Homeಸಿನಿಮಾಸಿನಿ ಸುದ್ದಿಮಗನಿಗೆ ಅಂಬಿಯ ಆ ಕಿವಿಮಾತು ಮತ್ತು ಪುಟ್ಟಣ್ಣನ ತಮಿಳು ಸಿಟ್ಟು

ಮಗನಿಗೆ ಅಂಬಿಯ ಆ ಕಿವಿಮಾತು ಮತ್ತು ಪುಟ್ಟಣ್ಣನ ತಮಿಳು ಸಿಟ್ಟು

- Advertisement -
- Advertisement -
  • ಗಿರೀಶ್ ತಾಳಿಕಟ್ಟೆ |

ಮಂಡ್ಯದ ಗಂಡು ಅಂಬಿ ಈಗ ಫುಲ್ ರಿಲೀಫ್ ಮೂಡ್‍ನಲ್ಲಿದ್ದಾರೆ. ತನಗೆ ಆಗಿಬರದ ಪೊಲಿಟಿಕ್ಸ್‍ನ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಅಂಬರೀಷ್, ಆ ಜೇಡರಬಲೆಯಿಂದ ಆಚೆ ಬಂದ ನಂತರ ಸಿಕ್ಕಾಪಟ್ಟೆ ಜಾಲಿ ಮೂಡಿನಲ್ಲಿರುವಂತಿದೆ. ತನ್ನನ್ನೇ ತಾನು ಗೇಲಿ ಮಾಡಿಕೊಳ್ಳುತ್ತಾ, ತಮಾಷೆಗೆ ಎದುರಿನವರ ಕಾಲೆಳೆಯುತ್ತಾ ಹಳೇ ಅಂಬರೀಷ್ ಆಗಿ ಸ್ಯಾಂಡಲ್‍ವುಡ್‍ನಲ್ಲಿ ಹಗುರಾಗುತ್ತಿರೋದು ಅವರ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯ ಬೆಳವಣಿಗೆ. ಈ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾಂಗ್ರೆಸ್ ಪಕ್ಷ ಅಂಬಿಗೆ ಟಿಕೇಟ್ ಘೋಷಿಸಿದರೂ, ಹಳೆ ಮುನಿಸುಗಳನ್ನು ಮುಂದೆಮಾಡಿ ಗೌಡಿಕೆ ಗತ್ತಿನಲ್ಲಿ ಗುಟುರು ಹಾಕಿದ ಅಂಬಿ ಸದ್ಯದ ಮಟ್ಟಿಗೆ ರಾಜಕಾರಣದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡದ್ದು ಅವರ ವೈಯಕ್ತಿಕ ಬದುಕಿನ ದೃಷ್ಟಿಯಿಂದ ಬಹಳ ಆರೋಗ್ಯಕರ ನಿರ್ಧಾರ ಅಂತಲೇ ಹೇಳಬೇಕು. ಯಾಕೆಂದರೆ ಒಬ್ಬ ನಟನಾಗಿ ಅಂಬಿ ಅದೆಷ್ಟು ಅಭಿಮಾನಿಗಳನ್ನು, ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದರೋ, ಒಬ್ಬ ರಾಜಕಾರಣಿಯಾಗಿ, ಜನಪ್ರತಿನಿಧಿಯಾಗಿ ಅಷ್ಟೇ ಮೂದಲಿಕೆಗೆ ಗುರಿಯಾಗುತ್ತಾ ಬಂದಿದ್ದರು. ಶಾಸಕ, ಸಚಿವರಾಗಿ ಅಂಬಿ ಜನರ ಕೈಗೆ ಸಿಗುವುದೇ ಇಲ್ಲವೆನ್ನುವ ಆಪಾದನೆಗಳು ದಂಡಿಯಾಗಿ ಕೇಳಿಬರುತ್ತಿದ್ದವು. ಹಾಗೆ ನೋಡಿದರೆ, ಅಂಬಿಯ ವ್ಯಕ್ತಿತ್ವಕ್ಕೆ ಇವತ್ತಿನ ಈ ಹಾಳು ಪೊಲಿಟಿಕ್ಸ್ ಒಗ್ಗುವಂತದ್ದೇ ಆಗಿರಲಿಲ್ಲ. ಮುಂದೆ ಹೇಗೋ, ಏನೋ, ಸದ್ಯಕ್ಕೆ ಎಲೆಕ್ಷನ್ ರಾಜಕಾರಣದ ಜಂಜಡದಿಂದ ಹೊರಬಂದ ತರುವಾಯ ಸಿನಿಮಾಗಳಲ್ಲಿ, ಸಿನಿಮಾ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗುತ್ತಾ ತನ್ನ ಹಳೆಯ ಕೀಟಲೆ ದಿನಗಳತ್ತ ಅಂಬಿ ಮರುಪಯಣಿಸುತ್ತಿರೋದು Really a Good Sign!

