Homeಅಂಕಣಗಳುನಾವು ದಕ್ಷಿಣ ಭಾರತೀಯರು ಕಪಿಗಳಾ?

ನಾವು ದಕ್ಷಿಣ ಭಾರತೀಯರು ಕಪಿಗಳಾ?

- Advertisement -
- Advertisement -

ಗೌರಿ ಲಂಕೇಶ್ |

ರಾಮಸೇತುವಿನ ಸುತ್ತ ನಡೆಯುವ ವಾದವಿವಾದಗಳಲ್ಲಿ ನನ್ನದೊಂದು ಪ್ರಶ್ನೆಗೆ ಯಾರಾದರೂ ಉತ್ತರ ನೀಡುತ್ತಾರಾ? ಪ್ರಶ್ನೆ ಏನೆಂದರೆ ರಾಮ ಸೇತುವನ್ನು ರಾಮನೇ ಕಟ್ಟಿದ್ದು-ನಂಬಿಕೆ/ಪುರಾಣ/ಚರಿತ್ರೆ ಅಥವಾ ಇನ್ನಾವುದೋ ಕಾಗಕ್ಕ-ಗುಬ್ಬಕ್ಕ ಕತೆಯ ಪ್ರಕಾರ ಎಂಬುದನ್ನು ಸತ್ಯ ಎಂದು ಒಪ್ಪಿಕೊಳ್ಳುವುದಾದರೆ, ಅದೇ ಪ್ರಕರಣ ಕುರಿತಂತೆ ನಾವು ದಕ್ಷಿಣ ಭಾರತದ ಜನ ವಾನರರು-ಅಂದರೆ ಕಪಿಗಳು, ಮಂಗಗಳು ಎಂಬುದನ್ನು ಒಪ್ಪಿಕೊಳ್ಳಬೇಕಲ್ಲವೇ?

ಈ ಪ್ರಶ್ನೆ ಯಾಕೆಂದರೆ ರಾಮಾಯಣದ ಪ್ರಕಾರ ರಾಮನ ಸೈನ್ಯದಲ್ಲಿ ಇದ್ದದ್ದು ಕಪಿಗಳು. ಆ ಕಾಲದಲ್ಲೇ ರಾಮ ಆದರ್ಶ ಪುರುಷನಾಗಿದ್ದರೂ, ಏಕಪತ್ನಿವ್ರತಸ್ಥನಾಗಿದ್ದರೂ ದಕ್ಷಿಣ ಭಾರತದ ‘ಜನ’ ಇನ್ನೂ ಮಂಗಗಳಾಗಿಯೇ ಉಳಿದಿದ್ದರಲ್ಲದೆ, ಪಕ್ಕಾ ಕಾಡುಪ್ರಾಣಿಗಳಂತೆ ಜೀವಿಸುತ್ತಿದ್ದರು. ಒಬ್ಬರ ಹೆಂಡಂದಿರನ್ನು ಇನ್ನೊಬ್ಬರು ಲಪಟಾಯಿಸುತ್ತಿದ್ದರು, ವಿವೇಚನಾ ಶಕ್ತಿ ಇಲ್ಲದವರಾಗಿದ್ದರು!

ಕತೆ, ಪುರಾಣ, ಚರಿತ್ರೆ, ಇತಿಹಾಸ, ವಿಜ್ಞಾನ ಇವುಗಳ ನಡುವಿನ ವ್ಯತ್ಯಾಸವನ್ನು ಅರಿಯದ ಜನ ‘ಹದಿನೇಳು ಲಕ್ಷ ಐವತ್ತು ಸಾವಿರ ವರ್ಷಗಳ ಹಿಂದೆಯೇ ರಾಮನ ವಾನರ ಸೈನ್ಯ ಈ ಸೇತುವೆಯನ್ನು ನಿರ್ಮಿಸಿತ್ತು’ ಎಂದು ವಾದಿಸುತ್ತಾರಲ್ಲವೆ, ಬೀದಿಗಿಳಿದು ಮಂಗಗಳಂತೆ ವರ್ತಿಸುತ್ತಾರೆ.
ಎಲ್ಲಾ ಧರ್ಮಗಳಲ್ಲೂ ಅತಿಶಯೋಕ್ತಿ ಎನಿಸುವ ಮೆಟಫರ್‌ಗಳಿರುತ್ತವೆ. ಅಥವಾ ಆ ಧರ್ಮ ಜನಿಸಿದ್ದ ಕಾಲದ ಮರ್ತಮಾನದಲ್ಲಿ ಮನುಷ್ಯನ ಅರಿವಿಗೆ ಬಂದಿರುವ ಮಾಹಿತಿಯನ್ನು ಆಧರಿಸಿ ಹಲವು ಕತೆಗಳನ್ನು, ನೀತಿಪಾಠಗಳನ್ನು ಕಟ್ಟಿ ಕೊಡುತ್ತವಲ್ಲದೆ ಮನುಷ್ಯನ ಕಲ್ಪನೆಗೆ ಅರೋಪಿಸಿ ದೈವಶಕ್ತಿಯ ಬಗ್ಗೆ ನಂಬಿಕೆ ಜನಿಸುವಂತೆ ಮಾಡಿರಲಾಗುತ್ತದೆ.

