Homeಸಾಮಾಜಿಕಪೋಸ್ಟ್ ಕಾರ್ಡ್ ಸೈಜಿನ ಫೇಕ್ ಫ್ಯಾಕ್ಟರಿಗೆ ಬಿತ್ತು ಬೀಗ!

ಪೋಸ್ಟ್ ಕಾರ್ಡ್ ಸೈಜಿನ ಫೇಕ್ ಫ್ಯಾಕ್ಟರಿಗೆ ಬಿತ್ತು ಬೀಗ!

- Advertisement -
- Advertisement -

ಕಡೆಗೂ ಎಚ್ಚೆತ್ತುಕೊಂಡ ಫೇಸ್‍ಬುಕ್ಕು ಕೆಟ್ಟದೊಂದು ಪುಟಕ್ಕೆ ಫುಲ್‍ಸ್ಟಾಪ್ ಇಟ್ಟಿದೆ. ಅದು `ಪೋಸ್ಟ್‍ಕಾರ್ಡ್’! ಮಹೇಶ್ ವಿಕ್ರಮ್ ಹೆಗ್ಡೆ ಎಂಬ ಆರೆಸ್ಸೆಸ್ ಮಾಣಿ ನಡೆಸುತ್ತಿದ್ದ ಫೇಕ್ ನ್ಯೂಸ್‍ಗಳ ಸುಳ್ಳಿನ ಫ್ಯಾಕ್ಟರಿಯಂತಿದ್ದ ಅದು ಬಿತ್ತರಿಸುತ್ತಿದುದ್ದೆಲ್ಲ ಕೋಮು ಪ್ರಚೋದಕ ಸುಳ್ಳುಗಳನ್ನು. ಸಮಾಜದ ಸ್ವಾಸ್ಥ್ಯ ಕದಡುವ, ಇದೇ ಕಾರಣಕ್ಕೆ ಇತ್ತೀಚೆಗಷ್ಟೇ ಸೈಬರ್ ಕ್ರೈಮ್ ಪೊಲೀಸರು ಮಹೇಶ್ ವಿಕ್ರಂ ಹೆಗ್ಡೆಯನ್ನು ಅರೆಸ್ಟ್ ಮಾಡಿ ಜೈಲಿಗೂ ಗದುಮಿದ್ದರು. ಈಗ ಎಚ್ಚೆತ್ತುಕೊಂಡಿರುವ ಫೇಸ್‍ಬುಕ್ ಕೋಮುಕ್ರಿಮಿಯಿಂದ ತನಗೆ ಅಂಟಬಹುದಾದ ಕಳಂಕವನ್ನು ತೊಳೆದುಕೊಳ್ಳಲು ಆತನ ಪೋಸ್ಟ್‍ಕಾರ್ಡ್ ನ್ಯೂಸ್ ಫೇಸ್‍ಬುಕ್ ಪೇಜನ್ನು ರದ್ದು ಮಾಡಿ ಮಾನಸ್ಥ ಮನುಷ್ಯರ ಕೊಂಚ ನಿಟ್ಟುಸಿರುವ ಬಿಡುವಂತೆ ಮಾಡಿದೆ.
