Homeರಾಜಕೀಯದಾವಣಗೆರೆ: ಕೈಗೆ ಬೆಣ್ಣೆದೋಸೆ ಕಮಲಕ್ಕೆ ಖಾರ ಮಿರ್ಚಿ

ದಾವಣಗೆರೆ: ಕೈಗೆ ಬೆಣ್ಣೆದೋಸೆ ಕಮಲಕ್ಕೆ ಖಾರ ಮಿರ್ಚಿ

- Advertisement -
- Advertisement -
  • ಟಿ.ಎನ್.ಷಣ್ಮುಖ |

ಕಳೆದ ಸಲ ಬಹುಪಾಲು `ಕೈ’ವಶವಾಗಿದ್ದ ದಾವಣಗೆರೆ ಜಿಲ್ಲೆಯಲ್ಲಿ ಈ ಸಲ ಬಿಜೆಪಿ ಪೈಪೋಟಿ ನೀಡುತ್ತಿದೆಯಾದರೂ ಹಳೆಯ ಫಲಿತಾಂಶ ಸಂಪೂರ್ಣ ಬುಡಮೇಲಾಗುವ ಸಾಧ್ಯತೆ ಇಲ್ಲ. ಒಟ್ಟು ಎಂಟು ಕ್ಷೇತ್ರಗಳ ಪೈಕಿ 2013ರಲ್ಲಿ ಕಾಂಗ್ರೆಸ್ ಏಳರಲ್ಲಿ ಗೆದ್ದಿದ್ದರೆ ಹರಿಹರ ಮಾತ್ರ ಜೆಡಿಎಸ್ ಪಾಲಾಗಿತ್ತು. ಒಂದು ಕಾಲಕ್ಕೆ ಅಖಂಡ ಪ್ರಾಬಲ್ಯ ಸಾಧಿಸಿದ್ದ ಬಿಜೆಪಿ ಶೂನ್ಯ ಸಾಧನೆ ಮೂಲಕ ನೆಲ ಕಚ್ಚಿತ್ತು.

ಈ ಸಲ ಸ್ಪರ್ಧಿಸುವುದಿಲ್ಲ ಎಂದಿದ್ದ ವಯೋವೃದ್ಧ ಶಾಮನೂರು ಶಿವಶಂಕರಪ್ಪನವರು ಮತ್ತೆ ದಾವಣಗೆರೆ ದಕ್ಷಿಣದಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿರುವ ಯಶವಂತರಾವ್ ಯಾವ ನಿಟ್ಟಿನಿಂದ ನೋಡಿದರೂ ಶಾಮನೂರು ಧಣಿಗೆ ಸರಿಸಾಟಿಯಾದ ಅಭ್ಯರ್ಥಿಯೇ ಅಲ್ಲ. ಕಾಂಗ್ರೆಸ್‍ಗೆ ಹರಿದುಹೋಗುವ ಮುಸ್ಲಿಂ ಮತಗಳನ್ನು ತನ್ನತ್ತ ತಿರುಗಿಸಿಕೊಳ್ಳಲು ಜೆಡಿಎಸ್ ಇಲ್ಲಿ ಅಮಾನುಲ್ಲಾ ಖಾನ್‍ನನ್ನು ಅಭ್ಯರ್ಥಿಯಾಗಿಸಿದೆ. ಆದರೆ ಈತ ಮೂರನೇ ಸ್ಥಾನಕ್ಕೆ ತಿಣುಕಾಡಬೇಕಾದ ಪರಿಸ್ಥಿತಿಯಿದೆ. ಬಿಜೆಪಿಯ ಯಶವಂತ ಕಳೆದ ಬಾರಿಗಿಂತ ತನ್ನ ಮತಗಳನ್ನು ಒಂದಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆಯಾದರು ಶಿವಶಂಕರಪ್ಪರನ್ನು ಸೋಲಿಸುವಷ್ಟು ಆತನ ಅಖಾಡ ಪಕ್ವವಾಗಿಲ್ಲ.

ದಾವಣಗೆರೆ ಉತ್ತರದಲ್ಲಿ ಹಾಲಿ ಮತ್ತು ಮಾಜಿ ತರಕಾರಿ ಮಂತ್ರಿಗಳದ್ದೇ ಕಾದಾಟ. ಆದಾಗ್ಯೂ ಕಾಂಗ್ರೆಸ್‍ನ ಎಸ್.ಎಸ್.ಮಲ್ಲಿಕಾರ್ಜುನ ಜಯದ ನಗೆ ಬೀರಲು ಹಲವು ಕಾರಣಗಳಿವೆ. ಬಿಜೆಪಿ ರವೀಂದ್ರನಾಥನನ್ನು ಯಡ್ಯೂರಪ್ಪ ಜೊತೆ ಆತ ಕಟ್ಟಿಕೊಂಡಿರುವ ದುಷ್ಮನಿ ಅಡ್ಡಡ್ಡ ಮಲಗಿಸಿದರೆ, ಕಳೆದ ಐದು ವರ್ಷದ ಅಭಿವೃದ್ಧಿ ಕಾರ್ಯಗಳು ಮಲ್ಲಿಕಾರ್ಜುನ್‍ರ ಕೈಹಿಡಿಯಲಿವೆ.