ಸದ್ಯ, ಗುರುದತ್ ಗಾಣಿಗ ನಿರ್ದೇಶಿಸುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೊ’ ಸಿನಿಮಾದ ಶೂಟಿಂಗ್‍ನಲ್ಲಿ ಅಂಬಿ ಫುಲ್ ಬ್ಯುಸಿಯಾಗಿದ್ದಾರೆ. ತಮಿಳಿನ `ಪಾ ಪಾಂಡಿ’ ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾದಲ್ಲಿ ಅಂಬಿ ಪಾತ್ರದ ಯೌವ್ವನದ ದಿನಗಳ ರೂಪದಲ್ಲಿ ಸುದೀಪ್ ನಟಿಸುತ್ತಿದ್ದರೆ, ಅಂಬಿಗೆ ಜೋಡಿಯಾಗಿ 14 ವರ್ಷಗಳ ನಂತರ ನಟಿ ಸುಹಾಸಿನಿ ಹೆಜ್ಜೆ ಹಾಕಿದ್ದಾರೆ. ಇದರ ನಡುವೆ ಹೊಸಬರ ಚಿತ್ರಗಳ ಮುಹೂರ್ತ, ಸಿನಿಮಾ ಕಾರ್ಯಕ್ರಮಗಳು, ಪ್ರಶಸ್ತಿ ಸಮಾರಂಭಗಳಲ್ಲೂ ಅಂಬಿ ದಿಲ್‍ಖುಷ್ ಆಗಿ ಭಾಗವಹಿಸುತ್ತಿದ್ದಾರೆ. ಮೊನ್ನೆಮೊನ್ನೆಯಷ್ಟೇ, ನಟ ಯಶ್‍ಗೆ ಅಡ್ಡ ಹಾಕಿಕೊಂಡು `ಬಡ್ಡೇತದೆ, ನಿನ್ನ ಮುಖದ ಮೇಲೆ ಗಡ್ಡ ಸರಿ ಕಾಣಕ್ಕಿಲ್ಲ, ಗಡ್ಡ ಯಾವಾಗ್ಲಾ ತಗೀತೀಯಾ?’ ಅಂತ ಆತ್ಮೀಯವಾಗಿ ಗದರಿಕೊಂಡಿದ್ದ ಅಂಬಿ ಇತ್ತೀಚೆಗೆ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಬಿಗ್‍ಬಾಸ್ ಬಾರ್ಬಿ ಡಾಲ್ ನಿವೇದಿತಾ ಗೌಡಳ ಜೊತೆಗೆ ಅವಳದೇ ಧಾಟಿಯಲ್ಲಿ ಮಾತಾಡಿ, ಕಾಲೆಳೆದು ಕಿಚಾಯಿಸಿದ್ದರು. ಪಕ್ಕಾ ಪೊಲಿಟಿಷಿಯನ್ ಅವತಾರದಲ್ಲಿದ್ದಾಗ ಇಂಥಾ ಕಾರ್ಯಕ್ರಮಗಳಿಗಿರಲಿ, ಸರ್ಕಾರಿ ಸಮಾರಂಭಗಳಿಗೇ ಚಕ್ಕರ್ ಹೊಡೆಯುತ್ತಿದ್ದ ಅವರು ಈಗ ಕೊಂಚ ಬದಲಾಗಿದ್ದಾರೆ, ಬದಲಾಗುತ್ತಿದ್ದಾರೆ.