ಅಸಲಿಗೆ, ಬಿಜೆಪಿ ಮತ್ತು ಸಂಘ ಪರಿವೆಂದರೇನೆ ಪೇಕ್‍ನ್ಯೂಸ್‍ಗಳ ಪಿತೃಸ್ಥಾನಗಳಂತೆ ಎಂಬ ಆರೋಪವಿದೆ. ಅದನ್ನು ನಿಜ ಮಾಡುವಂತೆಯೇ ಅವರ ವರ್ತನೆಗಳಿರೋದು ದುರಾದೃಷ್ಟ. ರಾಜಕೀಯ ದುರುದ್ದೇಶದಿಂದ ಸೃಷ್ಟಿಸಿ, ಹರಿದಾಡಿಸಲ್ಪಟ್ಟ ಫೇಕ್ ನ್ಯೂಸ್‍ಗಳು ಜನರ ನೆಮ್ಮದಿಯನ್ನೇ ಹಾಳುಗೆಡವುತ್ತಿರೋದು ಈ ಸಂದರ್ಭದ ದುರಂತ. ಕನ್ನಡದ ವಾತಾವರಣದ ಮಟ್ಟಿಗೆ ಅಂತಹ ಸುದ್ದಿಗಳಿಗೆಲ್ಲ ತವರುಮನೆಯಂತಿದ್ದಿದ್ದು ಈ ಪೋಸ್ಟ್‍ಕಾರ್ಡ್ ವೆಬ್‍ಸೈಟು ಮತ್ತದರ ಫೇಸ್‍ಬುಕ್ ಪೇಜು!
ಮಹೇಶ್ ವಿಕ್ರಮ್ ಹೆಗ್ಡೆಯ ಈ ಪೇಜ್‍ನಲ್ಲಿ ಮುಸ್ಲಿಂ ಸಮುದಾಯದ ವಿರುದ್ದ ಹಿಂದೂತ್ವದ ಕೋಮುಭಾವನೆ ಬಿತ್ತುವಂತ ಸುದ್ದಿಗಳದ್ದೇ ಕಾರುಬಾರು. ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವರ ಬಗ್ಗೆ ಅಶ್ಲೀಲ ಪೋಸ್ಟ್ ಹಾಕಿದ್ದ ಈತ, ಮಾರ್ಚ್ 18ರಂದು ಆಕ್ಸಿಡೆಂಟ್‍ನಲ್ಲಿ ಮರಣ ಹೊಂದಿದ್ದ ಜೈನ ಸನ್ಯಾಸಿಯನ್ನು ಮುಸ್ಲಿಂ ಯುವಕರು ಕೊಲೆ ಮಾಡಿದ್ದಾರೆಂದು ತನ್ನ ಪೋಸ್ಟ್‍ಕಾರ್ಡ್ ಪೇಜ್‍ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ. ಈ ಸುಳ್ಳನ್ನು ಆಧಾರವಾಗಿಟ್ಟುಕೊಂಡೇ ಮಾರ್ಚ್ 29ರಂದು ಸೈಬರ್ ಕ್ರೈಮ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯಿದೆ 66 ಮತ್ತು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಅರೆಸ್ಟ್ ಮಾಡಿ, ಸಿಲವರ್ ತಟ್ಟೆಯಲ್ಲಿ ಜೈಲೂಟ ಬಡಿಸಿದ್ದರು. ಈತನನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಕಂ ಕಾಂಟ್ರವರ್ಸಿ ಕಿಂಗ್ ಅನಂತಕುಮಾರ್ ಹೆಗಡೆಯನ್ನೂ ಒಳಗೊಂಡಂತೆ ಬಿಜೆಪಿಯ ಹಲವಾರು ಲೀಡರುಗಳು ಒಂದು ಕ್ಯಾಂಪೇನನ್ನೇ ನಡೆಸಿದ್ದರು! ಮಹೇಶ್ ವಿಕ್ರಂ ಹೆಗ್ಡೆಯ ಫೇಕ್ ನ್ಯೂಸ್‍ಗಳ ಫಲಾನುಭವಿಗಳು ಯಾರು ಅನ್ನೋದಕ್ಕೆ ಇದೊಂದು Phಥಿsiಛಿಚಿಟ ನಿದರ್ಶನವಷ್ಟೆ. ಅಂದಹಾಗೆ, ಬಿಜೆಪಿ ಸಂಸದ ಪ್ರತಾಪ್ ಸಿಂಗ ಹೆಗ್ಡೆ ಈತನ ಅತ್ಯಾಪ್ತ!
