Homeಮುಖಪುಟರೆಡ್ಡಿ ಹಣಿಯುವ ಶಾ ತಂತ್ರಕ್ಕೆ ರಾಮುಲು ಆದರೇ ಬದಾಮಿಯ ಹರಕೆಯ ಕುರಿ?

ರೆಡ್ಡಿ ಹಣಿಯುವ ಶಾ ತಂತ್ರಕ್ಕೆ ರಾಮುಲು ಆದರೇ ಬದಾಮಿಯ ಹರಕೆಯ ಕುರಿ?

- Advertisement -
- Advertisement -

– ಗಿರೀಶ್ ತಾಳಿಕಟ್ಟೆ /

ಈ ಸಲದ ಎಲೆಕ್ಷನ್‍ನ ಹೈವೋಲ್ಟೇಜ್ ಕ್ಷೇತ್ರ ಅಂತ್ಯಾವುದಾದರು ಇದ್ದರೆ ಅದು ಬದಾಮಿ ಅನ್ನೋದ್ರಲ್ಲಿ ಯಾವ ಡೌಟೂ ಇಲ್ಲ. ಸಿಎಂ ಸಿದ್ರಾಮಯ್ಯ ಅಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಗಾಳಿ ಸುದ್ದಿ ತೇಲಾಡಿದಾಗಲೇ ಬದಾಮಿ ಹೈಲೈಟಿಗೆ ಬಂದಿತ್ತು. ಆದರೆ ಯಾವಾಗ ಬಿಜೆಪಿ, ಶ್ರೀರಾಮುಲು ಎಂಬ ರೆಡ್ಡಿ ಬೆಟಾಲಿಯನ್ ಬಂಟನನ್ನು ತಂದು ಸಿದ್ರಾಮಯ್ಯನ ಎದುರು ನಿಲ್ಲಿಸಿತೋ ಆಗಿನಿಂದ ಅದು ಸಿಕ್ಕಾಪಟ್ಟೆ ಸೆನ್ಸೇಷನಲ್ ಕ್ಷೇತ್ರವಾಗಿದೆ. ಚಾಮುಂಡೇಶ್ವರಿಯಲ್ಲಿ ಗೆಲುವು ಕಷ್ಟ ಅಂತಾ, ಕುರುಬರ ಸಾಲಿಡ್ ಮತಗಳಿರುವ ಬದಾಮಿಗೂ ಸಿದ್ರಾಮಯ್ಯ ತನ್ನ ಸ್ಪರ್ಧೆ ವಿಸ್ತರಿಸಿದರೆ ಬಿಜೆಪಿ ಅಲ್ಲಿಯೂ ಶ್ರೀರಾಮುಲು ಎಂಬ ರೊಕ್ಕಸ್ಥ ಆಸಾಮಿಯನ್ನು ಕಣಕ್ಕಿಳಿಸಿ ಬೆವರಿಳಿಸುವಂತೆ ಮಾಡುತ್ತಿದೆ ಎಂಬ ವೆರಿ ಸೂಪರ್‍ಫಿಶಿಯಲ್ ಅಭಿಪ್ರಾಯ ಜನರ ನಡುವೆ ಹರಿದಾಡುತ್ತಿದೆ, ಅಥವಾ ಹರಿದಾಡಿಸಲಾಗುತ್ತಿದೆ.
