ಕಳೆದ ವಾರ ಉತ್ತರಪ್ರದೇಶದ ಲಲಿತ್ಪುರ ಜಿಲ್ಲೆಯ ರೋಡಾ ಗ್ರಾಮದಲ್ಲಿ 65 ವರ್ಷದ ವೃದ್ಧರೊಬ್ಬರಿಗೆ ಬಲವಂತವಾಗಿ ಮೂತ್ರ ಕುಡಿಸಿ, ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಕುಟುಂಬದವರು ನೀಡಿದ ದೂರಿನ ನಂತರ, ಮುಖ್ಯ ಆರೋಪಿ ಸೋನು ಯಾದವ್ ಎನ್ನುವವರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಡಾ ಗ್ರಾಮದ ನಿವಾಸಿ ಅಮರ್, “ಸೋನು ಯಾದವ್ ಕೆಲವು ದಿನಗಳ ಹಿಂದೆ ತನ್ನ ಮೂತ್ರ ಕುಡಿಯುವಂತೆ ಒತ್ತಾಯಿಸಿದರು. ನಾನು ನಿರಾಕರಿಸಿದಾಗ, ನನ್ನ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದರು. ಅವರು ನನ್ನ ಮಗನ ಮೇಲೂ ಕೊಡಲಿಯಿಂದ ಹಲ್ಲೆ ಮಾಡಿದ್ದರು. ನಂತರ ನಾವು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ” ಎಂದು ಎಎನ್ಐಗೆ ಹೇಳಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ನಡೆಯುವ ದಲಿತರ ಮೇಲಿನ ಹಲ್ಲೆಗಳಲ್ಲಿ ಶೇ.25 ಯುಪಿಯೊಂದರಲ್ಲಿ ವರದಿಯಾಗುತ್ತವೆ!
Lalitpur: A 65-yr-old Dalit man was allegedly beaten & forced to drink urine in Village Roda by a person against whom victim's family had filed a police complaint a week ago.
Accused was forcing the old man & his son to compromise & take back the police complaint.
(12.10.2020) pic.twitter.com/kk16CeqbwA
— ANI UP (@ANINewsUP) October 13, 2020
ರೋಡಾದ ಕೆಲವು ಪ್ರಭಾವಿ ಜನರು ಇಬ್ಬರನ್ನು ಥಳಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿರ್ಜಾ ಮಂಜಾರ್ ಬೇಗ್ ದೃಢಪಡಿಸಿದ್ದಾರೆ.
“ಘಟನೆಯ ಮಾಹಿತಿ ಬಂದ ಕೂಡಲೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರರಿಗಾಗಿ ಶೋಧ ನಡೆಯುತ್ತಿದೆ. ಯಾವುದೇ ರೀತಿಯ ಬೆದರಿಕೆಯನ್ನು ನಾವು ಸಹಿಸುವುದಿಲ್ಲ” ಎಂದು ಮಿರ್ಜಾ ಮಂಜಾರ್ ಬೇಗ್ ಹೇಳಿದ್ದಾರೆ.
ಇತ್ತ ಗೊಂಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೂವರು ದಲಿತ ಯುವತಿಯರ ಮೇಲೆ ಆಸಿಡ್ ದಾಳಿಯಾಗಿದೆ. ಟೆರಸ್ ಮೂಲಕ ಮನೆಯೊಳಗೆ ಬಂದಿರುವ ಕಿಡಿಗೇಡಿ ಮನೆಯಲ್ಲಿ ನಿದ್ದೆ ಮಾಡುತ್ತಿದ್ದವರ ಮೇಲೆ ಆಸಿಡ್ ಎರಚಿದ್ದಾರೆ.
Three #Dalit sisters in UP have been hospitalised after they were attacked with acid while they were asleep at home. attacker entered their home from the terrace and threw acid on them. The incident took place at around 2 am in a village in Gonda district.pic.twitter.com/tTUpTZ5BzF
— The Dalit Voice (@ambedkariteIND) October 13, 2020
ಹಲ್ಲೆಗೊಳಗಾದ ಯುವತಿಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು, ದಲಿತರ ಮೇಲಿನ ಹಲ್ಲೆಗಳು ಹೆಚ್ಚಾಗಿ ವರದಿಯಾಗುತ್ತಿರುವ ಬೆನ್ನಿಗೆ ಈಗ ಆಸಿಡ್ ದಾಳಿ ಪ್ರಕರಣಗಳು ಸೇರಿಕೊಳ್ಳುತ್ತಿವೆ. ಸರ್ಕಾರ ಇಂತಹ ಘಟನೆಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.