ಹಾಗೆ ನೋಡಿದರೆ, 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಭರಪೂರ ಫಸಲು ತಂದುಕೊಡುವಲ್ಲಿ ಇಂಥಾ ಫೇಕ್‍ಸುದ್ದಿ ವೀರರ ಪಾತ್ರವೂ ಇತ್ತೆಂದರೆ ತಪ್ಪಾಗಲಿಕ್ಕಿಲ್ಲ. ಮೋದಿಯ ಸುಳ್ಳು ಪೊಳ್ಳು ಭಾಷಣಗಳನ್ನು ಹೈಲೈಟ್ ಮಾಡಿ, ಫೋಟೋಶಾಪ್‍ನಲ್ಲೇ ಗುಜರಾತ್ ಅಭಿವೃದ್ಧಿಯನ್ನು ಸೃಷ್ಟಿಸಿ ಜನರ ನಡುವೆ ಹರಿಯಬಿಟ್ಟ ಇಂತವರಿಂದಾಗಿಯೇ ಮೋದಿ ಸಲೀಸಾಗಿ ಗದ್ದುಗೆ ಏರಲು ಸಾಧ್ಯವಾದದ್ದು. ಅಂತವರಿಂದ ಪ್ರೇರಣೆ ಪಡೆದೇ ವಿಕ್ರಂ ಹೆಗ್ಡೆ ಪೋಸ್ಟ್‍ಕಾರ್ಡ್‍ಗೆ ಜನ್ಮಕೊಟ್ಟಿದ್ದ. ಹಿಂದೂತ್ವದ, ರಾಷ್ಟ್ರಪ್ರೇಮದ ಹುಸಿ ಸುದ್ದಿಗಳ ಜೊತೆಗೆ ಮುಸ್ಲಿಂ ವಿರೋಧಿ ಒಗ್ಗರಣೆ ಬೆರೆಸಿ ಆತ ಬಿಡುಗಡೆ ಮಾಡುತ್ತಿದ್ದ ಪೋಸ್ಟ್‍ಗಳು ಕೋಮುಗಲಭೆ ಹಬ್ಬಲು ಏನು ಬೇಕೊ ಅದೆಲ್ಲವನ್ನು ಒಳಗೊಂಡಿರುತ್ತಿದ್ದವು. ಅಂತಹ ‘ಪೋಸ್ಟ್‍ಕಾರ್ಡ್ ನ್ಯೂಸ್’ ಫೇಸ್‍ಬುಕ್ ಪೇಜ್‍ನ ವಿರುದ್ಧ ಪ್ರಜ್ಞಾವಂತ ಜನರು ಫೇಸ್‍ಬುಕ್ ಮ್ಯಾನೆಜ್‍ಮೆಂಟ್‍ಗೆ ದೂರುತ್ತಲೇ ಬಂದಿದ್ದರು. ಆದರೆ ಮಾರ್ಕ್ ಜುಗರ್‍ಬರ್ಗ್‍ನ ಫೇಸ್‍ಬುಕ್ಕು ಎಚ್ಚೆತ್ತುಕೊಂಡಿರಲಿಲ್ಲ.
ಯಾವಾಗ ಫೇಕ್‍ಪೇಜ್‍ನ ಪಿತಾಮಹನನ್ನು ಪೊಲೀಸರು ಅರೆಸ್ಟ್ ಮಾಡಿದರೋ ಆಗ ಎಚ್ಚೆತ್ತುಕೊಂಡ ಫೇಸ್‍ಬುಕ್ ಆತನ ವಿರುದ್ಧ ತನಗೆ ಹರಿದುಬಂದ ಬೃಹತ್ ದೂರುಗಳನ್ನು ಮುಂದಿಟ್ಟುಕೊಂಡು ಜುಲೈ 16ರಂದು ಡಿಆಕ್ಟಿವೇಟ್ ಮಾಡಿದೆ. ಪೋಸ್ಟ್ ಕಾರ್ಡು ಇಷ್ಟು ದಿನ ಪ್ರಕಟಿಸಿದ್ದ ಸುದ್ದಿಗಳಲ್ಲಿ ಶೇ. 96ರಷ್ಟು ಸುದ್ದಿಗಳು ಮುಸ್ಲಿಂ ವಿರೋಧಿಯಾಗಿದ್ದವೆನ್ನುವುದು ವಿಕ್ರಂ ಹೆಗ್ಡೆಯ ಉದ್ದೇಶವನ್ನು ಬಿಚ್ಚಿಡುತ್ತದೆ.