ಕಾಂಗ್ರೆಸ್ ಪಾಲಿಗೆ ದಿಲ್ಲಿ ಕೂಸು ರಾಹುಲ್‍ಗಿಂತಲೂ ಸ್ಟಾರ್ ಕ್ಯಾಂಪೇನರ್ ಅಂತಂದರೆ ಅದು ಸಿಎಂ ಸಿದ್ರಾಮಯ್ಯ. ಈಗಾಗಲೇ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಜನರನ್ನು ಕೈ ಪಾರ್ಟಿಯತ್ತ ಸೆಳೆದಿವೆ. ಇನ್ನು ಸಿದ್ರಾಮಯ್ಯನಂತ ಮಾಸ್ ಲೀಡರ್ರು ಪ್ರಚಾರ ಮಾಡಿಬಿಟ್ರೆ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯೋದ್ರಲ್ಲಿ ಸಂಶಯವಿಲ್ಲ. ಬಹುತೇಕ ಸಮೀಕ್ಷೆಗಳು ಇದನ್ನೇ ಹೇಳುತ್ತಿವೆ. ಹಾಗಾಗಿ ಸಿಎಂ ಸಿದ್ರಾಮಯ್ಯರನ್ನು ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿಸಬೇಕು ಅನ್ನೊ ಪ್ಲ್ಯಾನು ಹಾಕಿಕೊಂಡೇ ಬಿಜೆಪಿ ಬದಾಮಿಯಲ್ಲಿ ಶ್ರೀರಾಮುಲುರನ್ನು ಫೀಲ್ಡಿಗಿಳಿಸಿದೆ. ಇದು ರಾಮುಲು ಸ್ಪರ್ಧೆಯ ನೇರಾನೇರ ವಾಸ್ತವ. ಆದ್ರೆ ಪಾಲಿಟಿಕ್ಸ್ ಅನ್ನೋದು ಇಷ್ಟು ಸರಳವಾದ ಸಂಗತಿ ಅಲ್ಲ. ಒಂದೊಂದು ತಿರುವಿನೊಳಗೂ ಹತ್ತಾರು ಒಳಹುಗಳು ಮಲಗಿರುತ್ತವೆ. ರಾಮುಲು ಸ್ಪರ್ಧೆಯ ಹಿಂದೆಯೂ ಇಂತದ್ದೇ ಒಂದು ಹಿಡನ್ ಕಾರ್ಯತಂತ್ರವಿದೆ. ಅದು ಸ್ವತಃ ಬಿಜೆಪಿಯೇ ಅಳೆದು-ತೂಗಿ ಮಡಗಿದ ಮಹೂರ್ತ! ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸೋ ಅಮಿತ್ ಶಾ ಸ್ಕೆಚ್ಚು!!

ಸೋಲಿನ ಪಾಕ

ಎತ್ತಿಂದೆತ್ತ ಲೆಕ್ಕ ಹಾಕಿದರೂ, ಏನೆಲ್ಲಾ ಪರ್ಮುಟೇಷನ್-ಕಾಂಬಿನೇಷನ್ ಗುಣಿಸಿ ಗುಡ್ಡೆ ಹಾಕಿದರೂ ಬದಾಮಿಯಲ್ಲಿ ಸಿದ್ರಾಮಯ್ಯನ ಎದುರು ಬಿಜೆಪಿ ಗೆಲ್ಲೋದಕ್ಕೆ ಸಾಧ್ಯವೇ ಇಲ್ಲ. ಜಾತಿ ಕೆಮಿಸ್ಟ್ರಿಯನ್ನೇ ಅಪ್ಲೈ ಮಾಡಿ ನೋಡೋಣ. ಅಜಮಾಸು ಎರಡು ಕಾಲು ಲಕ್ಷದಷ್ಟು ಮತದಾರರಿರುವ ಬದಾಮಿಯಲ್ಲಿ ಕುರುಬರದ್ದೇ ಮೇಲುಗೈ. ಏನಿಲ್ಲವೆಂದರು 46 ಸಾವಿರ ಓಟುಗಳಿವೆ. 