ಉದಾಹರಣೆಗೆ ಕ್ರೈಸ್ತ ಧರ್ಮ ಎರಡು ಸಾವಿರ ವರ್ಷಗಳ ಹಿಂದೆ ಜನಿಸಿದಾಗ ಮಾನವನ ವಿಕಸನದ ಬಗ್ಗೆ ಗೊತ್ತಿರಲಿಲ್ಲ. ಆದ್ದರಿಂದ ಆ ಧರ್ಮದಲ್ಲಿ ಈಡನ್ ಗಾರ್ಡನ್‌ನ ಕಲ್ಪನೆ ಇದೆಯಲ್ಲದೆ, ಭೂಮಿ ಚಪ್ಪಟೆ ಆಗಿದೆ ಎಂದೂ, ಅದರ ಸುತ್ತ ಸೂರ್ಯನೆ ಚಲಿಸುತ್ತಾನೆಂದೂ ಅದರ ಧರ್ಮಗ್ರಂಥ ಬೈಬಲ್‌ನಲ್ಲಿ ದಾಖಲಿಸಲಾಗಿದೆ. ಅಂದಮಾತ್ರಕ್ಕೆ ಇವತ್ತು ಸತ್ಯ ಎಂದು ಸಾಬೀತುಪಡಿಸಲಾಗಿರುವ ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದವನ್ನು, ಕೊಪರ್ ನಿಕಸ್‌ನ ಸೌರ ಮಂಡಲದ ರೂಪವನ್ನು ನಿರಾಕರಿಸಲಾಗುತ್ತದೆಯೇ?

ಅಂದಹಾಗೆ ಹದಿನಾರನೇ ಶತಮಾನದಲ್ಲಿ ಕೊಪರ್‌ನಿಕಸ್ ಮತ್ತು 19ನೇ ಶತಮಾನದಲ್ಲಿ ಚಾರ್ಲ್ಸ್ ಡಾರ್ವಿನ್ ಇಬ್ಬರೂ ಅಂದಿನ ಮೂಲಭೂತವಾದಿ ಕ್ರೈಸ್ತರ ನಿಂದನೆಗೆ ಗುರಿಯಾಗಿದ್ದರು. ನಮ್ಮ ವಿಪರ್ಯಾಸ ಎಂತಹದ್ದೆಂದರೆ ಇವತ್ತು 21ನೇ ಶತಮಾನದಲ್ಲಿ ವೈಜ್ಞಾನಿಕವಾಗಿ ಲಭ್ಯವಿರುವ ಸಾಕ್ಷ್ಯಯಗಳನ್ನು ಆಧರಿಸಿ ರಾಮಸೇತುವನ್ನು ರಾಮನಾಗಲಿ, ಕಪಿಸೈನ್ಯವಾಗಲಿ ನಿರ್ಮಿಸಿದ್ದಲ್ಲ ಎಂದು ಹೇಳಿದರೆ ‘ಹಿಂದೂ ನಂಬಿಕೆಗಳಿಗೆ ಅವಮಾನ’ ಎಂದು ಕೂಗಾಡುವವರು, ಪ್ರತಿಭಟನೆಗೆ ಇಳಿಯುವವರು ನಮ್ಮ ಸುತ್ತಲೂ ಇದ್ದಾರೆ.
ಹೋಗಲಿ, ಇಲ್ಲಿಯವರೆಗೂ ಲಭ್ಯವಾಗಿರುವ ಮಾಹಿತಿ ಏನನ್ನು ಹೇಳುತ್ತದೆ ಎಂಬುದಕ್ಕೆ ಹಲವು ಅಂಕಿಅಂಶಗಳನ್ನು ಗಮನಿಸೋಣ. ಭೂಖಂಡ ಚದುರುವಿಕೆ ಸಂಭವಿಸಿ ಇಂದಿನ ವಿವಿಧ ಖಂಡಗಳು ನಿರ್ಮಿತವಾಗಿದ್ದು ಸುಮಾರು 2,00,000,000 ವರ್ಷಗಳ ಹಿಂದೆ. ಅಷ್ಟೇ ಅಲ್ಲ, ಆಧುನಿಕ ಮಾನವ ರೂಪಗೊಂಡಿದ್ದೂ 1,00,000 ವರ್ಷಗಳ ಹಿಂದೆ. ಅದರಲ್ಲೂ ತೀರಾ ಇತ್ತೀಚೆಗೆ ಎನಿಸುವ 10,000 ವರ್ಷಗಳ ಹಿಂದಷ್ಟೇ ಆತ ಕಾಡುಪ್ರಾಣಿಯಂತೆ ಜೀವಿಸುವುದನ್ನು ನಿಲ್ಲಿಸಿ ಕೃಷಿಕನಾಗಿದ್ದು. ಅಂದರೆ ಹತ್ತು ಸಾವಿರ ವರ್ಷಗಳಷ್ಟು ಹಿಂದೆ ಭೂಮಿಯ ಮೇಲೆ ರಾಜರು, ರಾಜವಂಶಗಳು, ಇಂಥದ್ದು ಯಾವುದೂ ಇರಲಿಲ್ಲ.

ಭಾರತದ ಬಗ್ಗೆ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಮಧ್ಯೆಪ್ರದೇಶದ ಭೀಮ್‌ಬೆಟ್ಟ ಎಂಬಲ್ಲಿ ಲಭ್ಯವಾಗಿರುವ ಮಾಹಿತಿಯ ಪ್ರಕರ 9,000 ವರ್ಷಗಳ ಹಿಂದೆ ಇಲ್ಲಿ ಕಾಡುಮಾನವ ವಾಸಿಸುತ್ತಿದ್ದ, ಅದಕ್ಕಿಂತ ಪುರಾತನ ಕಾಲದಲ್ಲಿ ಇಲ್ಲಿ ಮಾನವ ಇದ್ದನೆಂಬುದಕ್ಕೆ ಯಾವುದೇ ಪುರಾವೆಗಳೂ ಸಿಕ್ಕಿಲ್ಲ. ಅಷ್ಟು ಮಾತ್ರವಲ್ಲ, ಹರಪ್ಪ ನಾಗರಿಕತೆ ಇದ್ದದ್ದು ಸುಮಾರು 4,000 ವರ್ಷಗಳ ಹಿಂದೆ; ಋಗ್ವೇದ ರಷಿತವಾಗಿದ್ದು 3.000 ವರ್ಷಗಳ ಹಿಂದೆ, ರಾಮಾರಣವನ್ನು ವಾಲ್ಮೀಕಿ ರಚಿಸಿದ್ದು 2,300 ವರ್ಚಗಳ ಕೆಳಗೆ. ತುಳಸಿದಾಸ ತನ್ನ ರಾಮಚರಿತ ಮಾನಸ ಸೃಷ್ಟಿಸಿದ್ದು 400 ವರ್ಷಗಳ ಹಿಂದೆ.

ಈ ಎಲ್ಲಾ ಅಂಕಿ, ಅಂಶಗಳನ್ನು ಗಣನೆಗೆ ತೆಗೆದುಕೊಂಡು ನೋಡಿದಾಗ ‘ಹದಿನೇಳು ಲಕ್ಷ ಐವತ್ತು ಸಾವಿರ ವರ್ಷಗಳ ಹಿಂದೆಯೇ ರಾಮ ಈ ಸೇತುವೆಯನ್ನು ನಿರ್ಮಿಸಿದ್ದ’ ಎಂದು ಚೆಡ್ಡಿಗಳು ಅರಚುತ್ತಿರುವುದು ಎಷ್ಟು ಹಾಸ್ಯಾಸ್ಪದವಾಗಿ ಕಾಣಿಸುತ್ತದಲ್ಲವೇ?!

26 ಸೆಪ್ಟೆಂಬರ್, 2007 (‘ಕಂಡಹಾಗೆ’ ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...