ಈ ಕೇಸರಿ ಮಂದಿ ಅದೆಷ್ಟು ದೂ(ದು)ರಾಲೋಚನೆ ಹೊಂದಿರುತ್ತಾರೆಂದರೆ, ಮಾರ್ಚ್‍ನಲ್ಲಿ ವಿಕ್ರಂ ಹೆಗ್ಡೆ ಅರೆಸ್ಟಾಗುತ್ತಿದ್ದಂತೆಯೇ, ಸದ್ಯದಲ್ಲೇ ತಮ್ಮ ಫೇಸ್‍ಬುಕ್ ಪೇಜ್ ಕೂಡಾ ರದ್ದಾಗಬಹುದೆನ್ನುವುದನ್ನು ಅಂದಾಜಿಸಿ, ಏಪ್ರಿಲ್‍ನಲ್ಲಿ ಅದೇ ಹೆಸರಿನಲ್ಲಿ ಮತ್ತೊಂದು ಇಂಗ್ಲಿಷ್ ಭಾಷೆಯ ಪೇಜ್ ಓಪನ್ ಮಾಡಿದ್ದರು. ಪೋಸ್ಟ್‍ಕಾರ್ಡ್ ಇಂಗ್ಲಿಷ್ ನ್ಯೂಸ್ ಎಂಬ ಹೆಸರಿನ ಆ ಪುಟ ಕನ್ನಡ ಪೋಸ್ಟ್‍ಕಾರ್ಡ್ ಪುಟದ ವಿನ್ಯಾಸ, ಲೋಗೊಗಳನ್ನೇ ಹೊಂದಿದೆ. ಇತ್ತ ಫೇಸ್‍ಬುಕ್, ಕನ್ನಡದ ಪೋಸ್ಟ್ ಕಾರ್ಡ್ ರದ್ದು ಮಾಡುತ್ತಿದ್ದಂತೆಯೇ, ಇಂಗ್ಲಿಷ್ ಪುಟದ ಲಿಂಕನ್ನು ಮುಂಚೂಣಿಗೆ ತಂದು, ತಮ್ಮ ಪುಟವನ್ನು ಫೇಸ್‍ಬುಕ್ ರದ್ದು ಮಾಡಿಲ್ಲ, ಇದೆಲ್ಲಾ ಸುಳ್ಳು ಸುದ್ದಿ ಎಂದು ಜನರನ್ನು ಯಾಮಾರಿಸಲು ಯತ್ನಿಸಿತ್ತು. ಆದರೆ ಅಧಿಕೃತ ಮೂಲಗಳೇ ಫೇಸ್‍ಬುಕ್ ನಿರ್ಣಯವನ್ನು ಖಾತ್ರಿಪಡಿಸಿದ ತರುವಾಯ ಇದೀಗ ಅವರ ಬಣ್ಣ ಬಯಲಾಗಿದೆ. ಆದರೇನಂತೆ ಇಂಗ್ಲಿಷ್ ಪುಟದಲ್ಲಿ ಯಥಾ ಪ್ರಕಾರ ತಮ್ಮ ಕೋಮುವಾಂತಿಯನ್ನು ಮುಂದುವರಿಸಿದ್ದಾರೆ. ಫೇಸ್‍ಪುಸ್ತಕ ಅದಕ್ಕೆ ಯಾವಾಗ ಒಂದು ಗತಿ ಕಾಣಿಸುತ್ತೋ ನೋಡಬೇಕು.

-ಸೋಮಶೇಖರ್ ಚೆಲ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...