36 ಸಾವಿರ ಮತಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಲಿಂಗಾಯತರು ಪಂಚಮಸಾಲಿ ಮತ್ತು ಬಣಜಿಗ ಎಂಬ ಎರಡು ಪಂಗಡಗಳಾಗಿ ಇಬ್ಬಾಗವಾಗಿವೆ. ಇನ್ನು ಗಾಣಿಗರ 26 ಸಾವಿರ, ನೇಕಾರರ 17 ಸಾವಿರ, ದಲಿತರ 25 ಸಾವಿರ, ನಾಯಕರ 13 ಸಾವಿರ, ಅಲ್ಪಸಂಖ್ಯಾತರ 12 ಸಾವಿರ ಮತಗಳಿವೆ. ಕುರುಬರ, ದಲಿತರ, ಅಲ್ಪಸಂಖ್ಯಾತರ ಮತಗಳು ಒಗ್ಗೂಡಿದರೆ ಸಾಕು ಸಿದ್ರಾಮಯ್ಯ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದಾಗ್ಯೂ ಇನ್ನುಳಿದ ಜಾತಿಗಳ ಮೇಲೂ ಆರ್.ಬಿ.ತಿಮ್ಮಾಪೂರ, ಬಿ.ಬಿ.ಚಿಮ್ಮನಕಟ್ಟಿ, ಸತೀಶ್ ಜಾರಕಿಹೊಳಿಯಂತಹ ಲೋಕಲ್ ಲೀಡರುಗಳ ಪವರ್‍ಫುಲ್ ಪ್ರಭಾವವಿದೆ. ಇನ್ನು ಲಿಂಗಾಯತ ಮತಗಳನ್ನು ಸೆಳೆಯಲು ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಲಿಂಗಾಯತ ಲೀಡರುಗಳ ದಂಡೇ ಕಾರ್ಯಪ್ರವೃತ್ತವಾಗಿದೆ. ಪರಿಸ್ಥಿತಿ ಹೇಗಿದೆಯೆಂದರೆ ಬಿಜೆಪಿಯ ರಾಮುಲುಗೆ ತನ್ನದೇ ಜಾತಿಯ ನಾಯಕರ ಮತಗಳು ಬೀಳೋದೂ ಡೌಟು. ಯಾಕೆಂದ್ರೆ ಅವು ಅದೇ ಸಮುದಾಯದ ಸತೀಶ್ ಜಾರಕಿಹೊಳಿಯ ಸ್ಥಳೀಯ ಪ್ರಭಾವಳಿಯಲ್ಲಿವೆ.
ಇಲ್ಲಿ ಬಿಜೆಪಿಗೆ ನಿಜಕ್ಕೂ ಸಿದ್ರಾಮಯ್ಯನ ನಿದ್ದೆಗೆಡಿಸುವುದೇ ಏಕಮೇವ ಇರಾದೆಯಾಗಿದ್ದಿದ್ದರೆ ಯಾರಾದರು ಪವರ್‍ಫುಲ್ ಲಿಂಗಾಯತ ಲೀಡರನ್ನು ಚುನಾವಣೆಗೆ ಇಳಿಸಬೇಕಿತ್ತು. ಕೇವಲ ಇದೊಂದು ಕ್ಷೇತ್ರದ ಲಿಂಗಾಯತರ ಮತಗಾತ್ರವನ್ನು ಕಬ್ಜಾ ಮಾಡಿಕೊಳ್ಳುವುದಲ್ಲದೇ ಇಡೀ ಉತ್ತರ ಕರ್ನಾಟಕದಲ್ಲಿ ಈಗಲೂ ಲಿಂಗಾಯತರ ಜೊತೆ ನಾವೇ ಹೆಜ್ಜೆ ಹಾಕುತ್ತಿದ್ದೇವೆ ಎಂಬ ಸಂದೇಶ ಹೊರಬೀಳುವಂತೆ ಮಾಡುವಲ್ಲೂ ಅದು ಪ್ರಮುಖ ಪಾತ್ರ ವಹಿಸುತ್ತಿತ್ತು. ಆದರೆ ಹಾಗೆ ಮಾಡದೆ ಜಾತಿ ಲೆಕ್ಕಾಚಾರದಲ್ಲೂ ಹಿಂದೆ ಬಿದ್ದಿರುವ, ಕ್ಷೇತ್ರ ಒಡನಾಟದಲ್ಲೂ ತಾಳೆಯಾಗದ ರೆಡ್ಡಿ ಪಾಳೆಯದ ಶ್ರೀರಾಮುಲುವನ್ನು ಬಿಜೆಪಿ ಕಣಕ್ಕಿಳಿಸಿರೋದು ಯಾಕೆ?