ಎಂ.ಪಿ.ರವೀಂದ್ರ

ಹರಪನಹಳ್ಳಿಯಲ್ಲಿ ಮೇಲ್ನೋಟಕ್ಕೆ ಹಾಲಿ ಕೈ ಶಾಸಕ ಎಂ.ಪಿ.ರವೀಂದ್ರನಿಗೆ ಇಕ್ಕಟ್ಟಿನಂತೆ ಕಂಡುಬಂದರೂ ಬಿಜೆಪಿಯ ಆಂತರಿಕ ಗುದಮುರಗಿ ರವಿಗೆ ನೆರವಾಗುವ ಸಾಧ್ಯತೆ ಇದೆ. ಜೆಡಿಎಸ್‍ನಿಂದ ಸ್ಪರ್ಧಿಸಿರುವ ಕೊಟ್ರೇಶ್ ಕೂಡಾ ಲಿಂಗಾಯತನಾಗಿರುವುದರಿಂದ ರವೀಂದ್ರನ ಜಾತಿ ಮತಗಳು ಹಂಚಿಹೋಗುತ್ತವೆ ಎಂಬ ವಾದವಿದೆ. ಆದರೆ ಅಸಲಿಯತ್ತೇನೆಂದರೆ ಮೊದಲಿನಿಂದಲೂ ಇಲ್ಲಿನ ಬಹುಪಾಲು ಲಿಂಗಾಯತ ಮತಗಳು ಹೋಗುತ್ತಿದ್ದುದು ಬಿಜೆಪಿಯ ಕರುಣಾಕರ ರೆಡ್ಡಿಗೆ, ಯಡ್ಯೂರಪ್ಪನ ಕಾರಣಕ್ಕೆ. ಜೆಡಿಎಸ್‍ನ ಕೊಟ್ರೇಶಿ ಪಕ್ಕಾ ಯಡಿಯೂರಪ್ಪನ ಶಿಷ್ಯ. ಕಳೆದ ಸಲ ಕೆಜೆಪಿಯಿಂದ ಸ್ಪರ್ಧಿಸಿದ್ದ. ಆತನಿಗೇ ಬಿಜೆಪಿ ಟಿಕೇಟ್ ಕೊಡಿಸಬೇಕೆನ್ನುವುದು ಯಡ್ಯೂರಪ್ಪ ಇಂಗಿತವಾಗಿತ್ತು. ಆದರೆ ರೆಡ್ಡಿಯೇ ಟಿಕೇಟ್ ಗಿಟ್ಟಿಸಿಕೊಂಡಿರುವುದರಿಂದ ಕೊಟ್ರೇಶಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದಾನೆ. ಅಂದರೆ ಆತ ಕೀಳಲಿರುವುದು ಬಿಜೆಪಿಯ ಮತಗಳನ್ನೇ ಹೊರತು ಕಾಂಗ್ರೆಸ್ ಓಟುಗಳನ್ನಲ್ಲ. ಅಲ್ಲಿಗೆ ರವಿಯ ಗೆಲ್ಲುವ ಸಂಭವ ಹೆಚ್ಚಾಗಿದೆ. ಆದರೆ ರವಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾನೆ ಎನ್ನುವ ವಾದವೂ ಇದ್ದು ಅದು ಫಲಿತಾಂಶದ ಮೇಲೆ ಪ್ರಭಾವ ಬೀರಿದರೆ ಅಚ್ಚರಿಯಿಲ್ಲ.

ಹರಿಹರದಲ್ಲಿ ಹಾಲಿ ಜೆಡಿಎಸ್ ಶಾಸಕ ಶಿವಶಂಕರನ ದರ್ಪ ಮತ್ತು ಮತದಾರರನ್ನು ಕಡೆಗಣಿಸಿದ ಅಪರಾಧವೇ ಆತನ ಸೋಲಿಗೆ ಮುನ್ನುಡಿಯಾಗುವ ಸಾಧ್ಯತೆಗಳಿವೆ. ಕೈ ಪಾರ್ಟಿಯಿಂದ ಹಳೇ ಹುಲಿ ರಾಮಪ್ಪಜ್ಜ ಕಣಕ್ಕಿಳಿದಿರೋದರಿಂದ ಬಿಜೆಪಿಯ ಹರೀಶನ ಬಿಪಿಯೂ ಯದ್ವತದ್ವಾ ಏರತೊಡಗಿದೆ. ರಾಮಪ್ಪನಿಗೆ ಸ್ವಜಾತಿ ಕುರುಬರು ಮಾತ್ರವಲ್ಲದೇ ಮುಸ್ಲಿಮರು, ನಾಯಕರು, ದಲಿತರ ಮತಗಳೂ ಹರಿದುಬರುವ ಸಾಧ್ಯತೆಯಿದ್ದು ಅಜ್ಜ ಗೆಲುವಿನ ನಗೆ ಬೀರಬಲ್ಲರು.

