿಕರಣಗೊಂಡಿದ್ದು ಆತನ ಮುಖ ಪ್ರಕಟಿಸಿತು.
ಆ ಕಂಪನಿ ಎಂ.ಡಿಯ ಜೊತೆ ಮಾತಾಡುತ್ತೇನೆ. ನೀವು ಯಾವುದೇ ವರ್ತಮಾನ ಪತ್ರಿಕೆ, ಟಿ.ವಿ. ಮುಂದೆ ಹೋಗಬೇಡಿ, ಅಲ್ಲಿಗೆ ಹೋದರೆ ಇದು ಬಗೆಹರಿಯುವ ವಿಷಯವಲ್ಲ, ಆಮೇಲೆ ಕೋರ್ಟ್ ಕವಡೆ ಎಂದು ವ್ಯರ್ಥ ಕಾಲಹರಣ. ಸುಮಾರು 20-25 ವರ್ಷ ನಡೆಯುತ್ತದೆ. ಇಷ್ಟರಲ್ಲಿ ನೀವೇ ಇಲ್ಲವಾಗಬಹುದು.
ಪಕ್ಕದ ಮನೆಯ ಶಿಕ್ಷಕನೊಬ್ಬ ಬಂದು ನೋಡಿ ಮುಂದೊಂದು ದಿನ ನಾವೆಲ್ಲ ಇಲ್ಲವಾಗುತ್ತೇವೆ. ಕಣ್ಣಿಗೆ ಕಾಣದ್ದು ನಮ್ಮ ಅಂಗಗಳನ್ನು ಕತ್ತರಿಸುತ್ತದೆ ಎಂದರೆ ಅದು ಇರಬಹುದೇ? ಎಂದು ಗುನುಗಿದ. ಜಪಾನಿನ ಹಿರೋಶಿಮಾ ನಾಗಾಸಾಕಿ ನಾಶವಾದದ್ದು ಇದರಿಂದಲೇ, ಅಲ್ಲಿ ಏನು ಉತ್ಪತ್ತಿಯಿಲ್ಲ, ಬಿತ್ತುತ್ತಿಲ್ಲ, ಬೆಳೆಯುತ್ತಿಲ್ಲ, ಅಂಗವೈಕಲ್ಯ, ರೋಗ ರುಜಿನ, ಇನ್ನೂ ಇದೆ ಎಂದು ಹೇಳಿದ.
ಎಲ್ಲ ಹೇಳಿದ ಸಂಗತಿಗಳು ಅವನ ಮನಸ್ಸಿನಲ್ಲಿ ಬಿತ್ತಿ ಬೆಳೆಯಹತ್ತಿದವು. ಹೆಂಡತಿ ಮೊದಲ ಗುರು, ಅವಳ ಮಾತು ಕೇಳಿದರೆ ಇದು ಆಗುತ್ತಿರಲಿಲ್ಲವೇನೋ?
ದೊಡ್ಡ ತಪ್ಪು ಮೂಡಿದೆ. ಇದು ಅಲ್ಲದೆ ನನ್ನ ಅಂಗಗಳನ್ನು ಮೂತ್ರಕೋಶವನ್ನು ಹೃದಯವನ್ನು ಒಡೆದು ಹಾಕಬಹುದು ಎಂದು ಹಾಸಿಗೆಗೆ ಉರುಳಿದ, ನಿದ್ರೆ ಎಂಬುದು ಮರೀಚಿಕೆಯಾಗಿತ್ತು.
ಎದ್ದು ಕುಳಿತ, ನೀರು ಕುಡಿದ, ಅಡ್ಡಾಡಿದ, ಬೋಳ ಕೈ ಕಳೆ ಕಳೆದುಕೊಂಡಿತ್ತು. ಮಧ್ಯರಾತ್ರಿಯಾದರೂ ನಿದ್ರೆ ಇಲ್ಲ.
ಡಾಕ್ಟರ್ ಮತ್ತೆ ಹೇಳಿದ್ದರು, ಇದು ಏಳು ತಲೆಮಾರು ಆದರೂ ಮೆಲ್ಲಗೆ ಬಿಡದೆ ಕೊಲ್ಲುವಂತಹುದು. ಆತನಿಗೆ ತಾನು ಮಾಡಿದ ಸಣ್ಣ ತಪ್ಪು ಹೀಗೆ ತಲೆಮಾರನ್ನು ನುಂಗಿ ಹಾಕಬಹುದು ಎಂದು ಅಂದುಕೊಂಡಿರಲಿಲ್ಲ. ನಿದ್ರೆ ಎಂಬುದು ಬಂದುಹೋಗುವ ಜೋಕಾಲಿ ಆಗಿತ್ತು. ಆದರೆ ಮುಂಜಾನೆ ಕೋಳಿ ಕೂಗಿದಂತೆಲ್ಲ ತಣ್ಣನೆಯ ಗಾಳಿ ಜೊಂಪನ್ನು ಹೆಚ್ಚಿಸಲು ಸಹಾಯ ಮಾಡಿತ್ತು. ಕಂಗಳು ಮುಚ್ಚಿದ. ನಿದ್ರೆ ಎಂಬುದು ದಟ್ಟವಾಗುತ್ತ ಹೋಗಹತ್ತಿತ್ತು. ದಟ್ಟತೆಯ ನಿದ್ರೆಯ ಮಧ್ಯೆ ಇನ್ನೂ ಅದರ ಧ್ಯಾನದಲ್ಲೇ ಇತ್ತೇನೋ ಮದ. ಆತನಿಗೆ ಒಂದು ಶೂನ್ಯವೇ ಭಯಾನಕವಾಗಿ ಕಂಡಿತ್ತು. ಅದು ಕನಸೋ, ಭಾವನೆಯೋ ತಿಳಿಯದಾಯಿತು.
ಸಣ್ಣನೆ ಅಣುವೊಂದು ರಭಸವಾಗಿ ಮುನ್ನುಗ್ಗುತ್ತ ಇಲ್ಲಿರುವ ಕಟ್ಟಡಗಳನ್ನು ಒಡೆದು ಹಾಕಿತು. ನದಿಕೊಳ್ಳಗಳನ್ನು ಆಪೋಷನ ತೆಗೆದುಕೊಂಡಿತು. ಸಕಲ ಜೀವರಾಶಿಗಳನ್ನು ನುಂಗುತ್ತ ನುಂಗುತ್ತ ತನ್ನ ಮನೆಯ ಬಾಗಿಲಿಗೆ ಬಂದಿತ್ತು. ತನ್ನ ಮನೆಯೇ ಅದರ ಬಾಯಲ್ಲಿ ಮನೆಯೊಳಗೆ ತಾನು ಎಂಬ ಭಾವನೆ ದಟ್ಟವಾಯಿತು. ಇದು ನಿಜವೋ, ಭ್ರಮೆಯೋ ಅರಿಯದಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...