ಇದೀಗ ಅಂಬಿಯ ಮಗ ಅಭಿಷೇಕ್ ಗೌಡ ಕೂಡಾ `ಅಮರ್’ ಸಿನಿಮಾದ ಮೂಲಕ ಹೀರೋ ಆಗಲು ಸಜ್ಜಾಗಿದ್ದಾನೆ. ನಾಗಶೇಖರ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಅಭಿಷೇಕ್‍ಗೆ ನಾಯಕಿಯಾಗಿ ತಾನ್ಯ ನಟಿಸುತ್ತಿದ್ದಾರೆ. ಜೆಪಿ ನಗರದ ದೇವಸ್ಥಾನದಲ್ಲಿ ಮುಹೂರ್ತವೂ ಮುಗಿದಿದೆ. ಇನ್ನೇನು ಚಿತ್ರೀಕರಣ ಶುರುವಾಗಬೇಕು ಅಷ್ಟೇ. ಅಂದಹಾಗೆ, ಹೀರೊ ಆಗಲು ಹೊರಟಿರುವ ಮಗನಿಗೆ ಅಂಬಿ ಒಂದು ಕಿವಿಮಾತು ಹೇಳಿದ್ದಾರೆ. ಅದೇನು ಗೊತ್ತಾ, `ನನ್ನ ಥರಾ ಯಾವತ್ತೂ ಸೆಟ್‍ಗೆ ಲೇಟಾಗಿ ಹೋಗ್ಬೇಡ’ ಅಂತ! ಅಂಬಿ ಶೂಟಿಂಗ್ ಸ್ಪಾಟ್‍ಗೆ ಲೇಟಾಗಿ ಬರೋದ್ರಲ್ಲಿ ಸಿಕ್ಕಾಪಟ್ಟೆ ಫೇಮಸ್ಸು. ಅದು ಇವತ್ತು ನಿನ್ನೆಯ ಅಭ್ಯಾಸವಲ್ಲ, ಮೊದಲ ಸಿನಿಮಾದ ಮೊದಲ ದಿನದಿಂದಲೇ ಅಂತದ್ದೊಂದು ಅದ್ಭುತ ಸಂಪ್ರದಾಯವನ್ನ ಪಾಲಿಸಿಕೊಂಡು ಬರ್ತಿದಾರೆ. ನಾಗರಹಾವು ಸಿನಿಮಾದ ಶೂಟಿಂಗ್‍ನ ಮೊದಲ ದಿನ ಅಂಬಿ ಸೆಟ್‍ಗೆ ತಡವಾಗಿ ಬಂದಿದ್ದರಂತೆ. ಆಗ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಿಟ್ಟಿನಿಂದ ಯಾಕಯ್ಯ ಲೇಟು ಅಂತ ಕೇಳಿದಾಗ, ಅಂಬಿ ಗುರುವಿನ ಎದುರು ನುಲಿದಾಡುತ್ತಾ `ದಾರೀಲಿ ಟೈರ್ ಪಂಕ್ಚರ್ ಆಗ್ಬಿಟ್ಟಿತ್ತು, ಸಾರ್, ಅದ್ಕೆ ಒಸಿ ಲೇಟಾಯ್ತು’ ಅಂತ ಏನೋ ಕಥೆ ಕಟ್ಟಲು ಹೋದರಂತೆ. ಆಗ ಪುಟ್ಟಣ್ಣ ಪಕ್ಕದಲ್ಲಿದ್ದ ತನ್ನ ತಮಿಳು ಅಸಿಸ್ಟೆಂಟ್ ಕಡೆ ತಿರುಗಿ ಅದೇ ಸಿಟ್ಟಿನಲ್ಲಿ `ನಾ ಕಥೆ ಏಡಕ್ಕೆ ವಂದಿರ್ಕೆ, ಕೇಕ್ಕೆ ವಂದಿಲ್ಲೈ’ (ನಾ ಕಥೆ ಹೇಳ್ಲಿಕ್ಕೆ ಬಂದಿದೀನಿ, ಕಥೆ ಕೇಳಕ್ಕೆ ಅಲ್ಲ!) ಎಂದು ಶೂಟಿಂಗ್‍ನಲ್ಲಿ ಬ್ಯುಸಿಯಾದರಂತೆ. ಅವತ್ತಿಂದ ಇಲ್ಲಿಯವರೆಗೂ ಅಂಬಿ ಶೂಟಿಂಗ್ ಸ್ಪಾಟ್‍ಗೆ ಆನ್‍ಟೈಂ ಬಂದಿದ್ದೇ ಅಪರೂಪ. ಅಂಥಾ ತನ್ನ ಗುಣವನ್ನು ನೀನು ಕಲೀಬೇಡ ಎಂದು ಮಗನಿಗೆ ಟಿಪ್ಸ್ ಕೊಟ್ಟಿದ್ದಾರೆ ಮಂಡ್ಯದ ಗಂಡು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...