ವಡ್ನಾಳ್ ರಾಜಣ್ಣ

ಚನ್ನಗಿರಿಯಲ್ಲಿ ತ್ರಿಕೋನ ಸ್ಪರ್ಧೆಯಿದೆ. ಕಾಂಗ್ರೆಸ್‍ನ ಹಾಲಿ ಶಾಸಕ ವಡ್ನಾಳು ರಾಜಣ್ಣ, ಬಿಜೆಪಿಯ ಮಾಡಾಳು ವಿರುಪಾಕ್ಷಪ್ಪ, ಜೆಡಿಯು ಮಹಿಮಾ ಪಟೇಲ್ ಆ ತ್ರಿವಳಿ ವೀರರು. ಇವರ ನಡುವೆ ಜೆಡಿಎಸ್‍ನ ಹೊದಿಗೆರೆ ರಮೇಶ ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ. ನಾಯಕ ಜಾತಿಯ ಹೊದಿಗೆರೆ ರಮೇಶನನ್ನು ಹೊರತುಪಡಿಸಿದರೆ ಉಳಿದ ಮೂವರೂ ಲಿಂಗಾಯತರು. ವಡ್ನಾಳು ರಾಜಣ್ಣನಿಗೆ ಜಾತಿ ಮತಗಳು ಕೈಕೊಡುವ ಸಾಧ್ಯತೆಯಿದ್ದು ಅವು ಮಾಡಾಳು ಮಾಡಾಳು ವಿರುಪಾಕ್ಷಪ್ಪನತ್ತ ಮುಖ ಮಾಡಿವೆ. ಆದರೆ ಈ ಮತಗಳ ಮೇಲೆ ಮಹಿಮಾ ಕೂಡಾ ದಾಳಿ ಮಾಡಬಹುದಾದ್ದರಿಂದ ಇನ್ನುಳಿದ ಸಮುದಾಯದ ಮತಗಳು ಯಾರತ್ತ ನುಗ್ಗಲಿವೆ ಎಂಬುದು ಸೋಲುಗೆಲುವನ್ನು ನಿರ್ಧರಿಸಲಿದೆ. ಸದ್ಯಕ್ಕಂತೂ ಬಿಜೆಪಿಯ ಮಾಡಾಳು ಮುಂಚೂಣಿಯಲ್ಲಿದ್ದಾರೆ.

ಜಗಳೂರಿನಲ್ಲಿ ಉದ್ಭವಿಸಿದ ಕಾಂಗ್ರೆಸ್ ಟಿಕೇಟ್ ಬಂಡಾಯದ ಯಡವಟ್ಟು ಬಿಜೆಪಿಯ ಎಸ್.ವಿ.ರಾಮಚಂದ್ರನಿಗೆ ಅನುಕೂಲ ಆಗಬಹುದು. ಮೊದಲು ಪುಷ್ಟಾಗೆ ಟಿಕೇಟ್ ಕೊಟ್ಟ ಕಾಂಗ್ರೆಸ್ ನಂತರ ನಿರ್ಧಾರದಿಂದ ಹಿಂದೆ ಸರಿದು ಹಾಲಿ ಶಾಸಕ ರಾಜೇಶನಿಗೆ ಬಿ ಫಾರಂ ದಯಪಾಲಿಸಿದೆ. ಈ ಕಣ್ಣಾಮುಚ್ಚಾಲೆಯಿಂದ ಸಿಟ್ಟಿಗೆದ್ದ ಪುಷ್ಟ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರೋದು ಕಾಂಗ್ರೆಸ್‍ಗೆ ದುಬಾರಿಯಾಗಲಿದೆ.