ಬಿಸಿ ತುಪ್ಪಕ್ಕೆ ದ್ವಂದ್ವ ಸೂತ್ರ
ಗಣಿ ಮಾಫಿಯಾದ ಕಾರಣಕ್ಕೆ ಜೈಲುಪಾಲಾಗಿ, ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಬಂದರೂ ಬಳ್ಳಾರಿ ಜಿಲ್ಲೆಯೊಳಗೆ ಕಾಲಿಡದಂತೆ ನಿರ್ಬಂಧ ಹೇರಿಸಿಕೊಂಡಿರುವ ಜನಾರ್ಧನ ರೆಡ್ಡಿ ಮತ್ತವರ ಟೀಮು ಬಿಜೆಪಿ ಪಾಲಿಗೆ ಬಿಸಿ ತುಪ್ಪದಂತಾಗಿದ್ದಾರೆ. ಅತ್ತ ನುಂಗುವಂತೆಯೂ ಇಲ್ಲ, ಇತ್ತ ಉಗುಳುವಂತೆಯೂ ಇಲ್ಲ. ರೆಡ್ಡಿಗಳ ಕಾಸು, ವರ್ಚಸ್ಸು ಬೇಕು ಆದರೆ ಪಕ್ಷದೊಳಗೆ ಅವರು ಪ್ರಭಾವಿಗಳಾಗೋದು ಬೇಡ. ಇದು ಬಿಜೆಪಿಯ ಆಂತರಿಕ ಇಂಗಿತ. ಚುನಾವಣೆ ಗೆಲ್ಲೋದಕ್ಕೆ, ಅಗತ್ಯ ಬಿದ್ದರೆ ಆಪರೇಷನ್ ಕಮಲಕ್ಕೆ ರೆಡ್ಡಿಗಳೇ ಫೈನಾನ್ಸ್ ಮಾಡಬೇಕಾಗಿರೋದ್ರಿಂದ ಅವರನ್ನು ಅಷ್ಟು ಸುಲಭಕ್ಕೆ ಸೈಡ್‍ಲೈನ್ ಮಾಡಲಾಗದು. ಹಾಗಂತ ಈ ಹಿಂದೆ ಅವರೇ ಪಕ್ಷವನ್ನು ಹೈಜಾಕ್ ಮಾಡುವಷ್ಟರ ಮಟ್ಟಕ್ಕೆ ಬೆಳೆಯಲೂ ಬಿಡುವಂತಿಲ್ಲ. ಇಂಥಾ ಇಕ್ಕಟ್ಟನ್ನು ನಿಭಾಯಿಸಿಕೊಳ್ಳಲೇ ಅಮಿತ್ ಷಾ, ಸಂಘ ಪರಿವಾರದ ಜೊತೆಗೆ ಸಮಾಲೋಚನೆ ನಡೆಸಿ ಶ್ರೀರಾಮುಲುವನ್ನು ಸಿದ್ರಾಮಯ್ಯ ವಿರುದ್ಧ ಕಣಕ್ಕಿಳಿಸಿದ್ದಾರೆ ಎನ್ನಲಾಗುತ್ತಿದೆ.
ಹೀಗೆ ಮಾಡೋದ್ರಿಂದ ಷಾ ಮತ್ತು ಸಂಘ, ಒಂದೇ ಕಲ್ಲಿಗೆ ಎರಡು ಹಕ್ಕಿಯ ಕಾಲು ಮುರಿಯಲು ಹೊರಟಿದ್ದಾರೆ. ಏನೇ ತಿಪ್ಪರಲಾಗ ಹಾಕಿದರೂ ಬದಾಮಿಯಲ್ಲಿ ತಮ್ಮ ಪಕ್ಷದ ಕ್ಯಾಂಡಿಡೇಟು ಸಿದ್ರಾಮಯ್ಯನ ವಿರುದ್ಧ ಗೆಲ್ಲೊಲ್ಲ ಅನ್ನೋದು ಅಮಿತ್ ಷಾಗೂ ಗೊತ್ತಿತ್ತು. ಆದರೆ ಆ ಸೋಲಿನಿಂದಲೂ ಒಂದು ಲಾಭ ಮಾಡಿಕೊಳ್ಳುವ ತಂತ್ರ ಹೆಣೆದೇ ರಾಮುಲುವನ್ನು ಕಣಕ್ಕಿಳಿಸುವಂತೆ ಜನಾರ್ಧನ ರೆಡ್ಡಿಯ ಮುಂದೆ ಅಮಿತ್ ಶಾ ಆಫರ್ ಇಟ್ಟಿದ್ದಾರೆ. ಅದು ಪಕ್ಷದೊಳಗೆ ರೆಡ್ಡಿಗಳನ್ನು ಅಡ್ಡಡ್ಡ ಮಲಗಿಸುವ ನಾಜೂಕಯ್ಯನ ತಂತ್ರ. ಹೇಗೂ ರೆಡ್ಡಿ ಬ್ರಿಗೇಡು ಪೊಲಿಟಿಕಲ್ ಪುನರ್ಜನ್ಮಕ್ಕಾಗಿ ಹಾತೊರೆಯುತ್ತಾ ಇರೋದ್ರಿಂದ ಪಕ್ಷ ಇಟ್ಟ ಈ ಆಫರ್ರನ್ನು ಜನಾರ್ಧನ್ ರೆಡ್ಡಿ ತಿರಸ್ಕರಿಸಲು ಬರುವುದಿಲ್ಲ. ಒಂದೊಮ್ಮೆ ಆತ ಅಲ್ಲಿ ಸೋಲುವ ಸುಳಿವಿಡಿದು ತನ್ನ ಭಂಟನ ಸ್ಪರ್ಧೆಗೆ ಅಡ್ಡಡ್ಡ ತಲೆಯಾಡಿಸಿದರೆ ಪಕ್ಷದೊಳಗೆ ರೆಡ್ಡಿ ತಾನಾಗೇ ಆತ್ಮಹತ್ಯೆ ಮಾಡಿಕೊಂಡಂತಾಗುತ್ತಿತ್ತು. ಧೈರ್ಯ ಮಾಡಿ ಸ್ಪರ್ಧೆಗೆ ಸೈ ಅಂದರೂ, ಶ್ರೀರಾಮುಲುಗೆ ಅಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ಆ ಸೋಲು ಸಹಾ ರೆಡ್ಡಿ ಬೆಟಾಲಿಯನನ್ನು ಪಕ್ಷದೊಳಗೆ ಕೆಡವಿ ಬಿಡುತ್ತೆ! ಅಲ್ಲಿಗೆ ಯಾವ ದುಶ್ಮನಿ, ಮನಸ್ತಾಪವನ್ನೂ ಕಟ್ಟಿಕೊಳ್ಳದೆ ರೆಡ್ಡಿಗಳನ್ನು ಮಟ್ಟ ಹಾಕಿದಂತೆ ಆಯ್ತಲ್ಲವೇ!! ಅಪ್ಪಿತಪ್ಪಿ, ಶ್ರೀರಾಮುಲು ಗೆದ್ದೇ ಬಿಟ್ಟರು ಅಂತಿಟ್ಟುಕೊಳ್ಳಿ ಆಗಲೂ ಲಾಭ ಬಿಜೆಪಿಗೇ ತಾನೇ.

ಒಂದು ಕಡೆ ಸಿದ್ರಾಮಯ್ಯರನ್ನು ವಿಚಲಿತ ಮಾಡಿದಂತಾಗುತ್ತೆ. ಮತ್ತೊಂದೆಡೆ ರೆಡ್ಡಿಗಳನ್ನು ಎರಡು ತುದಿಯ ಖಡ್ಗದಿಂದ ಇರಿದಂತಾಗುತ್ತೆ! ಇದು ಅಮಿತ್ ಷಾ ಲೆಕ್ಕಾಚಾರ. ಒಟ್ಟಿನಲ್ಲಿ ರೆಡ್ಡಿಗಳನ್ನು ಕಟ್ಟಿಹಾಕಲು ರಾಮುಲು ಎಂಬ ಹರಕೆಯ ಕುರಿಯನ್ನು ಷಾ ಬಳಸಿಕೊಳ್ಳುತ್ತಿರೋದು ಸ್ಪಷ್ಟ. ಕಾಕತಾಳೀಯ ಅಂದ್ರೆ, ಹಿಂದೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದಾಗ ಬಿಜೆಪಿಯ ಮಿನುಗು`ತಾರೆ’ ಸುಷ್ಮಾ ಸ್ವರಾಜ್ ಪರ ರಿಸ್ಕನ್ನು ಕೈಗೆತ್ತಿಕೊಂಡು ಬಿಜೆಪಿಯೊಳಗೆ ಬಲಾಢ್ಯರಾಗಿ ಬೆಳೆದಿದ್ದ ರೆಡ್ಡಿಗಳನ್ನು ಮಟ್ಟ ಹಾಕಲು ಇದೀಗ ಅಂತದ್ದೇ ಚಾಲೆಂಜಿಂಗ್ ಚುನಾವಣೆ ಬಳಕೆಯಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...