ಬಸವರಾಜ ನಾಯ್ಕ್

ಮಾಯಕೊಂಡದಲ್ಲಿ ಕಾಂಗ್ರೆಸ್‍ನ ಮೇಲುಗೈ ಕಾಣಿಸುತ್ತೆ. ಮಂತ್ರಿ ಆಂಜನೇಯರ ಅಳಿಯ ಬಸವರಾಜನನ್ನು ಕಾಂಗ್ರೆಸ್ ಅಖಾಡಕ್ಕಿಳಿಸಿದೆ. ಯಡ್ಯೂರಪ್ಪ ತನ್ನ ಭಂಟ ಲಿಂಗಪ್ಪನಿಗೆ ಟಿಕೇಟ್ ಕೊಡಿಸಿರುವುದರಿಂದ ಬೇಸತ್ತಿರುವ ಮಾಜಿ ಶಾಸಕ ಬಸವರಾಜ ನಾಯ್ಕ ಜೆಡಿಯು ಸೇರಿ ಕಣದಲ್ಲಿದ್ದಾನೆ. ಸಾಲದ್ದಕ್ಕೆ ಆನಂದಪ್ಪ ಎಂಬ ಮತ್ತೊಬ್ಬ ಅಭ್ಯರ್ಥಿಯೂ ಬಿಜೆಪಿ ಬಂಡಾಯಗಾರನಾಗಿ ಮತ ಬೇಟೆಯಲ್ಲಿ ತೊಡಗಿದ್ದಾನೆ. ಬಿಜೆಪಿಗೆ ಈ ಇಬ್ಬರ ಬಂಡಾಯ ದುಬಾರಿಯಾಗಲಿದೆ. ಮುಖ್ಯವಾಗಿ ಲಂಬಾಣಿ ಮತಗಳು ಬಿಜೆಪಿಯಿಂದ ದೂರ ಸರಿದಿವೆ. ಶಾಮನೂರು ಪಾಳೆಗಾರಿಕೆ ಕಾರಣಕ್ಕೆ ಒಂದಷ್ಟು ಲಿಂಗಾಯತ ಮತಗಳು ಕಾಂಗ್ರೆಸ್‍ಗೆ ಒಲಿಯಲಿವೆ. ಜೊತೆಗೆ ಕುರುಬ, ನಾಯಕ, ಮಾದಿಗ ಮೊದಲಾದ ಅಹಿಂದ ಮತಗಳೂ ಕೈಹಿಡಿಯಲಿವೆ. ಲಂಬಾಣಿ ಮತಗಳು ಬಸವರಾಜ ನಾಯ್ಕ ಮತ್ತು ಜೆಡಿಎಸ್‍ನ ಶೀಲಾ ನಾಯ್ಕ ನಡುವೆ ಹರಿದು ಹಂಚಿಹೋಗಲಿವೆ. ಬಿಜೆಪಿಯ ಲಿಂಗಪ್ಪನಿಗೆ ಸ್ವಜಾತಿಯ ಮಾದಿಗ ಮತಗಳು ಬೀಳೋದೂ ಡೌಟು. ಏನಿದ್ದರೂ ಯಡ್ಯೂರಪ್ಪನ ವಶೀಲಿಬಾಜಿಯ ಒಂದಷ್ಟು ಲಿಂಗಾಯತ ಮತಗಳಷ್ಟೇ ಗಟ್ಟಿ.

ರೇಣುಕಾಚಾರ್ಯ

ಹೊನ್ನಾಳಿಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೆಕ್-ಟು-ನೆಕ್ ಹಣಾಹಣಿಯಿದೆ. ಕಾಂಗ್ರೆಸ್ ಟಿಕೇಟ್ ಕೈತಪ್ಪಿದ ಕಾರಣಕ್ಕೆ ಕುರುಬರ ಎಚ್.ಬಿ.ಮಂಜಪ್ಪ ಆರಂಭದಲ್ಲಿ ಬಂಡಾಯವೆದ್ದರೂ ಈಗ ಹಾಲಿ ಶಾಸಕ ಶಾಂತನಗೌಡನ ಪರ ಲವಲವಿಕೆಯಿಂದ ಪ್ರಚಾರ ಮಾಡುತ್ತಿದ್ದಾನೆ. ಇನ್ನು ಬಿಜೆಪಿಯಿಂದ ಕಣದಲ್ಲಿರುವ ನರ್ಸ್ ರೇಣುಕಾಚಾರ್ಯ ಯುವಜನರು ಮತ್ತು ನೊಣಬ, ಬಣಜಿಗ ಲಿಂಗಾಯತರ ಮತಗಳನ್ನು ನಂಬಿ ಹೋರಾಟ ನಡೆಸಿದ್ದಾನೆ. ಕಾಂಗ್ರೆಸ್‍ಗೆ ಹೆಚ್ಚಿನ ಸಂಖ್ಯೆಯಲ್ಲಿರುವ ಸಾದರ ಲಿಂಗಾಯತರ ಜೊತೆಗೆ ಅಹಿಂದ ವರ್ಗದ ಮತಗಳೂ ಬೀಳುವುದರಿಂದ ಇಲ್ಲಿ ಈ ಸಲವೂ ರೇಣುಕಾರ್ಯನಿಗೆ ಕಷ್ಟವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...